ಹಂಸಲೇಖ-ರವಿಚಂದ್ರನ್ ಹಾಡುಗಳ ಲೈವ್ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’ ಎಲ್ಲಿ? ಯಾವಾಗ?

ಹಂಸಲೇಖ (Hamsalekha) ಮತ್ತು ರವಿಚಂದ್ರನ್ ಅವರು ಹಲವಾರು ಎವರ್ ಗ್ರೀನ್ ಕನ್ನಡ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಈಗ ಬೇರೆ ಬೇರೆ ಗಾಯಕರು, ಸಂಗೀತ ನಿರ್ದೇಶಕರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅವರ ಹಾಡುಗಳನ್ನು ಸಹ ಹಾಡುತ್ತಿರುವುದುಂಟು. ಇದೀಗ ಖುದ್ದು ಹಂಸಲೇಖ ಮತ್ತು ರವಿಚಂದ್ರನ್ ಅವರು ಒಟ್ಟಿಗೆ ಲೈವ್ ಕಾನ್ಸರ್ಟ್ ಮಾಡಲು ಮುಂದಾಗಿದ್ದು, ಕಾನ್ಸರ್ಟ್​​ಗೆ ‘ಕ್ರೇಜಿಬ್ರಹ್ಮ’ ಎಂದು ಹೆಸರಿಡಲಾಗಿದೆ. ಈ ಲೈವ್ ಕಾನ್ಸರ್ಟ್ ಎಲ್ಲಿ ನಡೆಯಲಿದೆ? ಯಾವಾಗ ನಡೆಯಲಿದೆ? ವಿಶೇಷತೆಗಳು ಏನಿರಲಿವೆ? ಎಲ್ಲದರ ಮಾಹಿತಿ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಹೇರಾ ಫೇರಿ 3’ಯಿಂದ ಮತ್ತೆ ಹೊರಬಂದ ಪರೇಶ್ ರಾವಲ್: ಕಾರಣ? – Kannada News | Paresh Rawal exits from Hera Pheri 3 movie what is the reason

‘ಹೇರಾ ಫೇರಿ 3’ ಸಿನಿಮಾ (Cinema) ಘೋಷಣೆ ಮಾಡಿದಾಗಿನಿಂದಲೂ ಸುದ್ದಿಯಲ್ಲಿದೆ. ಹಿಂದಿ ಚಿತ್ರರಂಗದ ಕಲ್ಟ್ ಕಾಮಿಡಿ ಸಿನಿಮಾ ಆಗಿರುವ ‘ಹೇರಾ ಪೇರಿ’ಯ ಮೂರನೇ ಸೀಸನ್ ಭಾಗ ಬರಬೇಕು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು, ಆದರೆ ಸಿನಿಮಾದ ಪ್ರಮುಖ ಪಾತ್ರಧಾರಿ ಪರೇಶ್ ರಾವಲ್ ಅವರು ಪದೇ ಪದೇ ಸಿನಿಮಾದ ಬಗ್ಗೆ ಸಹನಟರ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದುತ್ತಿದ್ದು, ಇದೀಗ ಎರಡನೇ ಬಾರಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಈ ಬಾರಿ ತಾವು ಪಡೆದ ಸಂಭಾವನೆಯ 15% ಹೆಚ್ಚುವರಿ ಹಣವನ್ನು ನಿರ್ಮಾಪಕರಿಗೆ ನೀಡಿ ಸಿನಿಮಾದಿಂದ ಹೊರ ನಡೆದಿದ್ದಾರೆ.

ಸಿನಿಮಾ ಆರಂಭವಾದಾಗ ಪರೇಶ್ ರಾವಲ್ ತಾವು ಸಿನಿಮಾನಲ್ಲಿ ನಟಿಸುವುದಿಲ್ಲ ಎಂದರು. ಆದರೆ ಸಿನಿಮಾದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಅಕ್ಷಯ್ ಕುಮಾರ್, ಮನವೊಲಿಸಿದ ಬಳಿಕ ಪರೇಶ್ ರಾವಲ್ ಒಪ್ಪಿಕೊಂಡಿದ್ದರು. ಆದರೆ ಈಗ ಮತ್ತೆ ಪರೇಶ್ ರಾವಲ್ ಹೊರ ಬಂದಿದ್ದು, ಚಿತ್ರಕ್ಕಾಗಿ ಪಡೆದಿದ್ದ ಮುಂಗಡ 11 ಲಕ್ಷವನ್ನು ಶೇ. 15 ರಷ್ಟು ವಾರ್ಷಿಕ ಬಡ್ಡಿ ಮತ್ತು ಹೆಚ್ಚುವರಿ ಪರಿಹಾರದೊಂದಿಗೆ ನಿರ್ಮಾಪಕರಿಗೆ ಹಿಂತಿರುಗಿಸಿದ್ದಾರೆ.

ಚಿತ್ರರಂಗದ ಆಪ್ತ ಮೂಲಗಳ ಪ್ರಕಾರ, ‘ಹೇರಾ ಫೇರಿ 3 ಚಿತ್ರಕ್ಕಾಗಿ ಪರೇಶ್ ರಾವಲ್ ಅವರ ಒಟ್ಟು ಸಂಭಾವನೆಯನ್ನು 15 ಕೋಟಿಗೆ ನಿಗದಿಪಡಿಸಲಾಗಿತ್ತು. ಆದರೆ, ಅಗ್ರಿಮೆಂಟ್ ಷರತ್ತಿನ ಪ್ರಕಾರ ಅವರಿಗೆ ಕೇವಲ 11 ಲಕ್ಷ ಮುಂಗಡ ನೀಡಿ, ಬಾಕಿ ಉಳಿದ 14.89 ಕೋಟಿ ರೂಪಾಯಿಗಳನ್ನು ಸಿನಿಮಾ ಬಿಡುಗಡೆಯಾದ ಒಂದು ತಿಂಗಳ ನಂತರ ನೀಡುವುದಾಗಿ ತಿಳಿಸಲಾಗಿತ್ತು. ಈ ವಿಲಕ್ಷಣ ಷರತ್ತಿನ ಬಗ್ಗೆ ಹಿರಿಯ ನಟ ಪರೇಶ್ ರಾವಲ್ ಅವರಿಗೆ ತೀವ್ರ ಆಕ್ಷೇಪವಿತ್ತು’ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಬ್ಲಾಕ್ ಬಸ್ಟರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಸ್ಟಾರ್ ನಟ: ಕಾರಣ?

ಚಿತ್ರದ ಮುಖ್ಯ ಶೂಟಿಂಗ್ ಮುಂದಿನ ವರ್ಷವಷ್ಟೇ (2027) ಆರಂಭವಾಗಲು ನಿರ್ಧರಿಸಲಾಗಿದೆ. ಇದರರ್ಥ ‘ಹೇರಾ ಫೇರಿ 3’ ಸಿನಿಮಾ 2027 ರ ಕೊನೆಯ ಭಾಗದಲ್ಲಿ ಅಥವಾ 2028 ರಲ್ಲಷ್ಟೇ ತೆರೆಗೆ ಬರುವ ಸಾಧ್ಯತೆಯಿದೆ. ಸಂಭಾವನೆಯ ನಿಯಮಗಳ ಪ್ರಕಾರ, ಪರೇಶ್ ರಾವಲ್ ಅವರು ತಮ್ಮ ಬಾಕಿ ಹಣವನ್ನು ಪಡೆಯಲು ಕನಿಷ್ಠ ಎರಡು ವರ್ಷಗಳ ಕಾಲ ಕಾಯಬೇಕಾಗುತ್ತಿತ್ತು. ಈ ಸುದೀರ್ಘ ಕಾಯುವಿಕೆಗೆ ಒಪ್ಪದ ನಟ, ಪ್ರಾಜೆಕ್ಟ್‌ನಿಂದ ಹೊರಬರಲು ನಿರ್ಧರಿಸಿದರು. ಆದಾಗ್ಯೂ, ಈ ವರದಿಗಳ ಬಗ್ಗೆ ನಟನ ಕಡೆಯಿಂದಾಗಲಿ ಅಥವಾ ಚಿತ್ರತಂಡದಿಂದಾಗಲಿ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

ಇದು ಈ ಚಿತ್ರಕ್ಕೆ ಎದುರಾಗುತ್ತಿರುವ ಮೊದಲ ಸಮಸ್ಯೆಯಲ್ಲ. ಕಳೆದ ವರ್ಷವೂ ಪರೇಶ್ ರಾವಲ್ ಹೇರಾ ಪೇರಿ 3 ಚಿತ್ರದಿಂದ ಹೊರನಡೆದಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆಗ ಅಕ್ಷಯ್ ಕುಮಾರ್ ಅವರ ಪ್ರೊಡಕ್ಷನ್ ಬ್ಯಾನರ್ ‘ಕೇಪ್ ಆಫ್ ಗುಡ್ ಫಿಲ್ಮ್ಸ್’, ಹಠಾತ್ ಎಕ್ಸಿಟ್‌ನಿಂದಾಗಿ ತಮಗೆ ನಷ್ಟವಾಗಿದೆ ಎಂದು ಆರೋಪಿಸಿ ಪರೇಶ್ ರಾವಲ್ ವಿರುದ್ಧ 25 ಕೋಟಿ ನಷ್ಟ ಪರಿಹಾರ ಕೇಳಿ ಕಾನೂನು ನೋಟಿಸ್ ಜಾರಿ ಮಾಡಿತ್ತು. ತದನಂತರ ಉಭಯ ನಟರು ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಂಡಿದ್ದರು ಮತ್ತು ಅಕ್ಷಯ್ ಕೇಸ್ ವಾಪಸ್ ಪಡೆದಿದ್ದರು. ಇತ್ತೀಚೆಗಷ್ಟೇ ಅಕ್ಷಯ್, ಪ್ರಿಯದರ್ಶನ್ ಮತ್ತು ಪರೇಶ್ ರಾವಲ್ ಜೊತೆಯಾಗಿ ‘ಭೂತ್ ಬಂಗ್ಲಾ’ ಚಿತ್ರದಲ್ಲಿ ನಟಿಸುತ್ತಿರುವುದರಿಂದ ‘ಹೇರಾ ಫೇರಿ 3’ ಗೊಂದಲಗಳೂ ಮುಗಿದಿವೆ ಎನ್ನಲಾಗಿತ್ತು, ಆದರೆ ಈಗ ಮತ್ತೆ ಹೊಸ ಸಮಸ್ಯೆ ಉದ್ಭವಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಕೇಸ್ ದಾಖಲಾಗ್ತಿದ್ದಂತೆ ಪರಾರಿ – Kannada News | Bhadravati BJP Leader Absconds After Case Filed for Misbehaving with Woman

ಶಿವಮೊಗ್ಗ, ಮೇ 24: ಬಿಜೆಪಿ ಮುಖಂಡ, ವಕೀಲ ಭರತ್ ವಿರುದ್ಧ ಅತ್ಯಾಚಾರ ಹಾಗೂ ಬೆದರಿಕೆ ಆರೋಪ ಕೇಳಿಬಂದಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪೇಪರ್​ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿಯ ಸ್ನೇಹಿತನೆಂದು ಪರಿಚಯಿಸಿಕೊಂಡು ಮಹಿಳೆ ಮೇಲೆ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ಬಿಜೆಪಿ ಮುಖಂಡ ಭರತ್ ಪರಾರಿಯಾಗಿದ್ದಾರೆ. ಸದ್ಯ ಪೇಪರ್​ಟೌನ್ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು

ಹಂಸಲೇಖ (Hamsalekha) ಮತ್ತು ರವಿಚಂದ್ರನ್ (Ravichandran) ಕನ್ನಡ ಚಿತ್ರರಂಗದ ನಂಬರ್ 1 ‘ಜೋಡಿ’. ಹಲವಾರು ಅತ್ಯದ್ಭುತ ಹಾಡುಗಳನ್ನು ಈ ಜೋಡಿ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇದೀಗ ಈ ಜೋಡಿ ಒಟ್ಟಿಗೆ ಲೈವ್ ಕಾನ್ಸರ್ಟ್ ಮಾಡಲಿದ್ದಾರೆ. ತಮ್ಮ ಜೋಡಿಯಲ್ಲಿ ಬಂದ ಹಾಡುಗಳನ್ನು ಲೈವ್ ಕಾನ್ಸರ್ಟ್​​ನಲ್ಲಿ ಪುನಃ ಸೃಷ್ಟಿಸಲಿದ್ದಾರೆ. ಹಂಸಲೇಖ ಮತ್ತು ರವಿಚಂದ್ರನ್ ಅವರ ಈ ಕಾನ್ಸರ್ಟ್​​ಗೆ ‘ಕ್ರೇಜಿ-ಬ್ರಹ್ಮ’ ಎಂದು ಹೆಸರಿಡಲಾಗಿದೆ. ಇಂದು ಈ ಲೈವ್ ಕಾನ್ಸರ್ಟ್ ಬಗ್ಗೆ ಮಾಹಿತಿ ನೀಡಲೆಂದು ಸುದ್ದಿಗೋಷ್ಠಿ ನಡೆಸಲಾಗಿದ್ದು, ಈ ವೇಳೆ ಹಂಸಲೇಖ ಅವರು ತಮ್ಮ ಮಾಜಿ ‘ಯಜಮಾನ್ರು’ ರವಿಚಂದ್ರನ್ ಅವರ ಬಗ್ಗೆ ಮಾತನಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಮಂತ್ರಾಲಯ ಶ್ರೀಗಳು – Kannada News | Heavy Rain in Mantralaya: Swamiji Arranges Shelter and Aid for Devotees

ರಾಯಚೂರು, ಮೇ 24: ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಇತ್ತ ರಾಯರ ಮಠದ ಪ್ರಾಂಗಣದಲ್ಲಿ ರಾತ್ರಿ ಮಲಗಿದ್ದ ಭಕ್ತರು ಮಳೆ ಅಬ್ಬರಕ್ಕೆ ಕಂಗಾಲಾಗಿದ್ದರು. ಈ ವೇಳೆ ಮಾಹಿತಿ ತಿಳಿದು ತಡ ರಾತ್ರಿ ಪ್ರಾಂಗಣಕ್ಕೆ ದೌಡಾಯಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರನ್ನು ಭೇಟಿ ಮಾಡಿ ಮಳೆಯಿಂದಾದ ಅಡಚಣೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಳಿಕ ಭಕ್ತರಿಗೆ ಶ್ರೀಮಠದ ಕಲ್ಯಾಣ‌ ಮಂಟಪಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಖುದ್ದು ತಾವೇ ನಿಂತು ಭಕ್ತರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್: ಕಾಂಗ್ರೆಸ್​​ನಲ್ಲಿ ಸಂಚಲನ – Kannada News | Congress High command calls and invite Siddaramaiah And DK Shivakumar On May 26

ಬೆಂಗಳೂರು, (ಮೇ 24): ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಹಾಗೂ ಸಂಪುಟ ವಿಸ್ತರಣೆಯ ರಾಜಕೀಯ ಪ್ರಹಸನಗಳು. ಹೀಗೆ ಕರ್ನಾಟಕ ಕಾಂಗ್ರೆಸ್​​​ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್​​​​ಗೆ (DK Shivakumar) ಹೈಕಮಾಂಡ್​ನಿಂದ ಬುಲಾವ್ ಬಂದಿದೆ. ಹೌದು… ಮೇ 26ರಂದು ದೆಹಲಿಗೆ (New Delhi) ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ ನೀಡಿದೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಈ ಆಹ್ವಾನ ನೀಡಿರಬಹುದು ಎನ್ನಲಾಗಿದೆ. ಆದ್ರೆ, ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲಗಳನ್ನ
ಕೇರಳದಲ್ಲಿ ಸರ್ಕಾರ ರಚನೆ ನಂತರ ಗಮನ ಹರಿಸುವುದಾಗಿ ಹೈಕಮಾಂಡ್ ಹೇಳಿತ್ತು. ಅದರಂತೆ ಇದೀಗ ರಾಜ್ಯದತ್ತ ಚಿತ್ತ ಹರಿಸಿದ್ದು, ಮಂಗಳವಾರ ದೆಹಲಿಗೆ ಬರುವಂತೆ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡಿದೆ. ಹೀಗಾಗಿ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್​​​ನಲ್ಲಿ ಸಂಚಲನ ಮೂಡಿಸಿದೆ.

Source link

Chanakya Niti: ಭಾವನಾತ್ಮಕವಾಗಿ ಗಟ್ಟಿಗೊಳ್ಳಲು ಚಾಣಕ್ಯರು ಹೇಳಿರುವ ಈ ಗುಣಗಳನ್ನು ಬೆಳೆಸಿಕೊಳ್ಳಿ – Kannada News | Chanakya Niti: What should you do to become emotionally stronger?

ಆಚಾರ್ಯ ಚಾಣಕ್ಯರು  (Acharya Chanakya) ನಮ್ಮ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ.  ಶ್ರೀಮಂತಿಕೆಯನ್ನು ಗಳಿಸುವುದು ಹೇಗೆ, ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ಹೇಗೆ ಎಂಬುದು ಮಾತ್ರವಲ್ಲದೆ ಒಬ್ಬ ವ್ಯಕ್ತಿ ಮಾನಸಿಕವಾಗಿ ಬಲಶಾಲಿಯಾಗಲು ಏನೆಲ್ಲಾ ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಹೆಚ್ಚಿನವರು ಶಾರೀರಿಕವಾಗಿ ಬಲಶಾಲಿಗಳಾಗಿದ್ದರು, ಮಾನಸಿಕವಾಗಿ ದುರ್ಬಲರಾಗಿರುತ್ತಾರೆ ಮತ್ತು ಇತರರ ಮಾತನ್ನು ನಂಬಿ ಬಹುಬೇಗನೆ ಮೋಸ ಹೋಗ್ತಾರೆ, ಕಷ್ಟ ಬಂದಾಗ ದೂರ ಓಡಿ ಹೋಗ್ತಾರೆ. ಹೀಗಿರುವಾಗ ಪ್ರತಿಯೊಂದು ವಿಚಾರದಲ್ಲೂ ಮಾನಸಿಕವಾಗಿ ಬಲಶಾಲಿಯಾಗಲು ಚಾಣಕ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅದನ್ನು ಪಾಲಿಸುವ ಮೂಲಕ ನೀವು ಕೂಡ ಭಾವನಾತ್ಮಕವಾಗಿ ಬಲಶಾಲಿಗಳಾಗಿ.

ಭಾವನಾತ್ಮಕವಾಗಿ ಬಲಶಾಲಿಯಾಘಲು ಏನು ಮಾಡಬೇಕು?

ನಿಮ್ಮ ಮನಸ್ಸನ್ನು ನಿಯಂತ್ರಿಸಲು ಕಲಿಯಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ತಮ್ಮ ಮನಸ್ಸನ್ನು ನಿಯಂತ್ರಿಸಲು ಕಲಿಯುವ ಭಾವನಾತ್ಮಕವಾಗಿ ಬಲಶಾಲಿಯಾಗುತ್ತಾರೆ.  ಕೋಪ, ಭಯ ಮತ್ತು ದುಃಖದಂತಹ ಭಾವನೆಗಳು ಸಹಜ, ಆದರೆ ಅವುಗಳಿಗೆ ತಕ್ಷಣ ಪ್ರತಿಕ್ರಿಯಿಸುವುದು ದೊಡ್ಡ ತಪ್ಪು. ಪ್ರತಿಕ್ರಿಯಿಸುವ ಮೊದಲು ವಿರಾಮ ತೆಗೆದುಕೊಂಡು ವಿಷಯಗಳನ್ನು ಸರಿಯಾಗಿ ಯೋಚಿಸುವುದು ಮುಖ್ಯ. ನಿಮ್ಮ ಮನಸ್ಸನ್ನು ಶಾಂತವಾಗಿಡಲು ನೀವು ಕಲಿತಾಗ, ನೀವು ಮಾನಸಿಕವಾಗಿ ಬಲಶಾಲಿಯಾಗುತ್ತೀರಿ ಮತ್ತು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಜನರ ಅನಗತ್ಯ ಅಭಿಪ್ರಾಯಗಳಿಂದ ದೂರವಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಪ್ರತಿಯೊಬ್ಬ ವ್ಯಕ್ತಿಗೂ ಮೌಲ್ಯ ನೀಡಲು ಪ್ರಾರಂಭಿಸಿದರೆ, ಅದು ನಿಮ್ಮ ದೌರ್ಬಲ್ಯದ ಸಂಕೇತ. ನೀವು ಎಲ್ಲರ ಮಾತುಗಳನ್ನು ಕೇಳಿ ನಿಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿದರೆ, ನೀವು ಜೀವನದಲ್ಲಿ ಎಂದಿಗೂ ಬಲಶಾಲಿಯಾಗುವುದಿಲ್ಲ. ನೀವು ಭಾವನಾತ್ಮಕವಾಗಿ ಬಲಶಾಲಿಯಾಗಲು ಬಯಸಿದರೆ, ಯಾವ ಸಲಹೆ ಉಪಯುಕ್ತವಾಗಿದೆ ಮತ್ತು ಯಾವುದು ನಿಮ್ಮನ್ನು ದಾರಿ ತಪ್ಪಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ಸ್ವಾವಲಂಬಿಗಳಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ: ಇತರರ ಮೇಲೆ ಅತಿಯಾಗಿ ಅವಲಂಬಿತರಾಗುವ ವ್ಯಕ್ತಿಗಳು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಾವಲಂಬಿ ವ್ಯಕ್ತಿ ಮಾತ್ರ ನಿಜವಾಗಿಯೂ ಶಕ್ತಿಶಾಲಿ. ನಿಮ್ಮ ಎಲ್ಲಾ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳಲು ಕಲಿಯಿರಿ, ಸಣ್ಣ ಜವಾಬ್ದಾರಿಗಳನ್ನು ಸಹ ನೀವೇ ತೆಗೆದುಕೊಳ್ಳಿ ನೀವು ಇದನ್ನು ಮಾಡಿದಾಗ, ನಿಮ್ಮ ಆತ್ಮವಿಶ್ವಾಸವು ಬೆಳೆಯಲು ಪ್ರಾರಂಭವಾಗುತ್ತದೆ ಮತ್ತು ನೀವು ಅತ್ಯಂತ ಸವಾಲಿನ ಸಂದರ್ಭಗಳನ್ನು ಸಹ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಒಂದು ಸಣ್ಣ ಅಭ್ಯಾಸ ನಿಮ್ಮನ್ನು ಬಡತನದ ಕೂಪಕ್ಕೆ ನೂಕಬಹುದು… ಎಚ್ಚರ!

ವೈಫಲ್ಯವನ್ನು ಪಾಠವಾಗಿ ಸ್ವೀಕರಿಸಿ: ಜೀವನದಲ್ಲಿ ವೈಫಲ್ಯಗಳು ಬರುವುದು ಸಹಜ. ಆದರೆ ನೀವು ಅದನ್ನು ಧೈರ್ಯದಿಂದ ಎದುರಿಸಲು ಕಲಿಯಬೇಕು. ನೀವು ವೈಫಲ್ಯ, ಸೋಲುಗಳನ್ನು ಜೀವನ ಪಾಠವಾಗಿ ಸ್ವೀಕರಿಸಿದರೆ ನೀವು ಬೇಗನೆ ಭಾವನಾತ್ಮಕವಾಗಿ ಬಲಿಷ್ಠ ವ್ಯಕ್ತಿಯಾಗುತ್ತೀರಿ. ಮತ್ತು ಎಂತಹದ್ದೇ ಕಷ್ಟಗಳು ಎದುರಾದರೂ ಅದನ್ನು ಸುಲಭವಾಗಿ ಎದುರಿಸುತ್ತೀರಿ.

ಶಿಸ್ತನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಿ: ನೀವು ಭಾವನಾತ್ಮಕವಾಗಿ ಬಲಶಾಲಿಯಾಗಲು ಬಯಸಿದರೆ, ಶಿಸ್ತು ಅತ್ಯಂತ ಮುಖ್ಯ. ಆಚಾರ್ಯ ಚಾಣಕ್ಯರ ಪ್ರಕಾರ, ಶಿಸ್ತಿನ ವ್ಯಕ್ತಿಯು ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಸತತ 6 ಗೆಲುವು, ಅಗ್ರಸ್ಥಾನ; ಆರ್​ಸಿಬಿಯನ್ನು ಗೇಲಿ ಮಾಡಿ ಹಳಿತಪ್ಪಿದ ಪಂಜಾಬ್ – Kannada News | IPL 2026 Playoffs Confirmed: RCB, GT, SRH, RR in Top 4; PBKS’s Dramatic Exit Revealed

ಐಪಿಎಲ್ 2026 (IPL 2026) ರಲ್ಲಿ ಪ್ಲೇಆಫ್‌ ಆಡುವ 4 ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ವಾಸ್ತವವಾಗಿ ಪ್ಲೇಆಫ್ ಸುತ್ತಿನಲ್ಲಿ 4ನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ಇತ್ತು. ಆ ಮೂರು ತಂಡಗಳಲ್ಲಿ ರಾಜಸ್ಥಾನ್, ಪಂಜಾಬ್ ಹಾಗೂ ಕೋಲ್ಕತ್ತಾ ಸೇರಿದ್ದವು. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಸೋತಿದ್ದರೆ, ಪಂಜಾಬ್ ಹಾಗೂ ಕೋಲ್ಕತ್ತಾಗೆ ಪ್ಲೇಆಫ್‌ ಬಾಗಿಲು ತೆರೆದಿರುತಿತ್ತು. ಅದರಲ್ಲೂ ರಾಜಸ್ಥಾನ್ ಈ ಪಂದ್ಯವನ್ನು ಸೋತಿದ್ದರೆ, ಪಂಜಾಬ್​ಗೆ ಪ್ಲೇಆಫ್ ಟಿಕೆಟ್ ಭಾಗಶಃ ಖಚಿತವಾಗುತಿತ್ತು. ಆದರೆ ಪಂಜಾಬ್ ಹಾಗೂ ಕೆಕೆಆರ್ ಪ್ಲೇಆಫ್‌ ಕನಸಿಗೆ ಕೊಳ್ಳಿ ಇಟ್ಟ ರಾಜಸ್ಥಾನ್ 4ನೇ ತಂಡವಾಗಿ ಪ್ಲೇಆಫ್‌ಗೇರಿತು.

ಮೊದಲಾರ್ಧದಲ್ಲಿ ಅಗ್ರಸ್ಥಾನ

ವಾಸ್ತವವಾಗಿ ಮೊದಲಾರ್ಧದ ಐಪಿಎಲ್ ಮುಗಿಯುವ ಹೊತ್ತಿಗೆ ಪಾಯಿಂಟ್ ಪಟ್ಟಿಯನ್ನು ನೋಡಿದವರೆಲ್ಲ ಪಂಜಾಬ್ ಕಿಂಗ್ಸ್ ಮೊದಲ ತಂಡವಾಗಿ ಪ್ಲೇಆಫ್‌ಗೇರುತ್ತದೆ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದರು. ಇದಕ್ಕೆ ಪೂರಕವಾಗಿ ಪಂಜಾಬ್ ಕೂಡ ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಮೊದಲ 6 ಪಂದ್ಯಗಳಲ್ಲಿ ಘಟಾನುಘಟಿ ತಂಡಗಳನ್ನು ಮಣಿಸಿ ಮುನ್ನುಗುತ್ತಿತ್ತು. ಪಂಜಾಬ್ ಮಣಿಸಿದ 6 ತಂಡಗಳಲ್ಲಿ ಗುಜರಾತ್, ಸಿಎಸ್​ಕೆ, ಸನ್‌ರೈಸರ್ಸ್, ಮುಂಬೈ, ಲಕ್ನೋ ಮತ್ತು ಡೆಲ್ಲಿ ತಂಡಗಳು ಸೇರಿದ್ದವು. ಇದರಲ್ಲಿ ಕೆಕೆಆರ್ ತಂಡವು ಸೇರುತಿತ್ತು. ಆದರೆ ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಯಿತು. ಆಗ ಪಂಜಾಬ್ ಇದ್ದ ಫಾರ್ಮ್​ ನೋಡಿದರೆ, ಆ ಪಂದ್ಯದಲ್ಲೂ ಪಂಜಾಬ್ ಗೆಲ್ಲುವುದರಲ್ಲಿ ಅನುಮಾನವಿರಲಿಲ್ಲ.

ಹೀಗಾಗಿ ಮೊದಲ 7 ಪಂದ್ಯಗಳಲ್ಲಿ ಪಂಜಾಬ್ 6 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಮೂಲಕ ಒಟ್ಟು 13 ಅಂಕಗಳು ಪಂಜಾಬ್ ಖಾತೆಯಲ್ಲಿದ್ದವು. ಹೀಗಾಗಿ ಉಳಿದಿರುವ 7 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು ಪಂಜಾಬ್ ಸುಲಭವಾಗಿ ಪ್ಲೇಆಫ್‌ಗೇರುತ್ತದೆ ಎಂಬುದು ಖಚಿತವಾಗಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿನ ಸೋಲಿನೊಂದಿಗೆ ಆರಂಭವಾದ ಪಂಜಾಬ್ ಪತನ ಇದೀಗ ಅದನ್ನು ಟೂರ್ನಿಯಿಂದಲೇ ಹೊರದಬ್ಬಿದೆ.

ಸತತ 6 ಸೋಲುಗಳು

ವಾಸ್ತವವಾಗಿ ರಾಜಸ್ಥಾನ್ ವಿರುದ್ಧದ ತನ್ನ 8ನೇ ಪಂದ್ಯದಲ್ಲಿ ಪಂಜಾಬ್ 6 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿತ್ತು. ಅದೇ ಪಂದ್ಯದಲ್ಲಿ ಪಂಜಾಬ್, ಆರ್​ಸಿಬಿ ತಂಡವನ್ನು ಗೇಲಿ ಮಾಡಿ ಕೋಟ್ಯಾಂತರ ಅಭಿಮಾನಿಗಳ ಹಿಡಿಶಾಪಕ್ಕೂ ಗುರಿಯಾಯಿತು. ಸತತ ಗೆಲುವುಗಳ ಅಲೆಯಲ್ಲಿ ತೇಲುತ್ತಿದ್ದ ಪಂಜಾಬ್, ಸೋಶಿಯಲ್ ಮೀಡಿಯಾದಲ್ಲಿ ಅನಗತ್ಯ ಪೋಸ್ಟ್​​ವೊಂದನ್ನು ಹಂಚಿಕೊಂಡು ಆರ್​​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಂದಿನಿಂದ ಆರ್​ಸಿಬಿ ಅಭಿಮಾನಿಗಳು ಕೂಡ ಪಂಜಾಬ್ ತಂಡವನ್ನು ಕಂಡರೆ ಉರಿದು ಬೀಳುತ್ತಿದ್ದರು.

ಆರ್​ಸಿಬಿಯ ಕಾಲೆಳೆದಿದ್ದ ಪಂಜಾಬ್

ಏಪ್ರಿಲ್ 28 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ಮೊದಲ 4.3 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 49 ರನ್ ಕಲೆಹಾಕಿತ್ತು. ಈ ಸ್ಕೋರ್ ಕಾರ್ಡ್​ ಅನ್ನು ಪಂಜಾಬ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಮೂಲಕ ಪಂಜಾಬ್, ಆರ್​ಸಿಬಿ ತಂಡವನ್ನು ಗೇಲಿ ಮಾಡುವ ಕೆಲಸ ಮಾಡಿತ್ತು.

ಐಪಿಎಲ್‌ನಲ್ಲಿ ಆರ್​ಸಿಬಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. 2017 ರಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ನೀಡಿದ್ದ 137 ರನ್​ಗಳ ಗುರಿ ಬೆನ್ನಟ್ಟಿದ್ದ ಆರ್​ಸಿಬಿ 49 ರನ್​ಗಳಿಗೆ ಆಲೌಟ್ ಆಗಿ ಅವಮಾನಕರ ಸೋಲಿಗೆ ಕೊರಳೊಡ್ಡಿತ್ತು. ಅಂದಿನ ಕಹಿ ಘಟನೆಯನ್ನು ಆರ್​ಸಿಬಿಗೆ ಮತ್ತೆ ನೆನೆಪಿಸುವ ಕೆಲಸವನ್ನು ಪಂಜಾಬ್ ಮಾಡಿತ್ತು. ಪಂಜಾಬ್​ ಮಾಡಿದ್ದ ಪೋಸ್ಟ್​ ಆರ್​ಸಿಬಿ ಫ್ರಾಂಚೈಸಿ ಹಾಗೂ ಅದರ ಅಭಿಮಾನಿಗಳನ್ನು ಕೆರಳಿಸಿತ್ತು.

IPL 2026: ಪ್ಲೇಆಫ್​ನಲ್ಲಿ 4 ತಂಡಗಳ ಸ್ಥಾನ ಖಚಿತ; ಹೇಗಿರಲಿದೆ ಪ್ಲೇಆಫ್‌ ಸುತ್ತು?

ಕಾಲೆಳೆದ ಬಳಿಕ ಪಂಜಾಬ್​ಗೆ ಸತತ ಸೋಲು

ಕಾಕತಾಳೀಯವೆಂಬಂತೆ ಸುಖಾಸುಮ್ಮನೆ ಆರ್​ಸಿಬಿ ತಂಡವನ್ನು ಕೆಣಕ್ಕಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದ ಪಂಜಾಬ್ ಕಿಂಗ್ಸ್ ಸತತ ಸೋಲುಗಳಿಗೆ ಕೊರಳೊಡ್ಡಬೇಕಾಯಿತು. ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಸೇರಿಂದತೆ ಪಂಜಾಬ್ ಮುಂದಿನ 6 ಪಂದ್ಯಗಳನ್ನು ಸೋತಿತು. ಈ ಸತತ ಸೋಲುಗಳು ಪಂಜಾಬ್ ತಂಡವನ್ನು ಪ್ಲೇಆಫ್‌ ರೇಸ್​ನಿಂದ ಭಾಗಶಃ ಹೊರದಬ್ಬಿದವು. ಆದಾಗ್ಯೂ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದಿದ್ದ ಪಂಜಾಬ್ ಅದೃಷ್ಟದ ಕಡೆಗೆ ಮುಖ ಮಾಡಿ ಕುಳಿತಿತ್ತು. ಆದರೆ ಪಂಜಾಬ್​ಗಿದ್ದ ಕೊನೆಯ ಅವಕಾಶವನ್ನು ಕಿತ್ತುಕೊಂಡ ರಾಜಸ್ಥಾನ್ ಪ್ಲೇಆಫ್‌ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿದೆ.

Published On – 10:06 pm, Sun, 24 May 26

Source link

ಭಟ್ಕಳ: ಮೂರಿಕಟ್ಟೆ ಒಡೆದ ಮುಸ್ಲಿಮರು; ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ – Kannada News | Bhatkal Moori Katte Controversy: Police Attacked After Structure Demolished by Muslim Leaders

ಕಾರವಾರ, ಮೇ 24: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಧಾರ್ಮಿಕ ಮೂರಿಕಟ್ಟೆ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರೀ ವಿವಾದ ಸೃಷ್ಟಿಯಾಗಿದ್ದು, ಮುಸ್ಲಿಂ ಸಂಘಟನೆಯೊಂದರ ಪ್ರಮುಖರು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಉದ್ವಿಗ್ನ ಘಟನೆ ಭಾನುವಾರ ನಡೆದಿದೆ. ಭಟ್ಕಳದ ಜಾಗಟೆ ಕಟ್ಟೆ ಎಂಬಲ್ಲಿದ್ದ ಐತಿಹಾಸಿಕ ಮೂರಿಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಇತ್ತೀಚೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಸುಪರ್ದಿಗೆ ಒಳಪಡುವ ಅದೇ ಜಾಗದಲ್ಲಿ ಮುಂಜಾನೆ ಮೂರಿಕಟ್ಟೆಯನ್ನು ಮರು ನಿರ್ಮಾಣ ಮಾಡಿದ್ದರು. ಆದರೆ, ಈ ನಿರ್ಮಾಣಕ್ಕೆ ಸ್ಥಳೀಯ ಮುಸ್ಲಿಂ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು ಹಾಗೂ ಕಟ್ಟೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಪಟ್ಟು ಹಿಡಿದಿದ್ದರು. ಜಾಗಟೆ ಕಟ್ಟೆ ಬಳಿ ಏಕಾಏಕಿ ಜಮಾಯಿಸಿದ ಮುಸ್ಲಿಂ ಮುಖಂಡರು ಹಾಗೂ ಕಾರ್ಯಕರ್ತರ ಗುಂಪು, ಬೆಳಿಗ್ಗೆ ನಿರ್ಮಿಸಲಾಗಿದ್ದ ಮೂರಿಕಟ್ಟೆಯನ್ನು ಒಡೆದು ಹಾಕಿದ್ದಾರೆ. ಈ ವೇಳೆ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವನ್ನು ನಿಯಂತ್ರಿಸಲು ಮುಂದಾದ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್: ಕಾಂಗ್ರೆಸ್​​ನಲ್ಲಿ ಸಂಚಲನ – Kannada News | Congress High command calls and invite Siddaramaiah And DK Shivakumar On May 26

ಬೆಂಗಳೂರು, (ಮೇ 24): ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಹಾಗೂ ಸಂಪುಟ ವಿಸ್ತರಣೆಯ ರಾಜಕೀಯ ಪ್ರಹಸನಗಳು. ಹೀಗೆ ಕರ್ನಾಟಕ ಕಾಂಗ್ರೆಸ್​​​ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್​​​​ಗೆ (DK Shivakumar) ಹೈಕಮಾಂಡ್​ನಿಂದ ಬುಲಾವ್ ಬಂದಿದೆ. ಹೌದು… ಮೇ 26ರಂದು ದೆಹಲಿಗೆ (New Delhi) ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ ನೀಡಿದೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಈ ಆಹ್ವಾನ ನೀಡಿರಬಹುದು ಎನ್ನಲಾಗಿದೆ. ಆದ್ರೆ, ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲಗಳನ್ನ
ಕೇರಳದಲ್ಲಿ ಸರ್ಕಾರ ರಚನೆ ನಂತರ ಗಮನ ಹರಿಸುವುದಾಗಿ ಹೈಕಮಾಂಡ್ ಹೇಳಿತ್ತು. ಅದರಂತೆ ಇದೀಗ ರಾಜ್ಯದತ್ತ ಚಿತ್ತ ಹರಿಸಿದ್ದು, ಮಂಗಳವಾರ ದೆಹಲಿಗೆ ಬರುವಂತೆ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡಿದೆ. ಹೀಗಾಗಿ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್​​​ನಲ್ಲಿ ಸಂಚಲನ ಮೂಡಿಸಿದೆ.

Source link

Exit mobile version