Engineering Courses: ಪಿಯುಸಿ ಬಳಿಕ ಈ ಇಂಜಿನಿಯರಿಂಗ್ ಕೋರ್ಸ್‌ ಆಯ್ಕೆ ಮಾಡಿ; ಸಿಗಲಿದೆ ಲಕ್ಷ ಲಕ್ಷ ಸಂಬಳದ ಪ್ಯಾಕೇಜ್! – Kannada News | High Demand Engineering Branches: Top Courses for a Bright Future Career

ಹೈ ಡಿಮ್ಯಾಂಡ್ ಇರುವ ಇಂಜಿನಿಯರಿಂಗ್ ಕೋರ್ಸ್‌Image Credit source: Pinterest

ಭಾರತದಲ್ಲಿ ಇಂದಿಗೂ ಯುವಜನತೆಯ ನಡುವೆ ಅತ್ಯಂತ ಜನಪ್ರಿಯ ಮತ್ತು ಮೊದಲ ಆದ್ಯತೆಯ ವೃತ್ತಿಜೀವನದ ಆಯ್ಕೆ ಎಂದರೆ ಅದು ಇಂಜಿನಿಯರಿಂಗ್. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪಿಯುಸಿ (12ನೇ ತರಗತಿ) ವಿಜ್ಞಾನ ವಿಭಾಗದಲ್ಲಿ ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ) ವಿಷಯಗಳೊಂದಿಗೆ ತೇರ್ಗಡೆಯಾದ ನಂತರ ಇಂಜಿನಿಯರಿಂಗ್ ಪ್ರವೇಶ ಪಡೆಯುವ ಕನಸು ಕಾಣುತ್ತಾರೆ. ಐಐಟಿ (IIT), ಎನ್‌ಐಟಿ (NIT) ಮತ್ತು ಐಐಐಟಿ (IIIT) ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೀಟು ಪಡೆಯಲು ಜೆಇಇ (JEE) ನಂತಹ ಕಠಿಣ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಾರೆ.

ಆದರೆ, ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಸಾಂಪ್ರದಾಯಿಕ ಕೋರ್ಸ್‌ಗಳ ಜೊತೆಗೆ ಕೆಲವು ಹೊಸ ಇಂಜಿನಿಯರಿಂಗ್ ವಿಭಾಗಗಳು (Engineering Branches) ವೇಗವಾಗಿ ಮುಂಚೂಣಿಗೆ ಬರುತ್ತಿವೆ. ಇವುಗಳಲ್ಲಿ ಉದ್ಯೋಗದ ಅಪಾರ ಅವಕಾಶಗಳ ಜೊತೆಗೆ ಆಕರ್ಷಕ ಸಂಬಳದ ಪ್ಯಾಕೇಜ್‌ಗಳು ಲಭ್ಯವಿವೆ. ವಿದ್ಯಾರ್ಥಿಗಳು ಸರಿಯಾದ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಅದ್ಭುತ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಮತ್ತು ಭಾರಿ ಸಂಬಳ ತಂದುಕೊಡುವ ಪ್ರಮುಖ ಇಂಜಿನಿಯರಿಂಗ್ ಕ್ಷೇತ್ರಗಳ ವಿವರ ಇಲ್ಲಿದೆ.

ಪೆಟ್ರೋಲಿಯಂ ಇಂಜಿನಿಯರಿಂಗ್ (Petroleum Engineering):

ಜಾಗತಿಕವಾಗಿ ತೈಲ ಮತ್ತು ಅನಿಲದ (Oil and Gas) ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಪೆಟ್ರೋಲಿಯಂ ಇಂಜಿನಿಯರ್‌ಗಳಿಗೆ ಬೇಡಿಕೆ ಗಣನೀಯವಾಗಿ ವೃದ್ಧಿಸಿದೆ. ಈ ಕ್ಷೇತ್ರದ ಇಂಜಿನಿಯರ್‌ಗಳು ತೈಲ ನಿಕ್ಷೇಪಗಳ ಶೋಧನೆ, ಉತ್ಪಾದನೆ ಮತ್ತು ಅದಕ್ಕೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನಗಳ ಬಳಕೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ರಿಲಯನ್ಸ್, ಒಎನ್‌ಜಿಸಿ (ONGC), ಬಿಪಿಸಿಎಲ್ (BPCL) ಮತ್ತು ಶೆಲ್ (Shell) ನಂತಹ ಜಾಗತಿಕ ದೈತ್ಯ ಕಂಪನಿಗಳು ಈ ಕ್ಷೇತ್ರದಲ್ಲಿ ಬೃಹತ್ ಉದ್ಯೋಗಾವಕಾಶಗಳನ್ನು ನೀಡುತ್ತವೆ. ವೃತ್ತಿಜೀವನದ ಆರಂಭಿಕ ಹಂತದಲ್ಲೇ ವಾರ್ಷಿಕವಾಗಿ ರೂ. 7 ಲಕ್ಷದಿಂದ ರೂ. 20 ಲಕ್ಷದವರೆಗೆ ಆಕರ್ಷಕ ಪ್ಯಾಕೇಜ್ ಪಡೆಯಬಹುದು.

ಡೇಟಾ ಇಂಜಿನಿಯರಿಂಗ್ (Data Engineering):

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಡೇಟಾ (ಮಾಹಿತಿ) ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ಬೃಹತ್ ಪ್ರಮಾಣದ ಡೇಟಾವನ್ನು ಸಂಗ್ರಹಿಸುವುದು, ವ್ಯವಸ್ಥಿತವಾಗಿ ಜೋಡಿಸುವುದು ಮತ್ತು ಅದನ್ನು ಸುರಕ್ಷಿತವಾಗಿಡುವುದು ಡೇಟಾ ಇಂಜಿನಿಯರ್‌ಗಳ ಮುಖ್ಯ ಕೆಲಸವಾಗಿದೆ. ಐಟಿ (IT), ಡೇಟಾ ಸೈನ್ಸ್ ಮತ್ತು ಬಿಸಿನೆಸ್ ಅನಾಲಿಟಿಕ್ಸ್ ಕಂಪನಿಗಳಲ್ಲಿ ಇವರಿಗೆ ಇಂದು ಭಾರೀ ಬೇಡಿಕೆಯಿದೆ. ಭಾರತದಲ್ಲಿ ಡೇಟಾ ಇಂಜಿನಿಯರಿಂಗ್ ಮುಗಿಸಿದ ಫ್ರೆಶರ್‌ಗಳಿಗೆ ಆರಂಭದಲ್ಲೇ ವಾರ್ಷಿಕ ಸುಮಾರು ರೂ. 8 ಲಕ್ಷದಿಂದ ರೂ. 13 ಲಕ್ಷದವರೆಗಿನ ವೇತನ ದೊರೆಯುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (AI & ML):

ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಮೆಷಿನ್ ಲರ್ನಿಂಗ್ ಇತ್ತೀಚಿನ ದಿನಗಳ ಅತ್ಯಂತ ಕ್ರಾಂತಿಕಾರಿ ಹಾಗೂ ಹೆಚ್ಚು ಚರ್ಚಿತ ತಂತ್ರಜ್ಞಾನಗಳಾಗಿವೆ. ಇದರ ಪ್ರಾಮುಖ್ಯತೆಯನ್ನು ಅರಿತು ಇತ್ತೀಚಿನ ದಿನಗಳಲ್ಲಿ ದೇಶದ ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳು ಈ ವಿಷಯಗಳಲ್ಲಿ ವಿಶೇಷ ಬಿ.ಟೆಕ್ (B.Tech) ಕೋರ್ಸ್‌ಗಳನ್ನೇ ಆರಂಭಿಸಿವೆ. ಆಟೊಮೇಷನ್ ಮತ್ತು ಸ್ಮಾರ್ಟ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈ ಕ್ಷೇತ್ರದಲ್ಲಿ ಉದ್ಯೋಗದ ಸುನಾಮಿಯೇ ಎದ್ದಿದೆ. ಈ ಕ್ಷೇತ್ರದಲ್ಲಿ ಹೆಜ್ಜೆ ಇಡುವ ಹೊಸ ಇಂಜಿನಿಯರ್‌ಗಳು ಕೂಡ ಸರಾಸರಿ ವಾರ್ಷಿಕ ರೂ. 10 ಲಕ್ಷದವರೆಗಿನ ಆರಂಭಿಕ ಪ್ಯಾಕೇಜ್ ಅನ್ನು ಸುಲಭವಾಗಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಏರೊಸ್ಪೇಸ್ ಮತ್ತು ರೊಬೊಟಿಕ್ಸ್ ಇಂಜಿನಿಯರಿಂಗ್ (Aerospace & Robotics):

ಏರೊಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್‌ಗಳು ವಿಮಾನಗಳು, ಸ್ಯಾಟಲೈಟ್‌ಗಳು (ಉಪಗ್ರಹಗಳು) ಮತ್ತು ಬಾಹ್ಯಾಕಾಶ ನೌಕೆಗಳ ವಿನ್ಯಾಸ (Design) ಹಾಗೂ ಅವುಗಳ ತಾಂತ್ರಿಕ ಪರೀಕ್ಷೆಗಳ ಜವಾಬ್ದಾರಿಯುತ ಕೆಲಸಗಳನ್ನು ನಿರ್ವಹಿಸುತ್ತಾರೆ.

ರೊಬೊಟಿಕ್ಸ್ ಇಂಜಿನಿಯರಿಂಗ್:

ಇಲ್ಲಿ ಆಧುನಿಕ ರೊಬೊಟಿಕ್ ಸಿಸ್ಟಮ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಪ್ರಸ್ತುತ ಇವುಗಳ ಬಳಕೆ ಕೈಗಾರಿಕೆಗಳು, ದೊಡ್ಡ ಆಸ್ಪತ್ರೆಗಳು ಮತ್ತು ಸಂಶೋಧನಾ ವಲಯಗಳಲ್ಲಿ (Research Sector) ವ್ಯಾಪಕವಾಗಿ ನಡೆಯುತ್ತಿದೆ. ಈ ರೊಬೊಟಿಕ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ವೃತ್ತಿಪರರು ಆರಂಭಿಕ ಹಂತದಲ್ಲೇ ತಿಂಗಳಿಗೆ ಸುಮಾರು 80 ಸಾವಿರ ರೂಪಾಯಿಗಳವರೆಗೆ ವೇತನ ಪಡೆಯಬಹುದಾಗಿದೆ.

ನೀವೇನಾದರೂ ಪಿಯುಸಿ ಮುಗಿಸಿ ಇಂಜಿನಿಯರಿಂಗ್ ಸೇರಲು ಯೋಜಿಸುತ್ತಿದ್ದರೆ, ಕೇವಲ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಸೀಮಿತವಾಗದೆ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಭವಿಷ್ಯದ ಈ ಹೈ-ಡಿಮ್ಯಾಂಡ್ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮ ವೃತ್ತಿಜೀವನಕ್ಕೆ ದಾರಿದೀಪವಾಗಬಲ್ಲದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SRH vs RCB: ಐಪಿಎಲ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ವಿರಾಟ್ ಕೊಹ್ಲಿ

Source link

ತಂದೆ ನೆನಪಿಗಿದ್ದ ಅದೊಂದು ವಸ್ತು ಕಳ್ಳತನ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು – Kannada News | Private Hospital Theft: Patient’s Rs 2 Lakh Watch Stolen; Police Complaint

ಕಳ್ಳತನವಾಗಿರುವ ರಾಡೋ ವಾಚ್, ಮೃತ ವ್ಯಕ್ತಿ ರಾಮಯ್ಯImage Credit source: tv9 kannada

ಬೆಂಗಳೂರು, ಮೇ 22: ಸಿಲಿಕಾನ್ ಸಿಟಿಯ (bangaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಮನುಷ್ಯತ್ವವೇ ಮರೆತು ನಡೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿ ಕೊನೆಯುಸಿರೆಳೆದ ವೃದ್ಧರೊಬ್ಬರ 2 ಲಕ್ಷ ರೂ ಮೌಲ್ಯದ ರಾಡೋ ವಾಚ್​​​ (rado watch) ಆಸ್ಪತ್ರೆಯಲ್ಲೇ ಕಳ್ಳತನವಾಗಿದೆ. ಈ ಸಂಬಂಧ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು

  • ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ದುಬಾರ ವಾಚ್​​ಗೆ ಕನ್ನ
  • ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು
  • ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ FIR

ನಡೆದಿದ್ದೇನು?

ತೀವ್ರ ಅನಾರೋಗ್ಯದ ಕಾರಣದಿಂದಾಗಿ ರಾಮಯ್ಯ ಎಂಬುವವರು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾಮಯ್ಯ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ದುರದೃಷ್ಟವಶಾತ್, ಅವರು ಮೃತಪಡುವ ಮುನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಮಯದಲ್ಲಿ ಅವರ ದೇಹದ ಮೇಲಿದ್ದ ಶರ್ಟ್ ಹಾಗೂ ಅವರು ಧರಿಸಿದ್ದ 2 ಲಕ್ಷ ರೂ ಮೌಲ್ಯದ ದುಬಾರಿ ರಾಡೋ ವಾಚ್ ನಿಗೂಢವಾಗಿ ಕಳ್ಳತನವಾಗಿದೆ.

ಸರಿಯಾಗಿ ಉತ್ತರ ನೀಡದ ಆಸ್ಪತ್ರೆ ಸಿಬ್ಬಂದಿ: ಸಿಸಿಟಿವಿ ವಿಡಿಯೋ ಡಿಲೀಟ್

ಇನ್ನು ತಂದೆಯ ಸಾವಿನ ಬಳಿಕ ಮಗಳು ಬೆಲೆಬಾಳುವ ವಾಚ್ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಬಳಿ ವಿಚಾರಿಸಿದಾಗ, ಅವರು ಸರಿಯಾಗಿ ಉತ್ತರ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಕಳ್ಳತನದ ಸತ್ಯಾಸತ್ಯತೆ ತಿಳಿಯಲು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿದರೆ ವಿಡಿಯೋ ಡಿಲೀಟ್ ಆಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡಿ ಸಿಬ್ಬಂದಿ ಕೈತೊಳೆದುಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಈ ವರ್ತನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿ ಸಿಕ್ಕಿಬಿದ್ದ ಮೇಸ್ತ್ರಿ: ದರೋಡೆ ವೇಳೆಯೂ ಮಾನವೀಯತೆ ತೋರಿದ್ದ ಆರೋಪಿಗಳು!

ಇನ್ನು ಕಳ್ಳತನವಾಗಿರುವ ರಾಡೋ ವಾಚ್ ಕೇವಲ ದುಬಾರಿ ವಸ್ತು ಅಲ್ಲದೇ ಮೃತ ತಂದೆಯ ನೆನಪಿಗೋಸ್ಕರವಿದ್ದ ಒಂದೇ ಒಂದು ವಸ್ತು. ಹೀಗಾಗಿ ಬೇಸತ್ತ ರಾಮಯ್ಯ ಅವರ ಪುತ್ರಿ, ತಂದೆಯ ವಾಚ್‌ ಕಳುವಾಗಿರುವ ಕುರಿತು ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನನ್ವಯ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RRB ALP Recruitment 2026: ಸಹಾಯಕ ಲೋಕೋ ಪೈಲಟ್ ಹುದ್ದೆಗಳ ಸಂಖ್ಯೆಯಲ್ಲಿ ಪ್ರಮುಖ ಬದಲಾವಣೆ! ಪರಿಷ್ಕೃತ ಸೂಚನೆ ಬಿಡುಗಡೆ – Kannada News | RRB ALP Recruitment 2026: Revised Vacancies Out, Apply for Assistant Loco Pilot

ರೈಲ್ವೆಯಲ್ಲಿ ಸಹಾಯಕ ಲೋಕೋ ಪೈಲಟ್ (ALP) ಆಗಬೇಕೆಂದು ಕನಸು ಕಾಣುತ್ತಿರುವ ಯುವಕರಿಗೆ ರೈಲ್ವೆ ನೇಮಕಾತಿ ಮಂಡಳಿಯು (RRB) ಪ್ರಮುಖ ಸುದ್ದಿಯೊಂದನ್ನು ನೀಡಿದೆ. ಇತ್ತೀಚೆಗೆ ಪ್ರಕಟಿಸಲಾಗಿದ್ದ ಬೃಹತ್ ನೇಮಕಾತಿಯ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಆರ್‌ಆರ್‌ಬಿ ಮಹತ್ವದ ಬದಲಾವಣೆ ಮಾಡಿದ್ದು, ಹೊಸ ಪರಿಷ್ಕೃತ ಅಧಿಕೃತ ಸೂಚನೆಯನ್ನು ಹೊರಡಿಸಿದೆ.

ಈ ಹೊಸ ಪ್ರಕಟಣೆಯ ಪ್ರಕಾರ, ಒಟ್ಟಾರೆ ಹುದ್ದೆಗಳ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸಲಾಗಿದ್ದರೂ, ಕೆಲವು ನಿರ್ದಿಷ್ಟ ರೈಲ್ವೆ ವಲಯಗಳಲ್ಲಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದು ಆಯಾ ವಲಯಗಳಲ್ಲಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ದೊಡ್ಡ ವರವಾಗಲಿದೆ.

ಪರಿಷ್ಕೃತಗೊಂಡ ಒಟ್ಟು ಖಾಲಿ ಹುದ್ದೆಗಳ ವಿವರ:

ರೈಲ್ವೆ ನೇಮಕಾತಿ ಮಂಡಳಿಯು ಮೊದಲು ಏಪ್ರಿಲ್ 12 ರಂದು ಎಎಲ್‌ಪಿ (ALP) ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿತ್ತು. ಆ ಸಮಯದಲ್ಲಿ ಒಟ್ಟು 11,127 ಹುದ್ದೆಗಳನ್ನು ಪ್ರಕಟಿಸಲಾಗಿತ್ತು. ಆದರೆ ಈಗ ಬಿಡುಗಡೆಯಾಗಿರುವ ಪರಿಷ್ಕೃತ ಸೂಚನೆಯ ಪ್ರಕಾರ, ಒಟ್ಟು ಹುದ್ದೆಗಳ ಸಂಖ್ಯೆಯನ್ನು 10,970 ಕ್ಕೆ ಸೀಮಿತಗೊಳಿಸಲಾಗಿದೆ. ಉಳಿದಂತೆ ದೇಶಾದ್ಯಂತ ಇರುವ 17 ರೈಲ್ವೆ ವಲಯಗಳಲ್ಲಿನ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಆರ್‌ಆರ್‌ಬಿ ಸ್ಪಷ್ಟಪಡಿಸಿದೆ.

ಯಾವ ರೈಲ್ವೆ ವಲಯಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳ?

ಅಭ್ಯರ್ಥಿಗಳಿಗೆ ಸಂತೋಷದ ವಿಷಯವೆಂದರೆ, ಪ್ರಮುಖ ಮೂರು ರೈಲ್ವೆ ವಲಯಗಳಲ್ಲಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಆ ವಲಯಗಳ ವಿವರ ಹೀಗಿದೆ:

  • ಭುವನೇಶ್ವರ ಆರ್‌ಆರ್‌ಬಿ (RRB Bhubaneswar): ಇಲ್ಲಿ ಈ ಹಿಂದೆ ಕೇವಲ 928 ಸ್ಥಾನಗಳಿದ್ದವು, ಆದರೆ ಈಗ ಅದನ್ನು 1,355 ಕ್ಕೆ ಹೆಚ್ಚಿಸಲಾಗಿದೆ.
  • ಬಿಲಾಸ್‌ಪುರ ಆರ್‌ಆರ್‌ಬಿ (RRB Bilaspur): ಈ ವಲಯದಲ್ಲಿ ಮೊದಲು 568 ಹುದ್ದೆಗಳಿದ್ದವು, ಪರಿಷ್ಕೃತ ನಿಯಮದನ್ವಯ ಈಗ ಇವುಗಳ ಸಂಖ್ಯೆಯನ್ನು 1,068 ಕ್ಕೆ ಏರಿಸಲಾಗಿದೆ.
  • ಸಿಕಂದರಾಬಾದ್ ಆರ್‌ಆರ್‌ಬಿ (RRB Secunderabad): ಈ ಹಿಂದೆ ಇಲ್ಲಿ 533 ಸ್ಥಾನಗಳಿದ್ದು, ಪ್ರಸ್ತುತ ಇದನ್ನು 606 ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಕೊನೆಯ ದಿನಾಂಕಗಳು:

ಸಹಾಯಕ ಲೋಕೋ ಪೈಲಟ್ ನೇಮಕಾತಿಯ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಮೇ 15 ರಿಂದ ಯಶಸ್ವಿಯಾಗಿ ಆರಂಭಗೊಂಡಿದೆ.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 14, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜೂನ್ 16, 2026

ಅರ್ಹ ಅಭ್ಯರ್ಥಿಗಳು ಕೊನೆಯ ಕ್ಷಣದ ಸೈಟ್ ದಟ್ಟಣೆಯನ್ನು ತಪ್ಪಿಸಲು ಗಡುವಿನೊಳಗಾಗಿ ತಮ್ಮ ಅರ್ಜಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

  • ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ಕಡ್ಡಾಯವಾಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಮಾಣಪತ್ರ (ITI Certificate) ಅಥವಾ ಇಂಜಿನಿಯರಿಂಗ್ ಡಿಪ್ಲೊಮಾವನ್ನು ಹೊಂದಿರಬೇಕು.
  • ವಯೋಮಿತಿ: ಜುಲೈ 1, 2026 ರ ಅನ್ವಯ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​​ಬೈಟ್​ಗೆ ಭೇಟಿ ನೀಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಟೀಸರ್ ಬಿಡುಗಡೆ – Kannada News | Country Made Part 2 Kannada Movie directed by Aravind Kaushik Character Teaser Released

ರೌಡಿಸಂ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿದೆ. ಗಂಡಸರ ನಡುವಿನ ಈ ಸಂಘರ್ಷದಿಂದ ಮನೆಯ ಹೆಣ್ಮಕ್ಕಳ ಬದುಕು ಯಾವ ರೀತಿ ತೊಂದರೆಗೆ ಸಿಲುಕುತ್ತದೆ ಎಂಬ ಎಳೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ‘ಕಂಟ್ರಿ ಮೇಡ್ ಪಾರ್ಟ್ 2’ (Country Made Part 2) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಹತ್ತು ಹಲವು ಇಂಟರೆಸ್ಟಿಂಗ್ ಪಾತ್ರಗಳಿವೆ. ಆ ಪಾತ್ರಗಳನ್ನು ಪರಿಚಯಿಸುವ ಸಲುವಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ಅರವಿಂದ್‍ ಕೌಶಿಕ್‍ (Aravind Kaushik) ಅವರು ನಿರ್ದೇಶನ ಮಾಡಿದ್ದಾರೆ.

ಈ ಮೊದಲು ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾ ಮಾಡಿದ್ದ ಅರವಿಂದ್‍ ಕೌಶಿಕ್‍ ಅವರು ಈಗ ಸದ್ದಿಲ್ಲದೆ ‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾ ಮಾಡಿ ಮುಗಿಸಿದ್ದಾರೆ. ಇದುವರೆಗೂ ಬೇರೆಬೇರೆ ಶೈಲಿಯ ಸಿನಿಮಾಗಳನ್ನು ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಒಂದು ಗ್ಯಾಂಗ್‍ಸ್ಟರ್ ಕಥೆಯೊಂದನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

‘ಕಂಟ್ರಿ ಮೇಡ್‍ ಪಾರ್ಟ್ 2’ ಸಿನಿಮಾ ಟೀಸರ್‍ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಟೀಸರ್‍ ಬಿಡುಗಡೆ ಮಾಡಿದ ನಂತರ ಈ ಸಿನಿಮಾದಲ್ಲಿ ಅಭಿನಯಿಸಿರುವ ಹಲವು ಕಲಾವಿದರನ್ನು ಅರವಿಂದ್‍ ಕೌಶಿಕ್ ಅವರು ಪರಿಚಯಿಸಿದರು. ಎಲ್ಲರೂ ಚಿತ್ರದಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ಈ ಸಿನಿಮಾ ರೂಪುಗೊಂಡಿದ್ದು ಹೇಗೆ ಎಂದು ಅರವಿಂದ್‍ ಹೇಳಿದರು.

‘ಕಂಟ್ರಿ ಮೇಡ್ ಪಾರ್ಟ್ 2’ ಟೀಸರ್:

‘ನನ್ನ ಹಿಂದಿನ ಸಿನಿಮಾ ಬಿಡುಗಡೆಯಾದ ಮೇಲೆ ಒಂದು ದಿನ ಪಾವಗಡದ ಕಡೆ ಹೋದೆ. ಬಾಲ್ಯದಿಂದಲೂ ನನಗೆ ಬಹಳ ಕಾಡಿದಂತಹ ಊರು ಅದು. ಅಲ್ಲೇನಾದರೂ ಶೂಟಿಂಗ್‍ ಮಾಡಬೇಕೆಂಬ ಆಸೆ ಇತ್ತು. ಆ ಊರಿನಲ್ಲಿ ನಾನು ನೋಡಿದ ಒಂದಿಷ್ಟು ನಿಜ ಜೀವನದ ವ್ಯಕ್ತಿಗಳನ್ನು ಆಧರಿಸಿ ಪಾತ್ರಗಳನ್ನು ಸೃಷ್ಟಿಸಿದೆ. ಹಾಗೆ ಹುಟ್ಟಿಕೊಂಡಿದ್ದೇ ಈ ಸಿನಿಮಾದ ಪಾತ್ರಗಳು. ಅವುಗಳಿಂದಲೇ ಕಂಟ್ರಿ ಮೇಡ್‍ ಪಾರ್ಟ್ 2 ಸಿನಿಮಾ ಆಗಿದೆ’ ಎಂದು ಅರವಿಂದ್ ಕೌಶಿಕ್ ಅವರು ವಿವರಿಸಿದರು.

ಇದನ್ನೂ ಓದಿ: ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ ‘ಲ್ಯಾಂಡ್ ಲಾರ್ಡ್​’ ಸಿನಿಮಾ; ಇಲ್ಲಿದೆ ವಿವರ

ಈ ಸಿನಿಮಾದಲ್ಲಿ ಅರವಿಂದ್‍ ಕೌಶಿಕ್‍, ರಾಘವ್‍ ರಾಮ್‍, ಅಭಿಲಾಷ್‍ ದ್ವಾರಕೀಶ್‍, ಶಿಲ್ಪಾ ಅರವಿಂದ್‍, ಪ್ರದೀಪ್‍ ರೋಶನ್‍, ಕುಲದೀಪ್, ಅಶ್ವಿತಾ ಗೌಡ, ಗೌರವ್‍ ಆರ್ಯನ್, ಸುಜಿತ್‍ ಶೆಟ್ಟಿ, ಅಪೂರ್ವಶ್ರೀ, ವೀರೇನ್‍ ಸಾಗರ್, ಸುಧಾ ಪ್ರಸನ್ನ ಮುಂತಾದವರು ನಟಿಸಿದ್ದಾರೆ. ಉಮೇಶ್‍ ಮಠಪತಿ, ಸೂರ್ಯ, ಅರವಿಂದ್‍ ಕೌಶಿಕ್‍ ಹಾಗೂ ಚಂದನ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರ್ಜುನ್‍ ರಾಮು ಅವರ ಸಂಗೀತ, ಸೂರ್ಯ ಅವರ ಛಾಯಾಗ್ರಹಣ, ಅಲ್ಟಿಮೇಟ್‍ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರಿ ಮಳೆ ಗಾಳಿಗೆ ಹೊಸಕೋಟೆ ಟೋಲ್ ಪ್ಲಾಜಾ ಬಳಿ ಮುರಿದು ಬಿದ್ದ ಬೃಹತ್ ಜಾಹೀರಾತು ಫಲಕ

ಬೆಂಗಳೂರು, (ಮೇ 22): ಭಾರೀ ಮಳೆಗೆ (heavy rain) ಹೊಸಕೋಟೆ (Hoskote) ಟೋಲ್ ಸಮೀಪ ಬೃಹತ್ ಜಾಹೀರಾತು ಫಲಕ ಧರೆಗೆ ಬಿದ್ದಿದೆ. ದೊಡ್ಡ ಅಮಾನಿಕೆರೆ ನಾಲದ ರಾಜಕಾಲುವೆ ದಂಡೆ ಮೇಲೆ ಇದ್ದ ಬೃಹತ್ ಜಾಹಿರಾತು ಫಲಕ ಮತ್ತು ಎರಡು ಬೃಹತ್ ಕಂಬಗಳು ಗುರುವಾರ ಸಂಜೆ ಬಿರುಗಾಳಿಯ ರಭಸಕ್ಕೆ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಈಚರ್ ವಾಹನದ ಮೇಲೆ ಬಿದ್ದಿದೆ. ನಾಮಫಲಕ ಬಿದ್ದ ರಭಸಕ್ಕೆ ಕ್ಯಾಂಟರ್ ವಾಹನ ಸಂಪೂರ್ಣ ನುಚ್ಚುನೂರಾಗಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಈ ಘಟನೆಯಿಂದಾಗಿ ಸರ್ವಿಸ್ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಉಂಟಾಗಿದ್ದು, ಕೊನೆಗೆ ಹೊಸಕೋಟೆ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹವೇ ಪಡಬೇಕಾಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ – Kannada News | Nora Fatehi shared behind the scene video of her new music video

ಕೆಡಿ’ (KD) ಸಿನಿಮಾದ ಐಟಂ ಹಾಡಿನಿಂದಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿ ನೋರಾ ಫತೇಹಿ ಇದೀಗ ತಮ್ಮದೇ ಆದ ಹೊಸ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಿಂದ ಮ್ಯೂಸಿಕ್ ವಿಡಿಯೋನ ಕೆಲವು ಗ್ಲಿಂಪ್ಸ್​​ಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ನೋರಾ ಫತೇಹಿ, ಇದೀಗ ಮ್ಯೂಸಿಕ್ ವಿಡಿಯೋನ ಶೂಟಿಂಗ್, ಪ್ರ್ಯಾಕ್ಟೀಸ್, ನೀಡಿದ ತರಬೇತಿ, ನೃತ್ಯ ನಿರ್ದೇಶನ, ಮ್ಯೂಸಿಕ್ ಹೀಗೆ ತೆರೆ ಹಿಂದೆ ನಡೆದ ಕೆಲಸಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಮೊದಲ ಮ್ಯೂಸಿಕ್ ವಿಡಿಯೋಗೆ ಎಷ್ಟು ಶ್ರಮ ಹಾಕಿರುವುದಾಗಿ ಅವರು ವಿಡಿಯೋನಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

BEL Recruitment 2026: ಬಿಇಎಲ್​​ನಲ್ಲಿ ನೇಮಕಾತಿ; ಇಂಜಿನಿಯರಿಂಗ್ ಮತ್ತು ಐಟಿ ಪದವೀಧರರಿಗೆ ಸುವರ್ಣವಕಾಶ – Kannada News | Bharat Electronics Ltd. Jobs: 56 Engineer Posts– Last Date June 8

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಇಂಜಿನಿಯರಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಜನರಿಗಾಗಿ ಹೊಸ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಕಂಪನಿಯು ವಿವಿಧ ವಿಭಾಗಗಳಲ್ಲಿ ಒಟ್ಟು 56 ಫೀಲ್ಡ್ ಆಪರೇಷನ್ಸ್ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ನೇಮಕಾತಿಯು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ನಡೆಯಲಿದ್ದು, ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ಹಂಬಲ ಉಳ್ಳವರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ.

ಬಿಇಎಲ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆ:

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತನ್ನ ಅಧಿಕೃತ ವೃತ್ತಿ ಪೋರ್ಟಲ್‌ನಲ್ಲಿ ಮೇ 20 ರಂದು ವಿವರವಾದ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಡ್ರೈವ್ ಮೂಲಕ ಒಟ್ಟು 56 ಫೀಲ್ಡ್ ಆಪರೇಷನ್ಸ್ ಇಂಜಿನಿಯರ್ (FOE) ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಕಂಪನಿಯ ಹೆಚ್‌ಎಲ್‌ಎಸ್ ಮತ್ತು ಎಸ್‌ಸಿಬಿ (HLS & SCB) ಸ್ಟ್ರಾಟೆಜಿಕ್ ಬಿಸಿನೆಸ್ ಯೂನಿಟ್‌ಗಳಲ್ಲಿ ನಿಯೋಜಿಸಲಾಗುವುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಯಶಸ್ವಿಯಾಗಿ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕವಾಗಿದೆ.

ಶೈಕ್ಷಣಿಕ ಅರ್ಹತೆ:

ಈ ನೇಮಕಾತಿಯಲ್ಲಿ ಇಂಜಿನಿಯರಿಂಗ್ ಪದವೀಧರರು ಹಾಗೂ ಎಂಸಿಎ (MCA) ಪದವಿ ಪಡೆದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ:

  • ಫೀಲ್ಡ್ ಇಂಜಿನಿಯರ್ ಹುದ್ದೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ (ECE), ದೂರಸಂಪರ್ಕ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಐಟಿ ಅಥವಾ ಸಂಬಂಧಿತ ವಿಭಾಗಗಳಲ್ಲಿ ಬಿಇ, ಬಿ.ಟೆಕ್, ಬಿಎಸ್ಸಿ ಇಂಜಿನಿಯರಿಂಗ್ ಅಥವಾ ಎಂಇ/ಎಂಟೆಕ್ ಪದವಿ ಪಡೆದಿರಬೇಕು. ಇದರೊಂದಿಗೆ ಎಂಸಿಎ ಮುಗಿಸಿದ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ.
  • ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಕಡ್ಡಾಯವಾಗಿ 4 ವರ್ಷಗಳ ಬಿಇ/ಬಿ.ಟೆಕ್/ಬಿಎಸ್ಸಿ ಇಂಜಿನಿಯರಿಂಗ್ ಪದವಿ ಅಗತ್ಯವಿದೆ.

ವಯೋಮಿತಿ ಮತ್ತು ಸಡಿಲಿಕೆ:

ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:

  • ಫೀಲ್ಡ್ ಇಂಜಿನಿಯರ್ ಹುದ್ದೆ: ಗರಿಷ್ಠ ವಯೋಮಿತಿ 40 ವರ್ಷಗಳು.
  • ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ವರ್ಷಗಳು.

(ಗಮನಿಸಿ: ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ).

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಎರಡು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆ:

ಅರ್ಹ ಅಭ್ಯರ್ಥಿಗಳನ್ನು ಒಟ್ಟು 100 ಅಂಕಗಳ ಮೌಲ್ಯಮಾಪನದ ಆಧಾರದ ಮೇಲೆ ಎರಡು ಪ್ರಮುಖ ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:

  • ಮೊದಲ ಹಂತ (ಲಿಖಿತ ಪರೀಕ್ಷೆ): ಅಭ್ಯರ್ಥಿಗಳ ತಾಂತ್ರಿಕ ಮತ್ತು ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲು 85 ಅಂಕಗಳ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.
  • ಎರಡನೇ ಹಂತ (ಸಂದರ್ಶನ): ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಯಶಸ್ವಿ ಅಭ್ಯರ್ಥಿಗಳನ್ನು 15 ಅಂಕಗಳ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
  • ಅಂತಿಮವಾಗಿ, ಈ ಎರಡೂ ಹಂತಗಳಲ್ಲಿ ಅಭ್ಯರ್ಥಿಗಳು ಪ್ರದರ್ಶಿಸಿದ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಮೆರಿಟ್ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳಿಗೆ ಬಿಇಎಲ್ ಸಲಹೆ:

ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳನ್ನು ತಪ್ಪಿಸಲು, ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು (Official Notification) ಎಚ್ಚರಿಕೆಯಿಂದ ಮತ್ತು ಸಂಪೂರ್ಣವಾಗಿ ಓದಿಕೊಳ್ಳಬೇಕೆಂದು ಬಿಇಎಲ್ (BEL) ಅಭ್ಯರ್ಥಿಗಳಿಗೆ ಸಲಹೆ ನೀಡಿದೆ. ಅರ್ಹತೆ, ಶುಲ್ಕ ಮತ್ತು ಅಗತ್ಯ ದಾಖಲೆಗಳ ವಿವರಗಳಿಗಾಗಿ ಹಾಗೂ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಇತ್ತೀಚಿನ ಹೊಸ ಮಾಹಿತಿ ಮತ್ತು ಅಪ್ಡೇಟ್‌ಗಳಿಗಾಗಿ ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Viral: ಕನಸು ನನಸಾದ ಕ್ಷಣ; ತನ್ನ ಅಜ್ಜಿಯನ್ನು ಮೈಕ್ರೋ ಸಾಫ್ಟ್ ಆಫೀಸ್ ತೋರಿಸಲು ಕರೆದೊಯ್ದ ಉದ್ಯೋಗಿ – Kannada News | Bengaluru: Microsoft employee shows his grandmother the Bengaluru office where he works

ಬೆಂಗಳೂರು, ಮೇ 22: ತಾವು ಚೆನ್ನಾಗಿ ಓದಬೇಕು, ಹೆತ್ತವರನ್ನು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಆಸೆಗಳನ್ನು ಈಡೇರಿಸಬೇಕು ಹೀಗೆ ಪ್ರತಿಯೊಬ್ಬರಿಗೆ ಇಂತಹ ಸಾಕಷ್ಟು ಆಸೆಗಳಿರುತ್ತವೆ. ಅಂತಹ ಕ್ಷಣ ಬಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರ ಜೀವನದಲ್ಲಿ ಭಾವನಾತ್ಮಕ ಕ್ಷಣವು ಎದುರಾಗಿದೆ. ಈ ವ್ಯಕ್ತಿ ತನ್ನ ಅಜ್ಜಿಯನ್ನು ಬೆಂಗಳೂರಿನ (Bengaluru) ಮೈಕ್ರೋಸಾಫ್ಟ್ ಆಫೀಸ್ ತೋರಿಸಲು ಕರೆದುಕೊಂಡು ಹೋಗಿದ್ದಾರೆ. ಈ ಭಾವನಾತ್ಮಕ ಕ್ಷಣದ ಪೋಸ್ಟ್ ಹಂಚಿಕೊಂಡು ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

Vyanktesh Bajaj ಎಂಬ ವ್ಯಕ್ತಿ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಜೀವನದ ಅಮೂಲ್ಯ ಕ್ಷಣದ ಪೋಸ್ಟ್ ಹಂಚಿಕೊಂಡಿದ್ದಾರೆ. ಸೀನಿಯರ್ ಮ್ಯಾನೇಜರ್ ಆಗಿ  ವ್ಯಂಕ್ತೇಶ್ ಬಜಾಜ್ ಅವರು ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೋಸ್ಟ್ ನಲ್ಲಿ, ಇಂದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿತ್ತು. ನಾನು ಮಹಾರಾಷ್ಟ್ರದ ಮಂಗ್ರುಲ್‌ಪಿರ್ ಎಂಬ ಸಣ್ಣ ಪಟ್ಟಣದಿಂದ ಬಂದಿದ್ದೇನೆ, ಅಲ್ಲಿ ಅವಕಾಶಗಳು ಹಾಗೂ ಕಾರ್ಪೊರೇಟ್ ಜಗತ್ತಿಗೆ ಒಡ್ಡಿಕೊಳ್ಳುವುದು ಏನೂ ಇರಲಿಲ್ಲ, ಮೆಟ್ರೋ-ನಗರ ಐಷಾರಾಮಿಗಳು ಸಹ ನಮಗೆ ದೂರವಿತ್ತು ಎಂದು ಹೇಳಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ನನ್ನ ಬಾಲ್ಯದಲ್ಲಿ, ನಾನು ಟಿವಿಯಲ್ಲಿ ನೋಡುತ್ತಿದ್ದ ಆ ಎತ್ತರದ ಗಾಜಿನ ಕಟ್ಟಡಗಳಲ್ಲಿ ಇರಬೇಕೆಂದು ಯಾವಾಗಲೂ ಕನಸು ಕಾಣುತ್ತಿದ್ದೆ. ಇಂದು, ನಾನು ನನ್ನ 81 ವರ್ಷದ ಅಜ್ಜಿಯನ್ನು ಬೆಂಗಳೂರಿನ ಮೈಕ್ರೋಸಾಫ್ಟ್ ಕ್ಯಾಂಪಸ್ ಗೆ ಕರೆದುಕೊಂಡು ಹೋಗಿದ್ದೆ. ಈ ಕಾರ್ಪೊರೇಟ್ ಜಗತ್ತನ್ನು ಒಳಗಿನಿಂದ ನೋಡಿದ್ದು ಇದೇ ಮೊದಲು. ತಂತ್ರಜ್ಞಾನ ಮತ್ತು ಕೆಲಸದ ಸ್ಥಳದ ವಾತಾವರಣವನ್ನು ಗಮನಿಸುತ್ತಾ ಅಜ್ಜಿ “ಶುದ್ಧ ಕುತೂಹಲ ಮತ್ತು ಆಶ್ಚರ್ಯ” ದಿಂದ ಸುತ್ತಲೂ ನೋಡುತ್ತಿದ್ದರು ಎಂದು ಆ ಕ್ಷಣವನ್ನು ವಿವರಿಸಿದ್ದಾರೆ.

ಇಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಹೇಗೆ ನಡೆಯುತ್ತದೆ? ಎಂದು ಅಜ್ಜಿ ನನ್ನನ್ನು ಕೇಳುತ್ತಲೇ ಇದ್ದರು. ತರಗತಿಗಳು ಎಂದಿಗೂ ಸಾಧ್ಯವಾಗದ ರೀತಿಯಲ್ಲಿ ಜೀವನವು ಅವಳಿಗೆ ಬುದ್ಧಿವಂತಿಕೆಯನ್ನು ಕಲಿಸಿತು. ತಲೆಮಾರುಗಳ ತ್ಯಾಗಗಳು ಸದ್ದಿಲ್ಲದೆ ಪೂರ್ಣ ವೃತ್ತಕ್ಕೆ ಬರುತ್ತಿವೆ” ಎಂಬುದರ ಸಂಕೇತವಾಗಿ ಕಚೇರಿ ಭೇಟಿ ಕಂಡುಬಂದಿದೆ. ಅಜ್ಜಿ ಮುಗುಳ್ನಕ್ಕು, ‘ನೀನು ತುಂಬಾ ಅರ್ಥಪೂರ್ಣ ಕೆಲಸ ಮಾಡುತ್ತಿದ್ದೀಯಾ ಎಂದು ಸರಳವಾಗಿ ಹೇಳಿದರು. ಆ ಒಂದು ವಾಕ್ಯವು ಯಾವುದೇ ಬಡ್ತಿ, ಶೀರ್ಷಿಕೆ ಅಥವಾ ಪ್ರಶಸ್ತಿಗಿಂತ ದೊಡ್ಡದಾಗಿದೆ ಎಂದು ಭಾವಿಸಿದೆ. ಇಂದು ನಾನು ಸ್ವಲ್ಪ ಎತ್ತರವಾಗಿದ್ದೇನೆ ಎಂದು ಭಾವಿಸಿದೆ. ನನ್ನ ಪದವಿ ಅಥವಾ ನನ್ನ ಅಧಿಕಾರಾವಧಿಯಿಂದಾಗಿ ಅಲ್ಲ, ಆದರೆ ನಾನು ಅವಳ ಕಣ್ಣುಗಳ ಮೂಲಕ ನನ್ನ ಜಗತ್ತನ್ನು ನೋಡಿದ್ದರಿಂದ. ಮಹಾರಾಷ್ಟ್ರದ ಒಂದು ಸಣ್ಣ ಪಟ್ಟಣವಾದ ಮಂಗ್ರುಲ್‌ಪಿರ್‌ನಿಂದ ಮೈಕ್ರೋಸಾಫ್ಟ್‌ನ ಕಾರಿಡಾರ್‌ಗಳವರೆಗೆ – ಇಂದು ವಿಶೇಷವೆನಿಸಿತು ಎಂದು ಅನುಭವವನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗಿಂತ ಜರ್ಮನಿಯೇ ಬೆಸ್ಟ್; ಬೆಂಗಳೂರಿನ ಟೆಕ್ಕಿ ಹೀಗೆಂದಿದ್ದೇಕೆ ಗೊತ್ತಾ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಎಲ್ಲರಿಗೂ ಇಂತಹ ಅವಕಾಶಗಳು ಬರುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರತಿಯೊಬ್ಬ ವ್ಯಕ್ತಿಗೂ ಇದು ಹೆಮ್ಮೆಯ ಕ್ಷಣ ಎಂದರೆ, ಮತ್ತೊಬ್ಬರು, ಅಜ್ಜಿಗೆ ಮೊಮ್ಮಗನ ಮೇಲೆ ಎಷ್ಟು ಹೆಮ್ಮೆ ಅನಿಸಿದ್ದೀರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:29 pm, Fri, 22 May 26

Source link

ಮೋದಿಯ ಮನವಿಗೆ ದನಿಗೂಡಿಸಿದ ಕಮಲ್ ಹಾಸನ್, ಹೇಳಿದ್ದೇನು? – Kannada News | Kamal Haasan explains why we must conserve energy amid conflict

ಕಮಲ್ ಹಾಸನ್ (Kamal Haasan) ಖ್ಯಾತ ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು. ಮಕ್ಕಳ್ ನಿಧಿ ಮಯಂ ಹೆಸರಿನ ಪಕ್ಷ ಸ್ಥಾಪಿಸಿದ್ದ ಕಮಲ್ ಹಾಸನ್ ಈಗ ಡಿಎಂಕೆ ಕೃಪೆಯಿಂದ ರಾಜ್ಯಸಭೆ ಸದಸ್ಯರೂ ಆಗಿದ್ದಾರೆ. ಸದಾ ಕೇಂದ್ರ ಸರ್ಕಾರವನ್ನು, ಬಿಜೆಪಿಯನ್ನು ಟೀಕಿಸುತ್ತಲೇ ಬರುತ್ತಿದ್ದ ಕಮಲ್ ಹಾಸನ್, ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಈ ಸಮಯದಲ್ಲಿ ರಾಜಕೀಯವನ್ನು ಬದಿಗೊತ್ತಿ ಪ್ರಧಾನಿ ಮೋದಿ ಮಾಡಿರುವ ಮನವಿಗೆ ತಾವೂ ದನಿಗೂಡಿಸಿದ್ದಾರೆ. ದೇಶದ ನಾಗರೀಕರಲ್ಲಿ ಖುದ್ದು ಮನವಿಯೊಂದನ್ನು ಮಾಡಿದ್ದಾರೆ. ನಾಗರೀಕರಿಗೆ ಕರೆಯನ್ನು ಸಹ ಕಮಲ್ ಹಾಸನ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಕಮಲ್ ಹಾಸನ್, ‘ಇರಾನ್ ಯುದ್ಧದ ಪರಿಣಾಮಗಳ ಬಗ್ಗೆ ಕಳವಳ ಹೊಂದಿರುವ ಒಬ್ಬ ಭಾರತೀಯನಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ತೈಲ ಬೆಲೆಗಳು ಏರುತ್ತಿವೆ, ಸಮುದ್ರ ವ್ಯಾಪಾರ ಮಾರ್ಗಗಳು ಮುಚ್ಚಲ್ಪಡುತ್ತಿವೆ, ನಮ್ಮ ಮನೆಗಳು ಮತ್ತು ಅಡುಗೆಮನೆಗಳಿಗೆ ಶಕ್ತಿ ನೀಡುವ ಇಂಧನ, ನಮ್ಮ ಹೊಲಗಳು ಮತ್ತು ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರಗಳು, ನಮ್ಮ ಕೈಗಾರಿಕೆಗಳು ಮತ್ತು ವಾಹನಗಳನ್ನು ಚಲಾಯಿಸುವ ಇಂಧನ ಇವೆಲ್ಲವೂ ದುಬಾರಿಯಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, 60 ಕ್ಕೂ ಹೆಚ್ಚು ದೇಶಗಳು ಈಗಾಗಲೇ ಇಂಧನ ಉಳಿತಾಯ ನಿಯಮಗಳನ್ನು ಜಾರಿಗೆ ತಂದಿವೆ’

‘ಇತ್ತೀಚೆಗೆ, ಸಿಂಗಪುರದ ಪ್ರಧಾನಮಂತ್ರಿಗಳು ತಮ್ಮ ಜನರಿಗೆ ಮುಂದಿನ ಕಠಿಣ ದಿನಗಳಿಗೆ ಸಿದ್ಧರಾಗುವಂತೆ ಹೇಳಿರುವುದನ್ನು ಕೇಳಿದ್ದೇವೆ. ನಾವು ಅದಕ್ಕಿಂತಲೂ ದೊಡ್ಡ ದೇಶವಾಗಿದ್ದೇವೆ ಮತ್ತು ನಮ್ಮ ಪ್ರಧಾನಮಂತ್ರಿಗಳು ಮುಂದಿನ ಒಂದು ವರ್ಷದವರೆಗೆ ಇಂಧನವನ್ನು ಉಳಿಸುವಂತೆ ನಮ್ಮನ್ನು ಕೇಳಿದ್ದಾರೆ. ಇಂತಹ ಸಮಯದಲ್ಲಿ, ರಾಷ್ಟ್ರೀಯ ಜವಾಬ್ದಾರಿ ಪಕ್ಷ ರಾಜಕೀಯಕ್ಕಿಂತ ಮೇಲಿರಬೇಕು. ಶ್ರೀ ವಾಜಪೇಯಿ ಅವರು ಹೇಳಿದಂತೆ, ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ದೇಶ ಶಾಶ್ವತವಾಗಿರುತ್ತದೆ. 1962ರ ಚೀನಾ ಯುದ್ಧದ ಸಮಯದಲ್ಲಿ, ಗಡಿಯಲ್ಲಿ ಹೋರಾಡುತ್ತಿದ್ದ ನಮ್ಮ ಸೈನಿಕರಿಗೆ ಬೆಂಬಲವಾಗಿ ನಾವು ನಮ್ಮ ಮನೆಗಳಿಂದ ಚಿನ್ನವನ್ನು ದಾನ ಮಾಡಿದ್ದೆವು. 1965ರಲ್ಲಿ ಭಾರತದಲ್ಲಿ ಆಹಾರ ಧಾನ್ಯಗಳ ಕೊರತೆಯಿದ್ದಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕಾಗಿ ವಾರಕ್ಕೆ ಒಂದು ಊಟವನ್ನು ತ್ಯಜಿಸುವಂತೆ ನಾಗರಿಕರಿಗೆ ಮನವಿ ಮಾಡಿದ್ದರು’

ಇದನ್ನೂ ಓದಿ:ಚಲನಚಿತ್ರ ರಂಗಕ್ಕೆ ಕಮಲ್ ಹಾಸನ್ ಮನವಿ: ನೀಡಿದ ಸಲಹೆ ಏನು?

‘ಇಂದು ಭಾರತಕ್ಕೆ ಅಂತಹ ತ್ಯಾಗದ ಅಗತ್ಯವಿಲ್ಲ. ಆದರೆ ನಮ್ಮ ಪೋಷಕರು ದೇಶಕ್ಕಾಗಿ ಇನ್ನೂ ಹೆಚ್ಚಿನ ತ್ಯಾಗ ಮಾಡಿರುವಾಗ, ನಾವು ಇದನ್ನಾದರೂ ದೇಶಕ್ಕಾಗಿ ಮಾಡಲೇಬೇಕು. ಒಬ್ಬ ಮಧ್ಯಮ ಮಾರ್ಗದ ವ್ಯಕ್ತಿಯಾಗಿ, ನನ್ನ ರಾಜಕೀಯ ಸಂಬಂಧಗಳನ್ನು ಮೀರಿ ಒಳ್ಳೆಯ ಕೆಲಸಗಳನ್ನು ನಾನು ಒಪ್ಪಿಕೊಳ್ಳಲೇಬೇಕು. ಪ್ರಧಾನಮಂತ್ರಿಗಳ ನಾಯಕತ್ವದಲ್ಲಿ ಕಳೆದ ದಶಕದಲ್ಲಿ ಭಾರತದ ಸೌರ ಮತ್ತು ಗಾಳಿ ಶಕ್ತಿ ಸಾಮರ್ಥ್ಯ ಹೆಚ್ಚಾಗಿದೆ. ಕಲ್ಲಿದ್ದಲು ಅನಿಲೀಕರಣ, ನವೀಕರಿಸಬಹುದಾದ ಶಕ್ತಿ ಮತ್ತು ಅಣುಶಕ್ತಿಯ ಮೇಲಿನ ಇತ್ತೀಚಿನ ಹೂಡಿಕೆಗಳು ನನಗೆ ಆಶಾದಾಯಕವಾಗಿ ಕಾಣುತ್ತಿವೆ. ವಿದೇಶಿ ತೈಲ ಮತ್ತು ಅನಿಲದ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ಇವು ಪ್ರಮುಖ ಹೆಜ್ಜೆಗಳಾಗಿವೆ’

‘ಅದೇ ಸಮಯದಲ್ಲಿ, ತ್ಯಾಗವನ್ನು ಕೇವಲ ನಾಗರಿಕರಿಂದ ಮಾತ್ರ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರಗಳೂ ಈ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕು. ಆದ್ದರಿಂದ, ಎಲ್ಲಾ ಮುಖ್ಯಮಂತ್ರಿಗಳ ರಾಷ್ಟ್ರೀಯ ಸಭೆಯನ್ನು ಕರೆಯುವಂತೆ ನಾನು ಪ್ರಧಾನಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಸಾಮಾನ್ಯ ಜನರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ತಕ್ಷಣ ಎರಡು ಕೆಲಸಗಳನ್ನು ಮಾಡಬೇಕು. ಮೊದಲನೆಯದಾಗಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್‌ನಂತಹ ರಾಜ್ಯ ತೆರಿಗೆಗಳನ್ನು ಕಡಿಮೆ ಮಾಡಬೇಕು. ಎರಡನೆಯದಾಗಿ, ರೈಲು, ಮೆಟ್ರೋ ಮತ್ತು ಬಸ್ ದರಗಳನ್ನು ಕಡಿಮೆ ಮಾಡಬೇಕು, ಇದರಿಂದ ಹೆಚ್ಚು ಜನರು ಖಾಸಗಿ ವಾಹನಗಳಿಂದ ಸಾರ್ವಜನಿಕ ಸಾರಿಗೆ ಕಡೆಗೆ ಬದಲಾಗಲು ಸಾಧ್ಯವಾಗುತ್ತದೆ’

‘ಇಂದು ಉಳಿಸಿದ ಪ್ರತಿಯೊಂದು ಇಂಧನ ಘಟಕವೂ ನಾಳೆಯ ಭಾರತವನ್ನು ಬಲಪಡಿಸುತ್ತದೆ ಎಂಬುದನ್ನು ನೆನಪಿಡಿ. ಮತ್ತು ಉಳಿಸಿದ ಪ್ರತಿಯೊಂದು ಹನಿ ತೈಲವೂ ಹಣದುಬ್ಬರದಿಂದ ಅತ್ಯಂತ ಬಡ ಭಾರತೀಯನನ್ನು ರಕ್ಷಿಸುತ್ತದೆ. ಜಾಗತಿಕ ರಾಜಕೀಯದ ಪರಿಣಾಮಗಳು ಶ್ರೀಮಂತರಷ್ಟೇ ಬೀದಿಯಲ್ಲಿ ನಡೆಯುವ ಸಾಮಾನ್ಯ ಜನರ ಮೇಲೂ ಬೀಳುತ್ತವೆ. ಆದರೆ ನಾವು ಈ ಸಂಕಷ್ಟವನ್ನು ಒಗ್ಗಟ್ಟಿನಿಂದ ಎದುರಿಸಿದರೆ, ಭಾರತ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಬಹುದು’ ಎಂದಿದ್ದಾರೆ ಕಮಲ್ ಹಾಸನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version