ಕ್ಯಾಸ್ಟರ್ ಆಯಿಲ್ ನಿಜವಾಗಿಯೂ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆಯೇ? ಇಲ್ಲಿದೆ ಸ್ಪಷ್ಟ ಮಾಹಿತಿ – Kannada News | Castor Oil Benefits for Gut Health and Constipation Relief

Castor Oil Benefits For Gut Health And Constipation ReliefImage Credit source: Getty Images

ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆಯನ್ನು (Castor Oil) ಮನೆಮದ್ದುಗಳಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಇದು ಚರ್ಮ, ಕೂದಲು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಕ್ಯಾಸ್ಟರ್ ಎಣ್ಣೆಯಲ್ಲಿರುವ ಪೋಷಕಾಂಶಗಳು ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತವೆ, ಅದಕ್ಕಾಗಿಯೇ ಅನೇಕರು ಇದನ್ನು ನಿಯಮಿತವಾಗಿ ಬಳಸುತ್ತಾರೆ. ವಿಶೇಷವಾಗಿ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಕಂಡುಕೊಳ್ಳಲು ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ನಿಮಗೆ ತಿಳಿದಿರಬಹುದು ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕುವಲ್ಲಿ ಕರುಳು ಪ್ರಮುಖ ಪಾತ್ರವಹಿಸುತ್ತವೆ. ಕರುಳಿನ ಕಾರ್ಯ ಸರಿಯಾಗಿ ನಡೆಯದಿದ್ದಾಗ, ಮಲಬದ್ಧತೆ, ಅನಿಲ ಮತ್ತು ಹೊಟ್ಟೆ ಭಾರವಾದ ಸಮಸ್ಯೆಗಳು ಉದ್ಭವಿಸಬಹುದು. ಅಂತಹ ಸಂದರ್ಭಗಳಲ್ಲಿ, ಅನೇಕರು ಹರಳೆಣ್ಣೆ ಉಪಯೋಗ ಮಾಡುತ್ತಾರೆ. ಆದರೆ ಈ ಎಣ್ಣೆಯ ಪರಿಣಾಮ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಎಣ್ಣೆಯ ಪ್ರಮಾಣದಲ್ಲಿ ಅಥವಾ ಸರಿಯಾದ ಮಾಹಿತಿ ಇಲ್ಲದೆ ಬಳಸುವುದರಿಂದ ಸಮಸ್ಯೆ ಕಡಿಮೆಯಾಗುವುದಿಲ್ಲ ಬದಲಾಗಿ ಹೆಚ್ಚಾಗುತ್ತದೆ. ಆದ್ದರಿಂದ, ಕ್ಯಾಸ್ಟರ್ ಆಯಿಲ್ ಮತ್ತು ಕರುಳಿನ ನಡುವಿನ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಕ್ಯಾಸ್ಟರ್ ಆಯಿಲ್ ನಿಜವಾಗಿಯೂ ಕರುಳನ್ನು ಸ್ವಚ್ಛಗೊಳಿಸುತ್ತದೆಯೇ, ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೆಕು ಎಂಬುದನ್ನು ತಿಳಿದುಕೊಳ್ಳಿ.

ಕ್ಯಾಸ್ಟರ್ ಆಯಿಲ್ ನಿಜವಾಗಿಯೂ ಕರುಳನ್ನು ಶುದ್ಧೀಕರಿಸುತ್ತದೆಯೇ?

ಕ್ಯಾಸ್ಟರ್ ಆಯಿಲ್ ಮುಖ್ಯವಾಗಿ ರಿಕಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಕರುಳಿನ ಸ್ನಾಯುಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಕ್ಯಾಸ್ಟರ್ ಆಯಿಲ್ ತೆಗೆದುಕೊಂಡ ನಂತರ, ಕರುಳಿನಲ್ಲಿನ ಚಟುವಟಿಕೆ ಹೆಚ್ಚಾಗುತ್ತದೆ, ಇದು ಹೊಟ್ಟೆಯನ್ನು ಕ್ಲೀನ್ ಮಾಡಲು ಸುಲಭವಾಗುತ್ತದೆ. ಹೆಚ್ಚುವರಿಯಾಗಿ, ಇದರಲ್ಲಿರುವ ಕೊಬ್ಬಿನಾಮ್ಲಗಳು ಜೀರ್ಣಕಾರಿ ರಸವನ್ನು ಸಕ್ರಿಯಗೊಳಿಸಬಹುದು, ಅದಕ್ಕಾಗಿಯೇ ಕೆಲವರು ಇದನ್ನು ಮಲಬದ್ಧತೆ ಸಮಸ್ಯೆಗಳಿಗೆ ಬಳಸುತ್ತಾರೆ. ಆದರೆ ಡೋಸೇಜ್ ಮತ್ತು ಸರಿಯಾದ ವಿಧಾನಕ್ಕೆ ಗಮನ ಕೊಡುವುದು ಮುಖ್ಯ. ಸಲಹೆಯಿಲ್ಲದೆ ಇದನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಸೆಳೆತ ಅಥವಾ ದೌರ್ಬಲ್ಯವೂ ಉಂಟಾಗಬಹುದು.

ಇದನ್ನೂ ಓದಿ: ನಿರಂತರವಾಗಿ ಕಂಡುಬರುವ ಮಲಬದ್ಧತೆ ಸಮಸ್ಯೆ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದೇ?

ಕ್ಯಾಸ್ಟರ್ ಆಯಿಲ್ ಯಾವ ಸಮಸ್ಯೆಗಳಿಗೆ ಪ್ರಯೋಜನಕಾರಿ?

ಈ ಎಣ್ಣೆಯನ್ನು ಮಲಬದ್ಧತೆಗೆ ಬಳಸಲಾಗುತ್ತದೆ. ಇದರ ಜೊತೆಗೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆಯ ಭಾರವನ್ನು ನಿವಾರಿಸಲು ಇದು ಸಹಾಯಕವಾಗಿದೆ. ಕೆಲವರು ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಯಿಂದ ಪರಿಹಾರ ಕಂಡುಕೊಳ್ಳಲು ಇದನ್ನು ಉಪಯೋಗಿಸುತ್ತಾರೆ. ಬಾಹ್ಯವಾಗಿ, ಇದನ್ನು ಕೀಲು ನೋವು ಮತ್ತು ಒಣ ಚರ್ಮಕ್ಕೆ ಬಳಸಲಾಗುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ನೆತ್ತಿಯನ್ನು ಪೋಷಿಸಲು ಕ್ಯಾಸ್ಟರ್ ಆಯಿಲ್ ಉತ್ತಮ. ಆದರೆ ಇದರಿಂದ ಸಿಗುವ ಫಲಿತಾಂಶ ಪ್ರತಿಯೊಂದು ಸಮಸ್ಯೆಗೂ ಒಂದೇ ರೀತಿಯಾಗಿ ಇರುವುದಿಲ್ಲ. ಹಾಗಾಗಿ ಬಳಕೆ ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಬಹಳ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:37 pm, Wed, 14 January 26

Source link

IND vs NZ: ರಾಜ್‌ಕೋಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಕೆಎಲ್ ರಾಹುಲ್ – Kannada News | KL Rahul Century: Unbeaten 112* vs NZ in Rajkot ODI – A Historic Knock

ಈ ಶತಕದೊಂದಿಗೆ ವಿಶೇಷ ಪಟ್ಟಿಗೆ ಸೇರಿರುವ ರಾಹುಲ್, ಭಾರತದಲ್ಲಿ ಮತ್ತು ನ್ಯೂಜಿಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿದ ಆರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ರಾಹುಲ್​ಗೂ ಮೊದಲು, ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಸೇರಿದ್ದಾರೆ.

Source link

ನವಜಾತ ಶಿಶು ರಸ್ತೆಯಲ್ಲಿ ಬಿಟ್ಟುಹೋಗಿದ್ದ ಮಹಿಳೆಗೆ ಜೈಲು ಶಿಕ್ಷೆ: 10 ಸಾವಿರ ರೂ ದಂಡ – Kannada News | Bagalkote Court: Woman Gets 1 Year Jai; 10K Fine for Newborn Baby Abandonment

ಬಾಗಲಕೋಟೆಯ ಜೆಎಂಎಫ್​ಸಿ ನ್ಯಾಯಾಲಯ

ಬಾಗಲಕೋಟೆ, ಜನವರಿ 14: ನವಜಾತ ಶಿಶು (Newborn Baby) ಪಾಲನೆ ಮಾಡದೆ ರಸ್ತೆಯಲ್ಲಿ ಬಿಟ್ಟುಹೋದ ಮಹಿಳೆಗೆ (Woman) ಒಂದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ಬಾಗಲಕೋಟೆಯ ಜೆಎಂಎಫ್​ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಸಿದ್ದವ್ವ ಹನುಮಂತ ಸಂಗೊಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ನಡೆದದ್ದೇನು? 

ಪತಿ ಮೃತಪಟ್ಟ 8 ವರ್ಷಗಳ ನಂತರ ಅನೈತಿಕ ಸಂಬಂಧದಿಂದ ಗರ್ಭಿಣಿಯಾಗಿದ್ದ ಮಹಿಳೆ ಜನಿಸಿದ ಗಂಡು ಮಗುವನ್ನು 2023ರ ಆಗಸ್ಟ್​ 6ರಂದು ಬಾಗಲಕೋಟೆ ತಾಲೂಕಿನ ಬೆನಕಟ್ಟಿ-ಕಮತಗಿ ರಸ್ತೆಯಲ್ಲಿ ಬಿಟ್ಟುಹೋಗಿದ್ದರು. ಈ ಸಂಬಂಧ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಪಿಎಸ್​​ಐ ಶರಣಬಸಪ್ಪ ತನಿಖೆ ನಡೆಸಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹಿರಿಯ ಅಭಿಯೋಜಕಿ ಶಾರದಾ ವಾದ ಮಂಡಿಸಿದ್ದರು.

ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಅಲೈನಾ ಲೋಕಾಪುರ(10) ಮೃತ ಬಾಲಕಿ. ಬೀದಿನಾಯಿಗಳ ಹಾವಳಿ ತಡೆಗಟ್ಟಲು
ಬಾಗಲಕೋಟೆ ನಗರಸಭೆ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆನೇಕಲ್ ಗೊಲ್ಲಹಳ್ಳಿಯಲ್ಲಿ ದಾರುಣ ಘಟನೆ: ಪೋಷಕರ ನಿರ್ಲಕ್ಷ್ಯದಿಂದ ಜನಿಸಿದ ಕೂಡಲೇ ತ್ರಿವಳಿ ಶಿಶುಗಳು ಸಾವು

ಬಾಗಲಕೋಟೆಯಲ್ಲಿ ಇತ್ತೀಚೆಗೆ ಬೀದಿ‌ನಾಯಿಗಳ ಹಾವಳಿ ಹೆಚ್ಚಾಗಿದೆ. ಡಿಸೆಂಬರ್​ 27ರಂದು ಬೀದಿನಾಯಿ ಬಾಲಕಿ ಅಲೈನಾ ಮೇಲೆ ದಾಳಿ ಮಾಡಿತ್ತು ಬಾಗಲಕೋಟೆಯ ನವನಗರದ ಸೆಕ್ಟರ್ ನಂ.15ರಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ: ಝೀರೋ ಟ್ರಾಫಿಕ್​​ನಲ್ಲಿ ಕರೆತಂದರೂ ಬದುಕಲಿಲ್ಲ ಜೀವ: ಚಿಕಿತ್ಸೆ ಫಲಿಸದೆ ಕಂದಮ್ಮ ಕೊನೆಯುಸಿರು

ಬಾಲಕಿಯ ಕಣ್ಣು, ಮೂಗು, ಮುಖಕ್ಕೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಬಾಲಕಿಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾತ್ರಿ ವೇಳೆ ನಡುರಸ್ತೆಯಲ್ಲೇ ಝಳಪಿಸಿದ ಲಾಂಗ್​​: ಖಾರದ ಪುಡಿ ಎರಚಿ ರೌಡಿ ಶೀಟರ್​​ನ ಭೀಕರ ಹತ್ಯೆ – Kannada News | Notorious Rowdy Shabbir Killed in Bande Palya, Bengaluru, 6 Man Gang Attack Due to Old Feud

ಬೆಂಗಳೂರು, ಜನವರಿ 14: 1 ನಟೋರಿಯಸ್ ರೌಡಿ ಶೀಟರ್​​ನ ಹಳೇ ದ್ವೇಷದ ಹಿನ್ನೆಲೆ ವೈರಿಗಳು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಂಡೆಪಾಳ್ಯ ಠಾಣಾ ವ್ಯಾಪ್ತಿಯ ಮಂಗಮ್ಮನಪಾಳ್ಯದಲ್ಲಿ ನಡೆದಿದೆ. 6 ಜನ ದುಷ್ಕರ್ಮಿಗಳ ತಂಡ ನಡೆಸಿದ ಅಟ್ಟಹಾಸಕ್ಕೆ 28 ವರ್ಷದ ಮೊಹಮ್ಮದ್ ಶಬ್ಬೀರ್ ಎಂಬಾತ ನಡು ರಸ್ತೆಯಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ. ಆರೋಪಿಗಳು ಹೊಂಚು ಹಾಕಿ ದಾಳಿ ನಡೆಸಿರುವ ವಿಚಾರ ಪೊಲೀಸ್​​ ತನಿಖೆ ವೇಳೆ ಗೊತ್ತಾಗಿದೆ.

ಕೋರಮಂಗಲ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಮಂಗಮ್ಮನಪಾಳ್ಯ ನಿವಾಸಿ ಮೊಹಮ್ಮದ್ ಶಬ್ಬೀರ್ ಮತ್ತು ಐವರು  ಸೋಮವಾರ ರಾತ್ರಿ ತಮ್ಮ ಸ್ನೇಹಿತನ್ನ ಮಾತಾಡಿಸಿ ಆಟೋದಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಮಂಗಮ್ಮನಪಾಳ್ಯ ಮುಖ್ಯ ರಸ್ತೆಯ ತಿರುವಿನಲ್ಲಿ ಎದುರಾದ ಆರು ಮಂದಿ ದುಷ್ಕರ್ಮಿಗಳು ಏಕಾಏಕಿ ಆಟೋದಲ್ಲಿದ್ದವರ ಮೇಲೆ ಖಾರದ ಪುಡಿ ಎರಚಿ ಮಚ್ಚು, ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಟಾರ್ಗೆಟ್ ಆಗಿದ್ದ ಮೊಹಮ್ಮದ್ ಶಬ್ಬೀರ್ ಮೇಲೆಯೆ ತೀವ್ರ ದಾಳಿ ನಡೆಸಿದ್ದರಿಂದ ಆತ ಸ್ಥಳದಲ್ಲೇ ಉಸಿರು ಚೆಲ್ಲಿದ್ದರೆ, ಉಳಿದ ಐವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಲಕ್ಷ ಲಕ್ಷ ಹಣ, ಒಡವೆ ಗಿಫ್ಟ್ ಕೊಟ್ರೂ ಮತ್ತೊಬ್ಬನ ಜತೆ ಚಕ್ಕಂದ; ಹಂತಕನ ಡೆತ್ ನೋಟ್​​​ನಲ್ಲಿ ಮಹಿಳೆ ಕೊಲೆ ರಹಸ್ಯ ಬಯಲು

ಜನ ಓಡಾಡೋ ಜಾಗದಲ್ಲಿ ಈ ಕೃತ್ಯ ನಡೆದಿರುವ ಕಾರಣ ಪರಿಚಯಸ್ಥರೇ ಅರೋಪಿಗಳು ಎನ್ನುವುದು ಪೊಲೀಸರಿಗೆ ಗೊತ್ತಾಗಿದ್ದು, ದಾಳಿ ವೇಳೆ ಗಾಯಗೊಂಡ ವ್ಯಕ್ತಿ ನೀಡಿದ ದೂರಿನ ಮೇಲೆ 6 ಜನರ ವಿರುದ್ಧ ಬಂಡೇಪಾಳ್ಯ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಪ್ರಕರಣ ಸಂಬಂಧ ಸದ್ಯ ಇಬ್ಬರನ್ನ ವಶಕ್ಕೆ ಪಡೆದಿರುವ ಖಾಕಿ ವಿಚಾರಣೆ ನಡೆಸ್ತಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಿದೆ. ಇನ್ನು ಕೊಲೆಯಾದ ಶಬ್ಬೀರ್ ಕೂಡ ಸಾಮಾನ್ಯ ರೌಡಿಯಲ್ಲ. ಈತನ ವಿರುದ್ಧ ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊಲೆ ಯತ್ನ, ರಾಬರಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಿವೆ ಎನ್ನಲಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿಗೆ ಹೊಡೆಯಲು ಯತ್ನಿಸಿದ್ದ ಡಾಗ್ ಸತೀಶ್? – Kannada News | Bigg Boss Kannada: Dog Satish said he tried to hit Gilli in Bigg Boss house

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯುತ್ತಾ ಬಂದಿದೆ. ಆರಂಭದಲ್ಲಿ ಹಲವು ಮಂದಿ ಮನೆಗೆ ಎಂಟ್ರಿ ಕೊಟ್ಟಿದ್ದರು ನಿಯಮದಂತೆ ಒಬ್ಬೊಬ್ಬರಾಗಿ ಎಲ್ಲರೂ ಹೊರಗೆ ಹೋಗಿ ಈಗ ಏಳು ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಬಿಗ್​​ಬಾಸ್ ಮನೆಗೆ ಹೋಗಿ ಬಂದವರು ಸಖತ್ ಜನಪ್ರಿಯತೆ ಗಳಿಸುತ್ತಾರೆ ಆದರೆ ಹೀಗೆ ಆಚೆ ಬಂದವರು ಬಿಗ್​​ಬಾಸ್ ವಿರುದ್ಧವಾಗಿ ಮಾತನಾಡಿರುವುದು ಕಡಿಮೆ. ಆದರೆ ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಿ ಕೆಲ ವಾರವಷ್ಟೆ ಇದ್ದು ಹೊರಗೆ ಬಂದ ಡಾಗ್ ಸತೀಶ್ ಅವರು ಹೊರಗೆ ಬಂದಾಗಿನಿಂದಲೂ ಶೋ ಬಗ್ಗೆ, ಶೋನಲ್ಲಿ ತಮ್ಮ ಸಹ ಸ್ಪರ್ಧಿಗಳಾಗಿದ್ದವರ ಬಗ್ಗೆ ದೂರುಗಳನ್ನು ಹೇಳುತ್ತಿದ್ದಾರೆ. ಅದರ ಜೊತೆಗೆ ತಮ್ಮ ಬಗ್ಗೆ ಬಹುವಾಗಿ ಸ್ವಯಂ ಹೊಗಳಿಕೆ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ.

ಬಿಗ್​​ಬಾಸ್​​ನಿಂದ ಬಂದ ಬಳಿಕ ಒಂದರ ಮೇಲೊಂದು ಸಂದರ್ಶನಗಳನ್ನು ನೀಡುತ್ತಾ ತಮ್ಮ ಜನಪ್ರಿಯತೆ ಹೆಚ್ಚು ಮಾಡಿಕೊಳ್ಳುತ್ತಲೇ ಇರುವ ಡಾಗ್ ಸತೀಶ್ ಅವರನ್ನು ಇದೇ ಸೀಸನ್​​ಗೆ ಅತಿಥಿಯಾಗಿ ಹೋಗಿ ಕೆಲ ವಾರ ಇದ್ದ ಹಾಗೂ ಈ ಹಿಂದಿನ ಸೀಸನ್​​ನಲ್ಲೂ ಶೋಗೆ ಹೋಗಿದ್ದ ರಜತ್ ಅವರು ಸಂದರ್ಶನ ಮಾಡಿದ್ದಾರೆ. ಈ ವೇಳೆ ಗಿಲ್ಲಿ ಬಗ್ಗೆ ಬಲು ತಾತ್ಸಾರವಾಗಿ, ನಿಂದನಾತ್ಮಕವಾಗಿ ಡಾಗ್ ಸತೀಶ್ ಮಾತನಾಡಿದ್ದಾರೆ.

ಗಿಲ್ಲಿ ಬಗ್ಗೆ ರಜತ್ ಕೇಳಿದಾಗ, ಗಿಲ್ಲಿಯನ್ನು ಕಳ್ಳ, ಸುಳ್ಳ, ಕೊಳಕ ಎಂದೆಲ್ಲ ಸತೀಶ್ ಹೇಳಿದ್ದಾರೆ. ಮನೆಯಲ್ಲಿ ಎಲ್ಲರನ್ನೂ ಕಂಡಮ್ ಮಾಡುತ್ತಿದ್ದ, ಕೆಟ್ಟದಾಗಿ ಮಾತನಾಡುತ್ತಿದ್ದ, ಚೀಪ್ ಆಡಿಕೊಂಡು ನಗುತ್ತಿದ್ದ. ಆದರೆ ಯಾರಿಗೂ ಅವನೆಂದರೆ ಇಷ್ಟ ಇಲ್ಲ. ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದವರು ಅವನ ಜನಪ್ರಿಯತೆ ನೋಡಿ ಅವನ ಬಗ್ಗೆ ಮಾತನಾಡದೆ ಸುಮ್ಮನಾಗುತ್ತಿದ್ದಾರೆ. ಆದರೆ ನಾನು ಹಾಗಲ್ಲ, ನನಗೆ ಅನ್ನಿಸಿದ್ದು ನಾನು ಹೇಳುತ್ತೀನಿ, ಅವನೊಬ್ಬ ಕಳ್ಳ, ಸುಳ್ಳ, ಕೊಳಕ, ಅವನಿಂದಲೇ ನಾನು ಬಿಗ್​​ಬಾಸ್ ಮನೆಯಲ್ಲಿ ಸೈಲೆಂಟ್ ಆದೆ ಎಂದಿದ್ದಾರೆ ಡಾಗ್ ಸತೀಶ್.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ

‘ಬಿಗ್​​ಬಾಸ್ ಮನೆಯಲ್ಲಿ ನೀವು ಸಹ ಅವನಿಗೆ ಎದುರುತ್ತರ ಕೊಡಬೇಕಿತ್ತಲ್ಲ’ ಎಂಬ ಪ್ರಶ್ನೆಗೆ, ಡಾಗ್ ಸತೀಶ್, ‘ನಾನು ಸಾಕಷ್ಟು ಸಲ ಮಾತನಾಡಿದ್ದೀನಿ, ಅಶ್ಲೀಲ ಪದ ಬಳಸಿ ಬೈದಿದ್ದೀನಿ, ಒಮ್ಮೆ ಅಂತೂ ಹೊಡೆಯಲು ಸಹ ಹೋಗಿದ್ದೆ ಆದರೆ ಅದನ್ನೆಲ್ಲ ಕಟ್ ಮಾಡಿಬಿಟ್ಟಿದ್ದಾರೆ. ಅದು ಯಾವುದನ್ನೂ ತೋರಿಸಿಲ್ಲ. ಅವನು ಹೊರಗೆ ಬಂದ ಮೇಲೂ ಸಹ ಅವನ್ನು ಯಾವುದಕ್ಕೂ ನನ್ನ ಹತ್ತಿರ ಸಹ ಸೇರಿಸಲ್ಲ’ ಎಂದಿದ್ದಾರೆ ಡಾಗ್ ಸತೀಶ್.

ಗಿಲ್ಲಿ ಅಭಿಮಾನಿಗಳು ಈಗಾಗಲೇ ಡಾಗ್ ಸತೀಶ್ ಅನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಗಿಲ್ಲಿ ಫಿನಾಲೆ ಎಂಟ್ರಿ ಆಗಿದ್ದು, ಒಂದೊಮ್ಮೆ ಗಿಲ್ಲಿ ಗೆದ್ದರೆ ಡಾಗ್ ಸತೀಶ್ ಇನ್ನಷ್ಟು ಟ್ರೋಲ್ ಆಗುವುದಂತೂ ಗ್ಯಾರೆಂಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:16 pm, Wed, 14 January 26

Source link

ರಾಯಚೂರು: 2 ಕೋಟಿ ರೂ ಬಿಲ್ ಪಾವತಿಸದ ಸಮಾಜ ಕಲ್ಯಾಣ ಇಲಾಖೆಗೆ ಕೋರ್ಟ್ ತಕ್ಕ ಶಾಸ್ತಿ – Kannada News | Raichur Social Welfare Dept: Court Orders Seizure Over Rs 2 Cr Ration Bill Arrears

ರಾಯಚೂರು, ಜನವರಿ 14: ಸಮಾಜ ಕಲ್ಯಾಣ ಇಲಾಖೆ (Social Welfare Dept), ತಮ್ಮ ಹಾಸ್ಟೆಲ್​ಗಳಿಗೆ ರೇಷನ್​​ ಸರಬರಾಜು ಮಾಡಿರುವ ವ್ಯಾಪಾರಿಗೆ ಕೋಟ್ಯಂತರ ರೂ ಬಿಲ್ ಪಾವತಿಸದೇ (Ration Bill) ಡೋಂಟ್ ಕೇರ್ ಎಂದಿದೆ. ಕೋರ್ಟ್ ಸಮ್ಮುಖದಲ್ಲಿ ಹಣ ಕೊಡುತ್ತೇವೆ ಅಂತ ಒಪ್ಪಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ಪೀಠೋಪಕರಣಗಳ ಜಪ್ತಿಗೆ ಆದೇಶಿಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.

2 ಕೋಟಿ 19 ಲಕ್ಷ ರೂ. ಬಿಲ್ ಬಾಕಿ

ದೂರುದಾರ ಮತಿ ಸಾಗರ್​ ಎನ್ನುವವರು ಕೋರ್ಟ್ ಆದೇಶದನ್ವಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಇವರು ಪದ್ಮಾವತಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ರಾಯಚೂರಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮಾನ್ವಿ, ಲಿಂಗಸುಗೂರು ತಾಲೂಕಿನಲ್ಲಿ ಇಲಾಖಾ ವ್ಯಾಪ್ತಿಯ ಹಾಸ್ಟೆಲ್​ಗಳಿಗೆ ರೇಷನ್ ಸಪ್ಲೈ ಮಾಡುತ್ತಿದ್ದರು. ಈ ಬಗ್ಗೆ ಟೆಂಡರ್ ಪಡೆದಿದ್ದ ಮತಿ ಸಾಗರ್​ಗೆ ಹಳೆ ಬಿಲ್ ಪಾವತಿಯಾಗಿಲ್ಲ.

ಇದನ್ನೂ ಓದಿ: ರೈತರಿಗೆ ಪರಿಹಾರ ನೀಡಲು ವಿಳಂಬ: ಡಿಸಿ ಕಾರು, ಪೀಠೋಪಕರಣ ಜಪ್ತಿಗೆ ಕೋರ್ಟ್ ಆದೇಶ

ಮಾನ್ವಿ ತಾಲೂಕು ಕಚೇರಿಯ 1 ಕೋಟಿ 87 ಲಕ್ಷ ರೂ ಹಾಗೂ ಲಿಂಗಸುಗೂರು ತಾಲೂಕು ಕಚೇರಿಯಿಂದ 32 ಲಕ್ಷ 50 ಸಾವಿರ ರೂ. ಹಣ ಬಾಕಿ ಇದೆ. ಹೀಗೆ ಒಟ್ಟು 2 ಕೋಟಿ 19 ಲಕ್ಷ ರೂ. ಬಿಲ್ ಬಾಕಿ ಇದೆ. ಬಿಲ್ ಕ್ಲಿಯರ್ ಮಾಡುವುದುಕ್ಕೆ ತಾಲೂಕು ಅಧಿಕಾರಿಗಳು ಬಿಲ್ ಮಾಡ್ತಿದ್ದಾರೆ. ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾತ್ರ ತಿರಸ್ಕರಿಸಿ ಮಾಡುತ್ತಿದ್ದಾರಂತೆ. ಈ ಬಗ್ಗೆ ಸುಮಾರು 20 ಪತ್ರಗಳನ್ನ ಬರೆದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಹೀಗಾಗಿ ಮಾಲೀಕ ಮತಿ ಸಾಗರ್ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ವಿಚಾರಣೆ ವೇಳೆ ಅಧಿಕಾರಿಗಳು ಬಾಕಿ ಬಿಲ್ ಪಾವತಿಗೆ ಒಪ್ಪಿಕೊಂಡಿದ್ದರು. ಆದರೆ ಸಂಧಾನದಂತೆ ಹಣ ಪಾವತಿ ಮಾಡದ ಹಿನ್ನೆಲೆ ಜಪ್ತಿ ಕಾರ್ಯ ನಡೆದಿದೆ.

ಜಿಲ್ಲಾ ಸತ್ರ ನ್ಯಾಯಾಲಯದ ಕಮರ್ಷಿಯಲ್ ಕೋರ್ಟ್ ಆದೇಶ ಬೆನ್ನಲ್ಲೇ ಜಪ್ತಿ ಮಾಡಲಾಗಿದೆ. ಜಪ್ತಿ ವೇಳೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಉಪ ನಿರ್ದೇಶಕಿ ಸಿಂಧು ಕೂಡ ಕಚೇರಿಯಲ್ಲೇ ಇದ್ದರು. ಈ ವೇಳೆ ಉಪ ನಿರ್ದೇಶಕಿ ಸಿಂಧು ಕೊಠಡಿಯ ಖುರ್ಚಿ ಸಹ ಬಿಡದೇ ಜಪ್ತಿ ಕಾರ್ಯ ಮಾಡಲಾಯಿತು. ಈ ವೇಳೆ ಅವರು ಗಲಿಬಿಲಿಗೊಂಡಿದ್ದು ಕಂಡುಬಂತು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೇಳಿದ್ದಿಷ್ಟು 

ಕುರ್ಚಿಗಳು, ಟೇಬಲ್​ಗಳು, ಕಂಪ್ಯೂಟರ್​ಗಳು, ಪ್ರಿಂಟರ್ ಸೇರಿ ವಿವಿಧ ಬೆಲೆ ಬಾಳುವ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಈ ಜಪ್ತಿ ಕಾರ್ಯದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿಂಧು ಮಾತನಾಡಿದ್ದು, ಈ ಕೇಸ್​ನ ಎಲ್ಲಾ ಬಿಲ್ ಆಗಿದ್ದು ಹಣ ಪಾವತಿ ಮಾಡಿದ್ದೇವೆ. ಆ ಬಗ್ಗೆ ದಾಖಲೆಗಳು ನಮ್ಮಲ್ಲಿವೆ. ದೂರುದಾರರ ಬಳಿ ಸಾಕ್ಷಿಗಳಿದ್ದರೇ ನಾವು ಬಿಲ್ ಮಾಡುತ್ತೇವೆ. ಇಲ್ಲಾ ಹಿರಿಯ ಅಧಿಕಾರಿಗಳು ಹೇಳುವ ರೀತಿ ಕ್ರಮಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಭೂಸ್ವಾಧೀನ ಮಾಡಿಕೊಂಡು 30 ವರ್ಷವಾದರೂ ಪರಿಹಾರ ನೀಡದ ನೀರಾವರಿ ಇಲಾಖೆ: ಕಚೇರಿಯ ಎಲ್ಲ ಪೀಠೋಪಕರಣ ಜಪ್ತಿ ಆಯ್ತು

ಒಟ್ಟಿನಲ್ಲಿ ಸದ್ಯ ಕೋರ್ಟ್ ಆದೇಶದನ್ವಯ ಜಪ್ತಿ ಕಾರ್ಯ ಮಾಡಲಾಗಿದ್ದು, 2 ಕೋಟಿ ರೂ ಬಾಕಿ ಬಿಲ್ ಅನ್ನ ಸಮಾಜ ಕಲ್ಯಾಣ ಇಲಾಖೆ ಹೇಗೆ ಪಾವತಿಸತ್ತೆ ಕಾದುನೋಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಕ್ತಹೀನತೆ ನಿವಾರಿಸುವ, ಮೈ ಬೆಚ್ಚಗಾಗಿಸುವ ನೈಸರ್ಗಿಕ ವಿಧಾನಗಳು: ಬಾಬಾ ರಾಮದೇವ್ ಶಿಫಾರಸು – Kannada News | Baba Ramdev advices natural methods to keep body warm in winters

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಬಹುದಾದ ವಿವಿಧ ನೈಸರ್ಗಿಕ ವಿಧಾನಗಳನ್ನು ಬಾಬಾ ರಾಮದೇವ್ ವಿವರಿಸುತ್ತಾರೆ. ನೀವು ಗಮನಿಸಿ ನೋಡಿ, ಕೆಲ ವ್ಯಕ್ತಿಗಳ ದೇಹವು ಬೇರೆಯವರಿಗೆ ಹೋಲಿಸಿದರೆ ತಣ್ಣಗಿರುತ್ತದೆ. ದೇಹದಲ್ಲಿ ರಕ್ತದ ಅಂಶ ಕಡಿಮೆ ಇದ್ದರೆ ಹೀಗಾಗಬಹುದು. ಇದಲ್ಲದೆ, ಕಳಪೆ ಜೀರ್ಣಕ್ರಿಯೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವು ಸರಳ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ದೀರ್ಘಕಾಲದವರೆಗೆ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಬಹುದು ಎಂದು ರಾಮದೇವ್ (Baba Ramdev) ಹೇಳುತ್ತಾರೆ. ವಾಸ್ತವವಾಗಿ, ಕಳಪೆ ಜೀರ್ಣಕ್ರಿಯೆ ಇರುವ ಜನರು ಅಜೀರ್ಣ, ಗ್ಯಾಸ್ ಮತ್ತು ಆ್ಯಸಿಡಿಟಿಯಿಂದ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಯು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿದ ಇನ್ಸುಲಿನ್ ಸಂವೇದನೆಯಿಂದಾಗಿ, ಮಧುಮೇಹ ಬರುವ ಅಪಾಯ ಹೆಚ್ಚಾಗುತ್ತದೆ. ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಸ್ಥಳೀಯ ವಿಧಾನಗಳೊಂದಿಗೆ ಚಿಕಿತ್ಸೆ ನೀಡಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹಿಮೋಗ್ಲೋಬಿನ್ ಕೊರತೆ (ರಕ್ತಹೀನತೆ) ಮತ್ತು ಕಳಪೆ ಜೀರ್ಣಕ್ರಿಯೆ ಸಮಸ್ಯೆಗಳು ಇಂದಿನ ಜೀವನಶೈಲಿಯ ಪರಿಣಾಮಗಳಾಗಿವೆ. ಇದು ದೌರ್ಬಲ್ಯ, ಶೀತ ಕೈ ಮತ್ತು ಶೀತ ಪಾದಗಳು ಮತ್ತು ನಿಶಕ್ತಿಗೆ ಕಾರಣವಾಗುತ್ತದೆ. ಈ ಆರೋಗ್ಯ ಸವಾಲುಗಳನ್ನು ಪರಿಹರಿಸಲು ಸ್ವಾಮಿ ರಾಮದೇವ್ ಆಯುರ್ವೇದ ಸಹಾಯವನ್ನು ಶಿಫಾರಸು ಮಾಡುತ್ತಾರೆ. ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಬಲ್ಲ ಕೆಲ ತಿನಿಸುಗಳ ಮಾಹಿತಿ ಇಲ್ಲಿದೆ…

ಹಿಮೋಗ್ಲೋಬಿನ್ ಕೊರತೆ ನಿವಾರಿಸುವುದು ಹೇಗೆ?

ಕೆಲವರು ಚಳಿಯಲ್ಲಿ ಕಂಬಳಿ ಹೊದ್ದುಕೊಂಡಿದ್ದರೂ ನಡುಗುತ್ತಾರೆ. ಇದಕ್ಕೆ ರಕ್ತಹೀನತೆಯೂ ಒಂದು ಕಾರಣವಾಗಿರಬಹುದು ಎಂಬುದು ಬಾಬಾ ರಾಮದೇವ್ ಅವರ ಅನಿಸಿಕೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಒಂದು ವಿಡಿಯೋದಲ್ಲಿ ಅವರು ಹಿಮೋಗ್ಲೋಬಿನ್ ಹೆಚ್ಚಿಸುವ ಕೆಲ ತಿನಿಸುಗಳ ವಿವರ ನೀಡಿದ್ದಾರೆ. ಕ್ಯಾರೆಟ್, ಟೊಮೆಟೊ, ಬೀಟ್​ರೂಟ್ ಮತ್ತು ನೆಲ್ಲಿಕಾಯಿ ರಸವನ್ನು ಕುಡಿಯುವ ಮೂಲಕ ನಿಮ್ಮ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಈ ಚಳಿಗಾಲದ ಹಣ್ಣುಗಳು ಕಬ್ಬಿಣದಿಂದ ಸಮೃದ್ಧವಾಗಿವೆ ಮತ್ತು ಇತರ ಪೋಷಕಾಂಶಗಳನ್ನು ಒದಗಿಸುತ್ತವೆ. ಚಳಿಗಾಲದಲ್ಲಿ ಈ ರಸಗಳನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಕ್ಯಾರೆಟ್ ಬ್ಲಡ್ ಕೌಂಟ್ ಹೆಚ್ಚಿಸುವುದಲ್ಲದೆ, ನಮ್ಮ ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶವಾದ ವಿಟಮಿನ್ ಎ ಅನ್ನು ಸಹ ಹೊಂದಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಕಾಕಡ ಸಿಂಗಿ; ಆಯುರ್ವೇದ ಔಷಧ ಬಗ್ಗೆ ಬಾಬಾ ರಾಮದೇವ್ ಮಾಹಿತಿ

ಆಮ್ಲಾದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ತಿನ್ನುವುದು ಅಥವಾ ಅದರ ರಸವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತ ಮತ್ತು ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಮ್ಲಾ ಯಕೃತ್ತನ್ನು ನಿರ್ವಿಷಗೊಳಿಸುವುದು, ಕೂದಲು ಉದುರುವುದನ್ನು ತಡೆಯುವುದು ಮತ್ತು ಹೊಟ್ಟೆಯ ಗ್ಯಾಸ್ ಅನ್ನು ಕಡಿಮೆ ಮಾಡುವಂತಹ ಪ್ರಯೋಜನಗಳನ್ನು ಸಹ ನೀಡುತ್ತದೆ.

ಶುಂಠಿ ರಸವನ್ನು ಕುಡಿಯುವುದರಿಂದ ದೇಹವು ಬೆಚ್ಚಗಾಗುತ್ತದೆ. ಇದು ಚಯಾಪಚಯ ಕ್ರಿಯೆ ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರ ಉರಿಯೂತ ನಿವಾರಕ ಗುಣಗಳು ಚಳಿಗಾಲದಲ್ಲಿ ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೀಟ್​ರೂಟ್ ನೋಡಲು ಕೆಂಪು ಬಣ್ಣದ್ದಾಗಿರುವುದು ಮಾತ್ರವಲ್ಲದೆ ನಮ್ಮ ರಕ್ತನಾಳಗಳನ್ನು ರಕ್ತದಿಂದ ತುಂಬಿಸುತ್ತದೆ. ಇದನ್ನು ಸೇವಿಸುವುದರಿಂದ ಚಳಿಗಾಲದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ರಸವನ್ನು ಕುಡಿಯುವುದರಿಂದ ನಮ್ಮ ಮೈಬಣ್ಣವೂ ಹೊಳೆಯುತ್ತದೆ.

ಪಾಲಕ್, ಬಾತುವಾ ಮತ್ತು ಮೆಂತ್ಯವನ್ನು ತಿನ್ನಿರಿ

ನಿಮ್ಮ ಕಬ್ಬಿಣದ ಅಗತ್ಯವನ್ನು ಪೂರೈಸಲು ನೀವು ಪಾಲಕ್ ಅನ್ನು ಸಹ ತಿನ್ನಬಹುದು. ಬಾಬಾ ರಾಮದೇವ್ ಅವರು ಸ್ವಲ್ಪ ಬಾತುವಾ ಮತ್ತು ಮೆಂತ್ಯ ಸೊಪ್ಪಿನೊಂದಿಗೆ ಪಾಲಕ್ ಅನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇವು ದೇಹವನ್ನು ಬೆಚ್ಚಗಾಗಿಸುತ್ತದೆ. ನಿಂಬೆ, ಶುಂಠಿ ಮತ್ತು ಅರಿಶಿನವನ್ನು ಸಾಗುವಿಗೆ ಸೇರಿಸುವುದರಿಂದ ದೇಹವು ಬೆಚ್ಚಗಾಗುತ್ತದೆ, ಏಕೆಂದರೆ ಅವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಗಳಿಗೆ ಶ್ವಾಸರಿ ವಟೀ; ಪತಂಜಲಿಯ ಈ ಆಯುರ್ವೇದ ಔಷಧದ ಪ್ರಯೋಜನ ಮತ್ತು ಬಳಕೆ ವಿಧಾನ ತಿಳಿಯಿರಿ

ವಿಶೇಷವೆಂದರೆ ಈ ಪದಾರ್ಥಗಳು ಅಗ್ಗವಾಗಿದ್ದು, ಸ್ವಲ್ಪ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಿಂದ ಜೀರ್ಣಿಸಿಕೊಳ್ಳಲು ಸುಲಭ. ನೀವು ಬಯಸಿದರೆ, ನೀವು ಸಾಗು ಬದಲಿಗೆ ರೈತಾವನ್ನು (ಮೊಸರು) ಸಹ ತಿನ್ನಬಹುದು ಎಂದು ರಾಮದೇವ್ ಹೇಳುತ್ತಾರೆ.

ಪ್ರತಿದಿನ ಮಂಡೂಕಾಸನ ಮತ್ತು ಭುಜಂಗಾಸನ ಮಾಡಿ

ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ನೀವು ಯೋಗವನ್ನು ಬಳಸಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ವಾಸ್ತವವಾಗಿ, ಯೋಗವು ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುವುದಲ್ಲದೆ, ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಮಂಡೂಕಾಸನ ಮತ್ತು ಭುಜಂಗಾಸನವನ್ನು ಮಾಡಲು ಶಿಫಾರಸು ಮಾಡುತ್ತಾರೆ. ಹನುಮಾನ್ ದಂಡವನ್ನು ಸಹ ಶಿಫಾರಸು ಮಾಡುತ್ತಾರೆ, ಏಕೆಂದರೆ ಇದು ಇಡೀ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಮೂತ್ರಪಿಂಡಗಳು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುವ ಹಾರ್ಮೋನ್ ಆದ ಎರಿಥ್ರೋಪೊಯೆಟಿನ್ ಅನ್ನು ಉತ್ಪಾದಿಸುತ್ತವೆ. ಹೀಗಾಗಿ, ಹಿಮೋಗ್ಲೋಬಿನ್ ಉತ್ಪಾದನೆಗೆ ಆರೋಗ್ಯಕರ ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯವು ಅತ್ಯಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಹ್ಲಿಗೆ ನೀಡಲು 15 ಲಕ್ಷ ರೂ. ಮೌಲ್ಯದ ಉಡುಗೊರೆ ತಂದ ಅಭಿಮಾನಿ; ವಿಡಿಯೋ – Kannada News | Surat Fan wants to give 15 Lakh Worth Gold Mobile Cover to Virat Kohli

ನ್ಯೂಜಿಲೆಂಡ್ ವಿರುದ್ಧದ ರಾಜ್‌ಕೋಟ್‌ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸದೆ ಇರಬಹುದು. ಆದರೆ ತಮ್ಮ ಅಲ್ಪ ಇನ್ನಿಂಗ್ಸ್ ಮೂಲಕ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಕಿವೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಇದು ಪಂದ್ಯದ ವಿಚಾರವಾದರೆ, ಪಂದ್ಯದ ಹೊರಗಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿಗೆ ನೀಡಲು ಅತಿ ದುಬಾರಿ ಉಡುಗೊರೆಯೊಂದನ್ನು ತಂದಿದ್ದಾನೆ.

ವಾಸ್ತವವಾಗಿ ಸೂರತ್ ಮೂಲಕ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಲೆಂದು ಚಿನ್ನದಿಂದ ಮಾಡಿರುವ ಐಫೋನ್​ ಬ್ಯಾಕ ಕೇಸ್​ ಅನ್ನು ತಂದಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದ ಮುಂದೆ ಆ ಬ್ಯಾಕ್​ ಕೇಸ್​ ಅನ್ನು ಕ್ಯಾಮೆರಾಗಳಿಗೆ ಪ್ರದರ್ಶಿಸಿ ಇದನ್ನು ಕೊಹ್ಲಿಗೆ ನೀಡಲು ತಂದಿರುವುದಾಗಿಯೂ ಇದರ ಬಲೆ 1.5 ಮಿಲಿಯನ್ ಅಂದರೆ 15 ಲಕ್ಷ ರೂಪಾಯಿಗಳು ಎಂಬುದನ್ನು ಬಹಿರಂಗಪಡಿಸಿದ್ದಾನೆ.

ಈ ಬ್ಯಾಕ್ ಕೇಸ್​ನ ಇನ್ನೊಂದು ವಿಶೇಷತೆ ಏನೆಂದರೆ, ಇದರಲ್ಲಿ ವಿರಾಟ್ ಕೊಹ್ಲಿ ಅವರ ಫೋಟೋ ಮತ್ತು ಅವರ ಹೆಸರನ್ನು ಕೆತ್ತಲಾಗಿದೆ. ಇದೀಗ ಈ ಚಿನ್ನದ ಬ್ಯಾಕ್​ ಕೇಸ್​ನ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಾಗ್ಯೂ ಕೊಹ್ಲಿ ಈ ಉಡುಗೊರೆಯನ್ನು ಸ್ವೀಕರಿಸುತ್ತಾರಾ ಎಂಬುದು ಪ್ರಶ್ನೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಫಿನಾಲೆ: ಅಶ್ವಿನಿ ಗೌಡ ಪರವಾಗಿ ಸುದೀಪ್ ಮನೆಗೆ ಕರವೇ ನಾರಾಯಣ ಗೌಡ ಹೋಗಿದ್ದು ನಿಜವೇ? – Kannada News | Bigg Boss Kannada 12 Finale This is why Karave Narayana Gowda visited Kichcha Sudeep house

ಈಗ ಎಲ್ಲೆಲ್ಲೂ ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಯಾರು ವಿನ್ ಆಗುತ್ತಾರೆ ಎಂಬ ಕೌತುಕ ಹೆಚ್ಚಾಗಿದೆ. ಗಿಲ್ಲಿ ನಟ (Gilli Nata), ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಧ್ರುವಂತ್, ಮ್ಯೂಟೆಂಟ್ ರಘು ಅವರು ಫಿನಾಲೆ ವಾರದ ತನಕ ಸಾಗಿಬಂದಿದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರ ಫೋಟೋ ವೈರಲ್ ಆಗಿದೆ. ಕಿಚ್ಚ ಸುದೀಪ್ ಮನೆಗೆ ನಾರಾಯಣ ಗೌಡ ಅವರು ಹೋಗಿರುವುದು ಈ ಫೋಟೋದಲ್ಲಿ ಕಾಣಿಸಿದೆ. ಅಶ್ವಿನಿ ಗೌಡ (Ashwini Gowda) ಅವರ ಪರವಾಗಿ ಮಾತಾಡಲು ನಾರಾಯಣ ಗೌಡ ಹೋಗಿದ್ದರು ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಬಗ್ಗೆ ಕರವೇ ಧರ್ಮಣ್ಣ ಅವರು ಸ್ಪಷನೆ ನೀಡಿದ್ದಾರೆ.

ಅಂದಹಾಗೆ, ಈ ಭೇಟಿಗೂ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಸಂಬಂಧ ಇಲ್ಲ. ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಹ್ವಾನ ನೀಡಲು ಸುದೀಪ್ ಮನೆಗೆ ಹೋಗಿದ್ದಾಗ ತೆಗೆದ ಫೋಟೋ ಇದು. ಈ ಫೋಟೋವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆ ಬಗ್ಗೆ ಕರವೇ ಧರ್ಮಣ್ಣ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

‘ನಾರಾಯಣ ಗೌಡ ಅವರು ಮಗನ ಮದುವೆ ಪತ್ರಿಕೆಯನ್ನು ಕೊಡುತ್ತಿರುವುದನ್ನು ತಿಂಗಳ ಹಿಂದೆಯೇ ರಾಜ್ಯದ ಜನರು ನೋಡಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಹಾಗೂ ಕಲಾವಿದರಿಗೆ ನಾರಾಯಣ ಗೌಡ ಅವರು ಮದುವೆ ಪತ್ರಿಕೆ ನೀಡುತ್ತಿದ್ದಾರೆ. ಹಾಗಾಗಿ ಸುದೀಪ್ ಅವರು ನಿನ್ನೆ ಬರಲು ಹೇಳಿದ್ದರು. ಅವರನ್ನು ಭೇಟಿ ಮಾಡಿ ಮದುವೆ ಆಹ್ವಾನ ಪತ್ರಿಕೆ ನೀಡಲಾಗಿದೆ’ ಎಂದು ಧರ್ಮಣ್ಣ ಅವರು ಹೇಳಿದ್ದಾರೆ.

‘ಬೇರೆಯವರ ರೀತಿಯೇ ಸುದೀಪ್ ಅವರಿಗೆ ಮದುವೆ ಪತ್ರಿಕೆ ನೀಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಅದನ್ನು ಕೆಲವು ಟ್ರೋಲ್ ಪೇಜ್​​ಗಳು ತೆಗೆದುಕೊಂಡು ಈ ರೀತಿ ಮಾಡುತ್ತಿದ್ದಾರೆ. ನಾರಾಯಣ ಗೌಡ್ರು ಹಾಗೂ ಸುದೀಪ್ ಅವರ ವಿರೋಧಿಗಳು ಈ ರೀತಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದಕ್ಕೆ ನಾಚಿಕೆ ಆಗಬೇಕು’ ಎಂದು ಧರ್ಮಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದುಗಳು ನೋಡಿ..

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಆಟ ಎಲ್ಲರಿಗೂ ಮೆಚ್ಚುಗೆ ಆಗಿದೆ. ಹಾಗಾಗಿ ಅವರೇ ಗೆಲ್ಲಬಹುದು ಎಂಬ ಅಭಿಪ್ರಾಯ ಎಲ್ಲರಿಗೂ ಇದೆ. ಜನವರಿ 17 ಮತ್ತು 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಸ್ಪರ್ಧಿಗಳ ಪರವಾಗಿ ಭರ್ಜರಿ ಪ್​ರಚಾರ ಮಾಡಲಾಗುತ್ತಿದೆ. ಗಿಲ್ಲಿ ಹವಾ ಸಿಕ್ಕಾಪಟ್ಟೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Makara Jyothi: ಮಳೆಯ ಭೀತಿಯ ನಡುವೆಯೂ ಶಬರಿಮಲೆಯ ಬೆಟ್ಟದಲ್ಲಿ ಮಕರ ಜ್ಯೋತಿ ದರ್ಶನ – Kannada News | Thousands of Lord Ayyappa devotees who witnessed sacred Makara Jyothi on Ponnambalamedu Hill

ಶಬರಿಮಲೆ, ಜನವರಿ 14: ಪ್ರತಿ ವರ್ಷ ಲಕ್ಷಾಂತರ ಭಕ್ತರು ಶಬರಿಮಲೆಯ (Sabarimala) ಪೊನ್ನಂಬಲಮೇಡು ಬೆಟ್ಟದಲ್ಲಿ ಕಾಣುವ ಪವಿತ್ರವಾದ ಮಕರ ಜ್ಯೋತಿಯನ್ನು ವೀಕ್ಷಿಸಲು ಕಾಯುತ್ತಿರುತ್ತಾರೆ. ಇಂದು ಮಳೆಯ ಆತಂಕದ ನಡುವೆಯೇ ಮಕರ ಜ್ಯೋತಿಯ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದರು. ಕೊನೆಗೂ ಇಂದು ಸಂಜೆ 6.45ಕ್ಕೆ ಶಬರಿಮಲೆಯಿಂದ 8 ಕಿ.ಮೀ. ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ.

ಅಯ್ಯಪ್ಪ ಸ್ವಾಮಿ ಭಕ್ತರು ಕೈಜೋಡಿಸಿ, ಸ್ವಾಮಿ ಶರಣಂ ಅಯ್ಯಪ್ಪ ಎಂದು ಪಠಿಸುತ್ತಾ ಮಕರ ಜ್ಯೋತಿಯನ್ನು ವೀಕ್ಷಿಸಿದರು. ಈ ವೇಳೆ ನಕ್ಷತ್ರವು ಆಕಾಶದಲ್ಲಿ ಬೆಳಗಿ ಭಕ್ತರಿಗೆ ಆಶೀರ್ವಾದವನ್ನು ತಂದಿತು. ಆಕಾಶದಲ್ಲಿ ಬೇರೆ ಯಾವುದೇ ನಕ್ಷತ್ರಗಳಿಲ್ಲದೆ ಉತ್ರಮ ನಕ್ಷತ್ರದ ದರ್ಶನವನ್ನು ಪಡೆದ ಭಕ್ತರು ಧನ್ಯರಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version