ವಿರೋಧಿಗಳಿಗೆ ಜಿ.ಟಿ. ದೇವೇಗೌಡ ಟಕ್ಕರ್​​: JDSನಿಂದ ಹೊರ ಬರ್ತಾರಾ ಹಾಲಿ ಶಾಸಕ? – Kannada News | JDS MLA G.T. Devegowda Clarifies Rumours, Says He Will Remain in the Party

ಮೈಸೂರು, ಜನವರಿ 19: ರಾಜ್ಯದಲ್ಲಿ ಮುಂಬರಲಿರುವ ವಿಧಾನ ಸಭೆ ಚುನಾವಣೆಯಲ್ಲಿ JDSನಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾ.ರಾ. ಮಹೇಶ್​ ಸ್ಪರ್ಧೆ ಮಾಡ್ತಾರೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು. ಆ ಮೂಲಕ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಹಾಲಿ ಶಾಸಕ ಜಿ.ಟಿ. ದೇವೇಗೌಡರಿಗೆ ಶಾಕ್​​ ಕೊಡಲು ದಳಪತಿಗಳು ಮುಂದಾದ್ರಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಇದೇ ವಿಚಾರವಾಕ್ಕೀಗ ಸ್ವತಃ ಜಿಟಿಡಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಜಿ.ಟಿ. ದೇವೇಗೌಡರು ಹೇಳಿದ್ದೇನು?

ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದ್ದು, ನಮ್ಮ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ. ಚುನಾವಣೆ ಬಂದಾಗ ಬೇರೆ ವಿಚಾರದ ಬಗ್ಗೆ ಚರ್ಚೆ ಮಾಡೋಣ. ಈಗ ಜೆಡಿಎಸ್​ನಲ್ಲಿ ಇದ್ದೇನೆ, ಜೆಡಿಎಸ್​ನಿಂದ ಒಂದು ಹೆಜ್ಜೆ ತೆಗೆದಿಲ್ಲ. ಕೆಲ ವಿಚಾರದಲ್ಲಿ ನೋವಾಗಿದೆ, ಅದು ನಾಯಕರಿಗೂ ಗೊತ್ತಿದೆ. ಹಾಗಂತ ನನಗೆ ನೋವಾಗಿದೆ ಅಂತಾ ಪಕ್ಷದಿಂದ ಹೊರ ಹೋಗಿಲ್ಲ. ಜೆಡಿಎಸ್ ವಿರುದ್ಧವಾಗಿ ನಾನು ಯಾವತ್ತೂ ಮಾತನಾಡಿಲ್ಲ. ಒಳ್ಳೆಯ ಟೈಮ್ ಬರುತ್ತದೆ, ಎಲ್ಲವೂ ಒಳ್ಳೆಯದಾಗುತ್ತೆ. ಕಾಲ ಕಳೆದಂತೆ ಎಲ್ಲಾ ಮುನಿಸು ನೋವು ಮಾಯವಾಗುತ್ತೆ ಎಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ಜಿ.ಟಿ. ದೇವೇಗೌಡರಿಗೆ ಭರ್ಜರಿ ಶಾಕ್​​ ಕೊಡುತ್ತಾ ಜೆಡಿಎಸ್​​? ವರಿಷ್ಠರ ನಡೆಯೇನು?

ತಮ್ಮ ಅನುಪಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸಭೆ ವಿಚಾರ ಸಂಬಂಧವೂ ಮಾತನಾಡಿರುವ ಅವರು, ಯಾರಿಗೂ ದ್ರೋಹ ಮಾಡುವ ಬುದ್ಧಿ ನನಗಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಹೋದ ಮೇಲೆ JDS ಕಟ್ಟಿದ್ದೇನೆ. ಹೆಚ್​.ಡಿ. ದೇವೇಗೌಡ, H.D. ಕುಮಾರಸ್ವಾಮಿ ಜೊತೆಗೆ ಒಟ್ಟಾಗಿ ಇದ್ದೇನೆ. ಕುಮಾರಸ್ವಾಮಿ ಸಿಎಂ ಆಗಬೇಕೆಂದು ಪಕ್ಷ ಕಟ್ಟಿದ್ದೇನೆ. ಜೆಡಿಎಸ್​ನಲ್ಲಿ ಗಟ್ಟಿಯಾಗಿ ಇದ್ದೇನೆ‌, ಜೆಡಿಎಸ್​ನಲ್ಲೇ ಇರುತ್ತೇನೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಜಾಸ್ತಿ ಇದೆ ಎಂದವರು ಹೇಳಿದ್ದಾರೆ.

ಜಿಟಿಡಿ ಮೇಲೆ ಮುಖಂಡರ ಮುನಿಸೇಕೆ?

ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಪಕ್ಷಕ್ಕೆ ಮೋಸ ಮಾಡಿದ್ದಾರೆ . MLC ಚುನಾವಣೆಯಲ್ಲೂ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂಬುದು ಜೆಡಿಎಸ್​​ ಮುಖಂಡರ ಪ್ರಮುಖ ಆರೋಪ. ಅಲ್ಲದೆ ಜೆಡಿಎಸ್​​ ಶಾಸಕರಾಗಿರುವ ಜಿಟಿಡಿ ಪದೇ ಪದೇ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರನ್ನು ಹೊಗಳುತ್ತಿದ್ದಿದ್ದು ಪಕ್ಷಕ್ಕೆ ಮುಜುಗರವನ್ನೂ ತಂದಿದೆ ಎಂಬುದು ಕೆಲ ನಾಯಕರ ಅಭಿಪ್ರಾಯ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳುನಾಡು ಚುನಾವಣೆ, ಜನವರಿ 23ರಂದು ಎನ್​ಡಿಎ ಪರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ – Kannada News | Narendra Modi Set to Sound Poll Bugle in Tamil Nadu as NDA Gears Up

ಚೆನ್ನೈ, ಜನವರಿ 19: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ(Assembly Election)ಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 23 ರಂದು ಮಧುರಾಂತಕಂನಿಂದ ಎನ್‌ಡಿಎ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಎನ್‌ಡಿಎ ಚುನಾವಣಾ ಪ್ರಚಾರವನ್ನು ಔಪಚಾರಿಕವಾಗಿ ಪ್ರಾರಂಭಿಸುವ ಮೂಲಕ ಪ್ರಧಾನಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ತಿಳಿಸಿದ್ದಾರೆ.

ಎನ್‌ಡಿಎ ಮಿತ್ರಪಕ್ಷಗಳ ಅಂತಿಮ ಪಟ್ಟಿಯ ಬಗ್ಗೆ ಕೇಳಿದಾಗ, ನಾಗೇಂದ್ರನ್ ಹೆಸರುಗಳ ಬಗ್ಗೆ ಮೌನವಾಗಿದ್ದರು ಆದರೆ ತಮ್ಮ ಪಕ್ಷವು ಬಲವಾದ ಪ್ರದರ್ಶನ ನೀಡುವ ಭರವಸೆ ನೀಡಿದರು.
ಎನ್‌ಡಿಎ ಮೈತ್ರಿಕೂಟದ ಅಂತಿಮ ಪಟ್ಟಿಯಲ್ಲಿ ಟಿಟಿವಿ ದಿನಕರನ್ ಅವರ ಎಎಂಎಂಕೆ, ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ಮತ್ತು ಡಿಎಂಡಿಕೆ ಸೇರ್ಪಡೆಯಾಗುವ ಸಾಧ್ಯತೆಯ ಬಗ್ಗೆ ನಿರಂತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಾಗೇಂದ್ರನ್, ಯಾವುದೇ ನಿರ್ದಿಷ್ಟ ಪಕ್ಷ ಅಥವಾ ನಾಯಕನ ಹೆಸರನ್ನು ಹೇಳಲು ನಿರಾಕರಿಸಿದರು.

ಎಐಎಡಿಎಂಕೆ ಈಗಾಗಲೇ ಪಿಎಂಕೆಯ ಒಂದು ಬಣದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಂಸ್ಥಾಪಕ ಡಾ. ರಾಮದಾಸ್ ತಮ್ಮ ಮಗ ಅನ್ಬುಮಣಿ ರಾಮದಾಸ್ ಅವರನ್ನು ಹೊರಹಾಕಿದ ನಂತರ ಪಕ್ಷ ವಿಭಜನೆಯಾಗಿದೆ.ತಂದೆ ಇನ್ನೂ ಮೈತ್ರಿಗಳ ಬಗ್ಗೆ ತಮ್ಮ ಅಂತಿಮ ನಿಲುವನ್ನು ಬಹಿರಂಗಪಡಿಸಿಲ್ಲ, ಆದರೆ ಅನ್ಬುಮಣಿ ಈಗಾಗಲೇ ಎಐಎಡಿಎಂಕೆ ಜೊತೆ ಕೈಜೋಡಿಸಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಟಿವಿಕೆ ಡಿಎಂಕೆ ಮತ್ತು ಬಿಜೆಪಿ ಎರಡರಿಂದಲೂ ಬಹಿರಂಗವಾಗಿ ಸಮಾನ ಅಂತರ ಕಾಯ್ದುಕೊಂಡಿದೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಗೆ ನಟ ವಿಜಯ್ ಸಿಎಂ ಅಭ್ಯರ್ಥಿ; ಟಿವಿಕೆ ಅಧಿಕೃತ ಘೋಷಣೆ

ಆದಾಗ್ಯೂ, ಎಐಎಡಿಎಂಕೆಯ ಒಂದು ಭಾಗ ನಾಯಕರು ವಿಜಯ್ ತಂಡದೊಂದಿಗೆ ರಹಸ್ಯ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರ ಆಕ್ರೋಶವು ಈ ಬಾರಿ ಆಡಳಿತಾರೂಢ ಸ್ಟಾಲಿನ್ ಸರ್ಕಾರವನ್ನು ದುರ್ಬಲಗೊಳಿಸಬಹುದು ಎಂಬುದು ಬಿಜೆಪಿಯ ನಂಬಿಕೆಯಾಗಿದೆ.

ಇದನ್ನೇ ಲಾಭ ಮಾಡಿಕೊಳ್ಳಲು ಪ್ರಧಾನಿ ಮೋದಿಯವರಿಂದ ಪ್ರಚಾರವನ್ನು ಮೊದಲೇ ಪ್ರಾರಂಭಿಸಲು ಮುಂದಾಗಿದೆ. ಪ್ರಧಾನಿ ಮೋದಿ ಮುಂಬರುವ ವಾರಗಳಲ್ಲಿ ತಮಿಳುನಾಡಿನಾದ್ಯಂತ ಸರಣಿ ಪ್ರಚಾರ ಆರಂಭಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಓಡೇ ಭೈರವೇಶ್ವರನಿಗೆ ಭಕ್ತರಿಂದ ಮದ್ಯದ ನೈವೇದ್ಯ!

ತುಮಕೂರು, ಜನವರಿ 19: ಜಿಲ್ಲೆಯ ಭೈರವೇಶ್ವರ ದೇವಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ವಿಶಿಷ್ಟ ಆಚರಣೆ ಇಂದು ಕೂಡ ಮುಂದುವರಿದಿದೆ. ಇಲ್ಲಿ ಭಕ್ತರು ಓಡೆ ಭೈರವೇಶ್ವರ ದೇವರಿಗೆ ಮದ್ಯ ಹಾಗೂ ಮಾಂಸವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಹರಕೆ ತೀರಿಸಲು ತರಲಾಗುವ ಈ ನೈವೇದ್ಯವನ್ನು ಪೂಜೆಯ ನಂತರ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ದೇವಸ್ಥಾನದಲ್ಲಿ ಗಂಡು-ಹೆಣ್ಣು ಭೇದವಿಲ್ಲದೆ ಎಲ್ಲರೂ ಮದ್ಯ ಮತ್ತು ಮಾಂಸವನ್ನು ಪ್ರಸಾದವಾಗಿ ಸೇವನೆ ಮಾಡುತ್ತಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup 2026: ಪಾಕಿಸ್ತಾನ ಮೂಲದ 42 ಆಟಗಾರರು, ಸಿಬ್ಬಂದಿಗೆ ಭಾರತೀಯ ವೀಸಾ – Kannada News | T20 World Cup 2026: ICC Resolves India Visa Issues for Pakistan Origin Players

ವಾಸ್ತವವಾಗಿ, ಪಾಕಿಸ್ತಾನದೊಂದಿಗಿನ ಸಂಬಂಧಗಳು ಹದಗೆಟ್ಟಿರುವುದರಿಂದ, ಭಾರತ ಸರ್ಕಾರ ಇತ್ತೀಚೆಗೆ ಈ ವೀಸಾ ನೀತಿಯನ್ನು ಅಳವಡಿಸಿಕೊಂಡಿದೆ. ಭಾರತ ಪ್ರವಾಸ ಮಾಡುವ ಯಾವುದೇ ತಂಡದಲ್ಲಿ ಪಾಕಿಸ್ತಾನಿ ಮೂಲದ ಸದಸ್ಯರಿಗೆ ವೀಸಾ ಪರಿಶೀಲನೆ ಹೆಚ್ಚು ಕಠಿಣವಾಗಿದ್ದು, ಆಗಾಗ್ಗೆ ವಿಳಂಬಕ್ಕೆ ಕಾರಣವಾಗುತ್ತದೆ.

Source link

ಬಡವರ ಮಕ್ಕಳ ರೀತಿ ನಟನೆ; ಗಿಲ್ಲಿ ವ್ಯಕ್ತಿತ್ವದ ಬಗ್ಗೆ ಅಶ್ವಿನಿ ಗೌಡ ಆರೋಪ – Kannada News | Ashwini Gowda says BBK 12 Winner Gilli Nata pretended like poor in Bigg Boss Kannada Season 12

ಬಡವರ ಮಕ್ಕಳು ಬೆಳೆಯಬೇಕು ಎಂಬ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ. ಆ ಚರ್ಚೆಗೆ ಅಶ್ವಿನಿ ಗೌಡ (Ashwini Gowda) ಈಗ ದನಿಗೂಡಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವಿನ್ನರ್ ಆಗಿರುವ ಗಿಲ್ಲಿ ನಟ (Gilli Nata) ಅವರು ಮೊದಲಿನಿಂದಲೂ ಅಶ್ವಿನಿ ಗೌಡ ಅವರಿಗೆ ವಿರೋಧಿ ಆಗಿದ್ದರು. ಟಾಪ್ 3 ಹಂತಕ್ಕೆ ಬಂದ ಅಶ್ವಿನಿ ಗೌಡ ಅವರಿಗೆ ವಿನ್ನರ್ ಆಗಲು ಸಾಧ್ಯವಾಗಲಿಲ್ಲ. ಬಿಗ್ ಬಾಸ್ (Bigg Boss Kannada) ಮನೆಯ ತಮ್ಮ ಪಯಣದ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಬಡವರ ಮಕ್ಕಳು ಬೆಳೆಯಬೇಕು ಎಂಬ ವಾದದ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಬಡವರ ಮಕ್ಕಳು ಗೆಲ್ಲಬೇಕು ಅಂತ ಎಲ್ಲರೂ ಹೇಳುತ್ತಾರೆ. ಅದು ಈಗ ಹೊರಗಡೆ ಏನೇನೋ ಆಗಿದೆ. ಆದರೆ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು ಅಲ್ವಾ? ಇದೆಲ್ಲ ನಿಜಾನಾ? ಇದು ವ್ಯಕ್ತಿತ್ವಗಳ ಆಟ ಅಂತ ಆದಾಗ, ಬಡವರ ಮಕ್ಕಳು ಅಂತ ನೀವು ಟ್ಯಾಗ್​ಲೈನ್ ಕೊಡುವಾಗ, ನಿಜವಾಗಿಯೂ ನೀವು ಬಡವರ ಮಕ್ಕಳಿಗೆ ಕಪ್ ಕೊಟ್ಟಿದ್ದೀರಾ’ ಎಂದು ಅಶ್ವಿನಿ ಗೌಡ ಅವರು ಪ್ರಶ್ನೆ ಮಾಡಿದ್ದಾರೆ.

‘ಬಡವರ ಮಕ್ಕಳಿಗೆ ಕಪ್ ಕೊಟ್ಟಿದ್ದೇವೆ ಎಂಬ ಸಾರ್ಥಕತೆ ನಿಮಗೆ ಇದೆಯಾ? ಬಡವರ ಮಕ್ಕಳು ಎಂಬುದು ಬೇರೆ. ಬಡವರ ಮಕ್ಕಳು ಎಂಬ ರೀತಿಯಲ್ಲಿ ನಟನೆ ಮಾಡಿಕೊಂಡು ಜೀವಿಸುವುದು ಬೇರೆ. ಇದರಲ್ಲಿ ತುಂಬಾ ವ್ಯತ್ಯಾಸ ಇದೆ. ಹಾಗಾಗಿ ನನಗೆ ಅದು ಏನೂ ಅನಿಸಲಿಲ್ಲ. ಆಟಕ್ಕೋಸ್ಕರ ಗಿಲ್ಲಿ ನಟ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ. ಫೇಕ್ ಅಥವಾ ರಿಯಲ್ ಆಗಿದ್ರೂ ಜನರು ಅದನ್ನು ಮೆಚ್ಚಿದ್ದಾರೆ. ನನ್ನ ವ್ಯಕ್ತಿತ್ವ ಬಿಟ್ಟುಕೊಡದೇ ನಾನು ಇಲ್ಲಿಯ ತನಕ ಬಂದು ನಿಂತಿದ್ದೇನೆ’ ಎಂದಿದ್ದಾರೆ ಅಶ್ವಿನಿ ಗೌಡ.

‘ಪ್ರತಿ ಸಂದರ್ಭದಲ್ಲೂ ನನಗೆ ಗಿಲ್ಲಿ ಅವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತಿತ್ತು. ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ ಅನಿಸುತ್ತಿತ್ತು. ಅವರು ಮೊದಲೇ ಬಿಗ್ ಬಾಸ್ ನೋಡಿಕೊಂಡು ಬಂದಿದ್ದರು. ಎಲ್ಲಿ ಯಾವ ಕಾರ್ಡ್ ವರ್ಕ್ ಆಗುತ್ತದೆ ಎಂಬುದು ಅವರಿಗೆ ಗೊತ್ತಿತ್ತು. ಮೊದಲ ದಿನದಿಂದ ಕೊನೇ ದಿನದ ತನಕ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಲೇ ಇದ್ದರು’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟ ವಿನ್ನರ್: ಅಶ್ವಿನಿ ಗೌಡ ಮೊದಲ ಪ್ರತಿಕ್ರಿಯೆ; ನಿರಾಸೆ ವ್ಯಕ್ತಪಡಿಸಿದ ಛಲಗಾರ್ತಿ

‘ಯಾರು ಮುಂದೆ ಹೋದರೂ ಪರವಾಗಿಲ್ಲ, ಆದರೆ ಅಶ್ವಿನಿ ಗೌಡ ಮುಂದೆ ತನಗೆ ಮುಳುವಾಗುತ್ತಾರೆ ಎಂಬುದನ್ನು ಗಿಲ್ಲಿ ಅವರಲ್ಲಿ ನಾನು ನೋಡಿದ್ದೆ. ಗಿಲ್ಲಿ ಎಲ್ಲಿಯೂ ಜಗಳ ಆಡುತ್ತಿರಲಿಲ್ಲ. ಯಾರ ಪರವಾಗಿಯೂ ನಿಲ್ಲುತ್ತಿರಲಿಲ್ಲ. ಇನ್ನೊಬ್ಬರ ವ್ಯಕ್ತಿತ್ವವನ್ನು ಕೆಳಗೆ ಇಟ್ಟು ಮಾತನಾಡುತ್ತಿದ್ದರು’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

JDS ಮುಖಂಡೆ ಪುತ್ರನ ಕಿರುಕುಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ: ಸಿಡಿದೆದ್ದ ಕ್ರಿಶ್ಚಿಯನ್ ಸಮುದಾಯ – Kannada News | Karwar: Rishala D’Souza suicide case: Mother Demands Justice for Rishel

ಕಾರವಾರ, ಜನವರಿ 19: ಕಾರವಾರ ಜೆಡಿಎಸ್​​ (JDS) ಮುಖಂಡೆ ಪುತ್ರನ ಕಿರುಕಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ (suicide) ಪ್ರಕರಣ ಈಗಾಗಲೇ ಗ್ರಾಮಗಳ ಮಧ್ಯೆ ವೈಮನಸ್ಸಿಗೆ ಕಾರಣವಾಗಿದೆ. ಇತ್ತೀಚೆಗೆ ಕದ್ರಾ ಪಿಎಸ್​​​ಐಯನ್ನು ಅಮಾನತು ಕೂಡ ಮಾಡಲಾಗಿದೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡು ಇವತ್ತಿಗೆ 11ನೇ ದಿನ. ಇದುವರೆಗೂ ಆರೋಪಿಯನ್ನ ಏಕೆ ಬಂಧಿಸಿಲ್ಲ? ಇದರಲ್ಲಿ ರಾಜಕೀಯ ಪ್ರಭಾವವಿರುವುದು ಗೊತ್ತಾಗುತ್ತಿದೆ ಎಂದು ಮೃತ ಯುವತಿಯ ತಾಯಿ ರೀನಾ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ.

ಕಾಣದ ಕೈಗಳು ನನ್ನ ಮಗಳ ಪ್ರಕರಣದಲ್ಲಿ ಕೆಲಸ ಮಾಡುತ್ತಿವೆ: ರೀನಾ ಡಿಸೋಜಾ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೀನಾ ಡಿಸೋಜಾ, ನನ್ನ ಮಗಳ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಈಗ ಪಿಎಸ್​ಐ ಸಸ್ಪೆಂಡ್​ ಮಾಡಲಾಗಿದೆ. ಆದರೆ ಇದರಲ್ಲಿ ಅವರ ಮೇಲಿನವರ ಕೈವಾಡದ ಶಂಕೆ ಇದೆ. ಕಾಣದ ಕೈಗಳು ನನ್ನ ಮಗಳ ಪ್ರಕರಣದಲ್ಲಿ ಕೆಲಸ ಮಾಡುತ್ತಿವೆ. ಅವರ ವಿರುದ್ಧ ಏಕೆ ಇದುವರೆಗೂ ಕ್ರಮಕೈಗೊಂಡಿಲ್ಲ? ಯಾರೆಲ್ಲಾ ತಪ್ಪು ಮಾಡಿದ್ದಾರೆ ಅವರಿಗೆಲ್ಲಾ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.

ಇದನ್ನೂ ಓದಿ: ಪ್ರೀತಿಸುವಂತೆ ಕಾಟ: ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

ನನ್ನ ಮಗಳು ಚಿರಾಗ್​​ ನನ್ನ ಪ್ರೀತಿಸುತ್ತಿದ್ದಳು ಎಂಬುವುದು ನನಗೆ ಗೊತ್ತಿರಲಿಲ್ಲ. ನನ್ನ ಗಮನಕ್ಕೆ ಬಂದಾಗ ಮಗಳಿಗೆ ಒಮ್ಮೆ ಬುದ್ದಿ ಹೇಳಿದ್ದೆ. ಕೆಲವು ದಿನ ನನ್ನ ಮಗಳು ಚಿರಾಗ್​ ಜೊತೆಗೆ ಮಾತನಾಡಿರಲಿಲ್ಲ. ಆಗ ಅವರ ಕಡೆಯಿಂದ ಓರ್ವ ನನಗೆ ಕರೆ ಮಾಡಿ ಬೆದರಿಸಿದ್ದ. ರಿಶೇಲ, ಚಿರಾಗ್ ಜೊತೆ ಏಕೆ ಮಾತನಾಡುತ್ತಿಲ್ಲ, ಏನು ಹೇಳಿದ್ದೀಯಾ ಅವಳಿಗೆ. ಅವಳು ಚಿರಾಗ್​ ಜೊತೆಗೆ ಮಾತನಾಡದಿದ್ದರೆ ಸರಿ ಇರಲ್ಲ ಎಂದಿದ್ದರು. ಆದರೆ ನಾನು ಅದಕ್ಕೆಲ್ಲಾ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ರಿಶೇಲ ತಾಯಿ ಹೇಳಿದ್ದಾರೆ.

ಅದಾದ ಬಳಿಕ ಅವರಿಬ್ಬರು ಯಾವಾಗ ಪ್ರೀತಿಸಲು ಆರಂಭಿಸಿದರು ಗೊತ್ತಿಲ್ಲ. ಚಿರಾಗ್​ ತಾಯಿಗೆ ನನ್ನ ಮಗಳು ಅವರ ಮನೆಗೆ ಬರುತ್ತಿದ್ದಾಳೆ ಅಂತ ಗೊತ್ತಿದ್ದರೆ ಅವರ ತಾಯಿ ಏಕೆ ಒಮ್ಮೆಯೂ ನನಗೆ ಫೋನ್ ಮಾಡಿ ಹೇಳಿಲ್ಲ. 20 ವರ್ಷದ ಮಗ ಹುಡುಗಿನಾ ಮನೆಗೆ ಕರೆದುಕೊಂಡು ಬಂದರೂ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ.

ಸಾವಿಗೂ ಮುನ್ನ ನನ್ನ ಮಗಳಿಗೆ ಏನು ಮಾಡಿದ್ದಾನೆ ಗೊತ್ತಾಗಬೇಕು

ನನ್ನ ಮಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ರೀಲ್ಸ್ ಬಗ್ಗೆ ನಮಗೆ ಮಾಹಿತಿ ಇಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸಾವಿಗೂ ಮುನ್ನ ಅವಳನ್ನ ಆ ಹುಡುಗ ಏನು ಮಾಡಿದ್ದಾನೆ, ಎಲ್ಲಿಗೆ ಕರೆದುಕೊಂಡು ಹೋಗಿ ಹಾಳು ಮಾಡಿದ್ದಾನೆ ಎಂಬುವುದು ಗೊತ್ತಾಗಬೇಕು. ನನ್ನ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿರುವುದಿಲ್ಲ. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಆಗಬೇಕೆಂದು ಡಿಸಿ ಮತ್ತು ಎಸಿಗೆ ಮನವಿ ಸಲ್ಲಿಸಿದ್ದಾನೆ ಎಂದು ರೀನಾ ಡಿಸೋಜಾ ಹೇಳಿದ್ದಾರೆ.

ಪ್ರಕರಣ ಖಂಡಿಸಿ ನಾಳೆ ಪ್ರತಿಭಟನೆ

ಕಾರವಾರ ಕ್ರಿಶ್ಚಿಯನ್ ಫೋರಂ ಅಧ್ಯಕ್ಷ ಲಿಯೋ ಲೂಯಿಸ್​​ ಮಾತನಾಡಿ, ಪ್ರಕರಣ ಖಂಡಿಸಿ ನಾಳೆ (ಜ.20) ಕಾರವಾರದಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ರಿಶೇಲ ಸಾವಿಗೆ ನ್ಯಾಯ ಕೋರಿ ಕ್ರಿಶ್ಚಿಯನ್ ಸಂಘಟನೆಯಿಂದ ಕಾರವಾರ ನಗರದ ಮಿತ್ರ ಸಮಾಜ ಸರ್ಕಲ್​ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​​: 2 ಗ್ರಾಮಗಳ ಮಧ್ಯೆ ಮೂಡಿದ ವೈಮನಸ್ಸು

ಮೊದಲ ಮರಣೋತ್ತರ ವರದಿ ನೊಡಿದಾಗ ತಪ್ಪು ಕಂಡುಬರುತ್ತದೆ. ಬಹಳ ಬೇಜವಾಬ್ದಾರಿಯಿಂದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕೆಲವು ವಿಚಾರದ ಬಗ್ಗೆ ವೈದ್ಯರನ್ನ ಪ್ರಶ್ನಿಸಿದಾಗ ಪೊಲೀಸ್ ಹಿರಿಯ ಅಧಿಕಾರಿಗಳು ನಮ್ಮ‌ ಗಮನಕ್ಕೆ ತಂದಿಲ್ಲ ಅಂತ ಹೇಳಿದ್ದಾರೆ. ಈಗ ಓರ್ವ PSI ನನ್ನ ಸಸ್ಪೆಂಡ್ ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಕಾಣದ ಕೈಗಳಿವೆ. ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ವೈದ್ಯಕೀಯ ಸಿಬ್ಬಂದಿಗೂ ಶಿಕ್ಷೆ ಆಗಬೇಕು. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಿ ಯುವತಿಯ ಸಾವಿಗೆ ನ್ಯಾಯ ಒದಗಿಸಬೇಕು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೀವನದಲ್ಲಿ ಸಂತೋಷ ಬೇಕೆಂದರೆ ನೀವು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | If you want happiness in life, adopt these habits

ಪ್ರತಿಯೊಬ್ಬರೂ ಸಂತೋಷವಾಗಿರಲು (happiness) ಬಯಸುತ್ತಾರೆ, ಆದರೆ ಇಂದಿನ ಒತ್ತಡದ ಜೀವನದಲ್ಲಿ, ಸಂತೋಷವಾಗಿರುವುದು ಒಂದು ದೊಡ್ಡ ಸವಾಲಿನ ಸಂಗತಿಯಾಗಿದೆ. ಜನರು ತಮಗಾಗಿ ಸಮಯ ಕಂಡುಕೊಳ್ಳಲು ಅಥವಾ ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಅನೇಕರು ಖಿನ್ನತೆ ಮತ್ತು ಆತಂಕಕ್ಕೆ ಬಲಿಯಾಗುತ್ತಿದ್ದಾರೆ. ಇವುಗಳನ್ನು ನಿವಾರಿಸುವ ಏಕೈಕ ಮಾರ್ಗವೆಂದರೆ ನಮ್ಮನ್ನು ನಾವು ಸಂತೋಷವಾಗಿಟ್ಟುಕೊಳ್ಳುವುದು. ದೈನಂದಿನ ಜೀವನದಲ್ಲಿ ಈ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನವರನ್ನು ಸಂತೋಷವಾಗಿಡಬಹುದು. ಸಂತೋಷವಾಗಿರಲು ಸಹಾಯ ಮಾಡುವ ಆ ಅಭ್ಯಾಸಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಜೀವನದಲ್ಲಿ ಸಂತೋಷವಾಗಿರಲು ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು:

ಒಳ್ಳೆಯ ಆಲೋಚನೆಗಳೊಂದಿಗೆ ದಿನವನ್ನು ಪ್ರಾರಂಭಿಸಿ: ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮನಸ್ಸನ್ನು ಸಕಾರಾತ್ಮಕ ಆಲೋಚನೆಗಳಿಂದ ತುಂಬಿಸಿ. ದಿನದ ಸಕಾರಾತ್ಮಕ ಆರಂಭವು ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಇದು ನಿಮಗೆ ಆಂತರಿಕ ಸಂತೋಷವನ್ನು ತರುತ್ತದೆ.

ಯಾವಾಗಲೂ ನಗುತ್ತಿರಿ: ನೆನಪಿಡಿ, ಒಂದು ಸರಳ ನಗು ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ನೀವು ನಗುವಾಗ, ಸಕಾರಾತ್ಮಕ ಆಲೋಚನೆಗಳು ಸ್ವಯಂಚಾಲಿತವಾಗಿ ಮನಸ್ಸಿಗೆ ಬರುತ್ತವೆ. ಇದು ನಿಮ್ಮನ್ನು ಒತ್ತಡ ಮುಕ್ತವಾಗಿಡಲು ಸಹಾಯ ಮಾಡುತ್ತದೆ.

ಹೊಸ ವಿಷಯಗಳನ್ನು ಪ್ರಯತ್ನಿಸಿ: ನಾವು ಪ್ರತಿದಿನ ಒಂದೇ ಕೆಲಸವನ್ನು ಮಾಡಿದಾಗ, ನಮ್ಮ ಮೆದುಳು ಗಮನ ಹರಿಸುವುದನ್ನು ನಿಲ್ಲಿಸುತ್ತದೆ. ಆದ್ದರಿಂದ, ನಿಮ್ಮ ದಿನಚರಿಗೆ ತಾಜಾತನವನ್ನು ಸೇರಿಸಲು ಹೊಸ ವಿಷಯಗಳನ್ನು ಪ್ರಯತ್ನಿಸಿ. ಉದಾಹರಣೆಗೆ, ಹೊಸ ಖಾದ್ಯವನ್ನು ಪ್ರಯತ್ನಿಸುವುದು ಇತ್ಯಾದಿ.

ಆರೋಗ್ಯಕರ ಜೀವನಶೈಲಿ: ಸಂತೋಷವಾಗಿರುವುದಕ್ಕೆ ಆರೋಗ್ಯಕರ ದೇಹ ಮತ್ತು ಮನಸ್ಸು ಅತ್ಯಗತ್ಯ. ಇದನ್ನು ಸಾಧಿಸಲು, ಪ್ರತಿದಿನ ವ್ಯಾಯಾಮ ಮಾಡಿ, ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ನಿದ್ರೆ ಮಾಡಿ. ಮಾನಸಿಕ ಶಾಂತಿ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ನಿಮ್ಮ ದೈನಂದಿನ ದಿನಚರಿಯಲ್ಲಿ ಯೋಗ ಮತ್ತು ಧ್ಯಾನವನ್ನು ಸೇರಿಸಿಕೊಳ್ಳಿ.ಈ ಅಭ್ಯಾಸಗಳು ಸಂತೋಷವಾಗಿಡಲು ಸಹಾಯ ಮಾಡುತ್ತದೆ.

ಸಕಾರಾತ್ಮಕವಾಗಿ ಯೋಚಿಸಿ: ಸಕಾರಾತ್ಮಕ ಚಿಂತನೆಯು ಪ್ರತಿಯೊಂದು ಸವಾಲನ್ನು ಸುಲಭವಾಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದ, ಪ್ರತಿಯೊಂದು ಸನ್ನಿವೇಶದಲ್ಲೂ ಸಕಾರಾತ್ಮಕತೆಯನ್ನು ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದು ಮನಸ್ಸಿನ ಶಾಂತಿಯನ್ನು ತರುವುದಲ್ಲದೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಆರೋಗ್ಯಯುತವಾಗಿ ಹೆಚ್ಚು ಕಾಲ ಬದುಕಲು ಬಯಸಿದರೆ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ

ಸಂಗೀತ ಆಲಿಸಿ: ಯಾವುದೇ ಕೆಲಸದಿಂದ ಬೇಸರವಾದಾಗ, ನಿಮ್ಮ ನೆಚ್ಚಿನ ಹಾಡನ್ನು ಕೇಳಬಹುದು. ಸಂಗೀತ ಕೇಳುವುದರಿಂದ ನೀವು ಸಂತೋಷವಾಗಿರುತ್ತೀರಿ.

ಎಲ್ಲಾದರೂ ಹೋಗಿ: ಒತ್ತಡವನ್ನು ನಿವಾರಿಸಲು, ಸಂತೋಷವಾಗಿರಲು ಕೆಲಸದಿಂದ ಕೊಂಚ ಬ್ರೇಕ್‌ ತೆಗೆದುಕೊಂಡು ಎಲ್ಲಾದರೂ ಟ್ರಿಪ್‌ ಹೋಗಿ. ಖಂಡಿತವಾಗಿಯೂ ಇದು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.

ನಿಮಗಾಗಿ ಸಮಯ ತೆಗೆದುಕೊಳ್ಳಿ: ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ಯಾರೂ ಕೂಡ ತಮಗಾಗಿ ಸಮಯವನ್ನು ಮೀಸಲಿಡುವುದಿಲ್ಲ. ಜೀವನದಲ್ಲಿ ಸಂತೋಷ ಬೇಕೆಂದರೆ ನಮಗಾಗಿ ನಾವು ಸಮಯವನ್ನು ಮೀಸಲಿಡಬೇಕು. ಇದಲ್ಲದೆ ನೀವು ಯಾವಾಗಲೂ ನಗುತ್ತಿರಿ. ಇದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಗುಡ್​​​ ನ್ಯೂಸ್: ಕೊನೆಗೂ ಈ ರಸ್ತೆ ನಿರ್ಮಾಣಕ್ಕೆ NHAI ಒಪ್ಪಿಗೆ – Kannada News | Bengaluru Airport Traffic: Sadahalli Underpass Unlocks Fast, Signal Free KIA Travel

ಬೆಂಗಳೂರು, ಜ.19: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗುವ ಈ ರಸ್ತೆಯಲ್ಲಿ ಯಾವಗಲೂ ಟ್ರಾಪಿಕ್​​​​, ಇದೊಂದು ಪ್ರಯಾಣಿಕರಿಗೆ ದಿನನಿತ್ಯದ ಗೋಳಾಗಿತ್ತು. ಇದೀಗ ಇದಕ್ಕೆ ಮುಕ್ತಿ ಸಿಗಲಿದೆ. ಬಳ್ಳಾರಿ ರಸ್ತೆಯನ್ನು ಬೆಂಗಳೂರಿನ ಅತ್ಯಂತ ವೇಗದ ಹೆದ್ದಾರಿಯನ್ನಾಗಿ ಬದಲಾವಣೆ ಮಾಡಲಾಗತ್ತಿದೆ. ಎತ್ತರದ ಕಾರಿಡಾರ್‌ಗಳು, ಫ್ಲೈಓವರ್‌ಗಳು ಮತ್ತು ಸಿಗ್ನಲ್-ಮುಕ್ತ ಮಾರ್ಗಗಳು ನಿರ್ಮಾಣ ಮಾಡಲಾಗುತ್ತಿದೆ. ಇದರ ತೆಗೆ ಹೆಬ್ಬಾಳದಿಂದ ಕೇವಲ 22 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಹೋಗಲು ಸಾದಹಳ್ಳಿ ಜಂಕ್ಷನ್‌ನಲ್ಲಿ ಇರುವ ಟ್ರಾಫಿಕ್ ಸಿಗ್ನಲ್​​ಗೆ ಬ್ರೇಕ್​ ಹಾಕಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಹೋಗಲು ಇರುವ ಸಾದಹಳ್ಳಿ ಜಂಕ್ಷನ್‌ ಸಿಗ್ನಲ್​​ನ್ನ್ನು ತೆಗೆದು, ಸಾದಹಳ್ಳಿ ಜಂಕ್ಷನ್‌ನಲ್ಲಿ 750 ಮೀಟರ್ ಉದ್ದದ, ಆರು ಪಥಗಳ ಅಂಡರ್‌ಪಾಸ್ ನಿರ್ಮಿಸುವ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪುನರುಜ್ಜೀವನಗೊಳಿಸಿದೆ. ಈ ಅಂಡರ್‌ಪಾಸ್ ಪೂರ್ಣಗೊಂಡ ನಂತರ, ವಿಮಾನ ನಿಲ್ದಾಣಕ್ಕೆ ಯಾವುದೇ ತಡೆ ಇಲ್ಲದೆ ಸಂಚಾರ ಮಾಡಬಹುದು.

ಇದು ನಗರದ ಅತ್ಯಂತ ನಿರ್ಣಾಯಕ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಹೆಬ್ಬಾಳ ಮತ್ತು ಟ್ರಂಪೆಟ್ ಇಂಟರ್ಚೇಂಜ್ ನಡುವಿನ ಸಿಗ್ನಲ್ ಮುಕ್ತ ಪ್ರದೇಶದಲ್ಲಿ ಈ ಸಾದಹಳ್ಳಿ ಜಂಕ್ಷನ್‌ ಸಿಗ್ನಲ​​​ ದೊಡ್ಡ ತಲೆನೋವಾಗಿತ್ತು. ಜಕ್ಕೂರು, ಯಲಹಂಕ ಮತ್ತು ಇತರ ಜಂಕ್ಷನ್‌ಗಳಲ್ಲಿ ವಿಮಾನ ನಿಲ್ದಾಣದ ಸಂಚಾರ ಫ್ಲೈಓವರ್‌ಗಳ ಮೇಲೆ ಹಾದು ಹೋಗುತ್ತದೆ. ಸ್ಥಳೀಯ ಸಂಚಾರಕ್ಕೆ ಮಾತ್ರ ಸ್ವಲ್ಪ ತಡೆಯಲಾಗಿದೆ. ವಿಶೇಷವಾಗಿ ಪೀಕ್ ಅವರ್‌ಗಳು, ಅಂತರರಾಷ್ಟ್ರೀಯ ವಿಮಾನ ನಿರ್ಗಮನದ ಸಮಯದಲ್ಲಿ ಈ ಹಿಂದೆ ಸಮಸ್ಯೆಯಾಗುತ್ತಿತ್ತು. ಇದೀಗ ಇದನ್ನು ಪರಿಹಾರ ಮಾಡಲಾಗಿದೆ.

35 ಕೋಟಿ ರೂ.ಗಳ ಯೋಜನೆಗೆ NHAI ಪ್ರಧಾನ ಕಚೇರಿಯಿಂದ ಅನುಮೋದನೆ ದೊರೆತಿದ್ದು, ಅಧಿಕೃತ ಚಾಲನೆ ನೀಡಲಾಗಿದೆ. ಫೆಬ್ರವರಿಯಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದೆ. ಸುಮಾರು ಒಂದು ದಶಕದ ಹಿಂದೆ, NHAI ಮೊದಲು ಸಾದಹಳ್ಳಿ ಸಿಗ್ನಲ್ ಅನ್ನು ತೆಗೆದುಹಾಕುವ ಪ್ರಸ್ತಾಪವನ್ನು ಮಾಡಿತ್ತು. ಈ ಯೋಜನೆಯು ಆರಂಭದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸಲು ಯೋಜನೆಯನ್ನು ಹಾಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಯೋಜನೆಯ ಒಪ್ಪಿಗೆ ವಿಳಂಬವಾಗಿತ್ತು. ಆದರೆ ಸಂಚಾರ ಬದಲಾವಣೆಗಳೊಂದಿಗೆ ಕೆಲಸವು ಅಂತಿಮವಾಗಿ 2019 ರಲ್ಲಿ ಪ್ರಾರಂಭವಾಯಿತು. ಆದರೆ ಅಧಿಕಾರಿಗಳು ಈ ರಸ್ತೆಯ ಮ್ಯಾಪಿಂಗ್ ಹಾಗೂ ಡಿಸೈನ್​​ನಲ್ಲಿ ಕೆಲವೊಂದು ಬದಲಾವಣೆಗಳು ಆಗಬೇಕು ಎಂದು ಮತ್ತೆ ಈ ಯೋಜನೆ ವಿಳಂಬವಾಗಿತ್ತು. ಇದರಿಂದ ಸಾರ್ವಜನಿಕರಿಗೆ ನಿರಾಸೆ ಕೂಡ ಆಗಿತ್ತು. ಆದರೆ ಇದೀಗ ಇದಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದ್ದು, ಕೆಲಸ ಆರಂಭವಾಗಿದೆ.

ಮುಖ್ಯ ರಸ್ತೆಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ, ಸಾದಹಳ್ಳಿ ಜಂಕ್ಷನ್‌ನಲ್ಲಿ ಸುಮಾರು ಎರಡು ವರ್ಷಗಳ ಕಾಲ ಸಂಚಾರ ಮಾಡಲ ಅವಕಾಶ ಇರುವುದಿಲ್ಲ ಜತೆಗೆ ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಹೆದ್ದಾರಿಯ ಎರಡೂ ಬದಿಗಳಲ್ಲಿ ದ್ವಿಪಥ ಸರ್ವಿಸ್ ರಸ್ತೆಗಳನ್ನು ವಿಸ್ತರಿಸಲು NHAI ಯೋಜಿಸಿದೆ. ಸಾದಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು ಅನುಕೂಲಕ್ಕೆ ಹಾಗೂ ಸಂಚಾರವನ್ನು ವೇಗಗೊಳಿಸಲು ಕಾಂಕ್ರೀಟ್ ಸ್ಲ್ಯಾಬ್ ಅನ್ನು ಸಹ ನಿರ್ಮಾಣ ಮಾಡಲಾಗುವುದು ಎಂದು ಇಲಾಖೆ ಹೇಳಿದೆ. ವಿಮಾನ ನಿಲ್ದಾಣದ ಪ್ರಯಾಣಿಕರು ಸುಗಮ ಸಂಚಾರಕ್ಕಾಗಿ ಕಾಯುತ್ತಿದ್ದು, ಸಾದಹಳ್ಳಿ, ಚೌಡೇನಹಳ್ಳಿ, ಚನ್ನಹಳ್ಳಿ, ಗಡೇನಹಳ್ಳಿ ಮತ್ತು ಹತ್ತಿರದ ಹಳ್ಳಿಗಳಿಗೂ ಇದು ತುಂಬಾ ಅನುಕೂಲ ಆಗಲಿದೆ. ದೈನಂದಿನ ಪ್ರಯಾಣ, ಶಾಲಾಗೆ ಹೋಗುವವರಿಗೆ, ಕೃಷಿ ಸಾರಿಗೆ ಮತ್ತು ದೇವನಹಳ್ಳಿ ಮತ್ತು ನಗರಕ್ಕೆ ಪ್ರವೇಶಕ್ಕಾಗಿ ಈ ಜಂಕ್ಷನ್ ಒಂದು ಪ್ರಮುಖ ಕ್ರಾಸಿಂಗ್ ಪಾಯಿಂಟ್ ಆಗಿದೆ.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಬೆಂಗಳೂರಿನ ಈ ಪ್ರದೇಶ ಸೇಫ್ ಅಲ್ಲ; ಮಹಿಳೆ ಹೀಗೆನ್ನಲು ಕಾರಣ ಇದೇ ನೋಡಿ

ಎನ್‌ಎಚ್‌ಎಐ ಯಲಹಂಕ ವಾಯುಪಡೆ ನಿಲ್ದಾಣದ ಬಳಿ ಕಟ್-ಅಂಡ್-ಕವರ್ ವಿಧಾನವನ್ನು ಬಳಸಿಕೊಂಡು 70 ಕೋಟಿ ರೂ. ಅಂದಾಜು ವೆಚ್ಚದಲ್ಲಿ 1 ಕಿಮೀ ಉದ್ದದ ಸರ್ವಿಸ್​ ರಸ್ತೆಯನ್ನು ನಿರ್ಮಿಸುತ್ತಿದೆ. ಹೆಬ್ಬಾಳ ಮತ್ತು ಟ್ರಂಪೆಟ್ ಇಂಟರ್‌ಚೇಂಜ್ ನಡುವಿನ ಏಕೈಕ ಸರ್ವಿಸ್​ ರಸ್ತೆ ಇದಾಗಿದೆ. ಅಧಿಕಾರಿಗಳ ಪ್ರಕಾರ, ಹೆಬ್ಬಾಳ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆಗಳನ್ನು ಅಗಲಗೊಳಿಸುವುದು ಮತ್ತು ಜಕ್ಕೂರು ಏರೋಡ್ರೋಮ್ ಬಳಿ ಡಾಂಬರೀಕರಣ ಸೇರಿದಂತೆ ನವೀಕರಣ ಮಾಡಿದ್ರೆ ಖಂಡಿತ ವಿಮಾನ ನಿಲ್ದಾಣಕ್ಕೆ ವೇಗವಾಗಿ ತಲುಪಬಹುದು. ಸಾದಹಳ್ಳಿ ಮತ್ತು ಯಲಹಂಕ ವಾಯುಪಡೆ ನಿಲ್ದಾಣದಲ್ಲಿನ ಯೋಜನೆಗಳು ಪೂರ್ಣಗೊಂಡ ನಂತರ, ಕೆಐಎ ರಸ್ತೆಯಲ್ಲಿ ಸಂಚಾರ ಯಾವುದೇ ಅಡೆತಡೆಯಿಲ್ಲದೆ ಹೋಗಬಹುದು ಎಂದು ರಾಷ್ಟ್ರೀಯ ರಸ್ತೆ ಸಾರಿಗೆ ಇಲಾಖೆ ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಮ್ ಮಾಡಿ

Source link

ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ? ಮುಖ್ಯ ಅತಿಥಿಗಳ್ಯಾರು? – Kannada News | Republic Day Delhi 2026: Parade, Chief Guests and Celebrations on Kartavya Path

ನವದೆಹಲಿ, ಜನವರಿ 19: ಪ್ರತಿ ವರ್ಷವೂ ಭಾರತದಲ್ಲಿ ಗಣರಾಜ್ಯೋತ್ಸವ(Republic Day)ವನ್ನು ಅತ್ಯಂತ ಅರ್ಥಪೂರ್ಣವಾಗಿ  ಆಚರಿಸಲಾಗುತ್ತದೆ. ಏಕೆಂದರೆ ಅಂದು ಭಾರತವು ಪೂರ್ಣ ಪ್ರಮಾಣದ ಗಣರಾಜ್ಯವಾದ ದಿನ. ಈ ವರ್ಷ ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ವಂದೇ ಮಾತರಂ ಥೀಂನಲ್ಲೇ ಇರಲಿವೆ. ಕರ್ತವ್ಯಪಥದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಶಕ್ತಿಯನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆ ನಡೆಯಲಿವೆ. ಮೆರವಣಿಗೆಯಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಸ್ತಬ್ಧಚಿತ್ರಗಳು, ಆಕರ್ಷಕ ಜಾನಪದ ನೃತ್ಯಗಳು ಕೂಡಾ ಇರಲಿದೆ. ಭಾರತದ ಶಕ್ತಿ ಮತ್ತು ವೈವಿಧ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಲು ಇದು ಒಂದು ಅವಕಾಶ. ಈ ಕಾರ್ಯಕ್ರಮವನ್ನು ವೀಕ್ಷಿಸಲು ದೇಶದ ನಾಗರಿಕರು ಸೇರುವುದಲ್ಲದೆ, ಪ್ರತಿ ವರ್ಷ ಮುಖ್ಯ ಅತಿಥಿಯನ್ನು ಮೆರವಣಿಗೆಗೆ ಆಹ್ವಾನಿಸಲಾಗುತ್ತದೆ.

ಈ ವರ್ಷದ ಮುಖ್ಯ ಅತಿಥಿಗಳ್ಯಾರು?
ಈ ವರ್ಷ, ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯ ಆಯ್ಕೆಗಾಗಿ ಭಾರತದ ವಿದೇಶಾಂಗ ಸಚಿವಾಲಯವು ಸಂಭಾವ್ಯ ದೇಶಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಆಹ್ವಾನವಿರುವ ದೇಶಗಳ ಪ್ರಮುಖ ನಾಯಕರನ್ನು ಆಹ್ವಾನಿಸಲು ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಮತ್ತಷ್ಟು ಓದಿ: ಈ ಬಾರಿಯ ಗಣರಾಜ್ಯೋತ್ಸವ ಬಹಳ ಡಿಫರೆಂಟ್; ಸೇನೆಯಿಂದ ಒಂಟೆ, ಭಾರತೀಯ ತಳಿಯ ನಾಯಿಗಳ ಮೆರವಣಿಗೆ

ವಿದೇಶಾಂಗ ಸಚಿವಾಲಯ ಸಿದ್ಧಪಡಿಸಿದ ಪಟ್ಟಿಯನ್ನು ರಾಷ್ಟ್ರಪತಿ ಭವನ ಮತ್ತು ಪ್ರಧಾನ ಮಂತ್ರಿ ಕಚೇರಿ ಅನುಮೋದಿಸಿದೆ. ಈ ಪ್ರಕ್ರಿಯೆಯು ಆಯ್ದ ದೇಶಗಳೊಂದಿಗೆ ಭಾರತದ ಸಂಬಂಧಗಳು ರಾಜಕೀಯ ಮತ್ತು ವ್ಯವಹಾರ ದೃಷ್ಟಿಕೋನಗಳಿಂದ ಬಲವಾಗಿರುವುದನ್ನು ಖಚಿತಪಡಿಸುತ್ತದೆ. ತನಿಖೆಯ ಸಮಯದಲ್ಲಿ, ಈ ಪಟ್ಟಿಯಲ್ಲಿ ನೀಡಲಾದ ಹೆಸರುಗಳು ನಿಜವಾಗಿಯೂ ಆಹ್ವಾನಕ್ಕೆ ಅರ್ಹವಾಗಿವೆಯೇ ಎಂದು ಪರಿಶೀಲಿಸಲಾಗುತ್ತದೆ.

ಮುಖ್ಯ ಅತಿಥಿಯನ್ನು ಕರ್ತವ್ಯ ಪಥದಲ್ಲಿ ಪ್ರಮುಖ ಸ್ಥಳದಲ್ಲಿ ಕುಳಿತುಕೊಳ್ಳಲು ಆಹ್ವಾನಿಸಲಾಗುತ್ತದೆ. ಅವರು ಮೆರವಣಿಗೆಯ ಆರಂಭದಲ್ಲಿ ಭಾರತೀಯ ರಾಷ್ಟ್ರಪತಿಗಳೊಂದಿಗೆ ಕುಳಿತು ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಇಂಡೋನೇಷ್ಯಾದ ಅಧ್ಯಕ್ಷರನ್ನು ಅದರ ಮೊದಲ ಗಣರಾಜ್ಯೋತ್ಸವದಂದು ಭಾರತದ ಮುಖ್ಯ ಅತಿಥಿಯನ್ನಾಗಿ ಮಾಡಲಾಯಿತು. 2025 ರ ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಭಾರತದ ಮುಖ್ಯ ಅತಿಥಿಯನ್ನಾಗಿ ಮಾಡಲಾಯಿತು.

ವಂದೇ ಮಾತರಂ ಶೀರ್ಷಿಕೆಯಲ್ಲಿ 6 ರಾಜ್ಯಗಳು ಸ್ತಬ್ಧಚಿತ್ರಗಳ ಬೆರವಣಿಗೆ ನಡೆಸಲಿದೆ. ಸರ್ಕಾರವು ರಸಪ್ರಶ್ನೆಯನ್ನು ಕೂಡ ಆಯೋಜಿಸಿದೆ. ದೆಹಲಿ ಮೆಟ್ರೋ ಬೆಳಗ್ಗೆ 3 ಗಂಟೆಯಿಂದಲೇ ಸೇವೆಯನ್ನು ಆರಂಭಿಸಲಿದೆ. ಟಿಕೆಟ್​​ನಲ್ಲಿ ನಮ್ಮ ಮೆಟ್ರೋ ಕ್ಯೂಆರ್​ ಕೋಡ್ ಕೂಡಾ ಇರಲಿದೆ. ಎನ್​ಸಿಸಿ ವಾಲಂಟಿಯರ್ಸ್​ ಅಲ್ಲಿರಲಿದ್ದಾರೆ. 10 ಸಾವಿರ ಮಂದಿ ವಿಶೇಷ ಅತಿಥಿಗಳಿರಲಿದ್ದಾರೆ. ನವೋದ್ಯಮಿಗಳು, ವಿಜ್ಞಾನಿಗಳು, ರೈತರು ಮತ್ತು ಸಮುದಾಯ ಮುಖಂಡರು ಸೇರಿದಂತೆ ವಿವಿಧ ವಲಯಗಳ ಸುಮಾರು 10,000 ವಿಶೇಷ ಅತಿಥಿಗಳು ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳಿಂದ ಒಟ್ಟು 30 ಟ್ಯಾಬ್ಲೋಗಳು ಕರ್ತವ್ಯ ಪಥದಲ್ಲಿ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ವಿಷಯಗಳನ್ನು ಪ್ರದರ್ಶಿಸಲಿವೆ. ಅತಿಥಿಗಳ ಚಲನವಲನಗಳನ್ನು ಸುಗಮಗೊಳಿಸಲು, ರಕ್ಷಣಾ ಸಚಿವಾಲಯ ಮತ್ತು ದೆಹಲಿ ಪೊಲೀಸರು ವಿವರವಾದ ಮಾರ್ಗ ಯೋಜನೆಗಳು, ಪಾರ್ಕಿಂಗ್ ವ್ಯವಸ್ಥೆಗಳು ಮತ್ತು ಆವರಣದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

ಸ್ಕೂಲ್ ಬ್ಯಾಂಡ್ ಸ್ಪರ್ಧೆ
33 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 763 ಶಾಲೆಗಳ ಬ್ಯಾಂಡ್​ ಆಗಮಿಸಲಿದ್ದು, 18 ಸಾವಿರ ವಿದ್ಯಾರ್ಥಿಗಳು ಅದರಲ್ಲಿರಲಿದ್ದಾರೆ.

ಮೆರವಣಿಗೆ ನಡೆಯುವ ಆವರಣದೊಳಗೆ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸಾಧನಗಳು (ಮೊಬೈಲ್ ಫೋನ್‌ಗಳನ್ನು ಹೊರತುಪಡಿಸಿ), ಚೂಪಾದ ವಸ್ತುಗಳು, ಸುಡುವ ವಸ್ತುಗಳು ಮತ್ತು ಇತರ ನಿಷೇಧಿತ ವಸ್ತುಗಳನ್ನು ಪೊಲೀಸರು ನಿಷೇಧಿಸಿದ್ದಾರೆ. ನಾಗರಿಕರು ಜಾಗರೂಕರಾಗಿರಲು ಮತ್ತು 112 ಗೆ ಕರೆ ಮಾಡುವ ಮೂಲಕ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

ಭಾರತ್ ಪರ್ವ

ಮೆರವಣಿಗೆಗೆ ಪೂರಕವಾಗಿ, ಭಾರತ್ ಪರ್ವ ಸಾಂಸ್ಕೃತಿಕ ಉತ್ಸವವು ಜನವರಿ 26 ರಿಂದ 31 ರವರೆಗೆ ಕೆಂಪು ಕೋಟೆಯಲ್ಲಿ ನಡೆಯಲಿದ್ದು, ಪ್ರಾದೇಶಿಕ ಕಲೆ, ಕರಕುಶಲ ವಸ್ತುಗಳು ಮತ್ತು ಪಾಕಪದ್ಧತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಶಾಲಾ ಬ್ಯಾಂಡ್ ಸ್ಪರ್ಧೆಗಳು ಮತ್ತು ಪ್ರಾಜೆಕ್ಟ್ ವೀರ್ ಗಾಥಾ ಸೇರಿದಂತೆ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳು ದೇಶಭಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬರೋಬ್ಬರಿ 1000 ವಿಕೆಟ್; ಇತಿಹಾಸ ನಿರ್ಮಿಸಿದ ಲಂಕಾ ಸ್ಪಿನ್ನರ್ – Kannada News | Malinda Pushpakumara: Sri Lankan Spinner Joins Elite 1000 First Class Wicket Club

ಶ್ರೀಲಂಕಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ (1374 ವಿಕೆಟ್‌ಗಳು), ರಂಗನ ಹೆರಾತ್ (1080 ವಿಕೆಟ್‌ಗಳು) ಮತ್ತು ದಿನುಕಾ ಹೆಟ್ಟಿಯಾರಾಚಿ (1001 ವಿಕೆಟ್‌ಗಳು) ಮಾತ್ರ ಇದ್ದರು. ಆದರೆ ಈಗ ಮಲಿಂದಾ ಪುಷ್ಪಕುಮಾರ ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಇನ್ನು ಜಾಗತಿಕವಾಗಿ, ಪುಷ್ಪಕುಮಾರ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 218 ನೇ ಆಟಗಾರ ಎನಿಸಿಕೊಂಡಿದ್ದಾರೆ.

Source link

Exit mobile version