‘ಅವರ ಬಗೆಗಿನ ಸತ್ಯ ಬಿಚ್ಚೋಕೆ ಆಗ್ತಿಲ್ಲ’; ಸತೀಶ್​​ಗೆ ಶೇಪ್​​ಔಟ್ ಮಾಡಿದ ಸುದೀಪ್ – Kannada News | Dog Satish Trolled by Sudeep at Bigg Boss Kannada 12 Finale: Viral Video Sparks Laughter

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಅವರು ಕೆಲವೇ ವಾರ ಇದ್ದರು. ದೊಡ್ಮನೆಯಲ್ಲಿ ಸುದ್ದಿ ಆಗಿಲ್ಲ. ಅವರು ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಅವರು ಸಂದರ್ಶನ ನೀಡಿ ಟ್ರೋಲ್ ಆಗುತ್ತಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ಸುದೀಪ್ ಅವರು ಸತೀಶ್ ಅವರ ಕಾಲೆಳೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ಇದಕ್ಕೆ ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಡಾಗ್ ಸತೀಶ್ ಕೂಡ ಬಂದಿದ್ದರು. ಸತೀಶ್ ಅವರು ಕರಿ ಬಣ್ಣದ ಗ್ಲಾಸ್ ಹಾಕಿದ್ದರು. ‘ಇದನ್ನು ಅವರು ಯಾವುದೇ ಕಾರಣಕ್ಕೂ ತೆಗೆಯಲ್ಲ. ಅವರ ಬಗೆಗಿನ ಸತ್ಯ ಬಿಚ್ಚೋಕೆ ಆಗ್ತಿಲ್ಲ ಎಂಬುದು ಬೇಸರ’ ಎಂದು ಸುದೀಪ್ ಹೇಳಿದರು.

ಬಿಗ್ ಬಾಸ್ ಬಳಿಕ ಹೇಗಿದೆ ಜೀವನ ಎಂದು ಎಲ್ಲಾ ಸ್ಪರ್ಧಿಗಳಿಗೆ ಕೇಳಲಾಯಿತು. ‘ಬಿಗ್ ಬಾಸ್ ಮುಗಿದ ಬಳಿಕ ಜೀವನ ಸ್ವಲ್ಪವಾದರೂ ಬದಲಾಗಿರಬೇಕಲ್ಲ’ ಎಂದು ಕಿಚ್ಚ ಕೇಳಿದರು. ಇದಕ್ಕೆ ಉತ್ತರಿಸಿದ ಸತೀಶ್, ‘ನಾನು ಮೊದಲು ಇಂಟರ್​ನ್ಯಾಷನಲ್​ ಮಟ್ಟದಲ್ಲಿ ಗುರುತಿಸಿಕೊಂಡಿದ್ದೆ. ಆದರೆ, ರೆಕೋಗ್ನೈಸೇಷನ್ ಇರಲಿಲ್ಲ. ಬಿಗ್ ಬಾಸ್​​ನಿಂದ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ’ ಎಂದರು.

ಇದನ್ನೂ ಓದಿ: ‘ರಕ್ಷಿತಾ ಶೆಟ್ಟಿ ವಿನ್ನರ್’; ವೀಕ್ಷಕರಿಗೆ ಶಾಕ್ ಕೊಟ್ಟ ವಿಕಿಪೀಡಿಯಾ

ಸತೀಶ್ ಹೇಳಿದ್ದು ಅರ್ಥ ಆಗಿಲ್ಲ ಎಂದರು ಸುದೀಪ್. ಆಗ, ‘ಅಷ್ಟೊಂದು ರೆಕಗ್ನೈಸ್ ಇರಲಿಲ್ಲ. ಈಗ ಬೀದಿ ಬೀದಿಯಲ್ಲೂ ನನ್ನ ಗುರುತು ಹಿಡಿಯುತ್ತಿದ್ದಾರೆ’ ಎಂದರು ಸತೀಶ್. ಆಗ ಸುದೀಪ್, ‘ನಾನು ಕುಡ್ಕೋ ಬಂದಿದೀನೋ, ಅವರು ಕುಡ್ಕ ಬಂದಿದಾರೋ’ಎಂದು ಸತೀಶ್​​ಗೆ ಶೇಪ್​​ಔಟ್ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸುತ್ತೂರು ಜಾತ್ರೆ ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಸಿಎಂ ಕಾರು: ಅಧಿಕಾರಿಗಳು ಹರಸಾಹಸ – Kannada News | Mysuru: CM Siddaramaiah Car Stuck in Suttur Jatra Traffic; watch video

ಮೈಸೂರು, ಜನವರಿ 18: ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಕಾರು ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಘಟನೆ ನಡೆದಿದೆ. ಸುಮಾರು 3 ಕಿ.ಮೀ ಜಾಮ್​​ ಉಂಟಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ವಾಹನಕ್ಕೆ ದಾರಿ ಮಾಡಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಟ್ಟರು. ಖುದ್ದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ರಸ್ತೆಗಿಳಿದರು. ಈ ವೇಳೆ ಸವಾರನಿಗೆ ಕಾಲಿನಲ್ಲಿ ಒದೆಯಲು ಎಸ್​ಪಿ ಮುಂದ್ದಾಗಿದ್ದು, ದೃಶ್ಯ ಮೊಬೈಲ್‌ನಲ್ಲಿ ಸೆರೆ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Source link

ಶಿವಮೊಗ್ಗ: ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು – Kannada News | Shivamogga Bhadra Canal Tragedy: 4 Family Members Drown

ಶಿವಮೊಗ್ಗ, ಜನವರಿ 18: ಕಾಲುಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲಾದ (death) ಘಟನೆ ಜಿಲ್ಲೆಯ ಭದ್ರಾವತಿ (Bhadravati) ತಾಲೂಕಿನ ಅರಬಿಳಚಿ ಕ್ಯಾಂಪ್​ನ ಭದ್ರಾ ನಾಲೆಯಲ್ಲಿ ನಡೆದಿದೆ. ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದ ದುರಂತ ಸಂಭವಿಸಿದೆ. ನೀಲಾ ಬಾಯಿ(50), ಮಗ ರವಿ(23), ಮಗಳು ಶ್ವೇತಾ(24) ಮತ್ತು ಅಳಿಯ ಪರಶುರಾಮ(28) ಮೃತರು. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಡೆದದ್ದೇನು?

ಮಾರಿ ಹಬ್ಬಕ್ಕೆಂದು ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​​ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದಾರೆ. ಒಬ್ಬರು ಕಾಲು ಜಾರಿ ಭದ್ರಾ ನಾಲೆಗೆ ಬಿದ್ದಿದ್ದು, ಅವರನ್ನ ರಕ್ಷಿಸಲು ಹೋಗಿ ನಾಲ್ವರೂ ನೀರುಪಾಲಾಗಿದ್ದಾರೆ. ಮೃತರು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮಸ್ಥರು. ಸದ್ಯ ಶವಗಳಿಗಾಗಿ ಹೊಳೆಹೊನ್ನೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ನಡೆದಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Published On – 6:37 pm, Sun, 18 January 26

Source link

BBL: ಕೇವಲ 14.28 ರ ಸ್ಟ್ರೈಕ್ ರೇಟ್; ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ – Kannada News | Big Bash League 2026: Babar Azam’s Batting Woes Continue

ಬಿಗ್ ಬ್ಯಾಷ್ ಲೀಗ್ 2026 ರ 40 ನೇ ಪಂದ್ಯ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ನಡೆಯಿತು. ಈ ಪಂದ್ಯವು ಸಿಡ್ನಿ ಸಿಕ್ಸರ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲೂ ಪಾಕಿಸ್ತಾನಿ ಸೂಪರ್‌ಸ್ಟಾರ್ ಬಾಬರ್ ಆಝಂ ಅವರ ಬ್ಯಾಟಿಂಗ್ ಮತ್ತೊಮ್ಮೆ ಎಲ್ಲರನ್ನೂ ನಿರಾಶೆಗೊಳಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಡ್ನಿ ಸಿಕ್ಸರ್ಸ್‌ ತಂಡಕ್ಕೆ ಸ್ಫೋಟಕ ಆರಂಭದ ಅಗತ್ಯವಿತ್ತು. ಆದಾಗ್ಯೂ, ಬಾಬರ್ ಅವರ ಇನ್ನಿಂಗ್ಸ್ ತನ್ನದೇ ತಂಡದ ಮೇಲೆ ಒತ್ತಡ ಹೇರಿತು.

172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಆರಂಭಿಕ ಆಟಗಾರ ಬಾಬರ್ ಆಝಂ 7 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು. 14.28 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಬಾಬರ್​ಗೆ ಬೌಂಡರಿ ಅಥವಾ ಸಿಕ್ಸರ್ ಬಾರಿಸಲು ಸಾಧ್ಯವಾಗಲಿಲ್ಲ. ಈ ನಿಧಾನಗತಿಯ ಆರಂಭದ ನಂತರ, ಅವರನ್ನು ಕ್ಸೇವಿಯರ್ ಬಾರ್ಟ್ಲೆಟ್ ಪೆವಿಲಿಯನ್​ಗಟ್ಟಿದರು.

ಬಾಬರ್ ಔಟಾದಾಗ ತಂಡದ ಸ್ಕೋರ್ 2 ಓವರ್‌ಗಳಲ್ಲಿ 21 ರನ್ ಆಗಿತ್ತು. ಬಾಬರ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ಸ್ಟೀವ್ ಸ್ಮಿತ್ ತ್ವರಿತ ಆರಂಭ ನೀಡುವಲ್ಲಿ ಯಶಸ್ವಿಯಾದರು, ಆದರೆ ಬಾಬರ್ ಪ್ರತಿ ರನ್ ಗಳಿಸಲು ಹೆಣಗಾಡಿದರು. ಬಾಬರ್ ಈ ರೀತಿಯ ಕಳಪೆ ಪ್ರದರ್ಶನ ನೀಡುತ್ತಿರುವುದು ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದು ಮೊದಲ ಬಾರಿಯಲ್ಲ. ಈ ಆವೃತ್ತಿಯ ಉದ್ದಕ್ಕೂ ಅವರ ಸ್ಟ್ರೈಕ್ ರೇಟ್ ಪ್ರಶ್ನಾರ್ಹವಾಗಿದೆ. ಆಡಿರುವ 11 ಪಂದ್ಯಗಳಲ್ಲಿ ಕೇವಲ 203 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ಸ್ಟ್ರೈಕ್ ರೇಟ್ 100 ರ ಆಸುಪಾಸಿನಲ್ಲಿದೆ.

Source link

30 ವರ್ಷದ ದಾಟಿದ ಬಳಿಕ ಮಹಿಳೆಯರು ಈ ಹಣ್ಣುಗಳನ್ನು ಸೇವನೆ ಮಾಡಲೇಬೇಕು – Kannada News | These are the fruits that women should eat

ಮಹಿಳೆಯರ ದೇಹವು ವಯಸ್ಸಾದಂತೆ ಜೀವನದ ಪ್ರತಿಯೊಂದು ಹಂತದಲ್ಲೂ ವಿವಿಧ ಬದಲಾವಣೆಗಳಿಗೆ ಒಳಗಾಗುತ್ತದೆ. ಆದ್ದರಿಂದ ರೋಗನಿರೋಧಕ ಶಕ್ತಿ, ಬಲವಾದ ಮೂಳೆಗಳು, ಆರೋಗ್ಯಕರ ಚರ್ಮ, ಕೂದಲು ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಆಹಾರವು ನಿರ್ಣಾಯಕವಾಗಿದೆ. ಹಾಗಾಗಿ ಮಹಿಳೆಯರು ಪ್ರತಿನಿತ್ಯ ಈ ಕೆಲವು ಹಣ್ಣುಗಳನ್ನು (fruits) ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಮಹಿಳೆಯರು ತಿನ್ನಬೇಕಾದ ಆ ಹಣ್ಣುಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರು ತಿನ್ನಲೇಬೇಕಾದ ಹಣ್ಣುಗಳಿವು:

ದಾಳಿಂಬೆ : ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ದಾಳಿಂಬೆ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆಯನ್ನು ಹೋಗಾಲಾಡಿಸಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಆಯಾಸ ಮತ್ತು ದೌರ್ಬಲ್ಯವನ್ನು ನಿವಾರಿಸಲು ಸಹ ದಾಳಿಂಬೆಯನ್ನು ಸೇವಿಸಬಹುದು.

ಬಾಳೆಹಣ್ಣು:  ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿರುವ ಬಾಳೆಹಣ್ಣು ಸ್ನಾಯು ನೋವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಪಪ್ಪಾಯಿ: ಪಪ್ಪಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ.

ಬೆರಿಹಣ್ಣುಗಳು: ಬೆರಿಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ವಯಸ್ಸಾಗುವಿಕೆಯ ಲಕ್ಷಣವನ್ನು ನಿಧಾನಗೊಳಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

ಪೇರಳೆ: ಪೇರಳೆ ಹಣ್ಣು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತದೆ ಮತ್ತು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ, ಅದರಲ್ಲೂ ಇವೆ ಲೆಕ್ಕವಿಲ್ಲದಷ್ಟು ಪ್ರಯೋಜನ

ಅವಕಾಡೊ: ಆವಕಾಡೊಗಳು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯುತ್ತಮವಾದ ಹಣ್ಣು. ಅವು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬು ಮತ್ತು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದ್ದು, ಇದು ಚರ್ಮವನ್ನು ಹೈಡ್ರೇಟೆಡ್‌ ಆಗಿರಲು ಮತ್ತು ಕಾಂತಿಯುತವಾಗಿರಕು ಸಹಾಯ ಮಾಡುತ್ತದೆ. ಅಲ್ಲದೆ ಆವಕಾಡೊಗಳು ಚರ್ಮದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಿವಿ: ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಕಿವಿ, ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಿವಿ ತಿನ್ನುವುದರಿಂದ ಕಾಲಜನ್ ಉತ್ಪಾದನೆ ಹೆಚ್ಚಾಗುತ್ತದೆ. ಕಿವಿ ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಹಣ್ಣು ತಿನ್ನುವುದರಿಂದ ಸುಕ್ಕುಗಳು ಕಡಿಮೆಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿ: ನಾಗರ ಹೆಡೆ ಕೆತ್ತನೆಯ ಮತ್ತೊಂದು ಕಲಾಕೃತಿ ಪತ್ತೆ; ಉತ್ಖನನ ಕಾರ್ಯ ಮೊದಲೇ ನಿಗದಿಯಾಗಿತ್ತಾ? – Kannada News | Historic Lakkundi Unveils Ancient Secrets as Another Carved Cobra Head Artwork Is Discovered

ಗದಗ, ಜನವರಿ 18: ಲಕ್ಕುಂಡಿ (Lakkundi) ಐತಿಹಾಸಿಕ ನಾಡು. 101 ದೇಗುಲಗಳು, ನೂರೊಂದು ಬಾವಿ ಇರುವ ಬೀಡು. ಚಾಲಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಆಳಿರುವ ರಾಜ ಗಾಂಭಿರ್ಯದ ನೆಲೆ ಲಕ್ಕುಂಡಿ. ಇದೇ ಐತಿಹಾಸಿಕ ನಾಡು ಲಕ್ಕುಂಡಿಯಲ್ಲಿ ಕಳೆದ ಮೂರು ದಿನಗಳಿಂದ ಉತ್ಖನನ (Excavation) ಕಾರ್ಯ ಭರದಿಂದ ಸಾಗಿದೆ. ಶೋಧದ ವೇಳೆ ಭೂಗರ್ಭದಲ್ಲಿ ಶಿವಲಿಂಗ, ಶಿವಲಿಂಗದ ಅವಶೇಷ, ನಾಗರಕಲ್ಲು ಸೇರಿ ಪುರಾತನ ವಸ್ತುಗಳು ಪತ್ತೆಯಾಗಿವೆ.

ನಾಗರ ಕಲ್ಲು ಪತ್ತೆ

ಉತ್ಖನನದ ವೇಳೆ ನಾಗರ ಕಲ್ಲು ಪತ್ತೆಯಾಗಿದೆ. ನಾಗರ ಹೆಡೆ ಕೆತ್ತನೆಯ ಮತ್ತೊಂದು ಕಲಾಕೃತಿ ಪತ್ತೆಯಾಗಿದ್ದು, ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಲಕ್ಕುಂಡಿ ಉತ್ಖನನ ಸ್ಥಳಕ್ಕೆ ಪುರಾತತ್ವ ಇಲಾಖೆ ಮೈಸೂರು ವಲಯ ಆಯುಕ್ತ ದೇವರಾಜು ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಉತ್ಖನ ಮೊದಲೇ ನಿಗದಿಯಾಗಿತ್ತು

ಜಿಲ್ಲೆಯ ಲಕ್ಕುಂಡಿ ಗ್ರಾಮದ ಗತವೈಭವದ ದಿನಗಳನ್ನು ನೆನಪಿಸುತ್ತಿವೆ. ಠಂಕಶಾಲೆ, ಯುದ್ಧಭೂಮಿ, ರಾಜಾಳ್ವಿಕೆ ನಾಡು, ಸಂಪದ್ಭರಿತ ಬೀಡಾಗಿದ್ದ ಲಕ್ಕುಂಡಿಯ ಇತಿಹಾಸವನ್ನು ಮರುಕಳಿಸುತ್ತಿವೆ. ಜ.16ರಿಂದಲೇ ಉತ್ಖನನ ಮಾಡಲಾಗುತ್ತಿದೆ. ಇದಕ್ಕೆ ಕಾರಣ 10ನೇ ತಾರೀಕು ರಿತ್ತಿ ಕುಟುಂಬಕ್ಕೆ ಮನೆಯ ಪಾಯ ಅಗೆಯುವಾಗ 466 ಗ್ರಾಂ ನಿಧಿ ಸಿಕ್ಕಿದ್ದು. ಆದರೆ ಇದಕ್ಕೂ ಮೊದಲೇ ಕೇಂದ್ರ ಸರ್ಕಾರಕ್ಕೆ ಭಾರತೀಯ ಪುರಾತತ್ವ ಇಲಾಖೆ ಲಕ್ಕುಂಡಿಯ ಭೂಗರ್ಭದಲ್ಲಿ ಹುದುಗಿರುವ ಐತಿಹಾಸಿಕ ಕುರುಹುಗಳ ಸಂಶೋಧನೆಗೆ ಪ್ರಸ್ತಾವನೆ ಸಲ್ಲಿಸಿತ್ತು.

ಇದನ್ನೂ ಓದಿ: Gadag: ಉತ್ಖನನದ ವೇಳೆ ಲಕ್ಕುಂಡಿಯಲ್ಲಿ ಪತ್ತೆಯಾಯ್ತು ಪುರಾತನ ಶಿವಲಿಂಗ!

ಆರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಲ್ಲಿಸಿದ್ದ ಪ್ರಸ್ತಾವನೆಗೆ 2025ರ ಮೇ 15ರಂದೇ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇತ್ತ, ಜೂನ್ 3ರಂದು ಉತ್ಖನನ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದ್ದರು. ಸಾಕಷ್ಟು ಮಳೆ ಕಾರಣಕ್ಕೆ ಉತ್ಖನನ ಕಾರ್ಯ ಪ್ರಾರಂಭ ವಿಳಂಬವಾಗಿತ್ತು. ಇದೇ ಹೊತ್ತಲ್ಲಿ ರಿತ್ತಿ ಕುಟುಂಬಕ್ಕೆ 466 ಗ್ರಾಂ ನಿಧಿ ಸಿಕ್ಕಿದ್ದು ಕುತೂಹಲಕ್ಕೆ ಕಾರಣ ಆಗಿದೆ.

ಲಕ್ಕುಂಡಿಯಲ್ಲಿ ಗತವೈಭವ ಮರುಕಳಿಸೋದಕ್ಕೆ ರಾಜ್ಯ ಪುರಾತತ್ವ ಇಲಾಖೆ ಮುಂದಾಗಿದೆ. ಇದೇ ಕಾರಣಕ್ಕಾಗೇ ಉತ್ಖನನ ಕಾರ್ಯ ನಡೆಸಲಾಗ್ತಿದೆ. ಭೂಗರ್ಭ ಶೋಧದ ವೇಳೆ 3ನೇ ದಿನವಾದ ಇಂದು ವೀರಭದ್ರೇಶ್ವರ ದೇವಾಲಯ ಪಕ್ಕದ ಕೋಟೆ ಗೋಡೆಯಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದೆ. ಯಾವ ಕಾಲದ್ದು ಅನ್ನೋ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

3ನೇ ದಿನದ ಶೋಧದ ವೇಳೆ ಶಿವಲಿಂಗ ಮತ್ತು ನಾಗರಕಲ್ಲು ಸಿಕ್ರೆ, ಎರಡನೇ ದಿನದ ಉತ್ಖನನದ ವೇಳೆ ಪುರಾತನ ವಸ್ತು ಸಿಕ್ಕಿತ್ತು. ಇದು ಶಿವಲಿಂಗ ಪೂಜೆ ನೀರು ಹರಿಯುವ ವಸ್ತುವಿನಂತೆ ಇದೆ ಎಂದು Tv9ಗೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮಾಹಿತಿ ನೀಡಿದ್ದರು. ಇಷ್ಟೇ ಅಲ್ಲ, ಒಡೆದ ಮಣ್ಣಿನ ಮಡಕೆಯ ಚೂರುಗಳು ಕೂಡ 2ನೇ ದಿನದ ಉತ್ಖನನ ವೇಳೆ ಸಿಕ್ಕಿದ್ದವು.

ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು ಹೇಳಿದ್ದಿಷ್ಟು 

ಇನ್ನು, ಎಷ್ಟು ದಿನ ಉತ್ಖನನ ಕಾರ್ಯ ನಡೆಯುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು, ಸಿಗುವ ಪ್ರಾಚ್ಯಾವಶೇಷಗಳ ಆಧಾರದ ಮೇಲೆ ಉತ್ಖನನದ ವಿಸ್ತರಣೆ ಅಥವಾ ಮುಕ್ತಾಯ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ. ಜೊತೆಗೆ ಸಮಗ್ರ ಅಭಿವೃದ್ಧಿಗೆ ಲಕ್ಕುಂಡಿ ಗ್ರಾಮದಲ್ಲಿ ಅಧ್ಯಯನ ನಡೆದಿದೆ ಅಂತಲೂ Tv9ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ ನಿಜವಾಯ್ತಾ ನಂಬಿಕೆ?: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್​​ ಹಾವು ಪ್ರತ್ಯಕ್ಷ!

ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಗದಗ ಡಿಸಿ ಸಿ.ಎನ್.ಶ್ರೀಧರ್ ಪರಿಶೀಲನೆ ಮಾಡಿದ್ದಾರೆ. ಶಿವಲಿಂಗ ಗೋಚರವಾದ ಕೋಟೆ ಗೋಡೆಯನ್ನೂ ವೀಕ್ಷಿಸಿದ್ದಾರೆ. ಡಿಸಿಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ರಕ್ಷಿತಾ ಶೆಟ್ಟಿ ವಿನ್ನರ್’; ವೀಕ್ಷಕರಿಗೆ ಶಾಕ್ ಕೊಟ್ಟ ವಿಕಿಪೀಡಿಯಾ

Source link

ಕನ್ನಡದ ಸೂಪರ್ ಹಿಟ್ ಹಾಡು ಬಳಸಿಕೊಂಡ ತೆಲುಗಿನ ಸ್ಟಾರ್ ನಿರ್ದೇಶಕ – Kannada News | Telugu Director Sandeep Vanga Praises Iconic Kannada Song Naguva Nayana

ಕನ್ನಡ ಚಿತ್ರರಂಗದಲ್ಲಿ 80-90ರ ದಶಕದಲ್ಲಿ ಹಲವು ಸೂಪರ್ ಹಿಟ್ ಗೀತೆಗಳು ಬಂದಿವೆ. ಅವುಗಳನ್ನು ಜನರು ಈಗಲೂ ಇಷ್ಟಪಡುತ್ತಾರೆ. ಈ ಹಾಡುಗಳು ಕಿವಿಗೆ ಕೇಳಲು ಇಂಪು. ಈ ಸಾಲಿನಲ್ಲಿ ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಚಿತ್ರದ ‘ನಗುವ ನಯನ..’ ಹಾಡು ಕೂಡ ಒಂದು. ಈ ಹಾಡು ಎಲ್ಲರ ಮೆಚ್ಚುಗೆ ಪಡೆಯಿತು. ಇದು ತೆಲುಗು ನಿರ್ದೇಶಕನಿಗೂ ಇಷ್ಟ ಆಗಿದೆ. ಅವರು ಹಾಡನ್ನು ಬಳಸಿಕೊಂಡಿದ್ದಾರೆ.

ಈ ರೀತಿ ಹಾಡು ಬಳಕೆ ಮಾಡಿದ್ದು ಬೇರೆ ಯಾರೂ ಅಲ್ಲ ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ. ‘ಅರ್ಜುನ್ ರೆಡ್ಡಿ’, ‘ಅನಿಮಲ್’ ರೀತಿಯ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ಸಖತ್ ರಾ ಆದಂತಹ ಚಿತ್ರಗಳನ್ನು ನೀಡುತ್ತಾರೆ. ಅವರು ಕನ್ನಡದ ‘ನಗುವ ನಯನ’ ಹಾಡನ್ನು ಇಷ್ಟಪಟ್ಟಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ ಸಂದೀಪ್ ರೆಡ್ಡಿ ವಂಗ. ಸಮುದ್ರ ತೀರದಲ್ಲಿ ಹಕ್ಕಿಯೊಂದು ನಡೆದಾಡುವ ವಿಡಿಯೋ ಇದು. ಈ ವಿಡಿಯೋಗೆ ಅವರು ಕನ್ನಡದ ‘ನಗುವ ನಯನ’ ಹಾಡನ್ನು ಹಾಕಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡಿಗರು ಈ ವಿಷಯಕ್ಕೆ ಸಂತಸಪಟ್ಟಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ

‘ಪಲ್ಲವಿ ಅನು ಪಲ್ಲವಿ’ ಸಿನಿಮಾ 1983ರಲ್ಲಿ ತೆರೆಗೆ ಬಂತು. ಅನಿಲ್ ಕಪೂರ್, ಲಕ್ಷ್ಮೀ ಮೊದಲಾದವರು ನಟಿಸಿದ್ದರು. ಮಣಿ ರತ್ನಂ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಇಳಯರಾಜ ಅವರು ಸಂಗೀತ ಸಂಯೋಜನೆ ಚಿತ್ರಕ್ಕೆ ಇತ್ತು.
ಸಂದೀಪ್ ರೆಡ್ಡಿ ಅವರು ಸದ್ಯ ತೆಲುಗಿನಲ್ಲಿ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಈ ಚಿತ್ರಕ್ಕೆ ಹೀರೋ. 2027ರಲ್ಲಿ ಸಿನಿಮಾ ತೆರೆಗೆ ಬರಲಿದೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಹಾಗೂ ‘ಸ್ಪಿರಿಟ್’ ಚಿತ್ರ ಒಟ್ಟಿಗೇ ತೆರೆಗೆ ಬರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs NZ: ಟೀಂ ಇಂಡಿಯಾ ವಿರುದ್ಧ ಚೊಚ್ಚಲ ಶತಕ ಬಾರಿಸಿದ ಗ್ಲೆನ್ ಫಿಲಿಪ್ಸ್ – Kannada News | NZ Batting Masterclass: Daryl Mitchell and Glenn Phillips Smash Hundreds vs India

ಭಾರತ ಪ್ರವಾಸದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದು, ಮೂರನೇ ಪಂದ್ಯದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂದೋರ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ, ಡ್ಯಾರಿಲ್ ಮಿಚೆಲ್ ಸತತ ಎರಡನೇ ಶತಕ ಬಾರಿಸಿದರೆ, ಗ್ಲೆನ್ ಫಿಲಿಪ್ಸ್ ಕೂಡ ತಮ್ಮ ಏಕದಿನ ವೃತ್ತಿಜೀವನದ ಎರಡನೇ ಶತಕ ಬಾರಿಸಿದ್ದಾರೆ.

Source link

ಈ ಆಹಾರ ಪದಾರ್ಥಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ – Kannada News | Foods that should not be cooked in a pressure cooker

ಈಗಂತೂ ಎಲ್ಲರ ಮನೆಗಳಲ್ಲೂ ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್‌ ಮಾಡುವವರೆಗೆ ಬಹುತೇಕ ಎಲ್ಲಾ ಅಡುಗೆ ಮಾಡಲು ಪ್ರತಿನಿತ್ಯ ಪ್ರೆಶರ್‌ ಕುಕ್ಕರ್‌ (pressure cooker) ಬಳಸಲಾಗುತ್ತದೆ. ಇದು ಆಹಾರವನ್ನು ತ್ವರಿತವಾಗಿ ಬೇಯಿಸುವ ಮೂಲಕ ಸಮಯ ಉಳಿತಾಯ ಮತ್ತು ಗ್ಯಾಸ್‌ ಉಳಿತಾಯ ಮಾಡಲು ಸಹಕಾರಿ ನಿಜ, ಆದರೆ ಅಡುಗೆ ಬೇಗನೇ ಆಗಿ ಹೋಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಬಗೆಯ ಆಹಾರಗಳನ್ನು ಕುಕ್ಕರ್‌ನಲ್ಲಿಯೇ ಬೇಯಿಸುವುದು ಸರಿಯಲ್ಲ. ಹೌದು ಕೆಲವೊಂದು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶ ನಾಶವಾಗುವುದಲ್ಲದೆ  ಅಂತಹ ಆಹಾರವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ಈ ಕೆಲವು ಬಗೆಯ ಆಹಾರಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸಲೇಬಾರದು. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಲೇಬಾರದ ಆಹಾರ ಪದಾರ್ಥಗಳಿವು:

ಅನ್ನ: ಸಾಮಾನ್ಯವಾಗಿ ಹೆಚ್ಚಿನವರು ಅನ್ನವನ್ನು ಕುಕ್ಕರ್‌ನಲ್ಲಿಯೇ ಬೇಯಿಸುತ್ತಾರೆ. ಆದರೆ ಅನ್ನವನ್ನು ಎಂದಿಗೂ ಕುಕ್ಕರ್‌ನಲ್ಲಿ ಬೇಯಿಸಬಾರದು. ಏಕೆಂದರೆ, ಈ ರೀತಿ ಕುಕ್ಕರ್‌ನಲ್ಲಿ ಅನ್ನ ಬೇಯಿಸುವುದರಿಂದ ಆರ್ಸೆನಿಕ್ ಎಂಬ ವಿಷಕಾರಿ ವಸ್ತು ಬಿಡುಗಡೆಯಾಗುತ್ತದೆ, ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ತೆರೆದ ಪಾತ್ರೆಯಲ್ಲಿ ಅನ್ನವನ್ನು ಬೇಯಿಸುವುದು ಉತ್ತಮ.

ಹಸಿರು ಎಲೆ ತರಕಾರಿಗಳು: ಪಾಲಕ್, ಮೆಂತ್ಯ ಸೊಪ್ಪು, ಹರಿವೆ ಸೊಪ್ಪಿನಂತಹ ಹಸಿರು ಎಲೆ ತರಕಾರಿಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶಗಳು ನಾಶವಾಗುತ್ತವೆ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಅವುಗಳನ್ನು ನಾರ್ಮಲ್‌  ಪ್ಯಾನ್‌ನಲ್ಲಿ ಕಡಿಮೆ ಉರಿಯಲ್ಲಿ ಬೇಯಿಸುವುದು ಉತ್ತಮ.

ಬೀನ್ಸ್: ಬೀನ್ಸ್‌ನಲ್ಲಿ ನೈಸರ್ಗಿಕವಾಗಿ ಕಂಡುಬರುವ ಲೆಕ್ಟಿನ್ ಎಂಬ ವಿಷವಿದ್ದು, ಸರಿಯಾಗಿ ಬೇಯಿಸದಿದ್ದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಆಹಾರ ವಿಷವನ್ನು ಸಹ ಉಂಟುಮಾಡಬಹುದು. ಅಲ್ಲದೆ ಒತ್ತಡದಲ್ಲಿ ಬೇಯಿಸುವುದರಿಂದ ಬೀನ್ಸ್‌ನಲ್ಲಿರುವ ಲೆಕ್ಟಿನ್ ವೇಗವಾಗಿ ಒಡೆಯುತ್ತದೆ, ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ತರಕಾರಿಯನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವುದು ಸರಿಯಲ್ಲ.

ಹಾಲು ಮತ್ತು ಹಾಲಿನ ಉತ್ಪನ್ನಗಳು: ಪ್ರೆಶರ್ ಕುಕ್ಕರ್‌ನಲ್ಲಿ ಹಾಲನ್ನು ಕುದಿಸುವುದರಿಂದ ಅದರ ನೈಸರ್ಗಿಕ ರಚನೆಯಲ್ಲಿ ಬದಲಾವಣೆ ಉಂಟಾಗಬಹುದು ಮತ್ತು ಅದು ಉರಿಯಲು ಅಥವಾ ಹೆಪ್ಪುಗಟ್ಟಲು ಕಾರಣವಾಗಬಹುದು, ಇದರಿಂದಾಗಿ ಅದರ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಹಾಲನ್ನು ಕುದಿಸಲು ಸ್ಟೀಲ್ ಅಥವಾ ನಾನ್-ಸ್ಟಿಕ್ ಪ್ಯಾನ್ ಉತ್ತಮ.

ಟೊಮ್ಯಾಟೊ: ಟೊಮೆಟೊ, ಹುಣಸೆಹಣ್ಣು ಅಥವಾ ಹುಳಿ ಆಹಾರವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವು ಹೆಚ್ಚು ಆಮ್ಲೀಯವಾಗಬಹುದು, ಇದು ದೇಹಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ, ಅವುಗಳನ್ನು ಉಕ್ಕಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ಬೇಯಿಸುವುದು ಉತ್ತಮ.

ಇದನ್ನೂ ಓದಿ: ಶುಂಠಿ, ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ?

ದ್ವಿದಳ ಧಾನ್ಯಗಳು ಮತ್ತು ಕಿಡ್ನಿ ಬೀನ್ಸ್: ಬೀನ್ಸ್ ಮತ್ತು ಕೆಲವು ಧಾನ್ಯಗಳು ನೈಸರ್ಗಿಕ ವಿಷಕಾರಿ ಅಂಶಗಳನ್ನು ಒಳಗೊಂಡಿರುತ್ತವೆ, ಇವುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಸಂಪೂರ್ಣವಾಗಿ ಹೊರಹಾಕಲಾಗುವುದಿಲ್ಲ. ಆದ್ದರಿಂದ, ಅವುಗಳನ್ನು ರಾತ್ರಿಯಿಡೀ ನೆನೆಸಿ ನಂತರ ಕಡಿಮೆ ಉರಿಯಲ್ಲಿ ತೆರೆದ ಪಾತ್ರೆಯಲ್ಲಿ ಬೇಯಿಸುವುದು ಆರೋಗ್ಯಕರವಾಗಿರುತ್ತದೆ.

ಆಲೂಗಡ್ಡೆ ಮತ್ತು ಇತರೆ ಪಿಷ್ಟ ತರಕಾರಿಗಳು: ಆಲೂಗಡ್ಡೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪಿಷ್ಟವು ಬೇಗನೆ ಒಡೆಯುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗಬಹುದು . ಆದ್ದರಿಂದ, ಇದನ್ನು ಪ್ಯಾನ್‌ನಲ್ಲಿಯೇ ಬೇಯಿಸುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version