ದೇಶದ ಆಹಾರ ಭದ್ರತಾ ವ್ಯವಸ್ಥೆ ಬಲಪಡಿಸಲು ದಿಟ್ಟ ನಿರ್ಧಾರ: ಗುಣಮಟ್ಟದ ಅಕ್ಕಿ ಪೂರೈಕೆಗೆ ಕೇಂದ್ರ ಅನುಮೋದನೆ – Kannada News | Modi Government approves supply of improved quality rice under PMGKAY; over 80 crore beneficiaries to receive better quality rice

ನವದೆಹಲಿ, (ಜುಲೈ 02): ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಪೂರೈಕೆಯಾಗುವ ಅಕ್ಕಿಯ ಗುಣಮಟ್ಟವನ್ನು ಸುಧಾರಿಸುವ ಐತಿಹಾಸಿಕ ಸುಧಾರಣಾ ಕ್ರಮಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಅನುಮೋದನೆ ನೀಡಿದೆ. ಸರಿಸುಮಾರು ಮೂರು ದಶಕಗಳಲ್ಲಿ ಮೊದಲ ಬಾರಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (PDS) ಪೂರೈಸಲಾಗುವ ಅಕ್ಕಿಯ ಗುಣಮಟ್ಟದ ಮಾನದಂಡಗಳನ್ನು ಸರ್ಕಾರವು ಪರಿಷ್ಕರಿಸಿದೆ. ಇದರಿಂದ ಫಲಾನುಭವಿಗಳು ಪ್ರಸ್ತುತ ಪಡೆಯುತ್ತಿರುವ ಪಾಲಿನಲ್ಲಿ ಯಾವುದೇ ಕಡಿತವಿಲ್ಲದೆ, ಗಮನಾರ್ಹವಾಗಿ ಕಡಿಮೆ ನುಚ್ಚು ಇರುವ ಅಕ್ಕಿಯನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ.

ಅನುಮೋದಿತ ನೀತಿಯ ಅನ್ವಯ

ಪಿ.ಎಂ.ಜಿ.ಕೆ.ಎ.ವೈ ಅಡಿಯಲ್ಲಿ ಪೂರೈಸಲಾಗುವ ಹಸಿ ಅಕ್ಕಿಯಲ್ಲಿ (Raw rice) ಗರಿಷ್ಠ 10% ನುಚ್ಚು ಇರಲಿದೆ. ಇದು ಈ ಹಿಂದಿನ ಗರಿಷ್ಠ 25% ಮಾನದಂಡವನ್ನು ಬದಲಾಯಿಸುತ್ತದೆ. ಕುಸುಬಲಕ್ಕಿಯಲ್ಲಿ (Parboiled rice) ಗರಿಷ್ಠ 5% ನುಚ್ಚು ಇರಲಿದೆ. ಇದು ಈ ಹಿಂದಿನ ಗರಿಷ್ಠ 16% ಮಾನದಂಡವನ್ನು ಬದಲಾಯಿಸುತ್ತದೆ. ಸುಧಾರಿತ ಗುಣಮಟ್ಟದ ಅಕ್ಕಿಯ ಖರೀದಿಯು ತಕ್ಷಣವೇ ಪ್ರಾರಂಭವಾಗಲಿದ್ದು, 2027–28ರ ಖಾರಿಫ್ ಮಾರುಕಟ್ಟೆ ಋತುವಿನ (KMS) ವೇಳೆಗೆ ಅಕ್ಕಿ ಖರೀದಿಸುವ ಎಲ್ಲಾ ರಾಜ್ಯಗಳಲ್ಲಿ ಇದನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು.

ಇದನ್ನೂ ಓದಿ: ವಿಬಿ-ಜಿ-ರಾಮ್​​ ಜಿ ಜಾರಿ: 125 ದಿನ ಕೆಲಸದ ಗ್ಯಾರಂಟಿ ಜೊತೆ ವೇತನ ಹೆಚ್ಚಳ, ಕರ್ನಾಟಕದಲ್ಲಿ ಎಷ್ಟು?

ಪಿ.ಎಂ.ಜಿ.ಕೆ.ಎ.ವೈ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸುಧಾರಿತ ಗುಣಮಟ್ಟದ ಅಕ್ಕಿಯ ವಿತರಣೆಯನ್ನು ಸಹ ಹಂತಹಂತವಾಗಿ ಕೈಗೊಳ್ಳಲಾಗುವುದು. ಇದು ಎಲ್ಲಾ ರಾಜ್ಯಗಳಲ್ಲಿ ಪರಿಷ್ಕೃತ ಮಾನದಂಡಗಳಿಗೆ ಸುಗಮವಾಗಿ ಬದಲಾಗುವುದನ್ನು ಖಚಿತಪಡಿಸುತ್ತದೆ.

ಫಲಾನುಭವಿಗಳಿಗೆ ಉತ್ತಮ ಗುಣಮಟ್ಟ

ಈ ನಿರ್ಧಾರವು ಕೇವಲ ಆಹಾರ ಭದ್ರತೆಯನ್ನು ಖಚಿತಪಡಿಸುವುದಲ್ಲದೆ, PMGKAY ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪೂರೈಸಲಾಗುವ ಆಹಾರ ಧಾನ್ಯಗಳ ಗುಣಮಟ್ಟವನ್ನು ಸುಧಾರಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಫಲಾನುಭವಿಗಳು ತಮ್ಮ ಪಾಲಿನಲ್ಲಿ ಯಾವುದೇ ಕಡಿತವಿಲ್ಲದೆ ಅತ್ಯುತ್ತಮ ಗುಣಮಟ್ಟದ ಕಾಳುಗಳು, ಸುಧಾರಿತ ನೋಟ ಮತ್ತು ಗ್ರಾಹಕರಿಗೆ ಹೆಚ್ಚು ಇಷ್ಟವಾಗುವಂತಹ ಅಕ್ಕಿಯನ್ನು ಪಡೆಯಲಿದ್ದಾರೆ.

ನುಚ್ಚಕ್ಕಿಯ ಉತ್ಪಾದಕ ಬಳಕೆ

ಪರಿಷ್ಕೃತ ಮಾನದಂಡಗಳ ಅಡಿಯಲ್ಲಿ, ಅಕ್ಕಿ ಗಿರಣಿ ಪ್ರಕ್ರಿಯೆಯಲ್ಲಿ (ಮಿಲ್ಲಿಂಗ್) ಉತ್ಪತ್ತಿಯಾಗುವ ನುಚ್ಚಕ್ಕಿಯನ್ನು ಪ್ರತ್ಯೇಕಿಸಲಾಗುವುದು ಮತ್ತು ಇತರ ಉದ್ದೇಶಗಳಿಗಾಗಿ ಉತ್ಪಾದಕವಾಗಿ ಬಳಸಿಕೊಳ್ಳಲಾಗುವುದು. ಇದು PMGKAY ಅಡಿಯಲ್ಲಿ ಫಲಾನುಭವಿಗಳಿಗೆ ಅತ್ಯುತ್ತಮ ಗುಣಮಟ್ಟದ, ಸೇವನೆಗೆ ಯೋಗ್ಯವಾದ ಅಕ್ಕಿ ತಲುಪುವುದನ್ನು ಖಚಿತಪಡಿಸುತ್ತದೆ.

ಆರ್ಥಿಕ ಮತ್ತು ಕಾರ್ಯಾಚರಣೆಯ ಲಾಭಗಳು

ನುಚ್ಚು ಅಕ್ಕಿಯನ್ನು ನೇರವಾಗಿ ಗಿರಣಿದಾರರ (ಮಿಲ್) ಆವರಣದಿಂದಲೇ ಹರಾಜು ಮಾಡಲಾಗುವುದರಿಂದ, ಈ ಸುಧಾರಣಾ ಕ್ರಮವು ಸಾರಿಗೆ, ಸಂಗ್ರಹಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಗಣನೀಯವಾಗಿ ಕಡಿತಗೊಳಿಸಲು ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ನುಚ್ಚು ಅಕ್ಕಿಯನ್ನು ಎಚ್ ಡಿ ಪಿ ಇ (HDPE) ಚೀಲಗಳಲ್ಲಿ ಶೇಖರಿಸಿಡಲಾಗುವುದರಿಂದ, ಸೆಣಬಿನ ಚೀಲಗಳ ಅಗತ್ಯತೆಯೂ ಕಡಿಮೆಯಾಗಲಿದೆ. ಇದರಿಂದಾಗಿ ಸರಕು ಸಾಗಣೆ, ಸಂಗ್ರಹಣೆ ಮತ್ತು ಪ್ಯಾಕೇಜಿಂಗ್ ವೆಚ್ಚಗಳು ಕಡಿಮೆಯಾಗಿ ವಾರ್ಷಿಕವಾಗಿ 2,161 ಕೋಟಿ ರೂಪಾಯಿಗಳಷ್ಟು ವೆಚ್ಚ ಉಳಿತಾಯವಾಗುವ ನಿರೀಕ್ಷೆಯಿದೆ. ಇದರ ಜೊತೆಗೆ, ನುಚ್ಚು ಅಕ್ಕಿಯ ಮಾರಾಟದಿಂದ ಹೆಚ್ಚುವರಿ ಆದಾಯವು ಸೃಷ್ಟಿಯಾಗಲಿದ್ದು, ಇದು ಸರ್ಕಾರದ ಮೇಲಿರುವ ಆಹಾರ ಸಬ್ಸಿಡಿಯ ಹೊರೆಯನ್ನು ಮತ್ತಷ್ಟು ತಗ್ಗಿಸಲು ನೆರವಾಗಲಿದೆ.

ಪ್ರಾಯೋಗಿಕ ಅನುಷ್ಠಾನ

ಹರಿಯಾಣ, ಆಂಧ್ರಪ್ರದೇಶ, ಪಂಜಾಬ್, ಒರಿಸ್ಸಾ, ತೆಲಂಗಾಣ ಮತ್ತು ಛತ್ತೀಸ್ ಗಢದಂತಹ ವಿವಿಧ ರಾಜ್ಯಗಳಲ್ಲಿ ಪ್ರಾಯೋಗಿಕ ಅನುಷ್ಠಾನದ ಮೂಲಕ ಈ ಪ್ರಸ್ತಾವನೆಯನ್ನು ಈಗಾಗಲೇ ಯಶಸ್ವಿಯಾಗಿ ಪರೀಕ್ಷಿಸಿ ದೃಢಪಡಿಸಲಾಗಿದೆ. ಬೃಹತ್ ಪ್ರಮಾಣದಲ್ಲಿ ಸುಧಾರಿತ-ಗುಣಮಟ್ಟದ ಅಕ್ಕಿಯನ್ನು ಉತ್ಪಾದಿಸುವ ಕಾರ್ಯಾಚರಣೆಯ ಕಾರ್ಯಸಾಧ್ಯತೆಯನ್ನು ಈ ಪ್ರಾಯೋಗಿಕ ಯೋಜನೆಯು ಸಾಬೀತುಪಡಿಸಿದೆ. ಸಚಿವ ಸಂಪುಟದ ಅನುಮೋದನೆಯ ನಂತರ, ಈ ಪ್ರಾಯೋಗಿಕ ಯೋಜನೆಯಡಿ ಉತ್ಪಾದಿಸಲಾದ ಸುಧಾರಿತ-ಗುಣಮಟ್ಟದ ಅಕ್ಕಿಯನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೂ ಪೂರೈಸಲಾಗುವುದು.

ಪಾರದರ್ಶಕತೆಯನ್ನು ಬಲಪಡಿಸುವುದು

ಪೂರೈಕೆ ಸರಪಳಿಯಾದ್ಯಂತ ಅಕ್ಕಿ ಎಲ್ಲಿಂದ ಎಲ್ಲಿಗೆ ಸರಬರಾಜು ಆಗುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಪತ್ತೆಹಚ್ಚಲು, ಅಕ್ಕಿ ಚೀಲಗಳಿಗೆ ಕ್ಯೂಆರ್-ಕೋಡ್ (QR-code) ಅಳವಡಿಸುವ ಉದ್ದೇಶವನ್ನು ಸಹ ಈ ಸುಧಾರಣಾ ಕ್ರಮವು ಹೊಂದಿದೆ. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಾಸ್ತಾನು ನಿರ್ವಹಣೆಯನ್ನು ಬಲಪಡಿಸುತ್ತದೆ ಹಾಗೂ ಯಾವುದೇ ರೀತಿಯ ಸೋರಿಕೆಯಾಗದಂತೆ ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ.

ಸರ್ಕಾರವು ಪ್ರತಿಯೊಂದು ಅರ್ಹ ಕುಟುಂಬಕ್ಕೂ ಆಹಾರ ಭದ್ರತೆಯನ್ನು ಒದಗಿಸುವುದನ್ನು ಖಚಿತಪಡಿಸಿದೆ. ಸುಧಾರಿತ ಗುಣಮಟ್ಟದೊಂದಿಗೆ ಆಹಾರ ಭದ್ರತೆಯನ್ನು ಸಾಧಿಸುವುದು ಇದರ ಮುಂದಿನ ಹೆಜ್ಜೆಯಾಗಿದೆ. ಈ ಐತಿಹಾಸಿಕ ನಿರ್ಧಾರವು ಬಡ ಕುಟುಂಬಗಳಿಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಘನತೆಯಿಂದ ಒದಗಿಸುವುದನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ, ಆಹಾರ ಧಾನ್ಯ ನಿರ್ವಹಣೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತನ್ನು ಇದು ಸುಧಾರಿಸಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:36 pm, Thu, 2 July 26

Source link

ಒಂದೇ ವರ್ಷದಲ್ಲಿ 10 ಕೋಟಿ ರೂ ಟ್ರಾಫಿಕ್ ಫೈನ್: ವಸೂಲಾಗಿದ್ದು 1 ಕೋಟಿ ರೂ. ಮಾತ್ರ – Kannada News | 10 Crore in Traffic Fines Issued in a Year, But Only 1 Crore Recovered

ಬಾಗಲಕೋಟೆ, ಜುಲೈ 02: ಬಾಗಲಕೋಟೆ (bagalkot) ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಡಿಜಿಟಲ್ ಸಮರ ಸಾರಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಒಂದೇ ವರ್ಷದಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗೂ ಅಧಿಕ ದಂಡ (Fine) ವಿಧಿಸುವ ಮೂಲಕ ದಾಖಲೆ ಬರೆದಿದ್ದಾರೆ. 2 ಲಕ್ಷಕ್ಕೂ ಅಧಿಕ ಕೇಸ್​​ ದಾಖಲಾಗಿದ್ದು, ಸದ್ಯ ಒಂದೂವರೆ ಕೋಟಿ ರೂ ವಸೂಲಿ ಮಾಡಲಾಗಿದೆ.

10 ಕೋಟಿ 22 ಲಕ್ಷ 97 ಸಾವಿರ ರೂ ಟ್ರಾಫಿಕ್ ಫೈನ್​

ಬಾಗಲಕೋಟೆ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ ಸಮರ ಸಾರಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಜೂನ್ 2025ರಿಂದ ಜುಲೈ 2026ರವರೆಗೆ ಬಾಗಲಕೋಟೆ ಪೊಲೀಸರು ವಿಧಿಸಿದ ದಂಡ ದಾಖಲೆಯ 10 ಕೋಟಿ 22 ಲಕ್ಷ 97 ಸಾವಿರ ರೂಪಾಯಿ. 2025 ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಐಟಿಎಂಎಸ್ ​ಯೋಜನೆ ಸಂಚಾರ ನಿಯಮ ಉಲ್ಲಂಘಿಸುವವರ ಪಾಲಿಗೆ ಸಿಂಹಸ್ವಪ್ನವಾಗಿದೆ.

ಇದನ್ನೂ ಓದಿ: ಚಾಕು ತೋರಿಸಿ ಬಂಗಾಳ ಕಾರ್ಮಿಕರ ದರೋಡೆ: ಮೊಬೈಲ್, ನಗದು ದೋಚಿದ ದುಷ್ಕರ್ಮಿಗಳು

ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ, ಗದ್ದನಕೇರಿ ಕ್ರಾಸ್ ಸೇರಿದಂತೆ ನಗರದಾದ್ಯಂತ ಎಐ ಸಾಫ್ಟ್‌ವೇರ್ ಒಳಗೊಂಡ 22 ವಿಶೇಷ ಎಎನ್‌ಪಿಆರ್ (Automatic Number Plate Recognition) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ಟ್ರಿಪಲ್ ರೈಡಿಂಗ್ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ವಿಶೇಷ ಕಂಟ್ರೋಲ್ ರೂಂ ಮೂಲಕ ಸಿಬ್ಬಂದಿ 24×7 ನಿಗಾ ಇಟ್ಟಿದ್ದಾರೆ.

1 ವರ್ಷದ ಲೆಕ್ಕಾಚಾರ ಹೀಗಿದೆ 

  • ಒಟ್ಟು ದಾಖಲಾದ ಕೇಸ್‌ಗಳು: 2,11,074
  • ವಿಧಿಸಲಾದ ಒಟ್ಟು ದಂಡದ ಮೊತ್ತ: 10 ಕೋಟಿ 22 ಲಕ್ಷ 97 ಸಾವಿರ ರೂ.
  • ಸದ್ಯ ವಸೂಲಿಯಾದ ದಂಡ: 1 ಕೋಟಿ 72 ಲಕ್ಷ 60 ಸಾವಿರದ 350 ರೂ.
  • ದಂಡ ಪಾವತಿಸಿದ ಕೇಸ್‌ಗಳ ಸಂಖ್ಯೆ: 48,500

ಇನ್ನು ಈ ಹೈಟೆಕ್ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ನಗರದಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಂಡಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ಬ್ರೇಕ್ ಬಿದ್ದಿದೆ. ಇದರ ಪರಿಣಾಮವಾಗಿ ನಗರದಲ್ಲಿ ಸಂಭವಿಸುತ್ತಿದ್ದ ಅಪಘಾತ ಸಾವು ಹಾಗೂ ಅಪರಾಧಗಳ ಸಂಖ್ಯೆ ಶೇಕಡಾ 20 ರಷ್ಟು ಇಳಿಕೆಯಾಗಿದೆ. ಪೊಲೀಸರ ಈ ಹೈಟೆಕ್ ಕಣ್ಗಾವಲಿಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಒಂದು ಕೋಟಿ 70 ಲಕ್ಷ ರೂ ದಂಡ ವಸೂಲಿ ಬಾಕಿ

ಹತ್ತು ಕೋಟಿ ರೂ ದಂಡದಲ್ಲಿ ಒಂದು ಕೋಟಿ 70 ಲಕ್ಷ ರೂ ಮಾತ್ರ ವಸೂಲಿ ಆಗಿದೆ. ಬಾಕಿ ಹಣ ಬೇಗ ವಸೂಲಿ ಮಾಡಬೇಕು. ಜೊತೆಗೆ ಟ್ರಾಫಿಕ್ ಉಲ್ಲಂಘನೆ ಅಂತ ಅಮಾಯಕರು, ರೈತರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಅದು ನಿಲ್ಲಬೇಕು. ಟ್ರಾಫಿಕ್ ಪೊಲೀಸರಿಂದ ಹಣ ವಸೂಲಿ ಬಗ್ಗೆ ಪೊಲೀಸ್‌ ಮೇಲಾಧಿಕಾರಿಗಳು ನಿಗಾ ಇಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯ ವೈದ್ಯರ ಕಳ್ಳಾಟಕ್ಕೆ ಬ್ರೇಕ್: ಇನ್ಮುಂದೆ ಸಿಬ್ಬಂದಿ ಹಾಜರತಿಗೆ ವೇತನ ಲಿಂಕ್!

ಹದ್ದಿನ ಕಣ್ಣಿಡುವ ಮೂಲಕ ನಿಯಮ ಉಲ್ಲಂಘನೆ ತಡೆದಿರುವ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇದರಿಂದ ಅಪಘಾತ, ಅಪರಾಧ ಎರಡೂ ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ 10 ಕೋಟಿ ರೂ ದಂಡ ವಿಧಿಸಿ ಕೇವಲ ಒಂದೂವರೆ ಕೋಟಿ ವಸೂಲಿ ಮಾಡಿರುವುದು ಪ್ರಶ್ನಾರ್ಹ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಲಿಷ್ಠ ಆರ್ಥಿಕ ಸೂಚಕಗಳು: ಭಾರತದ ಬೆಳವಣಿಗೆಯ ಹಾದಿ ಇನ್ನಷ್ಟು ಸುದೃಢ – Kannada News | Strong Economic Indicators Reinforce India’s Growth Story

ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಹಾಗೂ ಸವಾಲುಗಳಿದ್ದಾಗ್ಯೂ, ಭಾರತದ ಆರ್ಥಿಕತೆಯು (Indian Economy) ಅತ್ಯಂತ ಸ್ಥಿರ ಹಾಗೂ ಬಲಿಷ್ಠವಾಗಿ ಮುನ್ನಡೆಯುತ್ತಿರುವುದನ್ನು ಸರ್ಕಾರದ ಇತ್ತೀಚಿನ ಆರ್ಥಿಕ ಸೂಚಕಗಳು ಪುನರುಚ್ಚರಿಸಿವೆ. ಬಲಿಷ್ಠ ಜಿಡಿಪಿ (GDP) ಪ್ರಗತಿ, ಉತ್ಪಾದನಾ ಮತ್ತು ಸೇವಾ ವಲಯಗಳ ವಿಸ್ತರಣೆ, ದಾಖಲೆ ಮಟ್ಟದ ವಾಹನ ಮಾರಾಟ, ಜಿಎಸ್‌ಟಿ (GST) ಸಂಗ್ರಹದಲ್ಲಿನ ಏರಿಕೆ ಹಾಗೂ ಸ್ಥಿರ ರಫ್ತು ಪ್ರಮಾಣಗಳು ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಹೂಡಿಕೆ ಅತ್ಯಂತ ಸದೃಢವಾಗಿದೆ ಎಂಬುದನ್ನು ಸಾಬೀತುಪಡಿಸಿವೆ. ಜೂನ್ 2026 ರಲ್ಲಿ ಕಂಡುಬಂದಿರುವ ಭಾರತದ ಆರ್ಥಿಕ ಪ್ರಗತಿಯ ಪ್ರಮುಖ ಮುಖ್ಯಾಂಶಗಳು ಈ ಕೆಳಕಂಡಂತಿವೆ:

ಜಿಡಿಪಿ (GDP) ಪ್ರಗತಿಯ ಮುನ್ನಡೆ

ಹಣಕಾಸು ವರ್ಷ 2025-26 ರಲ್ಲಿ ಭಾರತದ ಆರ್ಥಿಕತೆಯು ಶೇ. 7.7 ರಷ್ಟು ಜಿಡಿಪಿ ಪ್ರಗತಿ ಸಾಧಿಸುವ ಮೂಲಕ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಭರ್ಜರಿ ಜಿಗಿತ ಕಂಡಿದೆ. ಈ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ (Q4) ನೈಜ ಜಿಡಿಪಿ ಪ್ರಗತಿಯು ಶೇ. 7.8 ಕ್ಕೆ ಏರಿದೆ (ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ. 7.0 ರಷ್ಟಿತ್ತು). ಉತ್ಪಾದನೆ, ಸೇವೆಗಳು, ಬಳಕೆ ಮತ್ತು ಹೂಡಿಕೆ ವಲಯಗಳ ಅತ್ಯುತ್ತಮ ಪ್ರದರ್ಶನವೇ ಇದಕ್ಕೆ ಪ್ರಮುಖ ಕಾರಣ.

ಉತ್ಪಾದನಾ ಮತ್ತು ಸೇವಾ ವಲಯಗಳ ವಿಸ್ತರಣೆ

ಜೂನ್ 2026 ರಲ್ಲಿ ‘ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪಿಎಂಐ’ (Manufacturing PMI) ಸೂಚ್ಯಂಕವು 54.2 ರಷ್ಟಿದೆ. ಇದು ಸತತ 37ನೇ ತಿಂಗಳೂ ಸಹ 50 ಅಂಕಗಳ ಮಿತಿಗಿಂತ ಮೇಲಿ ಉಳಿಯುವ ಮೂಲಕ ಉತ್ಪಾದನಾ ವಲಯದ ನಿರಂತರ ಬೆಳವಣಿಗೆಯನ್ನು ತೋರಿಸುತ್ತದೆ. ಉತ್ಪನ್ನಗಳ ಉತ್ಪಾದನೆ, ಹೊಸ ಆರ್ಡರ್‌ಗಳು ಮತ್ತು ಉದ್ಯೋಗ ಸೃಷ್ಟಿ ಇಲ್ಲಿ ಸಕಾರಾತ್ಮಕವಾಗಿದೆ.

ಮೇ 2026 ರಲ್ಲಿ ಸೇವಾ ವಲಯದ ಬಿಸಿನೆಸ್ ಆಕ್ಟಿವಿಟಿ ಸೂಚ್ಯಂಕವು (Services PMI) 59.8 ಕ್ಕೆ ಏರಿದೆ (ಏಪ್ರಿಲ್‌ನಲ್ಲಿ ಇದು 58.8 ಇತ್ತು). ಆರೋಗ್ಯಕರ ಮಾರುಕಟ್ಟೆ ಸ್ಥಿತಿ, ಹೊಸ ಗ್ರಾಹಕರ ಸೇರ್ಪಡೆ ಮತ್ತು ರಫ್ತು ಬೇಡಿಕೆಯಲ್ಲಿನ ಚೇತರಿಕೆಯಿಂದಾಗಿ ಕಳೆದ ಆರು ತಿಂಗಳಲ್ಲೇ ಇದು ಅತ್ಯಂತ ಗರಿಷ್ಠ ಪ್ರಗತಿಯಾಗಿದೆ.

ಇದನ್ನೂ ಓದಿ: ತೈಲ ಬೆಲೆ ಇಳಿದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಯಾಕೆ? ಕಾರಣ ಬಿಚ್ಚಿಟ್ಟ ಸಚಿವ ಹರ್ದೀಪ್

ಕೈಗಾರಿಕಾ ಉತ್ಪಾದನೆಯಲ್ಲಿ ಹೊಸ ಚೈತನ್ಯ

ಭಾರತದ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (IIP) ಮೇ 2026 ರಲ್ಲಿ ಐದು ತಿಂಗಳ ಗರಿಷ್ಠ ಮಟ್ಟವಾದ ಶೇ. 5.1 ಕ್ಕೆ ತಲುಪಿದೆ. ಉತ್ಪಾದನಾ ವಲಯದಲ್ಲಿ ಶೇ. 5.5 ಮತ್ತು ವಿದ್ಯುತ್ ಹಾಗೂ ಗ್ಯಾಸ್ ಪೂರೈಕೆಯಲ್ಲಿ ಶೇ. 9.9 ರಷ್ಟು ಪ್ರಗತಿಯಾಗಿದೆ.

ಇವುಗಳ ಪೈಕಿ ಮೋಟಾರು ವಾಹನಗಳ ಉತ್ಪಾದನೆ (ಶೇ. 14.5) ಮತ್ತು ಎಲೆಕ್ಟ್ರಿಕಲ್ ಉಪಕರಣಗಳ ತಯಾರಿ (ಶೇ. 20.8) ಪ್ರಮುಖ ಬೆಳವಣಿಗೆಯ ಇಂಜಿನ್‌ಗಳಾಗಿ ಮೂಡಿಬಂದಿವೆ.

ಕ್ಯಾಪಿಟಲ್ ಗೂಡ್ಸ್ (ಬಂಡವಾಳ ಸರಕುಗಳ) ಉತ್ಪಾದನೆಯು ಶೇ. 12.9 ರಷ್ಟು ಬೆಳೆದಿದ್ದು, ದೇಶದಲ್ಲಿ ಕೈಗಾರಿಕಾ ಸಾಮರ್ಥ್ಯ ವಿಸ್ತರಣೆ ಹಾಗೂ ಹೂಡಿಕೆ ನಿರಂತರವಾಗಿರುವುದನ್ನು ಇದು ತೋರಿಸುತ್ತದೆ.

ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಬಂಡವಾಳ ಹೂಡಿಕೆ

ಹಣಕಾಸು ವರ್ಷ 2026-27 ರ ಆರಂಭದಲ್ಲೇ ಸರ್ಕಾರವು ಮೂಲಸೌಕರ್ಯ ವೆಚ್ಚಗಳಿಗೆ ಆದ್ಯತೆ ನೀಡಿದೆ. ಏಪ್ರಿಲ್-ಮೇ 2026 ರ ಮೊದಲ ಎರಡು ತಿಂಗಳಲ್ಲೇ ಬಂಡವಾಳ ವೆಚ್ಚವು 2.51 ಲಕ್ಷ ಕೋಟಿ ರೂ ತಲುಪಿದೆ (ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 2.21 ಲಕ್ಷ ಕೋಟಿ ರೂ. ಇತ್ತು). ಅಂದರೆ ಕೇವಲ ಎರಡು ತಿಂಗಳಲ್ಲಿ ಸುಮಾರು ರೂ. 29,650 ಕೋಟಿಗಳಷ್ಟು ವೆಚ್ಚ ಹೆಚ್ಚಿಸಲಾಗಿದೆ. ಇದು ಸಿಮೆಂಟ್, ಸ್ಟೀಲ್, ಸಾರಿಗೆ ಮತ್ತು ನಿರ್ಮಾಣ ವಲಯಕ್ಕೆ ಭಾರಿ ಬೆಂಬಲ ನೀಡಲಿದೆ.

ರೈಲ್ವೆ ಇಲಾಖೆಯು ಏಪ್ರಿಲ್-ಮೇ ಅವಧಿಯಲ್ಲೇ 84,000 ಕೋಟಿ ರೂ ಗೂ ಹೆಚ್ಚು ಹಣವನ್ನು ವೆಚ್ಚ ಮಾಡಿದೆ. ಇದು ಅದರ ವಾರ್ಷಿಕ ಬಂಡವಾಳ ವೆಚ್ಚದ ಗುರಿಯ ಸುಮಾರು ಶೇ. 30 ರಷ್ಟಾಗಿದೆ. ಸುರಕ್ಷತಾ ನವೀಕರಣಗಳು, ಸಿಗ್ನಲಿಂಗ್, ಹೊಸ ಲೈನ್‌ಗಳು ಮತ್ತು ಹಳಿಗಳ ದ್ವಿಗುಣಗೊಳಿಸುವಿಕೆಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ತೆರಿಗೆ ಸಂಗ್ರಹ ಮತ್ತು ಆರ್ಥಿಕ ಚಟುವಟಿಕೆಗಳ ಪಟ್ಟಿ

  • ಒಟ್ಟು ಜಿಎಸ್‌ಟಿ (GST) ಸಂಗ್ರಹ: 1.95 ಲಕ್ಷ ಕೋಟಿ ರೂ. (ಶೇ. 13.9 ಹೆಚ್ಚಳ)
  • ನಿವ್ವಳ ನೇರ ತೆರಿಗೆ (Direct Tax): 5.21 ಲಕ್ಷ ಕೋಟಿ ರೂ. (ಶೇ. 14.64 ಹೆಚ್ಚಳ)
  • ಇ-ವೇ ಬಿಲ್ (e-way bill) ಸೃಷ್ಟಿ: ಮೇ ತಿಂಗಳಲ್ಲಿ ಶೇ. 10.9 ಹೆಚ್ಚಳ
  • ವಿದ್ಯುತ್ ಬೇಡಿಕೆ (Electricity Demand): ಮೇ ತಿಂಗಳಲ್ಲಿ ಶೇ. 11.2 ಹೆಚ್ಚಳ

ಇದನ್ನೂ ಓದಿ: ಮೋದಿ ಉದ್ಘಾಟನೆಗೂ ಮುನ್ನವೇ ಸೆಮಿಕಂಡಕ್ಟರ್ ಚಿಪ್​ಗಳ ರಫ್ತು ಆರಂಭಿಸಿದ ಮುರುಗಪ್ಪ ಗ್ರೂಪ್ ಕಂಪನಿ

ಆಟೋಮೊಬೈಲ್ ಮಾರುಕಟ್ಟೆಯಲ್ಲಿ ದಾಖಲೆ ಮತ್ತು ಗ್ರಾಮೀಣ ಬೇಡಿಕೆ

ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ ವಾಹನ ಮಾರಾಟವು ಅತ್ಯಂತ ಪ್ರಬಲವಾಗಿ ಮುಂದುವರಿದಿದೆ. ಏಪ್ರಿಲ್ ತಿಂಗಳಲ್ಲಿ 26.11 ಲಕ್ಷ ವಾಹನಗಳು ಮಾರಾಟವಾಗುವ ಮೂಲಕ ಭಾರತದ ಆಟೋ ರಿಟೇಲ್ ಇತಿಹಾಸದಲ್ಲೇ ಅತ್ಯುತ್ತಮ ‘ಏಪ್ರಿಲ್’ ತಿಂಗಳಾಗಿ ದಾಖಲಾಗಿದೆ. ಮೇ ತಿಂಗಳಿನಲ್ಲಿಯೂ 25.31 ಲಕ್ಷ ಯೂನಿಟ್‌ಗಳು ಮಾರಾಟವಾಗಿ ಶೇ. 10 ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಜೂನ್‌ನಲ್ಲಿಯೂ ಎಸ್‌ಯುವಿ (SUV), ಇವಿ (EV) ಮತ್ತು ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ ಮುಂದುವರಿದಿದೆ.

ಗ್ರಾಮೀಣ ಆರ್ಥಿಕತೆಯ ಬಲ: ಮೇ ತಿಂಗಳಿನಲ್ಲಿ ಗ್ರಾಮೀಣ ಭಾಗದ ಆಟೋಮೊಬೈಲ್ ಮಾರಾಟವು ಶೇ. 7.8 ರಷ್ಟು ವಿಸ್ತರಣೆಗೊಂಡಿದ್ದು, ಗ್ರಾಮೀಣ ಆರ್ಥಿಕತೆಯು ಸಹ ಸದೃಢವಾಗಿ ಚೇತರಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಜಾಗತಿಕ ಇಂಧನ ಬೆಲೆಗಳು ಮತ್ತು ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಿಂದ ತಾತ್ಕಾಲಿಕ ಒತ್ತಡಗಳಿದ್ದರೂ, ಪ್ರಸ್ತುತ ಕಚ್ಚಾ ತೈಲ ಮತ್ತು ರಸಗೊಬ್ಬರ ಬೆಲೆಗಳು ಇಳಿಮುಖವಾಗಿರುವುದು ಸರ್ಕಾರದ ಹಣಕಾಸು ಕೊರತೆ ನಿಯಂತ್ರಣದ (Fiscal Consolidation) ರೋಡ್‌ಮ್ಯಾಪ್‌ಗೆ ಸಹಕಾರಿಯಾಗಿದೆ.

ಒಟ್ಟಾರೆಯಾಗಿ, ಭಾರತದ ಆಂತರಿಕ ಮಾರುಕಟ್ಟೆಯ ಬೇಡಿಕೆ ಹಾಗೂ ಸರ್ಕಾರದ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ಬೆಳವಣಿಗೆಯ ರಥವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೊರೆಯುವ ಪ್ರಯೋಜನಗಳೇನು? – Kannada News | Know the benefits of drinking a glass of water in waking up in the morning

ನಮ್ಮಲ್ಲಿ ಹಲವರಿಗೆ ಬೆಳಗ್ಗೆ (morning) ಎದ್ದ ತಕ್ಷಣವೇ ಒಂದು ಕಪ್‌ ಟೀ ಅಥವಅ ಕಾಫಿ ಬೇಕೇ ಬೇಕು. ಆದರೆ ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯುವುದು ಒಳ್ಳೆಯದಲ್ಲ. ಈ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್‌ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಈ ಅಭ್ಯಾಸ ತೀರಾ ಸಾಮಾನ್ಯದಂತೆ ಕಂಡರೂ ಇದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳೇನು?

ರಾತ್ರಿಯ ನಿದ್ರೆಯ ನಂತರ ನಮ್ಮ ದೇಹಕ್ಕೆ ನೀರು ಹೆಚ್ಚು ಬೇಕಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು, ಅಂಗಾಂಗಗಳನ್ನು ಬಲಪಡಿಸಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಇದು ಸಹಾಯವಾಗುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯುವುದರಿಂದ ನಿಮ್ಮ ದೇಹವು ಚೈತನ್ಯಗೊಳ್ಳುತ್ತದೆ.  ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಬೇಕು.

ತ್ವರಿತ ಶಕ್ತಿಯನ್ನು ಒದಗಿಸುತ್ತದೆ: ರಾತ್ರಿಯಿಡೀ ನೀರು ಕುಡಿಯದಿದ್ದರೆ ಬೆಳಿಗ್ಗೆ ಆಲಸ್ಯ ಮತ್ತು ದಣಿವು ಉಂಟಾಗುತ್ತದೆ. ಬೆಳಿಗ್ಗೆ ಮೊದಲು ನೀರು ಕುಡಿಯುವುದರಿಂದ ನೀರು ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಚೈತನ್ಯಗೊಳಿಸುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯಕ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೊಟ್ಟೆಯನ್ನು ಸಿದ್ಧಪಡಿಸುತ್ತದೆ ಇದರಿಂದ ನೀವು ದಿನವಿಡೀ ಏನು ತಿಂದರೂ ಅದು ಸುಲಭವಾಗಿ ಜೀರ್ಣವಾಗುತ್ತದೆ.

ಮನಸ್ಥಿತಿಯನ್ನು ರಿಫ್ರೆಶ್ ಮಾಡುತ್ತದೆ: ನೀವು ಎದ್ದ ತಕ್ಷಣ ನೀರು ಕುಡಿಯುವುದರಿಂದ ಮಾನಸಿಕ ಒತ್ತಡವನ್ನು ನಿವಾರಿಸಲು, ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ಉತ್ತಮವಾಗಿ ಯೋಚಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ನಾವು ಬೆಳಿಗ್ಗೆ ನೀರು ಕುಡಿದ ತಕ್ಷಣ, ನಮ್ಮ ಹೊಟ್ಟೆ ಮತ್ತು ಇಡೀ ಜೀರ್ಣಾಂಗ ವ್ಯವಸ್ಥೆಯು ಚೆನ್ನಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ, ಇದರಿಂದಾಗಿ ಆಹಾರ ಮತ್ತು ಪಾನೀಯವು ಚೆನ್ನಾಗಿ ಜೀರ್ಣವಾಗುತ್ತದೆ. ನೀರು ಕುಡಿಯುವ ಮೂಲಕ ದಿನವನ್ನು ಪ್ರಾರಂಭಿಸುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚುತ್ತದೆ.

ಇದನ್ನೂ ಓದಿ: ಮಳೆ ನೀರಿನಲ್ಲಿ ನೆನೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ:  ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಗತ್ಯ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಸುಕ್ಕುಗಳು ಕಡಿಮೆಯಾಗುತ್ತವೆ ಮತ್ತು ಮುಖದ ನೈಸರ್ಗಿಕ ಹೊಳಪು ಹೆಚ್ಚುತ್ತದೆ.

ತಲೆನೋವಿನಿಂದ ಪರಿಹಾರ: ನೀವು ತಲೆನೋವಿನಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ವಾಸ್ತವವಾಗಿ, ತಲೆನೋವು ದೇಹದಲ್ಲಿ ನೀರಿನ ಕೊರತೆಯಿಂದ ಉಂಟಾಗುತ್ತದೆ. ಆದ್ದರಿಂದ, ಸಾಕಷ್ಟು ನೀರು ಕುಡಿಯಿರಿ ಮತ್ತು ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್ – Kannada News | Alaknanda river swell after heavy rains in Rudraprayag Orange alert issued

ರುದ್ರಪ್ರಯಾಗ, ಜುಲೈ 2: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಮುಂದುವರಿದಿರುವ ಭಾರಿ ಮಳೆಯು (Rain Updates) ನದಿಗಳ ನೀರಿನ ಮಟ್ಟದ ಮೇಲೆ ತೀವ್ರ ಪರಿಣಾಮ ಬೀರಲು ಪ್ರಾರಂಭಿಸಿದೆ. ಈ ಜಿಲ್ಲೆಯ ಪ್ರಮುಖ ನದಿಗಳಾದ ಅಲಕನಂದಾ ಮತ್ತು ಮಂದಾಕಿನಿ ಎರಡರಲ್ಲೂ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಜಿಲ್ಲಾಡಳಿತವು ಕಣ್ಗಾವಲನ್ನು ತೀವ್ರಗೊಳಿಸಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಹೀಗೆಯೇ ಮುಂದುವರಿದರೆ, ಎರಡೂ ನದಿಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಲಿದ್ದು, ಅಪಾಯದ ಮಟ್ಟವನ್ನು ತಲುಪಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ನದಿತೀರದಲ್ಲಿ ವಾಸಿಸುವ ನಿವಾಸಿಗಳು ಮತ್ತು ತೀರ್ಥಯಾತ್ರೆಗೆ ಬಂದಿರುವ ಭಕ್ತಾದಿಗಳು ತೀವ್ರ ಜಾಗರೂಕರಾಗಿರಬೇಕು. ಅಗತ್ಯವಿದ್ದರೆ ಮಾತ್ರ ನದಿತೀರಗಳಿಗೆ ಅಥವಾ ಇತರೆ ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಕೆಲಸದ ಹೆಸರಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಮಕ್ಮಲ್ ಟೋಪಿ: ಕೋಟ್ಯಂತರ ರೂ ವಂಚನೆ – Kannada News | Massive Job Scam Uncovered: Aspirants Duped of 2 Crore

ಶಿವಮೊಗ್ಗ, ಜುಲೈ 02: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ (job scam) ಮಾಡಿರುವ ಜೋಡಿಯನ್ನು ನಗರದ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ (shivamogga) ಹರಿಗೆ ಗ್ರಾಮದ ನಿವಾಸಿಗಳಾದ ಸಚಿನ್ ಮತ್ತು ಸುಜಾತ ಬಂಧಿತ ಆರೋಪಿಗಳು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿವಿಧ ಜಿಲ್ಲೆಗಳ ನೂರಾರು ನಿರುದ್ಯೋಗಿಗಳಿಗೆ ಟೋಪಿ 

ವಂಚಕರು ಶಿವಮೊಗ್ಗ ನಗರದಲ್ಲಿ ಹೈಟೆಕ್ ಉದ್ಯೋಗ ತರಬೇತಿ ಕೇಂದ್ರವನ್ನು ತೆರೆದಿದ್ದರು. ಕೇವಲ ಶಿವಮೊಗ್ಗ ಮಾತ್ರವಲ್ಲದೆ ಹಾಸನ, ದಾವಣಗೆರೆ, ಚಿಕ್ಕಮಗಳೂರು ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಟೋಪಿ ಹಾಕಿದ್ದಾರೆ.

ಒಬ್ಬೊಬ್ಬರಿಂದ 10 ಲಕ್ಷದವರೆಗೆ ವಸೂಲಿ

ಸರಕಾರಿ ಕೆಲಸದ ಆಸೆಗೆ ಬಿದ್ದ ಉದ್ಯೋಗ ಆಕಾಂಕ್ಷಿಗಳಿಂದ ಈ ವಂಚಕರು ಒಬ್ಬೊಬ್ಬರಿಂದ ಕನಿಷ್ಠ 3.5 ಲಕ್ಷ ರೂ ಹಿಡಿದು 10 ಲಕ್ಷ ರೂಪಾಯಿಗಳವರೆಗೆ ಹಣ ವಸೂಲಿ ಮಾಡಿದ್ದಾರೆ. ಮಾಹಿತಿ ಪ್ರಕಾರ 50ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಗೆ ಈ ಜೋಡಿ ನಕಲಿ ಪತ್ರ ನೀಡಿ ವಂಚಿಸಿದ್ದು, ಒಟ್ಟು ವಂಚನೆಯ ಮೊತ್ತ ಅಂದಾಜು ಎರಡು ಕೋಟಿ ರೂಪಾಯಿಗಳಿಗೂ ಅಧಿಕ ಎಂದು ತಿಳಿದುಬಂದಿದೆ.

ನಕಲಿ ಲೆಟರ್‌ಹೆಡ್, ನಕಲಿ ಕೆಲಸದ ಆರ್ಡರ್

ಇನ್ನು ಆರೋಪಿ ಸಚಿನ್ ಉದ್ಯೋಗ ಆಕಾಂಕ್ಷಿಗಳಿಗೆ ತನ್ನ ಕೋಚಿಂಗ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಸುತ್ತಿದ್ದ. ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ನಕಲಿ ಲೆಟರ್‌ಹೆಡ್ ಮತ್ತು ಸೀಲುಗಳನ್ನು ಬಳಸಿ ಹುದ್ದೆ ಲಭಿಸಿರುವಂತೆ ನಕಲಿ ನೇಮಕಾತಿ ಪತ್ರಗಳನ್ನು ನೀಡುವ ಮೂಲಕ ಆಕಾಂಕ್ಷಿಗಳಿಗೆ ವಂಚಿಸಲಾಗಿದೆ.

ಇದನ್ನೂ ಓದಿ: ಪರೀಕ್ಷೆಗೆ ಹಾಜರಾಗದೆ ಜರ್ಮನ್ ಭಾಷಾ ಪ್ರಮಾಣಪತ್ರ ಪಡೆಯಲು ಹೋಗಿ ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!

ಸಚಿನ್ ಮತ್ತು ಸುಜಾತ ವಂಚನೆ ಬಂಡವಾಳ ಬಯಲಾಗುತ್ತಿದ್ದಂತೆ, ವಂಚನೆಗೊಳಗಾದ ಸಂತ್ರಸ್ತರು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಸಚಿನ್ ಮತ್ತು ಸುಜಾತರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ.. – Kannada News | Actress Rachita Ram Huge Fans craze at Bangalore Event Ayogya 2 movie updates

ಖ್ಯಾತ ನಟಿ ರಚಿತಾ ರಾಮ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಅವರು ಎಲ್ಲೇ ಹೋದರೂ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಚಿತಾ ರಾಮ್ (Rachita Ram) ಅವರನ್ನು ನೋಡಲು ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ರಚಿತಾ ರಾಮ್ ಅವರು ನಟಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿ ಕೂಡ ಅವರಿಗೆ ಬೇಡಿಕೆ ಇದೆ. ಅವರು ನಟಿಸಿರುವ ‘ಅಯೋಗ್ಯ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪರಭಾಷೆಯ ಚಿತ್ರರಂಗದಿಂದ ರಚಿತಾ ರಾಮ್ ಅವರಿಗೆ ಹಲವು ಆಫರ್​ಗಳು ಬರುತ್ತಿವೆ. ಬಹುಬೇಡಿಕೆಯ ನಟಿಯರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೀತಿಯನ್ನು ಹೆಚ್ಚಿಸುವ, ಸಂಬಂಧವನ್ನು ಬಲಪಡಿಸುವ ಮಧುರ ಸುಳ್ಳುಗಳಿವು – Kannada News | These sweet lies will further strengthen the relationship

ನಾವು ಯಾರಿಗೂ ಸುಳ್ಳು (lies) ಹೇಳಬಾರದು, ಸುಳ್ಳು ಹೇಳುವುದು ತಪ್ಪಿನ ಕೆಲಸ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಜೀವನ ಸಂಗಾತಿಯ ಬಳಿ ಯಾವುದೇ ರೀತಿಯ ಸುಳ್ಳುಗಳನ್ನು ಹೇಳಬಾರದು, ಅವರೊಂದಿಗೆ ಅತ್ಯಂತ ಪ್ರಾಮಾಣಿಕವಾಗಿರಬೇಕು. ಹೀಗಿದ್ದರೆ ಮಾತ್ರ ಸಂಬಂಧ ಶಾಶ್ವತವಾಗಿರಲು ಸಾಧ್ಯ, ಅದೇ ಒಂದು ಸುಳ್ಳು ಸುಂದರ ಸಂಬಂಧವನ್ನೇ ಸಂಪೂರ್ಣವಾಗಿ ಹಾಳು ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಏನು ಗೊತ್ತಾ ಈ ಕೆಲವೊಂದು ಸಿಹಿ ಸುಳ್ಳುಗಳು ಸಂಗಾತಿಗಳಿಬ್ಬರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದಂತೆ. ಹೌದು ನೀವು ನಿಮ್ಮ ಸಂಗಾತಿಗೆ ಈ ಕೆಲವೊಂದು ಮಧುರ ಸುಳ್ಳುಗಳನ್ನು ಹೇಳುವ ಮೂಲಕ ನಿಮ್ಮ ಪ್ರೀತಿ, ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. ಅಷ್ಟಕ್ಕೂ ಸಂಬಂಧವನ್ನು ಬಲಪಡಿಸುವ ಆ ಸುಳ್ಳುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಸಂಬಂಧವನ್ನು ಬಲಪಡಿಸುವ ಸುಳ್ಳುಗಳಿವು:

ಉಡುಗೊರೆಗಳನ್ನು ಶ್ಲಾಘಿಸಿ: ನಿಮ್ಮ ಸಂಗಾತಿ ನಿಮಗಾಗಿ ಒಂದು ಉಡುಗೊರೆಯನ್ನು ತಂದಿದ್ದರೆ, ಅದಕ್ಕೆ ಪ್ರಶಂಸೆ ನೀಡಿ, ಅದು ನಿಮಗೆ ಇಷ್ಟವಾಗದಿದ್ದರೂ ಸಹ ಗಿಫ್ಟ್‌ ತುಂಬಾನೇ ಚೆನ್ನಾಗಿದೆ ಎಂದು ಹೊಗಳಿಕೆ ಮಾತುಗಳನ್ನಾಡಿ. ಈ ಸಣ್ಣ ಸುಳ್ಳು ನಿಮ್ಮ ಸಂಗಾತಿಯನ್ನು ಖುಷಿ ಪಡಿಸುತ್ತದೆ. ಹೀಗೆ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ, ಇದು ಸಂಬಂಧವನ್ನು ಸಹ ಬಲಪಡಿಸುತ್ತದೆ.

ಪ್ರೋತ್ಸಾಹದಾಯಕ ಮಾತುಗಳನ್ನಾಡಿ: ದೈನಂದಿನ ಜವಾಬ್ದಾರಿಗಳು ಮತ್ತು ಕೆಲಸದ ಒತ್ತಡಗಳ ನಡುವೆ,  ಕೆಲವೊಮ್ಮೆ ನಿಮ್ಮ ಸಂಗಾತಿಗೆ ನಿಮಗೆ ಸರಿಯಾಗಿ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ, ನಿಮಗಾಗಿ ಅತ್ಯುತ್ತಮವಾದುದನ್ನು ನೀಡಲು ಸಾಧ್ಯವಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ಚುಚ್ಚು ಮಾತುಗಳನ್ನಾಡುವ ಬದಲು ನೀನು ನನ್ನಷ್ಟು ಎಷ್ಟು ಪ್ರೀತಿಸುತ್ತೀಯಾ ನೋಡು, ನನಗಾಗಿ ತುಂಬಾ ಸಮಯ ಕೊಡುತ್ತೀಯಾ ಎಂಬ ಪ್ರೋತ್ಸಾಹದಾಯಕ ಮಾತುಗಳನ್ನಾಡಿ. ಇದು ಮನಸ್ತಾಮಗಳನ್ನು ತಪ್ಪಿಸುತ್ತದೆ, ಪ್ರೀತಿಯನ್ನು ಹೆಚ್ಚಿಸುತ್ತದೆ.

ಅಡುಗೆಯನ್ನು ಹೊಗಳಲು ಮರೆಯಬೇಡಿ: ನಿಮ್ಮ ಸಂಗಾತಿ ನಿಮಗಾಗಿ ಪ್ರೀತಿಯಿಂದ ಅಡುಗೆ ಮಾಡಿದ್ದರೆ, ಕೇವಲ ರುಚಿಯ ಮೇಲೆ ಮಾತ್ರ ಗಮನಹರಿಸಬೇಡಿ, ಅವರ ಪ್ರಯತ್ನ ಮತ್ತು ಭಾವನೆಗಳನ್ನು ಪ್ರಶಂಸಿಸಿ. ರುಚಿ ಚೆನ್ನಾಗಿಲ್ಲದಿದ್ದರೂ ಅಡುಗೆ ತುಂಬಾನೇ ಚೆನ್ನಾಗಿ ಮಾಡಿದ್ದೀರಿ ಎಂದು ಪ್ರಶಂಸೆಯ ಮಾತುಗಳನ್ನಾಡಿ. ನಿಮ್ಮಿಂದ ಬರುವ ಈ ಸಕಾರಾತ್ಮಕ ಪ್ರತಿಕ್ರಿಯೆ ಅವರನ್ನು ಇನ್ನಷ್ಟು ಸಂತೋಷಪಡಿಸುತ್ತದೆ.

ಇದನ್ನೂ ಓದಿ: ಉಡುಗೊರೆಗಳನ್ನು ನೀಡಿದ್ರೆ ಸಂಬಂಧದಲ್ಲಿ ಬಿರುಕು ಮೂಡೋದು ಗ್ಯಾರಂಟಿ

ಹೊಸ ಲುಕ್‌ಗಳನ್ನು ಬೆಂಬಲಿಸಿ: ನಿಮ್ಮ ಸಂಗಾತಿ ಹೊಸ ಕೇಶವಿನ್ಯಾಸ, ಉಡುಗೆ ಅಥವಾ ಹೊಸ ಲುಕ್ ಪ್ರಯತ್ನಿಸಿದಾಗ, ಅದನ್ನು ಅಪಹಾಸ್ಯ ಮಾಡುವ ಬದಲು ಪ್ರೋತ್ಸಾಹಿಸಿ. ಇದು ಅವರಿಗೆ ಒಳ್ಳೆಯ ಭಾವನೆ ಮೂಡಿಸುತ್ತದೆ ಮತ್ತು ಸಂಬಂಧದಲ್ಲಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿ: ಪ್ರತಿ ಕ್ಷಣವೂ ಯಾರನ್ನಾದರೂ ಮಿಸ್‌ ಮಾಡಿಕೊಳ್ಳುವುದು ಅಸಾಧ್ಯವಾದ ಮಾತು. ಆದರೂ ನಿಮ್ಮ ಸಂಗಾತಿಗೆ ಅವರ ಉಪಸ್ಥಿತಿಯು ನಿಮಗೆ ಮುಖ್ಯ ಎಂಬುದನ್ನು ತಿಳಿಸಲು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಸಣ್ಣ ದಯೆಯ, ಪ್ರೀತಿಯ ಮಾತುಗಳು ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದು ಮಾತ್ರವಲ್ಲದೆ ಪ್ರೀತಿ, ಗೌರವ, ತಿಳುವಳಿಕೆ ಮತ್ತು ಭಾವನೆಗಳಿಗೆ ಬೆಲೆ ಕೊಡುವುದು ಕೂಡ ಸಂಬಂಧವನ್ನು ಬಲಪಡಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೋನ್‌ ವ್ಯಸನದಿಂದ ಮುಕ್ತರಾಗಲು ಈ ಸರಳ ಡಿಜಿಟಲ್‌ ಡಿಟಾಕ್ಸ್‌ ತಂತ್ರಗಳನ್ನು ಪಾಲಿಸಿ – Kannada News | Try these digital detox tips to live a stress free life

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ನಿರ್ಣಾಯಕ ಭಾಗವಾಗಿಬಿಟ್ಟಿದೆ. ಅನೇಕ ಜನ ಬೆಳಗ್ಗೆ ಎದ್ದ ತಕ್ಷಣವೇ ಮೊಬೈಲ್‌ ನೋಡಲು ಆರಂಭಿಸುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌, ವಿಡಿಯೋಗಳನ್ನು ಸ್ಕ್ರೋಲ್‌ ಮಾಡುತ್ತಾ ಕುಳಿತುಬಿಡುತ್ತಾರೆ. ಹೀಗೆ ಹೆಚ್ಚು ಹೊತ್ತು ಆನ್‌ಲೈನ್‌ನಲ್ಲಿರುವುದು ನಮ್ಮ ಮಾನಸಿಕ ಒತ್ತಡವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಇದು ಕಿರಿಕಿರಿ ಉಂಟಾಗಲು, ಅನಗತ್ಯ ಕೋಪ ಬರಲು ಕಾರಣವಾಗುತ್ತದೆ. ನಿಮಗೂ ಕೂಡ ಇದೇ ರೀತಿಯ ಅನುಭವ ಆಗ್ತಿದ್ರೆ, ಡಿಜಿಟಲ್‌ ಡಿಟಾಕ್ಸ್‌ (digital detox) ಅಥವಾ ಸ್ವಲ್ಪ ಸಮಯದವರೆಗೆ ಸ್ಮಾರ್ಟ್‌ ಫೋನ್‌ನಿಂದ ವಿರಾಮ ತೆಗೆದುಕೊಳ್ಳುವುದು ಅತ್ಯಗತ್ಯ. ಪ್ರತಿದಿನ ಸ್ವಲ್ಪ ಸಮಯದವರೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ವಿರಾಮ ತೆಗೆದುಕೊಳ್ಳುವುದು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಧನಾತ್ಮಕ ಪರಿಣಾಮ ಬೀರುತ್ತದೆ.

ಡಿಜಿಟಲ್ ಡಿಟಾಕ್ಸ್ ನಿಜವಾಗಿಯೂ ಒತ್ತಡವನ್ನು ಕಡಿಮೆ ಮಾಡಬಹುದೇ?

ನಾವು ನಿರಂತರವಾಗಿ ಫೋನ್‌ ನೋಡುತ್ತಾ ಕುಳಿತರೆ ಮನಸ್ಸಿಗೆ ವಿಶ್ರಾಂತಿ ಪಡೆಯಲು ಸಮಯ ಸಿಗುವುದಿಲ್ಲ. ರೀಲ್ಸ್‌, ವಿಡಿಯೋಗಳು, ಮೆಸೇಜ್‌ಗಳ ನಿರಂತರ ಹರಿವು ಮನಸ್ಸನ್ನು ಕಾರ್ಯನಿರತವಾಗಿರಿಸುತ್ತದೆ. ಇದು ಕ್ರಮೇಣ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಿರುವಾಗ ಸ್ವಲ್ಪ ಹೊತ್ತು ಫೋನ್‌ನಿಂದ ಬ್ರೇಕ್‌ ತೆಗೆದುಕೊಂಡಾಗ ಒತ್ತಡ ಕಡಿಮೆಯಾಗುತ್ತದೆ, ಮನಸ್ಥಿತಿಯೂ ಸುಧಾರಿಸುತ್ತದೆ.  ‌

ಫೋನ್‌ ಬಳಕೆ, ಒತ್ತಡವನ್ನು ಕಡಿಮೆ ಮಾಡುವ ಡಿಜಿಟಲ್‌ ಡಿಟಾಕ್ಸ್‌ ತಂತ್ರಗಳಿವು:

ಎದ್ದ ತಕ್ಷಣ ಫೋನ್ ನೋಡುವ ಅಭ್ಯಾಸ ಬಿಡಿ:  ಬಹುತೇಕ ಹೆಚ್ಚಿನವರು ಬೆಳಗ್ಗೆ ಎದ್ದ ತಕ್ಷಣವೇ ಮೊಬೈಲ್‌ ನೋಡುತ್ತಾ ಕುಳಿತು ಬಿಡುತ್ತಾರೆ. ಹೌದು ಮೆಸೇಜ್‌, ವಿಡಿಯೋಗಳನ್ನು ನೋಡುತ್ತಾರೆ. ಈ ಸರಳ ಅಭ್ಯಾಸವು  ದಿನದ ಆರಂಭವನ್ನು ಒತ್ತಡ ಮುಕ್ತಗೊಳಿಸುತ್ತದೆ. ಹಾಗಾಗಿ ಬೆಳಬೆಳಗ್ಗೆ ಫೋನ್‌ ನೋಡುವ ಬದಲು, ವ್ಯಾಯಾಮ, ಧ್ಯಾನ ಮಾಡಿ. ಕುಟುಂಬದೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯಿರಿ. ಈ ಸಣ್ಣ ಅಭ್ಯಾಸ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ದಿನಕ್ಕೆ ಉತ್ತಮ ಆರಂಭವನ್ನು ನೀಡುತ್ತದೆ. 

ನೋಟಿಫಿಕೇಶನ್‌ಗಳನ್ನು ನಿಯಂತ್ರಿಸಿ: ನೋಟಿಫಿಕೇಶನ್‌ ಆನ್‌ನಲ್ಲಿದ್ದರೆ ಪದೇ ಪದೇ ಮೊಬೈಲ್‌ ನೋಡುತ್ತೇವೆ. ಹಾಗಾಗಿ ನೋಟಿಫಿಕೇಶನ್‌ ಆಫ್‌ ಮಾಡಿ ಮೊಬೈಲ್‌ ಅನ್ನು ಸ್ವಲ್ಪ ಅತ್ತ ಕಡೆ ಇಟ್ಟು ಬಿಡಿ. ಇದು ನೀವು ಕೆಲಸದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ, ಮಾನಸಿಕ ಒತ್ತಡವನ್ನೂ ನಿವಾರಿಸುತ್ತದೆ.

ಇದನ್ನೂ ಓದಿ: ಮೊಬೈಲ್‌ ನೋಡುತ್ತಾ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು?

ಮಲಗುವ ಮುನ್ನ ಫೋನ್‌ನಿಂದ ದೂರವಿರಿ: ತಡರಾತ್ರಿಯವರೆಗೆ ಫೋನ್‌ ನೋಡುತ್ತಾ ಕುಳಿತರೆ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ. ಹೌದು ಮೊಬೈಲ್‌ ಪರದೆಯಿಂದ ಹೊರಸೂಸುವ ನೀಲಿ ಬೆಳಕು ರಾತ್ರಿಯಿಡೀ ನಿಮ್ಮ ಮೆದುಳನ್ನು ಸಕ್ರಿಯವಾಗಿರಿಸುತ್ತದೆ, ಇದರಿಂದಾಗಿ ನಿದ್ರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಮಲಗುವ  ಕನಿಷ್ಠ ಒಂದು ಗಂಟೆ ಮೊದಲು  ಸ್ಮಾರ್ಟ್‌ಫೋನ್ ಬಳಸುವುದನ್ನು ನಿಲ್ಲಿಸಿ. ಬದಲಾಗಿ ಪುಸ್ತಕ ಓದುವುದು ಅಥವಾ ಲಘು ಸಂಗೀತವನ್ನು ಕೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರೆಯ ಗುಣಮಟ್ಟವನ್ನೂ ಸುಧಾರಿಸುತ್ತದೆ.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಡಿಜಿಟಲ್ ಡಿಟಾಕ್ಸ್‌ಗೆ ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದು. ಕುಟುಂಬದೊಂದಿಗೆ ಕುಳಿತು ಮನಬಿಚ್ಚಿ ಮಾತನಾಡಿ, ಸ್ನೇಹಿತರನ್ನು ಭೇಟಿ ಮಾಡಿ ಅಥವಾ ಮೊಬೈಲ್‌ ಮನೆಯಲ್ಲೇ ಇಟ್ಟು ವಾಕಿಂಗ್‌ ಹೋಗಿ. ಇದು ನಿಮ್ಮನ್ನು ಫೋನ್‌ನಿಂದ ದೂರವಿರುವಂತೆ ಮಾಡುತ್ತದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಜು ಸ್ಯಾಮ್ಸನ್ ಸೇರಿದಂತೆ ಟೀಂ ಇಂಡಿಯಾದ ಈ ಮೂವರಿಗೆ ಶೀಘ್ರದಲ್ಲೇ ಗೇಟ್​ಪಾಸ್

Source link

Exit mobile version