ನೈಜರ್​ನ ಅಂತಾರಾಷ್ಟ್ರೀಯ ಏರ್​ಪೋರ್ಟ್​​ನಲ್ಲಿ ಗುಂಡಿನ ದಾಳಿ, 13 ಮಂದಿ ಸಾವು – Kannada News | Niger Airport Attack: 13 Dead in Al Qaeda Claimed Niamey Violence

ನೈಜರ್, ಜೂನ್ 19: ಪಶ್ಚಿಮ ಆಫ್ರಿಕಾದ ನೈಜರ್​ನ ನಿಯಾಮಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ(Firing) ನಡೆದಿದ್ದು, ಘಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯಲ್ಲಿ ಇಪ್ಪತ್ತೆರಡು ಶಸ್ತ್ರಸಜ್ಜಿತ ದಾಳಿಕೋರರು ಸಹ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 20 ಶಂಕಿತರನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಅಲ್ ಖೈದಾ ಉಗ್ರ ಗುಂಪು ನೈಜರ್ ರಾಜಧಾನಿಯಲ್ಲಿರುವ ವಿಮಾನ ನಿಲ್ದಾಣ ಮತ್ತು ಮಿಲಿಟರಿ ವಾಯುನೆಲೆಯ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಗುರುವಾರ ನಿಯಾಮಿಯಲ್ಲಿ ಬೆಳಗ್ಗೆ 6 ಗಂಟೆಗೆ ಗುಂಡಿನ ದಾಳಿ ಶುರುವಾಗಿತ್ತು, ಎರಡು ಗಂಟೆಗೂ ಹೆಚ್ಚಿನ ಕಾಲ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ವರ್ಷ ವಿಮಾನ ನಿಲ್ದಾಣದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.

ಅಲ್​ ಖೈದಾ ಸಂಗ ಸಂಸ್ಥೆಯಾದ ಜಮಾತ್ ನುಸ್ರತ್ ಅಲ್ ಇಸ್ಲಾಂ ವಾಲ್ ಮುಸ್ಲಿಮೀನ್ ತನ್ನ ಅಧಿಕೃತ ಮಾಧ್ಯಮ ವಿಭಾಗವಾದ ಅಜ್ ಜಲ್ಲಕಾ ಫೌಂಡೇಶನ್ ಮೂಲಕ ಹೇಳಿಕೆಯನ್ನು ಪ್ರಕಟಿಸಿದೆ.
ಜೆಎನ್​ಐಎಂ ಬುರ್ಕಿನಾ ಫಾಸೊ ಮತ್ತು ಮಾಲಿಯಲ್ಲೂ ಈ ಗುಂಪು ಸಕ್ರಿಯವಾಗಿದೆ. ಅಲ್ಲಿ ಅದು ಏಪ್ರಿಲ್​ನಲ್ಲಿ ರಾಷ್ಟ್ರವ್ಯಾಪಿ ದಾಳಿಗಳನ್ನು ನಡೆಸಿತ್ತು. ರಾಜಧಾನಿ ಬಮಾಕೊದ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿ, ರಕ್ಷಣಾ ಸಚಿವರನ್ನು ಕೊಂದು, ಹಲವಾರು ಸೇನಾ ನೆಲೆಗಳನ್ನು ವಶಪಡಿಸಿಕೊಂಡಿತ್ತು.

ಮತ್ತಷ್ಟು ಓದಿ:

ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ: ಪ್ರತಿದಾಳಿಗೆ ಆಗಂತುಕ ಸಾವು

ಈ ದಾಳಿಯಲ್ಲಿ 11 ಭದ್ರತಾ ಪಡೆಗಳ ಸದಸ್ಯರು ಹಾಗೂ ಇಬ್ಬರು ನಾಗಕರಿಕರು ಸಾವನ್ನಪ್ಪಿದ್ದರು. ಸರ್ಕಾರಿ ಪಡೆಗಳು ದಾಳಿಯನ್ನು ಹಿಮ್ಮೆಟ್ಟಿಸಿ 22 ದಾಳಿಕೋರರನ್ನು ಕೊಂದಿವೆ. ಆದರೆ ಸುಮಾರು 20 ಜನರನ್ನು ಬಂಧಿಸಲಾಗಿದೆ. ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ನೈಜರ್, ತನ್ನ ನೆರೆಯ ಮಾಲಿ ಮತ್ತು ಬುರ್ಕಿನಾ ಫಾಸೊದಂತೆ, ಮೂರು ದೇಶಗಳಲ್ಲಿ ಸಾವಿರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಸ್ಥಳಾಂತರಿಸಿರುವ ಜಿಹಾದಿ ಗುಂಪುಗಳ ದಾಳಿಯನ್ನು ತಡೆಯಲು ಹೆಣಗಾಡುತ್ತಿದೆ. ನಿಯಾಮಿಯಲ್ಲಿ ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಬಹುತೇಕ ಶಾಂತವಾಗಿ ಕಂಡುಬಂದಿತ್ತು ಎಂದು ಸುದ್ದಿಸಂಸ್ಥೆ ರಾಯ್ಟರ್ಸ್​ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ ಎಂದು ನೈಜರ್ ನಾಗರಿಕ ವಿಮಾನಯಾನ ಸಂಸ್ಥೆ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ. ಮಿಲಿಟರಿ ಆಸ್ತಿಗಳಿಗೆ ಆಗಿರುವ ಹಾನಿಯ ಪ್ರಮಾಣ ಸ್ಪಷ್ಟವಾಗಿಲ್ಲ.

ನಿಯಾಮಿ ವಿಮಾನ ನಿಲ್ದಾಣ ಮತ್ತು ಮಿಲಿಟರಿ ವಾಯುನೆಲೆ ಒಂದೇ ಸಂಕೀರ್ಣದಲ್ಲಿದ್ದು, ನಾಗರಿಕ ಟರ್ಮಿನಲ್ ಎದುರು ಬೇಸ್ ಇದೆ. ಜನವರಿಯಲ್ಲಿ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡ ಐಎಸ್‌ಎಸ್‌ಪಿ, ಏರ್ ಕಮಾಂಡ್ ಪ್ರಧಾನ ಕಚೇರಿ ಮತ್ತು ಡ್ರೋನ್ ಸ್ವತ್ತುಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ನೈಜರ್‌ನ ದಂಗೆ ನಿಗ್ರಹ ಕಾರ್ಯಾಚರಣೆಗಳಿಗೆ ನೇರ ಹೊಡೆತ ನೀಡಿದೆ ಎಂದು ಹೇಳಿಕೊಂಡಿದೆ. ಗುರುವಾರದ ದಾಳಿಯಿಂದ ಉಂಟಾದ ಹಾನಿಯ ಪ್ರಮಾಣ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಮ್ಮ ಮೆಟ್ರೋ ರೆಡ್ ಲೈನ್ ವೆಚ್ಚ ಕಡಿತಕ್ಕೆ ಒಂದು ಸ್ಟೇಷನನ್ನೇ ಕೈಬಿಡಲು ನಿರ್ಧರಿಸಿದ ಬಿಎಂಆರ್​ಸಿಎಲ್! – Kannada News | Bengaluru Metro Red Line: BMRCL Drops One Underground Station to Cut Costs by Rs 2,920 Crore for Central Approval

ರೆಡ್ ಲೈನ್ ಮೆಟ್ರೋ ಮಾರ್ಗImage Credit source: tv9

ಬೆಂಗಳೂರು, ಜೂನ್ 19: ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ನೀಡಲಿರುವ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ಮೆಟ್ರೋ ‘ರೆಡ್ ಲೈನ್’ (Red Line Metro) ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಳ್ಳಲು ಬಿಎಂಆರ್‌ಸಿಎಲ್ (BMRCL) ಮಹತ್ವದ ಹೆಜ್ಜೆ ಇಟ್ಟಿದೆ. ಈ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿಯ (DPR) ಅಂದಾಜು ವೆಚ್ಚ ಅತಿ ಹೆಚ್ಚಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎರಡು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ನಿಯಮಾವಳಿಗಳಿಗೆ ಪೂರಕವಾಗಿರಲು ಹಾಗೂ ಯೋಜನೆಯನ್ನು ಹಳಿಗೆ ತರಲು ಬಿಎಂಆರ್‌ಸಿಎಲ್ ಸುಮಾರು 2,920 ಕೋಟಿ ರೂಪಾಯಿಗಳ ವೆಚ್ಚವನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಇದಕ್ಕಾಗಿ ಮಾರ್ಗದಲ್ಲಿದ್ದ ಒಂದು ಪ್ರಮುಖ ನಿಲ್ದಾಣವನ್ನೇ ಕೈಬಿಡಲು ಮುಂದಾಗಿದೆ.

ಮುಖ್ಯಾಂಶಗಳು

  • ವೆಚ್ಚ ಕಡಿತಕ್ಕೆ ಬಿಎಂಆರ್‌ಸಿಎಲ್ ಬಿಗ್ ಪ್ಲಾನ್.
  • ಪಶು ವೈದ್ಯಕೀಯ ಕಾಲೇಜು ನಿಲ್ದಾಣ ಕಡಿತ.
  • ಕೇಂದ್ರದಿಂದ ಶೀಘ್ರದಲ್ಲೇ ಸಿಗಲಿದೆ ಗ್ರೀನ್ ಸಿಗ್ನಲ್.

ಪಶು ವೈದ್ಯಕೀಯ ಕಾಲೇಜು ನಿಲ್ದಾಣಕ್ಕೆ ಕೊಕ್

ಸರ್ಜಾಪುರದಿಂದ ಹೆಬ್ಬಾಳ ನಡುವಿನ ಒಟ್ಟು 37 ಕಿಲೋಮೀಟರ್ ಉದ್ದದ ಈ ಯೋಜನೆಗೆ 2024ರಲ್ಲಿ ರಾಜ್ಯ ಸರ್ಕಾರ 28,405 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಒಪ್ಪಿಗೆ ನೀಡಿತ್ತು. ಅಂದರೆ ಪ್ರತಿ ಕಿಲೋಮೀಟರ್‌ಗೆ ಅಂದಾಜು 776.3 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಇದರಲ್ಲಿ 17 ಎಲಿವೇಟೆಡ್ (ಮೇಲ್ಸೇತುವೆ) ಮತ್ತು 11 ಅಂಡರ್‌ಗ್ರೌಂಡ್ (ಸುರಂಗ) ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೇಂದ್ರದ ಆಕ್ಷೇಪದ ಬಳಿಕ ರಚನೆಯಾದ ಸ್ವತಂತ್ರ ಸಮಿತಿಯ ಶಿಫಾರಸಿನ ಮೇರೆಗೆ, ಮೇಖ್ರಿ ಸರ್ಕಲ್ ಹಾಗೂ ಗಂಗಾನಗರ ನಡುವೆ ನಿರ್ಮಾಣವಾಗಬೇಕಿದ್ದ ‘ಪಶು ವೈದ್ಯಕೀಯ ಕಾಲೇಜು (Veterinary College)’ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣವನ್ನು ಪರಿಷ್ಕೃತ ವರದಿಯಲ್ಲಿ ಕೈಬಿಡಲಾಗಿದೆ. ಬಿಎಂಆರ್‌ಸಿಎಲ್‌ನ ಈ ನಿರ್ಧಾರಕ್ಕೆ ಆ ಭಾಗದ ಪ್ರಯಾಣಿಕರು ಕೊಂಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಾಧ್ಯತೆ

ಭೂಸ್ವಾಧೀನ, ಸುರಂಗ ಕೊರೆಯುವಿಕೆ, ಹಳಿ ಜೋಡಣೆ, ಸಿಗ್ನಲಿಂಗ್, ವಿದ್ಯುತ್ ಸರಬರಾಜು ಮತ್ತು ರೈಲು ಕೋಚ್‌ಗಳ ಪೂರೈಕೆ ಸೇರಿದಂತೆ 13 ಪ್ರಮುಖ ಅಂಶಗಳನ್ನು ಆಧರಿಸಿ ಬಿಎಂಆರ್‌ಸಿಎಲ್ ಈ ಹಿಂದೆ ವೆಚ್ಚವನ್ನು ಸಮರ್ಥಿಸಿಕೊಂಡಿತ್ತು. ಆದರೆ ಯೋಜನೆ ಮತ್ತಷ್ಟು ವಿಳಂಬವಾಗುವುದನ್ನು ತಪ್ಪಿಸಲು ಸದ್ಯ 2,920 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಿ ಹೊಸ ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ಪರಿಷ್ಕೃತ ವರದಿಯನ್ನು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತಿದ್ದು, ವೆಚ್ಚ ಕಡಿಮೆಯಾಗಿರುವುದರಿಂದ ಈ ಬಾರಿ ಕೇಂದ್ರ ಸಚಿವಾಲಯದಿಂದ ‘ರೆಡ್ ಲೈನ್’ ಯೋಜನೆಗೆ ಶೀಘ್ರದಲ್ಲೇ ಹಸಿರು ನಿಶಾನೆ ಸಿಗುವ ದಟ್ಟ ಮುನ್ಸೂಚನೆ ಇದೆ. ಯೋಜನೆಗೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Breaking News Today Live: ಅತಿಯಾದ ನಂಬಿಕೆಯೇ ಆಘಾತ ತಂದಿದೆ ಎಂದು ಹೆಚ್​.ಡಿ.ಕುಮಾರಸ್ವಾಮಿ

ಬೆಂಗಳೂರು, ಜೂ.19: ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗಿದ್ದ, ವಿಧಾನ ಪರಿಷತ್​​ ಚುನಾವಣೆಗೆ ಕೊನೆಗೂ ತೆರೆಬಿದ್ದಿದೆ. ಆಡಳಿತ ಪಕ್ಷ ಕಾಂಗ್ರೆಸ್​​ಗೆ ಗೆಲುವಿನ ಸಂತಸ ತಂದರೆ, ವಿರೋಧ ಪಕ್ಷಗಳಿಗೆ ಸೋಲಿನ ರುಚಿ ತೋರಿಸಿದೆ. ಅದರಲ್ಲೂ ಕಾಂಗ್ರೆಸ್​​ ಹಾಗೂ ಜೆಡಿಎಸ್​ ನಡುವೆ ಇದ್ದ ಪೈಪೋಟಿಯಲ್ಲಿ ಜೆಡಿಎಸ್​​ ಸೋತಿದೆ. ಈ ಬಗ್ಗೆ ಕೇಂದ್ರ ಸಚಿವ ಹೆಚ್​​​​.ಡಿ ಕುಮಾರಸ್ವಾಮಿ ಆರೋಪಗಳನ್ನು ಮಾಡಿದ್ದಾರೆ. ಇನ್ನೊಂದು ಕಡೆ ಈ ಬಗ್ಗೆ ರಾಷ್ಟ್ರ ರಾಜಕಾರಣದಲ್ಲೂ ಭಾರೀ ಚರ್ಚೆಗಳು ನಡೆದಿದೆ. ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಉಭಯ ರಾಜ್ಯಗಳ ನಡುವೆ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ತಮಿಳುನಾಡಿನ ನೂತನ ಸಿಎಂ ಜೋಸೆಫ್ ವಿಜಯ್ ಸರ್ಕಾರವು ಯೋಜನೆಯನ್ನು ಬಲವಾಗಿ ವಿರೋಧಿಸುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ಕ್ಯಾತೆಗೆ ತಕ್ಕ ತಿರುಗೇಟು ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಯುದ್ಧ ಒಪ್ಪಂದ ಹಾಗೂ ಶಾಂತಿ ಸ್ಥಾಪನೆಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಈ ಹೊತ್ತಿನ  ಪ್ರಮುಖ ಸುದ್ದಿಗಳು ಇಲ್ಲಿದೆ ನೋಡಿ.

Source link

ಜೂನ್ 21ರ ರಹಸ್ಯ: ವರ್ಷದ ಅತಿ ಉದ್ದದ ದಿನದ ಖಗೋಳ ಮತ್ತು ಆಧ್ಯಾತ್ಮಿಕ ಮಹತ್ವ – Kannada News | June 21: Summer Solstice, Longest Day and International Yoga Day Significance Explained

ವರ್ಷದ ಅತಿ ಉದ್ದದ ದಿನImage Credit source: Pinterest

ಪ್ರತಿ ವರ್ಷ ಜೂನ್ 21 ಬಂತೆಂದರೆ ಜಗತ್ತಿನಾದ್ಯಂತ ಒಂದು ವಿಶೇಷ ಸಂಚಲನ ಮೂಡುತ್ತದೆ. ಇದು ಸಾಮಾನ್ಯ ದಿನವಲ್ಲ, ಖಗೋಳ ವಿಜ್ಞಾನ ಮತ್ತು ಆಧ್ಯಾತ್ಮಿಕ ಜಗತ್ತುಗಳೆರಡರಲ್ಲೂ ಅತ್ಯಂತ ಪ್ರಮುಖ ತಿರುವು ನೀಡುವ ಅಪರೂಪದ ದಿನ. ಒಂದೆಡೆ ವಿಶ್ವಾದ್ಯಂತ ಈ ದಿನವನ್ನು ‘ಅಂತರರಾಷ್ಟ್ರೀಯ ಯೋಗ ದಿನ‘ ಎಂದು ಸಂಭ್ರಮದಿಂದ ಆಚರಿಸಿದರೆ, ಮತ್ತೊಂದೆಡೆ ಪ್ರಕೃತಿಯಲ್ಲಿ ದೊಡ್ಡ ಬದಲಾವಣೆಯೊಂದು ಸಂಭವಿಸುತ್ತದೆ. ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ಹಗಲು ಮತ್ತು ಅತಿ ಕಡಿಮೆ ಅವಧಿಯ ರಾತ್ರಿ ಮೂಡುವುದು ಇದೇ ದಿನದಂದು. ಭಾರತೀಯ ಸನಾತನ ಸಂಪ್ರದಾಯದಲ್ಲೂ ಈ ಕಾಲಘಟ್ಟಕ್ಕೆ ವಿಶೇಷ ಪೌರಾಣಿಕ ಮಹತ್ವವಿದೆ.

ಜೂನ್ 21 ವರ್ಷದ ಅತಿ ಉದ್ದದ ಹಗಲು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ:

ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ತನ್ನದೇ ಅಕ್ಷದ ಮೇಲೆ ಸುಮಾರು 23.5 ಡಿಗ್ರಿ ಕೋನದಲ್ಲಿ ಓರೆಯಾಗಿ ವಾಲಿಕೊಂಡಿರುತ್ತದೆ. ಈ ಓರೆಯೇ ನಮ್ಮ ಭೂಮಿಯ ಮೇಲೆ ಋತುಮಾನಗಳ ಬದಲಾವಣೆಗೆ ಮತ್ತು ಹಗಲು-ರಾತ್ರಿಗಳ ಅವಧಿಯ ಏರುಪೇರಿಗೆ ಮುಖ್ಯ ಕಾರಣ. ಜೂನ್ 21 ರಂದು, ಭೂಮಿಯ ಉತ್ತರ ಗೋಳಾರ್ಧವು ಸೂರ್ಯನ ಕಡೆಗೆ ಗರಿಷ್ಠ ಪ್ರಮಾಣದಲ್ಲಿ ವಾಲುತ್ತದೆ. ಇದರ ಪರಿಣಾಮವಾಗಿ, ಸೂರ್ಯನ ನೇರ ಕಿರಣಗಳು ಕರ್ಕಾಟಕ ವೃತ್ತದ (Tropic of Cancer) ಮೇಲೆ ಬೀಳುತ್ತವೆ. ಆಕಾಶದಲ್ಲಿ ಸೂರ್ಯನು ಅತಿ ಹೆಚ್ಚು ಸಮಯದವರೆಗೆ ಗೋಚರಿಸುವುದರಿಂದ, ಭಾರತ ಸೇರಿದಂತೆ ಉತ್ತರ ಗೋಳಾರ್ಧದ ಅನೇಕ ದೇಶಗಳಲ್ಲಿ ಈ ದಿನ ಸುಮಾರು 13 ರಿಂದ 14 ಗಂಟೆಗಳ ಕಾಲ ಸುದೀರ್ಘ ಹಗಲು ಇರುತ್ತದೆ.

ಬೇಸಿಗೆಯ ಅಯನ ಸಂಕ್ರಾಂತಿ (Summer Solstice) ಎಂದರೇನು?

ಖಗೋಳಶಾಸ್ತ್ರದ ಭಾಷೆಯಲ್ಲಿ ಈ ವಿದ್ಯಮಾನವನ್ನು ‘ಬೇಸಿಗೆಯ ಅಯನ ಸಂಕ್ರಾಂತಿ’ ಅಥವಾ ‘ಸಮ್ಮರ್ ಸಾಲ್ಸ್‌ಟಿಸ್’ ಎಂದು ಕರೆಯಲಾಗುತ್ತದೆ. ಇಲ್ಲಿ ‘ಅಯನ ಸಂಕ್ರಾಂತಿ’ ಎಂದರೆ ಸೂರ್ಯನ ಚಲನೆಯ ದಿಕ್ಕಿನಲ್ಲಿ ಉಂಟಾಗುವ ದೊಡ್ಡ ಬದಲಾವಣೆ. ಈ ನಿರ್ದಿಷ್ಟ ದಿನದಂದು ಸೂರ್ಯನು ಉತ್ತರ ದಿಕ್ಕಿನಲ್ಲಿ ತನ್ನ ಗರಿಷ್ಠ ಸ್ಥಾನವನ್ನು ತಲುಪುತ್ತಾನೆ. ಈ ಗರಿಷ್ಠ ಬಿಂದುವನ್ನು ತಲುಪಿದ ನಂತರ, ಸೂರ್ಯನ ಪಥವು ಕ್ರಮೇಣ ದಕ್ಷಿಣದ ಕಡೆಗೆ ಮುಖ ಮಾಡುತ್ತದೆ. ಹೀಗಾಗಿ, ಜೂನ್ 21 ಮುಗಿಯುತ್ತಿದ್ದಂತೆ ಹಗಲಿನ ಅವಧಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗುತ್ತದೆ ಮತ್ತು ರಾತ್ರಿಯ ಅವಧಿ ದೀರ್ಘವಾಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಜೂನ್ 21ರ ನಂತರ ‘ದೇವತೆಗಳ ರಾತ್ರಿ’ ಆರಂಭವಾಗುವುದು ಏಕೆ?

ಭಾರತೀಯ ಜ್ಯೋತಿಷ್ಯ ಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳ ಪ್ರಕಾರ, ಸೂರ್ಯನ ವಾರ್ಷಿಕ ಚಲನೆಯನ್ನು ‘ಉತ್ತರಾಯಣ’ ಮತ್ತು ‘ದಕ್ಷಿಣಾಯನ’ ಎಂಬ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಜನವರಿಯ ಮಕರ ಸಂಕ್ರಾಂತಿಯಿಂದ ಆರಂಭವಾಗುವ ಆರು ತಿಂಗಳ ಅವಧಿಯನ್ನು ಉತ್ತರಾಯಣ ಎನ್ನಲಾಗುತ್ತದೆ, ಇದನ್ನು ದೇವತೆಗಳ ಹಗಲು ಎಂದು ನಂಬಲಾಗಿದೆ. ಇನ್ನು ಜೂನ್ 21 ರ ಬೇಸಿಗೆಯ ಅಯನ ಸಂಕ್ರಾಂತಿಯ ನಂತರ ಸೂರ್ಯನು ದಕ್ಷಿಣದ ಕಡೆಗೆ ಚಲಿಸಲು ಆರಂಭಿಸುವುದರಿಂದ ‘ದಕ್ಷಿಣಾಯನ’ ಕಾಲ ಪ್ರಾರಂಭವಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಕ್ಷಿಣಾಯನದ ಅವಧಿಯು ‘ದೇವತೆಗಳ ರಾತ್ರಿ’ಯ ಸಂಕೇತವಾಗಿದೆ. ಆಧ್ಯಾತ್ಮಿಕವಾಗಿ ಇದನ್ನು ದೇವತೆಗಳ ವಿಶ್ರಾಂತಿಯ ಸಮಯ ಎಂದೂ ಪರಿಗಣಿಸಲಾಗುತ್ತದೆ.

ಆಧ್ಯಾತ್ಮಿಕ ಸಾಧನೆ ಮತ್ತು ಯೋಗ ದಿನಕ್ಕಿರುವ ನಂಟು:

ಹಿಂದೂ ಧರ್ಮ ಮತ್ತು ಯೋಗ ಪರಂಪರೆಯಲ್ಲಿ ಸೂರ್ಯನನ್ನು ಕೇವಲ ನಕ್ಷತ್ರವಾಗಿ ನೋಡದೆ, ಚೈತನ್ಯ, ಜಾಗೃತ ಪ್ರಜ್ಞೆ ಮತ್ತು ಜ್ಞಾನದ ಸಾಕಾರ ರೂಪವಾಗಿ ಆರಾಧಿಸಲಾಗುತ್ತದೆ. ಸೂರ್ಯನ ಶಕ್ತಿ ಮತ್ತು ಪ್ರಖರತೆ ಭೂಮಿಯ ಮೇಲೆ ಗರಿಷ್ಠ ಮಟ್ಟದಲ್ಲಿರುವ ಈ ಅಯನ ಸಂಕ್ರಾಂತಿಯ ಸಮಯವನ್ನು ಧ್ಯಾನ, ಯೋಗಾಭ್ಯಾಸ ಮತ್ತು ಆತ್ಮಾವಲೋಕನಕ್ಕೆ ಅತ್ಯಂತ ಶುಭ ಹಾಗೂ ಸಕಾರಾತ್ಮಕ ಸಮಯ ಎಂದು ಯೋಗಿಗಳು ಗುರುತಿಸಿದ್ದಾರೆ. ಈ ಅವಧಿಯಲ್ಲಿ ಬ್ರಹ್ಮಾಂಡದಲ್ಲಿ ಉಂಟಾಗುವ ಶಕ್ತಿಯ ಸ್ಥಿತ್ಯಂತರಗಳು ಮನುಷ್ಯನ ಆಧ್ಯಾತ್ಮಿಕ ಪ್ರಗತಿಗೆ ಪೂರಕವಾಗಿರುತ್ತವೆ. ಇದೇ ಪ್ರಕೃತಿಯ ನಿಯಮವನ್ನು ಗೌರವಿಸಿ, ಜೂನ್ 21 ಅನ್ನು ಜಾಗತಿಕವಾಗಿ ‘ಅಂತರರಾಷ್ಟ್ರೀಯ ಯೋಗ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘3 ಇಡಿಯಟ್ಸ್’ ಸೀಕ್ವೆಲ್ ಕಥೆ ರಿವೀಲ್; ಮುಂದುವರಿಯಲಿದೆ ರಾಂಚೋ, ಫರ್ಹಾನ್ ಮತ್ತು ರಾಜು ಪಾತ್ರ – Kannada News | 3 Idiots 2 Confirmed Hirani Reveals Mid Life Crisis Plot and Aamir Khan’s Return

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ‘3 ಇಡಿಯಟ್ಸ್’ (3 Idiots) ಸಿನಿಮಾ ಬಿಡುಗಡೆಯಾಗಿ ಹಲವು ವರ್ಷಗಳ ಬಳಿಕ, ಅದರ ಮುಂದುವರಿದ ಭಾಗ ಬರುತ್ತಿದೆ. ಈ ಕುರಿತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅತ್ಯಂತ ಆಸಕ್ತಿದಾಯಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಶಿಕ್ಷಣ ಪದ್ಧತಿಯ ಮೇಲಿನ ವಿಡಂಬನೆ ಹಾಗೂ ‘ಆಲ್ ಈಸ್ ವೆಲ್’ ಎಂಬ ಐಕಾನಿಕ್ ಡೈಲಾಗ್ ಮೂಲಕ ದೇಶಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಹಿರಾನಿ, ತಾವು ಮತ್ತು ಲೇಖಕ ಅಭಿಜಾತ್ ಜೋಶಿ ಸೇರಿ ಸದ್ಯ ‘3 ಇಡಿಯಟ್ಸ್ 2’ ಚಿತ್ರದ ಚಿತ್ರಕಥೆಯ ಕೆಲಸಗಳಲ್ಲಿ ತೊಡಗಿರುವುದಾಗಿ ಖಚಿತಪಡಿಸಿದ್ದಾರೆ.

ಮೊದಲ ಭಾಗದ ಅಂತ್ಯದಲ್ಲಿ ರಾಂಚೋ (ಆಮಿರ್ ಖಾನ್) ಲಡಾಖ್‌ನಲ್ಲಿ ಶಿಕ್ಷಕನಾಗಿ, ಫರ್ಹಾನ್ (ಆರ್. ಮಾಧವನ್) ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಗಿ ಹಾಗೂ ರಾಜು (ಶರ್ಮನ್ ಜೋಶಿ) ತಮ್ಮ ಬದುಕಿನಲ್ಲಿ ಸೆಟಲ್ ಆಗಿರುವುದನ್ನು ತೋರಿಸಲಾಗಿತ್ತು. ಆದರೆ, ಸೀಕ್ವೆಲ್‌ನಲ್ಲಿ ಕಥೆ ಸಂಪೂರ್ಣ ಬದಲಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಾನಿ, ‘ನಾವು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದೇವೆ. ಈ ಕಥೆ ಕಾಲೇಜು ದಿನಗಳ ಬಗ್ಗೆ ಇರುವುದಿಲ್ಲ. ಬದಲಿಗೆ, ಆ ಪಾತ್ರಗಳ ಬದುಕಿನಲ್ಲಿ 15-20 ವರ್ಷಗಳ ನಂತರ ಏನಾಗುತ್ತದೆ ಎಂಬುದರ ಸುತ್ತ ಸಾಗುತ್ತದೆ. ಈಗ ಅವರೆಲ್ಲರಿಗೂ ಮದುವೆಯಾಗಿ ಮಕ್ಕಳಾಗಿರುತ್ತಾರೆ. ಅವರು ತಮ್ಮ ಮಧ್ಯವಯಸ್ಸಿನ ಬಿಕ್ಕಟ್ಟನ್ನು ಎದುರಿಸುತ್ತಿರುತ್ತಾರೆ. ಅಲ್ಲಿಂದ ಮುಂದೆ ಏನಾಗುತ್ತದೆ ಎಂಬುದೇ ಕಥೆ’ ಎಂದು ಹೇಳಿದ್ದಾರೆ. ಮೊದಲ ಭಾಗದಂತೆ ಈ ಚಿತ್ರದಲ್ಲೂ ಸಮಾಜಕ್ಕೆ ಒಂದು ದೊಡ್ಡ ಸಂದೇಶ ಇರಲಿದೆ ಎಂದು ಅವರು ನಗುತ್ತಲೇ ತಿಳಿಸಿದ್ದಾರೆ.

ಇದನ್ನೂ ಓದಿ:  ‘3 ಇಡಿಯಟ್ಸ್’ ಸೀಕ್ವೆಲ್‌: ಆಮಿರ್ ಖಾನ್ ತಂಡ ಸೇರಲಿರುವ ‘4ನೇ ಇಡಿಯಟ್’

ಸೀಕ್ವೆಲ್ ಒಪ್ಪಿಕೊಂಡ ನಟ ಆಮಿರ್ ಖಾನ್!

ಚಿತ್ರದ ಮುಖ್ಯ ಪಾತ್ರಧಾರಿ ಆಮಿರ್ ಖಾನ್ ಕೂಡ ಈ ಸೀಕ್ವೆಲ್ ಅನ್ನು ಖಚಿತಪಡಿಸಿದ್ದು, ಹಿರಾನಿ ಕಥೆ ಹೇಳಿರುವುದಾಗಿ ತಿಳಿಸಿದ್ದಾರೆ. ‘ಕಥೆ ಮತ್ತು ಹಾಸ್ಯ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಮತ್ತೊಮ್ಮೆ ‘ಫುನ್ಸುಖ್ ವಾಂಗ್ಡು’ ಪಾತ್ರದಲ್ಲಿ ನಟಿಸಲು ಕಾಯುತ್ತಿದ್ದೇನೆ’ ಎಂದು ಆಮಿರ್ ಹೇಳಿದ್ದಾರೆ. ಚಿತ್ರದಲ್ಲಿ ಆಮಿರ್ ಖಾನ್, ಆರ್. ಮಾಧವನ್, ಶರ್ಮನ್ ಜೋಶಿ ಮತ್ತು ಕರೀನಾ ಕಪೂರ್ ಖಾನ್ ತಮ್ಮ ಹಳೆಯ ಪಾತ್ರಗಳಲ್ಲೇ ಮುಂದುವರಿಯಲಿದ್ದಾರೆ. ಆದರೆ ‘ಚತುರ್’ (ಓಮಿ ವೈದ್ಯ) ಅಥವಾ ‘ವೈರಸ್’ (ಬೋಮನ್ ಇರಾನಿ) ಪಾತ್ರಗಳು ಇರುತ್ತವೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ ಮೊದಲ ಭಾಗ!

ಕೇವಲ 55 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ‘3 ಇಡಿಯಟ್ಸ್’ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 400.61 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ಭಾರತದಲ್ಲೇ 202.95 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದ ಈ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್ ಕನ್ನಡ – Kannada News | Bigg Boss Kannada Auditions: Last Date to Upload Videos Announced by Colors Kannada

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಹೊಸ ಸೀಸನ್‌ನ ಆಡಿಷನ್‌ ಪ್ರಕ್ರಿಯೆ ನಡೆಯುತ್ತಿದೆ. ಈಗ ವಾಹಿನಿಯು ಬಿಗ್ ಬಾಸ್ ಕಾಂಪಿಟೇಷನ್ ವಿಡಿಯೋ ಕಳುಹಿಸಲು ಕೊನೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸುವರ್ಣ ಅವಕಾಶ ನೀಡಲಾಗಿದ್ದು, ಆಡಿಷನ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಜೂನ್ 21 ಅಂತಿಮ ದಿನಾಂಕವಾಗಿದೆ.

‘ಇಷ್ಟು ದಿನ ಕೈತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು, ಈ ಬಾರಿ ನೀವೇ ಅಖಾಡಕ್ಕೆ ಇಳಿಯುವ ಸಮಯ ಬಂದಿದೆ’ ಎಂದು ವೀಕ್ಷಕರಿಗೆ ಬಿಗ್ ಬಾಸ್ ಮನೆಗೆ ಮುಕ್ತ ಆಹ್ವಾನ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಲು ಆಸೆ ಇರುವವರು ಮತ್ತು ತಮ್ಮಲ್ಲಿನ ವಿಶಿಷ್ಟ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಬಯಸುವ ಸಾಮಾನ್ಯ ಜನರು ತಮ್ಮದೊಂದು ಉತ್ತಮ ಆಡಿಷನ್ ವಿಡಿಯೋವನ್ನು ಸಿದ್ಧಪಡಿಸಿಕೊಳ್ಳಬೇಕು. ಆ ವಿಡಿಯೋವನ್ನು colorskannada.jiostar.com ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. (Source: Colors Kannada Instagram)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಕನಕೋಟೆ ಸಫಾರಿಯಲ್ಲಿ ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್ – Kannada News | Kakanakote Safari: Nagarhole’s Kabini Elephants and Adorable Calves Go Viral

ಮೈಸೂರು, ಜೂ.19: ವಿಶ್ವವಿಖ್ಯಾತ ಕಬಿನಿ ಹಿನ್ನೀರು (Kabini Backwaters) ವನ್ಯಜೀವಿ ಪ್ರೇಮಿಗಳಿಗೆ ಮತ್ತೊಮ್ಮೆ ದೃಶ್ಯ ವೈಭವವನ್ನು ಉಣಬಡಿಸಿದೆ. ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಬರುವ ಕಾಕನಕೋಟೆ ಸಫಾರಿಗೆ (Kakanakote Safari) ತೆರಳಿದ್ದ ಪ್ರವಾಸಿಗರಿಗೆ ಪ್ರಕೃತಿಯ ಅತ್ಯಂತ ಅಪರೂಪದ ಹಾಗೂ ಮನಸೂರೆಗೊಳ್ಳುವ ದೃಶ್ಯವೊಂದು ಕಣ್ಣಿಗೆ ಬಿದ್ದಿದೆ. ಕಾಕನಕೋಟೆ ಅರಣ್ಯ ವಲಯದಲ್ಲಿ ಎಂದಿನಂತೆ ಸಫಾರಿ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರಿಗೆ ಕಬಿನಿ ಹಿನ್ನೀರಿನ ಹಸಿರು ಹುಲ್ಲುಗಾವಲಿನಲ್ಲಿ ಸಾಲು ಸಾಲು ಆನೆಗಳ ದೊಡ್ಡ ಹಿಂಡು ಒಟ್ಟಿಗೆ ಕಾಣಿಸಿಕೊಂಡಿದೆ. ಕಾಡಿನ ದೈತ್ಯ ಜೀವಿಗಳು ಗುಂಪಾಗಿ ಸಾಗುತ್ತಿದ್ದ ದೃಶ್ಯವನ್ನು ಕಂಡು ಪ್ರವಾಸಿಗರು ಅತ್ಯಂತ ರೋಮಾಂಚನಗೊಂಡಿದ್ದಾರೆ. ಈ ಅಪರೂಪದ ಕ್ಷಣಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ಆನೆ ಮರಿಗಳ ಮುದ್ದಾದ ಆಟ. ಆನೆಗಳ ಹಿಂಡಿನ ನಡುವೆ, ತಾಯಿ ಆನೆಯ ಆಶ್ರಯದಲ್ಲಿ ಮತ್ತು ರಕ್ಷಣೆಯಲ್ಲಿ ಎರಡು ಪುಟಾಣಿ ಆನೆ ಮರಿಗಳು ಆರಾಮವಾಗಿ ಮಲಗಿದ್ದ ದೃಶ್ಯ ನೆರೆದಿದ್ದವರ ಮನ ಗೆದ್ದಿದೆ. ವನ್ಯಜೀವಿಗಳ ಜಗತ್ತಿನಲ್ಲಿ ತಾಯಿಯ ಮಮತೆಯನ್ನು ಸಾರುವ ಇಂತಹ ದೃಶ್ಯಗಳು ತೀರಾ ವಿರಳವಾಗಿ ಸಿಗುತ್ತವೆ. ಆನೆಗಳ ಈ ಅದ್ಭುತ ಒಡನಾಟ ಮತ್ತು ಅಪರೂಪದ ಕ್ಷಣಗಳನ್ನು ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್. ರವಿಶಂಕರ್ ಅವರು ತಮ್ಮ ಕ್ಯಾಮೆರಾದಲ್ಲಿ ಅತ್ಯಂತ ಸುಂದರವಾಗಿ ಸೆರೆಹಿಡಿದಿದ್ದಾರೆ. ಸದ್ಯ ಈ ಆನೆಗಳ ಹಿಂಡಿನ ಹಾಗೂ ಮರಿಗಳ ಅಪರೂಪದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಕೃತಿ ಪ್ರೇಮಿಗಳ ಮನ ಸೆಳೆಯುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗೇಮ್ ಚೇಂಜರ್ ಚಿತ್ರದ ಸೋಲು ನನ್ನ ವೈಫಲ್ಯ, ವಿಷಾದವಿದೆ’; ಮುಕ್ತವಾಗಿ ಒಪ್ಪಿಕೊಂಡ ನಿರ್ಮಾಪಕ – Kannada News | Dil Raju’s Shocking Regret: ‘Game Changer’ Was a Mistake, Reveals Production Challenges

ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಚಿತ್ರರಂಗದಲ್ಲಿನ ತಮ್ಮ ದೀರ್ಘಕಾಲದ ಅನುಭವದಿಂದ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ‘ಗೇಮ್ ಚೇಂಜರ್’ ಚಿತ್ರದ ನಿರ್ಮಾಣದ ಸಮಯದಲ್ಲಿ ಎದುರಾದ ಬೆಳವಣಿಗೆಗಳು ಮತ್ತು ಸವಾಲುಗಳ ಕುರಿತು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಚಿತ್ರವು ಬರೋಬ್ಬರಿ ನಾಲ್ಕೂವರೆ ಗಂಟೆಗಳಷ್ಟು ಉದ್ದವಿತ್ತು ಮತ್ತು ಕೊನೆಯ ಕ್ಷಣದವರೆಗೂ ತಮಗೆ ಚಿತ್ರದ ಅಂತಿಮ ಕಟ್ ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ದೊಡ್ಡ ನಿರ್ದೇಶಕರು ಮತ್ತು ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡುವಾಗ ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಕಷ್ಟ ಎಂದು ಹೇಳಿರುವ ದಿಲ್ ರಾಜು, ಚಿತ್ರೀಕರಣದ ವೇಳೆ ಏನಾದರೂ ತಪ್ಪಾಗುತ್ತಿದ್ದರೆ ಅದನ್ನು ತಡೆಯುವುದು ಒಬ್ಬ ನಿರ್ಮಾಪಕನ ಜವಾಬ್ದಾರಿಯಾಗಿರುತ್ತದೆ, ಆದರೆ ಈ ವಿಷಯದಲ್ಲಿ ತಾವೇ ತಡೆಯಲು ಸಾಧ್ಯವಾಗದೆ ಸಂಪೂರ್ಣವಾಗಿ ವಿಫಲರಾಗಿದ್ದಾಗಿ ಹಾಗೂ ಅದು ತಮ್ಮ ಮೊದಲ ದೊಡ್ಡ ತಪ್ಪು ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ, ಇಷ್ಟು ದೊಡ್ಡ ಮಟ್ಟದ ನಿರ್ದೇಶಕರೊಂದಿಗೆ ಇಂತಹ ಬೃಹತ್ ಯೋಜನೆಗಳನ್ನು ಮಾಡಿದ ಅನುಭವ ತಮಗೆ ಇರಲಿಲ್ಲ ಎಂದು ದಿಲ್ ರಾಜು ತಿಳಿಸಿದ್ದಾರೆ. ಹೀಗಾಗಿಯೇ ‘ಗೇಮ್ ಚೇಂಜರ್’ ಸಿನಿಮಾ ತಮ್ಮ ವೃತ್ತಿಜೀವನದ ಒಂದು ತಪ್ಪು ಹೆಜ್ಜೆಯಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯದಲ್ಲಿ ಇಂತಹ ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವಾಗ, ಒಪ್ಪಂದದಲ್ಲೇ ತಮ್ಮ ನಿಯಮಗಳು ಮತ್ತು ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತೇನೆ, ಇಲ್ಲದಿದ್ದರೆ ಅಂತಹ ಸಿನಿಮಾಗಳಿಂದ ದೂರವಿರುವುದೇ ವಾಸಿ ಎಂದು ಅವರು ಹೇಳಿದ್ದಾರೆ.

‘ಇದು ನಮ್ಮ ನಿಯಮಗಳಿಗೆ ಒಳಪಡುವ ಶಾಲೆಯಲ್ಲ. ಇದು ನಮ್ಮ ಶಾಲೆಯಲ್ಲದಿದ್ದಾಗ, ಅದರ ಬಗ್ಗೆ ಹೆಚ್ಚು ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಹೇಳಿರುವ ಅವರು, ವಿಶೇಷವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವಾಗ ಮತ್ತು ಬೇರೆ ಭಾಷೆಯ ನಿರ್ದೇಶಕರೊಂದಿಗೆ ಕೆಲಸ ಮಾಡುವಾಗ ಅತ್ಯಂತ ಸ್ಪಷ್ಟವಾದ ತಂತ್ರ ಹಾಗೂ ಮುನ್ನೆಚ್ಚರಿಕೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಯಾವುದೇ ಒಂದು ಚಲನಚಿತ್ರ ಯಶಸ್ವಿಯಾಗಬೇಕಾದರೆ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರದ ನಾಯಕನ ನಡುವೆ ಒಂದೇ ರೀತಿಯ ಆಲೋಚನೆ ಇರುವುದು ಬಹಳ ಮುಖ್ಯ ಎಂದು ದಿಲ್ ರಾಜು ಒತ್ತಿ ಹೇಳಿದ್ದಾರೆ. ಈ ಮೂವರ ನಡುವೆ ಹೊಂದಾಣಿಕೆ ಇಲ್ಲದಿದ್ದರೆ, ಚಿತ್ರದ ಔಟ್‌ಪುಟ್ ನಿರೀಕ್ಷಿತ ಮಟ್ಟದಲ್ಲಿ ಬರುವುದಿಲ್ಲ ಮತ್ತು ಇಷ್ಟು ಕಷ್ಟಪಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸಿನಿಮಾ ಸರಿಯಾಗಿ ಮೂಡಿಬರದಿದ್ದರೆ ಉಂಟಾಗುವ ಆರ್ಥಿಕ ನಷ್ಟ ತುಂಬಾ ದೊಡ್ಡದಾಗಿರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯದ ಚಿತ್ರರಂಗದ ಪರಿಸ್ಥಿತಿಯಲ್ಲಿ ಬಾಕ್ಸ್ ಆಫೀಸ್ ಲೆಕ್ಕಾಚಾರಗಳು ಸಂಪೂರ್ಣವಾಗಿ ಬದಲಾಗಿದ್ದು, ಸಿನಿಮಾ ನಿರ್ಮಾಣದಲ್ಲಿ ಮಾಡುವ ಒಂದು ಸಣ್ಣ ತಪ್ಪು ಕೂಡ ನಿರ್ಮಾಪಕರಿಗೆ ಭಾರಿ ಹಾನಿಯನ್ನು ಉಂಟುಮಾಡುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಗೇಮ್ ಚೇಂಜರ್ ಚಿತ್ರದಿಂದ ಆದ ನಷ್ಟ ಎಷ್ಟು?  ವಿವರಿಸಿದ ದಿಲ್ ರಾಜು

‘ಆರ್‌ಆರ್‌ಆರ್’ (RRR) ಸಿನಿಮಾದ ಭರ್ಜರಿ ಯಶಸ್ಸಿನ ನಂತರ ರಾಮ್ ಚರಣ್ ಜಾಗತಿಕ ಮಟ್ಟದ ತಾರೆಯಾಗಿ ಹೊರಹೊಮ್ಮಿದರು, ಹೀಗಿರುವಾಗ ‘ಗೇಮ್ ಚೇಂಜರ್’ ಚಿತ್ರದ ಔಟ್‌ಪುಟ್ ಬಗ್ಗೆ ನಿಮಗೇನಾದರೂ ವಿಷಾದವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿಲ್ ರಾಜು, ‘ನನಗೆ ಈ ಬಗ್ಗೆ ನೂರಕ್ಕೆ ನೂರರಷ್ಟು ವಿಷಾದವಿದೆ. ಈ ವಿಷಯ ನನಗೆ ಮಾನಸಿಕವಾಗಿ ತುಂಬಾ ಬೇಸರ ತಂದಿದೆ ಮತ್ತು ನಾನು ಈ ಬಗ್ಗೆ ಭಾವುಕನಾಗಿದ್ದೇನೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕದ ಹತಾಶೆಯೇ ಈ ಒಪ್ಪಂದಕ್ಕೆ ಕಾರಣ ಎಂದ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ – Kannada News | Iran US Peace Deal: Khamenei Claims Trump’s Desperation Fueled Historic Agreement

ಟೆಹ್ರಾನ್, ಜೂನ್ 19: ವಿಶ್ವ ರಾಜಕಾರಣದಲ್ಲಿ ಭಾರಿ ತಿರುವು ಸಿಕ್ಕಿದೆ. ಇರಾನ್(Iran) ಮತ್ತು ಅಮೆರಿಕ ಜಂಟಿಯಾಗಿ ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅಧಿಕೃತವಾಗಿ ದೃಢಪಡಿಸಿದ್ದಾರೆ. ಆದರೆ, ಈ ಒಪ್ಪಂದಕ್ಕೆ ಇರಾನ್‌ನ ಉತ್ಸಾಹ ಕಾರಣವಲ್ಲ, ಬದಲಿಗೆ ಯುದ್ಧ ಮುಗಿಸಲೇಬೇಕಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತಾಶೆಯೇ ಕಾರಣ ಎಂದು ಖಮೇನಿ ಲೇವಡಿ ಮಾಡಿದ್ದಾರೆ.

ವರ್ಸೈಲ್ಸ್ ಅರಮನೆಯಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದ ಜಿ7 ಶೃಂಗಸಭೆಯ ಔತಣಕೂಟದ ವೇಳೆ ಈ ಒಪ್ಪಂದದ ಸಿದ್ಧತೆ ನಡೆದಿದ್ದು, ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಇದಕ್ಕೆ ಔಪಚಾರಿಕವಾಗಿ ಸಹಿ ಬೀಳಲಿದೆ.

ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಹಾಗೂ ಯುದ್ಧವನ್ನು ತಕ್ಷಣದಿಂದಲೇ ಶಾಶ್ವತವಾಗಿ ನಿಲ್ಲಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಅಮೆರಿಕವು ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು 30 ದಿನಗಳ ಒಳಗಾಗಿ ಹಿಂಪಡೆಯಬೇಕಾಗುತ್ತದೆ. ಇದರಿಂದ ಜಾಗತಿಕ ಹಡಗು ಸಂಚಾರ ಮೊದಲಿನ ಸ್ಥಿತಿಗೆ ಮರಳಲಿದೆ.

ಮತ್ತಷ್ಟು ಓದಿ: ಇರಾನ್-ಅಮೆರಿಕ ಐತಿಹಾಸಿಕ ಒಪ್ಪಂದ: ಜಾಗತಿಕ ತೈಲ ಬೆಲೆ ಕುಸಿತ

ಅಂತಿಮ ಒಪ್ಪಂದವಾದ 30 ದಿನಗಳಲ್ಲಿ ಇರಾನ್ ಸುತ್ತಮುತ್ತಲಿನ ಪ್ರದೇಶಗಳಿಂದ ಅಮೆರಿಕ ತನ್ನ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದೆ.ಇರಾನ್ ತನ್ನ ವ್ಯಾಪ್ತಿಯಲ್ಲಿ ಬರುವ ಹಾರ್ಮುಜ್ ಜಲಸಂಧಿಯಲ್ಲಿ ಮುಂದಿನ 60 ದಿನಗಳವರೆಗೆ ಯಾವುದೇ ಶುಲ್ಕವಿಲ್ಲದೆ ಅಂತಾರಾಷ್ಟ್ರೀಯ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಭರವಸೆ ನೀಡಿದೆ.

ಸದ್ಯಕ್ಕೆ ಇದು ಮಧ್ಯಂತರ ಒಪ್ಪಂದವಾಗಿದ್ದು, ಪೂರ್ಣ ಪ್ರಮಾಣದ ಸಮಗ್ರ ಅಂತಿಮ ಒಪ್ಪಂದವನ್ನು ಸಿದ್ಧಪಡಿಸಲು ಉಭಯ ದೇಶಗಳಿಗೆ 60 ದಿನಗಳ ಕಾಲಾವಕಾಶ ಸಿಕ್ಕಿದೆ. ಈ ಒಪ್ಪಂದವನ್ನು ಜಗತ್ತಿಗೆ ಪ್ರಕಟಿಸಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್,ಇದು ವಿಶ್ವದಲ್ಲಿ ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಲಿದ್ದು, ಜಾಗತಿಕ ವ್ಯಾಪಾರಕ್ಕೆ ದೊಡ್ಡ ನಿರಾಳ ತರಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ಸೇರಿ ಕರಾವಳಿಯಲ್ಲಿ ಶುದ್ಧ ಗಾಳಿ; ಧಾರವಾಡದಲ್ಲಿ ವಾಯು ಮಾಲಿನ್ಯ ಕೊಂಚ ಏರಿಕೆ! – Kannada News | Karnataka Air Quality: Bengaluru, Coastal Enjoy Clean Air; Dharwad Sees Pollution Rise

ಬೆಂಗಳೂರು, ಜೂ.19: ರಾಜ್ಯದಲ್ಲಿ ಮುಂಗಾರು ಮಳೆಯ ಮಾರುತಗಳ ಚಲನೆಯ ಬೆನ್ನಲ್ಲೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ (Air Quality) ಉತ್ತಮ ಸ್ಥಿತಿಯಲ್ಲಿದೆ. ಇಂದಿನ ಅಧಿಕೃತ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಐಕ್ಯೂಏರ್ (IQAir) ಅಂಕಿ-ಅಂಶಗಳ ಪ್ರಕಾರ, ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಗಾಳಿಯ ಗುಣಮಟ್ಟವು ತೃಪ್ತಿಕರ ಹಾಗೂ ಆರೋಗ್ಯಕರವಾಗಿದೆ. ಆದರೆ, ಉತ್ತರ ಕರ್ನಾಟಕದ ಕೆಲವು ವಲಯಗಳಲ್ಲಿ ಧೂಳಿನ ಪ್ರಮಾಣ ಕೊಂಚ ಹೆಚ್ಚಾಗಿದೆ.

ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು ಇಂದು 71 ರಷ್ಟಿದ್ದು, ‘ಸಾಧಾರಣ’ (Moderate) ಮತ್ತು ಆರೋಗ್ಯಕರ ಸ್ಥಿತಿಯಲ್ಲಿದೆ. ಮಳೆಯ ವಾತಾವರಣದ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ಮಾಲಿನ್ಯಕಾರಕ ಕಣಗಳಾದ PM2.5 ಮತ್ತು PM10 ಪ್ರಮಾಣ ಗಣನೀಯವಾಗಿ ನಿಯಂತ್ರಣದಲ್ಲಿದೆ. ನಗರದ ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್ ಭಾಗಗಳಲ್ಲಿ ಗಾಳಿ ಹೆಚ್ಚು ಸ್ವಚ್ಛವಾಗಿದೆ.

ಇನ್ನು ಕರಾವಳಿ ನಗರಿ ಮಂಗಳೂರಿನಲ್ಲಿ ವಾಯು ಗುಣಮಟ್ಟ ಅತ್ಯಂತ ಸುಧಾರಿತವಾಗಿದ್ದು, ಕೇವಲ 36 AQI ದಾಖಲಾಗಿದೆ. ಇದು ಸಂಪೂರ್ಣ ‘ಉತ್ತಮ’ (Good) ಮತ್ತು ಅತ್ಯಂತ ಶುದ್ಧ ಗಾಳಿಯ ವಲಯದಲ್ಲಿದೆ. ಮೀನುಗಾರಿಕಾ ಹಾಗೂ ಕರಾವಳಿ ಪ್ರದೇಶದ ಜನರಿಗೆ ಯಾವುದೇ ಆರೋಗ್ಯ ಭೀತಿ ಇಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಾಳಿಯ ಗುಣಮಟ್ಟ ಸ್ಥಿರವಾಗಿದ್ದು, ಉತ್ತಮ ಶ್ರೇಣಿಯಲ್ಲಿದೆ.

ಇದನ್ನೂ ಓದಿ: ಕೊಡಗು, ಮಂಡ್ಯ, ಮೈಸೂರಿಗೆ ‘ಯೆಲ್ಲೋ ಅಲರ್ಟ್: ಇಂದು ಈ ಜಿಲ್ಲೆಗಳಲ್ಲಿ ಸುರಿಯಲಿದೆ ಗುಡುಗು ಸಹಿತ ಭಾರಿ ಮಳೆ

ಉತ್ತರ ಕರ್ನಾಟಕದ ಧಾರವಾಡದಲ್ಲಿ ಮಾಲಿನ್ಯ ಸೂಚ್ಯಂಕ 125 ರ ಆಸುಪಾಸಿನಲ್ಲಿದ್ದು, ಕೊಂಚ ಕಳಪೆ (Poor) ಮಟ್ಟ ತಲುಪಿದೆ. ಧೂಳು ಹಾಗೂ ಸ್ಥಳೀಯ ಕಾಮಗಾರಿಗಳ ಕಾರಣದಿಂದ ಇಲ್ಲಿ ಉಸಿರಾಟದ ತೊಂದರೆ ಇರುವವರು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಶಿವಮೊಗ್ಗದಲ್ಲೂ ಮಾಲಿನ್ಯ ಸೂಚ್ಯಂಕ 99 ರಷ್ಟಿದ್ದು ಸಾಧಾರಣ ಗಡಿಯಲ್ಲಿದೆ. ಇಂದಿನ ವರದಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಮತ್ತು ಶುದ್ಧ ಗಾಳಿ ಇರುವ ಜಿಲ್ಲೆಯಾಗಿ ಗದಗ ಹೊರಹೊಮ್ಮಿದೆ. ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ಬಹುತೇಕ ಭಾಗಗಳಲ್ಲಿ ಹೊರಾಂಗಣ ಚಟುವಟಿಕೆಗಳು ಮತ್ತು ದೈಹಿಕ ವ್ಯಾಯಾಮಗಳಿಗೆ ಇಂದಿನ ವಾತಾವರಣ ಅತ್ಯಂತ ಪೂರಕವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version