Breaking News Today Live: ವಾಟ್ಸಾಪ್ ಗ್ಲೋಬಲ್ ಹೆಡ್ ಆಗಿ ಕನ್ನಡಿಗರ ನೆಚ್ಚಿನ ‘ಕ್ರೆಡ್’ ಕುನಾಲ್ ಶಾ ನೇಮಕ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada News Live 23 June 2026 Karnataka Weather, Politics, Cinema, Sports Latest Updates in Kannada

ಭಾರತೀಯ ತಂತ್ರಜ್ಞಾನ ಲೋಕಕ್ಕೆ ಹೆಮ್ಮೆಯ ಸುದ್ದಿ ಸಿಕ್ಕಿದ್ದು,’ಕ್ರೆಡ್’ ಸಂಸ್ಥಾಪಕ ಕುನಾಲ್ ಶಾ ಈಗ ಜಾಗತಿಕ ಮೆಟಾ ಒಡೆತನದ ‘ವಾಟ್ಸಾಪ್’ನ ಜಾಗತಿಕ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಇತ್ತ ಚಿತ್ರರಂಗದಲ್ಲಿ ಅಕ್ಷಯ್ ಕುಮಾರ್ ನಟನೆಯ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದ ಬಿಕಿನಿ ದೃಶ್ಯ ಸೇರಿದಂತೆ 18 ಕಟ್‌ಗಳನ್ನು ಸೂಚಿಸಿ ಸೆನ್ಸಾರ್ ಮಂಡಳಿ ಶಾಕ್ ನೀಡಿದೆ. ಇನ್ನು ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದಿದ್ದರೂ, ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನು ದಿಢೀರ್ ಕೈಬಿಟ್ಟಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಅದು ಮುಗಿದ ಅಧ್ಯಾಯ… ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ ವಿರಾಟ್ ಕೊಹ್ಲಿ – Kannada News | I am done with it: Virat Kohli rules out Test return

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ಮರಳಲಿದ್ದಾರಾ? ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಇಂದಿಗೆ (ಜೂನ್ 23, 2026) ಸರಿಯಾಗಿ 1 ವರ್ಷ 1 ತಿಂಗಳು ಕಳೆದಿದೆ. ಇದಾಗ್ಯೂ ಅವರ ಕಂಬ್ಯಾಕ್ ಅನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅದರಲ್ಲೂ ಕಳೆದ ಕೆಲ ತಿಂಗಳಿಂದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹಿಂಪಡೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೀಗ ಈ ಎಲ್ಲಾ ಸುದ್ದಿಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.

ನವದೆಹಲಿಯಲ್ಲಿ ನಡೆದ ಬ್ರ್ಯಾಂಡ್ ಲಾಂಚ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಟೆಸ್ಟ್ ಕ್ರಿಕೆಟ್​ನಿಂದ ಹೊರಬಂದಿದ್ದೇನೆ. ಹೀಗಾಗಿ ಮತ್ತೆ ರೆಡ್ ಬಾಲ್​ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಒಡೆತನದ ಪ್ರಸಿದ್ಧ ಲೈಫ್‌ಸ್ಟೈಲ್ ಬ್ರ್ಯಾಂಡ್ ‘One8’ ನ ಹೊಸ ಶೂ ಬಿಡುಗಡೆ ಸಮಾರಂಭದಲ್ಲಿ ಕಾರ್ಯಕ್ರಮದ ನಿರೂಪಕ ದಾನಿಶ್ ಸೇಠ್ ಅವರು, ಹೊಸದಾಗಿ ಮಾರುಕಟ್ಟೆಗೆ ಬಂದಿರುವ ‘ರೆಡ್ ಶೂ’ ಬೆಲೆಯನ್ನು ₹9,230 ಕ್ಕೆ ನಿಗದಿಪಡಿಸಲಾಗಿದೆ.

ಈ ಮೊತ್ತವು ನಿಮ್ಮ  ಟೆಸ್ಟ್ ವೃತ್ತಿಜೀವನದಲ್ಲಿ ಗಳಿಸಿದ ಒಟ್ಟು 9,230 ರನ್‌ಗಳಿಗೆ ನಿಖರವಾಗಿ ಹೊಂದಿಕೆಯಾಗುತ್ತದೆ. ಹೀಗಾಗಿ ಈ ಶೂ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಬ್ರ್ಯಾಂಡ್ ಲಾಭಕ್ಕಾಗಿ ನೀವು (ವಿರಾಟ್ ಕೊಹ್ಲಿ) ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳಿ ಇನ್ನೂ ಕೆಲವು ರನ್ ಗಳಿಸುತ್ತೀರಾ? ಎಂದು ತಮಾಷೆಯಾಗಿ ಕೇಳಿದ್ದಾರೆ.

ಈ ಪ್ರಶ್ನೆಗೆ ನಕ್ಕ ವಿರಾಟ್ ಕೊಹ್ಲಿ, “ನಾನು ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲು ಬಯಸುತ್ತೇನೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ಅನ್ನು ಈಗಾಗಲೇ ಮುಗಿಸಿದ್ದೇನೆ” ಎಂದಿದ್ದಾರೆ. ಈ ಮೂಲಕ ನನ್ನ ಟೆಸ್ಟ್ ಕೆರಿಯರ್ ಮುಗಿದ ಅಧ್ಯಾಯ ಎಂದು ಕಿಂಗ್ ಕೊಹ್ಲಿ ಬಹಿರಂಗವಾಗಿಯೇ ಖಚಿತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ವೃತ್ತಿಜೀವನ

ಮೇ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿ, 14 ವರ್ಷಗಳ ಸುದೀರ್ಘ ಅವಧಿಯಲ್ಲಿ ಭಾರತೀಯ ಕ್ರಿಕೆಟ್‌ಗೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಅವರ ಟೆಸ್ಟ್ ಸಾಧನೆಯ ಕಿರುನೋಟ ಇಲ್ಲಿದೆ…

  •  ಒಟ್ಟು ಪಂದ್ಯಗಳು: 123
  • ಒಟ್ಟು ರನ್‌ಗಳು: 9,230
  • ಬ್ಯಾಟಿಂಗ್ ಸರಾಸರಿ: 46.85
  •  ಶತಕಗಳು: 30
  •  ಗರಿಷ್ಠ ಸ್ಕೋರ್: 254*

ಇದನ್ನೂ ಓದಿ: ಭಾರತದ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ಅವರ ನಂತರ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದಾಗಿದೆ. ಇದಾಗ್ಯೂ ಅವರು ರೆಡ್ ಬಾಲ್ ಕ್ರಿಕೆಟ್​ನಲ್ಲಿ 10000 ರನ್ ಪೂರೈಸದೇ ನಿವೃತ್ತಿ ಘೋಷಿಸಿದ್ದು ಅಚ್ಚರಿಗೆ ಕಾರಣವಾಗಿತ್ತು.

Source link

Significance of 108: ಜಪಮಾಲೆಗಳಲ್ಲಿ 108 ಮಣಿಗಳಿರುವುದೇಕೇ ಗೊತ್ತಾ? ಈ ಸಂಖ್ಯೆಯ ಮಹತ್ವ ಇಲ್ಲಿ ತಿಳಿಯಿರಿ – Kannada News | The Profound Significance of 108 in Sanatana Dharma

ಸನಾತನ ಧರ್ಮದಲ್ಲಿ 108 ಸಂಖ್ಯೆImage Credit source: yogmatra.com

ಸನಾತನ ಧರ್ಮದಲ್ಲಿ 108 ಸಂಖ್ಯೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ರುದ್ರಾಕ್ಷಿ ಮಾಲೆ ಅಥವಾ ತುಳಸಿ ಮಾಲೆಗಳಲ್ಲಿ ಸಾಮಾನ್ಯವಾಗಿ 108 ಮಣಿಗಳು ಇರುತ್ತವೆ. ಜಪಗಳನ್ನು 108 ಬಾರಿ ಮಾಡಿದಾಗ ಅದು ಪರಿಪೂರ್ಣವಾಗುತ್ತದೆ ಎಂದು ನಂಬಲಾಗಿದೆ. 108 ಕೇವಲ ಧಾರ್ಮಿಕ ಮಹತ್ವವನ್ನು ಮಾತ್ರವಲ್ಲದೆ, ವೈಜ್ಞಾನಿಕ, ಭೌಗೋಳಿಕ ಮತ್ತು ಸಾಮಾಜಿಕವಾಗಿಯೂ ಹೆಚ್ಚು ಪ್ರಾಶಸ್ತ್ಯ ಪಡೆದಿದೆ. ಇದು ಬ್ರಹ್ಮಾಂಡದ ಸಂಕೇತವಾಗಿದೆ.

ಅಷ್ಟೋತ್ತರ ಶತನಾಮಾವಳಿಗಳಲ್ಲಿಯೂ 108 ದೇವರ ನಾಮಗಳು ಇರುತ್ತವೆ. ಗಾಯತ್ರಿ ಮಂತ್ರ ಜಪ ಸೇರಿದಂತೆ ಯಾವುದೇ ಜಪವನ್ನು 108 ಬಾರಿ ಮಾಡಿದರೆ ಅದರಿಂದ ಸಂಪೂರ್ಣ ಫಲ ದೊರೆಯುತ್ತದೆ. ಆಧ್ಯಾತ್ಮಿಕ ಅಂಶಗಳ ಜೊತೆಗೆ, ಮಾನವ ದೇಹದಲ್ಲಿಯೂ 108ರ ಪ್ರಾಮುಖ್ಯತೆ ಇದೆ. ದೇಹದಲ್ಲಿ 108 ಹೃದಯ ಚಕ್ರಗಳು ಮತ್ತು 108 ನಾಡಿಗಳಿವೆ ಎಂದು ಹೇಳಲಾಗುತ್ತದೆ. ಕಲೆಯ ಕ್ಷೇತ್ರದಲ್ಲೂ 108 ಸಂಖ್ಯೆ ಮಹತ್ವ ಪಡೆದಿದೆ. ಸಂಗೀತದಲ್ಲಿ 108 ವಿಧದ ಆವೃತ್ತಿಗಳು ಮತ್ತು ಭರತನಾಟ್ಯದಲ್ಲಿ 108 ಕರಣಗಳಿವೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ 108 ಸಂಖ್ಯೆಗೆ ವಿಶೇಷ ಸ್ಥಾನವಿದೆ. 12 ರಾಶಿ ಮನೆಗಳನ್ನು 9 ಗ್ರಹಗಳಿಂದ (12 x 9) ಗುಣಿಸಿದಾಗ 108 ಎಂಬ ಪರಿಪೂರ್ಣ ಸಂಖ್ಯೆ ಬರುತ್ತದೆ. ಪ್ರಾಣಾಯಾಮದಲ್ಲಿಯೂ 108ಕ್ಕೆ ಪ್ರಾಮುಖ್ಯತೆ ಇದೆ. ಹಿಂದೂ ಸಂಸ್ಕೃತಿಯಲ್ಲಿ 108 ಆಚಾರ-ವಿಚಾರಗಳನ್ನು ಉಲ್ಲೇಖಿಸಲಾಗಿದೆ.

ಸಂಖ್ಯಾಶಾಸ್ತ್ರೀಯವಾಗಿ, 1 (ಸೂರ್ಯ), 0 (ಶೂನ್ಯ) ಮತ್ತು 8 (ಶನಿ) ಎಂಬ ಸಂಖ್ಯೆಗಳ ಅದ್ಭುತ ಸಂಯೋಜನೆಯು 108 ಆಗಿದೆ. 36 ಭೂತಕಾಲ, 36 ವರ್ತಮಾನಕಾಲ, ಮತ್ತು 36 ಭವಿಷ್ಯತ್ ಕಾಲಗಳನ್ನು ಒಟ್ಟುಗೂಡಿಸಿದಾಗಲೂ 108 ಬರುತ್ತದೆ, ಇದು ಕಾಲದ ಪರಿಪೂರ್ಣತೆಯನ್ನು ಸೂಚಿಸುತ್ತದೆ. ಸೂರ್ಯೋದಯ, ಬ್ರಾಹ್ಮಿ ಮುಹೂರ್ತ, ಅಭಿಜಿನ್ ಮುಹೂರ್ತ ಅಥವಾ ಗೋಧೂಳಿ ಮುಹೂರ್ತದಂತಹ ಪವಿತ್ರ ಸಮಯದಲ್ಲಿ 108 ಬಾರಿ ಜಪ ಮಾಡುವುದು, 108 ಪುಷ್ಪಗಳನ್ನು ಭಗವಂತನಿಗೆ ಅರ್ಪಿಸುವುದು, ಅಥವಾ 108 ವಿಧಾನಗಳಲ್ಲಿ ದೇವರಿಗೆ ಶರಣಾಗುವುದರಿಂದ ಪರಿಪೂರ್ಣತೆ ಲಭಿಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಯಾರಾದರೂ ದಾನ ಮಾಡಬೇಕಾದರೆ, 108 ಸಂಖ್ಯೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ದಾನ ಮಾಡುವುದರಿಂದ ಉತ್ತಮ ಫಲ ದೊರೆಯುತ್ತದೆ. ಇದು ಬ್ರಹ್ಮಾಂಡದ ಸಂಖ್ಯೆಯಾಗಿದ್ದು, ಇದನ್ನು ಅನುಸರಿಸುವುದರಿಂದ ನಮ್ಮ ದೇಹ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ. ಯಾವುದೇ ಪೂಜಾ-ಪುನಸ್ಕಾರಗಳಲ್ಲಿ 108ಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಿಂದ ವಿಶೇಷ ಬಲ ದೊರೆಯುತ್ತದೆ. ಇದು ಕೇವಲ ವೈಯಕ್ತಿಕ ಅಭಿಪ್ರಾಯವಲ್ಲದೆ, ಋಷಿಮುನಿಗಳು, ವೇದಗಳು ಮತ್ತು ಪುರಾಣಗಳಲ್ಲಿ ಉಲ್ಲೇಖಿತವಾದ ಸತ್ಯವಾಗಿದೆ. ಪ್ರತಿದಿನ ಕನಿಷ್ಠ ಒಂದು ಬಾರಿಯಾದರೂ ಗುರುಗಳು ನೀಡಿರುವ ಮಂತ್ರ ಅಥವಾ ಸ್ವತಃ ಸಾಧಿಸಿದ ಮಂತ್ರವನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ 108 ಬಾರಿ ಜಪ ಮಾಡುವುದರಿಂದ ಶುಭವಾಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಜಯನಗರ ಸೇರಿ ಬೆಂಗಳೂರಿನ ವಿವಿಧೆಡೆ ಉತ್ತಮ ವಾಯು ಗುಣಮಟ್ಟ! – Kannada News | Bengaluru AQI Today: Air Quality gets better in Jayanagara and Other places of Bengaluru

ಬೆಂಗಳೂರು, ಜೂನ್ 23: ಇಂದು ರಾಜ್ಯದ ವಿವಿಧ ನಗರಗಳು ಹಾಗೂ ರಾಜಧಾನಿ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಆಶಾದಾಯಕವಾಗಿದೆ. ಮುಂಗಾರು ಮಳೆಯ ಪ್ರಭಾವದಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದ್ದು, ಜನತೆಗೆ ಶುದ್ಧ ಗಾಳಿ ಲಭ್ಯವಾಗುತ್ತಿದೆ. ಸಿಲಿಕಾನ್ ಸಿಟಿ ಸೇರಿದಂತೆ ಬೆಂಗಳೂರಿನ ಹಲವೆಡೆ ಉತ್ತಮ ವಾತಾವರಣ ಕಂಡುಬಂದಿದೆ.

ಮುಖ್ಯಾಂಶಗಳು

  • ಕರ್ನಾಟಕದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಉತ್ತಮವಾಗಿದೆ.
  • ಬೆಂಗಳೂರಿನಲ್ಲಿ ಮುಂಗಾರು ಮಳೆಯಿಂದಾಗಿ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ.
  • ಮಡಿಕೇರಿಯಲ್ಲಿ ಅತ್ಯಂತ ಸ್ವಚ್ಛ ಹಾಗೂ ಆರೋಗ್ಯಕರ ಗಾಳಿ ದಾಖಲಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಹೇಗಿದೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟವು ಉತ್ತಮ ಮತ್ತು ಕೆಲವು ಕಡೆ ಸಾಧಾರಣ ವಲಯದಲ್ಲಿದೆ. ನಗರದ ಸರಾಸರಿ AQI ಪ್ರಮಾಣವು 16 ರಿಂದ 54ರ ಆಸುಪಾಸಿನಲ್ಲಿದೆ.ಗಾಳಿಯಲ್ಲಿನ ಪ್ರಮುಖ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಪ್ರಮಾಣವು ನಿಯಂತ್ರಣದಲ್ಲಿದ್ದು, ಮುಂಗಾರು ಮಾರುತಗಳು ಹಾಗೂ ನಿರಂತರ ಮಳೆಯು ನಗರದ ಹವಾಮಾನವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

  • ಮೆಜೆಸ್ಟಿಕ್: AQI 79 (ಸಾಧಾರಣ)
  • ಜಯನಗರ: AQI 78 (ಸಾಧಾರಣ)
  • ಸಿಲ್ಕ್ ಬೋರ್ಡ್ ಮತ್ತು ಜಿಗಣಿ: AQI 73 – 76
  • ಹೆಬ್ಬಾಳ ಮತ್ತು ಬಿಟಿಎಂ ಲೇಔಟ್: AQI 25 – 34 (ಉತ್ತಮ)

ಕರ್ನಾಟಕದ ಇತರ ಪ್ರಮುಖ ನಗರಗಳ AQI

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಸಹ ಗಾಳಿಯ ಗುಣಮಟ್ಟವು ಬಹುತೇಕ ತೃಪ್ತಿಕರವಾಗಿದೆ. ಕೆಲವು ಕೈಗಾರಿಕಾ ಮತ್ತು ವಾಣಿಜ್ಯ ನಗರಗಳನ್ನು ಹೊರತುಪಡಿಸಿ, ಉಳಿದೆಡೆ ಪರಿಸ್ಥಿತಿ ಉತ್ತಮವಾಗಿದೆ.

  • ಮಡಿಕೇರಿ: AQI 33 (ಅತ್ಯಂತ ಸ್ವಚ್ಛ ಹಾಗೂ ಉತ್ತಮ ಗಾಳಿ)
  • ಮೈಸೂರು: AQI 52 (ಸಾಧಾರಣ)
  • ಮಂಗಳೂರು: AQI 59 (ಸಾಧಾರಣ)
  • ಹುಬ್ಬಳ್ಳಿ – ಧಾರವಾಡ: AQI 71 – 90 (ಸಾಧಾರಣ)
  • ಬೆಳಗಾವಿ ಮತ್ತು ಕಲಬುರಗಿ: AQI 77 – 115 (ಸಾಧಾರಣ)

ಒಟ್ಟಾರೆಯಾಗಿ, ಇಂದು ಬಹುತೇಕ ನಗರಗಳ ನಿವಾಸಿಗಳು ಯಾವುದೇ ಆರೋಗ್ಯದ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಶ್ವಾಸಕೋಶದ ತೊಂದರೆ ಇರುವವರು ಮಾತ್ರ ಬೆಳಗಾವಿಯಂತಹ ಕಡೆಗಳಲ್ಲಿ ಸ್ವಲ್ಪ ಜಾಗ್ರತೆ ವಹಿಸುವುದು ಸೂಕ್ತ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆಯ ಬದಿಯಲ್ಲಿ ತರಕಾರಿ ಖರೀದಿಸಿದ ‘ಪಂಚಾಯತ್’ ಸರಣಿ ಶಾಸಕ, ಫೋಟೋ ವೈರಲ್ – Kannada News | Panchayat’s Pankaj Jha Viral: MLA Chandrakishore Singh’s Vegetable Photo Wows Fans

ಅಮೆಜಾನ್ ಪ್ರೈಮ್‌ನ ಜನಪ್ರಿಯ ವೆಬ್ ಸರಣಿ ‘ಪಂಚಾಯತ್’ ನ ನಾಲ್ಕೂ ಸೀಸನ್‌ಗಳು ಸೂಪರ್ ಹಿಟ್ ಆಗಿವೆ. ಈಗ ಪ್ರೇಕ್ಷಕರು ಐದನೇ ಸೀಸನ್‌ಗಾಗಿ ಕಾಯುತ್ತಿದ್ದಾರೆ. ಈ ಸರಣಿಯಲ್ಲಿ ಶಾಸಕ ಚಂದ್ರಕಿಶೋರ್ ಸಿಂಗ್ ಪಾತ್ರ ಮಾಡಿರುವ ನಟ ಪಂಕಜ್ ಝಾ ಈಗ ಸುದ್ದಿಯಲ್ಲಿದ್ದಾರೆ. ಅವರ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ವೈರಲ್ ಫೋಟೋದಲ್ಲೇನಿದೆ?

ಪಂಕಜ್ ಝಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ರಸ್ತೆ ಬದಿಯಲ್ಲಿ ಕುಳಿತು ತರಕಾರಿ ಖರೀದಿಸುತ್ತಿದ್ದಾರೆ. ಅವರ ಮುಂದೆ ಟೊಮೆಟೊ, ಸೌತೆಕಾಯಿ, ಕುಂಬಳಕಾಯಿ ಇಡಲಾಗಿದೆ. ಈ ಫೋಟೋಗೆ ಅವರು ಯಾವುದೇ ಶೀರ್ಷಿಕೆ ನೀಡಿಲ್ಲ. ಹೀಗಾಗಿ ಇದು ಯಾವಾಗ ತೆಗೆದ ಫೋಟೋ ಎಂದು ಯಾರಿಗೂ ತಿಳಿದಿಲ್ಲ.

ಅಭಿಮಾನಿಗಳ ತಮಾಷೆಯ ಕಾಮೆಂಟ್‌ಗಳು:

ಫೋಟೋ ನೋಡಿದ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಅಭಿಮಾನಿ, ‘ಶಾಸಕರೇ, ಸೋರೆಕಾಯಿ ತೆಗೆದುಕೊಳ್ಳಿ’ ಎಂದು ಬರೆದಿದ್ದಾರೆ. ಸರಣಿಯಲ್ಲಿ ಸೋರೆಕಾಯಿ ದೃಶ್ಯ ಬಹಳ ಫೇಮಸ್ ಆಗಿದೆ. ಇನ್ನೊಬ್ಬರು, ‘ಶಾಸಕರಾದ ಮೇಲೆಯೂ ಬಡತನ ಬಂದಂತೆ ಕಾಣುತ್ತಿದೆ’ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ‘ಶಾಸಕರಿಗೆ ಕೋಳಿ ಮಾಂಸ ಎಂದರೆ ಹೆಚ್ಚು ಇಷ್ಟ’ ಎಂದು ಕಾಮೆಂಟ್ ಮಾಡಿದ್ದಾರೆ.

ಸರಣಿಯಲ್ಲಿ ನೆಗೆಟಿವ್ ಪಾತ್ರ:

‘ಪಂಚಾಯತ್’ ಸರಣಿಯಲ್ಲಿ ಪಂಕಜ್ ಝಾ ಅವರು ವಿಲನ್ ಪಾತ್ರ ಮಾಡಿದ್ದಾರೆ. ಅವರ ನಟನೆ ಮತ್ತು ಡೈಲಾಗ್‌ಗಳು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿವೆ.

ಇದನ್ನೂ ಓದಿ: ಪಂಚಾಯತ್ ನಟನ ಮೇಲೆ ಜಾತಿ ತಾರತಮ್ಯ; ಕರ್ನಾಟಕದ ದೇವಸ್ಥಾನದಲ್ಲಿ ಪ್ರವೇಶ ನಿರಾಕರಣೆ

‘ಪಂಚಾಯತ್ 5’ ಅಪ್ಡೇಟ್:

ಈಗಾಗಲೇ ಈ ಸರಣಿಯ ನಾಲ್ಕು ಭಾಗಗಳು ಯಶಸ್ವಿಯಾಗಿವೆ. ಐದನೇ ಭಾಗದ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಈ ವರ್ಷದ ಕೊನೆಯಲ್ಲಿ ‘ಪಂಚಾಯತ್ ಸೀಸನ್ 5’ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕ್ ಉಗ್ರರ ಪ್ರೇಮಪಾಶಕ್ಕೆ ಬಿದ್ದ ಜೈಪುರ ಮಹಿಳೆ: ಜೈಶ್ ಸಂಘಟನೆ ಜೊತೆ ಸಂಪರ್ಕ, ಮದುವೆ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನ – Kannada News | Jaipur Woman Arrested: Jaish e Mohammed Online Radicalization and Conversion Plot Exposed

ಜೈಪುರ, ಜೂನ್ 23: ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಸಂಘಟನೆ ‘ಜೈಶ್-ಎ-ಮೊಹಮ್ಮದ್’ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (ATS) ಜೈಪುರದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿದೆ. ಆನ್‌ಲೈನ್ ಮೂಲಕ ಭಾರತೀಯರನ್ನು ಸೆಳೆದು, ಮತಾಂತರ(Conversion)ಗೊಳಿಸಿ, ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವ ಪಾಕಿಸ್ತಾನದ ದೊಡ್ಡ ಜಾಲವೊಂದು ಈ ಬಂಧನದಿಂದ ಬಯಲಾಗಿದೆ.

ಬಂಧಿತ ಮಹಿಳೆಯನ್ನು ಬಬಿತಾ ಧಕಾಡ್ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಹೆಸರನ್ನು ‘ಖದೀಜಾ’ ಎಂದು ಬದಲಾಯಿಸಿಕೊಂಡಿದ್ದಳು. ಮೂಲತಃ ಗಂಗಾಪುರದವಳಾದ ಈಕೆ ಜೈಪುರದಲ್ಲಿ ಗೃಹಿಣಿಯಾಗಿದ್ದಳು.

ಆಕೆಯ ಮೊಬೈಲ್ ಪರಿಶೀಲಿಸಿದಾಗ ಎರಡು ಸಿಮ್ ಕಾರ್ಡ್‌ಗಳು ಪತ್ತೆಯಾಗಿದ್ದು, ವಾಟ್ಸಾಪ್‌ನಲ್ಲಿ ಹಲವಾರು ಪಾಕಿಸ್ತಾನಿ ನಂಬರ್‌ಗಳು ಹಾಗೂ ವಿದೇಶಿ ವ್ಯಕ್ತಿಗಳೊಂದಿಗೆ ನಿರಂತರವಾಗಿ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ. ಆಕೆಯ ಫೇಸ್‌ಬುಕ್ ಖಾತೆಯ ಗೆಳೆಯರ ಪಟ್ಟಿಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಲೋಗೊ, ಮಾರಕಾಸ್ತ್ರಗಳನ್ನು ಹಿಡಿದಿರುವ ಉಗ್ರರ ಪ್ರೊಫೈಲ್‌ಗಳು ಪತ್ತೆಯಾಗಿವೆ.

ಪಾಕಿಸ್ತಾನದ ಧರ್ಮಗುರುವೊಬ್ಬ ಫೋನ್ ಮೂಲಕವೇ ಈಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಪ್ರೇರೇಪಿಸುತ್ತಿದ್ದ. ‘ಅಬು-ಉಬೈದಾ’ ಎಂಬ ವ್ಯಕ್ತಿ ಈಕೆಯನ್ನು ಮದುವೆಯಾಗಲು ಬಯಸುತ್ತಾನೆ ಎಂದು ನಂಬಿಸಿ, ಆಕೆಗೆ ನಮಾಜ್ ಮತ್ತು ಕುರಾನ್ ಪಠಿಸಲು ಸೂಚಿಸಲಾಗಿತ್ತು. ಈಕೆಯನ್ನು ನೇಪಾಳ, ಸೌದಿ ಅರೇಬಿಯಾ ಅಥವಾ ಯುಎಇ (ದುಬೈ) ಮಾರ್ಗವಾಗಿ ಪಾಕಿಸ್ತಾನಕ್ಕೆ ಕರೆಸಿಕೊಳ್ಳಲು ಸಂಚು ರೂಪಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.

ಮತ್ತಷ್ಟು ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ

ಕಂದಹಾರ್ ವಿಮಾನ ಅಪಹರಣದ (IC 814) ಮಾಸ್ಟರ್ ಮೈಂಡ್ ಮಸೂದ್ ಅಜರ್‌ನ ಆಪ್ತರೊಂದಿಗೆ ಈಕೆಯ ಜಾಲಕ್ಕೆ ಸಂಪರ್ಕವಿರುವ ಶಂಕೆ ಇದೆ. ನವೆಂಬರ್ 29, 2016 ರಂದು ಜಮ್ಮುವಿನ ಸೇನಾ ಶಿಬಿರದ ಮೇಲೆ ನಡೆದ ಭೀಕರ ದಾಳಿಯ ಪ್ರಕರಣದಲ್ಲೂ ಈಕೆ ಶಾಮೀಲಾಗಿದ್ದಾಳೆ ಎಂದು ಹೇಳಲಾಗಿದೆ. ಆ ದಾಳಿಯಲ್ಲಿ ಭಾರತದ 6 ಜನ ಸೈನಿಕರು ಮೃತಪಟ್ಟಿದ್ದರು.

ಎಟಿಎಸ್ ಅಧಿಕಾರಿಗಳು ಏನಂತಾರೆ?
ಎಟಿಎಸ್ ಎಸ್‌ಪಿ ಮನೀಶ್ ತ್ರಿಪಾಠಿ ಅವರ ಪ್ರಕಾರ, ತನಿಖೆ ಇನ್ನು ಆರಂಭಿಕ ಹಂತದಲ್ಲಿದೆ. ಕಳೆದ 6-7 ತಿಂಗಳುಗಳಿಂದ ಪಾಕಿಸ್ತಾನದ ಜಾಲವು ಈಕೆಯನ್ನು ಸಂಪೂರ್ಣವಾಗಿ ಬ್ರೈನ್ ವಾಶ್ ಮಾಡಿ, ಮತಾಂತರಗೊಳಿಸಲು ಪ್ರಯತ್ನಿಸುತ್ತಿತ್ತು. ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಈಕೆಯನ್ನು ಸ್ಲೀಪರ್ ಸೆಲ್ ಆಗಿ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದರು. ಸದ್ಯ ಆಕೆಯ ಮೊಬೈಲ್ ಮತ್ತು ಡಿಜಿಟಲ್ ಸಾಧನಗಳ ಹೆಚ್ಚಿನ ತಪಾಸಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತದ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ – Kannada News | England T20 Squad Against India

ಭಾರತದ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಜುಲೈ 1 ರಿಂದ ಶುರುವಾಗಲಿರುವ ಈ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್​ 17 ಸದಸ್ಯರುಗಳನ್ನು ಆಯ್ಕೆ ಮಾಡಿದ್ದಾರೆ. ಇನ್ನು ಈ ತಂಡದ ನಾಯಕನಾಗಿ ಯುವ ಸ್ಫೋಟಕ ದಾಂಡಿಗ ಹ್ಯಾರಿ ಬ್ರೂಕ್ ಕಾಣಿಸಿಕೊಳ್ಳಲಿದ್ದಾರೆ.

ಚೊಚ್ಚಲ ಅವಕಾಶ:

17 ಸದಸ್ಯರುಗಳ ತಂಡದಲ್ಲಿ ಸಸೆಕ್ಸ್ ತಂಡದ 22 ವರ್ಷದ ಯುವ ಆಲ್ ರೌಂಡರ್ ಜೇಮ್ಸ್ ಕೋಲ್ಸ್ ಕೂಡ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಲಯನ್ಸ್ ಪರ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಯಾರು ಇನ್? ಯಾರು ಔಟ್?

ಟಿ20 ವಿಶ್ವಕಪ್‌ ವೇಳೆ ಹೊರಗುಳಿದಿದ್ದ ಜೋರ್ಡನ್ ಕಾಕ್ಸ್, ಸೋನಿ ಬೇಕರ್ ಮತ್ತು ಸಾಕಿಬ್ ಮಹಮೂದ್ ಈ ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ. ಹಾಗೆಯೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಬ್ರೈಡನ್ ಕಾರ್ಸ್ ಮತ್ತು ಆಲ್ ರೌಂಡರ್ ಜೇಮಿ ಓವರ್ಟನ್ ಈ ಸರಣಿಯಿಂದ ಹೊರಗುಳಿದಿದ್ದಾರೆ.

ಇನ್ನುಳಿದಂತೆ ಅನುಭವಿ ಆಟಗಾರರಾದ ಜೋಸ್ ಬಟ್ಲರ್, ಫಿಲ್ ಸಾಲ್ಟ್, ಜೋಫ್ರಾ ಆರ್ಚರ್ ಮತ್ತು ಆದಿಲ್ ರಶೀದ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅದರಂತೆ ಇಂಗ್ಲೆಂಡ್ ಟಿ20 ತಂಡ ಈ ಕೆಳಗಿನಂತಿದೆ…

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್),  ಫಿಲ್ ಸಾಲ್ಟ್, ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್,  ಜೋಫ್ರಾ ಆರ್ಚರ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್,  ಆದಿಲ್ ರಶೀದ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ಲ್ಯೂಕ್ ವುಡ್, ಸೋನಿ ಬೇಕರ್.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ,  ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ.

ಭಾರತ vs ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿ

ಪಂದ್ಯ  ದಿನಾಂಕ (2026) ಕ್ರೀಡಾಂಗಣ  ಸ್ಥಳ ಸಮಯ (IST)
1ನೇ ಟಿ20 ಜುಲೈ 1, ಬುಧವಾರ ರಿವರ್‌ಸೈಡ್ ಗ್ರೌಂಡ್ ಚೆಸ್ಟರ್-ಲೆ-ಸ್ಟ್ರೀಟ್ ರಾತ್ರಿ 10:00 ಗಂಟೆಗೆ
2ನೇ ಟಿ20 ಜುಲೈ 4, ಶನಿವಾರ ಓಲ್ಡ್ ಟ್ರಾಫೋರ್ಡ್ ಮ್ಯಾಂಚೆಸ್ಟರ್ ಸಂಜೆ 7:00 ಗಂಟೆಗೆ
3ನೇ ಟಿ20 ಜುಲೈ 7, ಮಂಗಳವಾರ ಟ್ರೆಂಟ್ ಬ್ರಿಡ್ಜ್ ನಾಟಿಂಗ್ಹ್ಯಾಮ್ ರಾತ್ರಿ 10:00 ಗಂಟೆಗೆ
4ನೇ ಟಿ20 ಜುಲೈ 9, ಗುರುವಾರ ಸೀಟ್ ಯುನಿಕ್ ಸ್ಟೇಡಿಯಂ ಬ್ರಿಸ್ಟಲ್ ರಾತ್ರಿ 10:00 ಗಂಟೆಗೆ
5ನೇ ಟಿ20 ಜುಲೈ 11, ಶನಿವಾರ ದಿ ರೋಸ್ ಬೌಲ್ ಸೌತಾಂಪ್ಟನ್ ಸಂಜೆ 7:00 ಗಂಟೆಗೆ

ಈ ಐದು ಪಂದ್ಯಗಳ ಟಿ20 ಸರಣಿ ಮುಗಿದ ಬಳಿಕ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರು ಮ್ಯಾಚ್​ಗಳ ಏಕದಿನ ಸರಣಿ ಶುರುವಾಗಲಿದೆ.

Source link

ಬದುಕುವ ಆಸೆ ಇಲ್ಲ, ದಯಾಮರಣ ಕೊಡಿ: ಅಪಘಾತದಲ್ಲಿ 9 ಜನರನ್ನು ಕಳೆದುಕೊಂಡು, ಅಧಿಕಾರಿಗಳ ಕಿರುಕುಳಕ್ಕೆ ಬೆಂದ ವೃದ್ಧ ದಂಪತಿಯ ಕಣ್ಣೀರು – Kannada News | Elderly Couple’s Euthanasia Plea: Harassment After Family Loss Shocks Gujarat

ಸೂರತ್, ಜೂನ್ 23:ನಮಗೆ ಇನ್ನು ಬದುಕುವ ಆಸೆ ಉಳಿದಿಲ್ಲ, ನ್ಯಾಯ ಸಿಗದಿದ್ದರೆ ಸಾವು ಮಾತ್ರ ನಮಗೆ ಏಕೈಕ ದಾರಿ, ನಮಗೆ ದಯಾಮರಣ(Euthanasia )ಕ್ಕೆ ಅನುಮತಿ ಕೊಡಿ ಎಂದು ಗುಜರಾತ್​ನ ಸೂರತ್ ನಗರದ ನಿವಾಸಿ ಶ್ಯಾಮ್​ಭಾಯಿ ಗೆಹ್ಲೋಟ್ ಮತ್ತು ಅವರ ಪತ್ನಿ ಮಧುಬೆನ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಕಣ್ಣೀರು ಹಾಕಿದ್ದಾರೆ. ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ತಮಗೆ ಕಳೆದ ಐದು ವರ್ಷಗಳಿಂದ ತೀವ್ರ ಆರ್ಥಿಕ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವೃದ್ಧ ದಂಪತಿ ಆರೋಪಿಸಿದ್ದಾರೆ.

ಒಂದೇ ಕುಟುಂಬದ 9 ಜನರ ಸಾವು, ವೃದ್ಧ ದಂಪತಿ ಒಂಟಿ
ಈ ದಂಪತಿ ಬದುಕು ಮೊದಲೇ ದುರಂತದಿಂದ ಕೂಡಿತ್ತು. ನವೆಂಬರ್ 7, 2016 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇವರ ಏಕೈಕ ಮಗ, ಸೊಸೆ, ಮೊಮ್ಮಕ್ಕಳು, ಮಗಳು, ಅಳಿಯ ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಸಾವನ್ನಪ್ಪಿದ್ದರು. ಅಂದಿನಿಂದ ಈ ವೃದ್ಧ ದಂಪತಿಗೆ ಜಗತ್ತಿನಲ್ಲಿ ಯಾರು ಇಲ್ಲದೆ, ಒಬ್ಬರನ್ನೊಬ್ಬರು ಆಸರೆ ಮಾಡಿಕೊಂಡು ಬದುಕುತ್ತಿದ್ದಾರೆ. ಬದುಕಿನ ಆಧಾರಕ್ಕಾಗಿ ಸಣ್ಣ ಅಂಗಡಿಗಳನ್ನು ನಂಬಿಕೊಂಡಿದ್ದರು.

ಅಂಗಡಿಗಳಿಗೆ ಬೀಗ: ದಂಪತಿ 2006 ರಲ್ಲಿ ಖರೀದಿಸಿದ್ದ 11 ಸಣ್ಣ ಅಂಗಡಿಗಳಿಗೆ 2021 ರಲ್ಲಿ ಮುನ್ಸಿಪಲ್ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಬೀಗ (ಸೀಲ್) ಹಾಕಿದ್ದರು. ಇದರ ವಿರುದ್ಧ ವೃದ್ಧ ದಂಪತಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿ ಭೀಕರ ಕಾನೂನು ಹೋರಾಟ ನಡೆಸಿದರು. ಅಗ್ನಿಶಾಮಕ ಇಲಾಖೆಯ ಅನುಕೂಲಕರ ವರದಿಯ ನಂತರ, ಇದೇ ವರ್ಷ ಜನವರಿ 31 ರಂದು ಅವರ ಅಂಗಡಿಗಳನ್ನು ಮತ್ತೆ ತೆರೆಯಲಾಯಿತು.

ಮತ್ತಷ್ಟು ಓದಿ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ: ಕಾರಣ ಇಲ್ಲಿದೆ

ಆದರೆ ಕೋರ್ಟ್‌ನಲ್ಲಿ ದಂಪತಿ ಗೆದ್ದ ಕೆಲವೇ ದಿನಗಳಲ್ಲಿ, ಅಂದರೆ ಮೇ 30 ರಂದು ಮುನ್ಸಿಪಲ್ ಇಂಜಿನಿಯರ್ ಸೂಚನೆಯ ಮೇರೆಗೆ ಯಾವುದೇ ಲಿಖಿತ ನೋಟಿಸ್ ನೀಡದೆ ಅಂಗಡಿಗಳಿಗೆ ಮತ್ತೆ ಬೀಗ ಜಡಿಯಲಾಗಿದೆ. ಸ್ಥಳೀಯ ನಾಯಕರನ್ನು ಭೇಟಿಯಾಗುವಂತೆ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಅಂಗಡಿಗಳನ್ನು ಕಿತ್ತುಕೊಂಡು, ಆಸ್ತಿಯನ್ನು ತಮ್ಮ ವಶಕ್ಕೆ ಪಡೆಯಲು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿ ಸಂಚು ರೂಪಿಸಿದ್ದಾರೆ ಎಂದು ಶ್ಯಾಮ್‌ಭಾಯಿ ಗೆಹ್ಲೋಟ್ ಆರೋಪಿಸಿದ್ದಾರೆ. ಅಂಗಡಿಗೆ ಸೀಲ್ ಹಾಕಲು ಯಾವುದೇ ಅಧಿಕೃತ ಕಾರಣವನ್ನು ಮಹಾನಗರ ಪಾಲಿಕೆ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.

ದುಡಿಯುವ ಮಾರ್ಗವಿಲ್ಲದೆ, ಆರ್ಥಿಕವಾಗಿ ಸಂಪೂರ್ಣವಾಗಿ ಸಂಕಷ್ಟ ಎದುರಿಸುತ್ತಿರುವ ಈ ವೃದ್ಧ ದಂಪತಿ, ಅಧಿಕಾರಿಗಳ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಾಗದೆ ಜಿಲ್ಲಾಧಿಕಾರಿಗೆ ಪತ್ರ ಬರೆದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಘಟನೆ ಸದ್ಯ ಇಡೀ ಗುಜರಾತ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೈಂಗಿಕ ಕಿರುಕುಳದಿಂದ ಬೇಸತ್ತ ನಟಿ; ಪ್ಯಾನಿಕ್ ಅಟ್ಯಾಕ್​​ನಿಂದ ಕಂಗಾಲು – Kannada News | Gayathri Gupta’s Mental Health Battle: Actress Reveals Panic Attacks

ನಿರ್ದೇಶಕ ಶೇಖರ್ ಕಮ್ಮುಲ ಅವರ ‘ಫಿದಾ’ ಚಿತ್ರದಲ್ಲಿ ಸಾಯಿ ಪಲ್ಲವಿ (Sai Palavi) ಸ್ನೇಹಿತೆಯಾಗಿ ನಟಿಸುವ ಮೂಲಕ ಗಾಯತ್ರಿ ಗುಪ್ತಾ ಗುರುತಿಸಿಕೊಂಡರು. ಇದರೊಂದಿಗೆ ‘ಕೊಬ್ಬರ್ ಮಟ್ಟಾ’, ‘ಐಸ್ ಕ್ರೀಮ್’, ‘ಅಮರ್ ಅಕ್ಬರ್ ಆಂಟನಿ’, ‘ಬುರ್ರಕಥಾ’ ಮತ್ತು ‘ಸೀತಾ ಆನ್ ದಿ ರೋಡ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸಿನಿಮಾಗಳಲ್ಲದೆ ತಮ್ಮ ದಿಟ್ಟ ಹೇಳಿಕೆ ಮತ್ತು ನಿರ್ಮಾಪಕರಿಂದ ಎದುರಿಸಿದ ಲೈಂಗಿಕ ಕಿರುಕುಳದ ಕುರಿತಾದ ಸಂವೇದನಾಶೀಲ ಹೇಳಿಕೆಗಳಿಂದಲೂ ಅವರು ಸದಾ ಸುದ್ದಿಯಲ್ಲಿದ್ದಾರೆ. ಈಗ ಅವರು ಸಂಕಷ್ಟದಲ್ಲಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಗಾಯತ್ರಿ, ತಾವು ತೀವ್ರ ಪ್ಯಾನಿಕ್ ಅಟ್ಯಾಕ್ ಮತ್ತು ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದ್ದರು. ಲೈಂಗಿಕ ದೌರ್ಜನ್ಯದಿಂದಾಗಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಚಿಕಿತ್ಸೆ ಪಡೆಯಲು ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದರು.

ಸಹಾಯಕ್ಕಾಗಿ ‘ವಾಯ್ಸ್ ಆಫ್ ವುಮೆನ್’ ಸಂಸ್ಥೆಯನ್ನು ಸಂಪರ್ಕಿಸಿದರೂ ಸ್ಪಂದನೆ ಸಿಗಲಿಲ್ಲ ಎಂದು ಗಾಯತ್ರಿ ಹೇಳಿದ್ದಾರೆ. ಸಾಯುವ ಆಲೋಚನೆಯಿಂದ ಹೊರಬರಲು ತಮಗೆ ಯಾರಾದರೂ ಬೆಂಬಲ ನೀಡುವವರ ಅಗತ್ಯವಿದೆ ಎಂದಿರುವ ಅವರು, ಈ ಪರಿಸ್ಥಿತಿಯಿಂದ ಹೊರಬರಲು ತಮಗೆ ವಕೀಲರ ಸಹಾಯ ಬೇಕೇ ಅಥವಾ ಚಿಕಿತ್ಸಕರ ಅಗತ್ಯವಿದೆಯೇ ಎಂಬ ಗೊಂದಲದಲ್ಲಿದ್ದಾರೆ.

ಇದನ್ನೂ ಓದಿ: ಧನುಷ್ ಮುಂದಿನ ಚಿತ್ರದಲ್ಲಿ ಸಾಯಿ ಪಲ್ಲವಿ ಪೊಲೀಸ್ ಅಧಿಕಾರಿ? ವೈರಲ್ ಆಗ್ತಿದೆ ‘ಡಿ55’ ಅಪ್‌ಡೇಟ್

‘ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ತಕ್ಷಣದ ಸಹಾಯದ ಅಗತ್ಯವಿದೆ’ ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ. ‘ನಟಿಸುವವರೆಲ್ಲರೂ ಕೇವಲ ನಾಟಕ ಆಡುತ್ತಾರೆ, ಆದರೆ ವಾಸ್ತವದಲ್ಲಿ ಯಾರೂ ಕಾಳಜಿ ವಹಿಸುವುದಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ. ಸದ್ಯ, ಈ ವಿಡಿಯೋವನ್ನು ಪೋಸ್ಟ್ ಮಾಡಿದ ಕೆಲವೇ ಸಮಯದ ನಂತರ ಗಾಯತ್ರಿ ಅದನ್ನು ಡಿಲೀಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಸ್ಸಿ ಮ್ಯಾಜಿಕ್… 2 ಗೋಲುಗಳು 2 ವಿಶ್ವ ದಾಖಲೆ! – Kannada News | Lionel Messi Breaks FIFA World Cup Records

ಫುಟ್‌ಬಾಲ್ ಲೋಕದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಇಬ್ಬರ ಹೆಸರಿನಲ್ಲಿದ್ದ ವಿಶ್ವ ದಾಖಲೆಗಳನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 2-0 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಗೋಲುಗಳು ಮೂಡಿಬಂದಿರುವುದು ಕಾಲ್ಚೆಂಡು ಚತುರ ಲಿಯೋನೆಲ್ ಮೆಸ್ಸಿ ಕಾಲುಗಳಿಂದ.

ಪಂದ್ಯದ 38ನೇ ನಿಮಿಷದಲ್ಲಿ ಫಾಕುಂಡೋ ಮಡೀನಾ ನೀಡಿದ ಅದ್ಭುತ ಪಾಸ್ ಅನ್ನು ಮೆಸ್ಸಿ ಗೋಲು ಪೆಟ್ಟಿಗೆಯತ್ತ ತಳ್ಳುವ ಮೂಲಕ ಮೊದಲ ಗೋಲು ದಾಖಲಿಸಿದರು.  ಇದಾದ ಬಳಿಕ ಹಲವು ಬಾರಿ ಪ್ರಯತ್ನ ನಡೆಸಿದರೂ ಅರ್ಜೆಂಟೀನಾ ಆಟಗಾರರಿಗೆ ಚೆಂಡನ್ನು ಗುರಿ ತಲುಪಿಸಲು ಸಾಧ್ಯವಾಗಿರಲಿಲ್ಲ.

ಆದರೆ ಇನ್ನೇನು ಪಂದ್ಯ ಮುಗಿಯಲಿದೆ ಅನ್ನುವಷ್ಟರಲ್ಲಿ ಇಂಜುರಿ ಟೈಮ್‌ನಲ್ಲಿ ((90+5ನೇ ನಿಮಿಷ) ಮೆಸ್ಸಿ ಮತ್ತೊಂದು ಆಕರ್ಷಕ ಗೋಲು ಬಾರಿಸಿದರು.

ಈ ಗೋಲುಗಳೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ಪ್ಲೇಯರ್ ಎಂಬ ವಿಶ್ವ ದಾಖಲೆಯನ್ನು ಲಿಯೋನೆಲ್ ಮೆಸ್ಸಿ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಬ್ಬರ ಹೆಸರಿನಲ್ಲಿತ್ತು.

  • ಮಿರೋಸ್ಲಾವ್ ಕ್ಲೋಸ್ (ಜರ್ಮನಿ): ಪುರುಷರ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗೋಲು ಗಳಿಸಿದ ದಾಖಲೆ ಮಿರೋಸ್ಲಾವ್ ಕ್ಲೋಸ್ ಹೆಸರಲ್ಲಿತ್ತು. ಜರ್ಮನಿ ಪರ 24 ವಿಶ್ವಕಪ್ ಪಂದ್ಯಗಳನ್ನಾಡಿರುವ ಕ್ಲೋಸ್ 16 ಗೋಲುಗಳನ್ನು ಬಾರಿಸಿ ಫಿಫಾ ವಿಶ್ವಕಪ್​ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.
  • ಮಾರ್ಟಾ (ಬ್ರೆಝಿಲ್): ಮಹಿಳಾ ವಿಶ್ವಕಪ್‌ನಲ್ಲಿ 17 ಗೋಲುಗಳನ್ನು ಬಾರಿಸಿ ಬ್ರೆಝಿಲ್​ನ ಮಾರ್ಟಾ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ಗಳಿಸಿದ ಪ್ಲೇಯರ್ ಎನಿಸಿಕೊಂಡಿದ್ದರು.

ಇದೀಗ ಒಂದೇ ಪಂದ್ಯದಲ್ಲಿ ಈ ಇಬ್ಬರ ಸಾರ್ವಕಾಲಿಕ ವಿಶ್ವ ದಾಖಲೆಗಳನ್ನು ಲಿಯೋನೆಲ್ ಮೆಸ್ಸಿ ತಮ್ಮದಾಗಿಸಿಕೊಂಡಿದ್ದಾರೆ.

  • ಲಿಯೋನೆಲ್ ಮೆಸ್ಸಿ: ಅರ್ಜೆಂಟೀನಾ ಪರ ಈವರೆಗೆ 28 ವಿಶ್ವಕಪ್ ಪಂದ್ಯಗಳನ್ನಾಡಿರುವ ಮೆಸ್ಸಿ ಒಟ್ಟು 18 ಗೋಲುಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಪುರುಷರ ಫಿಫಾ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ದಾಖಲಿಸಿ ಕ್ಲೋಸ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮೆಸ್ಸಿ ಅಳಿಸಿ ಹಾಕಿದ್ದಾರೆ. ಹಾಗೆಯೇ 18 ಗೋಲುಗಳೊಂದಿಗೆ ಬ್ರೆಝಿಲ್​ನ ಮಾರ್ಟಾ (17 ಗೋಲು) ಹೆಸರಿನಲ್ಲಿದ್ದ ಐತಿಹಾಸಿಕ ದಾಖಲೆಯನ್ನು ಕೂಡ ಮೆಸ್ಸಿ ಮುರಿದಿದ್ದಾರೆ.

ಈ ಮೂಲಕ ಲಿಯೋನೆಲ್ ಮೆಸ್ಸಿ ಈಗ ಪುರುಷರ ಮತ್ತು ಮಹಿಳಾ ವಿಶ್ವಕಪ್ ಎರಡರಲ್ಲೂ ಸಾರ್ವಕಾಲಿಕ ಗರಿಷ್ಠ ಗೋಲುಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!

ಒಟ್ಟಾರೆಯಾಗಿ, ಲಿಯೋನೆಲ್ ಮೆಸ್ಸಿ ಅವರ ಈ ಅಭೂತಪೂರ್ವ ಸಾಧನೆ ಕೇವಲ ಫುಟ್‌ಬಾಲ್ ಇತಿಹಾಸದ ಮತ್ತೊಂದು ಪುಟವಲ್ಲ. ಇದು ಒಂದು ಸುವರ್ಣ ಅಧ್ಯಾಯ. ಮಿರೋಸ್ಲಾವ್ ಕ್ಲೋಸ್ ಮತ್ತು ಮಾರ್ಟಾ ಅವರಂತಹ ಮಹಾನ್ ದಂತಕಥೆಗಳ ವಿಶ್ವ ದಾಖಲೆಗಳನ್ನು ಅಳಿಸಿ ಹಾಕುವ ಮೂಲಕ, ತಾವು ಯಾಕೆ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದನ್ನು ಮೆಸ್ಸಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Published On – 7:35 am, Tue, 23 June 26

Source link

Exit mobile version