ನಾಯಿ ಕಡಿತವನ್ನು ಲೈಟಾಗಿ ತಗೋಬೇಡಿ, ನಿಮಗೂ ಈ ಪರಿಸ್ಥಿತಿ ಬರಬಹುದು ಎಚ್ಚರ!: ರೇಬಿಸ್ ಲಸಿಕೆ ನಿರ್ಲಕ್ಷಿಸಿದಕ್ಕೆ ಹೋಯಿತು ಯುವಕನ ಪ್ರಾಣ – Kannada News | Dog Bite Warning: Don’t Neglect Rabies Vaccine – Bagalakote Tragedy Highlights Risk

ಬಾಗಲಕೋಟೆ, ಮೇ.26: ಹುಚ್ಚು ನಾಯಿ ಕಚ್ಚಿದ ನಂತರ ಸಕಾಲದಲ್ಲಿ ರೇಬಿಸ್ ನಿರೋಧಕ ಲಸಿಕೆ (Rabies Vaccine) ಹಾಕಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ, ಯುವಕನೊಬ್ಬ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೋಲಸಂಗಿ ಗ್ರಾಮದ ನಿವಾಸಿ ಪ್ರದೀಪ್ ಚಂದ್ರಶೇಖರ ಹಳೇರೊಳ್ಳಿ (22) ಎಂದು ಗುರುತಿಸಲಾಗಿದೆ. ನಾಯಿ ಕಚ್ಚಿದ ನಂತರ ಅದಕ್ಕೆ ಬೇಕಾದ ಚಿಕಿತ್ಸೆಗಳನ್ನು ಪಡೆಯುವುದು ಕಡ್ಡಾಯ. ಒಂದು ವೇಳೆ ಚಿಕಿತ್ಸೆ ಪಡೆಯದಿದ್ದರೆ ಸಾವು ಖಂಡಿತ.

ಮೂಲಗಳ ಪ್ರಕಾರ, ಕಳೆದ ಮಾರ್ಚ್ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದಲ್ಲಿ ನಡೆದಿದ್ದ ‘ಮನ್ನಿಕೇರಿ ಚಂದ್ರಾದೇವಿ ಜಾತ್ರೆ’ಗೆ ಪ್ರದೀಪ್ ತೆರಳಿದ್ದನು. ಈ ಸಂದರ್ಭದಲ್ಲಿ ಆತನಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಆದರೆ, ಪ್ರದೀಪ್ ಇದನ್ನು ಗಂಭೀರವಾಗಿ ಪರಿಗಣಿಸದೆ, ಆಸ್ಪತ್ರೆಗೆ ತೆರಳಿ ಸೂಕ್ತವಾದ ಲಸಿಕೆಗಳನ್ನು ಹಾಕಿಸಿಕೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದನು ಎನ್ನಲಾಗಿದೆ.

ನಾಯಿ ಕಚ್ಚಿದ ಎರಡು ತಿಂಗಳ ಬಳಿಕ, ಅಂದರೆ ಒಂದು ವಾರದ ಹಿಂದೆ ಪ್ರದೀಪ್ ದೇಹದಲ್ಲಿ ರೇಬಿಸ್ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣ ಆತನನ್ನು ನಿಡಗುಂದಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಬಾಗಲಕೋಟೆಯ ಕೆರೂಡಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿಂದ ನಿನ್ನೆ (ಮೇ 25) ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ರೇಬಿಸ್ ವೈರಸ್ ಇಡೀ ದೇಹವನ್ನು ಆವರಿಸಿತ್ತು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಪ್ರದೀಪ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಇದನ್ನು ಓದಿ: ಪೊಲೀಸರನ್ನ ಕಂಡು ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ ರೌಡಿ ‘ಸ್ಪಾಟ್ ನಾಗ’; ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರಿದ ಕಿರಾತಕ!

ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ನಾಯಿ ಕಡಿತಕ್ಕೊಳಗಾದ ತಕ್ಷಣವೇ ಲಸಿಕೆ ಪಡೆಯುವುದು ಎಷ್ಟು ಕಡ್ಡಾಯ ಎಂಬುದಕ್ಕೆ ಈ ದುರಂತ ಸಾಕ್ಷಿಯಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಕೂಡ ಆಗ್ಗಾಗೆ ಎಚ್ಚರಿಕೆಯನ್ನು ಹಾಗೂ ಜಾಗೃತಿಯನ್ನು ಮೂಡಿಸುತ್ತಿದೆ. ಅದರೂ ಇಂತಹ ನಿರ್ಲಕ್ಷ್ಯ ಸಾವಿಗೆ ಕಾರಣವಾಗಬಹುದು.

ರಾಜ್ಯದ ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸದ್ಯಕ್ಕಂತೂ ಸೆಟ್ಟೇರಲ್ಲ ಮಹೇಶ್​ ಬಾಬು-ಪ್ರಶಾಂತ್ ನೀಲ್ ಸಿನಿಮಾ; ಇಲ್ಲಿದೆ ಕಾರಣಗಳ ಪಟ್ಟಿ – Kannada News | Mahesh Babu and Prashanth Neel Movie: Why the Dream Project Faces Long Delays

ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಮತ್ತು ಸ್ಯಾಂಡಲ್‌ವುಡ್ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾಗಾಗಿ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರಾಗನ್’ ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾದ ಬೆನ್ನಲ್ಲೇ ಈ ಗಾಸಿಪ್‌ಗೆ ಮತ್ತಷ್ಟು ರೆಕ್ಕೆಪುಕ್ಕೆ ಬಂದಿದೆ. ಮಹೇಶ್ ಬಾಬು ಅವರು ತಮ್ಮ ಮುಂಬರುವ ‘ವಾರಣಾಸಿ’ ಚಿತ್ರವನ್ನು ಮುಗಿಸಿದ ನಂತರ ಪ್ರಶಾಂತ್ ನೀಲ್ ಜೊತೆ ಬಿಗ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ.ಆದರೆ, ಪ್ರ್ಯಾಕ್ಟಿಕಲ್ ಆಗಿ ನೋಡಿದರೆ ಅದು ಸದ್ಯಕ್ಕೆ ಸಂಭವಿಸುವುದಿಲ್ಲ.

ಮಹೇಶ್ ಬಾಬು ತಮ್ಮ ಕ್ಲಾಸ್ ಮತ್ತು ಮಾಸ್ ನಟನೆಯ ಮೂಲಕ ಸೌತ್ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದವರು. ಇತ್ತ ಪ್ರಶಾಂತ್ ನೀಲ್ ಕೂಡ ‘ಕೆಜಿಎಫ್’ ಮತ್ತು ‘ಸಲಾರ್’ ಚಿತ್ರಗಳ ಭರ್ಜರಿ ಯಶಸ್ಸಿನ ಮೂಲಕ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿದವರು. ಹೀಗಾಗಿ, ಸದಾ ವಿಭಿನ್ನ ಆಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಇವರಿಬ್ಬರು ಒಂದೇ ವೇದಿಕೆಗೆ ಬಂದರೆ ಆ ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇತ್ತೀಚೆಗಷ್ಟೇ ಪ್ರಶಾಂತ್ ನೀಲ್ ಕೂಡ ‘ಡ್ರಾಗನ್’ ಸಿನಿಮಾ ನಂತರ ತಾವು ಸದ್ಯಕ್ಕೆ ತಮ್ಮ ಎಂದಿನ ಡಾರ್ಕ್ ಶೇಡ್ ಆಕ್ಷನ್ ಶೈಲಿಯ ಸಿನಿಮಾಗಳಿಗೆ ಬ್ರೇಕ್ ನೀಡಲಿದ್ದೇನೆ ಎಂದು ಸುಳಿವು ನೀಡಿದ್ದರು. ಇದು ಮಹೇಶ್ ಬಾಬು ಅವರೊಂದಿಗಿನ ಕ್ಲಾಸ್-ಮಾಸ್ ಸಿನಿಮಾದ ಮುನ್ಸೂಚನೆ ಎಂದೇ ಭಾವಿಸಲಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಈ ಕಾಂಬಿನೇಷನ್ ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ಸಿನಿಮಾ ತಡವಾಗಲು ಅಸಲಿ ಕಾರಣಗಳು ಇಲ್ಲಿವೆ:

ಪ್ರಶಾಂತ್ ನೀಲ್ ಬಿಡುವಿಲ್ಲದ ಶೆಡ್ಯೂಲ್:

ಪ್ರಶಾಂತ್ ನೀಲ್ ಸದ್ಯ ‘ಡ್ರಾಗನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಮೂಡಿಬರುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಅವರು ಬಹುನಿರೀಕ್ಷಿತ ‘ಸಲಾರ್ 2’ ಚಿತ್ರದ ಕೆಲಸಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ ಈ ಸೀಕ್ವೆಲ್ ಮೇಲೆ ಹಿಮಾಲಯದಷ್ಟು ನಿರೀಕ್ಷೆ ಇರುವುದರಿಂದ, ನೀಲ್ ಅವರು ಮತ್ತೊಂದು ಪ್ರಾಜೆಕ್ಟ್‌ಗಾಗಿ ಇದನ್ನು ಮುಂದೂಡುವ ಸಾಧ್ಯತೆ ತೀರಾ ಕಡಿಮೆ.

ಮಹೇಶ್ ಬಾಬು ಅವರ ಮುಂದಿನ ಲೈನ್‌ಅಪ್:

ಮಹೇಶ್ ಬಾಬು ಅವರ ಕಾಲ್‌ಶೀಟ್ ಕೂಡ ಮುಂದಿನ ಕೆಲವು ವರ್ಷಗಳವರೆಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಸದ್ಯದ ಪ್ರಾಜೆಕ್ಟ್‌ಗಳನ್ನು ಮುಗಿಸಿದ ನಂತರ ಅವರು ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿಯಿದೆ. ಒಂದು ವೇಳೆ ಈ ಪ್ಲಾನ್ ಗ್ರೀನ್ ಸಿಗ್ನಲ್ ಪಡೆದರೆ ಮಹೇಶ್ ಬಾಬು ಅವರ ಮುಂದಿನ ಮೂರ್ನಾಲ್ಕು ವರ್ಷಗಳ ಲೈನ್‌ಅಪ್ ಲಾಕ್ ಆಗಲಿದೆ.

ಈ ಎಲ್ಲಾ ಪ್ರಮುಖ ಕಾರಣಗಳಿಂದಾಗಿ ಮಹೇಶ್ ಬಾಬು ಹಾಗೂ ಪ್ರಶಾಂತ್ ನೀಲ್ ಅವರ ಸಿನಿಮಾ ಕೇವಲ ಗಾಸಿಪ್ ಅಥವಾ ಕಲ್ಪನೆಯಾಗಿಯೇ ಉಳಿಯುವಂತಿದೆ. ತೆರೆಮರೆಯಲ್ಲಿ ಇವರಿಬ್ಬರ ನಡುವೆ ಕಥೆಯ ಚರ್ಚೆಗಳು ನಡೆಯುತ್ತಿದ್ದರೂ ಸಹ, ಈ ಚಿತ್ರ ಅಧಿಕೃತವಾಗಿ ಸೆಟ್ಟೇರಲು ಇನ್ನು ಸಾಕಷ್ಟು ಸಮಯ ಕಾಯಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೇಸಿಗೆ ವಿಶೇಷ ರೈಲುಗಳ ಸಂಚಾರ ಒಂದು ತಿಂಗಳು ವಿಸ್ತರಣೆ! ಇಲ್ಲಿದೆ ಪೂರ್ಣ ವಿವರ – Kannada News | Good News for Rail Passengers: SWR Extends Summer Special Trains Until June End; Check Route and Train List Here

ಸಾಂದರ್ಭಿಕ ಚಿತ್ರImage Credit source: South Western Railway

ಬೆಂಗಳೂರು, ಮೇ 26: ಬೇಸಿಗೆಯ ರಜೆ ಮುಗಿಸಿ ಊರುಗಳಿಗೆ ಹಾಗೂ ಕೆಲಸದ ಸ್ಥಳಗಳಿಗೆ ಮರಳುವ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ (SWR) ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾರ್ವಜನಿಕರ ದಟ್ಟಣೆ ನಿಯಂತ್ರಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸದ್ಯ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬೇಸಿಗೆ ವಿಶೇಷ ರೈಲುಗಳ (Summer Special Trains) ಅವಧಿಯನ್ನು ಜೂನ್ ತಿಂಗಳ ಕೊನೆಯ ವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ಈ ಎಲ್ಲಾ ವಿಶೇಷ ರೈಲುಗಳು ಈಗ ಅಸ್ತಿತ್ವದಲ್ಲಿರುವ ವೇಳಾಪಟ್ಟಿ, ನಿಲುಗಡೆ (Stoppages) ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ (Composition) ಸಂಚರಿಸಲಿವೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಖ್ಯಾಂಶಗಳು

  • ಹುಬ್ಬಳ್ಳಿ, ಬೆಂಗಳೂರು ಮಾರ್ಗದ ಪ್ರಮುಖ ವಿಶೇಷ ರೈಲುಗಳ ಸಂಚಾರ ಜೂನ್ ಅಂತ್ಯದವರೆಗೆ ವಿಸ್ತರಣೆ.
  • ಸದ್ಯ ಇರುವ ಹಳೆಯ ರೈಲು ಸಮಯ, ನಿಲುಗಡೆ ಹಾಗೂ ಬೋಗಿಗಳ ವ್ಯವಸ್ಥೆಯಲ್ಲೇ ಮುಂದುವರಿಕೆ.
  • ತಾಂತ್ರಿಕ ಕಾಮಗಾರಿ ಹಿನ್ನೆಲೆ ಕೆಲವು ನಿರ್ದಿಷ್ಟ ದಿನಗಳಂದು ಮಾತ್ರ ರೈಲು ಸೇವೆ ರದ್ದು.

ರೈಲುಗಳ ವಿಸ್ತರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ಹುಬ್ಬಳ್ಳಿ-ರಾಮೇಶ್ವರಂ ಭಾನುವಾರದ ವಿಶೇಷ ರೈಲು (07355) ಜೂನ್ 7 ರಿಂದ 28 ರವರೆಗೆ ಹಾಗೂ ರಾಮೇಶ್ವರಂ-ಹುಬ್ಬಳ್ಳಿ ಸೋಮವಾರದ ರೈಲು (07356) ಜೂನ್ 8 ರಿಂದ 29 ರವರೆಗೆ ವಿಸ್ತರಣೆಗೊಂಡಿದೆ. ಅದೇ ರೀತಿ ಹುಬ್ಬಳ್ಳಿ-ಕೊಲ್ಲಂ ಭಾನುವಾರದ ರೈಲು (07313) ಮೇ 31 ರಿಂದ ಜೂನ್ 21 ರವರೆಗೆ ಮತ್ತು ಕೊಲ್ಲಂ-ಹುಬ್ಬಳ್ಳಿ ಸೋಮವಾರದ ರೈಲು (07314) ಜೂನ್ 1 ರಿಂದ ಜೂನ್ 22 ರವರೆಗೆ ಸಂಚರಿಸಲಿವೆ. ಆದರೆ, ಇಂಜಿನಿಯರಿಂಗ್ ಕಾಮಗಾರಿಗಳ ಕಾರಣದಿಂದಾಗಿ ಹುಬ್ಬಳ್ಳಿ-ಕೊಲ್ಲಂ ರೈಲು ಜೂನ್ 7 ರಂದು ಮತ್ತು ಕೊಲ್ಲಂ-ಹುಬ್ಬಳ್ಳಿ ರೈಲು ಜೂನ್ 8 ರಂದು ರದ್ದಾಗಲಿವೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ

ಮತ್ತೊಂದೆಡೆ, ಬೆಂಗಳೂರಿನ ಎಸ್‌ಎಂವಿಟಿ (SMVT) ನಿಲ್ದಾಣದಿಂದ ತಿರುವನಂತಪುರಂ ಸೆಂಟ್ರಲ್ ನಡುವೆ ಸಂಚರಿಸುವ ಪ್ರಮುಖ ವೀಕ್ಲಿ ಸ್ಪೆಷಲ್ ಟ್ರೈನ್​ಗಳಾದ 06523/06524 (ಸೋಮವಾರ/ಮಂಗಳವಾರ) ಮತ್ತು 06547/06548 (ಬುಧವಾರ/ಗುರುವಾರ) ರೈಲುಗಳ ಸೇವೆಯನ್ನು ಜೂನ್ ನಾಲ್ಕನೇ ವಾರದವರೆಗೆ ವಿಸ್ತರಿಸಲಾಗಿದೆ. ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಶುಕ್ರವಾರದ ರೈಲು (06555) ಜೂನ್ 19 ರಿಂದ 26 ರವರೆಗೆ ಹಾಗೂ ತಿರುವನಂತಪುರಂ-ಎಸ್‌ಎಂವಿಟಿ ಬೆಂಗಳೂರು ಭಾನುವಾರದ ರೈಲು (06556) ಜೂನ್ 21 ರಿಂದ ಜೂನ್ 28 ರವರೆಗೆ ವಿಸ್ತರಣೆಯಾಗಿದೆ.

ಇದನ್ನೂ ಓದಿ: ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ!

ಈ ರೈಲುಗಳ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ವಿವರಗಳನ್ನು ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ (www.enquiry.indianrail.gov.in) ಅಥವಾ NTES ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Padma Awards 2026: ಧರ್ಮೇಂದ್ರ, ಅಲ್ಕಾ, ಮಮ್ಮುಟ್ಟಿ ಸೇರಿ 131 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಧಾನ – Kannada News | President Murmu Presents 131 Padma Awards 2026: Full List and Key Highlights

ದ್ರೌಪದಿ ಮುರ್ಮುImage Credit source: Screen shot from Video

ನವದೆಹಲಿ, ಮೇ 26: ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಮತ್ತು ಅತ್ಯುತ್ತಮ ಕೊಡುಗೆ ನೀಡಿದ ದೇಶದ ಮಹಾನ್ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಪತಿ ಭವನದಲ್ಲಿ ‘ಪದ್ಮ ಪ್ರಶಸ್ತಿ'(Padma Awards)ಗಳನ್ನು ಪ್ರದಾನ ಮಾಡಲಾಗಿದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಇಂದು ಅಧಿಕೃತವಾಗಿ ವಿತರಿಸಲಾಗುತ್ತಿದೆ.

ಪ್ರಶಸ್ತಿಗಳ ವಿವರ ಹೀಗಿದೆ:
ಈ ವರ್ಷ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಲಾಗಿದ್ದು, ಅವುಗಳ ವರ್ಗೀಕರಣ ಈ ಕೆಳಗಿನಂತಿದೆ:

ಪದ್ಮವಿಭೂಷಣ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ): 05

ಪದ್ಮಭೂಷಣ (ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ): 13

ಪದ್ಮಶ್ರೀ (ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ): 113

ಸಾಧಕರ ಪಟ್ಟಿಯ ವಿಶೇಷತೆಗಳು:
ಮಹಿಳಾ ಶಕ್ತಿ: ಈ ಬಾರಿಯ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಒಟ್ಟು 19 ಮಹಿಳೆಯರು ಸ್ಥಾನ ಪಡೆದಿದ್ದಾರೆ.

ವಿದೇಶಿ ಸಾಧಕರು: ಜಾಗತಿಕ ಮಟ್ಟದಲ್ಲಿ ಭಾರತದ ಹೆಗ್ಗಳಿಕೆ ಪಾತ್ರರಾದ ಆರು ವಿದೇಶಿಯರು, ಅನಿವಾಸಿ ಭಾರತೀಯರು (NRI), ಭಾರತೀಯ ಮೂಲದ ವ್ಯಕ್ತಿಗಳು (PIO) ಮತ್ತು ಒಸಿಐ (OCI) ಕಾರ್ಡ್ ಹೊಂದಿರುವ ಸಾಧಕರನ್ನು ಸಹ ಗೌರವಿಸಲಾಗುತ್ತಿದೆ.

ಮರಣೋತ್ತರ ಗೌರವ: ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ 16 ಸಾಧಕರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಯಾವ ಕ್ಷೇತ್ರಗಳಿಗೆ ಪ್ರಶಸ್ತಿ?
ಕಲೆ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಸಾಮಾಜಿಕ ಕಾರ್ಯ, ಕ್ರೀಡೆ, ವ್ಯವಹಾರ, ಕೈಗಾರಿಕೆ ಮತ್ತು ನಾಗರಿಕ ಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ದೇಶದ ಪ್ರಗತಿಗೆ ಶ್ರಮಿಸಿದ ಗಣ್ಯರನ್ನು ಗುರುತಿಸಿ ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅವರ ಪತ್ನಿ ಹೇಮಾ ಮಾಲಿನಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಸೇರಿದಂತೆ 13 ಮಂದಿ ಇತರ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರು.

ಮತ್ತಷ್ಟು ಓದಿ: ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ; ಭಾವುಕರಾದ ಹೇಮಾ ಮಾಲಿನಿ ಮಗಳು

ಪದ್ಮ ವಿಭೂಷಣ ಪ್ರಶಸ್ತಿಗಳು ಸಂದಿದ್ಯಾರಿಗೆ?
ಧರ್ಮೇಂದ್ರ ಸಿಂಗ್ ಡಿಯೋಲ್, ಕೆ ಟಿ ಥಾಮಸ್, ಎನ್ ರಾಜಮ್, ಪಿ ನಾರಾಯಣನ್, ವಿ.ಎಸ್. ಅಚ್ಯುತಾನಂದನ್ ಅವರಿಗೆ ನೀಡಲಾಗಿದೆ.

ಪದ್ಮಭೂಷಣ
ಅಲ್ಕಾ ಯಾಜ್ಞಿಕ್, ಭಗತ್ ಸಿಂಗ್ ಕೋಶ್ಯಾರಿ, ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ, ಮಮ್ಮುಟ್ಟಿ, ಡಾ. ನೋರಿ ದತ್ತಾತ್ರೇಯುಡು, ಪಿಯೂಷ್ ಪಾಂಡೆ, ಎಸ್ ಕೆ ಎಂ ಮೈಲಾನಂದನ್, ಶತಾವಧಾನಿ ಆರ್ ಗಣೇಶ್, ಶಿಬು ಸೊರೆನ್, ಉದಯ್ ಕೊಟಕ್, ವಿ. ಕೆ. ಮಲ್ಹೋತ್ರಾ, ವೆಲ್ಲಪ್ಪಳ್ಳಿ ನಟೇಶನ್, ವಿಜಯ್ ಅಮೃತರಾಜ್ ಪ್ರಶಸ್ತಿಗಳು ಸಂದಿವೆ.

ಪದ್ಮಶ್ರೀ ಪ್ರಶಸ್ತಿ
ಎ ಇ ಮುತ್ತುನಾಯಗಂ, ಅನಿಲ್ ಕುಮಾರ್ ರಸ್ತೋಗಿ, ಅಂಕೇ ಗೌಡ ಎಂ., ಅರ್ಮಿಡಾ ಫೆರ್ನಾಂಡಿಸ್, ಅರವಿಂದ್ ವೈದ್ಯ, ಅಶೋಕ್ ಖಾಡೆ, ಅಶೋಕ್ ಕುಮಾರ್ ಸಿಂಗ್, ಅಶೋಕ್ ಕುಮಾರ್ ಹಲ್ದಾರ್, ಬಲದೇವ್ ಸಿಂಗ್, ಭಗವಾನ್‌ದಾಸ್ ರಾಯ್ಕ್ವಾರ್, ಭರತ್ ಸಿಂಗ್ ಭಾರ್ತಿ, ಭಿಕ್ಲ್ಯಾ ಲಡ್ಕ್ಯಾ ಧಿಂಡಾ, ವಿಶ್ವ ಬಂಧು (ಮರಣೋತ್ತರ), ಬ್ರಿಜ್ ಲಾಲ್ ಭಟ್, ಬುದ್ಧ ರಶ್ಮಿ ಮಣಿ, ಡಾ. ಬುಧಾರಿ ತಾತಿ, ಚಂದ್ರಮೌಳಿ ಗಡ್ಡಮನುಗು, ಚರಣ್ ಹೆಂಬ್ರಾಮ್, ಚಿರಂಜಿ ಲಾಲ್ ಯಾದವ್ ಅವರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ.

ದೀಪಿಕಾ ರೆಡ್ಡಿ, ಧಾರ್ಮಿಕಲಾಲ್ ಚುನ್ನಿಲಾಲ್ ಪಾಂಡ್ಯ,ಗಡ್ಡೆ ಬಾಬು ರಾಜೇಂದ್ರ ಪ್ರಸಾದ್, ಗಫ್ರುದ್ದೀನ್ ಮೇವಾತಿ ಜೋಗಿ, ಗಂಭೀರ್ ಸಿಂಗ್ ಯೋನ್ಜೋನ್, ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ), ಗಾಯತ್ರಿ ಬಾಲಸುಬ್ರಮಣ್ಯಂ ಮತ್ತು ರಂಜನಿ ಬಾಲಸುಬ್ರಮಣ್ಯಂ, ಗೋಪಾಲ್ ಜಿ ತ್ರಿವೇದಿ, ಗುಡೂರು ವೆಂಕಟ ರಾವ್, ಹೆಚ್ ವಿ ಹಂಡೆ, ಹೆಲಿ ಯುದ್ಧ, ಹರಿ ಮಾಧಬ್ ಮುಖೋಪಾಧ್ಯಾಯ, ಹರಿಚರಣ್ ಸೈಕಿಯಾ ಅವರಿಗೆ ಪ್ರಶಸ್ತಿ ಲಭಿಸಿದೆ.

ಹರ್ಮನ್ಪ್ರೀತ್ ಕೌರ್ ಭುಲ್ಲರ್, ಇಂದರ್ಜಿತ್ ಸಿಂಗ್ ಸಿಧು, ಜನಾರ್ದನ ಬಾಪುರಾವ್ ಬೋಥೆ, ಜೋಗೇಶ್ ದೇವೂರಿ, ಜುಜಾರ್ ನಿವಾಸಿಗಳು, ಜ್ಯೋತಿಷ್ ದೇಬನಾಥ್, ಕೆ ಪಳನಿವೇಲ್, ಕೆ ರಾಮಸಾಮಿ, ಕೆ ವಿಜಯ್ ಕುಮಾರ್, ಕವೀಂದ್ರ ಪುರಕಾಯಸ್ಥ, ಕೈಲಾಶ್ ಚಂದ್ರ ಪಂತ್, ಕಲಾಮಂಡಲಂ ವಿಮಲಾ ಮೆನನ್, ಕೇವಲ್ ಕೃಷ್ಣ ಥಕ್ರಾಲ್, ಖೇಮ್ ರಾಜ್ ಸುಂದರಿಯಲ್, ಕೊಲ್ಲಕಲ್ ದೇವಕಿ ಅಮ್ಮ ಜಿ, ಕೃಷ್ಣಮೂರ್ತಿ ಬಾಲಸುಬ್ರಮಣ್ಯಂ, ಕುಮಾರ್ ಬೋಸ್, ಕುಮಾರಸಾಮಿ ತಂಗರಾಜ್, ಲಾರ್ಸ್-ಕ್ರಿಶ್ಚಿಯನ್ ಕೋಚ್, ಲ್ಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ, ಮಾಧವನ್ ರಂಗನಾಥನ್, ಮಗಂತಿ ಮುರಳಿ ಮೋಹನ್, ಮಹೇಂದ್ರ ಕುಮಾರ್ ಮಿಶ್ರಾ, ಮಹೇಂದ್ರ ನಾಥ್ ರೈ, ಮಾಮಿದಲ ಜಗದೇಶ್ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಮಂಗಳಾ ಕಪೂರ್, ಮೀರ್ ಹಾಜಿಭಾಯಿ ಕಸಂಬಾಹಿ, ಮೋಹನ್ ನಗರ, ನಾರಾಯಣ್ ವ್ಯಾಸ್, ನರೇಶ್ ಚಂದ್ರ ದೇವ್ ವರ್ಮಾ, ನೀಲೇಶ್ ವಿನೋದಚಂದ್ರ ಮಂಡಲವಾಲ, ನೂರುದ್ದೀನ್ ಅಹ್ಮದ್, ಒತ್ತುವರ್ ತಿರುತ್ತಣಿ ಸ್ವಾಮಿನಾಥನ್, ಡಾ. ಪದ್ಮಾ ಗುರ್ಮೆತ್, ಪಾಲಕೊಂಡ ವಿಜಯ್ ಆನಂದ್ ರೆಡ್ಡಿ, ಪೋಖಿಲಾ ಲೆಕ್ತೇಪಿ, ಡಾ.ಪ್ರಭಾಕರ ಬಸವಪ್ರಭು ಕೋರೆ, ಪ್ರತೀಕ್ ಶರ್ಮಾ, ಪ್ರವೀಣ್ ಕುಮಾರ್, ಪ್ರೇಮ್ ಲಾಲ್ ಗೌತಮ್, ಪ್ರೊಸೇನ್‌ಜಿತ್ ಚಟರ್ಜಿ, ಡಾ. ಪುಣ್ಣಿಯಮೂರ್ತಿ ನಟೇಶನ್, ಆರ್. ಕೃಷ್ಣನ್ (ಮರಣೋತ್ತರ), ಆರ್‌ವಿಎಸ್ ಮಣಿ, ರಬಿಲಾಲ್ ತುಡು, ರಘುಪತ್ ಸಿಂಗ್ (ಮರಣೋತ್ತರ), ರಘುವೀರ್ ತುಕಾರಾಂ ಖೇಡ್ಕರ್, ರಾಜಸ್ಥಪತಿ ಕಲಿಯಪ್ಪ ಗೌಂಡರ್, ರಾಜೇಂದ್ರ ಪ್ರಸಾದ್, ರಾಮ್ ರೆಡ್ಡಿ ಮಾಮಿಡಿ (ಮರಣೋತ್ತರ), ರಾಮಮೂರ್ತಿ ಶ್ರೀಧರ್, ರಾಮಚಂದ್ರ ಗೋಡಬೋಲೆ ಮತ್ತು ಸುನೀತಾ ಗೋಡಬೋಲೆ, ರತಿಲಾಲ್ ಬೋರಿಸಾಗರ್, ರೋಹಿತ್ ಶರ್ಮಾ, ಎಸ್ ಜಿ ಸುಶೀಲಮ್ಮ, ಸಾಂಗ್ಯುಸಾಂಗ್ ಎಸ್ ಪೊಂಗೆನರ್,ಸಂತ ನಿರಂಜನ್ ದಾಸ್, ಶರತ್ ಕುಮಾರ್ ಪಾತ್ರ, ಸರೋಜ್ ಮಂಡಲ್, ಸತೀಶ್ ಶಾ (ಮರಣೋತ್ತರ), ಸತ್ಯನಾರಾಯಣ್ ನುವಾಲ್, ಸವಿತಾ ಪುನಿಯಾ ಅವರಿಗೆ ನೀಡಲಾಗಿದೆ.

ಪ್ರೊ. ಶಫಿ ಶೌಕ್, ಶಶಿ ಶೇಖರ್ ವೆಂಪತಿ, ಶ್ರೀರಂಗ ದೇವ್‌ಬಾ ಲಾಡ್, ಶುಭಾ ವೆಂಕಟೇಶ್ ಅಯ್ಯಂಗಾರ್, ಶ್ಯಾಮ್ ಸುಂದರ್, ಸೀಮಾಂಚಲ್ ಪಾತ್ರಗಳು, ಶಿವಶಂಕರ್, ಡಾ. ಸುರೇಶ್ ಹನಗವಾಡಿ, ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್, ಟಿ.ಟಿ. ಜಗನ್ನಾಥನ್ (ಮರಣೋತ್ತರ), ತಗಾ ರಾಮ್ ಭಿಲ್, ತರುಣ್ ಭಟ್ಟಾಚಾರ್ಯ, ಟೆಕಿ ಗುಬಿನ್,ತಿರುವರೂರು ಭಕ್ತವತ್ಸಲಂ, ತೃಪ್ತಿ ಮುಖರ್ಜಿ, ವೀಳಿನಾಥನ್ ಕಾಮಕೋಟಿ, ವೇಂಪತಿ ಕುಟುಂಬ ಶಾಸ್ತ್ರಿ, ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ (ಮರಣೋತ್ತರ), ಯುಮ್ನಮ್ ಜತ್ರಾ ಸಿಂಗ್ (ಮರಣೋತ್ತರ) ಅವರಿಗೆ ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vastu Guide: ಮನೆಗೆ ಯಾವ ಬಣ್ಣದ ಶಿವಲಿಂಗ ಶ್ರೇಷ್ಠ? ಖರೀದಿಸುವ ಮುನ್ನ ತಪ್ಪದೇ ಈ ವಾಸ್ತು ನಿಯಮ ತಿಳಿಯಿರಿ – Kannada News | Black vs. White Shiva Linga at Home: Vastu Guide for Peace and Prosperity

ಕಪ್ಪು ಶಿವಲಿಂಗ ಉತ್ತಮವೇ ಅಥವಾ ಬಿಳಿImage Credit source: Ai generated

ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ಮತ್ತು ಶಿವಲಿಂಗ ಪೂಜೆಗೆ ಅತ್ಯಂತ ವಿಶೇಷವಾದ ಮಹತ್ವವಿದೆ. ಶಿವಲಿಂಗವನ್ನು ಬ್ರಹ್ಮಾಂಡ, ಅಗಾಧ ಶಕ್ತಿ ಮತ್ತು ಆಧ್ಯಾತ್ಮಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಮನೆಯ ದೇವರ ಕೋಣೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಬಯಸುತ್ತಾರೆ.

ಆದರೆ, ಮಾರುಕಟ್ಟೆಯಿಂದ ಶಿವಲಿಂಗವನ್ನು ಖರೀದಿಸುವಾಗ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡುವ ದೊಡ್ಡ ಪ್ರಶ್ನೆಯೆಂದರೆ—ಮನೆಗೆ ಕಪ್ಪು ಶಿವಲಿಂಗ ಒಳ್ಳೆಯದೇ ಅಥವಾ ಬಿಳಿ ಶಿವಲಿಂಗವೇ? ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಎರಡೂ ಬಣ್ಣದ ಶಿವಲಿಂಗಗಳು ತಮ್ಮದೇ ಆದ ವಿಶಿಷ್ಟ ಪ್ರಭಾವ ಮತ್ತು ಮಹತ್ವವನ್ನು ಹೊಂದಿವೆ. ಮನೆಯಲ್ಲಿ ಸುಖ-ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸಬೇಕಾದರೆ, ಸರಿಯಾದ ನಿಯಮಗಳ ಅರಿವಿನೊಂದಿಗೆ ಶಿವಲಿಂಗವನ್ನು ಇಡುವುದು ಮುಖ್ಯವಾಗಿದೆ. ಮನೆಗೆ ಯಾವ ಶಿವಲಿಂಗವು ಉತ್ತಮ ಆಯ್ಕೆಯಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಪ್ಪು ಶಿವಲಿಂಗ:

ಕಪ್ಪು ಶಿವಲಿಂಗಗಳನ್ನು ಸಾಮಾನ್ಯವಾಗಿ ನರ್ಮದಾ ನದಿಯಲ್ಲಿ ಸಿಗುವ ವಿಶೇಷ ಕಲ್ಲುಗಳಿಂದ ತಯಾರಿಸಲಾಗುತ್ತದೆ. ಇದನ್ನು ನರ್ಮದೇಶ್ವರ ಶಿವಲಿಂಗ ಎಂದೂ ಕರೆಯುತ್ತಾರೆ. ಈ ಶಿವಲಿಂಗವನ್ನು ಶಕ್ತಿ, ತಪಸ್ಸು ಮತ್ತು ಗಾಂಭೀರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕಪ್ಪು ಶಿವಲಿಂಗ ಇಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಮನೆಯ ಆಧ್ಯಾತ್ಮಿಕ ವಾತಾವರಣವನ್ನು ಬಲಪಡಿಸುತ್ತದೆ. ಮನಸ್ಸಿಗೆ ಸ್ಥಿರತೆಯನ್ನು ನೀಡುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಪ್ಪು ಶಿವಲಿಂಗ ಇಡುವ ಮುನ್ನ ಗಮನಿಸಬೇಕಾದ ಅಂಶ:

ಧಾರ್ಮಿಕ ವಿದ್ವಾಂಸರ ಪ್ರಕಾರ, ಕಪ್ಪು ಶಿವಲಿಂಗದ ಪೂಜೆ ಮತ್ತು ಆರೈಕೆಯಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯಾವುದೇ ನಿಯಮ ಉಲ್ಲಂಘನೆಯಾಗಬಾರದು ಎಂಬ ಕಾರಣಕ್ಕೆ, ಅನೇಕ ಜನರು ಕಪ್ಪು ಶಿವಲಿಂಗವನ್ನು ಮನೆಯಲ್ಲಿಡುವ ಬದಲು ದೇವಾಲಯಗಳಲ್ಲಿ ಪ್ರತಿಷ್ಠಾಪಿಸುವುದೇ ಹೆಚ್ಚು ಸೂಕ್ತವೆಂದು ಭಾವಿಸುತ್ತಾರೆ.

ಇದನ್ನೂ ಓದಿ: ಅಂಗೈಯಲ್ಲಿ ‘M’ ಗುರುತಿದ್ದರೆ ಅದೃಷ್ಟವೇ? ಹಸ್ತಸಾಮುದ್ರಿಕ ಶಾಸ್ತ್ರ ಹೇಳುವುದೇನು?

ಬಿಳಿ ಶಿವಲಿಂಗ:

ಬಿಳಿ ಶಿವಲಿಂಗಗಳನ್ನು ಸಾಮಾನ್ಯವಾಗಿ ಅಮೃತಶಿಲೆ (ಮಾರ್ಬಲ್) ಅಥವಾ ಬಿಳಿ ಬಣ್ಣದ ವಿಶೇಷ ಕಲ್ಲುಗಳಿಂದ ತಯಾರಿಸಲಾಗುತ್ತದೆ. ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಬಿಳಿ ಬಣ್ಣವು ಶಾಂತಿ, ಸೌಮ್ಯತೆ ಮತ್ತು ಅತ್ಯಂತ ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಮನೆಯಲ್ಲಿ ಬಿಳಿ ಶಿವಲಿಂಗ ಇಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಕುಟುಂಬದಲ್ಲಿ ಶಾಂತಿ ಮತ್ತು ಪರಸ್ಪರ ಸಾಮರಸ್ಯವನ್ನು ಹೆಚ್ಚಿಸಲು ಇದು ಅತ್ಯುತ್ತಮ ಎನ್ನಲಾಗುತ್ತದೆ. ಮನೆಯಲ್ಲಿರುವ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಲು ಬಿಳಿ ಶಿವಲಿಂಗ ಸಹಾಯ ಮಾಡುತ್ತದೆ. ವ್ಯವಹಾರ ಅಥವಾ ಉದ್ಯೋಗದಲ್ಲಿ ಪ್ರಗತಿ ಬಯಸುವವರಿಗೆ ಬಿಳಿ ಶಿವಲಿಂಗದ ಪೂಜೆ ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಕಪ್ಪು ಶಿವಲಿಂಗಕ್ಕೆ ಹೋಲಿಸಿದರೆ ಇದರ ಪೂಜಾ ನಿಯಮಗಳು ಸ್ವಲ್ಪ ಸೌಮ್ಯವಾಗಿದ್ದು, ಗೃಹಸ್ಥರು (ಸಂಸಾರಿಗಳು) ಮನೆಯಲ್ಲಿಟ್ಟು ಪೂಜಿಸಲು ಇದು ಹೆಚ್ಚು ಪ್ರಶಸ್ತವಾಗಿದೆ.

ಶಿವಲಿಂಗವನ್ನು ಖರೀದಿಸುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ವಾಸ್ತು ನಿಯಮಗಳು:

  • ಗಾತ್ರದ ನಿಯಮ (Size): ಮನೆಯ ದೇವರ ಕೋಣೆಯಲ್ಲಿಡುವ ಶಿವಲಿಂಗವು ಅತಿಯಾಗಿ ದೊಡ್ಡದಾಗಿರಬಾರದು. ವಾಸ್ತು ಪ್ರಕಾರ, ಮನೆಯಲ್ಲಿಡುವ ಶಿವಲಿಂಗದ ಗಾತ್ರವು ನಮ್ಮ ಹೆಬ್ಬೆರಳಿನ ಉದ್ದಕ್ಕಿಂತ (ಗರಿಷ್ಠ 2 ರಿಂದ 3 ಇಂಚು) ಹೆಚ್ಚಿರಬಾರದು. ದೊಡ್ಡ ಶಿವಲಿಂಗಗಳನ್ನು ಕೇವಲ ಸಾರ್ವಜನಿಕ ದೇವಸ್ಥಾನಗಳಲ್ಲೇ ಪ್ರತಿಷ್ಠಾಪಿಸಬೇಕು.
  • ಪ್ರಾಣ ಪ್ರತಿಷ್ಠಾಪನೆ: ಮನೆಯಲ್ಲಿಡುವ ಶಿವಲಿಂಗಕ್ಕೆ ಯಾವುದೇ ಭಾರಿ ಪ್ರಾಣ-ಪ್ರತಿಷ್ಠಾಪನೆಯ ಅಗತ್ಯವಿರುವುದಿಲ್ಲ. ಆದರೆ, ದಿನನಿತ್ಯದ ಜಲಾಭಿಷೇಕ ಮತ್ತು ಶುದ್ಧತೆ ಅತ್ಯಗತ್ಯ.
  • ಒಂದೇ ಶಿವಲಿಂಗ: ಮನೆಯ ದೇವರ ಕೋಣೆಯಲ್ಲಿ ಕೇವಲ ಒಂದು ಶಿವಲಿಂಗವನ್ನು ಮಾತ್ರ ಇಡಬೇಕು. ಒಂದಕ್ಕಿಂತ ಹೆಚ್ಚು ಶಿವಲಿಂಗಗಳನ್ನು ಒಟ್ಟಿಗೆ ಇಟ್ಟು ಪೂಜಿಸಬಾರದು.
  • ದಿಕ್ಕು (Direction): ಶಿವಲಿಂಗವನ್ನು ಇಡುವಾಗ ಅದರ ಜಲಧಾರೆ (ನೀರು ಹರಿದು ಹೋಗುವ ಭಾಗ) ಯಾವಾಗಲೂ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿರುವಂತೆ ಇಡಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪದ್ಮಶ್ರೀ’ ಪ್ರಶಸ್ತಿ ಸ್ವೀಕರಿಸಿದ ಹರ್ಮನ್‌ಪ್ರೀತ್ ಕೌರ್ – Kannada News | Harmanpreet Kaur receives Padma Shri Award

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೇ 25, 2026 ರಂದು ನಡೆದ ನಾಗರಿಕ ಹೂಡಿಕೆ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರ್ಮನ್‌ಪ್ರೀತ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಭಾರತೀಯ ಮಹಿಳಾ ಕ್ರಿಕೆಟ್‌ಗೆ ಅವರು ನೀಡಿದ ಅಪ್ರತಿಮ ಕೊಡುಗೆ ಮತ್ತು ಅವರ ನೇತೃತ್ವದಲ್ಲಿ ಭಾರತ ತಂಡ ಸಾಧಿಸಿದ ಐತಿಹಾಸಿಕ ಯಶಸ್ಸನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.

ಈ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಹರ್ಮನ್​ಪ್ರೀತ್ ಕೌರ್ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ ಟಿ20 ಸರಣಿಯು ಮೇ 28 ರಿಂದ ಶುರುವಾಗಲಿದ್ದು, ಈ ಸರಣಿಗಾಗಿ ಅವರು ಲಂಡನ್​ಗೆ ತೆರಳಿದ್ದಾರೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಈ ವಿಶ್ವಕಪ್ ಜೂನ್ 12 ರಿಂದ ಶುರುವಾಗಲಿದೆ.

 

Source link

CNG Price Hike: ಪೆಟ್ರೋಲ್, ಡೀಸೆಲ್​ ಆಯ್ತು ಈಗ ಸಿಎನ್​ಜಿ ದರ ಏರಿಕೆ! ವಾಹನ ಸವಾರರಿಗೆ ಶಾಕ್​ – Kannada News | CNG Price Hike: After Petrol and Diesel, CNG Prices Increased Due to Global Crude Turmoil and Supply Disruption

ನವದೆಹಲಿ, ಮೇ 26: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಾಲ್ಕು ಬಾರಿ ಏರಿಕೆಯಾದ ನಂತರ, ಈಗ ಸಿಎನ್‌ಜಿ (CNG) ದರವೂ ಹೆಚ್ಚಾಗಿದೆ. ದೆಹಲಿಯಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 83 ರೂಪಾಯಿ 9 ಪೈಸೆಗೆ ತಲುಪಿದೆ. ಇದು ಸಿಎನ್‌ಜಿ ಬಳಸುವ ವಾಹನ ಮಾಲೀಕರಿಗೆ ಭಾರಿ ಆಘಾತ ನೀಡಿದೆ. ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಾಲ್ಕು ಬಾರಿ ಏರಿಕೆ ಕಂಡಿದ್ದವು. ಅದರ ಬೆನ್ನಲ್ಲೇ, ಸೋಮವಾರ ಮತ್ತೆ ಪ್ರತಿ ಲೀಟರ್‌ಗೆ 2 ರೂಪಾಯಿ 83 ಪೈಸೆ ಹೆಚ್ಚಳವಾಗಿತ್ತು. ಇದೀಗ ಸಿಎನ್‌ಜಿ ದರ ಏರಿಕೆಯಾಗಿರುವುದು ಇಂಧನ ಬಳಕೆದಾರರಿಗೆ ಮತ್ತೊಂದು ಹೊರೆಯಾಗಿದೆ. ಈ ದರ ಏರಿಕೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯ ಏರಿಳಿತಗಳು ಪ್ರಮುಖ ಕಾರಣವಾಗಿವೆ. ಇದರ ಜೊತೆಗೆ, ಯುದ್ಧದ ಕಾರ್ಮೋಡದಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯಗಳು ಉಂಟಾಗಿರುವುದು ಕೂಡ ದರ ಹೆಚ್ಚಳಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾನ್ ಬಳಿಕ ರಣವೀರ್ ಸಿಂಗ್ ಮುಂದಿರುವ ಆಯ್ಕೆಗಳೇನು? – Kannada News | Ranveer Singh Banned by FWICE: Don 3 Exit Triggers 40 Cr Row and Bollywood Hiatus

ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ (Ranveer Singh) ದಿಢೀರನೆ ಹೊರನಡೆದಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ನಟನ ವಿರುದ್ಧ ಅಸಹಕಾರದ ಕಠಿಣ ನಿರ್ಧಾರ ಪ್ರಕಟಿಸಿದೆ. ಈ ಮೂಲಕ ರಣವೀರ್ ಸಿಂಗ್ ಹೊಸ ಚಿತ್ರಗಳ ಚಿತ್ರೀಕರಣ ಮಾಡದಂತೆ ಹಾಗೂ ಚಿತ್ರರಂಗದ ಯಾರೂ ಅವರೊಂದಿಗೆ ಕೆಲಸ ಮಾಡದಂತೆ ಸೂಚಿಸಿ ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ.

* ಗಂಭೀರ ಸ್ವರೂಪ ಪಡೆದ ಡಾನ್​ 3 ವಿವಾದ

* ಬ್ಯಾನ್ ಆದ ನಟ ರಣವೀರ್ ಸಿಂಗ್

* ಮುಂದಿರುವ ಆಯ್ಕಗಳೇನು?

ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ‘ಡಾನ್ 3’ ಸಿನಿಮಾ ತಯಾರಾಗುತ್ತಿತ್ತು. ಆದರೆ, ಚಿತ್ರದ ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಅವರು ಈ ಚಿತ್ರದಿಂದ ಹೊರನಡೆದರು. ಇವರ ಈ ದಿಢೀರ್ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆಗೆ ಸಾಕಷ್ಟು ನಷ್ಟ ಆಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಮತ್ತು ಪ್ರಮುಖ ಯೋಜನೆಗಳಿಗಾಗಿ ಈಗಾಗಲೇ ಸಾಕಷ್ಟು ಹಣ ಸುರಿಯಲಾಗಿದೆ. ಹೀಗಾಗಿ ನಿರ್ಮಾಣ ಸಂಸ್ಥೆಯು ನಟನಿಂದ ಸುಮಾರು 40 ಕೋಟಿ ರೂಪಾಯಿ ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.

ಆದರೆ, ಇದನ್ನು ರಣವೀರ್ ಸಿಂಗ್ ಒಪ್ಪಿಲ್ಲ. ನಷ್ಟ ಪರಿಹಾರದ ಸೆಟಲ್ಮೆಂಟ್ ಕುರಿತ ಮಾತುಕತೆಗಳು ಸಫಲವಾಗದ ಕಾರಣ ಈ ವಿವಾದ FWICEಗೆ ತಲುಪಿತು. FWICE ಅಧ್ಯಕ್ಷ ಬಿ.ಎನ್ ತಿವಾರಿ ಹಾಗೂ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಅವರನ್ನೊಳಗೊಂಡ ಉನ್ನತ ಮಟ್ಟದ ಆಂತರಿಕ ಸಭೆಯ ನಂತರ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೂಟಿಂಗ್ ಹಂತದಲ್ಲಿ ನಟರು ಹೀಗೆ ಹೊರನಡೆಯುವ ಪ್ರವೃತ್ತಿ ಸರಿಯಲ್ಲ ಎಂದು ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ವೃತ್ತಿಜೀವನದ ಮೇಲೆ ಬೀರುವ ಪರಿಣಾಮ

ಈ ಬ್ಯಾನ್ ಆದೇಶದಿಂದಾಗಿ ರಣವೀರ್ ಸಿಂಗ್ ಅವರು ಭಾರತದಲ್ಲಿ ಹೊಸ ಸಿನಿಮಾಗಳ ಶೂಟಿಂಗ್ ಮಾಡಲು ಅಥವಾ ಹೊಸ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ವಿವಾದ ಬಗೆಹರಿಯುವವರೆಗೂ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಗುತ್ತದೆ. ‘ಧುರಂಧರ್ 2’ ಸಿನಿಮಾದ ಯಶಸ್ಸಿನ ನಂತರ ರಣವೀರ್ ಸಿಂಗ್ ಅವರಿಗೆ ಬಾಲಿವುಡ್‌ನಲ್ಲಿ ಭಾರಿ ಬೇಡಿಕೆ ಇತ್ತು. ಇಂತಹ ಪ್ರಮುಖ ಸಮಯದಲ್ಲಿ ಎದುರಾಗಿರುವ ಈ ಕಾನೂನು ಮತ್ತು ವೃತ್ತಿಪರ ಸಂಕಷ್ಟವು ಅವರ ಸಿನಿ ಪಯಣಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡಿದೆ. ಅವರು ನಷ್ಟ ಪರಿಹಾರ ಮಾಡಿದರೆ ಅಥವಾ ‘ಡಾನ್ 3’ ಸಿನಿಮಾದಲ್ಲಿ ನಟಿಸಿದರೆ ವಿವಾದ ಬಗೆಹರಿಯಬಹುದು. ರಣವೀರ್ ಮುಂದಿನ ಹೆಜ್ಜೆ ಏನಿರಲಿದೆ ಎಂಬುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​ವೇಯಲ್ಲಿ ಬಸ್ ಪಲ್ಟಿ, ಆರು ಮಂದಿ ಸಾವು, ಹತ್ತಕ್ಕೂ ಹೆಚ್ಚು ಜನರಿಗೆ ಗಾಯ – Kannada News | Delhi Bihar Bus Overturns on Agra Lucknow Expressway, Multiple Dead and Injured

ಉನ್ನಾವೋ, ಮೇ 26: ದೆಹಲಿಯಿಂದ ಬಿಹಾರಕ್ಕೆ ಹೋಗುತ್ತಿದ್ದ ಬಸ್(Bus) ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​ವೇನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕನಿಷ್ಠ 6 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಔರಾಸ್ ಪೊಲೀಸ್ ಠಾಣೆ ಪ್ರದೇಶದ ಆಗ್ರಾ ಲಕ್ನೋ ಎಕ್ಸ್​ಪ್ರೆಸ್​ವೇಯಲ್ಲಿ ಅಪಘಾತ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಔರಾಸ್ ಎಸ್‌ಒ ಸಂಜೀವ್ ಕುಶ್ವಾಹ ಅವರ ಪ್ರಕಾರ, ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಮತ್ತು ಕೈದಿ ಸೇರಿದ್ದಾರೆ.

ಮೃತ ಸಬ್ ಇನ್ಸ್‌ಪೆಕ್ಟರ್‌ನನ್ನು ರಾಮಚಂದ್ರ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ರಾಮಚಂದ್ರ ಅವರು ಕೈದಿ ಛತ್ರಪಾಲ್ ಜೊತೆಗೆ ಸಿವಾನ್‌ನಿಂದ ದೆಹಲಿಗೆ ಪ್ರಯಾಣಿಸಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದವು.

ಮತ್ತೊಂದು ಅಪಘಾತ
ಧುಲೆ ಬಳಿಯ ಮುಂಬೈ-ಆಗ್ರಾ ಹೆದ್ದಾರಿಯ ಲಾಲಿಂಗ್ ಘಾಟ್ ವಿಭಾಗದಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು, ಆರು ಪ್ರಯಾಣಿಕರು ಸಾವನ್ನಪ್ಪಿದ್ದು, 10 ರಿಂದ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮರಳು ಡಂಪಿಂಗ್ ಯಂತ್ರ ಮತ್ತು ಹಲವಾರು ಪ್ರಯಾಣಿಕ ವಾಹನಗಳ ನಡುವೆ ಸಂಭವಿಸಿದ ಹಿಂಸಾತ್ಮಕ ಅಪಘಾತದ ನಂತರ ಈ ಘಟನೆಯಲ್ಲಿ ಮೂರು ಬಾರಿ ಡಿಕ್ಕಿ ಹೊಡೆದಿದೆ.
ಅಪಘಾತದ ಸುದ್ದಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಪರಿಣಾಮವಾಗಿ, ಮುಂಜಾನೆ ಈ ಅಪಘಾತದಿಂದಾಗಿ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಸಂಚಾರ ಸ್ವಲ್ಪ ಸಮಯದವರೆಗೆ ಅಸ್ತವ್ಯಸ್ತವಾಗಿತ್ತು.

ಮತ್ತಷ್ಟು ಓದಿ: ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಹಲವು ಪ್ರಯಾಣಿಕರ ಸ್ಥಿತಿ ಗಂಭೀರ

ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾಲಿಂಗ್ ಘಾಟ್ ವಿಭಾಗದಲ್ಲಿ ಚಲಿಸುವಾಗ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ಕಾರಣ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೊಲೀಸರನ್ನ ಕಂಡು ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ ರೌಡಿ ‘ಸ್ಪಾಟ್ ನಾಗ’; ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರಿದ ಕಿರಾತಕ! – Kannada News | Soladevanahalli Police Chase: Spot Naga Jumps From Building, Suffers Hip Injury

ಬೆಂಗಳೂರು, ಮೇ.26 : ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೌಡಿಶೀಟರ್‌ ಒಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕೆಳಗೆ ಹಾರಿ ಸೊಂಟ ಜಾಯಿಂಟ್ ಕಂಪ್ರೆಷನ್ (ಸೊಂಟದ ಮೂಳೆ ಜರುಗುವಿಕೆ) ಆಗಿ ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಗಾಯಗೊಂಡಿರುವ ಆರೋಪಿಯನ್ನು ನಗರದ ಕುಖ್ಯಾತ ರೌಡಿ ನಾಗರಾಜ್ ಅಲಿಯಾಸ್ ‘ಸ್ಪಾಟ್ ನಾಗ’ ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಈ ಹಿಂದೆ ಯುವಕನೊಬ್ಬನಿಗೆ ಚಾಕು ಇರಿದು ಕೊಲೆ ಯತ್ನ ನಡೆಸಿದ್ದ ಪ್ರಕರಣದಲ್ಲಿ ರೌಡಿ ಸ್ಪಾಟ್ ನಾಗ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈ ನಡುವೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಈತ ರಹಸ್ಯವಾಗಿ ಹೊಸದೊಂದು ಮನೆ ಕಟ್ಟಿಸುತ್ತಿದ್ದ. ಈ ಬಗ್ಗೆ ಪಕ್ಕಾ ಮಾಹಿತಿ ಪಡೆದ ಸೋಲದೇವನಹಳ್ಳಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಲು ಈ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಖಾಕಿ ಪಡೆ ಸ್ಥಳಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಸ್ಪಾಟ್ ನಾಗ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ಹಿಡಿಯಲು ಬಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ, ಅವರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದಾನೆ. ಪೊಲೀಸರಿಗೆ ನೇರವಾಗಿ ಬೆದರಿಕೆ ಹಾಕಿ, ಅಲ್ಲಿಂದ ಎಸ್ಕೇಪ್ ಆಗುವ ಧಾವಂತದಲ್ಲಿ ನಿರ್ಮಾಣ ಹಂತದ ಬಿಲ್ಡಿಂಗ್‌ನ ಮೇಲಿಂದ ಕೆಳಗೆ ಧುಮುಕಿದ್ದಾನೆ.

ಕಟ್ಟಡದಿಂದ ಹಾರಿದ ರಭಸಕ್ಕೆ ಸ್ಪಾಟ್ ನಾಗನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಆತನಿಗೆ ಎದ್ದು ಓಡಲು ಸಾಧ್ಯವಾಗಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಬಿಲ್ಡಿಂಗ್‌ನಿಂದ ಬಿದ್ದ ಕಾರಣ ಆತನ ಸೊಂಟದ ಮೂಳೆ ಜಾಯಿಂಟ್ ಕಂಪ್ರೆಷನ್ (Joint Compression) ಆಗಿರುವುದು ದೃಢಪಟ್ಟಿದೆ. ಸದ್ಯ ಆಸ್ಪತ್ರೆಯಲ್ಲೇ ಆತನಿಗೆ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ, ಗೂಡ್ಸ್ ಆಟೋ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ

ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದಡಿಯಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಪಾಟ್ ನಾಗನ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ.

ರಾಜ್ಯದ ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version