RCB vs GT: 4 ಕಾರಣಗಳಿಂದ ಮೊದಲ ಕ್ವಾಲಿಫೈಯರ್​ ‘ಕುತೂಹಲ’ – Kannada News | IPL 2026, RCB vs GT Qualifier 1 Match in Dharamsala

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಆದರೆ ಹೀಗೆ ಫೈನಲ್​ಗೆ ಎಂಟ್ರಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಈ ಬಾರಿ ಮುಖಾಮುಖಿಯಾಗುತ್ತಿರುವುದು ಎರಡು ಬಲಿಷ್ಠ ತಂಡಗಳು.

ಈ ಬಲಿಷ್ಠತೆಯ ನಡುವೆ ನಾಲ್ಕು ಅಂಶಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವನ್ನು ಮತ್ತಷ್ಟು ರೋಮಾಂಚನಗೊಳಿಸಲಿವೆ. ಅಂದರೆ ಈ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುವುದು ದಿಟ. ಏಕೆಂದರೆ…

  • ಗುಜರಾತ್ ಟೈಟಾನ್ಸ್ ತಂಡಕ್ಕೆ ಧರ್ಮಶಾಲಾದ ಮೈದಾನದ ಪರಿಚಯವಿಲ್ಲ. 2022 ರಲ್ಲಿ ಐಪಿಎಲ್‌ಗೆ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ಧರ್ಮಶಾಲಾದಲ್ಲಿ ಈವರೆಗೆ ಒಂದೇ ಒಂದು ಪಂದ್ಯವಾಡಿಲ್ಲ. ಅಂದರೆ ಇದೇ ಮೊದಲ ಬಾರಿಗೆ ಹೆಚ್​ಪಿಸಿಎ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಏತನ್ಮಧ್ಯೆ, ಆರ್‌ಸಿಬಿ ಈಗಾಗಲೇ ಐಪಿಎಲ್ 2026 ರಲ್ಲಿ ಇಲ್ಲಿ ಒಂದು ಪಂದ್ಯವನ್ನು ಆಡಿದ್ದು, ಆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು 23 ರನ್‌ಗಳಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿತ್ತು.
  • ಮೊದಲ ಕ್ವಾಲಿಫೈಯರ್ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಿಸಿರುವ ಮತ್ತೊಂದು ಅಂಶವೆಂದರೆ ಆರ್‌ಸಿಬಿ ಮತ್ತು ಜಿಟಿ ಮೊದಲ ಬಾರಿಗೆ ಪ್ಲೇಆಫ್‌ನಲ್ಲಿ ಎದುರಾಗುತ್ತಿರುವುದು. ಈ ಎರಡೂ ತಂಡಗಳು ಐಪಿಎಲ್‌ನಲ್ಲಿ ಎಂಟು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದಾಗ್ಯೂ, ಉಭಯ ತಂಡಗಳು  ಪ್ಲೇಆಫ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿರಲಿಲ್ಲ.
  • ಕಳೆದ ಮೂರು ಸೀಸನ್​ಗಳಲ್ಲಿ ಎರಡೂ ತಂಡಗಳ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇಂದಿನ ಮ್ಯಾಚ್​ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಏಕೆಂದರೆ 2023 ರಿಂದ, ಆರ್‌ಸಿಬಿ ಮತ್ತು ಜಿಟಿ ಐಪಿಎಲ್‌ನಲ್ಲಿ ಎರಡು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿದೆ. ಗಮನಾರ್ಹ ವಿಷಯವೆಂದರೆ ಈ ಅವಧಿಯಲ್ಲಿ, ಎರಡೂ ತಂಡಗಳ ಗೆಲುವು-ಸೋಲಿನ ದಾಖಲೆ ಒಂದೇ ಆಗಿದೆ. ಅಂದರೆ ಆರ್‌ಸಿಬಿ ಮತ್ತು ಜಿಟಿ ಎರಡೂ 34 ಪಂದ್ಯಗಳನ್ನು ಗೆದ್ದಿವೆ. ಹಾಗೆಯೇ 24 ಪಂದ್ಯಗಳನ್ನು ಸೋತಿವೆ.
  • ಮೊದಲ ಕ್ವಾಲಿಫೈಯರ್ ಪಂದ್ಯದ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಕ್ವಾಲಿಫೈಯರ್ 1 ರ ವಿಜೇತರು ಕಳೆದ ಎಂಟು ಸತತ ಸೀಸನ್‌ಗಳನ್ನು ಒಳಗೊಂಡಂತೆ 12 ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದಾರೆ. ಈ ಅಂಕಿಅಂಶವು ಆರ್‌ಸಿಬಿ vs ಜಿಟಿ ಸುತ್ತಲಿನ ಉತ್ಸಾಹವನ್ನು ಹೆಚ್ಚಿಸಿದ್ದು, ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇದನ್ನೂ ಓದಿ: ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ತಿರುಗೇಟು!

ಅಂದಹಾಗೆ ಇಂದಿನ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್​ನಿಂದ ಹೊರಬೀಳುವುದಿಲ್ಲ. ಬದಲಾಗಿ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಬೇಕಾಗುತ್ತದೆ. ಅಂದರೆ ಮೊದಲ ಕ್ವಾಲಿಫೈಯರ್​ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೇರಿದರೆ, ಸೋತ ತಂಡ ಎಲಿಮೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಮುಖಾಮುಖಿಯಾಗಲಿದೆ. ಈ ಮೂಲಕ ದ್ವಿತೀಯ ಕ್ವಾಲಿಫೈಯರ್ ಪಂದ್ಯದ ಮೂಲಕ ಫೈನಲ್​ಗೇರುವ ಅವಕಾಶ ಪಡೆಯಲಿದೆ.

Source link

Guru Sanchara 2026: ಗುರು ಸಂಚಾರದಿಂದ ಈ ಒಂದು ರಾಶಿಗೆ ಡಬಲ್ ಧಮಾಕ! – Kannada News | Scorpio Horoscope 2026: Jupiters Favourable Transit and its Impact

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ವೃಶ್ಚಿಕ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರ ಗುರು ಸಂಚಾರವು ವೃಶ್ಚಿಕ ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ಗುರುವು ಒಂಬತ್ತನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ಅದೃಷ್ಟ ಮತ್ತು ಗುರುಬಲ ಪ್ರಾಪ್ತವಾಗಲಿದೆ. ಗುರುವು ವೃಶ್ಚಿಕ ರಾಶಿಯನ್ನು ವೀಕ್ಷಿಸುವುದರಿಂದ ಡಬಲ್ ಧಮಾಕ ಫಲ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿವಾಹ ವಿಷಯಗಳಲ್ಲಿ ಅನುಕೂಲ, ಮತ್ತು ಉನ್ನತ ಶಿಕ್ಷಣಕ್ಕೆ ಒಳ್ಳೆಯ ಸಮಯವಾಗಿದೆ.

ರಾಜಕೀಯ ವ್ಯಕ್ತಿಗಳಿಗೆ ಅನೇಕ ಅವಕಾಶಗಳು ಮತ್ತು ಜವಾಬ್ದಾರಿಗಳು ಸಿಗುತ್ತವೆ. ವ್ಯಾಪಾರದಲ್ಲಿ ಲಾಭ, ಕಾನೂನು ವಿಷಯಗಳಲ್ಲಿ ಶುಭ ಮತ್ತು ಅಪವಾದಗಳಿಂದ ಮುಕ್ತಿ ದೊರೆಯಲಿದೆ. ಮಹಿಳೆಯರಿಗೆ ತವರು ಮತ್ತು ಗಂಡನ ಮನೆ ಕಡೆಯಿಂದ ಬೆಂಬಲ ಹೆಚ್ಚುತ್ತದೆ. ಸಾಲ ತೀರಿಸಲು, ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಸಕಾಲ. ಭೂಮಿ ಖರೀದಿ ಮತ್ತು ಹೊಸ ಉದ್ಯಮ ಪ್ರಾರಂಭಿಸುವ ಯೋಗವಿದೆ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆದರೆ, ಶುಭ ಕಾರ್ಯಗಳಲ್ಲಿ ಅತಿಯಾದ ಖರ್ಚು ಮತ್ತು ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ವಹಿಸಬೇಕು. ಪ್ರತಿದಿನ ಗಾಯತ್ರಿ ಮಂತ್ರ ಜಪಿಸುವುದು ಮತ್ತು ಗುರುವಾರ ಹಸುವಿಗೆ ಕಡಲೆಬೇಳೆ-ಬೆಲ್ಲ ನೀಡುವುದು ಶುಭ ತರಲಿದೆ. ಒಟ್ಟಾರೆ ವೃಶ್ಚಿಕ ರಾಶಿಯವರಿಗೆ ಇದು ಅದೃಷ್ಟದ ಸಮಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ತನ್ನ ಕಾಲನ್ನು ತಾನೇ ಸ್ಪರ್ಶಿಸಿ ನಮಸ್ಕರಿಸಿಕೊಂಡ ಪುಟಾಣಿ – Kannada News | A little girl who touched her own foot and bowed

ಪುಟಾಣಿಗಳು (little kids) ಏನು ಮಾಡಿದ್ರೂ ಚಂದನೇ. ಕೆಲವೊಮ್ಮೆ ಈ ಪುಟ್ಟ ಮಕ್ಕಳ ನಡೆನುಡಿಯಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಹೆತ್ತವರು ಮಕ್ಕಳಿಗೆ ಏನು ಹೇಳಿಕೊಡುತ್ತಾರೆ ಅದನ್ನು ಚಾಚು ತಪ್ಪದೇ ಕಲಿಯುತ್ತದೆ. ಇದೀಗ ಪುಟಾಣಿಯೊಂದು ತನ್ನ ಕಾಲನ್ನು ತಾನೇ ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡಿದೆ. ಪುಟಾಣಿಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಪುಟ್ಟ ಹುಡುಗಿಯ ಮುಗ್ಧತೆಗೆ ಫಿದಾ ಆಗಿದ್ದಾರೆ.

Ishanvi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿಯ ಮುಗ್ಧತೆ ತುಂಬಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟ್ಟ ಹುಡುಗಿಯೊಂದು ಬಗ್ಗಿಕೊಂಡು ತನ್ನ ಕಾಲನ್ನು ತಾನೇ ಮುಟ್ಟಿ ಆಶೀರ್ವಾದ ಪಡೆದುಕೊಂಡಿದೆ. ಹೀಗೆ ನಾಲ್ಕೈದು ಬಾರಿ ನಮಸ್ಕರಿಸಿದ್ದು, ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ

ಈ ವಿಡಿಯೋ 4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಕ್ಕಳು ಎಷ್ಟು ಮುಗ್ಧರು ಎಂದು ಹೇಳಿದ್ದಾರೆ. ಇನ್ನೊಬ್ಬರು, ಬೇರೆಯವರಿಗೆ ಗೌರವ ಕೊಡೋದು ಎಷ್ಟು ಮುಖ್ಯವೋ ನಮ್ಗೆ ನಾವು ಗೌರವಿಸೋದು ಅಷ್ಟೇ ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ಆತ್ಮಗೌರವ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:01 pm, Tue, 26 May 26

Source link

‘ಅನನ್ಯಾ ಪಾಂಡೆ ಡ್ಯಾನ್ಸ್ ನೋಡಿ ಕಣ್ಣಲ್ಲಿ ರಕ್ತ ಬಂತು’ – Kannada News | Ananya Panday’s Bharatanatyam In Chand Mera Dil Sparks Online Backlash

ಬಾಲಿವುಡ್ (Bollywood) ನಟಿ ಅನನ್ಯಾ ಪಾಂಡೆ, ನಟನೆ ಬಿಟ್ಟು ಬೇರೆ ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಸಂದರ್ಶನಗಳಲ್ಲಿ ಚಿತ್ರ-ವಿಚಿತ್ರ ಮಾತುಗಳು, ಬಿಕಿನಿ ಚಿತ್ರಗಳು, ಬದಲಾಗುವ ಬಾಯ್​​ಫ್ರೆಂಡ್ ಇಂಥಹುದೇ ಕಾರಣಕ್ಕೆ ಸುದ್ದಿಯಲ್ಲಿರುವ ಅನನ್ಯಾ, ನಟನೆಯ ಕಾರಣಕ್ಕೆ ಸುದ್ದಿಗೆ ಬರುವುದೇ ಅಪರೂಪ. ಕೇವಲ ನೆಪೊಟಿಸಮ್​​ನಿಂದ ವೃತ್ತಿ ಜೀವನ ನಡೆಸುತ್ತಿರುವ ಅನನ್ಯಾ ಪಾಂಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಲ್ಲಿರುವುದು ಅವರ ಕೆಟ್ಟ ನೃತ್ಯ ಪ್ರದರ್ಶನದಿಂದ. ಅನನ್ಯಾ ಪಾಂಡೆ ನಟಿಸಿರುವ ಸಿನಿಮಾ ಒಂದು ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ಅನನ್ಯಾ ಪಾಂಡೆ ಮಾಡಿರುವ ಡ್ಯಾನ್ಸ್ ನೋಡಿ ನೆಟ್ಟಿಗರು ಹಣೆ-ಹಣೆ ಚಚ್ಚಿಕೊಂಡಿದ್ದಾರೆ. ಕೆಲವರು ಚಿತ್ರಮಂದಿರದಲ್ಲೇ ಉರುಳಾಡಿ ನಕ್ಕಿದ್ದಾರೆ. ಆದರೆ ಕೆಲ ಭರತನಾಟ್ಯ ನೃತ್ಯಪಟುಗಳು ಅನನ್ಯಾರ ಡ್ಯಾನ್ಸ್​​ ಅನ್ನು ವಿಮರ್ಶಿಸಿದ್ದು ಟೀಕೆ ವ್ಯಕ್ತಪಡಿಸಿದ್ದಾರೆ.

ಅನನ್ಯಾ ಪಾಂಡೆ ಮತ್ತು ಲಕ್ಷ್ಯ್ ನಟನೆಯ ‘ಚಾಂದ್ ಮೇರಾ ದಿಲ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ಅನನ್ಯಾ ಪಾಂಡೆ ಬಹುಮುಖ ಪ್ರತಿಭೆ ಹೊಂದಿರುವ ಕಾಲೇಜು ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಕ್ರೀಡೆ, ಓದು, ಗಾಯನ, ನೃತ್ಯ, ವಿಜ್ಞಾನ ಪ್ರಯೋಗ ಎಲ್ಲದರಲ್ಲೂ ಮುಂದಿರುವ ಯುವತಿ ಚಾಂದಿನಿ ಪಾತ್ರದಲ್ಲಿ ಅನನ್ಯಾ ನಟಿಸಿದ್ದು, ಕಾಲೇಜು ಕಾರ್ಯಕ್ರಮದಲ್ಲಿ ಅನನ್ಯಾ ಭರತನಾಟ್ಯ ಮಾಡುವ ದೃಶ್ಯವೊಂದು ಸಿನಿಮಾನಲ್ಲಿದೆ. ಡ್ಯಾನ್ಸ್ ದೃಶ್ಯದಲ್ಲಿ ಅನನ್ಯಾ ಅವರು ಭರತನಾಟ್ಯ ಮತ್ತು ಹಿಪ್-ಹಾಪ್ ಮಿಶ್ರಿತ ‘ಫ್ಯೂಷನ್’ ನೃತ್ಯ ಮಾಡಿದ್ದಾರೆ. ಅನನ್ಯಾರ ಆ ನೃತ್ಯಕ್ಕೆ ತೀವ್ರ ವಿರೋಧ ಮತ್ತು ವ್ಯಂಗ್ಯ ವ್ಯಕ್ತವಾಗಿದೆ.

ಇದನ್ನೂ ಓದಿ:ಡ್ಯಾನ್ಸ್​ಗಾಗಿ ಎಂತ ರಿಸ್ಕ್ ತಗೊಂಡ್ರಾ ನೋಡಿ ಅನನ್ಯಾ ಅಮರ್

ಅನನ್ಯಾ ಅವರು ಸಿನಿಮಾನಲ್ಲಿ ಮಾಡಿರುವ ನೃತ್ಯ ಬಹಳ ಕೆಟ್ಟದಾಗಿದ್ದು, ಭರತನಾಟ್ಯದ ಗಂಧ-ಗಾಳಿಯೂ ಇಲ್ಲದ ವ್ಯಕ್ತಿಯೊಬ್ಬರು ಸುಮ್ಮನೆ, ಕೈ-ಕಾಲು ಆಡಿಸಿದಂತಿದೆ ಅನನ್ಯಾ ಮಾಡಿರುವ ನೃತ್ಯ ಪ್ರದರ್ಶನ. ಸಿನಿಮಾನಲ್ಲಿ ತೋರಿಸಿರುವಂತೆ ಆ ನೃತ್ಯ ಪ್ರದರ್ಶನ ನೋಡಿ ನಾಯಕ ಮಂತ್ರ ಮುಗ್ಧನಾಗುವಂತೆ ತೋರಿಸಲಾಗಿದೆ. ಆ ದೃಶ್ಯವನ್ನಂತೂ ನೆಟ್ಟಿಗರು ಇದೀಗ ವಿಪರೀತ ಟ್ರೋಲ್ ಮಾಡುತ್ತಿದ್ದಾರೆ. ಭರತನಾಟ್ಯದ ಮರ್ಯಾದೆಯನ್ನೇ ಅನನ್ಯಾ ಕಳೆದಿದ್ದಾರೆ ಎಂದೆಲ್ಲ ಆಕ್ರೋಶ ಹೊರಹಾಕಿದ್ದಾರೆ.

‘ಭರತನಾಟ್ಯವು ಕ್ರಿಸ್ತಪೂರ್ವ 200 ರಲ್ಲಿ ಹುಟ್ಟಿಕೊಂಡಿತು ಮತ್ತು 2026 ರಲ್ಲಿ ಅನನ್ಯಾ ಪಾಂಡೆ ಅವರಿಂದ ಕೊನೆಗೊಂಡಿತು’ ಎಂದು ನೆಟ್ಟಿಗನೊಬ್ಬ ಪೋಸ್ಟ್ ಹಾಕಿದ್ದಾನೆ. ಮತ್ತೊಬ್ಬ ನೆಟ್ಟಿಗ ತೀವ್ರವಾಗಿ ಪ್ರತಿಕ್ರಿಯಿಸಿ, ‘ಅನನ್ಯಾ ಪಾಂಡೆ ಭರತನಾಟ್ಯವನ್ನು ಸಂಪೂರ್ಣವಾಗಿ ‘ಭರ್ತಾ’ (ಗೊಜ್ಜು) ಮಾಡಿದ್ದಾರೆ. ಅವರ ಹಸ್ತಮುದ್ರೆಗಳು ರೋಬೋಟ್‌ನಂತೆ ಕಾಣುತ್ತಿವೆ ಮತ್ತು ಮುಖದ ಭಾವನೆಗಳು ಕೇವಲ ಆಶ್ಚರ್ಯದ ಇಮೋಜಿಯಂತೆ ಇವೆ. ಇದನ್ನು ನೋಡುತ್ತಿದ್ದರೆ ನನ್ನ ಕಣ್ಣುಗಳಿಂದ ರಕ್ತ ಬರುತ್ತಿರುವಂತಿದೆ” ಎಂದು ಬರೆದುಕೊಂಡಿದ್ದಾರೆ.

ಖ್ಯಾತ ಭರತನಾಟ್ಯ ನೃತ್ಯಗಾರ್ತಿ ಅನಿತಾ ರತ್ನಂ ಅವರು ಕೂಡ ಈ ನೃತ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ‘ಈ ವಿಡಿಯೋ ಕ್ಲಿಪ್ ನೋಡುತ್ತಿದ್ದರೆ ಭರತನಾಟ್ಯ ಕಲೆಯನ್ನೇ ಯಾರೋ ಅಪಹರಿಸಿ, ಅದರ ತಪ್ಪು ಗ್ರಹಿಕೆಯನ್ನು ಮಾತ್ರವೇ ಪ್ರದರ್ಶಿಸಿದಂತೆ ಭಾಸವಾಗುತ್ತಿದೆ. ಕೈಗಳನ್ನು ಮನಬಂದಂತೆ ಆಡಿಸುವುದು ಮತ್ತು ಅಸ್ತವ್ಯಸ್ತವಾದ ಕ್ಯಾಮೆರಾ ಮೂವ್‌ಮೆಂಟ್‌ಗಳ ನಡುವೆ, ಭರತನಾಟ್ಯವು ಸದ್ದಿಲ್ಲದೆ ಪಲಾಯನ ಮಾಡಿದಂತೆ ಕಾಣುತ್ತಿದೆ. ಭರತನಾಟ್ಯವು ಸಂಯಮ, ಸಂಪ್ರದಾಯ ಮತ್ತು ಭಾವನೆಗಳ ಮೇಲೆ ನಿಂತಿರುತ್ತದೆ. ಆದರೆ ಈ ಕ್ಲಿಪ್‌ನಲ್ಲಿ ಅದನ್ನು ಲಘು ಭೂಕಂಪದ ಸಮಯದಲ್ಲಿ ನಡೆಯುವ ಮದುವೆ ಸಂಭ್ರಮದ ನೃತ್ಯದಂತೆ ಬಿಂಬಿಸಲಾಗಿದೆ’ ಎಂದು ಅವರು ವಿಮರ್ಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ‌ ಆಗ್ರಹಿಸಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ

ಧಾರವಾಡ, ಮೇ 27: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ‌ ಆಗ್ರಹಿಸಿ ಉತ್ತರ ಕರ್ನಾಟಕ ಅಂಜುಮನ್ ಎ ಇಸ್ಲಾಮ್ ಸಂಘಟನೆ ಪ್ರತಿಭಟನೆ ನಡೆಸಿದೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರೊಟೆಸ್ಟ್ ನಡೆಸಿರುವ ಕಾರ್ಯಕರ್ತರು, ಗೋ ಹತ್ಯೆ ತಡೆಯುವ ಜೊತೆಗೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಧಾರವಾಡ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದ್ದು, ಹಿಂದೂಪರ ಸಂಘಟನೆಗಳು ಕೂಡ ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪರಮೇಶ್ವರ್ ಸಿಎಂ ಆಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ!ಅಚ್ಚರಿಯ ಹೇಳಿಕೆ ನೀಡಿದ ಕೆ.ಎನ್. ರಾಜಣ್ಣ – Kannada News | Delay in Karnatakas Political Shifts: KN Rajanna Discusses Dalit CM Demand and Party Unity.

ಬೆಂಗಳೂರು, ಮೇ.26: ಕೆ.ಎನ್. ರಾಜಣ್ಣ ಅವರು “ಸೆಪ್ಟೆಂಬರ್ ಕ್ರಾಂತಿ” ವಿಳಂಬದ ಕುರಿತು ಮಾತನಾಡಿ, ರಾಜಕಾರಣದಲ್ಲಿ ಇಂತಹ ಬದಲಾವಣೆಗಳು ಸಹಜ ಪ್ರಕ್ರಿಯೆ ಎಂದು ತಿಳಿಸಿದ್ದಾರೆ. ತಾವು ಮೊದಲು ಪ್ರಸ್ತಾಪಿಸಿದ “ಸೆಪ್ಟೆಂಬರ್ ಕ್ರಾಂತಿ” ವಿಳಂಬವಾಗಿದ್ದು, ಇದು ರಾಜಕೀಯದಲ್ಲಿ ಸಾಮಾನ್ಯ ಎಂದು ಅವರು ಪುನರುಚ್ಚರಿಸಿದ್ದಾರೆ. ಬದಲಾವಣೆಗಳು ಕೇವಲ ಕಾಂಗ್ರೆಸ್‌ಗೆ ಸೀಮಿತವಲ್ಲ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ಗೊಂದಲಗಳಿವೆ ಮತ್ತು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. ಮುಖ್ಯಮಂತ್ರಿಯಾದ ನಂತರ ದಲಿತ ಸಿಎಂ ನೀಡಬೇಕು, ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ತಮ್ಮ ಹಿಂದಿನ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ರಾಜಣ್ಣ ಹೇಳಿದ್ದಾರೆ. ಆದರೆ, ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದ್ದು, ಅದರ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಂತ್ರಿಗಳು ಹೈಕಮಾಂಡ್ ಭೇಟಿ ಮಾಡಲು ಹೋಗಿರುವುದು ಸ್ಥಾನ ಕಳೆದುಕೊಳ್ಳುವ ಭೀತಿಯಿಂದಲ್ಲ, ಬದಲಿಗೆ ಪಕ್ಷದ ಕೆಲಸಕ್ಕಾಗಿ ತಮ್ಮನ್ನು ನಿಯೋಜಿಸುವಂತೆ ಬೇಡಿಕೆ ಇಡಲು ಎಂದು ಕೆ.ಎನ್. ರಾಜಣ್ಣ ವಿವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ದಿಢೀರ್​​ ಸಭೆಯ ಕಾರಣ ಇನ್ನೂ ನಿಗೂಢ – Kannada News | High Command’s Sudden Meeting With DK Shivakumar, Siddaramaiah Sparks Speculation in Karnataka Congress

ನವದೆಹಲಿ/ ಬೆಂಗಳೂರು, ಮೇ 26: ಕಾಂಗ್ರೆಸ್ ಹೈಕಮಾಂಡ್‌ ನಾಯಕರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್​​ ಗಾಂಧಿ,  ವೇಣುಗೋಪಾಲ್, ಮತ್ತು ಸುರ್ಜೆವಾಲ ಸೇರಿದಂತೆ ಹಿರಿಯ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದು, ಸಭೆಯ ಅಜೆಂಡಾ ಗೌಪ್ಯವಾಗಿಯೇ ಉಳಿದಿದೆ. ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಕೂಡ ಚರ್ಚೆಯ ಮುಖ್ಯ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ವರದಿಯಾಗಿದ್ದು, ಹೈಕಮಾಂಡ್​​ ಕೂಡ ಈ ವಿಚಾರದಲ್ಲಿ ರಹಸ್ಯ ಕಾದುಕೊಂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು: ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ! – Kannada News | Bengaluru Drug Racket: CCB Seizes Hydro Ganja Worth Rs 3 Crore Hidden in Snacks Boxes Sent via Foreign Post Office

ಬೆಂಗಳೂರು ಹೈಡ್ರೋ ಗಾಂಜಾ ಜಪ್ತಿImage Credit source: tv9

ಬೆಂಗಳೂರು, ಮೇ 26: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಿದೇಶಿ ಮೂಲದ ಹೈಟೆಕ್ ಮಾದಕ ವಸ್ತುಗಳ ಜಾಲವನ್ನು ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ಮತ್ತೊಮ್ಮೆ ಯಶಸ್ವಿಯಾಗಿ ಭೇದಿಸಿದ್ದಾರೆ. ಅಮೆರಿಕ ಮತ್ತು ಥಾಯ್ಲೆಂಡ್‌ನಿಂದ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್‌ಗೆ (Foreign Post Office) ಪಾರ್ಸೆಲ್ ಮೂಲಕ ಬಂದಿದ್ದ ಭಾರಿ ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾಮಾನ್ಯ ತಿಂಡಿ ತಿನಿಸುಗಳ ‘ಸ್ನಾಕ್ಸ್ ಬಾಕ್ಸ್’ ಒಳಗಡೆ ಅತ್ಯಂತ ಚಾಣಾಕ್ಷತನದಿಂದ ಮುಚ್ಚಿಡಲಾಗಿದ್ದ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು (Hydro Ganja) ಜಪ್ತಿ ಮಾಡಲಾಗಿದೆ.

ಮುಖ್ಯಾಂಶಗಳು

  • ಸ್ನಾಕ್ಸ್ ಬಾಕ್ಸ್‌ನಲ್ಲಿ ಅಡಗಿಸಿಟ್ಟು ಅಮೆರಿಕ ಹಾಗೂ ಥಾಯ್ಲೆಂಡ್​​ನಿಂದ ಕಳುಹಿಸಲಾಗಿದ್ದ ಹೈಟೆಕ್ ಮಾದಕ ವಸ್ತು ಜಪ್ತಿ.
  • ಅಂಚೆ ಕಚೇರಿ ಸಿಬ್ಬಂದಿ ನೀಡಿದ ನಿಖರವಾದ ಅನುಮಾನಾಸ್ಪದ ಮಾಹಿತಿ ಆಧರಿಸಿ ಸಿಸಿಬಿ ನಡೆಸಿದ ಕ್ಷಿಪ್ರ ದಾಳಿ.
  • ಐಷಾರಾಮಿ ಪಾರ್ಟಿ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ವಿದೇಶದಿಂದ ಅಂಚೆ ಮೂಲಕ ಡ್ರಗ್ಸ್ ಸಾಗಾಟ.

ಅಂಚೆ ಇಲಾಖೆಯೇ ಜಾಲದ ಪ್ರಮುಖ ಟಾರ್ಗೆಟ್

ವಿದೇಶಿ ಪೋಸ್ಟ್ ಆಫೀಸ್‌ನಲ್ಲಿದ್ದ ಕೆಲವು ಪಾರ್ಸೆಲ್‌ಗಳ ಮೇಲೆ ಅನುಮಾನ ಗೊಂಡ ಅಂಚೆ ಕಚೇರಿ ಸಿಬ್ಬಂದಿ ತಕ್ಷಣವೇ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಸಿಬಿ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಪಾರ್ಸೆಲ್ ಓಪನ್ ಮಾಡಿದಾಗ ಹೈಡ್ರೋ ಗಾಂಜಾ ಪತ್ತೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಅಂಚೆ ಇಲಾಖೆ ಮತ್ತು ಕಸ್ಟಮ್ಸ್ ಕಣ್ಣು ತಪ್ಪಿಸಿ ಇಂತಹ ಐಷಾರಾಮಿ ಡ್ರಗ್ಸ್ ತರಿಸುವ ಜಾಲ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಈ ಹಿಂದೆ ಕೂಡ ಸಿಸಿಬಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಅಂಚೆ ಕಚೇರಿಗಳ ಮೇಲೆ ಜಂಟಿ ದಾಳಿ ನಡೆಸಿ ನೆದರ್‌ಲ್ಯಾಂಡ್ಸ್, ಯುಎಸ್ ಮತ್ತು ಯುಕೆ ಮೂಲದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ವಿವಿಧ ಐಷಾರಾಮಿ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 34 ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ; 8 ಮಂದಿ ಬಂಧನ

ಅಷ್ಟೇ ಅಲ್ಲದೆ, ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್‌ಗಳನ್ನು ಜಪ್ತಿ ಮಾಡಿ ಪೆಡ್ಲರ್‌ಗಳನ್ನು ಹೆಡೆಮುರಿ ಕಟ್ಟಲಾಗಿತ್ತು. ಸದ್ಯ ಈ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಪಾರ್ಸೆಲ್ ಯಾರ ಹೆಸರಿಗೆ ಬುಕ್ ಆಗಿತ್ತು ಮತ್ತು ಬೆಂಗಳೂರಿನಲ್ಲಿ ಇದರ ಅಂತಿಮ ರಿಸೀವರ್ಸ್ ಯಾರು ಎಂಬ ಜಾಲದ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:24 pm, Tue, 26 May 26

Source link

ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು – Kannada News | FII Exit from India: Why Foreign Investors are Leaving & When They’ll Return

ಗ್ಲೋಬ್​ನಲ್ಲಿ ಭಾರತImage Credit source: Getty Images

ನವದೆಹಲಿ, ಮೇ 26: ಭಾರತದ ಮಾರುಕಟ್ಟೆಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಕಳೆದ ಒಂದು-ಒಂದೂವರೆ ವರ್ಷದಿಂದ ಸಾಲು ಸಾಲಾಗಿ ನಿರ್ಗಮಿಸುತ್ತಿದ್ದಾರೆ. ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಈ ವಿದೇಶೀ ಹೂಡಿಕೆಗಳ ಹೊರಹರಿವು ಯಾಕಾಗಿ ಆಗುತ್ತಿದೆ? ಮತ್ತೆ ಮರಳಿ ಬರುವ ಸಾಧ್ಯತೆ ಇದೆಯಾ? ಯೆಸ್ ಸೆಕ್ಯೂರಿಟೀಸ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮರ್ ಕೆ ಅಂಬಾನಿ (Amar K Ambani) ಅವರು ಈ ವಿಚಾರದ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದ್ದು, ಅವರ ಪ್ರಕಾರ ಜಾಗತಿಕ ಮತ್ತು ದೇಶೀಯ ಆರ್ಥಿಕ ಬದಲಾವಣೆಗಳಿಂದಾಗಿ ವಿದೇಶಿ ಬಂಡವಾಳವು ಭಾರತದಿಂದ ಬೇರೆಡೆಗೆ ಹರಿಯುತ್ತಿದೆಯಂತೆ. ಹಾಗೆಯೇ, ಈ ವಿದೇಶೀ ಹೂಡಿಕೆಗಳು ತತ್​ಕ್ಷಣಕ್ಕೆ ಭಾರತಕ್ಕೆ ಮರಳಿ ಬರುವ ಸಾಧ್ಯತೆ ಇಲ್ಲ ಎಂದೂ ಹೇಳಿದ್ದಾರೆ. ಆ ಹೂಡಿಕೆಗಳು ಮರಳಿ ಬರಬೇಕೆಂದರೆ ಪೂರಕವಾಗಿರುವ ಮೂರು ರೀತಿಯ ಸನ್ನಿವೇಶಗಳು ಇರಬೇಕಾಗುತ್ತದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಅವರು ಭಾರತದಿಂದ ಎಫ್​ಐಐಗಳು ದೂರ ಉಳಿಯಲು ಏನು ಕಾರಣ ಮತ್ತು ಅವು ಮರಳಿ ಬರಬೇಕಾದರೆ ಯಾವ ಸ್ಥಿತಿ ಇರಬೇಕು ಎಂಬುದನ್ನು ವಿಶ್ಲೇಷಿಸಿದ್ದಾರೆ.

FIIಗಳು ಭಾರತದಿಂದ ದೂರ ಉಳಿಯಲು ಮುಖ್ಯ ಕಾರಣಗಳು

  • ದೀರ್ಘಾವಧಿಯ ಹಿಂಜರಿತ: FIIಗಳ ಈ ನಿರಾಸಕ್ತಿ ಕೇವಲ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಲೆಯ ಬಳಿಕ ಶುರುವಾಗಿದ್ದಲ್ಲ. ಇದು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಲೇ ಆರಂಭವಾಗಿದೆ. 2003 ರಿಂದ 2008 ರ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಗೆ ಹರಿದುಬಂದ ಒಟ್ಟು ಮಾರುಕಟ್ಟೆ ಬಂಡವಾಳದ (Market Cap) ಶೇಕಡಾವಾರು ಪ್ರಮಾಣದಷ್ಟು ದೊಡ್ಡ ಹಣ ಆ ನಂತರದ ವರ್ಷಗಳಲ್ಲಿ ಬಂದಿಲ್ಲ.
  • ಡಾಲರ್ ಎದುರು ದುರ್ಬಲ ಲಾಭ: ವಿದೇಶಿ ಹೂಡಿಕೆದಾರರಿಗೆ ಡಾಲರ್ ರೂಪದಲ್ಲಿ ಭಾರತದಿಂದ ಸಿಗುತ್ತಿರುವ ಆದಾಯವು ತುಂಬಾ ಸಾಧಾರಣವಾಗಿದೆ. ಜೊತೆಗೆ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು ಅವರಿಗೆ ನಷ್ಟ ಉಂಟುಮಾಡುತ್ತಿದೆ. ಇದೇ ಸಮಯದಲ್ಲಿ ಅಮೆರಿಕದ ಪ್ರಮುಖ 7 ತಂತ್ರಜ್ಞಾನ ಕಂಪನಿಗಳು (Magnificent Seven) ಜಾಗತಿಕವಾಗಿ ಭಾರಿ ಲಾಭ ತಂದುಕೊಟ್ಟಿವೆ.
  • AI ಕ್ರಾಂತಿಯ ಕೊರತೆ: ಜಾಗತಿಕ ಹೂಡಿಕೆ ನಿಧಿಗಳು ಭಾರತವನ್ನು “ಹಳೆಯ ಆರ್ಥಿಕತೆ” (Old Economy) ಹೊಂದಿರುವ ಮಾರುಕಟ್ಟೆಯಾಗಿ ನೋಡುತ್ತಿವೆ. ಅಮೆರಿಕ, ತೈವಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಇರುವಂತೆ ಹೂಡಿಕೆಗೆ ಪೂರಕವಾದ ಪ್ರಮುಖ AI ಆಧಾರಿತ ಕಂಪನಿಗಳು ಭಾರತದಲ್ಲಿ ಹೆಚ್ಚಾಗಿ ಇಲ್ಲ. ಹಾಗಾಗಿ ಜಾಗತಿಕ ಹಣ ಆ ದೇಶಗಳತ್ತ ಮುಖ ಮಾಡಿದೆ.
  • ತೆರಿಗೆ ನೀತಿಗಳ ಬದಲಾವಣೆ: ಭಾರತದಲ್ಲಿ ಎಫ್ ಆಂಡ್ ಒ (F&O) ಮೇಲಿನ ತೆರಿಗೆ, ಗಾರ್ (GAAR) ನಿಯಮಗಳು ಮತ್ತು ಮಾರಿಷಸ್ ಮೂಲದ ಹೂಡಿಕೆದಾರರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿಗಳನ್ನು ರದ್ದುಗೊಳಿಸಿರುವುದು ವಿದೇಶಿ ಹೂಡಿಕೆದಾರರಿಗೆ ಭಾರತದ ಮೇಲಿನ ಆಕರ್ಷಣೆ ತಗ್ಗಿಸಿದೆ ಎಂದು ಅಮರ್ ಕೆ. ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

FIIಗಳು ಮರಳಿ ಬರಲು ಬೇಕು ಈ 3 ಟ್ರಿಗರ್ಸ್ (ಪ್ರಚೋದಕಗಳು)

ಅಮರ್ ಅಂಬಾನಿ ಅವರ ಪ್ರಕಾರ, ವಿದೇಶಿ ಹೂಡಿಕೆದಾರರು ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಮರಳಿ ಬರಬೇಕಾದರೆ ಈ ಮೂರು ಸನ್ನಿವೇಶಗಳಲ್ಲಿ ಯಾವುದಾದರೂ ಒಂದು ಸಂಭವಿಸಬೇಕು:

  1. ಷೇರುಗಳ ಮೌಲ್ಯ ಅತ್ಯಂತ ಅಗ್ಗವಾದಾಗ: ಭಾರತೀಯ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಅಥವಾ ಮೌಲ್ಯಮಾಪನವು ತೀರಾ ತಳಮಟ್ಟಕ್ಕೆ ಇಳಿದು, ಹೂಡಿಕೆಗೆ ಅತ್ಯಂತ ಆಕರ್ಷಣೀಯ ಎನಿಸಿದಾಗ ಮಾತ್ರ (Valuations hit rock bottom) ಅವರು ಬರುತ್ತಾರೆ.
  2. ಐಪಿಒ (IPO) ಮಾರುಕಟ್ಟೆ ಭರ್ಜರಿಯಾಗಿ ಚೇತರಿಸಿಕೊಂಡಾಗ: ಮಾರುಕಟ್ಟೆಯಲ್ಲಿ ಹೊಸ ಮತ್ತು ದೊಡ್ಡ ಕಂಪನಿಗಳ ಐಪಿಒ ಚಟುವಟಿಕೆಗಳು ವ್ಯಾಪಕವಾಗಿ ಹೆಚ್ಚಾದಾಗ ವಿದೇಶಿ ಬಂಡವಾಳ ಹರಿದುಬರಬಹುದು.
  3. ಜಾಗತಿಕ ಮಾರುಕಟ್ಟೆಗಳು ಅತಿ ಬಳಕೆಯಾದಾಗ: ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆ ಅಪಾಯಕಾರಿ ಎನಿಸಿದಾಗ, ತಮ್ಮ ಹೂಡಿಕೆಯನ್ನು ವೈವಿಧ್ಯಮಯಗೊಳಿಸಲು (Diversification) ಭಾರತ ಅವರಿಗೆ ಸುರಕ್ಷಿತ ಆಯ್ಕೆಯಾಗಿ ಕಾಣಿಸಬಹುದು.

ಇದನ್ನೂ ಓದಿ: ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್​ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ

ಇತರ ಪ್ರಮುಖ ಆರ್ಥಿಕ ಮುನ್ಸೂಚನೆಗಳು

ಯೆಸ್ ಸೆಕ್ಯೂರಿಟೀಸ್​ನ ಕಾರ್ಯವಾಹಕ ನಿರ್ದೇಶಕರಾದ ಅಮರ್ ಅಂಬಾನಿ ಅವರು ಇತರ ಕೆಲ ಆರ್ಥಿಕ ಮುನ್ಸೂಚನೆಗಳನ್ನು ನೀಡಿದ್ದಾರೆ. ಕಾರ್ಪೊರೇಟ್ ಗಳಿಕೆಯ ಕುಸಿತ, ಹಣದುಬ್ಬರ ಏರಿಕೆ; ಜಾಗತಿಕ ಮಾರುಕಟ್ಟೆ ಅಲುಗಾಟವು ಭಾರತೀಯ ಮಾರುಕಟ್ಟೆಯ ಮುನ್ನಡೆಗೆ ಅಡ್ಡಗಾಲಾಗಿದೆ ಎನ್ನುತ್ತಾರೆ. ಖಾಸಗಿ ವಲಯದ ಉದ್ಯಮಗಳ ಸಾಮರ್ಥ್ಯ ಬಳಕೆ ಸದ್ಯ ಶೇ. 74-75ರಷ್ಟಿದ್ದು ಅದು ಶೇ. 80 ದಾಟಿದಾರ ಹೊಸ ಹೂಡಿಕೆಗಳು ಬರಬಹುದು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್​​ – Kannada News | Karnataka MLC Elections: Date Announced for 7 Council Seats; Voting on June 18, Results on Same Day

ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ

ಬೆಂಗಳೂರು, ಮೇ 26: ರಾಜ್ಯಸಭಾ ಚುನಾವಣೆಯ ಘೋಷಣೆ ಬೆನ್ನಲ್ಲೇ ಕರ್ನಾಟಕದ ವಿಧಾನಪರಿಷತ್ ಎಲೆಕ್ಷನ್​​ಗೂ ದಿನಾಂಕ ಪ್ರಕಟಗೊಂಡಿದೆ. ಜೂನ್ 26ರಂದು ತೆರವಾಗಲಿರುವ ಪರಿಷತ್​​ನ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್​​ನ 3, ಬಿಜೆಪಿಯ 3 ಮತ್ತು ಜೆಡಿಎಸ್​​ನ ಒಂದು ಸದಸ್ಯರ ಅವಧಿ ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಆಕಾಂಕ್ಷಿಗಳು ಅಲರ್ಟ್​​ ಆಗಿದ್ದು, ಸ್ಥಾನ ಗಿಟ್ಟಿಸಲು ಕಾರ್ಯಕತಂತ್ರ ಶುರುಮಾಡಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕದ ವಿಧಾನಪರಿಷತ್​​ ಚುನಾವಣೆಗೆ ದಿನಾಂಕ ಘೋಷಣೆ
  • ಜೂನ್ 26ರಂದು ತೆರವಾಗಲಿರುವ ಪರಿಷತ್​​ನ 7 ಸ್ಥಾನಗಳಿಗೆ ಎಲೆಕ್ಷನ್​​
  • ಜೂನ್ 18ರಂದು 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ

ವೇಳಾಪಟ್ಟಿ

ಚುನಾವಣೆ ಅಧಿಸೂಚನೆ: ಜೂನ್​​ 01

ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಜೂನ್​​ 08

ನಾಮಪತ್ರ ಪರಿಶೀಲನೆ: ಜೂನ್​​ 09

ನಾಮಪತ್ರ ಹಿಂಪಡೆಯಲು ಕೊನೇ ದಿನ: ಜೂನ್​​ 11

ಮತದಾನ: ಜೂನ್​​ 18

ಫಲಿತಾಂಶ: ಜೂನ್​​ 18

ಇದನ್ನೂ ಓದಿ: ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ; ಬೆಂಗಳೂರಿನಲ್ಲಿ ಜಮೀರ್ ಸಿಎಂ ಆಗಲಿ ಎಂದ ಸ್ವಾಮೀಜಿಯ ವಿಡಿಯೋ ವೈರಲ್!

ಯಾವೆಲ್ಲ ಸದಸ್ಯರ ಅವಧಿ ಮುಕ್ತಾಯ?

ಬಿ.ಕೆ. ಹರಿಪ್ರಸಾದ್​​, ನಾಸೀರ್​​ ಅಹ್ಮದ್​​, ತಿಪ್ಪಣ್ಣ, ಪ್ರತಾಪ್​​ ಸಿಂಹ ನಾಯಕ್​​, ಎನ್​​. ನಾಗರಾಜು (ಎಂಟಿಬಿ), ಸುನಿಲ್​​ ವಲ್ಯಾಪುರ ಮತ್ತು ಗೋವಿಂದರಾಜು ಅವರ ಅಧಿಕಾರ ಅವಧಿಯು ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಇನ್ನು ವಿಧಾನ ಸಭೆಯ ಹಾಲಿ ಬಲಾಬಲವನ್ನು ಗಮನಿಸಿದರೆ ತೆರವಾಗಲಿರುವ 7 ಸ್ಥಾನಗಳ ಪೈಕಿ 5 ಸ್ಥಾನಗಳು ಕಾಂಗ್ರೆಸ್​​ ಮತ್ತು 2 ಸ್ಥಾನಗಳು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಆ ಮೂಲಕ ಕಾಂಗ್ರೆಸ್​​ 2 ಸ್ಥಾನಗಳನ್ನು ಹೆಚ್ಚಿಸಿಕೊಂಡರೆ, ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್​​ ತಲಾ 1 ಸ್ಥಾನಗಳನ್ನು ಕಳೆದುಕೊಳ್ಳುವ ಲೆಕ್ಕಾಚಾರ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version