ಗಿಲ್ಲಿಗೆ ಬಂಪರ್; 50 ಲಕ್ಷದ ಜೊತೆ ಐಷಾರಾಮಿ ಕಾರು, ಸುದೀಪ್ ಕಡೆಯಿಂದ ಬಿಗ್ ಅಮೌಂಟ್

Source link

ರನ್ನರ್ ಅಪ್ ಆದರೂ ಕಡಿಮೆಯಲ್ಲ ಕರಾವಳಿ ಚಿನಕುರಳಿಯ ಸಾಧನೆ – Kannada News | Bigg Boss Kannada 12: Rakshita Shetty became first Runner Up

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ಮುಗಿದಿದೆ. ಸುದೀಪ್ ಅವರು ಈ ಸೀಸನ್​​ನ ವಿನ್ನರ್​ನ ಘೋಷಣೆ ಮಾಡಿದ್ದಾರೆ. ಬಹುತೇಕರು ಮೊದಲೇ ಊಹಿಸಿದ್ದಂತೆ ಗಿಲ್ಲಿ ನಟ ಅವರು 12ನೇ ಸೀಸನ್​​ನ ವಿನ್ನರ್ ಆಗಿದ್ದಾರೆ. ತಮ್ಮ ಹಾಸ್ಯದಿಂದ ಅವರು ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಬಿಗ್​​ಬಾಸ್ 12ರ ಮನೆಗೆ ಒಟ್ಟು 24 ಮಂದಿ ಬಂದಿದ್ದರು. ಅವರಲ್ಲಿ ಬಹುತೇಕರು ನಟರು, ಆದರೆ ನಟನೆಯ ಸಣ್ಣ ಹಿನ್ನೆಲೆಯೂ ಇಲ್ಲದೆ, ಉಡುಪಿಯ ಹಳ್ಳಿಯೊಂದರಲ್ಲಿ ತಮಗೆ ತೋಚಿದಂತೆ ಅಡುಗೆ ವಿಡಿಯೋಗಳ ಮಾಡುತ್ತಿದ್ದ ಕನ್ನಡ ಭಾಷೆಯೂ ಸಹ ಸರಿಯಾಗಿ ಬಾರದ ಸಾಮಾನ್ಯ ಹುಡುಗಿಯೊಬ್ಬಾಕೆ ಬಿಗ್​​ಬಾಸ್​​ಗೆ ಬಂದು ಫಿನಾಲೆವರೆಗೂ ಬಂದಿರುವುದು ಸಾಮಾನ್ಯ ಸಾಧನೆಯಂತೂ ಅಲ್ಲವೇ ಅಲ್ಲ.

ಬಿಗ್​​ಬಾಸ್​​ ಮನೆಗೆ ಬಂದ ಮೊದಲ ದಿನವೇ ಮನೆಯಿಂದ ಎವಿಕ್ಟ್ ಆಗಿದ್ದ ರಕ್ಷಿತಾ, ಆ ನಂತರ ಮತ್ತೆ ಮನೆಗೆ ಎಂಟ್ರಿ ಕೊಟ್ಟು ಈಗ ಕೊನೆಯ ದಿನ ಮನೆಯಿಂದ ಹೊರಗೆ ಬಂದಿರುವುದು ಕಡಿಮೆ ಸಾಧನೆಯಲ್ಲ. ರಕ್ಷಿತಾ, ಆ ಮನೆಯಲ್ಲಿ ಹಲವು ರೀತಿಯ ನೋವು, ಅವಮಾನಗಳನ್ನು ಅನುಭವಿಸಿದ್ದಾರೆ. ರಕ್ಷಿತಾ, ತಮ್ಮ ಮುಗ್ಧತೆಯಿಂದ ಪ್ರೇಕ್ಷಕರ ಮನಸ್ಸು ಗೆದ್ದರೂ ಸಹ ಅಲ್ಲಿದ್ದ ಸ್ಪರ್ಧಿಗಳಿಗೆ ಅದು ಅಸಹನೀಯ ಅನಿಸಿ ಹಲವರು ರಕ್ಷಿತಾ ಮೇಲೆ ಜಗಳ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ

ರಕ್ಷಿತಾರನ್ನು ಎಂಟರ್ಟೈನ್​​ಮೆಂಟ್​​ಗೆ ಬಳಸಿಕೊಂಡರು, ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ನೌಕರಳಂತೆ ನಡೆಸಿಕೊಂಡರು, ತಮಾಷೆ ಮಾಡಲು ಬಳಸಿಕೊಂಡರು, ಫುಟೇಜ್ ತೆಗೆದುಕೊಳ್ಳಲು ಪುಕ್ಕಟೆ ಜಗಳ ಮಾಡಲು ಪಂಚಿಂಗ್ ಬ್ಯಾಗ್​​ನಂತೆ ನಡೆಸಿಕೊಂಡರು. ರಕ್ಷಿತಾರ ಬಣ್ಣದ ಬಗ್ಗೆ ಆಡಿಕೊಳ್ಳಲಾಯ್ತು, ಸ್ಲಂ ಎಂದು ಕರೆಯಲಾಯ್ತು, ‘ಸೆಡೆ’ ಎಂದು ಬೈಯ್ಯಲಾಯ್ತು, ರಕ್ಷಿತಾರ ಹಿನ್ನೆಲೆಯನ್ನು ಟೀಕಿಸಲಾಯ್ತು, ಆಕೆ ಧರಿಸುವ ಬಟ್ಟೆಗಳನ್ನು ಟೀಕಿಸಲಾಯ್ತು ಎಲ್ಲ ಅವಮಾನಗಳನ್ನು ಎದುರಿಸಿಯೂ ರಕ್ಷಿತಾ ಫಿನಾಲೆ ವರೆಗೆ ಬಂದರು. ಮಾತ್ರವಲ್ಲ, ಘಟಾನುಘಟಿಗಳನ್ನೇ ಹಿಂದಿಕ್ಕಿ ರನ್ನರ್ ಅಪ್ ಆಗಿದ್ದಾರೆ.

ಇಡೀ ಬಿಗ್​​ಬಾಸ್ ಮನೆಯಲ್ಲಿ ಕಿರಿಯ ವ್ಯಕ್ತಿ, ಅನುಭವವೂ ಕಡಿಮೆ ಆದರೆ ಹಲವು ಸಂದರ್ಭದಲ್ಲಿ ಘನತೆಯಿಂದ ನಡೆದುಕೊಂಡಿದ್ದಾರೆ. ಘನತೆಯಿಂದ ವರ್ತಿಸಿದ್ದಾರೆ. ತಪ್ಪಿದ್ದಲ್ಲಿ ತಪ್ಪು ಎಂದಿದ್ದಾರೆ, ವಿರೋಧಿಗಳನ್ನೂ ಸಹ ಹೊಗಳಿದ್ದು ಸಹ ಇದೆ. ಯಾವ ನಾಟಕೀಯತೆಯೂ ಇಲ್ಲದೆ ಎಲ್ಲರೊಂದಿಗೆ ಬೆರೆತರು ಅವರ ಪ್ರಯಾಣ ನಿಜಕ್ಕೂ ಅಸಾಮಾನ್ಯಾಗಿತ್ತು. ಅವರು ರನ್ನರ್ ಅಪ್ ಆಗಿದ್ದರೂ ಸಹ ಅವರೇ ವಿನ್ನರ್, ‘ಗೊತ್ತಾಯ್ತಲ್ಲ’

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸಾಯೋವರೆಗೆ ನಿಮ್ಮ ಮರೆಯಲ್ಲ’; ಸುದೀಪ್​​ಗೆ ತಲೆಬಾಗಿ ನಮಸ್ಕರಿಸಿ ಧನ್ಯವಾದ ಹೇಳಿದ ಗಿಲ್ಲಿ – Kannada News | Gilli Nata Special Thanks To Kichcha Sudeep Ahead of Winning Announcment

‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಂತಿಮ ಹಂತಕ್ಕೆ ಬಂದಿದೆ. ಗಿಲ್ಲಿ ಕಪ್ ಎತ್ತಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಹೀಗಿರುವಾಗಲೇ ಗಿಲ್ಲಿ ಅವರು ಸುದೀಪ್​​ಗೆ ಧನ್ಯವಾದ ಹೇಳಿದ್ದಾರೆ. ತಲೆಬಾಗಿ ಅವರು ನಮಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ.

ಗಿಲ್ಲಿ ನಟ ಅವರ ವಿಟಿಯನ್ನು ಹಾಕಿದರು. ಇದು ತುಂಬಾನೇ ಅದ್ಭುತವಾಗಿತ್ತು. ಈ ವಿಡಿಯೋ ಗಮನ ಸೆಳೆಯಿತು. ಗಿಲ್ಲಿ ಅವರಿಗೆ ಇದನ್ನು ನೋಡಿ ಒಂದು ಸಿನಿಮಾ ನೋಡಿದಂತೆ ಆಯಿತು. ಆ ಬಳಿಕ ಮಾತನಾಡಿದ ಗಿಲ್ಲಿ, ‘ಇದು ಶೋ ಅಲ್ಲ, ಜೀವನ ಅಂತ ಗೊತ್ತಾಯ್ತು. ತಪ್ಪನ್ನು ತಿದ್ದಿ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದೀರಿ. ಸಾಯೋವರೆಗೆ ನಿಮ್ಮ ಮರೆಯಲ್ಲ’ ಎಂದರು ಗಿಲ್ಲಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಭಾಗಿ – Kannada News | Union Minister Pralhad Joshi to attend World Economic Forum meeting Davos 2026

ದಾವೋಸ್, ಜನವರಿ 18: ಹೊಸ ವರ್ಷದ ಹೊಸತರಲ್ಲಿ ಸ್ವಿಜ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ (WEF) ಸಭೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಭಾಗಿಯಾಗಿದ್ದಾರೆ.

ವಿಶ್ವ ಆರ್ಥಿಕ ವೇದಿಕೆ 2026ರ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿರುವ ಕೇಂದ್ರ ಸಚಿವ ಜೋಶಿ ಅವರಿಗೆ ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ರಾಯಭಾರಿ ಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು.

ಸಚಿವ ಪ್ರಲ್ಹಾದ್​ ಜೋಶಿ ಟ್ವೀಟ್​

ಇನ್ನು ಈ ವೇಳೆ ಪ್ರತಿಕ್ರಿಯಿಸಿರುವ ಸಚಿವ ಪ್ರಲ್ಹಾದ ಜೋಶಿ, ಭಾರತದಲ್ಲಿನ ಆಹಾರ ವ್ಯವಸ್ಥೆ, ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಮ್ಮ ಕ್ರಾಂತಿ, ಆಡಳಿತ ಸುಧಾರಣೆ ಹಾಗೂ ಕಾರ್ಯವೈಖರಿಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂಬುದರ ಸಂಕೇತ ಇದಾಗಿದೆ. ಅಲ್ಲದೇ, ಹೆಚ್ಚಿನ ಹೂಡಿಕೆಯನ್ನು ಸೆಳೆಯಲು ಅವಕಾಶವಾಗಿದೆ ಎಂದು ಹೇಳಿದ್ದಾರೆ.

ಸಚಿವ ಎಂಬಿ ಪಾಟೀಲ್​​​ ನೇತೃತ್ವದ ನಿಯೋಗ ಕೂಡ ದಾವೋಸ್​ಗೆ

ಇನ್ನು ಇದೇ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಲು ಬೃಹತ್​​​ ಕೈಗಾರಿಕಾ ಸಚಿವ
ಎಂ.ಬಿ ಪಾಟೀಲ್​​​ ನೇತೃತ್ವದ ರಾಜ್ಯ ಉನ್ನತ ಮಟ್ಟದ ನಿಯೋಗವು ಭಾನುವಾರದಂದು ಪ್ರಯಾಣ ಬೆಳೆಸಿದ್ದಾರೆ.

ಸಚಿವ ಎಂ.ಬಿ ಪಾಟೀಲ್ ಟ್ವೀಟ್​ 

ಅಮೆಜಾನ್​ ವೆಬ್​​ ಸರ್ವೀಸಸ್​, ಲೆನೊವೊ, ವಾಸ್ಟ್​​ ಸ್ಪೇಸ್​​, ಕೋಕಾ-ಕೋಲಾ, ಫಿಲಿಪ್​​ ಮಾರಿಸ್​​​, ಇಂಪೀರಿಯಲ್​​ ಕಾಲೇಜ್​​ ಲಂಡನ್​​​, ಸಿಂಗಪುರ ಆರ್ಥಿಕ ಅಭಿವೃದ್ಧಿ ಮಂಡಳಿ ಜೊತೆಗೆ ರಾಜ್ಯದ ನಿಯೋಗ ಮಾತುಕತೆ ನಡೆಸಲಿದೆ ಎಂದು ಟ್ವೀಟ್ ಮೂಲಕ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ​​​

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

35 ಹಾಡುಗಳ ಚಿತ್ರದೊಂದಿಗೆ ಬಂದ ರವಿಚಂದ್ರನ್; ಬಿಗ್ ಬಾಸ್ ವೇದಿಕೆ ಮೇಲೆ ಘೋಷಣೆ – Kannada News | Ravichandran’s ‘I Am God’: AI Powered Film with 35 Songs Set to Amaze Kannada Audience

ರವಿಚಂದ್ರನ್ ಸಿನಿಮಾಗಳಲ್ಲಿ ಹಾಡುಗಳೇ ಹೈಲೈಟ್ ಆಗಿರುತ್ತವೆ. ಅವರು ನೀಡಿದ ಹಲವು ಸಿನಿಮಾಗಳಲ್ಲಿ ಇದು ಕಾಣಿಸಿದೆ. ಈಗ ಅವರು 35 ಹಾಡುಗಳು ಇರು ಸಿನಿಮಾ ಮೂಲಕ ಬರಲು ರೆಡಿ ಆಗಿದ್ದಾರೆ. ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

‘ಐ ಆ್ಯಮ್ ಗಾಡ್’ ಎಂಬುದು ಚಿತ್ರದ ಟೈಟಲ್. ಇದು ಸಂಪೂರ್ಣವಾಗಿ ಎಐ ತಂತ್ರಜ್ಞಾನದಿಂದ ಮಾಡಲ್ಪಟ್ಟ ಸಿನಿಮಾ ಅನ್ನೋದು ವಿಶೇಷ. ಈ ಬಗ್ಗೆ ರವಿಚಂದ್ರನ್ ಅವರು ಮಾಹಿತಿ ನೀಡಿದ್ದಾರೆ. ಒಬ್ಬರನ್ನು ಎಲಿಮಿನೇಟ್ ಮಾಡಲು ರವಿಚಂದ್ರನ್ ಅವರು ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಈ ವೇಳೆ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

‘ಎರಡೂವರೆ ವರ್ಷದಿಂದ ಒಂದು ಸಿನಿಮಾ ಮಾಡ್ತಾ ಇದೀನಿ.400 ದಿನ ಶೂಟ್ ಮಾಡಿದ್ದೇನೆ. ಈ ಸಿನಿಮಾನ ಒಬ್ಬನೇ ಮಾಡಿದ್ದೇನೆ. ಎಐ ಇದೆ. ಕ್ಯಾಮೆರಾಮೆನ್ ಬಿಟ್ರೆ ಉಳಿದೆಲ್ಲವನ್ನೂ ನಾನೋಬ್ನೇ ಮಾಡಿದ್ದು. ಐ ಆ್ಯಮ್ ಗಾಡ್ ಚಿತ್ರದ ಹೆಸರು. ಇದಕ್ಕೆ ಮ್ಯೂಸಿಕ್ ಡೈರೆಕ್ಟರ್ ಕೂಡ ಇಲ್ಲ’ ಎಂದರು ರವಿಚಂದ್ರನ್.

ಇದನ್ನೂ ಓದಿ: ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್

‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 30-35 ಹಾಡು ಬರುತ್ತೆ. ನನ್ನ ಬರ್ತ್​​​ಡೇಗೆ (ಮೇ 30) ಸಿನಿಮಾ ತರಬೇಕು ಎಂಬ ಉದ್ದೇಶ ಇದೆ. ನಾನೇ ಎಲ್ಲವನ್ನೂ ಮಾಡಬೇಕು. ಹೀಗಾಗಿ ಟೈಮ್ ಆಗ್ತಾ ಇದೆ’ ಎಂದು ರವಿಚಂದ್ರನ್ ಮಾಹಿತಿ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಿಲ್ಲಿಯ ನೆರಳಿನಲ್ಲಿ ಅಲ್ಲ ಸ್ವಂತ ಬಲದಲ್ಲಿ ಫಿನಾಲೆಗೆ ಬಂದಿದ್ದ ಕಾವ್ಯಾ ಈಗ ಹೊರಗೆ – Kannada News | Bigg Boss Kannada 12: Kavya evicted as 3rd runner up

ಬಿಗ್​​ಬಾಸ್ (Bigg Boss) ಕನ್ನಡ ಫಿನಾಲೆ ಚಾಲ್ತಿಯಲ್ಲಿದೆ. ಸಮಯ ಕಳೆದಂತೆ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಹೆಚ್ಚಾಗುತ್ತಿದೆ. ಗಿಲ್ಲಿ, ಅಶ್ವಿನಿ, ಧನುಶ್, ರಘು, ರಕ್ಷಿತಾ, ಕಾವ್ಯಾ ಆರು ಮಂದಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈಗಾಗಲೇ ಧನುಶ್ ಮತ್ತು ರಘು ಅವರು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ಕಾವ್ಯಾ ಅವರು ಸಹ ಬಿಗ್​​ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕಾವ್ಯಾ ಅವರು ಮೂರನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದಾರೆ.

ಗಿಲ್ಲಿ ಜೊತೆಗೆ ಜೋಡಿಯಾಗಿ ಬಿಗ್​​ಬಾಸ್ ಮನೆ ಒಳಗೆ ಹೋದ ಕಾವ್ಯಾ ಮೊದಲ ದಿನದಂದ ಕೊನೆಯ ವಾರದ ವರೆಗೆ ಗಿಲ್ಲಿ ಜೊತೆ ಒಳ್ಳೆಯ ಗೆಳೆತನ ಕಾಯ್ದುಕೊಂಡಿದ್ದರು. ಗಿಲ್ಲಿ ಮತ್ತು ಕಾವ್ಯಾ ಅವರ ಗೆಳೆತನ ರಾಜ್ಯದಾದ್ಯಂತ ಜನಪ್ರಿಯ ಆಗಿಬಿಟ್ಟಿದೆ. ಅವರಿಬ್ಬರ ತಮಾಷೆ, ಪರಸ್ಪರ ಕಾಲೆಳೆಯುವ ರೀತಿ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಇದೇ ಕೆಲವೊಮ್ಮೆ ಕಾವ್ಯಾಗೆ ನೆಗೆಟಿವ್ ಆಗಿದ್ದೂ ಉಂಟು. ಗಿಲ್ಲಿ ಇಂದ ಮಾತ್ರವೇ ಕಾವ್ಯಾಗೆ ಹೆಸರು, ಗಿಲ್ಲಿ ಇಲ್ಲದ ಹೊರತು ಕಾವ್ಯಾ ಏನೂ ಅಲ್ಲ ಎಂಬ ಅಭಿಪ್ರಾಯ ಮನೆಯಲ್ಲಿ ಉಂಟಾಗಿತ್ತು.

ಇದನ್ನೂ ಓದಿ:ಬಲಿಷ್ಠ ದೇಹ, ಮಗುವಿನ ಮನಸ್ಸು, ಶಿಸ್ತಿನ ಆಟ: ಆದರೆ ಅಷ್ಟೇ ಸಾಕಾಗಲಿಲ್ಲ ಗೆಲ್ಲಲು

ಆದರೆ ಕಾವ್ಯಾ ತಮ್ಮ ಸ್ವಂತ ಶಕ್ತಿಯ ಪ್ರದರ್ಶಿಸುತ್ತಲೇ ಬಂದರು. ಅವಕಾಶ ಸಿಕ್ಕಾಗೆಲ್ಲ ಟಾಸ್ಕ್​​ಗಳಲ್ಲಿ ಒಳ್ಳೆಯ ಪ್ರದರ್ಶನವನ್ನು ಸಹ ನೀಡಿದರು. ಜೊತೆಗೆ ಗಿಲ್ಲಿಯ ಜೊತೆಗೆ ಸ್ನೇಹ ಕಾಯ್ದುಕೊಳ್ಳುವ ಜೊತೆಗೆ ಗಿಲ್ಲಿಯ ಆಟವನ್ನು, ವ್ಯಕ್ತಿತ್ವವನ್ನೂ ಸಹ ತಿದ್ದುವ ಕಾರ್ಯ ಮಾಡಿದರು. ಕಾವ್ಯಾ ಮನೆಗೆ ಹೋಗುತ್ತಾರೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿ ಎಷ್ಟೋ ವಾರಗಳ ಬಳಿಕ ಇದೀಗ ಕಾವ್ಯಾ ಫಿನಾಲೆ ವರೆಗೆ ಬಂದಿದ್ದು ಮಾತ್ರವೇ ಅಲ್ಲದೆ, ಮೂರನೇ ರನ್ನರ್ ಅಪ್ ಸಹ ಆಗಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಬಿಗ್​​ಬಾಸ್ ಮನೆಗೆ ಹೋಗಿ ನಾಲ್ಕನೇ ಸ್ಪರ್ಧಿಯನ್ನು ಕರೆದುಕೊಂಡು ಬರಲು ಬಂದಿದ್ದರು. ಸೂಟ್​ಕೇಸ್ ಜೊತೆಗೆ ಬಂದಿದ್ದ ಅವರು ಐದು ಲಕ್ಷ ರೂಪಾಯಿ ಹಣದ ಆಸೆಯನ್ನು ಸಹ ತೋರಿಸಿದರು. ಆದರೆ ರಕ್ಷಿತಾ ಆಗಲಿ, ಕಾವ್ಯಾ ಆಗಲಿ ಯಾರೂ ಸಹ ಹಣ ಪಡೆದುಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಆಕ್ಟಿವಿಟಿ ರೂಂನಲ್ಲಿ ನಡೆದ ಆಕ್ಟಿವಿಟಿಯಲ್ಲಿ ಕಾವ್ಯಾ ಅವರು ಎವಿಕ್ಷನ್ ಆದರು. ಕಾವ್ಯಾ ಅವರಿಗೆ ಇಂಡಸ್ 555 ಸಂಸ್ಥೆಯಿಂದ ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಸಹ ನೀಡಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಕೊಹ್ಲಿ ಹೋರಾಟ ವ್ಯರ್ಥ; ಏಕದಿನ ಸರಣಿ ಸೋತ ಟೀಂ ಇಂಡಿಯಾ – Kannada News | NZ Makes History: Beats India 2 1 in ODI Series at Indore! First Win in India

ಇಂದೋರ್‌ನ ಹೊಳ್ಕರ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 41 ರನ್​ಗಳಿಂದ ಸೋಲಿಸಿದ ನ್ಯೂಜಿಲೆಂಡ್ ತಂಡ 2-1 ಅಂತರದಿಂದ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಭಾರತದ ನೆಲದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿರುವ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಇದೀಗ ಮೊದಲ ಬಾರಿಗೆ ಭಾರತೀಯ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದಿದೆ. ಡ್ಯಾರಿಲ್ ಮಿಚೆಲ್ ಅವರ ಸತತ ಎರಡನೇ ಶತಕ ಮತ್ತು ಗ್ಲೆನ್ ಫಿಲಿಪ್ಸ್ ಅವರ ಮೊದಲ ಶತಕದ ಸಹಾಯದಿಂದ ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್ 337 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪ್ರಮುಖ ಬ್ಯಾಟ್ಸ್‌ಮನ್​ಗಳ ವೈಫಲ್ಯದಿಂದಾಗಿ ಸೋಲಿಗೆ ಕೊರಳೊಡ್ಡಿತು. ತಂಡದ ಪರ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನೀಡಿದರಾದರೂ, ಅವರಿಗೆ ಪ್ರಮುಖ ಬ್ಯಾಟ್ಸ್‌ಮನ್​ಗಳು ಸಾಥ್ ನೀಡಲಿಲ್ಲ. ಹೀಗಾಗಿ ತಂಡಕ್ಕೆ ಸರಣಿ ಸೋಲಿನ ಆಘಾತ ಎದುರಾಯಿತು.

Published On – 9:42 pm, Sun, 18 January 26

Source link

ದಾವಣಗೆರೆ ಕಿರು ಮೃಗಾಲಯದಲ್ಲಿ 4 ಚುಕ್ಕೆ ಜಿಂಕೆಗಳು ಸಾವು: ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ – Kannada News | Davangere Mini Zoo: Four Spotted Deer Die; Public Entry Restricted

ದಾವಣಗೆರೆ, ಜನವರಿ 18: ದಾವಣಗೆರೆಯ ಆನಗೋಡ ಬಳಿ ಇರುವ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ. ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಜಿಂಕೆಗಳು ಸಾವನ್ನಪ್ಪಿರುವಂತಹ ಶಂಕೆ ವ್ಯಕ್ತವಾಗಿದೆ. ಸದ್ಯ ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ‌ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link

IND vs NZ: ವಾರಿಯರ್ ವಿರಾಟ್; ವಿಶ್ವ ದಾಖಲೆಯ ಶತಕ ಸಿಡಿಸಿದ ಕೊಹ್ಲಿ – Kannada News | Virat Kohli’s Historic Century: Record Breaking 54th ODI Ton Steers India vs NZ

ಇಂದೋರ್‌ನ ಹೊಳ್ಕರ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಮತ್ತೆ ಆಪತ್ಭಾಂದವನಾದ ವಿರಾಟ್ ಕೊಹ್ಲಿ (Virat Kohli) ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ. ನ್ಯೂಜಿಲೆಂಡ್ ನೀಡಿದ 338 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪ್ರಮುಖ ವಿಕೆಟ್ ಕಳೆದುಕೊಂಡರೂ, ಇನ್ನೊಂದು ತುದಿಯಲ್ಲಿ ಸಂಯಮದಿಂದ ಬ್ಯಾಟ್ ಬೀಸಿದ ಕೊಹ್ಲಿ 93 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಆರಂಭಿಕ ಆಘಾತಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸುವುದರೊಂದಿಗೆ ಶತಕದ ಗಡಿ ದಾಟಿದ ಕೊಹ್ಲಿ, ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.

54 ನೇ ಏಕದಿನ ಶತಕ

ಇದು ಮಾತ್ರವಲ್ಲದೆ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಕೊಹ್ಲಿಗೆ ಇದು ಚೊಚ್ಚಲ ಶತಕವೂ ಆಗಿದೆ. ಈ ಮೈದಾನದಲ್ಲಿ ಈ ಹಿಂದೆ ಆಡಿದ್ದ ಪ್ರತಿಯೊಂದು ಪಂದ್ಯದಲ್ಲೂ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಈ ಮೈದಾನದಲ್ಲಿ ಈ ಹಿಂದಿನ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಗೆ ಅರ್ಧಶತಕವನ್ನು ಬಾರಿಸಲು ಸಾಧ್ಯವಾಗಿರಲಿಲ್ಲ. 4 ಇನ್ನಿಂಗ್ಸ್​ಗಳಲ್ಲಿ ಒಟ್ಟು 99 ರನ್ ಬಾರಿಸಿದ್ದ ಕೊಹ್ಲಿ, ಈ ಬಾರಿ ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದಲ್ಲದೆ, ಶತಕದ ಬರವನ್ನು ನೀಗಿಸಿಕೊಂಡರು. ಇದು ಕೊಹ್ಲಿ ಅವರ 54 ನೇ ಏಕದಿನ ಶತಕ ಮತ್ತು ಅವರ 85 ನೇ ಅಂತರರಾಷ್ಟ್ರೀಯ ಶತಕವಾಗಿದೆ.

88 ರನ್‌ಗಳ ಪಾಲುದಾರಿಕೆ

ಆದಾಗ್ಯೂ, ಈ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಿದ್ದರಿಂದ ಕೊಹ್ಲಿಯ ಶತಕ ಅಸಂಭವವೆಂದು ತೋರುತ್ತಿತ್ತು. ತಂಡದ ಸ್ಕೋರ್ ಕೇವಲ 28 ರನ್​ಗಳಿದ್ದಾಗ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಆ ಬಳಿಕ ಕ್ರೀಸ್‌ಗೆ ಬಂದ ಕೊಹ್ಲಿ ತಮ್ಮ ಎಂದಿನ ಆಟವನ್ನು ಮುಂದುರೆಸಿದರು. ಆದಾಗ್ಯೂ ತಂಡವು ಕೇವಲ 71 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಸೋಲು ಸನ್ನಿಹಿತವೆಂದು ತೋರುತ್ತಿತ್ತು, ಆದರೆ ಕೊಹ್ಲಿಗೆ ಜೊತೆಯಾದ ನಿತೀಶ್ ಕುಮಾರ್ ರೆಡ್ಡಿ 88 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ನಂತರ ಕೊಹ್ಲಿ ಮತ್ತು ನಿತೀಶ್ ತಮ್ಮ ತಮ್ಮ ಅರ್ಧಶತಕಗಳನ್ನು ಪೂರೈಸಿದರು.

91 ಎಸೆತಗಳಲ್ಲಿ ಶತಕ ಪೂರ್ಣ

ಈ ವೇಳೆ ಅರ್ಧಶತಕ ಬಾರಿಸಿದ್ದ ನಿತೀಶ್ ಔಟಾದ ಬಳಿಕ ಬಂದ ರವೀಂದ್ರ ಜಡೇಜಾ ಕೂಡ ಬೇಗನೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಟೀಂ ಇಂಡಿಯಾ 178 ರನ್‌ಗಳಿಗೆ 6 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಕೊಹ್ಲಿಗೆ, ಹರ್ಷಿತ್ ರಾಣಾ ಅತ್ಯುತ್ತಮ ಬೆಂಬಲ ನೀಡಿದರು. ಇದರ ಲಾಭವನ್ನು ಪಡೆದುಕೊಂಡ ಕೊಹ್ಲಿ, ಅಂತಿಮವಾಗಿ 91 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಸರಣಿಯ ಮೊದಲ ಪಂದ್ಯದಲ್ಲಿ 93 ರನ್‌ಗಳಿಗೆ ಔಟಾಗಿದ್ದ ಕೊಹ್ಲಿ, ಇಂದಿನ ಪಂದ್ಯದಲ್ಲಿ ತಮ್ಮ 54 ನೇ ಏಕದಿನ ಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು.

ಪತ್ನಿ ಜೊತೆ ಸೇರಿ 5 ಎಕರೆ ಭೂಮಿ ಖರೀದಿಸಿದ ವಿರಾಟ್ ಕೊಹ್ಲಿ; ಬೆಲೆ ಎಷ್ಟು ಗೊತ್ತಾ?

ಸಚಿನ್-ಸೆಹ್ವಾಗ್ ದಾಖಲೆ ಧ್ವಂಸ

ಈ ಶತಕದ ಮೂಲಕ ಕೊಹ್ಲಿ ಈಗ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದು ಕಿವೀಸ್ ವಿರುದ್ಧ ಅವರ ಏಳನೇ ಏಕದಿನ ಶತಕವಾಗಿದ್ದು, ಈ ಮೂಲಕ ವೀರೇಂದ್ರ ಸೆಹ್ವಾಗ್ ಮತ್ತು ರಿಕಿ ಪಾಂಟಿಂಗ್ (ಇಬ್ಬರೂ ತಲಾ ಆರು ಶತಕಗಳು) ಅವರನ್ನು ಹಿಂದಿಕ್ಕಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ಪ್ರಸ್ತುತ ಎಲ್ಲಾ ಸ್ವರೂಪಗಳಲ್ಲಿ ನ್ಯೂಜಿಲೆಂಡ್ ವಿರುದ್ಧ 10 ಶತಕಗಳನ್ನು ಬಾರಿಸಿದ್ದು, ಈ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್, ಜೋ ರೂಟ್ ಮತ್ತು ಜಾಕ್ವೆಸ್ ಕಾಲಿಸ್ (ಮೂವರೂ ಒಂಬತ್ತು ಶತಕಗಳು) ಅವರನ್ನು ಹಿಂದಿಕ್ಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:17 pm, Sun, 18 January 26

Source link

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್ – Kannada News | Central govt employees get new salary account package, that includes big insurance coverage and other benefits

ನವದೆಹಲಿ, ಜನವರಿ 18: ಕೇಂದ್ರ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ ಇದು. ಒಂದೇ ಅಕೌಂಟ್​ನಲ್ಲಿ ಬ್ಯಾಂಕಿಂಗ್, ಇನ್ಷೂರೆನ್ಸ್ ಮತ್ತು ಕಾರ್ಡ್ ಸಂಬಂಧಿತ ಅನುಕೂಲಗಳು ಒಟ್ಟಿಗೆ ಲಭ್ಯ ಇರುವ ಸಮಗ್ರ ಸ್ಯಾಲರ್ ಅಕೌಂಟ್ ಪ್ಯಾಕೇಜ್ ಅನ್ನು ಸರಕಾರ ಬಿಡುಗಡೆ ಮಾಡಿದೆ. ನೌಕರರ ಹಣಕಾಸು ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸಲು ಸ್ಯಾಲರಿ ಅಕೌಂಟ್ ಪ್ಯಾಕೇಜ್ ಅನ್ನು ಜಾರಿಗೆ ತರುವಂತೆ ಸರ್ಕಾರ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ತಿಳಿಸಿದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳ ಸ್ಯಾಲರಿ ಅಕೌಂಟ್​ಗಳು ಎಸ್​ಬಿಐ, ಯುಬಿಐ, ಪಿಎನ್​ಬಿ ಇತ್ಯಾದಿ ಸರ್ಕಾರಿ ಬ್ಯಾಂಕುಗಳಲ್ಲೇ ಇರುತ್ತವೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಹಣಕಾಸು ಸೇವೆಗಳ ಇಲಾಖೆ (ಡಿಎಫ್​ಎಸ್) ಈ ಸರ್ಕಾರಿ ಬ್ಯಾಂಕುಗಳಿಗೆ ಸ್ಯಾಲರಿ ಅಕೌಂಟ್ ಪ್ಯಾಕೇಜ್ ಸೌಲಭ್ಯ ಒದಗಿಸುವಂತೆ ತಿಳಿಸಿದೆ. ಕೇಂದ್ರ ಸರ್ಕಾರಿ ಸಂಸ್ಥೆಗಳ ಎ, ಬಿ ಮತ್ತು ಸಿ ಕೇಡರ್​ಗಳ ಎಲ್ಲಾ ಉದ್ಯೋಗಿಗಳಿಗೂ ಈ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್​ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?

ಝೀರೋ ಬ್ಯಾಲನ್ಸ್ ಸ್ಯಾಲರಿ ಅಕೌಂಟ್

ಈ ಕಾಂಪೊಸಿಟ್ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ವಿವಿಧ ಸೌಲಭ್ಯಗಳು ಒಳಗೊಂಡಿವೆ. ಝೀರೋ ಬ್ಯಾಲನ್ಸ್ ಅಕೌಂಟ್, ಆರ್​ಟಿಜಿಎಸ್, ನೆಫ್ಟ್, ಯುಪಿಐ ಮೂಲಕ ಉಚಿತ ರೆಮಿಟೆನ್ಸ್ (ವಿದೇಶದಿಂದ ಭಾರತಕ್ಕೆ ಹಣ ರವಾನೆ) ಇತ್ಯಾದಿ ಇದರಲ್ಲಿ ಸೇರಿರುತ್ತವೆ. ಹೌಸಿಂಗ್ ಲೋನ್, ಎಜುಕೇಶನ್ ಲೋನ್, ವೆಹಿಕಲ್ ಲೋನ್ ಮತ್ತು ಪರ್ಸನಲ್ ಲೋನ್​ಗಳಲ್ಲಿ ರಿಯಾಯಿತಿ ದರದ ಬಡ್ಡಿ, ಹಾಗು, ಲೋನ್ ಪ್ರೋಸಸಿಂಗ್ ಶುಲ್ಕದಲ್ಲಿ ಇಳಿಕೆ, ಲಾಕರ್ ಬಾಡಿಗೆಯಲ್ಲಿ ವಿನಾಯಿತಿ, ಫ್ಯಾಮಿಲಿ ಬ್ಯಾಂಕಿಂಗ್ ಸೌಲಭ್ಯ ಇತ್ಯಾದಿಯು ಸರ್ಕಾರಿ ನೌಕರರಿಗೆ ಸಿಗುತ್ತದೆ.

ಎರಡು ಕೋಟಿ ರೂವರೆಗೆ ಉಚಿತ ಇನ್ಷೂರೆನ್ಸ್

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುವ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ 1.5 ಕೋಟಿ ರೂವರೆಗೆ ಇರುತ್ತದೆ. ಏರ್ ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ 2 ಕೋಟಿ ರೂವರೆಗೂ ಇರುತ್ತದೆ. ಅಷ್ಟೇ ಅಲ್ಲ, 20 ಲಕ್ಷ ರೂವರೆಗೆ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೊಟೆಕ್ಷನ್ ಕೂಡ ಇರುತ್ತದೆ. ಇದಕ್ಕಿಂತ ಹೆಚ್ಚಿನ ಕವರೇಜ್ ಬೇಕೆಂದರೆ ಕಡಿಮೆ ಪ್ರೀಮಿಯಮ್​ಗಳ ಅವಕಾಶವೂ ಇರುತ್ತದೆ. ಹೆಲ್ತ್ ಇನ್ಷೂರೆನ್ಸ್ ಕವರೇಜ್ ಕೂಡ ಇರುತ್ತದೆ.

ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ

ಕಾರ್ಡ್ ಬೆನಿಫಿಟ್ಸ್

ಡಿಜಿಟಲ್ ಹಾಗೂ ಕಾರ್ಡ್ ಸಂಬಂಧಿತ ಫೀಚರ್​ಗಳೂ ಈ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ಒಳಗೊಂಡಿವೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬೆನಿಫಿಟ್, ಏರ್​ಪೋರ್ಟ್ ಲಾಂಜ್, ರಿವಾರ್ಡ್, ಕ್ಯಾಷ್​ಬ್ಯಾಕ್, ಝೀರೋ ಮೈಂಟೆನೆನ್ಸ್ ಫೀ ಇತ್ಯಾದಿ ನಾನಾ ರಿಯಾಯಿತಿ, ಸೌಲಭ್ಯಗಳು ಸಿಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version