‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

ಆ್ಯಂಕರ್ ಅನುಶ್ರೀ (Anushree) ಅವರು ಹಲವು ವಿಷಯಗಳ ಬಗ್ಗೆ ಓಪನ್ ಆಗಿ ಮಾತನಾಡುತ್ತಾರೆ. ತಮ್ಮ ಬಗ್ಗೆ, ತಾವು ನಡೆಸಿಕೊಡೋ ಶೋ ಬಗ್ಗೆ ಏನಾದರೂ ಆರೋಪ ಕೇಳಿ ಬಂದರೆ ನೇರವಾಗಿ ಉತ್ತರಿಸುತ್ತಾರೆ. ಈ ಬಗ್ಗೆ ಅವರು ಹಿಂದೂ ಮುಂದೂ ಯೋಚಿಸೋದಿಲ್ಲ. ಈಗ ಸಂದರ್ಶನ ಒಂದರಲ್ಲಿ ಅವರು ನೇರ ಮಾತುಗಳಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.ಇದರಲ್ಲಿ ಅವರು ಹೆಣ್ಣು ಮಕ್ಕಳಿಗೆ ಸೈಲೆಂಟ್ ಆಗಿ ನಡೆಯುವ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.

ಅನುಶ್ರೀ ಅವರು ಸಂದರ್ಶನ ನೀಡಿದ್ದಕ್ಕಿಂತ, ಸಂದರ್ಶನ ಮಾಡಿದ್ದೇ ಹೆಚ್ಚು. ಅವರು ಅನೇಕ ಸೆಲೆಬ್ರಿಟಿಗಳನ್ನು ಇಂಟರ್​​ವ್ಯೂ ಮಾಡಿದ್ದಾರೆ. ಈಗ ಅವರನ್ನೇ ಸಂದರ್ಶನ ಮಾಡಲಾಗಿದೆ. ಆರ್​​ಜೆ ಮಯೂರ್ ಅವರು ತಮ್ಮ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್ ಅಲ್ಲಿ ಅನುಶ್ರೀ ಇಂಟರ್​ವ್ಯೂ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.

ಇದನ್ನೂ ಓದಿ: ಮದುವೆ ವಿಷಯಕ್ಕೆ ವೇದಿಕೆಯಲ್ಲೇ ಅನುಶ್ರೀಗೆ ಕೈ ಮುಗಿದು ಕ್ಷಮೆ ಕೇಳಿದ ಪ್ರೇಮ್

ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರ ಖಾತೆಗೂ ಅಶ್ಲೀಲ ಕಮೆಂಟ್ ಬಂದೇ ಬರುತ್ತವೆ. ಆದರೆ, ಸೆಲೆಬ್ರಿಟಿಗಳು ಇದಕ್ಕೆ ಸಂತ್ರಸ್ತರಾಗುವ ಸಾಧ್ಯತೆ ಹೆಚ್ಚು. ಜನಸಾಮಾನ್ಯರಾದರೆ ಖಾತೆಯನ್ನು ಖಾಸಗಿಯಾಗಿ ಇಟ್ಟುಕೊಂಡು, ಪರಿಚಯ ಇರುವವರನ್ನು ಮಾತ್ರ ಫಾಲೋ ಮಾಡಲು ಅವಕಾಶ ನೀಡಬಹುದು. ಆದರೆ, ಸೆಲೆಬ್ರಿಟಿಗಳು ತಮ್ಮ ಖಾತೆಯನ್ನು ಓಪನ್ ಆಗಿ ಇಡುತ್ತಾರೆ. ಈ ಕಾರಣಕ್ಕೆ ಗೊತ್ತು ಪರಿಚಯ ಇಲ್ಲದವರು ಬಂದು ಅವರ ಖಾತೆಗೆ ಕಮೆಂಟ್ ಹಾಕುತ್ತಾರೆ. ಈ ಬಗ್ಗೆ ಅನುಶ್ರೀ ಅವರು ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಡಗಾರ್ ಎಂಬ ಪದ ಚರ್ಚೆಗೆ ಬಂದಿದೆ. ಡಗಾರ್ ಅಂದರೆ ನಡತೆಗೆಟ್ಟವಳು ಎಂಬ ಅರ್ಥ ನೀಡುತ್ತದೆ. ಈ ಪದ ಹೇಳಲು ಮಯೂರ್ ಅವರು ಮುಜುಗರ ಮಾಡಿಕೊಂಡಿದರು. ಆಗ ಮಾತನಾಡಿದ ಅನುಶ್ರೀ, ‘ನೋಡಿ ನಿಮಗೆ ಅದನ್ನು ಹೇಳಲೇ ಅಷ್ಟು ಮುಜುಗರ ಆಗುತ್ತಿದೆ ಎಂದರೆ ನಮಗೆ ಹಾಗೆ ಕರೆದಾಗ ಹೇಗನಿಸಬೇಡಿ’ ಎಂದು ಅನುಶ್ರೀ ಕೇಳಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ಬೇಸರ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಸಕನ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ ನೋಡಿ!

ಮಡಿಕೇರಿ, ಏಪ್ರಿಲ್ 04: ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ಕಾಫಿ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಂಎಲ್‌ಸಿ ಸುಜಾ ಕುಶಾಲಪ್ಪ ಅವರ ಎಸ್ಟೇಟ್‌ನಲ್ಲಿ ನೌಕರನಾಗಿದ್ದ ಪೊನ್ನಪ್ಪ ಕಾಫಿ ಕದ್ದಿರುವುದು ಪತ್ತೆಯಾಗಿದೆ. ಶಾಸಕರ ಮನೆಯಲ್ಲೇ ನಡೆದ ಈ ಪ್ರಕರಣದಲ್ಲಿ, ಪೊನ್ನಪ್ಪನನ್ನು ಸುಜಾ ಕುಶಾಲಪ್ಪ ಅವರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಕಾಫಿಯನ್ನು ಕದ್ದಿದ್ದಾಗಿ ಆರೋಪಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಿಂಗಳ ಹಿಂದೆ ನಡೆದ ಈ ಘಟನೆ ಇದೀಗ ಬಹಿರಂಗವಾಗಿದ್ದು, ತಪ್ಪೊಪ್ಪಿಗೆ ಹಿನ್ನೆಲೆ ಸುಜಾ ಕುಶಾಲಪ್ಪ ಅವರು ಪ್ರಕರಣ ದಾಖಲಿಸದೆ ಮಾನವೀಯತೆ ದೃಷ್ಟಿಯಿಂದ ಕ್ಷಮೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ವಿಕೃತ ಕಾಮಿಯ ಅಟ್ಟಹಾಸ: ‘ನನಗೆ ಎಚ್‌ಐವಿ ಇದೆ’ ಎಂದಿದ್ದಕ್ಕೆ ಮಹಿಳೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!

ವಿಜಯವಾಡ, ಏ.4: ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ಒಂದು ಅಮಾನೀಯ ಘಟನೆಯೊಂದು ನಡೆದಿದೆ. 35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಆಕೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿ, ಚಿತ್ರ ಹಿಂಸೆ ನೀಡಿದ್ದಾರೆ. ಗುರುವಾರ ಸಂಜೆ ಸಂತ್ರಸ್ತೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಮಾಚೆರ್ಲಾ ಪಟ್ಟಣದಲ್ಲಿ ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆರೋಪಿಗಳು ಬಂದು ಈ ಅಪರಾಧ ಎಸಗಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಗುರುವಾರ ಮಧ್ಯಾಹ್ನ 3:30 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಆರೋಪಿ ಕುಡಿಯಲು ನೀರು ಕೇಳುವ ನೆಪದಲ್ಲಿ ಸಂತ್ರಸ್ತೆಯ ಮನೆಗೆ ನುಗ್ಗಿ, ಮಹಿಳೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಾಚೆರ್ಲಾ ಪಟ್ಟಣದ ಸಿಐ ವೆಂಕಟ ರಮಣ ಎಂಬುವವರು ತಿಳಿಸಿದ್ದಾರೆ. ಸಂತ್ರಸ್ತೆ ಪ್ರಸ್ತುತ ನರಸರಾವ್‌ಪೇಟ ಏರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಮಹಿಳೆಯ ಮನೆ ಒಳಗೆ ನುಗ್ಗಿದ ನಂತರ, ಆರೋಪಿಯು ಆಕೆಯನ್ನು ಸ್ಕಾರ್ಫ್‌ನಿಂದ ಕಟ್ಟಿ, ಚಾಕು ತೋರಿಸಿ ಅತ್ಯಾಚಾರ ಮಾಡಿ, ಥಳಿಸಿದ್ದಾನೆ. ಈ ವೇಳೆ ಮಹಿಳೆ ತನಗೆ ಎಚ್‌ಐವಿ ಸೋಂಕು ಇದೆ ಎಂದು ಹೇಳಿಕೊಂಡ, ಕೋಪದಿಂದ ಕಬ್ಬಿಣದ ರಾಡ್​​ ಅನ್ನು ಆಕೆಯ ಖಾಸಗಿ ಭಾಗಕ್ಕೆ ತುರುಕಿದ್ದಾನೆ. ನಂತರ ಅಲ್ಲಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 6 ಮಕ್ಕಳು ಸೇರಿ 9 ಮಂದಿ ದಾರುಣ ಸಾವು!

ಸಂತ್ರಸ್ತೆಯ ಜೊತೆ ವಾಸವಾಗಿದ್ದ ಆಕೆಯ ಸೋದರಳಿಯ ಹತ್ತನೇ ತರಗತಿ ಪರೀಕ್ಷೆ ಮುಗಿಸಿ ತನ್ನ ಹೆತ್ತವರ ಮನೆಗೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಬಾಲಕ ಸಂತ್ರಸ್ತೆಯ ಮೊಬೈಲ್ ಫೋನ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಏನೋ ಸಮಸ್ಯೆಯಾಗಿದೆ ಎಂದು ತಿಳಿದು ಅವನು ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಆಕೆಯ ಮನೆಗೆ ಭೇಟಿ ನೀಡಿ ವಿಚಾರಿಸುವಂತೆ ಹೇಳಿದ್ದಾನೆ. ಬಾಲಕ ಮಾತಿನಂತೆ ಸ್ಥಳೀಯರು ಮಹಿಳೆಯ ಮನೆಗೆ ಧಾವಿಸಿ ನೋಡಿದಾಗ ಆಕೆ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಮೊದಲು ಮಾಚೆರ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನರಸರಾವ್‌ಪೇಟ ಏರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾದಾತ್ಮಕ ಹೇಳಿಕೆ… ಧೋನಿ ಕ್ಷಮೆಯಾಚಿಸಿದ ಯುವರಾಜ್ ಸಿಂಗ್

ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ, ಎರಡು ಬಾರಿ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರು ಭಾರತೀಯ ಕ್ರಿಕೆಟ್‌ನ ದಿಗ್ಗಜ ನಾಯಕರಾದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ತಂದೆ ಯೋಗರಾಜ್ ಸಿಂಗ್ ಅವರು ನೀಡುತ್ತಿರುವ ಸರಣಿ ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮಾಪಣೆ ಕೇಳಿದ್ದಾರೆ.

ಕ್ಷಮೆಯಾಚನೆಗೆ ಕಾರಣವೇನು?

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಕಳೆದ ಹಲವು ವರ್ಷಗಳಿಂದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ.

ಧೋನಿ ವಿರುದ್ಧದ ಆರೋಪ: ಧೋನಿ ಅವರು ಬೇಕೆಂದೇ ಯುವರಾಜ್ ಸಿಂಗ್ ಅವರ ವೃತ್ತಿಜೀವನವನ್ನು ಹಾಳು ಮಾಡಿದರು ಮತ್ತು ಅವರನ್ನು ತಂಡದಿಂದ ಹೊರಹಾಕಲು ಕಾರಣರಾದರು ಎಂದು ಯೋಗರಾಜ್ ಸಿಂಗ್ ಪದೇ ಪದೇ ಹೇಳುತ್ತಿದ್ದರು.

ಕಪಿಲ್ ದೇವ್ ವಿರುದ್ಧದ ದ್ವೇಷ: 1980ರ ದಶಕದಲ್ಲಿ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಕಪಿಲ್ ದೇವ್ ಕಾರಣ ಎಂದು ಯೋಗರಾಜ್ ಅವರು ದಶಕಗಳಿಂದ ಹಗೆತನ ಸಾಧಿಸುತ್ತಿದ್ದರು. ಇತ್ತೀಚೆಗೆ ಅವರು ಕಪಿಲ್ ದೇವ್ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದ ಘಟನೆಯನ್ನೂ ನೆನಪಿಸಿಕೊಂಡಿದ್ದರು.

ಯುವರಾಜ್ ಸಿಂಗ್ ಪ್ರತಿಕ್ರಿಯೆ:

ಸ್ಪೋರ್ಟ್ಸ್ ತಕ್ (Sports Tak) ಸಂದರ್ಶನದಲ್ಲಿ ಮಾತನಾಡಿದ ಯುವರಾಜ್ ಸಿಂಗ್ “ನಾನು ಕಪಿಲ್ ದೇವ್ ಮತ್ತು ಎಂ.ಎಸ್. ಧೋನಿ ಅವರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನ ತಂದೆ ಆಡುವ ಮಾತುಗಳು ಸರಿಯಲ್ಲ ಎಂದು ನಾನು ಅವರಿಗೆ ತಿಳಿಸಿದ್ದೇನೆ.”

ಈ ಇಬ್ಬರೂ ದಿಗ್ಗಜರು ಭಾರತೀಯ ಕ್ರಿಕೆಟ್‌ಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ.  ತಂದೆಯ ಮಾತುಗಳು ತಮ್ಮ ವೈಯಕ್ತಿಕ ಅಭಿಪ್ರಾಯವಲ್ಲ ಮತ್ತು ತಂದೆ-ಮಗನ ನಡುವಿನ ಆಲೋಚನೆಗಳಲ್ಲಿ ವ್ಯತ್ಯಾಸವಿದೆ ಎಂದು ಯುವರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಯೋಗರಾಜ್ ಸಿಂಗ್ ಮಾಡಿದ ಆರೋಪಗಳೇನು?

ಯುವರಾಜ್ ಸಿಂಗ್ ಫಾರ್ಮ್‌ನಲ್ಲಿದ್ದರೂ ಧೋನಿ ಅವರನ್ನು ತಂಡದಿಂದ ಹೊರಹಾಕಲು ಸಂಚು ರೂಪಿಸಿದರು ಮತ್ತು ಅವರ ಕ್ರಿಕೆಟ್ ಬದುಕನ್ನು ಅವಧಿಗಿಂತ ಮುನ್ನವೇ ಕೊನೆಗೊಳಿಸಿದರು ಎಂದು ಅವರ ತಂದೆ ಯೋಗರಾಜ್ ಸಿಂಗ್ ಆರೋಪಿಸಿದ್ದರು.

ಮತ್ತೊಮದು  ಸಂದರ್ಶನದಲ್ಲಿ, “ಧೋನಿಗೆ ಒಂದು ದಿನ ಗತಿ ಇಲ್ಲದಂತಾಗುತ್ತದೆ, ಅವರು ಭಿಕ್ಷೆ ಬೇಡಬೇಕಾಗುತ್ತದೆ” ಎಂದು ಶಪಿಸಿದ್ದರು.

ಹಾಗೆಯೇ  ಧೋನಿ ಕೇವಲ ತನ್ನ ಹೆಸರಿಗಾಗಿ ಆಡುತ್ತಾರೆ ಮತ್ತು ತಂಡದ ಇತರ ಪ್ರತಿಭಾವಂತ ಆಟಗಾರರನ್ನು ಬೆಳೆಯಲು ಬಿಡುವುದಿಲ್ಲ ಎಂದು ಯೋಗರಾಜ್ ಸಿಂಗ್ ದೂರಿದ್ದರು.

ಕಪಿಲ್ ದೇವ್ ಮತ್ತು ಯೋಗರಾಜ್ ಸಿಂಗ್ ಒಟ್ಟಿಗೆ ಕ್ರಿಕೆಟ್ ಆಡಿದವರು. ಆದರೆ ಯೋಗರಾಜ್ ಅವರ ಸಿಟ್ಟು ದಶಕಗಳಷ್ಟು ಹಳೆಯದು.

1981ರಲ್ಲಿ ಕೇವಲ ಒಂದು ಅಂತರಾಷ್ಟ್ರೀಯ ಪಂದ್ಯ ಆಡಿದ ನಂತರ ಯೋಗರಾಜ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಕ್ಕೆ ಕಪಿಲ್ ದೇವ್ ಅವರೇ ಕಾರಣ ಎಂದು ಯೋಗರಾಜ್ ನಂಬಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ತಮಗೆ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಸಿಟ್ಟಾಗಿ ಕಪಿಲ್ ದೇವ್ ಅವರ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು. “ಕಪಿಲ್ ದೇವ್ ಅವರ ಕಾಲನ್ನು ಮುರಿದು ಮನೆಗೆ ಕಳುಹಿಸಬೇಕಿತ್ತು” ಎಂಬ ಅರ್ಥದಲ್ಲಿ ಮಾತನಾಡಿ ವಿವಾದ ಹುಟ್ಟು ಹಾಕಿದ್ದರು.

ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರಿಗೆ ದಂಡದ ಶಿಕ್ಷೆ..!

ಇದೀಗ ತಂದೆಯ ವಿವಾದಾತ್ಮಕ ಹೇಳಿಕೆಗಳಿಗೆ ಮಹೇಂದ್ರ ಸಿಂಗ್ ಧೋನಿ ಹಾಗೂ ಕಪಿಲ್ ದೇವ್ ಅವರಲ್ಲಿ ಯುವರಾಜ್ ಸಿಂಗ್ ಕ್ಷಮೆಯಾಚಿಸಿದ್ದಾರೆ.

Source link

ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಹುಬ್ಬಳ್ಳಿ, ಏಪ್ರಿಲ್ 4: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಸದ್ದು ಮಾಡುತ್ತಿರುವ ‘ಲವ್ ಜಿಹಾದ್ (Love Jihad)’ ಆರೋಪದ ಪ್ರಕರಣ ಕ್ಷಣಕ್ಕೊಂದು ಸ್ಫೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಾಡೆಲಿಂಗ್ ಆಸೆ ತೋರಿಸಿ ಯುವತಿಯನ್ನು ನಂಬಿಸಿದ್ದ ಜಿಮ್ ಟ್ರೈನರ್ ಸಮೀರ್, ಆಕೆಯನ್ನು ಗರ್ಭಿಣಿ ಮಾಡಿ ನಂತರ ಗರ್ಭಪಾತ ಮಾಡಿಸಿದ್ದಾನೆಯೇ ಎಂಬ ದಟ್ಟ ಅನುಮಾನ ಇದೀಗ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ವೈದ್ಯಕೀಯ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಯುವತಿಯ ಪೋಷಕರ ಆರೋಪದ ಪ್ರಕಾರ, ಸಮೀರ್ ಆಕೆಗೆ ‘ನಿನ್ನನ್ನು ದೊಡ್ಡ ಮಾಡೆಲ್ ಮಾಡುತ್ತೇನೆ, ಅದಕ್ಕಾಗಿ ನಿತ್ಯ ಜಿಮ್‌ಗೆ ಬಾ’ ಎಂದು ನಂಬಿಸಿದ್ದ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುವ ಕನಸು ಕಂಡಿದ್ದ ಯುವತಿ, ಸಮೀರ್ ಮಾತುಗಳನ್ನು ನಂಬಿ ಆತನೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಸಮೀರ್, ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು ಎಂಬ ಬಲವಾದ ಅನುಮಾನವೂ ಇದೀಗ ಪೊಲೀಸರಿಗೆ ವ್ಯಕ್ತವಾಗಿದೆ.

ಏನಿದು ಪ್ರಕರಣ? ಪೂರ್ಣ ಹಿನ್ನೆಲೆ ಇಲ್ಲಿದೆ

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಜಿಮ್ ಟ್ರೈನರ್ ಸಮೀರ್ ವಿರುದ್ಧ ಲವ್ ಜಿಹಾದ್ ಮತ್ತು ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿತ್ತು. ಯುವತಿಯನ್ನು ನಂಬಿಸಿ ಹೋಟೆಲ್‌ವೊಂದಕ್ಕೆ ಕರೆದೊಯ್ದು, ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಾನೆ ಮತ್ತು ಆ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದಾನೆ, ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾನೆ ಎಂಬುದು ದೂರಿನ ಸಾರಾಂಶವಾಗಿತ್ತು.

ಆದರೆ, ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದ ಆರೋಪಿ ಸಮೀರ್, ತಾನು ಯಾವುದೇ ಔಷಧ ನೀಡಿಲ್ಲ ಎಂದು ವಾದಿಸಿದ್ದ. ‘ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ನಾನು ಮಾಡಿಲ್ಲ, ಆ ಹುಡುಗಿಯೇ ತನ್ನ ಫೋನ್‌ನಲ್ಲಿ ಚಿತ್ರೀಕರಿಸಿದ್ದಾಳೆ. ಅಂದು ಪ್ರಜ್ಞೆ ತಪ್ಪಿದ್ದು ನಾನೇ ಹೊರತು ಆಕೆಯಲ್ಲ’ ಎಂದು ಸ್ಫೋಟಕ ಹೇಳಿಕೆ ನೀಡಿದ್ದ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ವಿಡಿಯೋ ಇರೋದು ನಿಜ, ಆದ್ರೆ… ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿ!

ಇದೀಗ ಗರ್ಭಪಾತದ ಆರೋಪ ಕೇಳಿಬಂದಿರುವುದರಿಂದ ಪೊಲೀಸರು ಯುವತಿ ಮತ್ತು ಸಮೀರ್ ಇಬ್ಬರನ್ನೂ ಮುಖಾಮುಖಿ ವಿಚಾರಣೆ ನಡೆಸಲು ಸಜ್ಜಾಗಿದ್ದಾರೆ. ಸದ್ಯ ಯುವತಿಯ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬೀಳಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi and Menstruation: ಮುಟ್ಟಿನ ಸಮಯದಲ್ಲಿ ತುಳಸಿ ಗಿಡ ಏಕೆ ಮುಟ್ಟಬಾರದು? ಸತ್ಯ ಮತ್ತು ಮಿಥ್ಯಗಳು

ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ತುಳಸಿಯನ್ನು ಕೇವಲ ಗಿಡವಾಗಿ ನೋಡದೆ ‘ಲಕ್ಷ್ಮಿ’ಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಹಿರಿಯರು ಇಂದಿಗೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಹೇಳುತ್ತಾರೆ. ಇದರ ಹಿಂದಿನ ಅಸಲಿ ಕಾರಣಗಳೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಾಂಪ್ರದಾಯಿಕ ಮತ್ತು ಧಾರ್ಮಿಕ ನಂಬಿಕೆಗಳು:

ಪುರಾಣಗಳ ಪ್ರಕಾರ ತುಳಸಿಯು ಅತ್ಯಂತ ಶುದ್ಧ ಮತ್ತು ದೈವಿಕ ಶಕ್ತಿಯ ಸಂಕೇತ. ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ‘ಅಶುದ್ಧತೆ’ ಇರುತ್ತದೆ ಎಂಬುದು ಹಳೆಯ ಕಾಲದ ನಂಬಿಕೆ. ಈ ಸಮಯದಲ್ಲಿ ತುಳಸಿಯನ್ನು ಮುಟ್ಟಿದರೆ ಗಿಡವು ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಒಣಗಿ ಹೋಗುತ್ತದೆ ಎಂದು ಹಿರಿಯರು ನಂಬುತ್ತಾರೆ.

ವೈಜ್ಞಾನಿಕ ದೃಷ್ಟಿಕೋನ:

ಆಧುನಿಕ ವಿಜ್ಞಾನದ ಪ್ರಕಾರ, ಮಹಿಳೆಯರ ಋತುಚಕ್ರಕ್ಕೂ ಮತ್ತು ಸಸ್ಯಗಳ ಆರೋಗ್ಯಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಮಹಿಳೆಯರ ದೇಹದಲ್ಲಿ ಈ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು ಸಸ್ಯಗಳನ್ನು ಒಣಗಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. ಯಾವುದೇ ವೈಜ್ಞಾನಿಕ ಸಂಶೋಧನೆಯೂ ಸಹ “ಮಹಿಳೆಯರ ಸ್ಪರ್ಶದಿಂದ ಗಿಡ ಒಣಗುತ್ತದೆ” ಎಂಬ ವಾದವನ್ನು ಸಾಬೀತುಪಡಿಸಿಲ್ಲ. ಗಿಡ ಒಣಗಲು ಮುಖ್ಯ ಕಾರಣಗಳು ನೀರು, ಸೂರ್ಯನ ಬೆಳಕು ಅಥವಾ ಪೋಷಕಾಂಶಗಳ ಕೊರತೆಯೇ ಹೊರತು ಮಾನವ ಸ್ಪರ್ಶವಲ್ಲ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಹಿರಿಯರು ಈ ನಿಯಮ ಮಾಡಲು ಅಸಲಿ ಕಾರಣವೇನು?

ಹಿಂದಿನ ಕಾಲದಲ್ಲಿ ಈ ನಿಯಮಗಳನ್ನು ಜಾರಿಗೆ ತರಲು ಕೆಲವು ಪ್ರಾಯೋಗಿಕ ಕಾರಣಗಳಿದ್ದವು:

ವಿಶ್ರಾಂತಿಯ ಅಗತ್ಯ:

ಹಿಂದಿನ ಕಾಲದಲ್ಲಿ ಮಹಿಳೆಯರು ಮನೆಯಲ್ಲೇ ದೈಹಿಕವಾಗಿ ತುಂಬಾ ಕೆಲಸ ಮಾಡಬೇಕಿತ್ತು. ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಸೊಂಟ ನೋವು ಮತ್ತು ಅತಿಯಾದ ರಕ್ತಸ್ರಾವದಿಂದ ಅವರಿಗೆ ವಿಶ್ರಾಂತಿ ನೀಡಲು ‘ದೂರವಿರುವ’ ಪದ್ಧತಿಯನ್ನು ತರಲಾಯಿತು.

ನೈರ್ಮಲ್ಯದ ಕಾಳಜಿ:

ಅಂದು ಇಂದಿನಂತೆ ಸ್ಯಾನಿಟರಿ ಪ್ಯಾಡ್‌ಗಳ ಸೌಲಭ್ಯವಿರಲಿಲ್ಲ. ಸೋಂಕು ಹರಡದಂತೆ ತಡೆಯಲು ಮತ್ತು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅವರನ್ನು ದೇವಸ್ಥಾನ ಅಥವಾ ಪವಿತ್ರ ಗಿಡಗಳಿಂದ ದೂರವಿಡಲಾಗುತ್ತಿತ್ತು.

ರೋಗನಿರೋಧಕ ಶಕ್ತಿ: ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಿರುತ್ತದೆ. ತುಳಸಿ ಗಿಡವು ಗಿಡಮೂಲಿಕೆಗಳ ಆಗರವಾಗಿದ್ದರೂ, ತೋಟದ ಕೆಲಸ ಅಥವಾ ಗಿಡದ ಆರೈಕೆಯಲ್ಲಿ ತೊಡಗುವುದರಿಂದ ಅವರಿಗೆ ಆಯಾಸವಾಗಬಾರದು ಎಂಬುದು ಅಂದಿನವರ ಕಾಳಜಿಯಾಗಿತ್ತು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 6 ಮಕ್ಕಳು ಸೇರಿ 9 ಮಂದಿ ದಾರುಣ ಸಾವು!

ನಾಸಿಕ್‌, ಏ.4: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಕಾರು ಬಾವಿಗೆ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 6 ಮಕ್ಕಳಿದ್ದರೂ ಎಂದು ಹೇಳಲಾಗಿದೆ. ನಾಸಿಕ್‌ನ ದಿಂಡೋರಿ ತಾಲೂಕಿನಲ್ಲಿ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಪೊಲೀಸರ ಪ್ರಕಾರ, ಮಾರುತಿ XL6 ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಬಾವಿಗೆ ಉರುಳಿ ಬಿದ್ದಿದೆ. ವಾಹನದಲ್ಲಿದ್ದ 9 ಜನ ಪ್ರಯಾಣಿಕರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತರೆಲ್ಲರೂ ಇಂದೋರ್ ಗ್ರಾಮದ ದರ್ಗುಡೆ ಕುಟುಂಬದವರು ಎಂದು ಹೇಳಲಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ 6 ಮಕ್ಕಳಲ್ಲಿ 7 ವರ್ಷದ ಬಾಲಕಿಯೂ ಒಬ್ಬಳು ಎಂದು ಪೊಲೀಸರು ಹೇಳಿದ್ದಾರೆ. ಮೃತರಲ್ಲಿ ಸುನಿಲ್ ದರ್ಗುಡೆ, ಅವರ ಪತ್ನಿ ಮತ್ತು ಅವರ ಮಗಳು ಸೇರಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ದರ್ಗುಡೆ ಕುಟುಂಬವು ಖಾಸಗಿ ಕಾರ್ಯಕ್ರಮವೊಂದಕ್ಕೆ ವಾಪಸ್ ಬರುವಾಗ ಈ ಘಟನೆ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ವಾಹನದ ಚಾಲಕನ ನಿಯಂತ್ರಣ ತಪ್ಪಿ, ವಾಹನವು ನೇರವಾಗಿ ನೀರು ತುಂಬಿದ ಬಾವಿಗೆ ಬಿದ್ದಿದೆ. ಅಪಘಾತದ ಬಗ್ಗೆ ತಿಳಿದ ತಕ್ಷಣ, ಅಲ್ಲಿ ಜನರು ಮತ್ತು ಪೊಲೀಸರು ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ಧಾವಿಸಿದರು. ಎನ್‌ಡಿಆರ್‌ಎಫ್ ಸಿಬ್ಬಂದಿ ಕೂಡ ಸ್ಥಳಕ್ಕೆ ತಲುಪಿ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು; ಓರ್ವ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ

ರಕ್ಷಣಾ ಕಾರ್ಯಾಚರಣೆ ತಡರಾತ್ರಿಯವರೆಗೂ ಮುಂದುವರೆದಿದೆ ಎಂದು ಹೇಳಲಾಗಿದೆ. ಆದರೆ, ಅಪಘಾತದ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ ರಕ್ಷಣಾ ಸಿಬ್ಬಂದಿ ತೊಂದರೆಗಳನ್ನು ಎದುರಿಸಿದರು. ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಹೇಳಿದ್ದಾರೆ. ದಿಂಡೋರಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಪಘಾತದ ನಿಖರವಾದ ಕಾರಣವನ್ನು ಏನು ಎಂಬ ಬಗ್ಗೆ ಕಾರಣ ಹುಡುಕುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Haier New AC: ಭಾರತದ ಮೊದಲ ಸ್ವಯಂ ಶುಚಿಗೊಳಿಸುವ ಎಸಿ ಬಿಡುಗಡೆ, 10 ಸೆಕೆಂಡುಗಳಲ್ಲಿ ಫುಲ್ ಕೂಲ್: ಬೆಲೆ ಕೇವಲ…

ಬೆಂಗಳೂರು (ಏ. 04): ಹೈಯರ್ (Haier) ಭಾರತದಲ್ಲಿ ಹೊಸ ಡೆಸರ್ಟ್ ರೋಸ್ ಎಸಿ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಸ್ಪ್ಲಿಟ್ ಎಸಿಗಳು ಸೆಲ್ಫ್ ಔಟ್‌ಡೋರ್ ಕ್ಲೀನಿಂಗ್ ತಂತ್ರಜ್ಞಾನವನ್ನು ಹೊಂದಿವೆ. ಇದು ಈ ಎಸಿಯ ನಿರ್ವಹಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ವಚ್ಛವಾದ ಹೊರಾಂಗಣದಿಂದಾಗಿ, ಶುದ್ಧ ಮತ್ತು ತಂಪಾದ ಗಾಳಿಯು ಮನೆಯೊಳಗೆ ಬರುತ್ತದೆ. ಇದು ಸೆಲ್ಫ್ ಆಟೋ ಕ್ಲೀನ್ ಔಟ್‌ಡೋರ್ ಹೊಂದಿರುವ ಭಾರತದ ಮೊದಲ ಎಸಿ ಆಗಿದೆ. ಇದರಲ್ಲಿ, ಹೊರಾಂಗಣ ಫ್ಯಾನ್ ಪ್ರತಿ ಬಾರಿ ಸ್ವಿಚ್ ಆಫ್ ಮಾಡಿದಾಗ 15 ಸೆಕೆಂಡುಗಳ ಕಾಲ ಹಿಮ್ಮುಖವಾಗಿ ತಿರುಗುತ್ತದೆ, ಇದರಿಂದಾಗಿ ಕಂಡೆನ್ಸರ್ ಕಾಯಿಲ್‌ಗಳಲ್ಲಿ ಸಂಗ್ರಹವಾದ ಧೂಳು ಸ್ವಚ್ಛಗೊಳ್ಳುತ್ತದೆ.

ಹೈಯರ್ ಡೆಸರ್ಟ್ ರೋಸ್ ಸರಣಿಯ ಈ AC AI-AtmoX ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನವು ಮುಖ್ಯವಾಗಿ AI-AtmoX ನ್ಯೂರೋ, AI-ಪವರ್ ಮ್ಯಾನೇಜರ್ ಮತ್ತು AI-AtmoX ಆಟೋ ಕ್ಲೀನ್ ಸೇರಿದಂತೆ ಮೂರು ಆಯ್ಕೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ. AI-AtmoX ನ್ಯೂರೋ ಬಗ್ಗೆ ಹೇಳುವುದಾದರೆ, ಇದು AI ಕ್ಲೈಮೇಟ್ ಕಂಟ್ರೋಲ್ 2.0 ಅನ್ನು ಆಧರಿಸಿದೆ, ಇದು ಬಳಕೆದಾರರಿಗೆ ಅನುಗುಣವಾಗಿ AC ಯ ತಂಪಾಗಿಸುವಿಕೆಯನ್ನು ಹೊಂದಿಸುತ್ತದೆ. AI ತಂತ್ರಜ್ಞಾನದಿಂದಾಗಿ, ನೀವು ಮನೆಗೆ ತಲುಪಿದಾಗ ಅಂರೆ ನೀವು 100 ಮೀಟರ್ ದೂರದಲ್ಲಿರುವಾಗAC ಅಟೊಮೆಟಿಕ್ ಆಗಿ ಆನ್ ಆಗುತ್ತದೆ.

AI-AtmoX ಪವರ್ ಮ್ಯಾನೇಜರ್ ತಂತ್ರಜ್ಞಾನವು ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೂಮ್ ತಣ್ಣಗಾದ ನಂತರ ಅದು ಸ್ವಯಂಚಾಲಿತವಾಗಿ ಕಂಪ್ರೆಸರ್ ಅನ್ನು ಆಫ್ ಮಾಡುತ್ತದೆ ಮತ್ತು AC ಪವರ್ ಅನ್ನು ನಿರ್ವಹಿಸುತ್ತದೆ. AI-AtmoX ಆಟೋ ಕ್ಲೀನ್ ವೈಶಿಷ್ಟ್ಯವು AC ಯನ್ನು ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುತ್ತದೆ, ಹೊರಾಂಗಣ ಮತ್ತು ಒಳಾಂಗಣ ಪರಿಸರಗಳಿಂದ ಧೂಳು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.

Tech Tips: ಲ್ಯಾಪ್‌ಟಾಪ್ ಚಾರ್ಜರ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್

ಡೆಸರ್ಟ್ ರೋಸ್ ಎಸಿ ಬೆಲೆ ಎಷ್ಟು?

ಹೈಯರ್‌ನ ಈ ಹೊಸ ಸರಣಿಯ ಆರಂಭಿಕ ಬೆಲೆ ರೂ. 55,990. ಇದು ಎರಡು ಮಾದರಿಗಳಲ್ಲಿ ಬರುತ್ತದೆ: ಗೋಲ್ಡ್ ಸ್ಟ್ರೈಪ್ ಮತ್ತು ನೆಬ್ಯುಲಾ ಬ್ಲೂ ಸ್ಟ್ರೈಪ್. ಇವು ಭಾರತದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಪ್ರಮುಖ ಚಿಲ್ಲರೆ ಚಾನೆಲ್‌ಗಳ ಮೂಲಕ ಖರೀದಿಗೆ ಲಭ್ಯವಿದೆ.

ಈ ಹೈಯರ್ ಎಸಿ ಸರಣಿಯು AI ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮಾನವ ಪತ್ತೆ ಕಾರ್ಯವನ್ನು ಸಹ ಒಳಗೊಂಡಿದೆ, ಇದು ಕೋಣೆಯಲ್ಲಿ ಯಾರೂ ಇಲ್ಲದ 15 ನಿಮಿಷಗಳಲ್ಲಿ ಆಟೋ ಎಲ್ 3 ಮೋಡ್ ಅನ್ನು ಸಕ್ರಿಯಗೊಳಿಸುತ್ತದೆ. ಇದಲ್ಲದೆ, ಇದು 30 ನಿಮಿಷಗಳ ನಂತರ ಎಸಿಯ ವಿದ್ಯುತ್ ಅನ್ನು ಆಫ್ ಮಾಡುತ್ತದೆ. ಈ ರೀತಿಯಾಗಿ, ಎಸಿ ಆಕಸ್ಮಿಕವಾಗಿ ಆನ್ ಆಗಿದ್ದರೂ ಸಹ, ಅದು ವಿದ್ಯುತ್ ಅನ್ನು ಬಳಸುವುದಿಲ್ಲ. ಇದಲ್ಲದೆ, ಈ ಎಸಿ ಆನ್ ಮಾಡಿದ ಕೇವಲ 10 ಸೆಕೆಂಡುಗಳಲ್ಲಿ ತಂಪಾದ ಗಾಳಿಯನ್ನು ತಲುಪಿಸಲು ಪ್ರಾರಂಭಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎಲ್ಲೂ ಇಲ್ಲ ಅಂದ್ರೆ ಕೊನೆಗೆ ಸ್ಯಾಂಡಲ್​​ವುಡ್​​ನಲ್ಲಾದರೂ ಕೆಲಸ ಮಾಡಬಹುದು’; ವಿರಾಟ್ ಕೊಹ್ಲಿ

ಐಪಿಎಲ್ ಕಾರಣಕ್ಕೆ ವಿರಾಟ್ ಕೊಹ್ಲಿ ಅವರು ಸದ್ಯ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಭಾನುವಾರ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಸಿಎಸ್​ಕೆ ವಿರುದ್ಧದ ಪಂದ್ಯಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಅವರು ದ್ಯಾನಿಶ್ ಸೇಠ್ ಜೊತೆ ಯೂಟ್ಯೂಬ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ಐದು ನಿಮಿಷ ಇರೋ ಈ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಸ್ಯಾಂಡಲ್​​ವುಡ್​​ನಲ್ಲಿ ಆ್ಯಕ್ಟ್ ಮಾಡೋ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಆರ್​​ಸಿಬಿ ಇನ್​​ಸೈಡರ್ ನ್ಯಾಗ್ಸ್ (ದ್ಯಾನಿಶ್ ಸೇಠ್) ಇದ್ದಲ್ಲಿ ಫನ್​​ಗೆ ಬರ ಇರೋದಿಲ್ಲ. ಐಪಿಎಲ್ ಮ್ಯಾಚ್ ನಡೆಯುವಾಗ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಮಾಡುವ ಮೂಲಕ ನ್ಯಾಗ್ಸ್ ಅವರು ಗಮನ ಸೆಳೆಯುತ್ತಾ ಇರುತ್ತಾರೆ. ಈಗ ಅವರು ವಿರಾಟ್ ಕೊಹ್ಲಿ ಸಂದರ್ಶನ ಮಾಡಿದ್ದಾರೆ. ಆಗ ಆರ್​​ಸಿಬಿ ಮಾಲೀಕತ್ವ ಬದಲಾದ ಬಗ್ಗೆ ಮಾತನಾಡಿದ್ದಾರೆ.

‘ಕಂಪನಿ ಯಾವುದೇ ಬರಲಿ, ನ್ಯಾಗ್ಸ್ ಇದ್ದೇ ಇರ್ತಾರೆ. ನೀವು ಹಾಗೂ ಜಿರಳೆ ಮಾತ್ರ ಎಲ್ಲ ಕಡೆಗಳಲ್ಲಿ ಉಳಿದುಕೊಳ್ಳಲು ಸಾಧ್ಯ’ ಎಂದು ಕೊಹ್ಲಿ ಹೇಳಿದರು. ಇದಕ್ಕೆ ಕೌಂಟರ್ ಕೊಟ್ಟ ನ್ಯಾಗ್ಸ್, ‘ನಿಮಗೆ ಅಭದ್ರತಾ ಭಾವ ಕಾಡುತ್ತಿದೆಯೇ? ಹಾಗೆ ಕಾಡುತ್ತಿದ್ದರೆ ಹೇಳಿ ನಾನು ನಿಮ್ಮನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ, ಭಯಬೇಡಿ’ ಎಂದು ನ್ಯಾಗ್ಸ್ ಹೇಳಿದರು.

‘ನನಗೆ ಅಭದ್ರತಾ ಭಾವ ಕಾಡುತ್ತಿಲ್ಲ. ಏಕೆಂದರೆ ಎಲ್ಲೂ ಆಗಿಲ್ಲ ಅಂದ್ರೆ ಕೊನೆಗೆ ನಿಮ್ಮ ಇನ್​​ಫ್ಲ್ಯುಯೆನ್ಸ್ ಬಳಸಿ ನಾನು ಸ್ಯಾಂಡಲ್​​ವುಡ್​​ನಲ್ಲಿ ಕೆಲಸ ಮಾಡಬಹುದು. ನಿವು ಇಲ್ಲಿ ದೊಡ್ಡ ಸ್ಟಾರ್ ಅಲ್ಲವೇ? ನಾನು ಸೈಡ್ ರೋಲ್ ಮಾಡುತ್ತೇನೆ’ ಎಂದಿದ್ದಾರೆ ಕೊಹ್ಲಿ. ಆಗ ನ್ಯಾಗ್ಸ್ ‘ನಾನು ನಿಮ್ಮ ಪರ ಇದ್ದೇನೆ ಭಯ ಬೇಡ’ ಎಂದರು. ಈ ಫನ್ ಗಮನ ಸೆಳೆದಿದೆ.

ಇದನ್ನೂ ಓದಿ: ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ವಿರಾಟ್ ಕೊಹ್ಲಿ..! ಯುವತಿಯ ಸ್ಫೋಟಕ ವಿಡಿಯೋ ವೈರಲ್

ದ್ಯಾನಿಶ್ ಅವರು ಕನ್ನಡದಲ್ಲಿ ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ‘ಫ್ರೆಂಚ್ ಬಿರಿಯಾನಿ’ ಸಿನಿಮಾ ಮೆಚ್ಚುಗೆ ಪಡೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಪೋಕ್ಸೋ ಪ್ರಕರಣಗಳನ್ನು ತಕ್ಷಣ ವರದಿ ಮಾಡಬೇಕು; ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ!

ಬೆಂಗಳೂರು, ಏಪ್ರಿಲ್ 04: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾಸಗಿ ಆಸ್ಪತ್ರೆಗಳಿಗಾಗಿ ಮಹತ್ವದ ನಿರ್ದೇಶನ ಹೊರಡಿಸಿದೆ. ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪೋಕ್ಸೋ ಕಾಯ್ದೆ 2012ರಡಿ (POCSO Act) ಕಡ್ಡಾಯವಾಗಿ ವರದಿ ಸಲ್ಲಿಸುವಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪತ್ತೆಯಾದಾಗ ಖಾಸಗಿ ಆಸ್ಪತ್ರೆಗಳು ತಕ್ಷಣವೇ ಪೊಲೀಸ್ ಇಲಾಖೆ ಅಥವಾ ವಿಶೇಷ ಕಿಶೋರ ಪೊಲೀಸ್ ಘಟಕಕ್ಕೆ ಮಾಹಿತಿ ನೀಡಬೇಕು ಎಂದು ಇಲಾಖೆಯು ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ಆಸ್ಪತ್ರೆಗಳಿಗೆ ಮೊದಲು ತಿಳಿಯುವುದರಿಂದ ತಕ್ಷಣದ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಲು ಚೈಲ್ಡ್‌ಲೈನ್ 1098 ಸೇವೆಯನ್ನು ಬಳಸಬಹುದಾಗಿದೆ.

ನಿಯಮ ಪಾಲಿಸದಿದ್ದರೆ ಆಸ್ಪತ್ರೆ ವಿರುದ್ಧ ಕ್ರಮ

ಈ ನಿಯಮಗಳನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಪ್ರಕರಣಗಳನ್ನು ಮರೆಮಾಚುವುದು ಅಥವಾ ವರದಿ ಮಾಡಲು ವಿಳಂಬ ಮಾಡುವುದು ತನಿಖೆಗೆ ಅಡ್ಡಿಯಾಗುವುದಲ್ಲದೆ, ಸಂತ್ರಸ್ತರ ಸುರಕ್ಷತೆಗೂ ಅಡ್ಡಿಯಾಗುತ್ತದೆ.

ಇದನ್ನೂ ಓದಿ ಜೈಲಿನಿಂದಲೇ ಅಪ್ರಾಪ್ತ ಬಾಲಕಿಗೆ ಪೋಕ್ಸೊ ಆರೋಪಿ ಬೆದರಿಕೆ: ಆತನಿಗೆ ಮೊಬೈಲ್ ಕೊಟ್ಟವರು ಯಾರು?

ಇದಲ್ಲದೆ, ಆಸ್ಪತ್ರೆಗಳು ತಮ್ಮ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವಂತೆ ಹಾಗೂ ಇಂತಹ ಪ್ರಕರಣಗಳನ್ನು ನಿಭಾಯಿಸುವಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸುವಂತೆಯೂ ಸೂಚಿಸಲಾಗಿದೆ. ಈ ಕ್ರಮದ ಮೂಲಕ ಮಕ್ಕಳ ರಕ್ಷಣೆಯಲ್ಲಿ ಖಾಸಗಿ ಆಸ್ಪತ್ರೆಗಳ ಜವಾಬ್ದಾರಿಯನ್ನು ಹೆಚ್ಚಿಸುವುದೇ ಸರ್ಕಾರದ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Exit mobile version