Rajat Patidar: ಗೆಲ್ಲಬೇಕಿತ್ತು, ಆದರೆ ನಮ್ಮ ಸೋಲಿಗೆ ಇದುವೇ ಕಾರಣ! – Kannada News | Rajat patidar post match interview After RCB vs SRH Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​​ಹೆಚ್​ 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 200 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್​ಸಿಬಿ ತಂಡ 55 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಹೈದರಾಬಾದ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಎದುರಾಳಿ ತಂಡದ ಬ್ಯಾಟಿಂಗ್ ಅಬ್ಬರ ಮತ್ತು ಶಿಸ್ತುಬದ್ಧ ಬೌಲಿಂಗ್ ದಾಳಿಯೇ ನಮ್ಮ ಸೋಲಿಗೆ ಮುಖ್ಯ ಕಾರಣ ಎಂದು  ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಪಂದ್ಯದ ಗತಿಯನ್ನು ಬದಲಿಸಿದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಬೃಹತ್ ಮೊತ್ತ: ಸ್ಲೋ ಬಾಲ್!

ಎದುರಾಳಿ ತಂಡದ ಮೊದಲ ಐದು ಜನ ಬ್ಯಾಟರ್‌ಗಳು ಆರಂಭದಿಂದಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಕಲೆಹಾಕಿದ 255 ರನ್‌ಗಳ ಬೃಹತ್ ಮೊತ್ತವೇ ಪಂದ್ಯದ ಫಲಿತಾಂಶವನ್ನು ಬಹುಪಾಲು ನಿರ್ಧರಿಸಿತು ಎಂದು ಪಾಟೀದಾರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ

ಹೈದರಾಬಾದ್ ಪಿಚ್ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೂ, ಎದುರಾಳಿ ಬೌಲರ್‌ಗಳು ತಮ್ಮ ಯೋಜನೆಗಳನ್ನು ಅಚ್ಚುಕಟ್ಟಾಗಿ ಜಾರಿಗೆ ತಂದರು. ಪಿಚ್‌ನಲ್ಲಿ ಸ್ಲೋ ಬೌನ್ಸರ್‌ಗಳು ಕೊಂಚ ಗ್ರಿಪ್ ಆಗುತ್ತಿದ್ದವು. ಇದನ್ನು ಸರಿಯಾಗಿ ಬಳಸಿಕೊಂಡ ಎದುರಾಳಿ ಪಡೆಯ ಐದೂ ಜನ ಬೌಲರ್‌ಗಳು ನಿರಂತರವಾಗಿ ಸ್ಲೋ ಬೌನ್ಸರ್ ಮತ್ತು ಯಾರ್ಕರ್‌ಗಳನ್ನು ಎಸೆಯುವ ಮೂಲಕ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇಂತಹ ಎಸೆತಗಳು ಎಸ್​ಆರ್​ಹೆಚ್ ಪಾಲಿಗೆ ಪ್ಲಸ್ ಪಾಯಿಂಟ್ ಆಯಿತು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಗೆಲ್ಲಲು ಸಾಧ್ಯವಾಗಿಲ್ಲ!

ಸಾಮಾನ್ಯವಾಗಿ ಪಿಚ್ ಸಂಪೂರ್ಣವಾಗಿ ನಿಧಾನಗತಿಯಾಗಿ ಬದಲಾಗದಿದ್ದರೂ, ಬೌಲರ್‌ಗಳು ಪಿಚ್‌ನ ಮೇಲ್ಮೈಯನ್ನು ಬಳಸಿಕೊಂಡು ಸ್ಲೋ ಎಸೆತಗಳನ್ನು ಹಾಕಿದಾಗ ರನ್ ಗಳಿಸುವುದು ಬ್ಯಾಟರ್‌ಗಳಿಗೆ ತೀವ್ರ ಕಷ್ಟಕರವಾಗಿ ಪರಿಣಮಿಸಿತು.

ನಮ್ಮ ಮೊದಲ ಆದ್ಯತೆ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನದಲ್ಲೇ ಉಳಿಯುವುದಾಗಿತ್ತು. ಆದರೆ ಎದುರಾಳಿಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ನಮಗೆ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ರಜತ್ ಪಾಟೀದಾರ್ ಎಂದು ಹೇಳಿದ್ದಾರೆ.


ಈ ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪ್ಲೇಆಫ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

Source link

Adhika Masa Vastu: ಮನೆಯಲ್ಲಿ ಈ ವಸ್ತುಗಳಿದ್ದರೆ ತಕ್ಷಣವೇ ತೆಗೆದುಹಾಕಿ, ಇಲ್ಲದಿದ್ದರೆ ದಾರಿದ್ರ್ಯ ಬೆನ್ನತ್ತಬಹುದು! – Kannada News | Adhika Masa Vastu: Remove These 4 Items for Positive Energy and Prosperity in Your Home

ಸನಾತನ ಧರ್ಮದಲ್ಲಿ ಅಧಿಕ ಮಾಸಕ್ಕೆ (ಪುರುಷೋತ್ತಮ ಮಾಸ) ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಈ ಪವಿತ್ರ ಮಾಸದ ಅಧಿಪತಿ ಶ್ರೀಮಹಾವಿಷ್ಣು. ಹಾಗಾಗಿಯೇ ಇದನ್ನು “ಪುರುಷೋತ್ತಮ ಮಾಸ” ಎಂದೂ ಕರೆಯುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಪವಿತ್ರ ಅಧಿಕ ಮಾಸದಲ್ಲಿ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು, ಸಕಾರಾತ್ಮಕ ಶಕ್ತಿಯನ್ನು (Positive Energy) ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ.

ಈ ಅವಧಿಯಲ್ಲಿ ಮನೆಯಲ್ಲಿರುವ ಕೆಲವು ವಸ್ತುಗಳು ನಕಾರಾತ್ಮಕ ಪ್ರಭಾವವನ್ನು ಬೀರುತ್ತವೆ ಮತ್ತು ದುರಾದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಅಧಿಕ ಮಾಸ ಮುಗಿಯುವ ಮುನ್ನವೇ ಈ ಕೆಳಗಿನ ನಾಲ್ಕು ವಸ್ತುಗಳನ್ನು ಮನೆಯಿಂದ ಹೊರಹಾಕಲು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಆ ವಸ್ತುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಮುರಿದ ದೇವರ ವಿಗ್ರಹಗಳು:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮುರಿದ ದೇವತಾ ವಿಗ್ರಹಗಳು ಮತ್ತು ಹರಿದುಹೋಗಿರುವ ದೇವರ ಫೋಟೋ ಇಡುವುದು ಅಶುಭ. ಇವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ, ಅಧಿಕ ಮಾಸದ ಈ ಪವಿತ್ರ ಸಮಯದಲ್ಲಿ ಅಂತಹ ವಿಗ್ರಹಗಳನ್ನು ಗೌರವಪೂರ್ವಕವಾಗಿ ಯಾವುದೇ ನದಿ ಅಥವಾ ಕೆರೆಯಲ್ಲಿ ವಿಸರ್ಜನೆ ಮಾಡುವುದು ಉತ್ತಮ.

ಒಣಗಿಹೋದ ಗಿಡ-ಮರಗಳು:

ಮನೆಯ ಸುತ್ತಮುತ್ತ ಒಣಗಿದ ಗಿಡಗಳು ಇರುವುದು ನಿರಾಶೆ ಮತ್ತು ನಕಾರಾತ್ಮಕತೆಯ ಸಂಕೇತವಾಗಿದೆ. ಇವು ಕುಟುಂಬದ ಸದಸ್ಯರ ಮಾನಸಿಕ ಶಾಂತಿ ಮತ್ತು ಪ್ರಗತಿಯ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದ್ದರಿಂದ ತಕ್ಷಣವೇ ಒಣಗಿದ ಗಿಡಗಳನ್ನು ತೆಗೆದುಹಾಕಿ, ಅವುಗಳ ಜಾಗದಲ್ಲಿ ಹಸಿರಾದ ಹೊಸ ಗಿಡಗಳನ್ನು ನೆಡಿ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಒಡೆದ ಗಾಜಿನ ವಸ್ತುಗಳು:

ಮನೆಯಲ್ಲಿ ಒಡೆದ ಗಾಜು, ಬಿರುಕು ಬಿಟ್ಟ ಕನ್ನಡಿಗಳು ಅಥವಾ ಒಡೆದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ದೊಡ್ಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇವು ಕುಟುಂಬದಲ್ಲಿ ವಿನಾಕಾರಣ ಉದ್ವೇಗ, ಜಗಳ ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಆದ್ದರಿಂದ ಇಂತಹ ವಸ್ತುಗಳನ್ನು ತಕ್ಷಣವೇ ಮನೆಯಿಂದ ಹೊರಹಾಕುವುದು ಶ್ರೇಯಸ್ಕರ.

ನಿಂತುಹೋದ ಅಥವಾ ಹಾಳಾದ ಗಡಿಯಾರಗಳು:

ಗಡಿಯಾರವನ್ನು ಸಮಯ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಂತುಹೋದ ಗಡಿಯಾರಗಳು ಮನೆಯಲ್ಲಿ ನಿಷ್ಕ್ರಿಯ ಶಕ್ತಿಯನ್ನು (Stagnant Energy) ಸೂಚಿಸುತ್ತವೆ. ಇವು ಕುಟುಂಬದ ಸದಸ್ಯರ ಉದ್ಯೋಗ, ವ್ಯಾಪಾರ ಮತ್ತು ಜೀವನದ ಬೆಳವಣಿಗೆಗೆ ಅಡ್ಡಿಪಡಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಕೆಟ್ಟುಹೋದ ಗಡಿಯಾರಗಳನ್ನು ತಕ್ಷಣವೇ ದುರಸ್ತಿ ಮಾಡಿ ಅಥವಾ ಮನೆಯಿಂದ ತೆಗೆದುಹಾಕಿ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ವಾಸ್ತು, ಜ್ಯೋತಿಷ್ಯ ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ – Kannada News | IPL 2026: virat kohli and travis head fight video

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯವು ಕೇವಲ ರನ್‌ಗಳ ಮಳೆಯಿಂದಷ್ಟೇ ಅಲ್ಲ, ಇಬ್ಬರು ಜಾಗತಿಕ ಕ್ರಿಕೆಟ್ ದಿಗ್ಗಜರ ವಾಕ್ಸಮರದಿಂದ ಇಡೀ ವಿಶ್ವದ ಗಮನ ಸೆಳೆದಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್​ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಹಾಗೂ ಪಂದ್ಯದ ಬಳಿಕ ಕೊಹ್ಲಿ ನಡೆದುಕೊಂಡು ರೀತಿ ಇದೀಗ ಚರ್ಚಾ ವಿಷಯವಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

  • ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಆಕ್ರೋಶ: ಎಸ್‌ಆರ್‌ಎಚ್ ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್  ಮುಂದೆಯೇ ಅತ್ಯಂತ ಆಕ್ರಮಣಕಾರಿಯಾಗಿ ಕಿರುಚಾಡಿ ಸಂಭ್ರಮಿಸಿದ್ದರು.

  • ಕೊಹ್ಲಿ ಸವಾಲು: ಆರ್‌ಸಿಬಿ ಬ್ಯಾಟಿಂಗ್ ಮಾಡುತ್ತಿದ್ದಾಗ ವೆಂಕಟೇಶ್ ಅಯ್ಯರ್ ಅವರು ಎಸ್‌ಆರ್‌ಎಚ್ ಸ್ಪಿನ್ನರ್ ಶಿವಾಂಗ್ ಕುಮಾರ್ ಓವರ್‌ನಲ್ಲಿ 23 ರನ್ ಚಚ್ಚಿದರು. ಈ ವೇಳೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಕೊಹ್ಲಿ, ಮಿಡ್-ವಿಕೆಟ್‌ನಲ್ಲಿದ್ದ ಟ್ರಾವಿಸ್ ಹೆಡ್‌ರನ್ನು ಕೆಣಕಿದರು. “ಬಾ ಇಲ್ಲಿ, ಬಂದು ಸ್ವಲ್ಪ ಆಫ್-ಸ್ಪಿನ್ ಬೌಲಿಂಗ್ ಮಾಡು” ಎಂದು ಹೆಡ್‌ಗೆ ಸವಾಲು ಹಾಕುತ್ತಾ ತಮಾಷೆ ಮಾಡಿದರು.
  • ಹೆಡ್ ತಿರುಗೇಟು: ಕೊಹ್ಲಿ ಸವಾಲು ಹಾಕಿದ ಕೆಲವೇ ನಿಮಿಷಗಳಲ್ಲಿ ಸಾಕಿಬ್ ಹುಸೇನ್ ಎಸೆತದಲ್ಲಿ ಕೇವಲ 15 ರನ್ ಗಳಿಸಿ ಔಟಾದರು. ಕೊಹ್ಲಿ ಪೆವಿಲಿಯನ್‌ಗೆ ಮರಳುವಾಗ ಹೆಡ್ ಬಿಡಲಿಲ್ಲ. “ಗೆಳೆಯಾ, ನಾನು ಬೌಲಿಂಗ್ ಮಾಡಲು ಬರುವ ಮೊದಲೇ ನೀನು ಔಟಾಗಿ ಹೋದೆ!” ಎಂದು ತಿರುಗೇಟು ನೀಡಿದರು. ಇದರಿಂದ ಕೊಹ್ಲಿ ತೀವ್ರ ಅಸಮಾಧಾನಗೊಂಡರು.

ಹಸ್ತಲಾಘವ ನಿರಾಕರಿಸಿದ ಕೊಹ್ಲಿ:

ಎಸ್‌ಆರ್‌ಎಚ್ ತಂಡ 55 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಶೇಕ್ ಹ್ಯಾಂಡ್  ಮಾಡುತ್ತಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಕೊಹ್ಲಿ ಕಡೆಗೆ ಕೈ ಚಾಚಿದರು. ಆದರೆ ತೀವ್ರ ಕೋಪದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್ ಅವರತ್ತ ಕಣ್ಣೆತ್ತಿಯೂ ನೋಡದೆ ನೇರವಾಗಿ ಮುಂದೆ ಸಾಗಿದರು!

ಆದರೆ, ಅವರ ಹಿಂದೆಯೇ ಇದ್ದ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಕೊಹ್ಲಿ ಅತ್ಯಂತ ಆತ್ಮೀಯವಾಗಿ ಹಸ್ತಲಾಘವ ಮಾಡಿ ಕೌತುಕ ಮೂಡಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕ್ರೀಡಾ ಸ್ಫೂರ್ತಿ ಮರೆತ ವಿರಾಟ್ ಕೊಹ್ಲಿ:

ಕ್ರಿಕೆಟ್‌ನಲ್ಲಿ “ಮೈದಾನದ ಜಗಳ ಪಂದ್ಯದೊಂದಿಗೆ ಮುಗಿಯಬೇಕು” ಎಂಬ ಅಲಿಖಿತ ನಿಯಮವಿದೆ. ಪಂದ್ಯ ಮುಗಿದ ಮೇಲೆ ಹಸ್ತಲಾಘವ ಮಾಡುವುದು ಪರಸ್ಪರ ಗೌರವದ ಸಂಕೇತ. ಅದನ್ನು ನಿರಾಕರಿಸುವುದು ಕ್ರೀಡಾ ಸಂಸ್ಕೃತಿಗೆ ವಿರುದ್ಧವಾಗಿದೆ. ಇದೀಗ ದಿಗ್ಗಜ ಕ್ರಿಕೆಟಿಗ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಟ್ರಾವಿಸ್ ಹೆಡ್ ಶೇಕ್ ಹ್ಯಾಂಡ್ ನೀಡದೇ ಕ್ರೀಡಾ ಸ್ಫೂರ್ತಿಯನ್ನೇ ಮರೆತಿದ್ದಾರೆ.

ಅದರಲ್ಲೂ 2023ರ ಐಪಿಎಲ್‌ನಲ್ಲಿ ಲಕ್ನೋ ವಿರುದ್ಧದ ರೋಚಕ ಪಂದ್ಯ ಮುಗಿದ ಬಳಿಕ ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ಅವರೊಂದಿಗೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ್ದರು. ಆ ಪಂದ್ಯ ಗೆದ್ದು ಡ್ರೆಸ್ಸಿಂಗ್ ರೂಮ್‌ಗೆ ಬಂದ ನಂತರ ಕೊಹ್ಲಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು, “ನೀವು ಬೇರೆಯವರಿಗೆ ಕೊಡಲು ಸಿದ್ಧರಿದ್ದರೆ, ಅದನ್ನು ಅವರಿಂದ ತಿರುಗಿಸಿ ಇಸ್ಕೊಳ್ಳುವುದಕ್ಕೂ ಸಿದ್ಧರಾಗಿರಬೇಕು. ಇಲ್ಲದಿದ್ದರೆ ಕೊಡಲು ಹೋಗಬೇಡಿ” ಎಂದಿದ್ದರು. ಇದೇ ಡೈಲಾಗ್ ವಿರಾಟ್ ಕೊಹ್ಲಿಗೂ ಅನ್ವಯಿಸುತ್ತದೆ ಎಂಬುದು ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯ.

ಗೆದ್ದು ಬೀಗಿದ ಎಸ್​ಆರ್​ಹೆಚ್:

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ 20 ಓವರ್​ಗಳಲ್ಲಿ 200 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡ 55 ರನ್​ಗಳ ಜಯ ಸಾಧಿಸಿದೆ.

Source link

ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್

ಮಂತ್ರಾಲಯ ಗುರು ರಾಯರ ಬಗ್ಗೆ ಅಜನೀಶ್ ಲೋಕನಾಥ್ ಆಲ್ಬಂ ಸಾಂಗ್ ಒಂದನ್ನು ಮಾಡಿದ್ದಾರೆ. ಈ ಹಾಡಿನ ಟೀಸರ್ ಬಿಡುಗಡೆ ಆಗಿದೆ. ‘ಕಾಂತರ ಚಾಪ್ಟರ್ 1’ ಚಿತ್ರದಲ್ಲಿ ‘ಬ್ರಹ್ಮ ಕಳಶ’ ಹಾಡು ಹಾಡಿರುವ ಅಬ್ಬಿ ಇದೀಗ ರಾಯರ ಹಾಡನ್ನ ಹಾಡಿದ್ದಾರೆ. ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ ನಲ್ಲಿ ರಘು ಭಟ್ ನಿರ್ಮಾಣ ಮಾಡಿದ್ದಾರೆ. ಈ ಹಾಡನ್ನು ಮಾಡಲು ಕಾರಣ ಏನು ಎಂಬುದನ್ನು ಅಜನೀಶ್ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಯಸ್ಸಾಗಿದೆ ಅಂತಾ ಮನೇಲಿ ಕೂರಲ್ಲ ಎಂದ ದೇವೇಗೌಡ್ರು! ಮತ್ತೆ ರಾಜ್ಯಸಭೆ ರೇಸ್​ಗೆ ಎಂಟ್ರಿಯಾಗ್ತಾರಾ ಹೆಚ್​ಡಿಡಿ? – Kannada News | HD Deve Gowda Rajya Sabha Re election: JDS BJP Alliance Strategy in Karnataka

ಮತ್ತೆ ರಾಜ್ಯಸಭೆ ರೇಸ್​ಗೆ ಎಂಟ್ರಿಯಾಗ್ತಾರಾ ದೇವೇಗೌಡ್ರು?

ಬೆಂಗಳೂರು, ಮೇ 23: ಜೂನ್ 25ಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (H. D. Deve Gowda) ರಾಜ್ಯಸಭಾ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿದ್ದು, ಅವರನ್ನು ಮತ್ತೊಂದು ಅವಧಿಗೆ ಮರು ಆಯ್ಕೆ ಮಾಡಲು ಜೆಡಿಎಸ್ ನಾಯಕರು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ದೆಹಲಿ ಮಟ್ಟದಲ್ಲಿ ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರೊಂದಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮುಖ್ಯಾಂಶಗಳು

  • ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸಲು ಜೆಡಿಎಸ್ ನಾಯಕರು ಕಸರತ್ತು ನಡೆಸಿದ್ದಾರೆ.
  • ರಾಜ್ಯಸಭೆ ಮರು ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಿ ಮೋದಿಗೆ ಬಿಡಲಾಗಿದೆ.
  • ಮೈತ್ರಿಕೂಟದ ಸಂಖ್ಯಾಬಲದ ಆಧಾರದ ಮೇಲೆ ಜೆಡಿಎಸ್ ಸುಲಭವಾಗಿ ಗೆಲ್ಲುವ ಅವಕಾಶ ಹೊಂದಿದೆ.

ಮೈತ್ರಿ ಅಭ್ಯರ್ಥಿಯಾಗಿ ಗೌಡ್ರ ಗೆಲುವು ಪಕ್ಕಾ!

ಕರ್ನಾಟಕದಿಂದ ತೆರವಾಗಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 45 ರಿಂದ 46 ಮತಗಳ ಅಗತ್ಯವಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಹೊಂದಿದ್ದು, ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಇನ್ನುಳಿದಂತೆ ಬಿಜೆಪಿ (63) ಮತ್ತು ಜೆಡಿಎಸ್ (18) ಮೈತ್ರಿಕೂಟದ ಬಳಿ ಒಟ್ಟು 81 ಮತಗಳಿದ್ದು, ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರನ್ನು ಕಣಕ್ಕಿಳಿಸಿದರೆ ಅವರ ಗೆಲುವು ನಿಶ್ಚಿತವಾಗಿದೆ. ಗೌಡರ ಹಿರಿತನ ಮತ್ತು ರಾಜಕೀಯ ಅನುಭವಕ್ಕೆ ಮನ್ನಣೆ ನೀಡಿ ಹೈಕಮಾಂಡ್ ಒಪ್ಪಿಗೆ ನೀಡುವ ವಿಶ್ವಾಸದಲ್ಲಿ ದಳಪತಿಗಳಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ, ನಾವು ಯಾವುದೇ ಷರತ್ತು ಅಥವಾ ಒತ್ತಡ ಹೇರಿಲ್ಲ, ಪ್ರಧಾನಿ ಮೋದಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

ವಯಸ್ಸಾಗಿದೆ ಅಂತಾ ಮನೆಯಲ್ಲಿ ಕೂರಲ್ಲ ಎಂದ ಹೆಚ್​ಡಿಡಿ

ತಮ್ಮ ಮರು ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದು ದೇಶದ ಪ್ರಧಾನಿ ಹುದ್ದೆಯವರೆಗೆ ನೋಡಿದ್ದೇನೆ. ರಾಜ್ಯಸಭೆಯ ಅವಧಿ ಮುಗಿಯುತ್ತಿದ್ದು, ಉಳಿದದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನೆಗೆ ಬಿಟ್ಟದ್ದು. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಕೊನೆಯ ಉಸಿರಿರುವವರೆಗೂ ಜನಗಳ ಪರವಾಗಿ ಹೋರಾಟ ಮಾಡುತ್ತೇನೆ. ವಯಸ್ಸಾಗಿದೆ ಎಂದು ಮನೆಯಲ್ಲಿ ಕೂರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ಮಾಂಗಲ್ಯ ಸರದಲ್ಲಿ ಮುತ್ತು, ಹವಳ ಇರಲೇಬೇಕು ಯಾಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Unlocking Strength: Traditional Benefits of Pearl and Coral in Jewellery

ಮಾಂಗಲ್ಯ ಸರದಲ್ಲಿ ಮುತ್ತು, ಹವಳImage Credit source: Pinterest

ಮಾಂಗಲ್ಯ ಸರದಲ್ಲಿ ಧರಿಸುವ ಮುತ್ತು ಮತ್ತು ಹವಳದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.ಪ್ರತಿಯೊಬ್ಬ ಗೃಹಿಣಿ, ತಾಯಿ ಅಥವಾ ವೃತ್ತಿಪರ ಮಹಿಳೆಗೆ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಈ ಗುಣಗಳನ್ನು ಹೆಚ್ಚಿಸಲು ನವರತ್ನಗಳು, ಅದರಲ್ಲೂ ನಿರ್ದಿಷ್ಟವಾಗಿ ಮುತ್ತು ಮತ್ತು ಹವಳಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.

ಮಹಿಳೆಯರು ಮುತ್ತು ಮತ್ತು ಹವಳವನ್ನು ಧರಿಸಿದಾಗ, ಅವರಲ್ಲಿನ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ, ಧೈರ್ಯ, ಶಕ್ತಿ ಮತ್ತು ಉತ್ತಮ ಮನಸ್ಸಿನ ಭಾವನೆಗಳು ಹೆಚ್ಚುತ್ತವೆ. ಇದು ಜೀವನದ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಮಾಂಗಲ್ಯ ಸರದಲ್ಲಿ ಈ ರತ್ನಗಳನ್ನು ಧರಿಸುವುದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಮಾಂಗಲ್ಯವು ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತದೆ.

ಹವಳವು ಕುಜ (ಮಂಗಳ) ಗ್ರಹದ ಪ್ರತೀಕವಾಗಿದ್ದರೆ, ಮುತ್ತು ಚಂದ್ರ ಗ್ರಹದ ಪ್ರತೀಕವಾಗಿದೆ. ಈ ರತ್ನಗಳು ಸ್ತ್ರೀಯರಿಗೆ ಶಕ್ತಿ, ಚೈತನ್ಯ ಮತ್ತು ತಾಳ್ಮೆಯನ್ನು ನೀಡುತ್ತವೆ. ಮಹಿಳೆ ತಾಳ್ಮೆ ಮತ್ತು ಪ್ರಶಾಂತತೆಯಿಂದ ಇದ್ದಾಗ, ಆ ಕುಟುಂಬವು ನೆಮ್ಮದಿಯಿಂದ ಇರುತ್ತದೆ. ಪತಿ, ಮಕ್ಕಳು ಸೇರಿದಂತೆ ಕುಟುಂಬದ ಎಲ್ಲರಿಗೂ ಆ ಮಹಿಳೆ ಮಾರ್ಗದರ್ಶಕಿಯಾಗಿ, ಅನ್ನದಾತಳಾಗಿ, ಚೈತನ್ಯ ತುಂಬುವ ಶಕ್ತಿಯಾಗಿರುತ್ತಾಳೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಹವಳ ಧರಿಸುವುದರಿಂದ ಗರ್ಭಧಾರಣೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ. ಕುಜನು ಯೋಧನಂತೆ ಸಂಸಾರವನ್ನು ನಿರ್ವಹಿಸಲು ಮಾನಸಿಕ ಶಕ್ತಿಯನ್ನು ನೀಡುತ್ತಾನೆ. ಮಾಂಗಲ್ಯದಲ್ಲಿ ಹವಳ ಧರಿಸುವುದರಿಂದ ಕುಜದೋಷದ ಪ್ರಭಾವ ಕಡಿಮೆಯಾಗುತ್ತದೆ. ಇದು ವಿವಾಹ ಪೂರ್ವ ಮತ್ತು ವಿವಾಹ ನಂತರದ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ, ಗೃಹಿಣಿಯ ಆರೋಗ್ಯವನ್ನು ಸುಧಾರಿಸುತ್ತದೆ.

ಮುತ್ತು ಮತ್ತು ಹವಳವನ್ನು ಮಾಂಗಲ್ಯ ಸರದ ಎಡ ಮತ್ತು ಬಲ ಭಾಗದಲ್ಲಿ ಧರಿಸುವುದರಿಂದ ಮಹಿಳೆಯು ಹೆಚ್ಚು ಜಾಗೃತಳಾಗಿ, ಸಂಸಾರವನ್ನು ನಿರ್ವಹಿಸುವ ಅದ್ಭುತ ಶಕ್ತಿಯನ್ನು ಪಡೆಯುತ್ತಾಳೆ. ಆರೋಗ್ಯ ಸುಧಾರಣೆಯ ಜೊತೆಗೆ, ಶಸ್ತ್ರಚಿಕಿತ್ಸೆ ಇಲ್ಲದೆ ನೈಸರ್ಗಿಕ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯ ಮತ್ತು ಚಂದ್ರರ ಅನುಗ್ರಹವು ಈ ರತ್ನಗಳ ಮೇಲೆ ಇರುತ್ತದೆ. ಹವಳ ಧರಿಸಿದ ಜಾಗದಲ್ಲಿ ಸೂರ್ಯನ ಕಿರಣಗಳ ಪ್ರಭಾವವೂ ದೇಹದ ಮೇಲೆ ಹೆಚ್ಚಾಗಿ ಬೀಳುತ್ತದೆ.

ಒಟ್ಟಾರೆಯಾಗಿ, ಈ ರತ್ನಗಳು ಆರೋಗ್ಯ, ಸಂಸಾರ ನಿರ್ವಹಣೆ, ಸಾಂಪ್ರದಾಯಿಕ ಮೌಲ್ಯಗಳು, ತಾಳ್ಮೆ ಮತ್ತು ಸಹನೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಮಹಿಳೆ ರಾಜಕೀಯದಲ್ಲಿರಲಿ, ವೈದ್ಯೆಯಾಗಿರಲಿ, ಶಿಕ್ಷಕಿಯಾಗಿರಲಿ ಅಥವಾ ಯಾವುದೇ ವೃತ್ತಿಯಲ್ಲಿದ್ದರೂ, ವೃತ್ತಿಪರವಾಗಿ ಧೈರ್ಯವನ್ನು ನೀಡುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟಿ ಸೌಂದರ್ಯಾ ಬಗ್ಗೆ ಓಪನ್ ಆಗಿ ಮಾತನಾಡಿದ ಪ್ರೇಮಾ – Kannada News | Actress Prema Recalls Soundarya’s Legacy, Career and The Biopic Dilemma

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ನಟಿ ಪ್ರೇಮಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಜರ್ನಿ ಹಾಗೂ ದಿವಂಗತ ನಟಿ ಸೌಂದರ್ಯ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಅವರ ಮೊದಲ ಎರಡು ಚಿತ್ರಗಳು ಸೋತಾಗ ಅವರು ತೀವ್ರ ನಿರಾಶೆಗೊಂಡಿದ್ದರು. ಸಿನಿಮಾರಂಗವನ್ನೇ ತೊರೆದು ಬೇರೆ ವೃತ್ತಿ ಆರಿಸಿಕೊಳ್ಳುವ ಯೋಚನೆಯಲ್ಲಿದ್ದ ಅವರಿಗೆ ಡಾ. ರಾಜ್‌ಕುಮಾರ್ ಅವರು ‘ಓಂ’ ಚಿತ್ರಕ್ಕೆ ಆಯ್ಕೆ ಮಾಡಿದ್ದೇ ದೊಡ್ಡ ತಿರುವಾಯಿತು. ‘ಓಂ’ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆದ ನಂತರ ಪ್ರೇಮಾ ಅವರ ವೃತ್ತಿಜೀವನದಲ್ಲಿ ಅವರು ಹಿಂತಿರುಗಿ ನೋಡಲಿಲ್ಲ.

ಪ್ರೇಮಾ ಮತ್ತು ಸೌಂದರ್ಯ ಒಟ್ಟಿಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಸೌಂದರ್ಯ ಸಾಮಾನ್ಯವಾಗಿ ಕಡಿಮೆ ಮಾತನಾಡುತ್ತಿದ್ದರು, ಆದರೆ ‘ಆಪ್ತಮಿತ್ರ’ ಚಿತ್ರೀಕರಣದ ಸಮಯದಲ್ಲಿ ವಿಷ್ಣುವರ್ಧನ್ ಮತ್ತು ಪ್ರೇಮಾ ಅವರೊಂದಿಗೆ ತುಂಬಾ ಮುಕ್ತವಾಗಿ ಮಾತನಾಡಿ, ತಮಾಷೆ ಮಾಡುತ್ತಿದ್ದರು. ಸೌಂದರ್ಯ ಎಂದಿಗೂ ಮತ್ಸರ ಅಥವಾ ಸ್ಪರ್ಧಾತ್ಮಕ ಮನೋಭಾವ ಹೊಂದಿರಲಿಲ್ಲ. ಅವರು ಗ್ಲಾಮರ್ ಪ್ರದರ್ಶನವಿಲ್ಲದೆ, ಕೇವಲ ತಮ್ಮ ಮುಖಭಾವ ಮತ್ತು ಶಿಸ್ತಿನ ನಟನೆಯಿಂದಲೇ ಸ್ಟಾರ್ ನಾಯಕಿಯಾದವರು.

‘ಇಷ್ಟೊಂದು ಅದ್ಭುತ ಜೀವನ ನಡೆಸಿದ ಸೌಂದರ್ಯ ಅವರ ಬಯೋಪಿಕ್ (ಜೀವನ ಚರಿತ್ರೆ) ಮಾಡಲು ನಿರ್ದೇಶಕರು ಏಕೆ ಹೆದರುತ್ತಾರೋ ಗೊತ್ತಿಲ್ಲ. ಅವರನ್ನು ಹತ್ತಿರದಿಂದ ಬಲ್ಲವರು ಈ ಸಿನಿಮಾ ಮಾಡಿದರೆ ಖಂಡಿತ ದೊಡ್ಡ ಹಿಟ್ ಆಗುತ್ತದೆ’ ಎನ್ನುತ್ತಾರೆ ಪ್ರೇಮಾ. ಸೌಂದರ್ಯ ಅವರ ವಿಮಾನ ಅಪಘಾತದ ಸಾವು ಪ್ರೇಮಾ ಅವರಿಗೆ ತೀವ್ರ ಆಘಾತ ನೀಡಿತ್ತು. ಅವರ ಸಾವಿನ ಬಗ್ಗೆ ಪ್ರೇಮಾ ಕೆಲವು ಸತ್ಯಗಳನ್ನು ಹಂಚಿಕೊಂಡಿದ್ದಾರೆ:
ಪೆಟ್ಟಿಗೆಯಲ್ಲಿದ್ದ ಶವ ಮತ್ತು ಅವರ ತಾಯಿಯ ಆಕ್ರಂದನವನ್ನು ನೋಡಿದ ನಂತರ, ‘ಕಲಾವಿದರ ಜೀವನ ನಶ್ವರ. ಸಾವು ಬಂದಾಗ ಖ್ಯಾತಿ, ಅಂತಸ್ತು ಯಾವುದೂ ಬರಲ್ಲ; ನಾವು ಗಳಿಸುವ ಕರ್ಮ ಮತ್ತು ಗೌರವ ಮಾತ್ರ ನಮ್ಮ ಜೊತೆ ಉಳಿಯುತ್ತದೆ’ ಎಂಬ ಕಹಿ ಸತ್ಯ ಪ್ರೇಮಾಗೆ ಅರ್ಥವಾಯಿತು.

ಇದನ್ನೂ ಓದಿ: ರಾಗಿಣಿ ದ್ವಿವೇದಿ, ವರಲಕ್ಷ್ಮೀ ‘ಪೊಲೀಸ್ ಕಂಪ್ಲೈಂಟ್’: ಸಾಕ್ಷಿಯಾದ ಹಿರಿಯ ನಟಿ ಪ್ರೇಮಾ

ಸೌಂದರ್ಯ ಪತಿ ‘ರಘು’ ಅವರ ಪ್ರಸ್ತುತ ಜೀವನ

ಸೌಂದರ್ಯ ಅವರ ಪತಿ ರಘು ಅವರು ಅತ್ಯಂತ ಮೃದುಭಾಷಿ ಮತ್ತು ಸರಳ ವ್ಯಕ್ತಿ. ಪ್ರಸ್ತುತ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅವರು, ಸೌಂದರ್ಯ ನಿಧನದ ನಂತರ ಮರುಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಅವರ ಮಗಳನ್ನು ನೋಡಿದಾಗ ತಮಗೆ ಸೌಂದರ್ಯ ಅವರೇ ಮರುಜನ್ಮ ಪಡೆದು ಬಂದಂತೆ ಭಾಸವಾಗುತ್ತದೆ ಎಂದು ಪ್ರೇಮಾ ಭಾವುಕರಾಗಿ ಹೇಳಿದ್ದಾರೆ. ರಘು ಅವರು ಇಂದಿಗೂ ಪ್ರೇಮಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ, ಇಂದು ಪ್ರಧಾನಿ ಜತೆ ಮಾತುಕತೆ – Kannada News | Marco Rubio Lands in Kolkata Ahead of Key Meeting With Narendra Modi

ಕೋಲ್ಕತ್ತಾ, ಮೇ 23: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಶನಿವಾರ ಕೋಲ್ಕತ್ತಾಗೆ ಆಗಮಿಸುವ ಮೂಲಕ ತಮ್ಮ ನಾಲ್ಕು ದಿನಗಳ ಮೊದಲ ಅಧಿಕೃತ ಭಾರತ ಪ್ರವಾಸವನ್ನು ಆರಂಭಿಸಿದ್ದಾರೆ. ಮೇ 23 ರಿಂದ 26 ರವರೆಗೆ ನಡೆಯಲಿರುವ ಈ ಭೇಟಿಯು ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ, ರಕ್ಷಣೆ, ಇಂಧನ ಮತ್ತು ಇಂಡೋ-ಪೆಸಿಫಿಕ್ ಸಹಕಾರದ ಕುರಿತು ಕಾರ್ಯತಂತ್ರದ ಮಾತುಕತೆಗಳ ಮಧ್ಯೆ ಅತ್ಯಂತ ಮಹತ್ವ ಪಡೆದಿದೆ.

ವಿಶೇಷವೆಂದರೆ, ಬರೋಬ್ಬರಿ 14 ವರ್ಷಗಳ ದೀರ್ಘ ಅವಧಿಯ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದಾರೆ. ರುಬಿಯೊ ಅವರ ಆಗಮನವನ್ನು ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ‘X’ ಮಾಧ್ಯಮದಲ್ಲಿ ದೃಢೀಕರಿಸಿದ್ದಾರೆ. ಕೋಲ್ಕತ್ತಾ ಪ್ರವಾಸದ ನಂತರ ರುಬಿಯೊ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ವ್ಯಾಪಾರ, ತಂತ್ರಜ್ಞಾನ, ರಕ್ಷಣೆ ಮತ್ತು ಕ್ವಾಡ್ (QUAD) ಒಕ್ಕೂಟದ ಕುರಿತು ಪ್ರಮುಖ ಮಾತುಕತೆ ನಡೆಸಲಿದ್ದಾರೆ.

ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ರೂಬಿಯೊ ಅವರ ಕೋಲ್ಕತ್ತಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ, ಅವರು ಮದರ್ ತೆರೇಸಾ ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿಯ ಪ್ರಧಾನ ಕಚೇರಿಯಾದ ‘ಮದರ್ ಹೌಸ್’ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ, ಸುಮಾರು ಅಂಗಡಿಗಳು ಭಸ್ಮ

ನವದೆಹಲಿ, ಮೇ 23: ನವದೆಹಲಿಯ ಶಾಸ್ತ್ರಿ ಪಾರ್ಕ್ ಪೀಠೋಪಕರಣ ಮಾರುಕಟ್ಟೆಯಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಸುಮಾರು 300 ಅಂಗಡಿಗಳು ನಾಶವಾಗಿವೆ. ಈ ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಈ ಮಧ್ಯೆ, ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದ ಅಗ್ನಿಶಾಮಕ ದಳದವರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಬೆಂಕಿಯನ್ನು ನಂದಿಸುವಲ್ಲಿ ವಿಳಂಬ ತೋರಿದ್ದಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಶಾರುಖ್ ಸಹೋದರಿ ಯಾರು? ವಿವಾಹ ಆಗದೆ ಉಳಿಯಲು ಕಾರಣವಾಯ್ತು ಆ ಘಟನೆ – Kannada News | Shah Rukh Khan’s Pillar: Shahnaz Lalarukh Khan’s Untold Story and Private Life

ಸಹೋದರಿ ಹಾಗೂ ಕುಟುಂಬದ ಜೊತೆ ಶಾರುಖ್ ಖಾನ್

ಬಾಲಿವುಡ್‌ನ ನಟ ಶಾರುಖ್ ಖಾನ್ ಅವರ (Shah Rukh Khan) ಯಶಸ್ಸಿನ ಹಿಂದೆ ಅವರ ಕುಟುಂಬ ಇದೆ. ವಿಶೇಷವಾಗಿ ಅವರ ಅಕ್ಕ ಶಹನಾಜ್ ಖಾನ್, ಇಡೀ ಖಾನ್ ಕುಟುಂಬದ ಬಲವಾದ ಆಧಾರಸ್ತಂಭವಾಗಿದ್ದಾರೆ. ಆದರೆ, ಅವರು ಯಾವಾಗಲೂ ಮಾಧ್ಯಮದ ಬೆಳಕಿನಿಂದ ಮತ್ತು ಜನಮನದಿಂದ ದೂರವಿರಲು ಬಯಸುತ್ತಾರೆ. ಅವರು ಈವರೆಗೆ ಮದುವೆ ಆಗಿಲ್ಲ.

1960 ರಲ್ಲಿ ಜನಿಸಿದ ಶಹನಾಜ್, ಶಾರುಖ್ ಖಾನ್ ಅವರಿಗಿಂತ ಸುಮಾರು ಐದರಿಂದ ಆರು ವರ್ಷ ದೊಡ್ಡವರು. ಶಹನಾಜ್ ತುಂಬಾ ಬುದ್ಧಿವಂತೆ ಮತ್ತು ಉನ್ನತ ಶಿಕ್ಷಣ ಪಡೆದಿದ್ದಾರೆ. ಅವರು ಎಲ್‌ಎಲ್‌ಬಿ ಮತ್ತು ಎಂಎ ಪದವಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶಾರುಖ್ ಖಾನ್ ಅವರೇ ತಮ್ಮ ಅನೇಕ ಸಂದರ್ಶನಗಳಲ್ಲಿ ‘ನನ್ನ ಅಕ್ಕ ನನಗಿಂತ ನೂರು ಪಟ್ಟು ಹೆಚ್ಚು ಬುದ್ಧಿವಂತೆ ಮತ್ತು ಜಾಣೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆದರೂ ಅವರು ಎಂದಿಗೂ ಪ್ರಚಾರವನ್ನು ಬಯಸದೆ ಶಾಂತ ಮತ್ತು ಸರಳ ಜೀವನವನ್ನು ನಡೆಸುತ್ತಿದ್ದಾರೆ.

ಶಹನಾಜ್ ಅವರ ಜೀವನವು ತೀವ್ರ ಏರಿಳಿತಗಳಿಂದ ಕೂಡಿತ್ತು. 1981ರಲ್ಲಿ ಅವರ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಅವರ ಹಠಾತ್ ನಿಧನವು ಅವರಿಗೆ ಭರಿಸಲಾಗದ ಮಾನಸಿಕ ಆಘಾತವನ್ನು ನೀಡಿತು. ತಂದೆಯ ದೇಹವನ್ನು ನೋಡಿ ಮೂರ್ಛೆ ಹೋಗಿದ್ದ ಅವರು, ಸುಮಾರು ಎರಡು ವರ್ಷಗಳ ಕಾಲ ಯಾರೊಂದಿಗೂ ಸರಿಯಾಗಿ ಮಾತನಾಡದೆ ತೀವ್ರ ಖಿನ್ನತೆಗೆ ಒಳಗಾಗಿದ್ದರು. ತದನಂತರ 1991 ರಲ್ಲಿ ತಾಯಿ ಲತೀಫ್ ಫಾತಿಮಾ ಅವರ ಮರಣವು ಅವರ ಮಾನಸಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು.

‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಶಹನಾಜ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ, ಶಾರುಖ್ ಖಾನ್ ಅವರು ತಮ್ಮ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ ಸಹೋದರಿಯ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಿದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೂ ಕರೆದೊಯ್ದಿದ್ದರು.

ಇದನ್ನೂ ಓದಿ: ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್

ಹೆತ್ತವರ ಅಗಲಿಕೆಯ ಆಘಾತದಿಂದಾಗಿ ಶಹನಾಜ್ ಅವರು ಜೀವನದಲ್ಲಿ ಮದುವೆಯಾಗದೆ ಉಳಿದುಬಿಟ್ಟರು. ಅವರು ತಮ್ಮ ಇಡೀ ಜೀವನವನ್ನು ಕುಟುಂಬಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಪ್ರಸ್ತುತ ಅವರು ಮುಂಬೈನಲ್ಲಿರುವ ಶಾರುಖ್ ಅವರ ಐಷಾರಾಮಿ ಬಂಗಲೆ ‘ಮನ್ನತ್’ ನಲ್ಲಿ ವಾಸಿಸುತ್ತಿದ್ದಾರೆ. ಶಾರುಖ್ ಪತ್ನಿ ಗೌರಿ ಖಾನ್ ಮತ್ತು ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್‌ರಾಮ್ ಅವರೊಂದಿಗೆ ಅವರು ಅತ್ಯಂತ ಆಪ್ತ ಹಾಗೂ ಪ್ರೀತಿಯ ಸಂಬಂಧವನ್ನು ಹೊಂದಿದ್ದಾರೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಮಾಧ್ಯಮಗಳಿಂದ ಸದಾ ದೂರವೇ ಉಳಿಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version