ಕುಂತ್ರೂ ನಿಂತ್ರೂ ಯಾರೋ ಎದುರುಗಡೆ ಬಂದ ಅನುಭವ: ವಿಚಿತ್ರವಾಗಿ ವರ್ತಿಸಿ ಮಹಿಳೆ ಸಾವು

ಕುಂತ್ರೂ ನಿಂತ್ರೂ ಯಾರೋ ಎದುರುಗಡೆ ಬಂದ ಅನುಭವ: ವಿಚಿತ್ರವಾಗಿ ವರ್ತಿಸಿ ಮಹಿಳೆ ಸಾವು

ಚಿಕ್ಕಬಳ್ಳಾಪುರ, ಮಾರ್ಚ್​ 26: ಗಂಡು ದೆವ್ವವೊಂದು ಕೊಡಬಾರದ ಕಾಟ ಕೊಡುತ್ತಿದೆ ಅಂತ ಭಯಗೊಂಡಿದ್ದ ಓರ್ವ ಮಹಿಳೆ ಕೊನೆಗೂ ವಿಚಿತ್ರವಾಗಿ ವರ್ತಿಸಿ ಮೃತಪಟ್ಟಿರುವಂತಹ (death) ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುಳಾ(36) ಮೃತ ಮಹಿಳೆ. ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಮಂಜುಳಾರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ಮಂಜುಳಾ ಅವರು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದವರು. ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದ ರಮೇಶ್​ ಎನ್ನುವವರನ್ನು ಮದುವೆಯಾಗಿ 16 ವರ್ಷವಾಗಿದೆ. ದಂಪತಿ ಮಧ್ಯೆ ಯಾವುದೇ ಸಮಸ್ಯೆ ಇರಲಿಲ್ಲವಂತೆ. ಆದರೆ ಇತ್ತೀಚೆಗೆ ತವರು ಮನೆಗೆ ಹೋಗಿದ್ದು, ಮಾವನ ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದರಂತೆ.

ಇದನ್ನೂ ಓದಿ: ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು

ವಾಪಸ್ ಗಂಡನ ಮನೆಗೆ ಬರುತ್ತಿದ್ದಂತೆ ವಿಚಿತ್ರವಾಗಿ ವರ್ತಿಸುವುದು, ಕುಂತ್ರು ನಿಂತ್ರು ಯಾರೋ ಎದುರುಗಡೆ ಬಂದು ಕಾಟ ಕೊಡುತ್ತಿರುವ ಅನುಭವ ಆಗುತ್ತಿತ್ತಂತೆ. ಹೀಗಾಗಿ ಪತಿ ರಮೇಶ್​ ಕೆಲಸ ಕಾರ್ಯ ಬಿಟ್ಟು ಒಂದು ವಾರದಿಂದ ದೇವರು ದಿಂಡಿರು, ಮಂತ್ರವಾದಿ ಎಂದು ಅಲೆದಾಡಿದ್ದಾರೆ. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಮಂತ್ರವಾದಿ ಬಳಿ ಹೋಗಿ ತಾಯತ ಕಟ್ಟಿಸಿದ್ದರು. ಆದರೂ ವಾಸಿಯಾಗಿರಲಿಲ್ಲ. ಬಳಿಕ ವೈದ್ಯರ ಬಳಿ ತೋರಿಸಿದರೂ ಏನೂ ಪ್ರಯೋಜನವಾಗಿಲ್ಲ. ವಿಚಿತ್ರವಾಗಿ ವರ್ತಿಸಿ ಕೊನೆಗೆ ಪ್ರಾಣವನ್ನೇ ಬಿಟ್ಟಿದ್ದಾರೆ.

ಮೃತಳ ತಾಯಿ ಆಕ್ರೋಶ

ಯಾರೋ ದೊಡ್ಡಬಳ್ಳಾಪುರದ ಸುನಿಲ್ ಎನ್ನುವವರ ದೃಶ್ಯ ಕಣ್ಮುಂದೆ ಬರುತ್ತೆ. ತಾಳುವುದಕ್ಕೆ ಆಗುತ್ತಿಲ್ಲ ಅಂತ ಚಡಪಡಿಸುತ್ತಿದ್ದರೆಂದು ರಮೇಶ್ ಹೇಳಿದ್ದಾರೆ. ಇತ್ತ ಮಂಜಳಾ ತವರು ಮನೆಯವರು ಏಕೆ ನಮಗೆ ಮೊದಲೇ ಹೇಳಲಿಲ್ಲ. ಸತ್ತ ಮೇಲೆ ಹೇಳಿದ್ದಾರೆ ಅಂತ ಮೃತಳ ತಾಯಿ ಗಂಗಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು

ಮಂಜುಳಾರಿಗೆ ದೆವ್ವ, ಭೂತದ ಕಾಟನೋ ಇಲ್ಲಾ ಯಾರದ್ದಾದರೂ ಭಯನೋ ಗೊತ್ತಿಲ್ಲ. ಮನೋರೋಗ ತಜ್ಞರ ಬಳಿ ಚಿಕಿತ್ಸೆ ಕೊಡಿಸಿದ್ದರೆ ಮಂಜುಳಾ ಬದುಕುಳಿಯುತ್ತಿದ್ದರೋ ಏನೋ, ಮಂತ್ರವಾದಿಗಳ ಮಾತು ಕೇಳಿ, ದೆವ್ವದ ಭೀತಿಯಿಂದ ಆಚೆ ಬರದೆ ಮೃತಪಟ್ಟಿರುವುದು ಮಾತ್ರ ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಶ್ಮಿಕಾ, ವಿಜಯ್ ಮದುವೆ ಆಗಿ ಕಳೆಯಿತು 1 ತಿಂಗಳು: ಮತ್ತೆ ಹೊಸ ಫೋಟೋಸ್ ಹಂಚಿಕೊಂಡ ಜೋಡಿ

Source link

ಬಿಸಿಲಿನ ಮಧ್ಯೆಯೇ ಗುಡುಗು ಸಹಿತ ಮಳೆ: ಮುಂದಿನ 7 ದಿನ ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ಬೆಂಗಳೂರು, ಮಾ.26: ರಾಜ್ಯದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ವರುಣನ ಆಗಮನದ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಮುಂದಿನ ಒಂದು ವಾರ ರಾಜ್ಯದಾದ್ಯಂತ ಮಿಶ್ರ ಹವಾಮಾನ ಇರಲಿದ್ದು, ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಹಗಲಿನ ವೇಳೆಯಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಲಿದ್ದು, ಒಣ ಹವೆ ಮುಂದುವರಿಯಲಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರಲಿದೆ.

ಮಧ್ಯಾಹ್ನದ ನಂತರ ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ವರದಿಯ ಪ್ರಕಾರ, ಅಲ್ಲಲ್ಲಿ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿಯೊಂದಿಗೆ (Thunderstorms & Gusty Winds) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಿಡಿಲು ಮತ್ತು ಮಿಂಚಿನ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಮತ್ತು ಮರದ ಕೆಳಗೆ ನಿಲ್ಲದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ: ಆಲಿಕಲ್ಲು, ಬಿರುಗಾಳಿ ಸಹಿತ ಗುಡುಗು-ಮಿಂಚು ಬರುವ ಸಾಧ್ಯತೆ

ಇಲ್ಲಿದೆ  ಎಕ್ಸ್​​ ಪೋಸ್ಟ್​;

ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮೈಸೂರು, ಮಂಡ್ಯ, ಚಾಮರಾಜನಗರದಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮಲೆನಾಡು ಭಾಗಗಳಾದ ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲೂ, ಸೆಖೆ ಹೆಚ್ಚಿರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ. ಬೆಳಗಾವಿ, ಧಾರವಾಡ, ಹಾವೇರಿ ಈ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಇದೆ. ಕಲಬುರಗಿ, ಬೀದರ್, ರಾಯಚೂರು, ವಿಜಯಪುರ ಬಿಸಿಲಿನ ತಾಪಮಾನ 40°C ದಾಟುವ ಸಾಧ್ಯತೆಯಿದೆ. ಮಳೆಯ ಮುನ್ಸೂಚನೆ ತೀರಾ ಕಡಿಮೆ ಇದ್ದು, ಒಣ ಹವೆ ಮುಂದುವರಿಯಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!

ಬೆಂಗಳೂರು, (ಮಾರ್ಚ್ 26): ಅಪ್ರಾಪ್ತ ಬಾಲಕನೊಬ್ಬ ಡಬಲ್‌ ಮರ್ಡರ್‌ ಮಾಡಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್‌ ಠಾಣಾ (Peenya Police Station) ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ಬೆಂಗಳೂರು ಬೆಚ್ಚಿಬಿದ್ದಿದೆ. ಯಮುನಾ (36), ಆಕೆಯ ಸಹೋದರ ಸುದೀಪ್ (34) ಕೊಲೆಯಾದವರು. ಯಮುನಾ ಗಂಡ ಮಲ್ಲೇಗೌಡ ಛಾಯಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿತ್ತು. ಇದನ್ನ ಕೇಳಲು ಯಮುನಾ ಮತ್ತು ಆಕೆಯ ಸಹೋದರ ಸುದೀಪ್‌ ಛಾಯಾ ಮನೆ ಬಳಿ ಹೋಗಿದ್ದರು. ಅಕ್ರಮ ಸಂಬಂಧ ವಿಚಾರ ಪ್ರಸ್ತಾಪಿಸುತ್ತಿದ್ದಾಗ ವಾಗ್ವಾದ ಬೆಳೆದಿತ್ತು. ಈ ವೇಳೆ ಮನೆಯಲ್ಲೇ ಇದ್ದ ಛಾಯಾಳ ಮಗ, ಇಬ್ಬರನ್ನೂ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಇನ್ನು ಕೊಲೆಯಾದ ಸುದೀಪ್ ಮಾವನ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ, ತಮ್ಮನ ಕೊಲೆ: 16 ವರ್ಷದ ಬಾಲಕನಿಂದ ಕೃತ್ಯ

Source link

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಸುನಾಮಿ: 1500 ಕೋಟಿ ಕ್ಲಬ್ ಸೇರುತ್ತಾ ರಣವೀರ್ ಸಿಂಗ್ ಸಿನಿಮಾ?

ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ನಾಗಾಲೋಟಕ್ಕೆ ತಡೆ ಇಲ್ಲದಂತಾಗಿದೆ. ವಾರಾಂತ್ಯದ ನಂತರವೂ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ವಾರದ ದಿನಗಳಲ್ಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಚಿತ್ರ, ಮಾರ್ಚ್ 23 (ಸೋಮವಾರ) ಮತ್ತು ಮಾರ್ಚ್ 24 (ಮಂಗಳವಾರ) ಕೂಡ ತಲಾ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದೆ.

2025ರಲ್ಲಿ ಬಿಡುಗಡೆಯಾಗಿದ್ದ ‘ಧುರಂಧರ್’ ಮೊದಲ ಭಾಗವು ಭಾರತದಲ್ಲಿ ಬರೋಬ್ಬರಿ 1000 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿ ದಾಖಲೆ ನಿರ್ಮಿಸಿತ್ತು. ಇದೀಗ ಅದರ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ ಚಿತ್ರವು ಹಳೇ ದಾಖಲೆಯನ್ನು ಅಳಿಸಿ ಹಾಕುವುದು ಮಾತ್ರವಲ್ಲದೆ, ಹೊಸ ಮೈಲಿಗಲ್ಲು ಸ್ಥಾಪಿಸುವತ್ತ ಮುನ್ನುಗ್ಗುತ್ತಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಹೊಸ ಇತಿಹಾಸ ಬರೆಯುವ ಲಕ್ಷಣ ಕಾಣಿಸಿದೆ.

ರಣವೀರ್ ಸಿಂಗ್ ಅಭಿನಯದ ಈ ಚಿತ್ರವು ಆರಂಭದಲ್ಲಿ 1000 ಕೋಟಿ ರೂಪಾಯಿಗಳ ಗಡಿಯನ್ನು ದಾಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪ್ರಸ್ತುತ ಚಿತ್ರಮಂದಿರಗಳಲ್ಲಿ ಕಂಡುಬರುತ್ತಿರುವ ಕ್ರೇಜ್ ನೋಡಿದರೆ ಈ ಚಿತ್ರವು ಕೇವಲ ದೇಶೀಯ ಮಾರುಕಟ್ಟೆಯಲ್ಲೇ 1500 ಕೋಟಿ ರೂಪಾಯಿಗಳ ಲೈಫ್ ಟೈಮ್ ಗಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ರಣವೀರ್ ಸಿಂಗ್ ಅವರ ಅಭಿನಯ ಮತ್ತು ಅದ್ದೂರಿ ಮೇಕಿಂಗ್ ಈ ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣಗಳಾಗಿವೆ. ದಿನದಿಂದ ದಿನಕ್ಕೆ ಚಿತ್ರದ ಜನಪ್ರಿಯತೆ ಹೆಚ್ಚುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಅನೇಕ ಸೆಲೆಬ್ರಿಟಿಗಳು ಭೇಷ್ ಎನ್ನುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’

‘ಧುರಂಧರ್ 2’ ಸಿನಿಮಾ ತೆರೆಕಂಡು ಒಂದು ವಾರ ಕಳೆದಿದೆ. ಅಷ್ಟರಲ್ಲೇ ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾಗೆ 600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ. ವಿಶ್ವಾದ್ಯಂತ 1000 ಕೋಟಿ ರೂಪಾಯಿ ಮೀರಿದೆ. ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತದ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿ ತೆರೆಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಸ್ಪತ್ರೆಯಲ್ಲಿ ಸೋನಿಯಾರನ್ನು ನೋಡಿಕೊಂಡ ಕೇರಳ ನರ್ಸ್​ ಬಗ್ಗೆ ರಾಹುಲ್ ಶ್ಲಾಘನೆಗೆ ವೈದ್ಯರ ಪ್ರತಿಕ್ರಿಯೆ

ನವದೆಹಲಿ, ಮಾರ್ಚ್​ 26: ಆಸ್ಪತ್ರೆಯಲ್ಲಿ ತಾಯಿ ಸೋನಿಯಾಗಾಂಧಿಯನ್ನು ಚೆನ್ನಾಗಿ ನೋಡಿಕೊಂಡ ಕೇರಳದ ನರ್ಸ್​ ಬಗ್ಗೆ ರಾಹುಲ್ ಗಾಂಧಿ(Rahul Gandhi) ಶ್ಲಾಘಿಸಿದ್ದರು. ಅದಕ್ಕೆ ವೈದ್ಯರಾದ ಸುಧೀರ್ ಕುಮಾರ್ ಮಾತನಾಡಿದ್ದು, ಎಲ್ಲಾ ನರ್ಸ್​, ವೈದ್ಯರು ಹಾಗೂ ಇತರೆ ಆರೋಗ್ಯ ವೃತ್ತಿಪರರ ಬಗ್ಗೆ ನಮಗೆ ಹೆಮ್ಮೆ ಇದೆ. ರಾತ್ರಿಯಲ್ಲಿ ಕೆಲಸ ಮಾಡದೆ ಬೇರೆ ಆಯ್ಕೆ ಅವರಿಗಿರುವುದಿಲ್ಲ.

ರಾತ್ರಿಯಲ್ಲಿ ಕೆಲಸ ಮಾಡುವ ನರ್ಸ್​ಗಳು ಹಗಲಿನ ವೇಳೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಬಿಡುವಿನ ವೇಳೆ ಮಲಗುತ್ತಾರೆ. ರಾತ್ರಿ ಶಿಫ್ಟ್​ ಸರದಿಯಲ್ಲಿ ಬರುತ್ತವೆ. ಹೆಚ್ಚಿನ ನರ್ಸ್​ಗಳು ಕೇರಳದವರಾಗಿದ್ದರೂ, ಇತರ ಭಾರತೀಯ ರಾಜ್ಯಗಳ ನರ್ಸ್​ಗಳು ಕೂಡ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ ಎಂದು ಬರೆದಿದ್ದಾರೆ.

‘‘ ನಾನು ಆಸ್ಪತ್ರೆಯಲ್ಲಿ ತಾಯಿಯಿದ್ದ ಕೋಣೆಯಲ್ಲಿ ಒಂದು ಸಣ್ಣ ಸೋಫಾದ ಮೇಲೆ ಮಲಗಿದ್ದೆ, ಎಲ್ಲಾ ಮಕ್ಕಳಂತೆ ನಾನೂ ಕೂಡ ತಾಯಿಯ ಆರೋಗ್ಯದ ಬಗ್ಗೆ ಚಿಂತಿತನಾಗಿದ್ದೆ. ಕೇರಳದ ನರ್ಸ್​ ಒಬ್ಬರು ನನ್ನ ತಾಯಿಯ ಬ್ಗಗೆ ತುಂಬಾ ಕಾಳಜಿವಹಿಸಿದ್ದರು, ಅದು ನನಗೆ ಸಮಾಧಾನ ತಂದಿತ್ತು’’ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಕೇರಳ ಒಂದರಲ್ಲೇ ಸುಮಾರು 5,00000 ನೋಂದಾಯಿತ ನರ್ಸ್​ಗಳಿದ್ದಾರೆ. ಕೇರಳವು ಏಪ್ರಿಲ್ 9 ರಂದು ಒಂದೇ ಹಂತದ ವಿಧಾನಸಭಾ ಚುನಾವಣೆಯನ್ನು ನಡೆಸಲಿದೆ.

‘‘ರಾತ್ರಿಯಿಡೀ, ಒಂದೇ ಒಂದು ವಿಷಯ ನನಗೆ ಸಮಾಧಾನ ನೀಡಿತ್ತು. ಪ್ರತಿ ಗಂಟೆಗೊಮ್ಮೆ ನನ್ನ ತಾಯಿಯನ್ನು ಪರೀಕ್ಷಿಸಲು ಕೇರಳದ ಒಬ್ಬ ನರ್ಸ್ ಬರುತ್ತಿದ್ದರು. ಪ್ರತಿ ಗಂಟೆಗೂ ಅವರು ಬಂದು ಅವರನ್ನು ಪರಿಶೀಲಿಸುತ್ತಿದ್ದರು. ಅವರು ನಗುತ್ತಾ ಅವರ ಕೈ ಹಿಡಿದುಕೊಳ್ಳುತ್ತಿದ್ದರು. ಕೇರಳದ ನರ್ಸ್‌ಗಳು ತಮ್ಮ ಅತ್ಯಂತ ಕಷ್ಟದ ಕ್ಷಣಗಳಲ್ಲಿ ಎಷ್ಟು ಮಂದಿಗೆ ಸಾಂತ್ವನ ನೀಡಿರಬಹುದು’’.

ಮತ್ತಷ್ಟು ಓದಿ: ರಾಹುಲ್ ಗಾಂಧಿಯವರೇ ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ: ಬಿಜೆಪಿ ಸಂಸದನ ಪ್ರಶ್ನೆ

ಬೆಳಗ್ಗೆ ನಾನು ಅವರನ್ನು ಕೇಳಿದೆ, “ನೀವು ರಾತ್ರಿ ಮಲಗುತ್ತೀರಾ ಅಥವಾ ರಾತ್ರಿಯಿಡೀ ಕೆಲಸ ಮಾಡುತ್ತೀರಾ? ಅದಕ್ಕೆ ಅವರು ನಾನು ರಾತ್ರಿಯಿಡೀ ಕೆಲಸ ಮಾಡುತ್ತೇನೆ ಎಂದರು, ಹಾಗಾಗಿ, ಪ್ರಪಂಚದಾದ್ಯಂತ ಜನರು ನಿದ್ರಿಸುತ್ತಿರುವಾಗ, ಕೇರಳದ ಮಹಿಳೆಯರು, ಕೇರಳದಲ್ಲಿ ಮಾತ್ರವಲ್ಲದೆ ದೆಹಲಿಯಲ್ಲಿ, ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ, ಜನರನ್ನು ಸಾಂತ್ವನ ನೀಡುತ್ತಿದ್ದಾರೆ’’ ಎಂದು ರಾಹುಲ್ ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಂಗೇರಿದ ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಯಾವ ಕಡೆ?

ಬಾಗಲಕೋಟೆ, (ಮಾರ್ಚ್ 26): ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು ರಂಗೇರಿದೆ. ಆದ್ರೆ, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್​​​ಗೆ ಮುಸ್ಲಿಂ ಸಮುದಾಯ ಕಂಟಕವಾಗಿ ಪರಿಣಮಿಸಿದೆ. ಅದರಲ್ಲೂ ಮುಖ್ಯವಾಗಿ ದಾವಣಗೆರೆಯಲ್ಲಿ ಮುಸ್ಲಿಂ ಮುಖಂಡರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದು, ಬಾಗಲಕೋಟೆ ಮುಸ್ಲಿಮರಿಗೂ ಕಾಂಗ್ರೆಸ್​​ಗೆ ಮತ ಹಾಕಬೇಡಿ ಎಂದು ಕರೆ ಕೊಟ್ಟಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲೂ ದಾಣವಗೆರೆ ಮುಸ್ಲಿಂ ಸಮುದಾಯದ ಬಂಡಾಯದ ಬಿಸಿ ತಟ್ಟುತ್ತಾ ಎನ್ನುವ ಆತಂಕ ಇತ್ತು. ಆದ್ರೆ, ಬಾಗಲಕೋಟೆ ಮುಸ್ಲಿಮರು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಬಾಗಲಕೋಟೆಯಲ್ಲಿ ನಮ್ಮ ಸಮುದಾಯದಿಂದ ಯಾವುದೇ ಬಂಡಾಯ ಇಲ್ಲ. ನಾವೆಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ನಮ್ಮ ಸಮುದಾಯಕ್ಕೆ ಆದ ಅನ್ಯಾಯ ಹೈಕಮಾಂಡ್ ನಾಯಕರು ಸರಿ ಮಾಡ್ತೇವೆ ಎಂದು ಹೇಳಿದ್ದಾರೆ. ದಾವಣೆಗೆರೆ ವಸ್ತು ಸ್ಥಿತಿ ಬೇರೆಯೇ ಇದೆ. ಬಾಗಲಕೋಟೆಯ ವಸ್ತು ಸ್ಥಿತಿ ಬೇರೆ ಇದೆ. ಬಾಗಲಕೋಟೆಯ ಶಾಸಕರಾಗಿದ್ದ ದಿವಂಗತ ಎಚ್.ವೈ ಮೇಟಿ ಅವರು ನಮ್ಮ ಸಮುದಾಯದ ಜನರನ್ನು ಸರಿಯಾಗಿ ನೋಡಿಕೊಂಡಿದ್ದಾರೆ. ನಾವೆಲ್ಲರೂ ಮೇಟಿ ಕುಟುಂಬದ ಪರ ನಿಲ್ಲುತ್ತೇವೆ. ಬಾಗಲಕೋಟೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆಗೆ ನಿಲ್ಲುತ್ತೆ. ಈ ಬಾರಿ ನಾವು ಉಮೇಶ್ ಪರ ಕೆಲಸ ಮಾಡ್ತೇವೆ, ಇಲ್ಲಿ ನಮ್ಮ ಬಂಡಾಯ ಇಲ್ಲ ಎಂದಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ನಿಟ್ಟುಸಿರುಬಿಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: 12 ಸ್ಥಳ, 50 ಪಂದ್ಯಗಳು; ಐಪಿಎಲ್​ನ ಎರಡನೇ ಹಂತದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

2026 ರ ಐಪಿಎಲ್​ನ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. 50 ಪಂದ್ಯಗಳನ್ನು ಒಳಗೊಂಡ ಲೀಗ್ ಹಂತದ ಉಳಿದ ಪಂದ್ಯಗಳು ಏಪ್ರಿಲ್ 13 ರಿಂದ ಮೇ 24, 2026 ರವರೆಗೆ ಭಾರತದ 12 ಸ್ಥಳಗಳಲ್ಲಿ ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯ್ಪುರ್ ಮತ್ತು ನ್ಯೂ ಚಂಡೀಗಢದಲ್ಲಿ ನಡೆಯಲಿವೆ. ಉಳಿದಂತೆ ಪ್ಲೇಆಫ್‌ ಸುತ್ತಿನ 4 ಪಂದ್ಯಗಳ ವೇಳಾಪಟ್ಟಿಯನ್ನು ಕೊನೆಯ ವಾರದಲ್ಲಿ ಘೋಷಿಸಲಾಗುವುದು. ಆದಾಗ್ಯೂ ಈ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು 74 ರಿಂದ 84 ಕ್ಕೆ ಹೆಚ್ಚಿಸಲಾಗುವುದು ಎಂಬ ಸುದ್ದಿ ಹರಿದಾಡಿತ್ತು. ಆದರೆ ಬಿಸಿಸಿಐ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸದೆ 74 ಪಂದ್ಯಗಳಿಗೆ ಸೀಮಿತಗೊಳಿಸಿದೆ.

Source link

ಪ್ರತಿ ಸಿನಿಮಾದ ಸಂಭಾವನೆಯಲ್ಲಿ ತಮ್ಮ ಗುರುವಿಗೆ 25 ಸಾವಿರ ಕೊಡ್ತಾರೆ ಅನುಪಮ್ ಖೇರ್

ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Anupam Kher) ಕಳೆದ 44 ವರ್ಷಗಳಿಂದ ನಟಿಸುತ್ತಿದ್ದಾರೆ. ಈ ವರೆಗೆ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1982 ರಲ್ಲಿ ಅವರು ನಟನೆ ಆರಂಭಿಸಿದರು. ಅವರ ನಟನೆಯ ಎರಡನೇ ಸಿನಿಮಾ ಹಾಗೂ ಅನುಪಮ್ ಖೇರ್ ಅವರಿಗೆ ದೊಡ್ಡ ಗುರುತು ನೀಡಿದ ಸಿನಿಮಾ ‘ಸಾರಾಂಶ್’. ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್. ‘ಸಾರಾಂಶ್’ ಬಳಿಕ ದೊಡ್ಡ ಸ್ಟಾರ್ ಆಗಿ ಬೆಳೆದರು. ಅನುಪಮ್ ಖೇರ್ ಅವರು ಆಗಿನಿಂದಲೂ ಮಹೇಶ್ ಭಟ್ ಅವರನ್ನು ತಮ್ಮ ಗುರು ಎಂದೇ ಭಾವಿಸುತ್ತಾರೆ, ಆರಾಧಿಸುತ್ತಾರೆ. ಅದು ಯಾವ ಮಟ್ಟಿಗಿನ ಗುರು ಭಕ್ತಿ ಎಂದರೆ ಅನುಪಮ್ ಖೇರ್, ಪ್ರತಿ ಸಿನಿಮಾ ಒಪ್ಪಿಕೊಂಡಾಗಲೂ 25 ಸಾವಿರ ರೂಪಾಯಿ ಹಣವನ್ನು ಮಹೇಶ್ ಭಟ್ ಅವರಿಗೆ ಕಳಿಸುತ್ತಾರಂತೆ.

ಇತ್ತೀಚೆಗೆ ಶೋ ಒಂದರಲ್ಲಿ ಅನುಪಮ್ ಖೇರ್ ಅವರು ಮಹೇಶ್ ಭಟ್ ಅವರೊಟ್ಟಿಗಿನ ತಮ್ಮ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ತಾವು ನಟಿಸುವ ಪ್ರತಿಯೊಂದು ಸಿನಿಮಾದ ಸಂಭಾವನೆಯಿಂದ 25,000 ರೂಪಾಯಿಗಳನ್ನು ತಮ್ಮ ಗುರು ಮಹೇಶ್ ಭಟ್ ಅವರಿಗೆ ನೀಡುತ್ತಾರಂತೆ. ‘ಇದು ನಾನು ಅವರಿಗೆ ಸಲ್ಲಿಸುವ ಗೌರವ ಮತ್ತು ಗುರುದಕ್ಷಿಣೆ. 1984ರಲ್ಲಿ ‘ಸಾರಂಶ್’ ಚಿತ್ರದ ಮೂಲಕ ನನಗೆ ಜೀವನ ನೀಡಿದವರು ಅವರು. ಅಂದಿನಿಂದ ಇಂದಿನವರೆಗೂ ನಾನು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೇನೆ’ ಎಂದು ಖೇರ್ ತಿಳಿಸಿದ್ದಾರೆ.

ಇದೇ ಸಂದರ್ಶನದಲ್ಲಿ ತಮ್ಮ ಫಿಟ್ನೆಸ್ ಬಗ್ಗೆಯೂ ಮಾತನಾಡಿದ 69 ವರ್ಷದ ನಟ, ತಮಗೆ ಈಗಿನ ವಯಸ್ಸಿನಲ್ಲೂ ಸಿಕ್ಸ್ ಪ್ಯಾಕ್ ಅಥವಾ ಉತ್ತಮ ಮೈಕಟ್ಟು ಪ್ರದರ್ಶಿಸುವ ಆಸೆ ಇದೆ ಎಂದಿದ್ದಾರೆ. ‘ನಾನು ನನ್ನ ದೇಹವನ್ನು ಪ್ರದರ್ಶಿಸಲು ಬಯಸುತ್ತೇನೆ. ಜನರು ನನ್ನ ಫಿಟ್ನೆಸ್ ನೋಡಿ ಆಶ್ಚರ್ಯಪಡಬೇಕು ಎಂಬುದು ನನ್ನ ಇಚ್ಛೆ. ಅದಕ್ಕಾಗಿ ನಾನು ಕಠಿಣ ವ್ಯಾಯಾಮ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ಅನುಪಮ್ ಖೇರ್, 28 ವರ್ಷದ ನಟನಾಗಿದ್ದಾಗ, 65 ವರ್ಷದ ವೃದ್ಧನ ಪಾತ್ರವನ್ನು ಮಹೇಶ್ ಭಟ್ ನೀಡಿದ್ದರು. ಮೊದಲು ಈ ಪಾತ್ರಕ್ಕೆ ಸಂಜೀವ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು, ಆದರೆ ಭಟ್ ಅವರು ಖೇರ್ ಅವರ ಪ್ರತಿಭೆ ನಂಬಿ ಅವಕಾಶ ನೀಡಿದ್ದರು.

ಇದನ್ನೂ ಓದಿ:‘ಕಾಂತಾರ’ ವೀಕ್ಷಿಸಿ ರಿಷಬ್​​ಗೆ ವಿಡಿಯೋ ಕಾಲ್ ಮಾಡಿದ ಅನುಪಮ್ ಖೇರ್

ನಿರ್ದೇಶಕ ಮಹೇಶ್ ಭಟ್ ಅವರು ಈ ಹಣವನ್ನು ಸ್ವೀಕರಿಸುತ್ತಾರೆಯೇ ಎಂಬ ಪ್ರಶ್ನೆಗೆ, ‘ಅವರು ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ, ಅದು ನಮ್ಮ ನಡುವಿನ ನಂಬಿಕೆ ಮತ್ತು ಗೌರವದ ಸಂಕೇತ’ ಎಂದು ಖೇರ್ ಈ ಹಿಂದೆ ತಿಳಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನುಪಮ್ ಖೇರ್ ಅವರು ಯೋಗ ಮತ್ತು ಜಿಮ್‌ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಶಾರುಖ್ ಖಾನ್ ಅಥವಾ ಸಲ್ಮಾನ್ ಖಾನ್ ಅವರಂತೆ ತಮಗೂ ಫಿಟ್ ಬಾಡಿ ಇರಬೇಕು ಎಂಬುದು ಅವರ ಇತ್ತೀಚಿನ ಸಿನಿಮಾಗಳ ತಯಾರಿಗಾಗಿ ಇಟ್ಟುಕೊಂಡಿರುವ ಗುರಿಯಾಗಿದೆಯಂತೆ.

ಅನುಪಮ್ ಖೇರ್ ಅವರು ಹಿಂದಿ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ, ಇಂಗ್ಲೀಷ್, ಚೈನೀಸ್, ಬೆಂಗಾಲಿ ಮತ್ತು ಕನ್ನಡ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಅನುಪಮ್ ಖೇರ್ ಅವರು ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ‘ಘೋಸ್ಟ್’ನಲ್ಲಿ ನಟಿಸಿದ್ದಾರೆ. 2012 ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ ‘ಪಾರಿಜಾತ’ನಲ್ಲಿಯೂ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಹುಲ್ ಗಾಂಧಿಯವರೇ ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ: ಬಿಜೆಪಿ ಸಂಸದನ ಪ್ರಶ್ನೆ

ನವದೆಹಲಿ, ಮಾರ್ಚ್​ 26: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಮೀಸಲಾತಿ ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲಿ ನಿಮ್ಮ ತಾಯಿಗೆ ಏಕೆ ಚಿಕಿತ್ಸೆ ಕೊಡಿಸುತ್ತಿದ್ದೀರ, ಏಮ್ಸ್​ನಲ್ಲಿ ಚಿಕಿತ್ಸೆ ಕೊಡಿಸಿದ್ದರೆ ನಿಮಗೆ ಶೇ.60ರಷ್ಟು ಮೀಸಲಾತಿ ಇರುವ ವೈದ್ಯರೇ ಸಿಗುತ್ತಿದ್ದರು. ನಿಮಗೆ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಇಲ್ಲವೇ, ನಾವೆಲ್ಲರೂ ಸೋನಿಯಾ ಬೇಗ ಚೇತರಿಸಿಕೊಳ್ಳಲೆಂದೇ ಬಯಸುತ್ತೇವೆ, ಜಾರ್ಜ್ ಸೊರಸ್ ಅವರ ಮಾತು ಕೇಳಿ ಸಮಾಜವನ್ನು ವಿಭಜಿಸಲು ಯಾಕೆ ನೀವು ಪ್ರಯತ್ನಿಸುತ್ತಿದ್ದೀರಿ ಎಂದು ದುಬೆ ಪ್ರಶ್ನಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version