BBL 2026: ಭಾರತದಲ್ಲಿ ಬಿಗ್ ಬ್ಯಾಷ್ ಲೀಗ್..!

ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ‘ಬಿಗ್ ಬ್ಯಾಷ್ ಲೀಗ್‘ನ (BBL) ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ. ಇದಕ್ಕಾಗಿ ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆ ಜೊತೆ ಕ್ರಿಕೆಟ್ ಆಸ್ಟ್ರೇಲಿಯಾ ಮಾತುಕತೆ ನಡೆಸಿದ್ದು, ಈ ವೇಳೆ ಬಿಸಿಸಿಐ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ವರದಿಯಾಗಿದೆ.

ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ:

2026-27ರ ಬಿಬಿಎಲ್ (BBL 16) ಸೀಸನ್‌ನ ಭರ್ಜರಿ ಉದ್ಘಾಟನಾ ಪಂದ್ಯವು ಭಾರತದಲ್ಲಿ ಆಯೋಜನೆಯಾಗಲಿದೆ. ಇದಕ್ಕಾಗಿ ತಮಿಳುನಾಡಿನ ಚೆನ್ನೈನಲ್ಲಿರುವ ಐತಿಹಾಸಿಕ ಎಂ.ಎ. ಚಿದಂಬರಂ (ಚೇಪಾಕ್) ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾ ನೆಲವನ್ನು ಬಿಟ್ಟು ಹೊರದೇಶವೊಂದರಲ್ಲಿ ಬಿಗ್ ಬ್ಯಾಷ್ ಲೀಗ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ಪ್ರಯತ್ನಕ್ಕೆ ಕೈ ಹಾಕಲು ನಿರ್ಧರಿಸಿದೆ.

ರೇಸ್‌ನಲ್ಲಿರುವ ಪ್ರಮುಖ ತಂಡಗಳು ಯಾವುವು?

ಚೆನ್ನೈನಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯಲು ಬಿಬಿಎಲ್‌ನ ಮೂರು ಪ್ರಮುಖ ಫ್ರಾಂಚೈಸಿಗಳು ಮುಂಚೂಣಿಯಲ್ಲಿವೆ.

  • ಪರ್ತ್ ಸ್ಕಾರ್ಚರ್ಸ್ (Perth Scorchers)
  • ಸಿಡ್ನಿ ಥಂಡರ್ (Sydney Thunder)
  • ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades)

ಈ ಮೂರರಲ್ಲಿ ಎರಡು ತಂಡಗಳು ಭಾರತದ ಕ್ರಿಕೆಟ್ ಪ್ರೇಮಿಗಳ ಸಮ್ಮುಖದಲ್ಲಿ ಸೆಣಸಾಡಲಿವೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್:

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಭಾರತವನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ಕೋಟಿ ಕೋಟಿ ಭಾರತೀಯ ಪ್ರೇಕ್ಷಕರು ಮತ್ತು ಹೂಡಿಕೆದಾರರು.

ಬಿಬಿಎಲ್ ತಂಡಗಳನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸುತ್ತಿರುವ ಸಿಎ (CA), ಭಾರತದ ಐಪಿಎಲ್ (IPL) ಮಾಲೀಕರನ್ನು ಮತ್ತು ದೊಡ್ಡ ಬ್ರಾಂಡ್‌ಗಳನ್ನು ತನ್ನತ್ತ ಸೆಳೆಯಲು ಈ ಬಿಗ್ ಪ್ಲಾನ್ ರೂಪಿಸಿದೆ.

ವಿಶೇಷವೆಂದರೆ, ಭಾರತದಲ್ಲಿ ಈ ಪಂದ್ಯವನ್ನು ಆಯೋಜಿಸಲು ತಗಲುವ ಬಹುಪಾಲು ವೆಚ್ಚವನ್ನು ಕ್ರಿಕೆಟ್ ಆಸ್ಟ್ರೇಲಿಯಾವೇ ಭರಿಸಲಿದೆ.

ಇದನ್ನೂ ಓದಿ: 1 ಸ್ಥಾನಕ್ಕಾಗಿ 5 ತಂಡಗಳ ಪೈಪೋಟಿ: ಯಾರು ಹೇಗೆ ಪ್ಲೇಆಫ್​ಗೇರಬಹುದು?

ಮನರಂಜನೆಯ ರಸದೌತಣ:

ಡಿಸೆಂಬರ್ ಮಧ್ಯಭಾಗದಲ್ಲಿ (ಸಂಭಾವ್ಯವಾಗಿ ಡಿಸೆಂಬರ್ 12 ರಂದು) ಈ ಪಂದ್ಯ ನಡೆಯುವ ಸಾಧ್ಯತೆ ಇದೆ. ಅದರಂತೆ, ಭಾರತೀಯ ಕ್ರೀಡಾ ಪ್ರೇಮಿಗಳಿಗೆ ವರ್ಷಾಂತ್ಯದಲ್ಲಿ ಬಿಗ್ ಬ್ಯಾಷ್ ಲೀಗ್ ಅನ್ನು ಚೆನ್ನೈ ನಲ್ಲಿ ವೀಕ್ಷಿಸುವ ಅವಕಾಶ ದೊರೆಯಲಿದೆ. ಸದ್ಯಕ್ಕೆ ಬಿಸಿಸಿಐ ಪಂದ್ಯ ಆಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು, ಇನ್ನು ಸರ್ಕಾರದ ಮಟ್ಟದಲ್ಲಿ ಅನುಮೋದನೆಗಳನ್ನು ಪಡೆಯಬೇಕಿದೆ. ಇದಾದ ಬಳಿಕ ಪಂದ್ಯ ಆಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

 

Source link

ಡಿಜಿಟಲ್ ಪೇಮೆಂಟೇ ಎಲ್ಲಾ; ಅತಿಹೆಚ್ಚು ಜನಬಳಕೆಯಲ್ಲಿ ಯುಪಿಐ, ಅತಿಹೆಚ್ಚು ಪಾವತಿ ಮೌಲ್ಯದಲ್ಲಿ ಆರ್​ಟಿಜಿಎಸ್ ನಂ. 1 – Kannada News | India’s Digital Payment Surge: UPI Dominates Transactions, RTGS Leads High Value

ನವದೆಹಲಿ, ಮೇ 19: ಭಾರತದಲ್ಲಿ ಡಿಜಿಟಲ್ ಪೇಮೆಂಟ್​ಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನೂರಕ್ಕೆ ನೂರು ಡಿಜಿಟಲ್ ಪಾವತಿಯಾಗುವ ದಿನಗಳು ದೂರ ಇಲ್ಲ ಎನ್ನುವಂತಿದೆ ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶ. ಭಾರತದಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ಗಳು (Payment transactions) ನಾಲ್ಕು ವರ್ಷದ ಹಿಂದಕ್ಕೆ ಹೋಲಿಸಿದರೆ ಶೇ. 316ರಷ್ಟು ಹೆಚ್ಚಿದೆ. ಇದರಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಪಾಲು ಅತಿಹೆಚ್ಚು ಇದೆ. ಆದರೆ, ಪಾವತಿ ಮೌಲ್ಯದ (payment value) ವಿಚಾರಕ್ಕೆ ಬಂದರೆ ಆರ್ಟಿಜಿಎಸ್ ನಂಬರ್ ಒನ್ ಎನಿಸಿದೆ.

ಸುದ್ದಿಯ ಮುಖ್ಯಾಂಶಗಳು

  • ಪಾವತಿ ವಿಚಾರದಲ್ಲಿ ಅತಿಹೆಚ್ಚು ಜನರು ಯುಪಿಐ ಬಳಸುತ್ತಾರೆ. ಶೇ 97ಕ್ಕೂ ಅಧಿಕ ಡಿಜಿಟಲ್ ಪಾವತಿಗಳು ಯುಪಿಐ ಮೂಲಕ ಆಗುತ್ತವೆ
  • ಹೆಚ್ಚಿನ ಮೊತ್ತದ ಪೇಮೆಂಟ್​ಗಳಿಗೆ ಆರ್​ಟಿಜಿಎಸ್ ಬಳಕೆ ಆಗುತ್ತಿದೆ. ಶೇ. 65ಕ್ಕೂ ಅಧಿಕ ಮೌಲ್ಯದ ಪಾವತಿಗಳು ಆರ್​ಟಿಜಿಎಸ್ ಮೂಲಕ ಆಗುತ್ತವೆ.
  • ಆರ್​ಟಿಜಿಎಸ್ ಮತ್ತು ನೆಫ್ಟ್ ಮೂಲಕ ಅತಿಹೆಚ್ಚಿನ ಮೊತ್ತದ ಪೇಮೆಂಟ್​ಗಳು ಆಗುತ್ತವೆ.

ಸಣ್ಣ ಮೊತ್ತದ ಪಾವತಿಗಳಲ್ಲಿ ಯುಪಿಐ (UPI) ಕಿಂಗ್

ದೇಶದಲ್ಲಿ ನಡೆಯುವ ಒಟ್ಟು ಸಣ್ಣ ಮೊತ್ತದ (ಚಿಲ್ಲರೆ/Retail) ಡಿಜಿಟಲ್ ಪಾವತಿಗಳ ಪೈಕಿ ಯುಪಿಐ ಬರೋಬ್ಬರಿ ಶೇ. 85.5 ರಷ್ಟು ಪಾಲನ್ನು ಹೊಂದುವ ಮೂಲಕ ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿದೆ.

ದಿನಸಿ ಖರೀದಿ, ತರಕಾರಿ, ಸಣ್ಣ ಪುಟ್ಟ ಅಂಗಡಿಗಳು ಮತ್ತು ದೈನಂದಿನ ವೈಯಕ್ತಿಕ ವ್ಯವಹಾರಗಳಿಗೆ ಜನರು ಯುಪಿಐ ಅನ್ನು ಅತಿ ಹೆಚ್ಚಾಗಿ ಅವಲಂಬಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ದೊಡ್ಡ ಮೊತ್ತದ ವರ್ಗಾವಣೆಯಲ್ಲಿ ಆರ್‌ಟಿಜಿಎಸ್ (RTGS) ಕಿಂಗ್

ದೊಡ್ಡ ಮೊತ್ತದ (High-value) ಅಥವಾ ಸಗಟು ಹಣ ವರ್ಗಾವಣೆಯ ಮೌಲ್ಯದ ವಿಷಯಕ್ಕೆ ಬಂದರೆ ಆರ್‌ಟಿಜಿಎಸ್ ಶೇ. 68.6 ರಷ್ಟು ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ.

ಉದ್ಯಮಗಳು, ದೊಡ್ಡ ಕಂಪನಿಗಳು ಮತ್ತು ಸಂಸ್ಥೆಗಳ ನಡುವೆ ನಡೆಯುವ ಭಾರಿ ಪ್ರಮಾಣದ ಆರ್ಥಿಕ ವಹಿವಾಟುಗಳಿಗೆ ಆರ್‌ಟಿಜಿಎಸ್ ವ್ಯವಸ್ಥೆಯನ್ನೇ ಪ್ರಮುಖವಾಗಿ ಬಳಸಲಾಗುತ್ತಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯ ವಿಕಸನ

ಭಾರತದಲ್ಲಿ ಡಿಜಿಟಲ್ ಪಾವತಿ ಇಕೋಸಿಸ್ಟಂ (Digital Payments Ecosystem) ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಪ್ಲಾಟ್​ಫಾರ್ಮ್​ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರ್‌ಬಿಐ ವರದಿ ಉಲ್ಲೇಖಿಸಿದೆ.

ಸಣ್ಣ ಮತ್ತು ರಿಯಲ್ಟೈಮ್ ಪಾವತಿಗಳಿಗೆ ಯುಪಿಐ ಸುಲಭ ಹಾಗೂ ವೇಗದ ಆಯ್ಕೆಯಾಗಿದ್ದರೆ, ಸುರಕ್ಷಿತ ಹಾಗೂ ದೊಡ್ಡ ಮೊತ್ತದ ಸಾಂಸ್ಥಿಕ ವರ್ಗಾವಣೆಗೆ ಆರ್‌ಟಿಜಿಎಸ್ ಭರವಸೆಯ ಮಾಧ್ಯಮವಾಗಿದೆ. ಹಾಗೆಯೇ, ಯುಪಿಐ ಪಾವತಿಯಲ್ಲಿ ಹಣದ ಮೊತ್ತ ಮತ್ತು ಅವಧಿಗೆ ಮಿತಿ ಇರುವುದರಿಂದ ದೊಡ್ಡ ಮೌಲ್ಯದ ವಹಿವಾಟುಗಳಿಗೆ ಆರ್​ಟಿಜಿಎಸ್ ಬಳಸುವುದು ಜನರಿಗೆ ಅನಿವಾರ್ಯ ಹೌದು.

ಇದನ್ನೂ ಓದಿ: ದೇವಸ್ಥಾನಗಳ ಚಿನ್ನದ ನಗದೀಕರಣದ ಯಾವ ಯೋಜನೆಯೂ ಇಲ್ಲ; ವೈರಲ್ ಸುದ್ದಿ ಕೇವಲ ವದಂತಿ: ಕೇಂದ್ರ ಸರ್ಕಾರ ಸ್ಪಷ್ಟನೆ

ಭಾರತದಲ್ಲಿ ಪೇಮೆಂಟ್ ವಿವರ

2021ರ ಕ್ಯಾಲಂಡರ್ ವರ್ಷದಲ್ಲಿ 6,437 ಕೋಟಿ ಸಂಖ್ಯೆಯಷ್ಟು ಪೇಮೆಂಟ್ ಟ್ರಾನ್ಸಾಕ್ಷನ್ ಆಗಿತ್ತು. 2025ರಲ್ಲಿ ಅದು 26,819 ಕೋಟಿಗೆ ಹಗಿದೆ. ಇನ್ನು, ಇದೇ ಅವಧಿಯಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ ಮೌಲ್ಯದ ವಿಚಾರಕ್ಕೆ ಬಂದರೆ 2021ರಲ್ಲಿ 1,741 ಲಕ್ಷ ಕೋಟಿ ರೂ ಮೌಲ್ಯದ ಪೇಮೆಂಟ್​ಗಳಾಗಿವೆ. 2025ರಲ್ಲಿ ಅದು 3,215 ಲಕ್ಷ ಕೋಟಿ ರೂಗೆ ಏರಿದೆ.

2025ರ ಜುಲೈನಿಂದ ಡಿಸೆಂಬರ್​ವರೆಗೆ ಆದ ಸಂಖ್ಯಾವಾರ ಪಾವತಿಗಳ ಪ್ರಮಾಣ ಹೀಗಿದೆ:

  • ಯುಪಿಐ: ಶೇ. 85.5
  • ಪಿಪಿಐ: ಶೇ. 3.6
  • ನೆಫ್ಟ್: ಶೇ. 3.6
  • ನ್ಯಾಕ್ (NACH- National Automated Clearing House): ಶೇ. 2.7
  • ಕಾರ್ಡ್ ಪೇಮೆಂಟ್: ಶೇ. 2.6
  • ಐಎಂಪಿಎಸ್: ಶೇ. 1.8
  • ಆರ್​ಟಿಜಿಎಸ್: ಶೇ. 0.1
  • ಚೆಕ್: ಶೇ. 0.2

ಪೇಮೆಂಟ್ ಮೌಲ್ಯದಲ್ಲಿ ವಿವಿಧ ಪ್ಲಾಟ್​ಫಾರ್ಮ್​ಗಳ ಪಾಲು

  • ಆರ್​ಟಿಜಿಎಸ್: ಶೇ. 68.6
  • ನೆಫ್ಟ್: ಶೇ. 14.9
  • ಯುಪಿಐ: ಶೇ. 9.5
  • ಐಎಂಪಿಎಸ್: ಶೇ. 2.3
  • ಚೆಕ್: ಶೇ. 2.1
  • ನ್ಯಾಕ್: ಶೇ. 1.6
  • ಪಿಪಿಐ: ಶೇ. 0.1

ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ?

ಆರ್‌ಬಿಐನ ಪೇಮೆಂಟ್ಸ್ ಸಿಸ್ಟಂ ರಿಪೋರ್ಟ್​ನ ಈ ದತ್ತಾಂಶವು ಭಾರತೀಯ ಆರ್ಥಿಕತೆಯಲ್ಲಿ ಡಿಜಿಟಲ್ ಕ್ರಾಂತಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಸಾಮಾನ್ಯ ನಾಗರಿಕನ ಚಹಾದ ಅಂಗಡಿಯ ಪಾವತಿಯಿಂದ ಹಿಡಿದು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಕೋಟ್ಯಂತರ ರೂಪಾಯಿಗಳ ವ್ಯವಹಾರದವರೆಗೆ ಎಲ್ಲವೂ ಡಿಜಿಟಲ್ ವ್ಯವಸ್ಥೆಯಡಿ ಸುರಕ್ಷಿತವಾಗಿ ಹಂಚಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

1 ಸ್ಥಾನಕ್ಕಾಗಿ 5 ತಂಡಗಳ ಪೈಪೋಟಿ: ಯಾರು ಹೇಗೆ ಪ್ಲೇಆಫ್​ಗೇರಬಹುದು?

Source link

DRDO Internship 2026: ಯುವ ಎಂಜಿನಿಯರ್‌ಗಳಿಗೆ DRDO ನಿಂದ ಬಂಪರ್ ಕೊಡುಗೆ; 40 ಇಂಟರ್ನ್‌ಶಿಪ್ ಸೀಟುಗಳಿಗೆ ಅರ್ಜಿ ಆಹ್ವಾನ! – Kannada News | DRDO Internship 2026: Engineering Students! Apply for 40 Seats, Gain Defense Research Experience

ಯುವ ಎಂಜಿನಿಯರ್‌ಗಳಿಗೆ DRDO ನಿಂದ ಬಂಪರ್ ಕೊಡುಗೆ

ದೇಶದ ಹೆಮ್ಮೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ DRDO (Defence Research and Development Organisation) ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅದ್ಭುತ ಇಂಟರ್ನ್‌ಶಿಪ್ ಅವಕಾಶವನ್ನು ತಂದಿದೆ. ಈ ಇಂಟರ್ನ್‌ಶಿಪ್ ದೇಶದ ರಕ್ಷಣಾ ಸಂಶೋಧನೆಗೆ ಸಂಬಂಧಿಸಿದ ಅತ್ಯಾಧುನಿಕ ಯೋಜನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಮತ್ತು ಪ್ರಾಯೋಗಿಕ ಅನುಭವವನ್ನು ಪಡೆಯುವ ಅಪರೂಪದ ವೇದಿಕೆಯಾಗಿದೆ.

DRDO ಈ ಇಂಟರ್ನ್‌ಶಿಪ್‌ಗಾಗಿ ಒಟ್ಟು 40 ಸೀಟುಗಳನ್ನು ಬಿಡುಗಡೆ ಮಾಡಿದೆ. ಇದರ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಈಗಾಗಲೇ ಮೇ 18 ರಿಂದ ಪ್ರಾರಂಭವಾಗಿದ್ದು, ಮೇ 27, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು DRDO ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಅವಕಾಶವು ಯುಜಿ (UG) ಮತ್ತು ಪಿಜಿ (PG) ಹಂತಗಳಲ್ಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲಭ್ಯವಿದೆ.

ಯಾವ ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಗುತ್ತದೆ?

ಈ ಇಂಟರ್ನ್‌ಶಿಪ್ ಪೂರ್ಣ ಸಮಯದ (Full-Time) ಎಂಜಿನಿಯರಿಂಗ್ ಕೋರ್ಸ್ ಅನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಮುಕ್ತವಾಗಿದೆ.

  • ಪದವಿಪೂರ್ವ (UG) ವಿದ್ಯಾರ್ಥಿಗಳು: ಎಂಜಿನಿಯರಿಂಗ್‌ನ 7ನೇ ಅಥವಾ 8ನೇ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಸ್ನಾತಕೋತ್ತರ (PG) ವಿದ್ಯಾರ್ಥಿಗಳು: ಎರಡನೇ ವರ್ಷದ (M.Tech/ME) ವಿದ್ಯಾರ್ಥಿಗಳು ಸಹ ಅರ್ಹರಾಗಿರುತ್ತಾರೆ.
  • ಮಾನ್ಯತೆ: ಅಭ್ಯರ್ಥಿಯು ಓದುತ್ತಿರುವ ಶಿಕ್ಷಣ ಸಂಸ್ಥೆಯು ಕಡ್ಡಾಯವಾಗಿ AICTE ಅಥವಾ UGC ಯಿಂದ ಮಾನ್ಯತೆ ಪಡೆದಿರಬೇಕು.

ಅಗತ್ಯವಿರುವ ಶೈಕ್ಷಣಿಕ ಅಂಕಗಳು:

ಅರ್ಜಿದಾರರು ಅತ್ಯುತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರಬೇಕಾದುದು ಅತ್ಯಗತ್ಯ. ಅಭ್ಯರ್ಥಿಗಳು ತಮ್ಮ ಕೋರ್ಸ್‌ನಲ್ಲಿ ಕನಿಷ್ಠ ಶೇ.75 ಅಂಕಗಳನ್ನು ಅಥವಾ 10 ಕ್ಕೆ 7.5 CGPA ಅನ್ನು ಹೊಂದಿರಬೇಕು. ವಿದ್ಯಾರ್ಥಿಯು ಪ್ರಥಮ ದರ್ಜೆ (First Class) ಪದವಿಯೊಂದಿಗೆ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುತ್ತಿರಬೇಕು. ಆನ್‌ಲೈನ್ ಅರ್ಜಿ ನಮೂನೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ (Marksheet) ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಇಂಟರ್ನ್‌ಶಿಪ್ ಅವಧಿ ಎಷ್ಟು ಕಾಲ ಇರುತ್ತದೆ?

ವಿದ್ಯಾರ್ಥಿಗಳ ಕೋರ್ಸ್‌ಗೆ ಅನುಗುಣವಾಗಿ ಇಂಟರ್ನ್‌ಶಿಪ್ ಅವಧಿಯನ್ನು ನಿಗದಿಪಡಿಸಲಾಗಿದೆ:

  • UG ವಿದ್ಯಾರ್ಥಿಗಳಿಗೆ: 6 ತಿಂಗಳುಗಳ ಇಂಟರ್ನ್‌ಶಿಪ್ ಅವಧಿ ಇರುತ್ತದೆ.
  • PG ವಿದ್ಯಾರ್ಥಿಗಳಿಗೆ: 11 ತಿಂಗಳ ಕಾಲ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಅವಕಾಶವಿರುತ್ತದೆ.

ಈ ಅವಧಿಯಲ್ಲಿ ವಿದ್ಯಾರ್ಥಿಗಳು ಹಿರಿಯ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಪ್ರಮುಖ ತಾಂತ್ರಿಕ ಹಾಗೂ ಸಂಶೋಧನಾ ಯೋಜನೆಗಳಲ್ಲಿ ಕೆಲಸ ಮಾಡುವ ಸುದೀರ್ಘ ಅನುಭವವನ್ನು ಪಡೆಯಲಿದ್ದಾರೆ.

ವಿದ್ಯಾರ್ಥಿವೇತನ (Stipend) ಮತ್ತು ಪಾವತಿ ಮಾಹಿತಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಅವಧಿಯಲ್ಲಿ ಆರ್ಥಿಕ ನೆರವು ಕೂಡ ಸಿಗಲಿದೆ. ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ 5,000ರೂ. ಸ್ಟೈಫಂಡ್ ನೀಡಲಾಗುವುದು. 6 ತಿಂಗಳ ಅವಧಿಯನ್ನು ಪೂರ್ಣಗೊಳಿಸುವ ಯುಜಿ ವಿದ್ಯಾರ್ಥಿಗಳಿಗೆ ಒಟ್ಟು 30,000ರೂ. ಮೊತ್ತ ಸಿಗಲಿದೆ. ಈ ಪಾವತಿಯನ್ನು ಎರಡು ಕಂತುಗಳಲ್ಲಿ ಮಾಡಲಾಗುತ್ತದೆ. ಮೊದಲ 3 ತಿಂಗಳ ಇಂಟರ್ನ್‌ಶಿಪ್ ಯಶಸ್ವಿಯಾಗಿ ಮುಗಿದ ನಂತರ ಮೊದಲ ಕಂತು ಹಾಗೂ ಇಂಟರ್ನ್‌ಶಿಪ್ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಎರಡನೇ ಕಂತನ್ನು ಬಿಡುಗಡೆ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 4:19 pm, Tue, 19 May 26

Source link

ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?

ಕೊಡಗು (ಮೇ 19): ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ (Kodagu dubare elephant camp) ಎರಡು ಆನೆಗಳ ಮಧ್ಯೆ ನಡೆದ ಕಾದಾಟದಲ್ಲಿ ಸಿಲುಕಿ ಪ್ರವಾಸಿ ಮಹಿಳೆಯೋರ್ವಳು ಸಾವನ್ನಪ್ಪಿದ್ದು, ಈ ದುರಂತದಿಂದ ಇಡೀ ಜಿಲ್ಲೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ಕರಾಳ ಘಟನೆ ಮಾಸುವ ಮುನ್ನವೇ ಕಾದಾಟದಲ್ಲಿ ಗಾಯಗೊಂಡಿದ್ದ ‘ಮಾರ್ತಾಂಡ’ (Marthanda) ಆನೆ ಚಿಕಿತ್ಸೆ ಫಲಕಾರಿಯಾಗದೇ ಇಂದು(ಮೇ 19) ಕೊನೆಯುಸಿರೆಳೆದಿದೆ. ಹೌದು.. ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ‘ಮಾರ್ತಾಂಡ’ ಮತ್ತು ‘ಕಂಜನ್’ ಆನೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದೀಗ, ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಸಹ ಸಾವನ್ನಪ್ಪಿದೆ. ಹೀಗೆ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ 1 ಘಟನೆಯಲ್ಲಿ ಎರಡು ಸಾವಿಗೆ ಕಾರಣವೇನು? ಯಾರನ್ನ ದೂಷಿಸೋದು?

ಇದನ್ನೂ ಓದಿ: ಎರಡೆರಡು ಬಾರಿ ಸೆರೆ, ಮನೆಗಳ ಬಾಗಿಲು ಮುರಿದು ಪುಂಡಾಟ: ಕಾದಾಟದಲ್ಲಿ ಮೃತಪಟ್ಟ ಮಾರ್ತಾಂಡ ಆನೆಗಿತ್ತು ಭಯಂಕರ ಇತಿಹಾಸ

Source link

ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ

ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವ ಇಂದು (ಮೇ 19). ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಇದೀಗ ವಿಜಯಲಕ್ಷ್ಮಿ ಅವರು ವಿವಾಹ ವಾರ್ಷಿಕೋತ್ಸವದ ದಿನ ಪತಿಯ ಭೇಟಿಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಜೊತೆಗೆ ಪುತ್ರ ವಿನಿಶ್ ದರ್ಶನ್ ಸಹ ಆಗಮಿಸಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಚಿಕನ್ ನೆಕ್ ಕಾರಿಡಾರ್ ಎಂದರೇನು? ಸಿಲಿಗುರಿಗೆ ಈ ಹೆಸರಿನಿಂದ ಕರೆಯುವುದೇಕೆ? – Kannada News | What is Chicken Neck Corridor in Indian Map why it is Important in Border Security Siliguri Corridor News

ನವದೆಹಲಿ, ಮೇ 19: ‘ಚಿಕನ್ ನೆಕ್’ (Chicken Neck) ಕಾರಿಡಾರ್ ಎಂಬುದಕ್ಕೆ ಅಧಿಕೃತವಾಗಿ ‘ಸಿಲಿಗುರಿ ಕಾರಿಡಾರ್’ (Siliguri Corridor) ಎಂದು ಕರೆಯಲಾಗುತ್ತದೆ. ಇದು ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಅತ್ಯಂತ ಕಿರಿದಾದ ಭೂಭಾಗವಾಗಿದೆ. ಇದನ್ನು ಭಾರತದ ಭೂಪಟದಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಆಯಕಟ್ಟಿನ ಮಿಲಿಟರಿ ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಇದು ಪಶ್ಚಿಮ ಬಂಗಾಳದ ಸಿಲಿಗುರಿ ನಗರದ ಸುತ್ತಲಿರುವ ಪ್ರದೇಶವಾಗಿದೆ.

ಚಿಕನ್ ನೆಕ್ ಎಂಬ ಹೆಸರು ಬಂದಿದ್ದೇಕೆ?:

ನೀವೇನಾದರೂ ಭಾರತದ ಭೂಪಟವನ್ನು ನೋಡಿದರೆ ಈ ಕಿರಿದಾದ ಭೂಭಾಗವು ಕೋಳಿಯ ಕತ್ತಿನಂತೆ ಕಾಣುತ್ತದೆ. ಕೋಳಿಯ ಕುತ್ತಿಗೆಯ ರೀತಿ ತೆಳುವಾದ ಮತ್ತು ಸೂಕ್ಷ್ಮವಾದ ಗಡಿಯನ್ನು ಹೊಂದಿರುವುದರಿಂದ ಈ ಭಾಗವನ್ನು ಚಿಕನ್ ನೆಕ್ ಕಾರಿಡಾರ್ ಎಂದು ಕರೆಯಲಾಗುತ್ತದೆ. ಇದು ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುತ್ತದೆ. ಈ ಚಿಕನ್ ನೆಕ್ ಕಾರಿಡಾರ್​ನ ಅತ್ಯಂತ ಕಿರಿದಾದ ಭಾಗವು ಕೇವಲ 17 ರಿಂದ 22 ಕಿಲೋಮೀಟರ್ ಮಾತ್ರ ಅಗಲವಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲೂ 2 ಚಿಕನ್ ನೆಕ್ ಕಾರಿಡಾರ್ ಇದೆ; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಎಚ್ಚರಿಕೆ

ಈ ಪ್ರದೇಶವು ಅತ್ಯಂತ ಸೂಕ್ಷ್ಮವಾಗಿದೆ. ಏಕೆಂದರೆ ಇದರ ಪಶ್ಚಿಮಕ್ಕೆ ನೇಪಾಳ, ದಕ್ಷಿಣಕ್ಕೆ ಬಾಂಗ್ಲಾದೇಶ, ಉತ್ತರಕ್ಕೆ ಭೂತಾನ್ ಹಾಗೂ ಚೀನಾ (ಟಿಬೆಟ್‌ನ ಚುಂಬಿ ಕಣಿವೆ) ದೇಶಗಳಿವೆ. ಹೀಗಾಗಿ, ಈ ಸಿಲಿಗುರಿ ಅಥವಾ ಚಿಕನ್ ನೆಕ್ ಕಾರಿಡಾರ್ ಭಾರತದ ಪಾಲಿಗೆ ಅತ್ಯಂತ ಮಹತ್ವದ ಮತ್ತು ನಿರ್ಣಾಯಕ ಸ್ಥಳವಾಗಿದೆ. ಇದೇ ಕಾರಿಡಾರ್​​ನ 120 ಎಕರೆ ಜಾಗವನ್ನು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ.

ಭಾರತದ ಮುಖ್ಯ ಭೂಭಾಗದಿಂದ ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯದ 8 ರಾಜ್ಯಗಳಿಗೆ ಹೋಗಲು ಇರುವ ಏಕೈಕ ರಸ್ತೆ ಮತ್ತು ರೈಲ್ವೆ ಮಾರ್ಗವೆಂದರೆ ಅದು ಚಿಕನ್ ನೆಕ್ ಕಾರಿಡಾರ್. ಎಲ್ಲಾ ತೈಲ ಪೈಪ್‌ಲೈನ್‌ಗಳು, ಇಂಟರ್ನೆಟ್ ಕೇಬಲ್‌ಗಳು ಮತ್ತು ಸೇನಾ ವಾಹನಗಳು ಇದೇ 22 ಕಿ.ಮೀ ಕಿರಿದಾದ ಮಾರ್ಗದ ಮೂಲಕವೇ ಹಾದುಹೋಗಬೇಕು. ಒಂದುವೇಳೆ ಯುದ್ಧದ ಸಮಯದಲ್ಲಿ ಚೀನಾ ದೇಶವು ಈ 22 ಕಿ.ಮೀ ಭಾಗದ ಮೇಲೆ ದಾಳಿ ನಡೆಸಿ ಇದನ್ನು ವಶಪಡಿಸಿಕೊಂಡರೆ, ಇಡೀ ಈಶಾನ್ಯ ಭಾರತವು ದೇಶದ ಉಳಿದ ಭಾಗದಿಂದ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಆದ್ದರಿಂದ ಭಾರತೀಯ ಸೇನೆ ಇಲ್ಲಿ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ.

ಇದನ್ನೂ ಓದಿ: ಚಿಕನ್ ನೆಕ್ ಕಾರಿಡಾರ್​​ನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳದ ಸಿಎಂ

ಈ ಚಿಕನ್ ನೆಕ್ ಕಾರಿಡಾರ್‌ನಲ್ಲಿರುವ ಸುಮಾರು 120 ಎಕರೆ ಆಯಕಟ್ಟಿನ ಭೂಮಿಯನ್ನು ರಕ್ಷಣಾತ್ಮಕ ಕಾಮಗಾರಿಗಳಿಗಾಗಿ ಪಶ್ಚಿಮ ಬಂಗಾಳ ಸರ್ಕಾರವು ನೇರವಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ. ಇಲ್ಲಿನ ಉತ್ತರ ಬಂಗಾಳದ 7 ಪ್ರಮುಖ ಹೆದ್ದಾರಿಗಳ ನಿರ್ವಹಣೆಯನ್ನು ಕೇಂದ್ರದ ಏಜೆನ್ಸಿಗಳಾದ NHAI ಮತ್ತು NHIDCLಗೆ ವಹಿಸಿಕೊಡಲಾಗಿದೆ.

1947ರ ಭಾರತ ವಿಭಜನೆಗೂ ಮುನ್ನ ಈ ಚಿಕನ್ ನೆಕ್ ಕಾರಿಡಾರ್​​ನ ಸಮಸ್ಯೆ ಇರಲಿಲ್ಲ. ಆದರೆ ದೇಶ ವಿಭಜನೆಯಾಗಿ ‘ಪೂರ್ವ ಪಾಕಿಸ್ತಾನ’ (ಈಗಿನ ಬಾಂಗ್ಲಾದೇಶ) ಸೃಷ್ಟಿಯಾದಾಗ ಭಾರತದ ಪಶ್ಚಿಮ ಬಂಗಾಳದ ಬಹುದೊಡ್ಡ ಭೂಭಾಗ ಅದರ ಪಾಲಾಯಿತು. ಇದರಿಂದಾಗಿ ಈಶಾನ್ಯ ರಾಜ್ಯಗಳಿಗೆ ಹೋಗಲು ಭಾರತಕ್ಕೆ ಉಳಿದುಕೊಂಡಿದ್ದು ಸಿಲಿಗುರಿ ಸುತ್ತಮುತ್ತಲಿನ ಈ ಕಿರಿದಾದ ಸಣ್ಣ ಭೂಮಾರ್ಗ ಮಾತ್ರ. ಅದಕ್ಕಾಗಿಯೇ, ಭಾರತೀಯ ಸೇನೆಯು ಈ ‘ಚಿಕನ್ ನೆಕ್’ ಅನ್ನು ರಕ್ಷಿಸಲು ಸದಾ ಅಲ್ಲಿ ಅತ್ಯಂತ ಬಲಿಷ್ಠವಾದ ಮಿಲಿಟರಿ ಪಡೆಗಳನ್ನು ನಿಯೋಜಿಸಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:01 pm, Tue, 19 May 26

Source link

ಗಂಡನಿಂದ ದೂರಾದ ಬೆನ್ನಲ್ಲೇ ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್ – Kannada News | Mouni Roy attends Cannes Film Festival 2026 after separation from Suraj Nambiar

ತಮ್ಮ ವೈಯಕ್ತಿಕ ಜೀವನದ ಏರಿಳಿತಗಳ ನಡುವೆಯೂ ಬಾಲಿವುಡ್ ನಟಿ ಮೌನಿ ರಾಯ್ (Mouni Roy) ವೃತ್ತಿಜೀವನಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಉದ್ಯಮಿ ಪತಿ ಸೂರಜ್ ನಂಬಿಯಾರ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದ ಕೇವಲ ಕೆಲವೇ ದಿನಗಳಲ್ಲಿ, ಮೌನಿ ರಾಯ್ ಪ್ರತಿಷ್ಠಿತ ‘ಕಾನ್ ಫಿಲ್ಮ್ ಫೆಸ್ಟಿವಲ್’ (Cannes Film Festival) ರೆಡ್ ಕಾರ್ಪೆಟ್ ಮೇಲೆ ಮಿಂಚಲು ಫ್ರಾನ್ಸ್‌ಗೆ ಹಾರಿದ್ದಾರೆ. ಅಲ್ಲಿಂದ ಕೆಲವು ಸುಂದರವಾದ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

ಫ್ರೆಂಚ್ ರಿವೇರಾದಿಂದ ತಮ್ಮ ಗ್ಲಾಮರಸ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಮೌನಿ ರಾಯ್, ‘ಕಾನ್ ಮತ್ತು ಗೊಂದಲಗಳು! ಶುಭೋದಯ’ ಎಂದು ಕ್ಯಾಪ್ಷನ್ ನೀಡಿದಾರೆ. ಈ ಮೂಲಕ ಯಾವುದೇ ಪರಿಸ್ಥಿತಿಯಲ್ಲೂ ‘ಶೋ ಮಸ್ಟ್ ಗೋ ಆನ್’ ಎಂಬುದನ್ನು ನಟಿ ಸಾಬೀತುಪಡಿಸಿದ್ದಾರೆ. ಅವರ ಫೋಟೋಗಳು ವೈರಲ್ ಆಗುತ್ತಿವೆ.

‘ಬ್ರಹ್ಮಾಸ್ತ್ರ’ ಸಿನಿಮಾ ಖ್ಯಾತಿಯ ಮೌನಿ ರಾಯ್, ಕಾನ್ ಸಿನಿಮೋತ್ಸವದಲ್ಲಿ ಕಪ್ಪು ಮತ್ತು ಬಿಳುಪು ಉಡುಪಿನಲ್ಲಿ ಕಣ್ಮನ ಸೆಳೆದಿದ್ದಾರೆ. ಅವರು ಬಿಳಿ ಬಣ್ಣದ ಹಾಲ್ಟರ್-ಶೈಲಿಯ ಕಾಲರ್ ಹೊಂದಿರುವ ಕಪ್ಪು ಬಣ್ಣದ ಮಿನಿ ಡ್ರೆಸ್ ಧರಿಸಿದ್ದಾರೆ. ಫ್ರಾನ್ಸ್‌ನ ತಂಪಾದ ಹವಾಮಾನಕ್ಕೆ ತಕ್ಕಂತೆ ಈ ಡ್ರೆಸ್ ಜೊತೆಗೆ ಸುಂದರವಾದ ಕೋಟ್, ಕಪ್ಪು ಬಣ್ಣದ ಸ್ಟಾಕಿಂಗ್ಸ್ ಹಾಗೂ ಬೂಟುಗಳನ್ನು ಧರಿಸಿ ಹೈ-ಫ್ಯಾಶನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮೌನಿ ರಾಯ್ ಅವರು ತಮ್ಮ ಹೊಸ ಸಿನಿಮಾ ‘ಬಾಂಬೆ ಸ್ಟೋರೀಸ್’ ಪ್ರದರ್ಶನಕ್ಕಾಗಿ ಸಹ-ನಟಿ ಅನುಪ್ರಿಯಾ ಗೊಯೆಂಕಾ ಅವರೊಂದಿಗೆ ಕಾನ್ ಸಿನಿಮೋತ್ಸವಕ್ಕೆ ತೆರಳಿದ್ದಾರೆ. 2023ರಲ್ಲಿ ಮೊದಲ ಬಾರಿಗೆ ಕಾನ್ ಚಿತ್ರೋತ್ಸವಕ್ಕೆ ಬಂದಿದ್ದ ಅವರಿಗೆ ಈಗ 2ನೇ ಬಾರಿ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ನಾವು ದೂರಾಗುತ್ತಿದ್ದೇವೆ: ಡಿವೋರ್ಸ್ ವಿಷಯ ಒಪ್ಪಿಕೊಂಡ ಮೌನಿ ರಾಯ್, ಸೂರಜ್ ನಂಬಿಯಾರ್

ಇತ್ತೀಚೆಗಷ್ಟೇ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ವಿಚ್ಛೇದನದ ಸುದ್ದಿ ಹೊರಬಿದ್ದಿತ್ತು. ಈ ಬಳಿಕ ಹರಿದಾಡುತ್ತಿದ್ದ ವದಂತಿಗಳಿಗೆ ಸೂರಜ್ ನಂಬಿಯಾರ್ ಬ್ರೇಕ್ ಹಾಕಿದ್ದಾರೆ. ‘ನಮ್ಮ ವಿಚ್ಛೇದನದ ಬಗ್ಗೆ ಹರಡುತ್ತಿರುವ ಸುದ್ದಿಗಳು ತೀರಾ ದುರುದ್ದೇಶಪೂರಿತವಾಗಿವೆ. ನಮ್ಮ ನಡುವೆ ಯಾವುದೇ ಜೀವನಾಂಶದ ವಿವಾದಗಳಿಲ್ಲ ಅಥವಾ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ. ನಾವಿಬ್ಬರೂ ಪರಸ್ಪರ ಗೌರವದಿಂದಲೇ ದೂರಾಗಲು ನಿರ್ಧರಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಪಿಂಗ್ ಮಾಲ್​​​ನ ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ಹೇಗೆ ನೋಡಿ – Kannada News | Fire Department Staff recuses 9 People Who stuck In Shopping Mall Lift at Shivamogga

ಶಿವಮೊಗ್ಗ, (ಮೇ 19):  ಶಾಪಿಂಗ್ ಮಾಡಲೇಂದು ತೆರಳಿದ್ದ 9 ಜನರು ಲಿಫ್ಟ್​​ನಲ್ಲಿ (Lift) ಸಿಲುಕಿ ಪರದಾಡಿರುವ ಘಟನೆ ಶಿವಮೊಗ್ಗ ನಗರದ (Shivamogga) ಶಾಪಿಂಗ್ ಮಾಲ್​​​​​ನಲ್ಲಿ (Shopping Mall) ನಡೆದಿದೆ. ಶಿವಮೊಗ್ಗ ನಗರದ ಆಲ್ಕೋಳ ವೃತ್ತದ ಬಳಿ ಇರುವ ಶಾಪಿಂಗ್ ಮಾಲ್ ನ ಲಿಫ್ಟ್​​ನಲ್ಲಿ ಅರ್ಧ ಗಂಟೆ ಕಾಲ ಸಿಲುಕಿದ್ದು, ಕೊನೆಗೆ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ.

ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಎಂಬವರು ಶಾಪಿಂಗ್​​ ಮಾಲ್​​​ನಲ್ಲಿ ಲಿಫ್ಟ್ ಪ್ರವೇಶಿಸಿದ್ದಾರೆ. ಆದ್ರೆ,​ ಲಿಫ್ಟ್‌ ನಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅರ್ಧದಲ್ಲೇನಿಂತುಕೊಂಡಿದೆ. ಇದರಿಂದ ಆತಂಕಗೊಂಡ ಕೂಗಾಡಿದ್ದು, ಇದನ್ನು ಕೇಳಿಸಿಕೊಂಡ ಮಾಲ್ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಕರೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕಾಮಿಸಿದ ಅಗ್ನಿಶಾಮಕ ಸಿಬ್ಬಂದಿ ತಂಡ, ಲಿಫ್ಟ್ ಓಪನ್ ಮಾಡಲು ನಾನಾ ಕಸರತ್ತು ನಡೆಸಿದರು. ಕೊನೆಗೆ ಕಬ್ಬಿಣದ ಡೋರ್ ಕತ್ತರಿಸಿ ಲಿಫ್ಟ್​​ನಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ, ಅಗ್ನಿ ಶಾಮಕ ಸಿಬ್ಬಂದಿಯ ಹರಸಾಹಸ ಹೇಗಿತ್ತು ಎನ್ನುವುದನ್ನು ವಿಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೇಫ್ ಸಿಟಿ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೇ ಇಲ್ಲ ಬೆಂಗಳೂರಲ್ಲಿ ಸೇಫ್ಟಿ: ಬ್ಯಾಟರಿಗಳ ಕಳವು – Kannada News | Bengaluru Safe City CCTV Batteries Stolen on Langford Road; Police Launch Probe

ಬೆಂಗಳೂರು, ಮೇ 19: ಮಹಿಳೆಯರ ಸುರಕ್ಷತೆಗೆ ನಗರದಾದ್ಯಂತ ಅಳವಡಿಸಲಾಗಿರುವ ‘ಸೇಫ್ ಸಿಟಿ’ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೆ ಸಂಪರ್ಕಿಸಲಾದ ಬ್ಯಾಟರಿಗಳನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿದ್ದ ಸಿಸಿಟಿವಿ ಜಂಕ್ಷನ್ ಬಾಕ್ಸ್‌ಗಳೊಳಗಿನ ಎರಡು ಬ್ಯಾಟರಿಗಳನ್ನು ಮೇ 16ರಂದು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಮುಖ್ಯಾಂಶಗಳು

  • ಸೇಫ್ ಸಿಟಿ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೇ ಇಲ್ಲ ಭದ್ರತೆ
  • ಕ್ಯಾಮರಾಗಳಿಗೆ ಸಂಪರ್ಕಿಸಲಾದ ಬ್ಯಾಟರಿ ಕದ್ದೊಯ್ದ ಕಳ್ಳರು
  • ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿ ನಡೆದ ಘಟನೆ ಸಂಬಂಧ ದೂರು

ಮಹಿಳೆಯರ ಸುರಕ್ಷತೆ ಮತ್ತು ನಗರದಲ್ಲಿ ನಿಗಾವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ‘ಸೇಫ್ ಸಿಟಿ’ ಯೋಜನೆಯಡಿ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳು ನಿರಂತರವಾಗಿ ಕಾರ್ಯನಿರ್ವಹಿಸಲು ಜಂಕ್ಷನ್ ಬಾಕ್ಸ್‌ಗಳಲ್ಲಿ ಬ್ಯಾಟರಿಗಳನ್ನು ಇರಿಸಲಾಗಿತ್ತು. ಪೊಲೀಸರ ಪ್ರಕಾರ, ಕಳ್ಳರು ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿದ್ದ ಎರಡು ಜಂಕ್ಷನ್ ಬಾಕ್ಸ್‌ಗಳನ್ನು ಗುರಿಯಾಗಿಸಿಕೊಂಡು ಅವುಗಳೊಳಗಿನ ಬ್ಯಾಟರಿಗಳನ್ನು ಕದ್ದೊಯ್ದಿದ್ದಾರೆ. ಈ ಕುರಿತು ಸರ್ವೆಲೆನ್ಸ್ ವ್ಯವಸ್ಥೆಯ ನಿರ್ವಹಣೆಯ ಹೊಣೆ ಹೊತ್ತಿರುವ ಹನಿವೆಲ್ ಕಂಪನಿಯ ಯೋಜನಾ ನಿರ್ದೇಶಕ ರಾಜೀವ್ ನಾಯ್ಕರ್ ದೂರು ನೀಡಿದ್ದಾರೆ. ಕಳುವಾದ ಬ್ಯಾಟರಿಗಳ ಮೌಲ್ಯ ಸುಮಾರು 46,000 ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಗುರುತಿಸಿ ಬಂಧಿಸಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಅರ್ಧ ಗಂಟೆಯ ಭಾರಿ ಮಳೆಗೇ ನಲುಗಿದ ಬೆಂಗಳೂರು, ಅವಾಂತರಗಳ ಸರಮಾಲೆ

ಏನಿದು ಸೇಫ್ ಸಿಟಿ ಪ್ರಾಜೆಕ್ಟ್?

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ವತಿಯಿಂದ ನಿರ್ಭಯಾ ನಿಧಿಯ ಅಡಿಯಲ್ಲಿ ಜಾರಿಗೆ ತರಲಾದ ಪ್ರಮುಖ ಮಹಿಳಾ ಸುರಕ್ಷತಾ ಯೋಜನೆಗಳ ಪೈಕಿ ಸೇಫ್ ಸಿಟಿ ಪ್ರಾಜೆಕ್ಟ್ ಕೂಡ ಒಂದು. ದೇಶದ ಪ್ರಮುಖ ಮಹಾನಗರಗಳಲ್ಲಿ ಅಪರಾಧಗಳನ್ನು ತಡೆಗಟ್ಟಲು ಮತ್ತು ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಈ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ವವಸ್ಥೆಯನ್ನು ಅಳವಡಿಸಲಾಗುತ್ತದೆ. ಯೋಜನೆಯಡಿ ಬೆಂಗಳೂರು ನಗರಾದ್ಯಂತ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾವಿರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:39 pm, Tue, 19 May 26

Source link

Exit mobile version