ಬೆಂಗಳೂರು, ಏಪ್ರಿಲ್ 03: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೇರೆಡೆಗೆ ತೆರಳುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಹೆಚ್ಚಿನ ಜನ ಸಂದಣಿಯನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆ ವಿಶೇಷ ರೈಲು ಸೇವೆ ಘೋಷಿಸಿದೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ತಿರುಚಿರಾಪಲ್ಲಿ (Bengaluru- Tiruchirapalli) ನಡುವೆ ನಾಲ್ಕು ಟ್ರಿಪ್ಗಳ ವಿಶೇಷ ರೈಲು ಸಂಚರಿಸಲಿದೆ ಎಂದು ಇಲಾಖೆ ತಿಳಿಸಿದೆ.
ವಿಶೇಷ ರೈಲಿನ ವೇಳಾಪಟ್ಟಿ
06007 ಸಂಖ್ಯೆಯ ರೈಲು ಏಪ್ರಿಲ್ 7, 14, 21 ಮತ್ತು 28ರಂದು ಬೆಳಗ್ಗೆ 5.30ಕ್ಕೆ ತಿರುಚಿರಾಪಲ್ಲಿಯಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ. ಹಿಂತಿರುಗುವ 06008 ಸಂಖ್ಯೆಯ ರೈಲು ಮಧ್ಯಾಹ್ನ 3ಕ್ಕೆ ಹೊರಟು ರಾತ್ರಿ 10.30ಕ್ಕೆ ತಿರುಚಿರಾಪಲ್ಲಿಗೆ ತಲುಪಲಿದೆ ಎನ್ನಲಾಗಿದೆ.
ಈ ರೈಲು ಕರೂರು, ನಾಮಕ್ಕಲ್, ಸೇಲಂ, ಬಂಗಾರಪೇಟೆ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಒಟ್ಟು 18 ಬೋಗಿಗಳಿದ್ದು, ಎಸಿ ಚೇರ್ ಕಾರ್, ದ್ವಿತೀಯ ದರ್ಜೆ ಚೇರ್ ಕಾರ್ ಹಾಗೂ ಅಂತ್ಯೋದಯ ಕೋಚ್ಗಳನ್ನು ಒಳಗೊಂಡಿದೆ.
ನವದೆಹಲಿ, ಏಪ್ರಿಲ್ 2: ಜಾಗತಿಕ ಕಚ್ಛಾ ತೈಲ ಬೆಲೆ ಇದೇ ರೀತಿ ಅಧಿಕ ಮಟ್ಟದಲ್ಲೇ ಇದ್ದರೆ ಪೆಟ್ರೋಲ್ ಮತ್ತು ಡೀಸಲ್ ರೀಟೇಲ್ ಬೆಲೆಗಳನ್ನು ಏರಿಸುವುದು ಅನಿವಾರ್ಯವಾಗಬಹುದು. ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗಬಾರದೆಂದು ಸರ್ಕಾರ ಬೆಲೆ ಏರಿಕೆಯನ್ನು ತಡೆ ಹಿಡಿದಿದೆ. ಒಂದಷ್ಟು ಸೆಂಟ್ರಲ್ ಎಕ್ಸೈಸ್ ಟ್ಯಾಕ್ಸ್ ಅನ್ನು ತಗ್ಗಿಸಿ, ರೀಟೇಲ್ ಬೆಲೆ (Petrol price) ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.
ಪೆಟ್ರೋಲ್ ಮೇಲೆ ಯಾವೆಲ್ಲಾ ತೆರಿಗೆಗಳಿವೆ? ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪೆಟ್ರೋಲ್ ಬೆಲೆ ಯಾಕೆ ವ್ಯತ್ಯಾಸ ಇರುತ್ತದೆ? ಪೆಟ್ರೋಲ್, ಡೀಸಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಬೆಲೆ ಕಡಿಮೆ ಆಗಬಹುದು ಎನ್ನುವ ವಾದ ಸರಿಯಾ? ಏನದರ ಲೆಕ್ಕಾಚಾರ… ಇಲ್ಲಿದೆ ಮಾಹಿತಿ
ಪೆಟ್ರೋಲ್ ಮೇಲೆ ಕೇಂದ್ರಕ್ಕಿಂತ ರಾಜ್ಯಗಳಿಂದಲೇ ಹೆಚ್ಚಿನ ತೆರಿಗೆ
ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸಲ್ನ ಬೆಲೆಯಲ್ಲಿ ಯಾವೆಲ್ಲಾ ಅಂಶಗಳ ಪ್ರಭಾವ ಇರುತ್ತದೆ, ನೋಡಿ…
ಕೇಂದ್ರೀಯ ತೆರಿಗೆಗಳಲ್ಲಿ, ಬೇಸಿಕ್ ಎಕ್ಸೈಸ್ ಡ್ಯೂಟಿ, ರೋಡ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸೆಸ್, ಅಗ್ರಿಕಲ್ಚರ್ ಇನ್ಫ್ರಾಸ್ಟ್ರಕ್ಚರ್ ಅಂಡ್ ಡೆವಲಪ್ಮೆಂಟ್ ಸೆಸ್ ಮತ್ತು ಸ್ಪೆಷಲ್ ಅಡಿಶನಲ್ ಎಕ್ಸೈಸ್ ಡ್ಯೂಟಿ ಇರುತ್ತವೆ.
ರಾಜ್ಯ ತೆರಿಗೆಗಳಲ್ಲಿ ವ್ಯಾಟ್, ಫಿಕ್ಸೆಡ್ ಸೆಸ್, ಅಡಿಶನಲ್ ಟ್ಯಾಕ್ಸ್, ಎನ್ವಿರಾನ್ಮೆಂಟ್ ಸೆಸ್ ಇತ್ಯಾದಿ ಒಳಗೊಂಡಿವೆ. ವ್ಯಾಟ್ ಎಂಬುದು ಶೇಕಡವಾರು ಲೆಕ್ಕದಲ್ಲಿ ಇರುತ್ತದೆ. ಸೆಸ್ ನಿಶ್ಚಿತ ದರವಾಗಿರುತ್ತದೆ.
ಕರ್ನಾಟಕದಲ್ಲಿ ಎಷ್ಟಿದೆ ಟ್ಯಾಕ್ಸ್
ಬೆಂಗಳೂರಿನಲ್ಲಿ ಇವತ್ತಿನ 1 ಲೀಟರ್ ಪೆಟ್ರೋಲ್ ಬೆಲೆ: 102.63 ರೂ
ಮೂಲ ಬೆಲೆ: 64.56 ರೂ
ಕೇಂದ್ರ ತೆರಿಗೆ: 11.90 ರೂ
ಕರ್ನಾಟಕದ ತೆರಿಗೆ: 23.59 ರೂ
ಡೀಲರ್ ಕಮಿಷನ್: 2.58 ರೂ
ಭಾರತದಲ್ಲಿ ಅತಿಹೆಚ್ಚು ಟ್ಯಾಕ್ಸ್ ಹಾಕುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಇದೆ. ದೆಹಲಿಯಲ್ಲಿ ಬಹಳ ಕಡಿಮೆ ಟ್ಯಾಕ್ಸ್ ಹಾಕಲಾಗುತ್ತದೆ. ಹೀಗಾಗಿ, ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಕರ್ನಾಟಕಕ್ಕಿಂತ ಕಡಿಮೆ ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ಏರುಪೇರಾಗುವುದು ಇದೇ ತೆರಿಗೆ ವ್ಯತ್ಯಾಸದಿಂದ.
ಪೆಟ್ರೋಲ್ ಮತ್ತು ಡೀಸಲ್ ಅನ್ನು ಜಿಎ್ಟಿ ವ್ಯಾಪ್ತಿಗೆ ತಂದರೆ ಬೆಲೆ ಕಡಿಮೆ ಆಗುತ್ತದೆ. ಈಗಿರುವ ಅಬಕಾರಿ ಸುಂಕ ಮತ್ತು ವ್ಯಾಟ್ ವ್ಯವಸ್ಥೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಶೇ. 50ರಷ್ಟು ತೆರಿಗೆಯೇ ಇದೆ. ಸದ್ಯ ಜಿಎಸ್ಟಿ ಎರಡು ಸ್ಲ್ಯಾಬ್ ಇದೆ. ಶೇ. 5 ಮತ್ತು ಶೇ. 18 ಟ್ಯಾಕ್ಸ್ ಸ್ಲ್ಯಾಬ್ ಇದೆ. ಶೇ. 18 ಜಿಎಸ್ಟಿ ಹಾಕಿದರೆ ಬೆಲೆ ಪೆಟ್ರೋಲ್ ಬೆಲೆ 80 ರೂಗಿಂತ ಕಡಿಮೆ ಇರುತ್ತದೆ. ಶೇ. 40 ಜಿಎಸ್ಟಿ ಹಾಕಿದರೂ ಬೆಲೆ 100 ರೂ ದಾಟುವುದಿಲ್ಲ.
ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾದ ಬಿಡುಗಡೆ ಕುರಿತು ಸಾಕಷ್ಟು ಊಹಾಪೋಹಗಳು, ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಾರ್ಚ್ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಪದೇ ಪದೇ ಬಿಡುಗಡೆ ಮುಂದೂಡಿಕೊಂಡೇ ಬರುತ್ತಿದೆ. ಇದೀಗ ಸಿನಿಮಾ ಏಪ್ರಿಲ್ 30 ರಂದು ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಇದು ಸಹ ಸುಳ್ಳಾಗಲಿದ್ದು, ಸಿನಿಮಾ ಮತ್ತೆ ಮುಂದೂಡಲ್ಪಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ‘ಪೆದ್ದಿ’ ಪೋಸ್ಟರ್ನಲ್ಲಿ ಬಿಡುಗಡೆ ದಿನಾಂಕವೇ ಇಲ್ಲದಿರುವುದು ಇನ್ನಷ್ಟು ಅನುಮಾನಗಳನ್ನು ಮೂಡಿಸಿದೆ. ಇದೀಗ ನಟ ರಾಮ್ ಚರಣ್ ಅವರು ಈ ಕುರಿತು ಸ್ವತಃ ಸ್ಪಷ್ಟನೆ ನೀಡಿದ್ದಾರೆ.
ರಾಮ್ ಚರಣ್ ಅವರ ಚಿಕ್ಕಪ್ಪ ನಾಗಬಾಬು ಅವರ ಪುತ್ರಿ ನಿಹಾರಿಕಾ ಸಿನಿಮಾ ನಿರ್ಮಾಪಕಿ ಆಗಿದ್ದು, ‘ರಾಕಾಸ’ ಹೆಸರಿನ ತೆಲುಗು ಹಾರರ್-ಕಾಮಿಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ರಾಕಾಸ’ ತಂಡವನ್ನು ರಾಮ್ ಚರಣ್ ಇತ್ತೀಚೆಗೆ ಭೇಟಿ ಆಗಿದ್ದರು. ಈ ವೇಳೆ ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾದ ಚಿತ್ರೀಕರಣದ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ.
ರಾಮ್ ಚರಣ್ ಅವರು ಎರಡು ದಿನ ಹಿಂದೆ ‘ರಾಕಾಸ’ ಸಿನಿಮಾ ತಂಡವನ್ನು ಭೇಟಿ ಮಾಡಿದ್ದರು. ಆ ದಿನ ಚಿತ್ರತಂಡದೊಂದಿಗೆ ಮಾತನಾಡುತ್ತಾ, ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದರು. ಆದರೆ ಇನ್ನು ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಇದೆ ಎಂದು ಸಹ ಹೇಳಿದ್ದು, ‘ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ಯಾವುದೇ ಆತಂಕ ಬೇಕಿಲ್ಲ, ನಾವು ಅಂದುಕೊಂಡ ಸಮಯಕ್ಕೆ ಸಿನಿಮಾ ಮುಗಿಸುತ್ತಿದ್ದೇವೆ’ ಎಂದು ರಾಮ್ ಚರಣ್ ಹೇಳಿದ್ದಾರೆ.
‘ಪೆದ್ದಿ’ ಸಿನಿಮಾವು ಹಳ್ಳಿಯ ಕ್ರಿಕೆಟ್ ಆಟಗಾರ ಹಾಗೂ ಕುಸ್ತಿ ಪೈಲ್ವಾನನ ಕತೆಯನ್ನು ಒಳಗೊಂಡಿದೆ. ಸಿನಿಮಾ ಅನ್ನು ‘ಉಪ್ಪೆನ’ ಖ್ಯಾತಿಯ ಬುಚ್ಚಿಬಾಬು ಸನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರು ಕುಸ್ತಿ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾದ ನಾಯಕಿ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ.
ಬೆಂಗಳೂರು, ಏಪ್ರಿಲ್ 03: ವಿದ್ಯುತ್ ಚಾಲಿತ ವಾಹನಗಳಿಗೆ ಇಲ್ಲಿಯವರೆಗೆ ನೀಡಲಾಗಿದ್ದ ತೆರಿಗೆ (Tax) ವಿನಾಯಿತಿಯನ್ನು ಹಿಂಪಡೆದ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೇಶ ಮತ್ತು ಜಗತ್ತಿನಲ್ಲಿ ವಿದ್ಯುತ್ ವಾಹನಗಳತ್ತ ಸಾಗುವ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮವು ಜನರನ್ನು ಮತ್ತೆ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳತ್ತ ಸೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಿಂದ ಮಾಲಿನ್ಯ ಹೆಚ್ಚಾಗುವುದಲ್ಲದೆ, ಕಚ್ಚಾ ತೈಲ ಆಮದಿನ ಮೇಲೆ ದೇಶದ ಅವಲಂಬನೆ ಹೆಚ್ಚುತ್ತದೆ. ಪ್ರಸ್ತುತ ಜಾಗತಿಕ ಅಸ್ಥಿರತೆಯಿಂದ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿರುವಾಗ ಈ ನಿರ್ಧಾರ ಸರಿಯಲ್ಲ. ಕೇವಲ 250 ಕೋಟಿ ರೂಪಾಯಿ ಆದಾಯಕ್ಕಾಗಿ ಮೂರೂವರೆ ಲಕ್ಷ ಕೋಟಿ ರೂಪಾಯಿ ಬಜೆಟ್ ಹೊಂದಿರುವ ರಾಜ್ಯ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿರುವುದು ಖಂಡನೀಯ ಎಂದು ಜೋಶಿ ಹೇಳಿದ್ದಾರೆ. ಸರ್ಕಾರ ತಕ್ಷಣ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 03: ಸುಮಾರು 5 ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ ಆರೋಪಕ್ಕೆ ತುತ್ತಾಗಿದ್ದರು. ಈ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ದೂರುದಾರ ವಕೀಲ, ರವಿಚಂದ್ರೇಗೌಡ ಎನ್.ಆರ್ ಎನ್ನುವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತನಿಖೆಗೆ ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮ ರದ್ದುಪಡಿಸಿದೆ. ರೋಹಿಣಿ ಸಿಂಧೂರಿಗೆ ಸಂಕಷ್ಟ ತಂದಿಟ್ಟ ಬಟ್ಟೆ ಬ್ಯಾಗ್ ಖರೀದಿ ಅಕ್ರಮ ಆರೋಪದ ಹಿನ್ನೆಲೆ ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಸರ್ಕಾರದ ಖಜಾನೆ ಖಾಲಿ ಮಾಡಿದ ಆರೋಪ
2021ರಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ, ಪ್ಲಾಸ್ಟಿಕ್ ಮುಕ್ತ ಅಭಿಯಾನದ ಭಾಗವಾಗಿ ಮೈಸೂರು ಮಹಾನಗರ ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ವಿತರಿಸಲು ಸುಮಾರು 14 ಕೋಟಿ 71 ಲಕ್ಷ ರೂ. ಮೌಲ್ಯದ ಬಟ್ಟೆ ಬ್ಯಾಗ್ಗಳನ್ನು ಖರೀದಿಸಲು ರೋಹಿಣಿ ಸಿಂಧೂರಿ ಅನುಮೋದನೆ ನೀಡಿದ್ದರು. ಮಾರುಕಟ್ಟೆಯಲ್ಲಿ ಒಂದು ಬ್ಯಾಗ್ನ ಬೆಲೆ ಸುಮಾರು 13 ರೂ. ಇದ್ದರೂ, ನಿಯಮಗಳನ್ನು ಮೀರಿ ಪ್ರತಿ ಬ್ಯಾಗ್ಗೆ 52 ರೂ.ನಂತೆ (ಜಿಎಸ್ಟಿ ಸೇರಿ) ಖರೀದಿಸಲಾಗಿದೆ ಎಂದು ಅವರ ಮೇಲೆ ಆರೋಪ ಮಾಡಲಾಗಿತ್ತು. ಈ ದುಬಾರಿ ಖರೀದಿಯಿಂದಾಗಿ ಸರ್ಕಾರದ ಖಜಾನೆಗೆ ಸುಮಾರು 5.88 ಕೋಟಿಯಿಂದ 7.65 ಕೋಟಿ ರೂ.ವರೆಗೆ ನಷ್ಟವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರವಿಚಂದ್ರ ಗೌಡ ದೂರು ದಾಖಲಿಸಿದ್ದರು.
ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ನೀಡಿದ್ದ ರಾಜ್ಯ ಸರ್ಕಾರ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (KTPP) ಕಾಯ್ದೆಯನ್ನು ಉಲ್ಲಂಘಿಸಿ ಈ ಖರೀದಿ ಮಾಡಲಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ (KHDC) ಮೂಲಕವೇ ಈ ಬ್ಯಾಗ್ಗಳನ್ನು ಪಡೆಯಲು ವಿನಾಯಿತಿ ನೀಡಲಾಗಿತ್ತು ಎಂದು ಮಾಜಿ ಶಾಸಕ ಸಾ.ರಾ. ಮಹೇಶ್ ಆರೋಪಿಸಿದ್ದರು. ಈ ಹಿಂದೆ ರಾಜ್ಯ ಸರ್ಕಾರವು ಇಲಾಖಾ ವಿಚಾರಣೆಯಲ್ಲಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ನೀಡಿ, ಕ್ರಿಮಿನಲ್ ತನಿಖೆಗೆ ಅನುಮತಿ ನಿರಾಕರಿಸಿತ್ತು.
ಆದರೆ ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿ, ಭ್ರಷ್ಟಾಚಾರ ಕ್ಯಾನ್ಸರ್, ಪ್ಲೇಗ್ ಇದ್ದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗೇ ಬಿಟ್ಟರೆ ಪ್ರಜಾಸತ್ತಾತ್ಮಕ ಅಂಗಗಳನ್ನು ಅಸ್ಥಿರಗೊಳಿಸುತ್ತದೆ. ಭ್ರಷ್ಟಾಚಾರದ ಆರೋಪವಿದ್ದಾಗ ತನಿಖೆ ನಡೆಯದೇ ಸತ್ಯ ಬಹಿರಂಗವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಬೆಂಗಳೂರು, ಏಪ್ರಿಲ್ 03: ಜಾತಿ ಗಣತಿ, ಪಾಠ, ಬಿಸಿಯೂಟ ಹೀಗೆ ನಾನಾ ಜವಾಬ್ದಾರಿಗಳು ಮತ್ತು ಹೊಣೆ ನಿಭಾಯಿಸಿ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರನ್ನು ಏಪ್ರಿಲ್ 16ರಿಂದ ಜನಗಣತಿ ಕಾರ್ಯಕ್ಕೂ ರಾಜ್ಯದಲ್ಲಿ ನಿಯೋಜನೆ ಮಾಡಲಾಗ್ತಿದೆ. ರಾಜ್ಯದಲ್ಲಿ 2027ರ ಜನಗಣತಿ ಕಾರ್ಯಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದು, ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಏಪ್ರಿಲ್ 1ರಿಂದ ಸ್ವಯಂ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದ್ದು, ಇದು ಏಪ್ರಿಲ್ 15ರವರೆಗೆ ಮುಂದುವರಿಯಲಿದೆ.
ಇನ್ನು ಈ ಹೆಚ್ಚುವರಿ ಹೊಣೆಗಾರಿಕೆಗೆ ಶಿಕ್ಷಕರಿಂದ ಅಸಮಾಧಾನ ವ್ಯಕ್ತವಾಗಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡಿರುವ ಶೈಕ್ಷಣಿಕ ಕೆಲಸಗಳ ಜೊತೆಗೆ ಜನಗಣತಿ ಕೆಲಸವೂ ಸೇರಿರುವುದರಿಂದ ರಜೆಗಳೇ ಇಲ್ಲದಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ. ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದ ತಕ್ಷಣ ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತಿದೆ. 2025ರಲ್ಲಿ ಸಮಾಜ-ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರನ್ನು ಬಳಸಿಕೊಂಡ ಕಾರಣ ದಸರಾ ರಜೆಯನ್ನು ವಿಸ್ತರಿಸಲಾಗಿತ್ತು. ಬಳಿಕ 2025-26 ಶೈಕ್ಷಣಿಕ ವರ್ಷದ ಪಾಠ್ಯಕ್ರಮ ಪೂರ್ಣಗೊಳಿಸಲು ಶಿಕ್ಷಕರು ಒತ್ತಡಕ್ಕೆ ಒಳಗಾಗಿದ್ದರು ಎಂಬುದನ್ನೂ ಈ ವೇಳೆ ನೆನಪಿದ್ದಾರೆ.
ಚಿಕ್ಕಬಳ್ಳಾಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ಹೇಳುವಂತೆ, ನಾವು ಈಗ ಎಸ್ಎಸ್ಎಲ್ಸಿ ಪರೀಕ್ಷಾ ಕರ್ತವ್ಯದಲ್ಲಿದ್ದೇವೆ. ಏಪ್ರಿಲ್ 2ರಂದು ಪರೀಕ್ಷೆಗಳು ಮುಗಿದಿದ್ದು, ಏಪ್ರಿಲ್ 7ರಿಂದ 12ರವರೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕು. ಏಪ್ರಿಲ್ 16ರಿಂದ ಜನಗಣತಿ ಕಾರ್ಯಕ್ಕೆ ತೆರಳಬೇಕು. ಬಿಸಿಲಿನ ನಡುವೆ ಬೆಳಗ್ಗೆ 6.30ರಿಂದ 11.30ರವರೆಗೆ, ಸಂಜೆ 4.30ರಿಂದ 8.30ರವರೆಗೆ ಕೆಲಸ ಮಾಡಬೇಕಾಗಿದೆ. ಮೇ ಮೊದಲ ವಾರದಿಂದ ಮತ್ತೆ ಎಸ್ಎಸ್ಎಲ್ಸಿ ಪರೀಕ್ಷಾ ಕರ್ತವ್ಯ ಶುರುವಾಗುತ್ತದೆ. ಕನಿಷ್ಠ ನಮ್ಮಂಥ ಪರೀಕ್ಷಾ ಮೌಲ್ಯಮಾಪಕರಿಗೆ ವಿನಾಯಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ನಡುವೆ 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚುತ್ತಿರುವ ತಾಪಮಾನವನ್ನು ಗಮನಿಸಿ ವಿಶೇಷ ತಿದ್ದುಪಡಿ ಪ್ರಕ್ರಿಯೆಯಿಂದ ವಿನಾಯಿತಿ ನೀಡುವಂತೆ ರಾಜಸ್ವ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ ತಿಳಿಸಿದ್ದಾರೆ. ಆದರೆ ನಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷಾ ಕರ್ತವ್ಯದಲ್ಲಿರುವ ಶಿಕ್ಷಕರಿಗೂ ಜನಗಣತಿ ಕೆಲಸದಿಂದ ವಿನಾಯಿತಿ ನೀಡುವಂತೆ ಕೇಳಿದ್ದೇದ್ದರೂ ಅದನ್ನೂ ಒಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಕರ ಮೇಲೆ ಹೆಚ್ಚುವರಿ ಭಾರ ಬೀಳುತ್ತಿರುವುದು ನಮಗೆ ತಿಳಿದಿದೆ. ಆದರೆ ಜನಗಣತಿಯಂತಹ ಮಹತ್ವದ ಡೇಟಾ ಸಂಗ್ರಹಣಾ ಕಾರ್ಯಗಳನ್ನು ಹೊರಗುತ್ತಿಗೆಗೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರನ್ನೇ ನಿಯೋಜಿಸಬೇಕಾಗಿದೆ ಎಂದಿದ್ದಾರೆ.
ಗಾಜಾ, ಏಪ್ರಿಲ್ 03: ಗಾಜಾ ಯುದ್ಧವು ಕೇವಲ ಪ್ರದೇಶದ ಮೇಲೆ ನಡೆದ ದಾಳಿಯಾಗಿರಲಿಲ್ಲ, ಮನಸ್ಸುಗಳ ಮನಸ್ಸುಗಳ ಮೇಲೆ ನಡೆದ ಯುದ್ಧವೂ ಆಗಿತ್ತು. ಯಾವಾಗ ಎಲ್ಲಿ ಏನಾಗುತ್ತೋ, ನಾಳೆ ನಾವು ಇರ್ತೀವೋ ಇಲ್ವೋ ಎನ್ನುವ ಆತಂಕದಲ್ಲೇ ಜನರು ದಿನದೂಡುವಂತಾಗಿತ್ತು. ಎಷ್ಟೋ ಜನ ಮನೆ ಕಳೆದುಕೊಂಡು ಮಕ್ಕಳು ಬೀದಿ ಪಾಲಾಗಿದ್ದರು. ಗಾಜಾದ ಶೆಲ್ಟರ್ನಲ್ಲಿರುವ ಐವರು ಮಕ್ಕಳ ಆಟ ನೋಡಿದಾಗ ಈ ಯುದ್ಧ ಅವರ ಅಂತರಾಳವನ್ನು ಎಷ್ಟು ಘಾಸಿಗೊಳಿಸಿರಬಹುದು ಎಂಬುದು ನಮ್ಮ ಅರಿವಿಗೆ ಬರುತ್ತದೆ. ಪುಟ್ಟ ಪುಟ್ಟ ಮಕ್ಕಳು ಗೊಂಬೆಯ ಶವಯಾತ್ರೆ ನಡೆಸಿದ್ದರು.
ಬೆಂಗಳೂರು (ಏ. 03): ಇತ್ತೀಚಿನ ದಿನಗಳಲ್ಲಿ, ಜನರು ಸ್ಮಾರ್ಟ್ಫೋನ್ಗಳನ್ನು (Smartphones) ಎಷ್ಟು ಬಳಸುತ್ತಾರೆಂದರೆ, ದಿನಕ್ಕೆ ಒಂದರಿಂದ ಎರಡು ಬಾರಿ ಅವುಗಳನ್ನು ಚಾರ್ಜ್ ಮಾಡಬೇಕಾಗುತ್ತದೆ. ಆದರೆ, ಕೆಲವರು ಫೋನ್ ಚಾರ್ಜರ್ ಅನ್ನು ಹೊರಹೋದಾಗ ತೆಗೆದುಕೊಂಡು ಹೋಗಲು ಮರೆತು ಬಿಡುತ್ತಾರೆ. ಒಂದುವೇಳೆ ಫೋನ್ ಚಾರ್ಜರ್ ಕಳೆದುಹೋದರೆ, ಹಾನಿಗೊಳಗಾದರೆ, ಅವರು ತಮ್ಮ ಲ್ಯಾಪ್ಟಾಪ್ ಚಾರ್ಜರ್ನಿಂದ ತಮ್ಮ ಫೋನ್ ಅನ್ನು ಚಾರ್ಜ್ ಮಾಡಬಹುದು ಎಂಬುದು ನಿಮಗೆ ಗೊತ್ತೆ. ಆದಾಗ್ಯೂ, ಇದು ಎಲ್ಲಾ ಫೋನ್ಗಳಿಗೆ ಸಪೋರ್ಟ್ ಮಾಡುವುದಿಲ್ಲ. ಹೆಚ್ಚಿನ ಫೋನ್ಗಳು ಲ್ಯಾಪ್ಟಾಪ್ ಚಾರ್ಜರ್ನೊಂದಿಗೆ ಸುಲಭವಾಗಿ ಚಾರ್ಜ್ ಆಗುತ್ತವೆ, ಆದರೆ ಕೆಲವು ವಿಷಯಗಳು ಅವಶ್ಯಕ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಲ್ಯಾಪ್ಟಾಪ್ಗಳು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿವೆ. ಆದಾಗ್ಯೂ, ಅನೇಕ ಲ್ಯಾಪ್ಟಾಪ್ಗಳು ಇನ್ನೂ ವೃತ್ತಾಕಾರದ ಚಾರ್ಜಿಂಗ್ ಪೋರ್ಟ್ನೊಂದಿಗೆ ಬರುತ್ತವೆ. ಆದ್ದರಿಂದ, ಮೊದಲು ನಿಮ್ಮ ಫೋನ್ನ ಚಾರ್ಜಿಂಗ್ ಪೋರ್ಟ್ ಅನ್ನು ಪರಿಶೀಲಿಸಿ. ನಿಮ್ಮ ಫೋನ್ ಮತ್ತು ಲ್ಯಾಪ್ಟಾಪ್ ಎರಡರಲ್ಲೂ ಟೈಪ್-ಸಿ ಪೋರ್ಟ್ ಇದ್ದರೆ, ನಿಮ್ಮ ಫೋನ್ ಚಾರ್ಜ್ ಆಗುತ್ತದೆ.
ಇತ್ತೀಚಿನ ದಿನಗಳಲ್ಲಿ, ಕಂಪನಿಗಳು 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಫೋನ್ಗಳನ್ನು ಬಿಡುಗಡೆ ಮಾಡುತ್ತವೆ. ಅನೇಕ ಸ್ಮಾರ್ಟ್ಫೋನ್ಗಳು 60W ಅಥವಾ 80W ಚಾರ್ಜಿಂಗ್ ಬೆಂಬಲವನ್ನು ಸಹ ನೀಡುತ್ತವೆ. ಮತ್ತೊಂದೆಡೆ, ಲ್ಯಾಪ್ಟಾಪ್ಗಳು 60W ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ, ಆದರೆ ಮ್ಯಾಕ್ಬುಕ್ ಚಾರ್ಜರ್ಗಳು 30W ಆಗಿರುತ್ತವೆ. ಆದ್ದರಿಂದ, ನೀವು ಕನಿಷ್ಠ 60W ಅನ್ನು ಬೆಂಬಲಿಸುವ ಲ್ಯಾಪ್ಟಾಪ್ ಚಾರ್ಜರ್ನೊಂದಿಗೆ ಸ್ಮಾರ್ಟ್ಫೋನ್ಗಳನ್ನು ಸುಲಭವಾಗಿ ಚಾರ್ಜ್ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ತುಂಬಾ ಸ್ಮಾರ್ಟ್ ಆಗಿದ್ದು ಅವು ತಮಗೆ ಅಗತ್ಯವಿರುವ ಶಕ್ತಿಯನ್ನು ಮಾತ್ರ ಬಳಸುತ್ತವೆ. ಆದ್ದರಿಂದ, ಕಡಿಮೆ ಚಾರ್ಜಿಂಗ್ ಪವರ್ ಹೊಂದಿರುವ ಫೋನ್ನಲ್ಲಿ ಹೆಚ್ಚಿನ ಶಕ್ತಿಯ ಚಾರ್ಜರ್ ಅನ್ನು ಬಳಸುವುದರಿಂದ ಅದಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.
ನಿಮ್ಮ ಫೋನ್ PD ಚಾರ್ಜಿಂಗ್ ಅನ್ನು ಬೆಂಬಲಿಸಿದರೆ, ಅದು ಪೂರ್ಣ ಸಾಮರ್ಥ್ಯದಲ್ಲಿ ಚಾರ್ಜ್ ಆಗುತ್ತದೆ. ಆದಾಗ್ಯೂ, ಒಪ್ಪೋ, ವಿವೋ ಅಥವಾ ರೆಡ್ಮಿ ನಂತಹ ಕಂಪನಿಗಳ ಫೋನ್ಗಳು SuperVOOC ನಂತಹ ತಮ್ಮದೇ ಆದ ನಿರ್ದಿಷ್ಟ ಚಾರ್ಜಿಂಗ್ ತಂತ್ರಜ್ಞಾನಗಳನ್ನು ಬೆಂಬಲಿಸುತ್ತವೆ. ಇದು ಲ್ಯಾಪ್ಟಾಪ್ ಚಾರ್ಜರ್ನೊಂದಿಗೆ ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅದು ಯಾವ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ ಎಂಬುದನ್ನು ನೋಡಲು ನಿಮ್ಮ ಫೋನ್ನ ಫೀಚರ್ಗಳನ್ನು ನೀವು ಪರಿಶೀಲಿಸಬಹುದು.
ಬೆಂಗಳೂರು (ಏ. 03): ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಶುರುವಾಗಿದ್ದರೆ ಅತ್ತ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ. ಐಪಿಎಲ್ನಲ್ಲಿ ಅವಕಾಶ ಸಿಗದ ಕೆಲ ವಿದೇಶಿ ಆಟಗಾರರು ಪಿಎಸ್ಎಲ್ನಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್ ಕೂಡ ಪಾಕಿಸ್ತಾನ ಸೂಪರ್ ಲೀಗ್ 2026 ರಲ್ಲಿ ಆಡುತ್ತಿದ್ದಾರೆ. ಏಪ್ರಿಲ್ 2 ರಂದು, ವಾರ್ನರ್ ನಾಯಕತ್ವದ ಕರಾಚಿ ಕಿಂಗ್ಸ್ ತಂಡ ರಾವಲ್ಪಿಂಡಿಜ್ ವಿರುದ್ಧ ಸೆಣಸಾಡಿತು. ಆದರೆ, ಪಂದ್ಯದ ನಂತರ ಒಂದು ವಿಚಿತ್ರ ಘಟನೆ ಸಂಭವಿಸಿದೆ. ವಾರ್ನರ್ ತನ್ನ ಕರಾಚಿ ಕಿಂಗ್ಸ್ ತಂಡದ ಸಹ ಆಟಗಾರ ಮೊಯಿನ್ ಅಲಿ ಜೊತೆ ಜಗಳವಾಡಿದ್ದಾರೆ. ಈ ವಾಗ್ವಾದದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪಿಎಸ್ಎಲ್ನಲ್ಲಿ ಡೇವಿಡ್ ವಾರ್ನರ್ ಮತ್ತು ಮೊಯಿನ್ ಅಲಿ ನಡುವೆ ಜಗಳ
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತು ಇಂಗ್ಲೆಂಡ್ನ ಮಾಜಿ ಆಲ್ರೌಂಡರ್ ಮೊಯಿನ್ ಅಲಿ ಇಬ್ಬರೂ ಪಾಕಿಸ್ತಾನ ಸೂಪರ್ ಲೀಗ್ 2026 ರಲ್ಲಿ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದಾರೆ. ಕಳೆದ ಬುಧವಾರ, ಪಿಎಸ್ಎಲ್ನ 10 ನೇ ಪಂದ್ಯ ಕರಾಚಿ ಮತ್ತು ರಾವಲ್ಪಿಂಡಿಜ್ ನಡುವೆ ನಡೆಯಿತು. ಪಂದ್ಯದ ನಂತರ, ವಾರ್ನರ್ ಮತ್ತು ಮೊಯಿನ್ ಅಲಿ ನಡುವೆ ಮಾತಿನ ಚಕಮಕಿ ನಡೆದಿದೆ. ವಾರ್ನರ್ ತುಂಬಾ ಕೋಪಗೊಂಡಂತೆ ಕಾಣಿಸಿಕೊಂಡರು ಮತ್ತು ಕೋಪದಲ್ಲಿ ಏನೋ ಜೋರಾಗಿ ಹೇಳುತ್ತಿದ್ದರು. ಬಳಿಕ ತಂಡದ ಸದಸ್ಯರೊಬ್ಬರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಣ್ಣನೆ ಮಾಡಿದರು.
ಡೇವಿಡ್ ವಾರ್ನರ್ ಮತ್ತು ಮೊಯಿನ್ ಅಲಿ ಜಗಳದ ವೀಡಿಯೊ:
BIG FIGHT BETWEEN MOEEN ALI & DAVID WARNER
– During the match session, a heated altercation broke out between Moeen Ali and David Warner, and they charged toward each other.
ಕರಾಚಿ ಕಿಂಗ್ಸ್ ತಂಡವು ಪಿಎಸ್ಎಲ್ 2026 ರಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದೆ. ಈ ಋತುವಿನಲ್ಲಿ ಅವರು ಆಡಿದ ಮೂರು ಪಂದ್ಯಗಳಲ್ಲಿಯೂ ಗೆದ್ದಿದ್ದಾರೆ. ಅವರು 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಕರಾಚಿ ಕಿಂಗ್ಸ್ ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾವಲ್ಪಿಂಡಿಜ್ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 197 ರನ್ ಗಳಿಸಿತು. ತಂಡದ ಪರ ಡ್ಯಾರಿಲ್ ಮಿಚೆಲ್ ಅತಿ ಹೆಚ್ಚು 65 ರನ್ ಗಳಿಸಿದರು. ಕರಾಚಿ ಪರ ಹಸನ್ ಅಲಿ ಗರಿಷ್ಠ ಮೂರು ವಿಕೆಟ್ಗಳನ್ನು ಪಡೆದರು. ಕರಾಚಿ ಕಿಂಗ್ಸ್ 19.2 ಓವರ್ಗಳಲ್ಲಿ 198 ರನ್ಗಳ ಗುರಿಯನ್ನು ಬೆನ್ನಟ್ಟಿತು. ಅಜಮ್ ಖಾನ್ 74 ರನ್ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ನಾಯಕ ಡೇವಿಡ್ ವಾರ್ನರ್ 50 ರನ್ ಗಳಿಸಿ ಔಟಾದರು. ಪಿಂಡಾಸಿ ಪರ ಡ್ಯಾರಿಲ್ ಮಿಚೆಲ್ ಗರಿಷ್ಠ 3 ವಿಕೆಟ್ಗಳನ್ನು ಪಡೆದರು.
ಬೆಂಗಳೂರು, ಏ.3: ಬೆಂಗಳೂರಿನ ಕೆ.ಆರ್ ಮಾರುಕಟ್ಟೆಗೆ (K.R. Market) ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ. ಇಲ್ಲಿ ಎಲ್ಲವೂ ಸಿಗುತ್ತದೆ. ಹಾಗೂ ಅತೀ ಕಡಿಮೆ ದರದಲ್ಲಿ ದೊರೆಯುತ್ತದೆ. ಈ ಕಾರಣಕ್ಕೆ ಇಲ್ಲಿ ಜನ ತುಂಬಿರುತ್ತಾರೆ. ಆದರೆ ಇಲ್ಲಿನ ಮೂಲಸೌಕರ್ಯದ ಬಗ್ಗೆ ಆಗ್ಗಾಗೆ ದೂರುಗಳು ಬರುತ್ತಿರುತ್ತದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಲವು ಬದಲಾವಣೆಗಳನ್ನು ತರಲಿದೆ. ಬೆಂಗಳೂರು ಕೇಂದ್ರ ನಗರ ನಿಗಮದ ವ್ಯಾಪ್ತಿಯಲ್ಲಿರುವ ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು, ನಗರದ ಕೆ.ಆರ್. ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಮತ್ತು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯವನ್ನು ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಬುಧವಾರ ನಿರ್ದೇಶನ ನೀಡಿದರು. ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದರು.
ತ್ಯಾಜ್ಯ ವಿಲೇವಾರಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಆಂತರಿಕ ರಸ್ತೆಗಳ ಕಾಂಕ್ರೀಟ್ ಅಳವಡಿಕೆ, ಹೂವಿನ ಮಾರುಕಟ್ಟೆಗೆ ಸರಿಯಾದ ಸಂಪರ್ಕವನ್ನು ಒದಗಿಸುವುದು ಮತ್ತು ಇತರ ಅಭಿವೃದ್ಧಿ ಕಾರ್ಯಗಳನ್ನು ಒಳಗೊಂಡ ವಿವರವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಆಯುಕ್ತರು ಹೇಳಿದ್ದಾರೆ. ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸ್ಪಷ್ಟ ಕಾಲಮಿತಿಯೊಂದಿಗೆ ಒಂದು ವಾರದೊಳಗೆ ವರದಿಯನ್ನು ಸಲ್ಲಿಸುವಂತೆ ರಾವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇನ್ನು ಕೆ.ಆರ್. ಮಾರುಕಟ್ಟೆಯಲ್ಲಿನ ಎಲ್ಲಾ ಅಗತ್ಯ ಸ್ಥಳಗಳನ್ನು ಸುರಕ್ಷತಾ ದೃಷ್ಟಿಕೋನದಿಂದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ಮೌಲ್ಯಮಾಪನ ಮಾಡಬೇಕು ಮತ್ತು ತಕ್ಷಣವೇ ವರದಿಯನ್ನು ಸಲ್ಲಿಸಬೇಕು ಮತ್ತು ನಂತರ ಕ್ಯಾಮೆರಾಗಳನ್ನು ಅಳವಡಿಸಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.ಇದಲ್ಲದೆ, ಮಾರುಕಟ್ಟೆಯಲ್ಲಿನ ಆಂತರಿಕ ರಸ್ತೆಗಳು ಕಳಪೆ ಸ್ಥಿತಿಯಲ್ಲಿವೆ ಎಂದು ರಾವ್ ಗಮನಕ್ಕೆ ತಂದರು ಮತ್ತು ಅವುಗಳನ್ನು ದುರಸ್ತಿ ಮಾಡಿ ಕಾಂಕ್ರೀಟ್ ಪದರ ಹಾಕಬೇಕು ಎಂದು ಹೇಳಿದರು. ಕೆ.ಆರ್. ಮಾರುಕಟ್ಟೆ ಜಂಕ್ಷನ್ನಲ್ಲಿ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿದ್ದು, ಸೇವಾ ರಸ್ತೆಯನ್ನು ಕಾಂಕ್ರೀಟ್ನಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದಾರೆ. ಫ್ಲೈಓವರ್ನಿಂದ ರ್ಯಾಂಪ್ ಕೆಳಗೆ ಸುಗಮ ವಾಹನ ಸಂಚಾರಕ್ಕೆ ಸಾಧ್ಯವಾದಷ್ಟು ಬೇಗ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದರ ಜತೆಗೆ ಬೆಂಗಳೂರಿನವರುಬನ್ನೇರುಘಟ್ಟ ರಸ್ತೆಮೆಟ್ರೋ ನಿರ್ಮಾಣ, ಕಳಪೆ ದುರಸ್ತಿ, ಧೂಳು ಮತ್ತು ಸಂಚಾರ ದಟ್ಟಣೆಯಿಂದಾಗಿ ತೀವ್ರ ಅಡಚಣೆಗಳನ್ನು ಎದುರಿಸುತ್ತಿದೆ, ಇದು ತುರ್ತು ಮೂಲಸೌಕರ್ಯ ಅಂತರಗಳು, ಸುರಕ್ಷತಾ ಅಪಾಯಗಳು ಮತ್ತು ದೈನಂದಿನ ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ಹಣಕಾಸಿನ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಬೆಂಗಳೂರಿನಲ್ಲಿ ಮುಂಬರುವ ಮೆಟ್ರೋ ವಿಸ್ತರಣೆಯು ಸುಗಮ ಸಂಪರ್ಕ ಮತ್ತು ಉತ್ತಮ ನಗರ ವೀಕ್ಷಣೆಗಳ ಭವಿಷ್ಯವನ್ನು ಭರವಸೆ ನೀಡುತ್ತದೆ. ಆದಾಗ್ಯೂ, ನಿವಾಸಿಗಳಿಗೆ ಪ್ರಸ್ತುತ ವಾಸ್ತವವು ತುಂಬಾ ಭಿನ್ನವಾಗಿದೆ, ಭಾರೀ ಧೂಳು, ಹಾನಿಗೊಳಗಾದ ರಸ್ತೆಗಳು ಮತ್ತು ನಡೆಯುತ್ತಿರುವ ನಿರ್ಮಾಣ ಕಾರ್ಯಗಳು ದೈನಂದಿನ ಪ್ರಯಾಣಕ್ಕೆ ಅಡ್ಡಿಪಡಿಸುತ್ತವೆ. ಜಯದೇವ ಆಸ್ಪತ್ರೆಯಿಂದ ರಾಯಲ್ ಮೀನಾಕ್ಷಿ ಮಾಲ್ವರೆಗಿನ 6.3 ಕಿ.ಮೀ. ಉದ್ದದ ರಸ್ತೆ ಪ್ರಯಾಣಿಕರ ಕೆಟ್ಟ ಸಂಚಾರ ಅನುಭವವನ್ನು ಪಡೆಯುತ್ತಿದ್ದಾರೆ. ಪದೇ ಪದೇ ರಸ್ತೆ ಅಗೆಯುವುದು ಮತ್ತು ಕಳಪೆ ದುರಸ್ತಿ ಕೆಲಸವು ರಸ್ತೆಯನ್ನು ಅಸಮ, ಹಾನಿಗೊಳಗಾದ ಮತ್ತು ಅಸುರಕ್ಷಿತವಾಗಿಸಿದೆ. ಈ ಪ್ರಮುಖ ರಸ್ತೆಯಲ್ಲಿ ಪ್ರಯಾಣಿಸುವುದು ಎಲ್ಲಾ ವಾಹನಗಳಿಗೆ ಕಷ್ಟಕರವಾಗಿದೆ.