ಕರ್ನಾಟಕಕ್ಕೆ ಮತ್ತೆ ಮುಂಗಾರು ಮಳೆ ಬರಲು ಸಾಧ್ಯವಿಲ್ಲ: ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರದ ತೀರ್ಮಾನ – Kannada News | Ca

ಬೆಂಗಳೂರು,(ಆಗಸ್ಟ್.11): ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೆ ತೀವ್ರ ಹಿನ್ನಡೆಯಾಗಿದೆ. ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುವ ಭೀತಿಯಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಆದೇಶಿಸಿದೆ. ಇದನ್ನು ವಿರೋಧಿಸಲು ಕರ್ನಾಟಕ ಸರ್ಕಾರವೂ ಸಹ ಸಜ್ಜಾಗಿದೆ.

ಹೌದು… ತಮಿಳುನಾಡಿಗೆ ಮತ್ತೆ ನೀರು ಬಿಡಲು CWRC ಶಿಫಾರಸು ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕರ್ನಾಟಕ ರಾಜ್ಯಕ್ಕೆ ಮತ್ತೆ ಮುಂಗಾರು ಮಳೆ ಬರಲು ಸಾಧ್ಯವಿಲ್ಲ. ಈ ತಿಂಗಳಲ್ಲಿ ಅಲ್ಪ ಪ್ರಮಾಣದ ಮಳೆ ಆಗುವ ನಿರೀಕ್ಷೆ ಇದೆ. ಆದರೆ ತಮಿಳುನಾಡಿಗೆ ಮತ್ತೆ ಹಿಂಗಾರು ಮಳೆ ಬರಲಿದೆ. ತಮಿಳುನಾಡಿಗೆ ನೀರು ಹರಿಸಿದ್ರೆ ನಮ್ಮ ವ್ಯವಸಾಯಕ್ಕೆ ನೀರು ಇರಲ್ಲ. ಹೀಗಾಗಿ 12 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಅಂತೆಲ್ಲಾ ಅಂಶಗಳನ್ನು ಉಲ್ಲೇಖಿಸಿ ಮೇಲ್ಮನವಿ ಸಲ್ಲಿಸಿ ವಾದ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕಕ್ಕೆ ಮತ್ತೆ ಶಾಕ್​​ ಕೊಟ್ಟ CWRC; ತಮಿಳುನಾಡಿಗೆ ಮುಂದಿನ 15ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ

Source link

ಮಹಿಳೆ ಮೇಲೆ ದೌರ್ಜನ್ಯ, ‘ನಾಟು-ನಾಟು’ ಗಾಯಕನ ವಿರುದ್ಧ ದೂರು ದಾಖಲು – Kannada News | Case against signer Rahul Sipligunj and 11 others by a woman

‘ಆರ್​​ಆರ್​​ಆರ್’ (RRR) ಸಿನಿಮಾದ ಆಸ್ಕರ್ (Oscar) ಗೆದ್ದ ಹಾಡು ‘ನಾಟು ನಾಟು’ ಹಾಡಿರುವ ಗಾಯಕ ರಾಹುಲ್ ಸಿಪ್ಲಿಗಂಜ್ ವಿರುದ್ಧ ಆಂಧ್ರದ ವಿಶಾಖಪಟ್ಟಣಂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಾಯಕ ರಾಹುಲ್ ಮಾತ್ರವೇ ಅಲ್ಲದೆ ಅವರ ಸಹೋದರನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಯುವತಿಯೊಬ್ಬರು ರಾಹುಲ್ ಸಿಪ್ಲಿಗಂಜ್ ಅವರ ಸಹೋದರ ಸಂಬಂಧಿಯ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಬೆದರಿಕೆಯ ದೂರು ದಾಖಲಿಸಿದ್ದಾರೆ. ರಾಹುಲ್ ಅವರ ಸಹೋದರ ಸಂಬಂಧಿ ಕರ್ಪುರಪು ರಾಹುಲ್ ರೆಡ್ಡಿ ತಮ್ಮನ್ನು ಮದುವೆಯಾಗಿ ನಂಬಿಸಿ, ವಂಚನೆ ಮಾಡಿದ್ದಾನೆ. ಮದುವೆಯಾಗುವುದಾಗಿ ಒತ್ತಾಯಿಸಿದ್ದಕ್ಕೆ ಖಾಸಗಿ ವಿಡಿಯೋ, ಚಿತ್ರಗಳನ್ನು ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರು ನೀಡಿದ್ದಾರೆ.

ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕ ರಾಹುಲ್ ಪಿಪ್ಲಿಗಂಜ್ ಸಹ ತಮಗೆ ಬೆದರಿಕೆ ಹಾಕಿದ್ದು ಮಾತ್ರವೇ ಅಲ್ಲದೆ. ತಮ್ಮಿಂದ ಬಲವಂತದ ವಿಡಿಯೋಗಳನ್ನು ಸಹ ಮಾಡಿಸಿದ್ದಾರೆ. ತಪ್ಪೊಪ್ಪಿಗೆ ಹೇಳಿಕೆಗಳನ್ನು ಕೊಡಿಸಿಕೊಂಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯುವತಿಯ ದೂರಿನ ಅನುಸಾರ ಕರ್ಪುರಪು ರಾಹುಲ್ ರೆಡ್ಡಿ, ರಾಹುಲ್ ಸಿಪ್ಲಿಗಂಜ್ ಸೇರಿ 11 ಮಂದಿಯ​ ವಿರುದ್ಧ ವಿಶಾಖಪಟ್ಟಣಂನ ಎಂವಿಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಬಳಿಕ ದೂರನ್ನು ಎಂದಾಡ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಈಗಾಗಲೇ ಎಫ್​ಐಆರ್ ದಾಖಲಾಗಿದ್ದು, ಶೀಘ್ರವೇ ಗಾಯಕ ರಾಹುಲ್​​ಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್ ಸಿಪ್ಲಿಗಂಜ್ ಬಲು ಜನಪ್ರಿಯ ಗಾಯಕರಾಗಿದ್ದಾರೆ. ‘ನಾಟು ನಾಟು’ ಮಾತ್ರವೇ ಅಲ್ಲದೆ ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಜನಪ್ರಿಯ ಹಾಡುಗಳನ್ನು ರಾಹುಲ್ ಸಿಪ್ಲಿಗಂಜ್ ಹಾಡಿದ್ದಾರೆ. ಗಣೇಶ್ ನಟನೆಯ ‘ಆರೆಂಜ್’ ಸಿನಿಮಾದ ಒಂದು ಹಾಡನ್ನು ರಾಹುಲ್ ಸಿಪ್ಲಿಗಂಜ್ ಹಾಡಿದ್ದಾರೆ. ತೆಲುಗಿನಲ್ಲಿ ಹಲವಾರು ಹಿಟ್ ಹಾಡುಗಳನ್ನು ರಾಹುಲ್ ಹಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Prayer Distractions: ದೇವರ ಮುಂದೆ ನಿಂತಾಗ ಕೆಟ್ಟ ಯೋಚನೆ ಬರ್ತಿದಿಯಾ; ಹೆದರಬೇಡಿ, ಕಾರಣ ಇಲ್ಲಿ ತಿಳಿಯಿರಿ – Kannada News | Prayer Distractions: How to Handle Unwanted Thoughts During Worship and Find Peace

ದೇವರ ಮುಂದೆ ಕುಳಿತಾಗ ಕೆಟ್ಟ ಯೋಚನೆ

ದೇವರ ಮುಂದೆ ಕುಳಿತು ಪ್ರಾರ್ಥನೆ ಮಾಡುವಾಗ ಮನಸ್ಸು ಶಾಂತವಾಗಬೇಕು, ದೇವರ ನಾಮಸ್ಮರಣೆಯಲ್ಲಿ ತಲ್ಲೀನರಾಗಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಇದಕ್ಕೆ ವಿರುದ್ಧವಾಗಿ, ದೇವರ ಮುಂದೆ ಕುಳಿತ ತಕ್ಷಣವೇ ಮನಸ್ಸಿನಲ್ಲಿ ಬೇಡದ ಆಲೋಚನೆಗಳು, ನಕಾರಾತ್ಮಕ ವಿಚಾರಗಳು ಅಥವಾ ಕೆಟ್ಟ ಯೋಚನೆಗಳು ಮೂಡುತ್ತವೆ. ಇದರಿಂದ ಹಲವರು ಆತಂಕಕ್ಕೊಳಗಾಗಿ, “ನನ್ನ ಮನಸ್ಸಿನಲ್ಲಿ ಇಂತಹ ಯೋಚನೆಗಳು ಏಕೆ ಬರುತ್ತಿವೆ? ದೇವರ ಬಗ್ಗೆ ನನಗೆ ಭಕ್ತಿ ಇಲ್ಲವೇ?” ಎಂದು ಚಿಂತಿಸುತ್ತಾರೆ.

ಆದರೆ ಇದಕ್ಕಾಗಿ ಭಯಪಡುವ ಅಥವಾ ತಮ್ಮನ್ನು ತಾವು ತಪ್ಪಿತಸ್ಥರೆಂದು ಭಾವಿಸುವ ಅಗತ್ಯವಿಲ್ಲ. ಮನಸ್ಸಿಗೆ ಅನಿರೀಕ್ಷಿತ ಯೋಚನೆಗಳು ಬರುವುದು ಸಹಜ. ಮುಖ್ಯವಾಗಿ, ಮನಸ್ಸಿಗೆ ಬಂದ ಪ್ರತಿಯೊಂದು ಯೋಚನೆಯೂ ನಮ್ಮ ನಿಜವಾದ ಇಚ್ಛೆ ಅಥವಾ ಸ್ವಭಾವವನ್ನು ಪ್ರತಿಬಿಂಬಿಸುವುದಿಲ್ಲ.

ಪ್ರಾರ್ಥನೆ ಮಾಡುವಾಗಲೇ ಇಂತಹ ಯೋಚನೆಗಳು ಏಕೆ ಬರುತ್ತವೆ?

ನಮ್ಮ ಮನಸ್ಸು ಸದಾ ಒಂದೇ ವಿಷಯದ ಮೇಲೆ ಸ್ಥಿರವಾಗಿರುವುದಿಲ್ಲ. ದಿನನಿತ್ಯದ ಜೀವನದಲ್ಲಿ ನಾವು ಎದುರಿಸುವ ಘಟನೆಗಳು, ಮಾತುಕತೆಗಳು, ಕೆಲಸದ ಒತ್ತಡ, ಭವಿಷ್ಯದ ಚಿಂತೆ ಸೇರಿದಂತೆ ಅನೇಕ ವಿಚಾರಗಳು ಮನಸ್ಸಿನಲ್ಲಿ ಸಂಗ್ರಹವಾಗಿರುತ್ತವೆ. ನಾವು ದೇವರ ಮುಂದೆ ಕುಳಿತು ಕಣ್ಣು ಮುಚ್ಚಿ ಶಾಂತವಾಗಿರಲು ಪ್ರಯತ್ನಿಸಿದಾಗ, ಹೊರಗಿನ ಚಟುವಟಿಕೆಗಳಿಂದ ಗಮನ ಬೇರೆಡೆ ಸರಿಯುತ್ತದೆ. ಆಗ ಮನಸ್ಸಿನಲ್ಲಿರುವ ವಿವಿಧ ಆಲೋಚನೆಗಳು ಮೇಲಕ್ಕೆ ಬರಬಹುದು. ಕೆಲವೊಮ್ಮೆ ನಾವು ಯೋಚಿಸದಂತಹ ವಿಚಾರಗಳೂ ಏಕಾಏಕಿ ನೆನಪಿಗೆ ಬರಬಹುದು. ಇದನ್ನೇ ಕೆಲವರು “ದೇವರ ಮುಂದೆ ಕುಳಿತಾಗ ಮಾತ್ರ ಕೆಟ್ಟ ಯೋಚನೆಗಳು ಬರುತ್ತಿವೆ” ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಮನಸ್ಸು ಚಂಚಲವಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿರಬಹುದು.

ಕೆಟ್ಟ ಯೋಚನೆ ಬಂದರೆ ದೇವರು ಕೋಪಗೊಳ್ಳುತ್ತಾರೆಯೇ?

ಇದು ಹಲವರಲ್ಲಿರುವ ಪ್ರಮುಖ ಭಯ. ದೇವರ ಮುಂದೆ ಕುಳಿತಾಗ ಮನಸ್ಸಿನಲ್ಲಿ ಕೆಟ್ಟ ವಿಚಾರ ಬಂದರೆ ದೇವರು ಕೋಪಗೊಳ್ಳುತ್ತಾರೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅನಿರೀಕ್ಷಿತವಾಗಿ ಮನಸ್ಸಿಗೆ ಬಂದ ಒಂದು ಯೋಚನೆಯಿಂದಲೇ ವ್ಯಕ್ತಿಯ ಭಕ್ತಿ ಅಥವಾ ವ್ಯಕ್ತಿತ್ವವನ್ನು ನಿರ್ಧರಿಸಲಾಗುವುದಿಲ್ಲ. ಯೋಚನೆ ಬರುವುದು ಮತ್ತು ಅದನ್ನು ಉದ್ದೇಶಪೂರ್ವಕವಾಗಿ ಬಯಸುವುದು ಎರಡು ವಿಭಿನ್ನ ವಿಷಯಗಳು. ಆದ್ದರಿಂದ ಮನಸ್ಸಿನಲ್ಲಿ ಬೇಡದ ಆಲೋಚನೆ ಬಂದ ತಕ್ಷಣ “ನಾನು ತಪ್ಪು ಮಾಡುತ್ತಿದ್ದೇನೆ” ಎಂದು ಆತಂಕಪಡಬೇಡಿ. ಆ ಯೋಚನೆಯನ್ನು ಹೆಚ್ಚು ಗಮನಿಸಿದಷ್ಟೂ ಅದು ಮತ್ತೆ ಮತ್ತೆ ಮನಸ್ಸಿಗೆ ಬರಬಹುದು.

ಕೆಟ್ಟ ಯೋಚನೆಗಳನ್ನು ಬಲವಂತವಾಗಿ ತಡೆಯಬೇಡಿ:

ಮನಸ್ಸಿನಲ್ಲಿ ಕೆಟ್ಟ ಯೋಚನೆ ಬಂದಾಗ ಅದನ್ನು ಬಲವಂತವಾಗಿ ತಡೆಯಲು ಪ್ರಯತ್ನಿಸುವುದು ಕೆಲವೊಮ್ಮೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. “ಈ ಯೋಚನೆ ಬರಬಾರದು, ಬರಬಾರದು” ಎಂದು ಪದೇಪದೇ ಯೋಚಿಸಿದರೆ, ಅದೇ ವಿಚಾರದ ಬಗ್ಗೆ ನಮ್ಮ ಗಮನ ಹೆಚ್ಚಾಗಬಹುದು. ಹೀಗಾಗಿ ಯೋಚನೆ ಬಂದಾಗ ಅದನ್ನು ಹೆಚ್ಚು ವಿಶ್ಲೇಷಿಸದೆ, ನಿಧಾನವಾಗಿ ನಿಮ್ಮ ಗಮನವನ್ನು ಮತ್ತೆ ದೇವರ ಕಡೆಗೆ ಕೊಂಡೊಯ್ಯಿರಿ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ದೇವರ ಮುಂದೆ ಮನಸ್ಸನ್ನು ಶಾಂತಗೊಳಿಸುವುದು ಹೇಗೆ?

ಪ್ರಾರ್ಥನೆ ಮಾಡುವಾಗ ಮನಸ್ಸನ್ನು ಏಕಾಗ್ರಗೊಳಿಸಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು.

  • ಮೊದಲು ಕೆಲವು ನಿಮಿಷ ಶಾಂತವಾಗಿ ಕುಳಿತುಕೊಳ್ಳಿ.
  • ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಡಿ.
  • ನಿಮ್ಮ ಇಷ್ಟದೇವರ ರೂಪ ಅಥವಾ ನಾಮದ ಮೇಲೆ ಗಮನ ಕೇಂದ್ರೀಕರಿಸಿ.
  • ಮನಸ್ಸಿನಲ್ಲಿ ಬೇಡದ ಯೋಚನೆ ಬಂದರೆ ಅದರೊಂದಿಗೆ ಹೋರಾಡಬೇಡಿ.
  • ನಿಧಾನವಾಗಿ ಮತ್ತೆ ದೇವರ ನಾಮಸ್ಮರಣೆಯ ಕಡೆಗೆ ಗಮನವನ್ನು ತಂದುಕೊಳ್ಳಿ.
  • ಪ್ರತಿದಿನ ಸ್ವಲ್ಪ ಸಮಯ ಪ್ರಾರ್ಥನೆ ಅಥವಾ ಧ್ಯಾನಕ್ಕೆ ಮೀಸಲಿಡಿ.

ಆರಂಭದಲ್ಲಿ ಮನಸ್ಸು ಪದೇಪದೇ ಬೇರೆಡೆಗೆ ಹೋಗಬಹುದು. ಆದರೆ ಅಭ್ಯಾಸ ಹೆಚ್ಚಾದಂತೆ ಏಕಾಗ್ರತೆಯೂ ನಿಧಾನವಾಗಿ ಸುಧಾರಿಸಬಹುದು. ಮನಸ್ಸಿಗೆ ಬಂದ ಯೋಚನೆ ನಿಮ್ಮನ್ನು ನಿರ್ಧರಿಸುವುದಿಲ್ಲ. ನಮ್ಮ ಮನಸ್ಸಿನಲ್ಲಿ ಅನೇಕ ರೀತಿಯ ಆಲೋಚನೆಗಳು ಮೂಡುವುದು ಸಹಜ. ಪ್ರತಿಯೊಂದು ಯೋಚನೆಯನ್ನೂ ಗಂಭೀರವಾಗಿ ತೆಗೆದುಕೊಂಡು ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ. ದೇವರ ಮುಂದೆ ಕುಳಿತಾಗ ಕೆಟ್ಟ ಯೋಚನೆ ಬಂದರೆ “ನನ್ನ ಭಕ್ತಿ ಕಡಿಮೆಯಾಗಿದೆ” ಅಥವಾ “ನಾನು ಕೆಟ್ಟ ವ್ಯಕ್ತಿ” ಎಂದು ನಿರ್ಧರಿಸಿಕೊಳ್ಳಬೇಡಿ. ಬದಲಾಗಿ, ಮನಸ್ಸನ್ನು ಶಾಂತವಾಗಿರಿಸಿ ಮತ್ತೆ ದೇವರ ನಾಮಸ್ಮರಣೆಯತ್ತ ಗಮನ ಹರಿಸುವ ಪ್ರಯತ್ನ ಮಾಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ಅಟ್ಯಾಕ್! – Kannada News | Hubballi Stray Dog Attack: 3 Year Old Boy Critically Injured, Admitted to KIMS ICU

ಹುಬ್ಬಳ್ಳಿ, ಆಗಸ್ಟ್ 11: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಭಯಪಡುವಂತಹ ಭೀಕರ ಸ್ಥಿತಿ ನಿರ್ಮಾಣವಾಗಿದೆ. ನಗರದ ಅಲ್ತಾಫ್ ಪ್ಲಾಟ್‌ನಲ್ಲಿ ನಿನ್ನೆ ಮುಂಜಾನೆ ನಾಲ್ಕೈದು ಬೀದಿ ನಾಯಿಗಳ ಹಿಂಡು 3 ವರ್ಷದ ಪುಟ್ಟ ಬಾಲಕನ ಮೇಲೆ ದಾಳಿ ನಡೆಸಿವೆ. ನಾಯಿಗಳ ಕಡಿತದಿಂದ ತೀವ್ರವಾಗಿ ಗಾಯಗೊಂಡಿರುವ ಮಗು ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ.

ಮನೆಯ ಮುಂದೆ ಆಟವಾಡುತ್ತಿದ್ದಾಗ ನಾಯಿಗಳ ದಾಳಿ!

ಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್ ನಿವಾಸಿ ಮಹ್ಮದ್ ಅಲಿ ಅವರ 3 ವರ್ಷದ ಪುಟ್ಟ ಮಗ ಅಜಾನ್ ಮಹ್ಮದ್ ಅಲಿ ಹುರಳಿಕೊಪ್ಪಿ ನಿನ್ನೆ ಮುಂಜಾನೆ ಎದ್ದು ಮನೆಯ ಹೊರಗಡೆ ಆಟವಾಡುತ್ತಿದ್ದ. ಈ ವೇಳೆ ಹೆತ್ತವರು ಮನೆಯ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಒಂಟಿಯಾಗಿದ್ದ ಮಗುವನ್ನು ಗಮನಿಸಿದ ನಾಲ್ಕೈದು ಬೀದಿ ನಾಯಿಗಳ ಹಿಂಡು ಏಕಾಏಕಿ ಅಜಾನ್ ಮೇಲೆ ಮುಗಿಬಿದ್ದಿವೆ.

ಪುಟ್ಟ ಮಗು ನಾಯಿಗಳಿಂದ ತಪ್ಪಿಸಿಕೊಳ್ಳಲಾಗದೆ, ಕಿರುಚಾಡುತ್ತಾ ಪ್ರಾಣಭಯದಿಂದ ಒದ್ದಾಡಿದೆ. ನಾಯಿಗಳು ಬಾಲಕನನ್ನು ರಸ್ತೆಯುದ್ದಕ್ಕೂ ಎಳೆದಾಡಿ, ದೇಹದ ತುಂಬೆಲ್ಲಾ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ಮಗುವಿನ ಚೀರಾಟ ಕೇಳಿ ತಕ್ಷಣ ಸ್ಥಳೀಯರು ಓಡಿ ಬಂದು ನಾಯಿಗಳನ್ನು ಓಡಿಸಿದ್ದರಿಂದ ಬಾಲಕನ ಪ್ರಾಣ ಉಳಿದಿದೆ. ಸದ್ಯ ಗಾಯಾಳು ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯ ತುರ್ತು ನಿಘಾ ಘಟಕದಲ್ಲಿ (ICU) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ನರಳಾಡುತ್ತಿದೆ.

ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣ ಮತ್ತು ಸಂತಾನಹರಣ ಚಿಕಿತ್ಸೆಗಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದಾರೆ. ಆದರೆ ಅವಳಿ ನಗರದಲ್ಲಿ ನಾಯಿಗಳ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಈ ಹಿಂದೆ ಸಿಮ್ಲಾ ನಗರದಲ್ಲೂ ಅಂಗಡಿಗೆ ತೆರಳುತ್ತಿದ್ದ ಬಾಲಕಿಯ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಹಳೇ ಹುಬ್ಬಳ್ಳಿ ಭಾಗದಲ್ಲಂತೂ ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಘಟನೆ ನಡೆದಾಗಲೆಲ್ಲಾ ‘ನಾಯಿಗಳನ್ನು ಹಿಡಿಯುತ್ತೇವೆ’ ಎಂದು ಹಾರಿಕೆ ಉತ್ತರ ನೀಡುವ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯ ವಾರ್ಡ್ ಸದಸ್ಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಬೀದಿ ನಾಯಿಗಳಿಗೆ ಶಾಶ್ವತ ಬ್ರೇಕ್ ಹಾಕಿ, ಮಕ್ಕಳ ಪ್ರಾಣ ರಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಕ್ ಟು ಬ್ಯಾಕ್ 4 ಶತಕ: ಹೊಸ ವಿಶ್ವ ದಾಖಲೆ ಬರೆದ ಜೇಕ್ ಲಿಬ್ಬಿ – Kannada News | Jake Libby Shatters World Record for Highest List A Batting Average

ಲಿಸ್ಟ್-ಎ (ಏಕದಿನ) ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್​ ರೆಕಾರ್ಡ್ ಬರೆದಿರುವುದು ಮತ್ಯಾರೂ ಅಲ್ಲ, ಇಂಗ್ಲೆಂಡ್​ನ ಅನುಭವಿ ದಾಂಡಿಗ ಜೇಕ್ ಲಿಬ್ಬಿ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ‘ಮೆಟ್ರೋ ಬ್ಯಾಂಕ್ ಒನ್-ಡೇ ಕಪ್’ನಲ್ಲಿ ವೋರ್ಸೆಸ್ಟರ್‌ಶೈರ್ ಪರ ಕಣಕ್ಕಿಳಿಯುತ್ತಿರುವ ಜೇಕ್ ಬ್ಯಾಕ್ ಟು ಬ್ಯಾಕ್ ನಾಲ್ಕು ಶತಕ ಸಿಡಿಸಿದ್ದಾರೆ. (PC: wccc)

Source link

ಸರ್ಜರಿ ಮಾಡಿಸಿಕೊಳ್ಳುವಾಗ ಹಾಡು ಹಾಡಿದ ಗಾಯಕ ಸೋನು ನಿಗಮ್ – Kannada News | Sonu Nigam Sings Mohammed Rafi Song During Surgery, Opens Up About Recurring Health Condition

ಪ್ರಸಿದ್ಧ ಗಾಯಕ ಸೋನು ನಿಗಮ್ ತಮ್ಮ ಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದವರು. ಆದರೆ ಇತ್ತೀಚೆಗೆ ಅವರು ಹಂಚಿಕೊಂಡ ವೀಡಿಯೊವೊಂದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಆತಂಕವನ್ನು ಒಟ್ಟಿಗೆ ಮೂಡಿಸಿದೆ. ಸ್ವತಃ ಸೋನು ನಿಗಮ್ ಅವರೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವಾಗ ಆಪರೇಷನ್ ಟೇಬಲ್ ಮೇಲೆ ಮಲಗಿಕೊಂಡೇ ಹಾಡು ಹಾಡುತ್ತಿರುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಪರೇಷನ್ ಥಿಯೇಟರ್‌ನಲ್ಲಿ ನಡೆದಿದ್ದೇನು?

ಸೋನು ನಿಗಮ್ ಅವರು ದಿವಂಗತ ಹಿರಿಯ ಗಾಯಕ ಮೊಹಮ್ಮದ್ ರಫಿ ಅವರ ‘ದುಲಾರಿ’ (1949) ಸಿನಿಮಾದ ‘ಸುಹಾನಿ ರಾತ್ ಧಲ್ ಚುಕಿ’ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಅವರಿಗೆ ಏನಾಯಿತು ಎಂದು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೋನು ನಿಗಮ್, ತಮ್ಮ ಎಡಗೈ ಉಂಗುರದ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಹಾಡು ಹಾಡಲು ಕಾರಣವೇನು?

ಶಸ್ತ್ರಚಿಕಿತ್ಸೆ ಮಾಡುವಾಗ ಹಾಡು ಹಾಡಿದ್ದೇಕೆ ಎಂಬುದನ್ನು ವಿವರಿಸಿದ ಅವರು, ‘ಇದು ತಾನಾಗಿಯೇ ನಡೆಯಿತು. ನನಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಡಾ. ನೀಲೇಶ್ ಸತ್ಭಾಯಿ ಅವರು ನನ್ನ ಅಭಿಮಾನಿಯಾಗಿದ್ದು, ಆಪರೇಷನ್ ವೇಳೆ ನನ್ನ ಹಾಡುಗಳನ್ನೇ ಪ್ಲೇ ಮಾಡುತ್ತಿದ್ದರು. ಈ ವೇಳೆ ಮೊಹಮ್ಮದ್ ರಫಿ ಅವರ ಹಾಡುಗಳ ಮ್ಯೂಸಿಕ್ ಮಾತ್ರ ಬಂದು, ಗಾಯನವಿಲ್ಲದ ಟ್ರ್ಯಾಕ್ ಪ್ಲೇ ಆಯಿತು. ಅದನ್ನು ಕೇಳಿ ನಾನೇ ಸ್ವತಃ ಹಾಡಲು ಪ್ರಾರಂಭಿಸಿದೆ’ ಎಂದಿದ್ದಾರೆ.

ರೋಗಿಯೊಬ್ಬರು ಸರ್ಜರಿ ವೇಳೆಯಲ್ಲೇ ಹೀಗೆ ಹಾಡುತ್ತಿರುವುದನ್ನು ಕಂಡು ವೈದ್ಯರ ತಂಡ ಕೂಡ ಸಂತಸ ವ್ಯಕ್ತಪಡಿಸಿತಂತೆ. ವೈದ್ಯರಿಗಾಗಿ ಸುಮಾರು 2-3 ಹಾಡುಗಳನ್ನು ಹಾಡಿದ ಸೋನು ನಿಗಮ್, ಈ ಅಪರೂಪದ ಕ್ಷಣವನ್ನು ನೆನಪಿಗಾಗಿ ರೆಕಾರ್ಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ವೈದ್ಯರು ರೆಕಾರ್ಡ್ ಮಾಡಿ ಕಳುಹಿಸಿದ ನಂತರವೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಎರಡು ಪ್ರಮುಖ ಮ್ಯೂಸಿಕ್ ಕಂಪನಿಗಳು ನನ್ನ ಬ್ಯಾನ್ ಮಾಡಿದ್ದವು; ಗಾಯಕ ಸೋನು ನಿಗಮ್

ಆರೋಗ್ಯದ ಸ್ಥಿತಿ ಹೇಗಿದೆ?

ಇದೇ ಸಮಸ್ಯೆಗೆ ನಾಲ್ಕು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ, ಮತ್ತೆ ಇದು ಮರುಕಳಿಸಿದೆ ಎಂದು ಸೋನು ನಿಗಮ್ ಹೇಳಿದ್ದಾರೆ. ‘ಇದು ಬಹುಶಃ ನನ್ನ ಮೂಳೆಗಳಲ್ಲಿರುವ ಸಂಧಿವಾತ ಸಮಸ್ಯೆಗೆ ಸಂಬಂಧಿಸಿದ್ದಿರಬಹುದು. ಪ್ರಸ್ತುತ ಚಿಕಿತ್ಸೆ ಮುಗಿದಿದ್ದು, ಮುಂದಿನ ಹಂತದ ಬಗ್ಗೆ ಕಾದು ನೋಡಬೇಕಿದೆ’ ಎಂದು ತಮ್ಮ ಆರೋಗ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಂಠೀರವ ಸ್ಟುಡಿಯೋ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿತ: ಇಬ್ಬರು ಕಾರ್ಮಿಕರ ಸಾವು – Kannada News | Two Works Killed And 3 Injured In Mud Collapse During Underpass Working at near kanteerava studio Bengaluru

ಬೆಂಗಳೂರು, (ಆಗಸ್ಟ್ 11): ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಕಂಠೀರವ ಸ್ಟೂಡಿಯೋ(kanteerava studio Underpass) ಬಳಿ ನಡೆದಿದೆ. ಅಂಡರ್‌ಪಾಸ್ ಕಾಮಗಾರಿಗಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣನ್ನು ಅಗೆಯಲಾಗಿತ್ತು. ಇಂದು (ಆಗಸ್ಟ್ 11) ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾಗ ಮೇಲಿಂದ ಏಕಾಏಕಿ ಮಣ್ಣಿನ ತಡೆಗೋಡೆ ಕುಸಿದುಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿ ಉಸಿರಾಡಲಾಗದೆ ನರಳಾಡಿದ್ದಾರೆ. ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮಣ್ಣಿನಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ದುರದೃಷ್ಟವಶಾತ್ ಇನ್ನಿಬ್ಬರು ಕಾರ್ಮಿಕ ಮಣ್ಣಿನ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ರಸ್ತೆಯಲ್ಲಿ ಅಂಡರ್ ಪಾಸ್ ಕಾಮಗಾರಿಗಾಗಿ 20 ಅಡಿಯಷ್ಟು ಮಣ್ಣು ತೋಡಲಾಗಿತ್ತು. ಆದ್ರೆ, ಕೆಲಸ ಮಾಡುವಾಗ ಏಕಾಏಕಿ ಮಣ್ಣು ಕುಸಿದಿದೆ. ಈ ವೇಳೆ ಅವರನ್ನು ರಕ್ಷಿಸಲು ಕಾರ್ಯಾಚರಣೆ ಮಾಡುವ ಸಂದರ್ಭದಲ್ಲೇ ಒಬ್ಬ ಕಾರ್ಮಿಕ ಅಸುನೀಗಿದ್ದ, ಇನ್ನೊಬ್ಬ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳೀಯರ ನೆರವಿನಿಂದ ಕಾರ್ಮಿಕನ ರಕ್ಷಣೆ ಕಾರ್ಯಾಚರಣೆ ನಡೆಸಲಾಗಿತ್ತು. ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಮಣ್ಣಿನಡಿಯಲ್ಲಿ ಇನ್ನು ಯಾರಾದರೂ ಸಿಲುಕಿದ್ದಾರೆಯೇ ಎಂಬ ಶಂಕೆಯ ಮೇಲೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ: CAG ವರದಿಯಲ್ಲಿ ಮಹತ್ವದ ಅಂಶಗಳು ಬಯಲು

ಎಫ್​​ಟಿಐ ಸರ್ಕಲ್ ಬಳಿ ಬಿಡಿಎ ವತಿಯಿಂದ ಕಾಮಗಾರಿ ನಡೆಯುತ್ತಿತ್ತು. ಆರ್​ಸಿಸಿ ಹಾಕಲು ಗುಂಡಿಯಲ್ಲಿ ತುಂಬಿದ್ದ ನೀರು ಖಾಲಿ ಮಾಡುತ್ತಿದ್ದಾಗ ಈ ಮಣ್ಣು ಕುಸಿದಿದೆ. ಈ ವೇಳೆ ಸ್ಥಳದಲ್ಲಿ ಐವರು ಕಾರ್ಮಿಕರು ಇದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಮಣ್ಣು ಕುಸಿಯುತ್ತಿದ್ದಂತೆ ಮೂವರು ಓಡಿ ಹೋಗಿದ್ದರು. ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಪರಿಮಳ್ (31) ಸ್ಥಳದಲ್ಲೇ ಮೃತಪಟ್ಟರೆ, ಸೋನಾರಾಮ್ (26) ಎಂಬಾತನನ್ನ ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿತ್ತು. ಕಣ್ವ ಆಸ್ಪತ್ರೆಯಲ್ಲಿ ಸೋನಾರಾಮ್ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಸದಾನಂದ್, ಸುನೀಲ್, ಇಮ್ತಿಯಾಯಾಜ್ ಗಾಯಗೊಂಡಿದ್ದಾರೆ.

ಉತ್ತರ ವಿಭಾಗ ಡಿಸಿಪಿ ನೇಮಗೌಡ ಹೇಳಿದ್ದಿಷ್ಟು

ಇನ್ನು ಘಟನೆ ಬಗ್ಗೆ ಉತ್ತರ ವಿಭಾಗ ಡಿಸಿಪಿ ನೇಮಗೌಡ ಪ್ರತಿಕ್ರಿಯಿಸಿದ್ದು, ಇಂದು ಹನ್ನೊಂದು ಗಂಟೆಗೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘ ಘಟನೆ ನಡೆದಿದೆ.ಐದು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಮಣ್ಣು ಕುಸಿದು ಅವಘಡ ನಡೆದಿದೆ. ಮಣ್ಣು‌ ಕುಸಿದು ಇಬ್ಬರು ಮಣ್ಣಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಒಬ್ಬನನ್ನು ಮೇಲೆ ಎತ್ತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ‌. ಇನ್ನೊಬ್ಬ ಕಾರ್ಮಿಕ ಮಣ್ಣಿನಡಿ ಸಿಲುಕಿದ್ದಾನೆ‌‌. ಆತನ ಮೃತ ದೇಹ ಹೊರತೆಗೆಯಲು ಕಾರ್ಯಚರಣೆ ನಡೀತಿದೆ. ಕಾಮಗಾರಿ ಬಿಡಿಎಯಿಂದ ನಡೆಯುತಿದ್ದ ಮಾಹಿತಿ ಇದೆ. ಇದರ ಬಗ್ಗೆ ಪರಿಶೀಲನೆ ನಡೆಸುತಿದ್ದೇವೆ. ಕಾರ್ಮಿಕರು ಒರಿಸ್ಸಾ, ಜಾರ್ಖಂಡ್,ಪಶ್ಚಿಮ ಬಂಗಾಲದವರು ಎಂದು ತಿಳಿದುಬಂದಿದೆ ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಸ್ವಿಂಗ್ ಮತ್ತು ಸ್ಪಿನ್ ತಂತ್ರಕ್ಕೆ ಟೀಮ್ ಇಂಡಿಯಾ ರಣತಂತ್ರ! – Kannada News | IND vs SL: Team India’s Masterplan for Galle Test

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27ರ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15 ರಿಂದ ಗಾಲೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಲಂಕಾದ ಸ್ಪಿನ್ ಸ್ನೇಹಿ ಹಾಗೂ ರಿವರ್ಸ್ ಸ್ವಿಂಗ್‌ಗೆ ಹೆಸರುವಾಸಿಯಾದ ಗಾಲೆ ಪಿಚ್‌ನಲ್ಲಿ ಆತಿಥೇಯರನ್ನು ಮಣಿಸಲು ಭಾರತ ತಂಡದ ಯುವ ನಾಯಕ ಶುಭ್‌ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ವಿಶೇಷ ‘ಮಾಸ್ಟರ್ ಪ್ಲಾನ್’ ರೂಪಿಸಿದ್ದಾರೆ. ಅಂದರೆ ಲಂಕಾ ಹೆಣೆಯಲಿರುವ ಸ್ಪಿನ್ ಮತ್ತು ಸ್ವಿಂಗ್ ತಂತ್ರಕ್ಕೆ ಟೀಮ್ ಇಂಡಿಯಾ ಈಗಲೇ ಪ್ರತಿತಂತ್ರ ಸಿದ್ಧಪಡಿಸಿದೆ. ಆ ರಣತಂತ್ರಗಳು ಯಾವುವು ಎಂಬುದರ ಸವಿಸ್ತಾರ ಮಾಹಿತಿ ಇಲ್ಲಿದೆ…

ರಿವರ್ಸ್ ಸ್ವಿಂಗ್​ಗೆ ‘ಲೆಟ್ ಪ್ಲೇ’ ಸೂತ್ರ:

ಗಾಲೆ ಪಿಚ್ ಪಂದ್ಯ ಮುಂದುವರಿದಂತೆ ಒಣಗುತ್ತಾ ಹೋಗುವುದರಿಂದ, ವೇಗದ ಬೌಲರ್‌ಗಳಿಗೆ ರಿವರ್ಸ್ ಸ್ವಿಂಗ್ ಮಾಡಲು ನೆರವಾಗುತ್ತದೆ. ಇದನ್ನು ಎದುರಿಸಲು ಗಿಲ್ ಪಡೆ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದೆ.

ಅರ್ಧ ಹಳೆಯ ಚೆಂಡಿನ ತಾಲೀಮು: ಬ್ಯಾಟರ್‌ಗಳು ನೆಟ್ಸ್‌ನಲ್ಲಿ ವಿಶೇಷವಾಗಿ ಅರ್ಧದಷ್ಟು ಹಳೆಯದಾದ ಕೂಕಬುರ್ರಾ ಚೆಂಡುಗಳ ವಿರುದ್ಧ ಗಂಟೆಗಟ್ಟಲೆ ಬ್ಯಾಟಿಂಗ್ ನಡೆಸಿದ್ದಾರೆ.

ದೇಹಕ್ಕೆ ಹತ್ತಿರವಾಗಿ ಆಡುವುದು: ರಿವರ್ಸ್ ಸ್ವಿಂಗ್ ಆಗುವ ಚೆಂಡುಗಳಿಗೆ ಬೇಗನೆ ಬ್ಯಾಟ್ ಬೀಸುವ ಬದಲು, ಚೆಂಡು ತೀರಾ ಹತ್ತಿರ ಬರುವವರೆಗೂ ಕಾಯ್ದು ಕೊನೆಯ ಕ್ಷಣದಲ್ಲಿ ಡಿಫೆಂಡ್ ಅಥವಾ ಗ್ಲಾನ್ಸ್ ಮಾಡುವ ಲೇಟ್ ಪ್ಲೇ ತಂತ್ರಕ್ಕೆ ಭಾರತೀಯ ಬ್ಯಾಟರ್‌ಗಳು ಮೊರೆ ಹೋಗಿದ್ದಾರೆ.

ಸ್ಪಿನ್ ತಂತ್ರಕ್ಕೆ ಕೌಂಟರ್ ಅಟ್ಯಾಕ್:

ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂ ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳ ಸ್ವರ್ಗವಾಗಿದೆ. ಶ್ರೀಲಂಕಾದ ಸ್ಪಿನ್ ಬಲವನ್ನು ಕುಗ್ಗಿಸಲು ಗಂಭೀರ್ ‘ಮ್ಯಾಚ್ ಸಿಮ್ಯುಲೇಶನ್’ (ನೈಜ ಪಂದ್ಯದಂತಹ ಸನ್ನಿವೇಶ ಸೃಷ್ಟಿ) ತರಬೇತಿ ನೀಡಿದ್ದಾರೆ.

ರಫ್ ಪಿಚ್ ಬ್ಯಾಟಿಂಗ್: ಪಿಚ್‌ನ ಬಿರುಕುಗಳು ಹಾಗೂ ಬೌಲರ್‌ಗಳ ಶೂ ಮಾರ್ಕ್‌ಗಳಿಂದ ಸೃಷ್ಟಿಯಾಗುವ ರಫ್ ಪ್ಯಾಚ್‌ಗಳಿಂದ  ದಿಢೀರ್ ಟರ್ನ್ ಆಗುವ ಎಸೆತಗಳನ್ನು ಎದುರಿಸಲು ಬ್ಯಾಟರ್‌ಗಳಿಗೆ ತರಬೇತಿ ನೀಡಲಾಗಿದೆ.

ಸ್ವೀಪ್ ಶಾಟ್‌ಗಳು: ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ (61 ರನ್) ಮತ್ತು ದೇವದತ್ ಪಡಿಕ್ಕಲ್ (142 ರನ್) ಲಂಕಾ ಸ್ಪಿನ್ನರ್‌ಗಳ ವಿರುದ್ಧ ಕ್ರೀಸ್ ಬಿಟ್ಟು ಮುನ್ನುಗ್ಗಿ ಹಾಗೂ ಸ್ವೀಪ್ ಶಾಟ್‌ಗಳ ಮೂಲಕ ರನ್ ಗಳಿಸಿದ್ದರು. ಇದೇ ರಣತಂತ್ರವನ್ನು ಮುಖ್ಯ ಪಂದ್ಯದಲ್ಲೂ ಮುಂದುವರಿಸಲು ಗಿಲ್ ಸೂಚಿಸಿದ್ದಾರೆ.

ಸ್ಪಿನ್ನರ್‌ಗಳ ‘ಮಹಾ ಚಕ್ರವ್ಯೂಹ’!

ಲಂಕಾ ತಂಡಕ್ಕೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಲು ಭಾರತ ತಂಡ ಈ ಬಾರಿ 3 ಅಥವಾ 4 ತಜ್ಞ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲು ಪ್ಲ್ಯಾನ್ ರೂಪಿಸಿದ್ದೇವೆ ಎಂದು ಸ್ಪಿನ್ ಕೋಚ್ ಸಾಯಿರಾಜ್ ಬಹುತುಲೆ ತಿಳಿಸಿದ್ದಾರೆ.

ಜಡೇಜಾ-ಕುಲ್ದೀಪ್ ಪ್ರಮುಖ ಅಸ್ತ್ರ: ಅನುಭವಿ ರವೀಂದ್ರ ಜಡೇಜಾ ಮತ್ತು ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಯುವ ಸ್ಪಿನ್ನರ್‌ಗಳಿಗೆ ಮಣೆ: ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಮಾನವ್ ಸುತಾರ್ ಮತ್ತು ದೇಶಿ ಕ್ರಿಕೆಟ್ ತಾರೆ ಸಾರಂಶ್ ಜೈನ್ ಅವರಲ್ಲಿ ಒಬ್ಬರಿಗೆ ಮೂರನೇ ಅಥವಾ ನಾಲ್ಕನೇ ಸ್ಪಿನ್ನರ್ ಆಗಿ ಪಾದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಕೊಹ್ಲಿ ಎಫೆಕ್ಟ್​: ‘ಇಂಜೆಕ್ಷನ್’ ಮೊರೆಹೋದರೇ ಟೀಮ್ ಇಂಡಿಯಾ ಆಟಗಾರರು!

ಒಟ್ಟಾರೆಯಾಗಿ ಹೇಳುವುದಾದರೆ, ಗಾಲೆ ಟೆಸ್ಟ್ ಪಂದ್ಯವು ಕೇವಲ ಬ್ಯಾಟ್ ಮತ್ತು ಚೆಂಡಿನ ನಡುವಿನ ಹೋರಾಟವಲ್ಲ. ಇದು ತಂತ್ರ ಮತ್ತು ಪ್ರತಿ-ತಂತ್ರಗಳ ಮಹಾ ಯುದ್ಧವಾಗಿದೆ. ಶ್ರೀಲಂಕಾದ ಸ್ಪಿನ್ ಮತ್ತು ರಿವರ್ಸ್ ಸ್ವಿಂಗ್ ಬಲೆಗೆ ಬೀಳದಂತೆ ಶುಭ್‌ಮನ್ ಗಿಲ್ ರೂಪಿಸಿರುವ ಈ ಮಾಸ್ಟರ್ ಪ್ಲ್ಯಾನ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಆಗಸ್ಟ್ 15 ರಿಂದ ಆರಂಭವಾಗಲಿರುವ ಪಂದ್ಯವೇ ನಿರ್ಧರಿಸಲಿದೆ.

Source link

RITES Recruitment 2026: ಭಾರತೀಯ ರೈಲ್ವೆ ಸಚಿವಾಲಯದಲ್ಲಿ ನೇಮಕಾತಿ; ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ – Kannada News | RITES Assistant Manager Jobs: Mechanical Engineers Apply for 24 Posts Online by Aug 17

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ

ಭಾರತೀಯ ರೈಲ್ವೆ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಸಂಸ್ಥೆಯು ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 24 ಸಹಾಯಕ ವ್ಯವಸ್ಥಾಪಕ (ಮೆಕ್ಯಾನಿಕಲ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪೂರ್ಣಾವಧಿ ಪದವಿ (B.E/B.Tech) ಪಡೆದಿರಬೇಕು. ಮೆಕ್ಯಾನಿಕಲ್, ಪ್ರೊಡಕ್ಷನ್, ಇಂಡಸ್ಟ್ರಿಯಲ್, ಮೆಕಾಟ್ರಾನಿಕ್ಸ್ ಹಾಗೂ ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ ಶೇ. 60 ರಷ್ಟು ಅಂಕಗಳನ್ನು ಹಾಗೂ ಎಸ್‌ಸಿ, ಎಸ್‌ಟಿ, ಒಬಿಸಿ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ಕನಿಷ್ಠ ಶೇ. 50 ರಷ್ಟು ಅಂಕಗಳನ್ನು ಗಳಿಸಿರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ವರ್ಷಗಳಾಗಿದ್ದು, ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕದ ವಿವರ:

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ (General) ಮತ್ತು ಒಬಿಸಿ (OBC) ವರ್ಗದ ಅಭ್ಯರ್ಥಿಗಳು ₹600 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಇಡಬ್ಲ್ಯೂಎಸ್ (EWS), ಎಸ್‌ಸಿ (SC), ಎಸ್‌ಟಿ (ST) ಹಾಗೂ ಪಿಡಬ್ಲ್ಯೂಬಿಡಿ (PwBD) ಅಭ್ಯರ್ಥಿಗಳಿಗೆ 300 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ಮಾಹಿತಿ:

ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ನೇರ ಸಂದರ್ಶನದ (Interview) ಆಧಾರದ ಮೇಲೆ ಮಾಡಲಾಗುತ್ತದೆ. ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವಾಗ ಲಿಖಿತ ಪರೀಕ್ಷೆಗೆ ಶೇ. 60 ರಷ್ಟು ಹಾಗೂ ಸಂದರ್ಶನಕ್ಕೆ ಶೇ. 40 ರಷ್ಟು ಅಂಕಗಳ ತೂಕವನ್ನು (Weightage) ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 17 ರೊಳಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ.

ಗಮನಿಸಿ: ಕಡೆ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಸೂಕ್ತ. ಅರ್ಜಿ ಸಲ್ಲಿಸುವ ಮುನ್ನ ಶೈಕ್ಷಣಿಕ ಅರ್ಹತೆ, ಶುಲ್ಕ ಹಾಗೂ ಆಯ್ಕೆ ವಿಧಾನದ ಸಂಪೂರ್ಣ ವಿವರಗಳಿಗಾಗಿ ಆರ್‌ಐಟಿಇಎಸ್‌ನ (RITES) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಕೋರಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಮಾನವೀಯತೆ ಮೆರೆದ ಬಂಗಾರಪೇಟೆ ಶಾಸಕ: ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ನೆರವಿಗೆ ಧಾವಿಸಿದ ಎಸ್.ಎನ್.ನಾರಾಯಣಸ್ವಾಮಿ – Kannada News | Humanitarian MLA Narayanaswamy Rescues Accident Victim Near Kolar, Praised

ಕೋಲಾರ, ಆ.11: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರನೊಬ್ಬನ ನೆರವಿಗೆ ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಧಾವಿಸುವ ಮೂಲಕ ತಮ್ಮ ಮಾನವೀಯತೆ ಮೆರೆದಿದ್ದಾರೆ. ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಬಂಗಾರಪೇಟೆಯಿಂದ ಕೋಲಾರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕೆಡಿಪಿ (KDP) ಪ್ರಗತಿ ಪರಿಶೀಲನಾ ಸಭೆಗೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಹುದುಕುಳ ಬಳಿ ಬೈಕ್ ಸವಾರನೊಬ್ಬ ರಸ್ತೆ ಅಪಘಾತಕ್ಕೆ ಈಡಾಗಿ ತೀವ್ರವಾಗಿ ಗಾಯಗೊಂಡು ಬಿದ್ದಿರುವುದನ್ನು ಗಮನಿಸಿದ ಶಾಸಕರು, ತಕ್ಷಣವೇ ತಮ್ಮ ವಾಹನವನ್ನು ತಡೆದು ಗಾಯಾಳುವಿನ ಬಳಿಗೆ ತೆರಳಿದರು. ಘಟನಾ ಸ್ಥಳದಲ್ಲೇ ಇದ್ದು ತಕ್ಷಣವೇ ತುರ್ತು ಸೇವೆಗೆ (108 ಆಂಬ್ಯುಲೆನ್ಸ್) ಕರೆ ಮಾಡಿದ ಶಾಸಕರು, ಗಾಯಾಳು ಬೈಕ್ ಸವಾರನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸುವ ವರೆಗೆ ಸ್ಥಳದಲ್ಲೇ ಇದ್ದು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದರು. ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟ ನಂತರ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಕೋಲಾರದ ಕೆಡಿಪಿ ಸಭೆಗೆ ತೆರಳಿದರು. ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಗಾಯಾಳುವಿನ ಜೀವ ಉಳಿಸಲು ನೆರವಾದ ಶಾಸಕರ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version