Headlines

ಅಪರಿಚಿತರೊಂದಿಗೆ ನಾನು ಮಾತನಾಡಲ್ಲ ಎಂದಿದ್ದಕ್ಕೆ ಬಾಲಕಿ ಮೇಲೆ ಆ್ಯಸಿಡ್ ಎರಚಿದ ಫೋಟೊಗ್ರಾಫರ್ – Kannada News | Rajasthan Acid Attack: Photographer Targets Teen Girl for Refusing Conversation

ಜೈಪುರ, ಜನವರಿ 20: ಅಪರಿಚಿತರೊಂದಿಗೆ ನಾನು ಮಾತನಾಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ಫೋಟೊಗ್ರಾಫರ್ 14 ವರ್ಷದ ಬಾಲಕಿ ಮೇಲೆ ಆ್ಯಸಿಡ್(Acid) ಎರಡಚಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 9 ನೇ ತರಗತಿಯ ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಮೂರು ದಿನಗಳ ಹುಡುಕಾಟದ ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸ್ ತನಿಖೆಯ ಸಮಯದಲ್ಲಿ, ಆರೋಪಿ, ಚಂದ್ರರಾಮ್ ಮೇಘವಾಲ್ ಅವರ ಪುತ್ರ 19 ವರ್ಷದ ಓಂಪ್ರಕಾಶ್ ಅಲಿಯಾಸ್ ಜಾನಿ, ತಾನು ಫೋಟೊಗ್ರಾಫರ್ ಆಗಿ ಹೋಗಿದ್ದ ಮದುವೆಯಲ್ಲಿ ಆಕೆಯನ್ನು ನೋಡಿದ್ದಾಗಿ…

Read More

‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್ – Kannada News | I do Not Care Dhanush Express happiness over his 6th Place in Bigg Boss

ಧನುಶ್ ಅವರು ಧಾರಾವಾಹಿ ಲೋಕದಲ್ಲಿ ಸಾಕಷ್ಟು ಖ್ಯಾತಿ ಪಡೆದವರು. ಮನೆಯವರ ಒತ್ತಾಯಕ್ಕೆ ಬಿಗ್ ಬಾಸ್​​ಗೆ ಹೋದರು. ಅವರು ಆರನೇ ಸ್ಥಾನಕ್ಕೆ ಖುಷಿಪಡಬೇಕಾಯಿತು. ಈ ಬಗ್ಗೆ ಧನುಶ್ ಮಾತನಾಡಿದ್ದಾರೆ. ‘ನಾನು ಮನೆಯವರ ಒತ್ತಾಯಕ್ಕೆ ಬಿಗ್ ಬಾಸ್​​ಗೆ ಬಂದದೆ. ಈಗ ಸೋತಿದ್ದೇನೆ. ಮುಂದೆ ದೊಡ್ಡದೇನೋ ಕಾಯುತ್ತಾ ಇರಬಹುದು. ಆಗೋದಲ್ಲ ಆಗಲಿ’ ಎಂದು ಧನುಶ್ ಹೇಳಿದ್ದಾರೆ. ಅವರ ಮುಖದಲ್ಲಿ ನಿರಾಸೆ ಎದ್ದು ಕಾಣಿಸುತ್ತಾ ಇತ್ತು. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

‘ಕೆಜಿಎಫ್’ ಸಿನಿಮಾದಿಂದ ದೊಡ್ಡ ಪಾಠ ಕಲಿತ ಪ್ರಭಾಸ್: ಏನದು? – Kannada News | Prabhas how KGF changed his perception about movie watching

‘ಕೆಜಿಎಫ್’ (KGF) ಸಿನಿಮಾ ಸರಣಿ ಕರ್ನಾಟಕದ ಮಟ್ಟಿಗೆ ಮಾತ್ರವಲ್ಲ ಭಾರತೀಯ ಚಿತ್ರರಂಗದ ಪಾಲಿಗೆ ಮಹತ್ವದ ಕಮರ್ಶಿಯಲ್ ಸಿನಿಮಾ. ಕಮರ್ಶಿಯಲ್ ಸಿನಿಮಾ ನಿರ್ದೇಶಕರುಗಳಿಗೆ ಒಂದು ಮಾದರಿಯನ್ನು ಹಾಕಿಕೊಟ್ಟ ಸಿನಿಮಾ ಅದು. ‘ಕೆಜಿಎಫ್’ನ ಸೂತ್ರಗಳನ್ನೇ ಇರಿಸಿಕೊಂಡು ಆ ನಂತರ ಹಲವು ಸಿನಿಮಾಗಳು ಬಂದವು. ಸೂಪರ್ ಸ್ಟಾರ್ ನಟರುಗಳು ಸಹ ‘ಕೆಜಿಎಫ್’ ಮೂಲಕ ಸಾಕಷ್ಟು ಕಲಿತಿದ್ದಾರೆ. ಖುದ್ದು ಪ್ರಭಾಸ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ಕೆಜಿಎಫ್’ ಮೂಲಕ ತಾವು ಕಲಿತ ಪಾಠವೇನು ಅದರಿಂದಾದ ಲಾಭವೇನು ಎಂದು ಅವರು ಹಂಚಿಕೊಂಡಿದ್ದಾರೆ. ಸಂದೀಪ್ ರೆಡ್ಡಿ…

Read More

Magha Masa: ಮಾಘ ಮಾಸದಲ್ಲಿ ನದಿ ಸ್ನಾನದ ಮಹತ್ವ; ಆಧ್ಯಾತ್ಮಿಕ ಲಾಭ ಮತ್ತು ಆಚರಣೆಯ ವಿಧಾನ – Kannada News | The Spiritual Significance of River Bathing in Magha Masa: Rituals and Benefits

2026ರ ಮಾಘ ಮಾಸವು ಜನವರಿ 19ರ ಸೋಮವಾರದಿಂದ ಪ್ರಾರಂಭವಾಗಿದೆ. ಈ ಮಾಸದಲ್ಲಿ ಮಾಡುವ ಸ್ನಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಏಕೆಂದರೆ ಮಾಘ ಸ್ನಾನವು ಕೇವಲ ದೇಹವನ್ನು ಶುದ್ಧಗೊಳಿಸುವುದಲ್ಲದೆ, ಮನಸ್ಸನ್ನು ಶುದ್ಧಿಪಡಿಸಿ, ಕರ್ಮಗಳನ್ನು ತೊಳೆಯುತ್ತದೆ ಎಂದು ನಂಬಲಾಗಿದೆ. ಮಾಘ ಸ್ನಾನಕ್ಕಾಗಿ ಪವಿತ್ರ ನದಿ ಅಥವಾ ಸಮುದ್ರಗಳಿಗೆ ಹೋಗಬೇಕೇ ಎಂಬ ಪ್ರಶ್ನೆ ಅನೇಕರಿಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಗಂಗಾ…

Read More

ರಾಷ್ಟ್ರಗೀತೆಗೆ ಅಗೌರವ, ಈ ವರ್ಷವೂ ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದ ತಮಿಳುನಾಡು ರಾಜ್ಯಪಾಲ ರವಿ – Kannada News | Tamil Nadu Governor RN Ravi walks out of Assembly again over National Anthem disrespect

ಚೆನ್ನೈ, ಜನವರಿ 20: ತಮಿಳುನಾಡಿನಲ್ಲಿ ವಿಧಾನಸಭಾ ಅಧಿವೇಶನ(Assembly Session) ಶುರುವಾಗಿದೆ. ತಮಿಳು ಗೀತೆಯೊಂದಿಗೆ ಅಧಿವೇಶನ ಆರಂಭಿಸಿದ್ದಾರೆ. ರಾಷ್ಟ್ರಗೀತೆಗೆ ಗೌರವ ಕೊಟ್ಟಿಲ್ಲ ಎನ್ನುವ ಬೇಸರದಲ್ಲಿ ಈ ವರ್ಷವೂ ಕೂಡ ತಮಿಳುನಾಡು ರಾಜ್ಯಪಾಲ್ ಆರ್​ಎನ್​ ರವಿ ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದಿದ್ದಾರೆ. ನನ್ನ ಮೈಕ್  ಸ್ವಿಚ್ ಆಫ್ ಮಾಡಲಾಗಿತ್ತು, ನನ್ನನ್ನು ಅವಮಾನಿಸಲಾಗಿದೆ ಮತ್ತು ನನಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂದು ಹೇಳಿ ಅವರು ಹೊರನಡೆದಿದ್ದಾರೆ. ಕಳೆದ ವರ್ಷವೂ ಕೂಡ ಇದೇ ರೀತಿಯಾಗಿತ್ತು. ತಮಿಳು ಗೀತೆಯ ನಂತರ ರಾಷ್ಟ್ರಗೀತೆ ಹಾಡಬೇಕೆಂದು…

Read More

ಕರ್ನಾಟಕದ ಮಾನ ಗುಜರಾತ್​ನಲ್ಲಿ ಹರಾಜಿಗಿಟ್ಟ ಆರ್​ಟಿಒ ಅಧಿಕಾರಿಗಳು! ಕಾಸು ಕೊಟ್ರೆ ವಾಹನ ತಪಾಸಣೆಯೇ ಮಾಡದೆ ಕೊಡ್ತಾರೆ ಎಫ್​ಸಿ – Kannada News | Karnataka RTO Scam Exposed: Fitness Certificates Issued Without Inspection to Gujarat, Maharashtra Vehicles

ಬೆಂಗಳೂರು, ಜನವರಿ 20: ಕರ್ನಾಟಕದ (Karnataka) ಆರ್‌ಟಿಒ ಕಚೇರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಇದೀಗ ಅನುಮಾನ ಬಲವಾಗಿದೆ. ಅರ್ಹವಲ್ಲದಿದ್ದರೂ ಅಕ್ರಮವಾಗಿ ಗುಜರಾತ್ (Gujrat) ಹಾಗೂ ಮಹಾರಾಷ್ಟ್ರದ ವಾಹನಗಳಿಗೆ ಬೆಂಗಳೂರಿನ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಕರ್ನಾಟಕ ಮುಜುಗರಕ್ಕೀಡಾಗುವಂತಾಗಿದೆ. ನಿಯಮಾನುಸಾರ, ಯಾವುದೇ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಮೊದಲು ಆರ್‌ಟಿಒ ಅಧಿಕಾರಿಗಳು ವಾಹನವನ್ನು ಖುದ್ದಾಗಿ ಪರಿಶೀಲಿಸಬೇಕು. ವಾಹನ ರಸ್ತೆ ಮೇಲೆ ಸಂಚರಿಸಲು ಯೋಗ್ಯವಾಗಿದೆಯೇ, ತುರ್ತು ಸಂದರ್ಭಗಳಿಗೆ ಅಗತ್ಯವಾದ ಸುರಕ್ಷತಾ ಸಾಧನಗಳು…

Read More

ಆಸ್ಟ್ರೇಲಿಯಾದ ಬೀಚ್​ನಲ್ಲಿ ಕೆನಡಾ ಯುವತಿಯ ರಕ್ತಸಿಕ್ತ ಶವ ಪತ್ತೆ, ಡಿಂಗೊ ದಾಳಿ ಶಂಕೆ – Kannada News | Canadian Woman Found Dead on Australia Beach: Dingo Attack Suspected

ಮೆಲ್ಬೋರ್ನ್​, ಜನವರಿ 20: ಆಸ್ಟ್ರೇಲಿಯಾದ ಪ್ರಸಿದ್ಧ ಕಡಲತೀರದಲ್ಲಿ 19 ವರ್ಷದ ಕೆನಡಾ ಯುವತಿಯ ರಕ್ತಸಿಕ್ತವಾದ ದೇಹ ಪತ್ತೆಯಾಗಿದ್ದು, ಡಿಂಗೊ( Dingo)( ಆಸ್ಟ್ರೇಲಿಯಾದ ಕಾಡು ನಾಯಿ) ದಾಳಿಗೆ ಬಲಿಯಾಗಿದ್ದಾರಾ ಎನ್ನುವ ಆತಂಕ ಉಂಟಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಕಗರಿಯಾ ಪೂರ್ವ ಕರಾವಳಿಯಲ್ಲಿರುವ ಕಡಲತೀರದಲ್ಲಿ ಮಹೇನೋ ಹಡಗಿನ ಬಳಿ ಸೋಮವಾರ ಬೆಳಗ್ಗೆ ಯುವತಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆ ಯುವತಿ ಬೆಳಗ್ಗೆ 5 ಗಂಟೆ ಸುಮಾರಿಗೆ ಈಜಲು ಹೋಗುತ್ತಿರುವುದಾಗಿ ತನ್ನ ಸ್ನೇಹಿತರು ಮತ್ತು…

Read More

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್ – Kannada News | Mantralaya Tour from Bengaluru: KSTDC Special Package for Raghavendra Swamy Darshan

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಲು ವಿಶೇಷ ಪ್ಯಾಕೇಜ್​​​ ಒಂದನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (kstdc) ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಜನರು ಮಂತ್ರಾಲಯಕ್ಕೆ ಹೋಗುವುದು ಹೆಚ್ಚು. ಅದರಲ್ಲೂ ಕರ್ನಾಟಕದ ಜನರಿಗೆ ಇದು ಇನ್ನೂ ವಿಶೇಷವಾಗಿರುತ್ತದೆ. ರಾಘವೇಂದ್ರ ಸ್ವಾಮಿ ಕರ್ನಾಟಕದ ಜನರ ಆರಾಧ್ಯ ದೈವ, ಈ ಕ್ಷೇತ್ರ ಆಂಧ್ರ ಗಡಿಯಲ್ಲಿದ್ದರು. ಹೆಚ್ಚು ಜನ ರಾಜ್ಯದಿಂದಲ್ಲೇ ಹೋಗುತ್ತಾರೆ. ರಾಯರ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಜನ ಇರುತ್ತಾರೆ. ಇದೀಗ ಇಲ್ಲಿ ಹೋಗಲು ವಿಶೇಷ ಪ್ಯಾಕೇಜ್​​​ ಒಂದನ್ನು kstdc ನೀಡಿದೆ. ಪ್ರತಿ…

Read More

ಬಾಲ್ಯದ ಗೆಳೆಯನನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ – Kannada News | Muslim Girl Converts for Love: Safina Becomes Simran, Marries Hindu Friend in Khandwa

ಖಾಂಡ್ವಾ, ಜನವರಿ 20: ಪ್ರೀತಿ(Love)ಯು ಜಾತಿ, ಧರ್ಮ ಎಲ್ಲವನ್ನೂ ಮೀರದ್ದು ಅಂತಾರೆ. ತಮ್ಮ ಪ್ರೀತಿಯನ್ನು ಗೆಲ್ಲಿಸಲು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಪ್ರೇಮಿಗಳು ಸಿದ್ಧರಿರುತ್ತಾರೆ. ಯುವತಿ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಲು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಮಹಾದೇವಗಢ ದೇವಸ್ಥಾನವು ಈ ಘಟನೆಗೆ ಸಾಕ್ಷಿಯಾಗಿದೆ. ಅಲ್ಲಿ ನಡೆದ ವಿವಾಹದ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆದಿದೆ. ಮುಸ್ಲಿಂ ಯುವತಿಯೊಬ್ಬರು ಸನಾತನ ಧರ್ಮವನ್ನು ಆರಿಸಿಕೊಂಡಿದ್ದಾರೆ. ತಾನು ಇಷ್ಟಪಟ್ಟವನ ಜತೆ ಸಪ್ತಪದಿ…

Read More

ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು; ನಟ ಜಸ್ಟ್ ಪಾರು – Kannada News | Akshay Kumar Security Car Overturns in Mumbai: Actor Helps Injured Auto Driver

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಭದ್ರತೆಗೆ ಬರುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕಾರು ಪಲ್ಟಿಯಾಗಿತ್ತು. ಅಕ್ಷಯ್ ಕುಮಾರ್ ವಿಮಾನ ನಿಲ್ದಾಣದಿಂದ ಜುಹುವಿನಲ್ಲಿರುವ ತಮ್ಮ ಬಂಗಲೆಗೆ ಪತ್ನಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಯ ಕಾರು ಅಪಘಾತಕ್ಕೆ ಒಳಗಾಗಿದೆ. ಈ ಸಮಯದಲ್ಲಿ ಅಕ್ಷಯ್ ಕುಮಾರ್ ಸಹಾಯಕ್ಕೆ ತೆರಳಿದ್ದು ವಿಶೇಷ. ಅಕ್ಷಯ್ ಹಾಗೂ ಟ್ವಿಂಕಲ್ ವಿದೇಶದ ಪ್ರವಾಸ ಮುಗಿಸಿ ಮುಂಬೈಗೆ ಬಂದರು. ವಿಮಾನ ನಿಲ್ದಾಣದಿಂದ ಮನೆಗೆ ಬರುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಮರ್ಸಿಡಿಸ್ ಕಾರು ಸಂಪೂರ್ಣವಾಗಿ ನಿಯಂತ್ರಣ…

Read More