ಬಿಗ್ ಬಾಸ್ ಕನ್ನಡ: ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ; ರೊಚ್ಚಿಗೆದ್ದ ಅಭಿಮಾನಿಗಳು – Kannada News | Bigg Boss Kannada 12 Finale Fans talk about Ashwini Gowda Versus Gilli Nata

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12 Finale) ಫಿನಾಲೆ ಹತ್ತಿರ ಆಗಿದೆ. ಈ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಗಿಲ್ಲಿ ನಟ (Gilli Nata) ಗೆಲ್ಲುತ್ತಾರೆ ಎಂದು ಇಡೀ ರಾಜ್ಯದಲ್ಲಿ ಅಭಿಪ್ರಾಯ ಮನೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾಡುತ್ತಿರುವ ಕಮೆಂಟ್ ಸುರಿಮಳೆಯೇ ಅದಕ್ಕೆ ಸಾಕ್ಷಿಯಾಗಿದೆ. ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಗಿಲ್ಲಿ ನಟ ಅವರ ಅಭಿಮಾನಿಗಳು ಅಶ್ವಿನಿ ಗೌಡ ವಿರುದ್ಧ ಕೊಂಚ ಗರಂ ಆಗಿದ್ದಾರೆ. ಕನ್ನಡ ಪರ ಹೋರಾಟಗಾರ್ತಿ ಎನ್ನುವ ಅಶ್ವಿನಿ ಗೌಡ (Ashwini Gowda) ಅವರು ಹೆಚ್ಚು ಇಂಗ್ಲಿಷ್ ಬಳಸುವುದೇ ವೀಕ್ಷಕರು ಕೋಪಕ್ಕೆ ಕಾರಣ ಆಗಿದೆ.

‘ಗಿಲ್ಲಿ ನಟ ಹಳ್ಳಿಯ ಪ್ರತಿಭೆ. ಬರೀ ಮಾಯಿ ಮಾತಲ್ಲಿ ಹೇಳಬಾರದು. ಇಡೀ ಕರ್ನಾಟಕದ ಜನರು ಅವನಿಗೆ ವೋಟ್ ಮಾಡಿ ಗೆಲ್ಲಿಸಬೇಕು. ಯಾರೋ ಹೇಳುತ್ತಾರೆ ಅಂತ ನಾವು ಮನಸ್ಸು ಬದಲಾಯಿಸಬಾರದು. ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಸರಿಯಾಗಿ ಕನ್ನಡ ಬಳಸುತ್ತಿಲ್ಲ. ಬರೀ ಇಂಗ್ಲಿಷ್ ಬಳಸುತ್ತಾರೆ. ಅವರಿಗೆ ನಾವು ಧಿಕ್ಕಾರ ಕೂಗಬೇಕಾಗಯತ್ತದೆ’ ಎಂದು ಗಿಲ್ಲಿ ನಟನ ಅಭಿಮಾನಿಯೊಬ್ಬರು ಹೇಳಿದ್ದಾರೆ.

‘ಹೋರಾಟಗಾರ್ತಿಯಾಗಿ ಹೆಣ್ಮಕ್ಕಳ ಪರ ನಿಲ್ಲುತ್ತೇನೆ ಅಂತ ಅಶ್ವಿನಿ ಗೌಡ ಹೇಳುತ್ತಾರೆ. ಆದರೆ ಒಬ್ಬ ಹೆಣ್ಮಗಳನ್ನು ಅವರು ಹೀಯಾಳಿಸುತ್ತಾರೆ. ಅಶ್ವಿನಿ ಗೌಡ ಬದಲು ಗಿಲ್ಲಿ ನಟ ಅವರಿಗೆ ವೋಟ್ ಮಾಡಿ ಗೆಲ್ಲಿಸಿ’ ಎಂದು ಅಭಿಮಾನಿಯೊಬ್ಬರು ಟಿವಿ9 ಜೊತೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ಯಾದ್ಯಂತ ಇರುವ ಗಿಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಜೋರಾಗಿ ಮಾಡುತ್ತಿದ್ದಾರೆ.

‘ಗಿಲ್ಲಿ ತುಂಬಾ ಕಷ್ಟಪಟ್ಟು ಬಂದಿದ್ದಾನೆ. ಎಲ್ಲರ ಜೊತೆ ಮಾತನಾಡುತ್ತಾನೆ. ಗಿಲ್ಲಿ ಬಡವರ ಮಗ. ಹಾಗಾಗಿ ಅವನು ಗೆಲ್ಲಬೇಕು. ಅವನೇ ಗೆಲ್ಲುತ್ತಾನೆ ಎಂಬ ನಂಬಿಕೆ ಶೇಕಡ 100ರಷ್ಟು ಇದೆ. ಮೊದಲ ಸೀಸನ್​ನಿಂದ 12ನೇ ಸೀಸನ್ ತನಕ ಈ ಪರಿ ಕ್ರೇಜ್ ಯಾರಿಗೂ ಬಂದಿಲ್ಲ. ಗಿಲ್ಲಿಗೆ 1 ಮಿಲಿಯನ್ ಫಾಲೋವರ್​ಸ್ ಆಗಿದ್ದಾರೆ’ ಎಂದು ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು

‘ನಾವು ಯಾರೂ ಕೂಡ ದುಡ್ಡು ತೆಗೆದುಕೊಂಡಿಲ್ಲ. ಅವನ ಪ್ರತಿಭೆ ನೋಡಿ ಸ್ವಇಚ್ಛೆಯಿಂದ ಪ್ರಚಾರ ಮಾಡುತ್ತಿದ್ದೇವೆ. ರೈತನ ಮಗ ಅವನು ಗೆಲ್ಲುತ್ತಾನೆ’ ಎಂದು ಟಿವಿ9 ಜೊತೆ ಮಾತನಾಡಿದ ಅಭಿಮಾನಿಗಳು ಹೇಳಿದ್ದಾರೆ. ಗಿಲ್ಲಿ ಗೆದ್ದರೆ ಕೆಲವು ಆಟೋ ಚಾಲಕರು ಉಚಿತ ಸೇವೆ ನೀಡುವುದಾಗಿಯೂ ಹೇಳಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ಮೇಲೆ ಜನರು ತೋರಿಸುತ್ತಿರುವ ಪ್ರೀತಿ ದೊಡ್ಡದಾಗಿದೆ. ಜನವರಿ 17 ಮತ್ತು 18ರಂದು ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಿಲ್ಲಿಗೆ ನನ್ನ ಬಾಯ್​​ಫ್ರೆಂಡ್ ಆಗುವ ಅರ್ಹತೆ ಇಲ್ಲ ಎಂದ ರಕ್ಷಿತಾ – Kannada News | Bigg Boss Kannada: Rakshita Shetty said Gilli does not have qualities to be her husband

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆ ವಾರ ತಲುಪಿದೆ. ಸದ್ಯಕ್ಕೆ ಏಳು ಮಂದಿ ಸ್ಪರ್ಧಿಗಳಿದ್ದು ಇಂದು (ಬುಧವಾರ) ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಫಿನಾಲೆಗೆ ಉಳಿದುಕೊಂಡಿರುವ ಸ್ಪರ್ಧಿಗಳ ಮಾತು, ಹಾವ ಭಾವ ಎಲ್ಲವೂ ಪ್ರೇಕ್ಷಕರಿಗೆ ಪರಿಚಿತವಾಗಿಬಿಟ್ಟಿದೆ. ಗಿಲ್ಲಿಯ ಕಾಮಿಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್​​ಬಾಸ್ ಮನೆಯಲ್ಲಿ ಜೋಡಿಗಳು ಏರ್ಪಟ್ಟಿದ್ದವು. ಅದರಲ್ಲಿ ಬಹಳ ಜನಪ್ರಿಯತೆ ಪಡೆದಿದ್ದು ಗಿಲ್ಲಿ ಮತ್ತು ಕಾವ್ಯಾ ಜೋಡಿ. ಆದರೆ ಇತ್ತೀಚೆಗೆ ರಕ್ಷಿತಾ ಸಹ ಗಿಲ್ಲಿ ಜೊತೆ ಆಪ್ತವಾಗಿದ್ದು, ಗಿಲ್ಲಿಯನ್ನು ಇಷ್ಟಪಡುತ್ತಿರುವ ಅನುಮಾನ ಪ್ರೇಕ್ಷಕರಿಗೆ ಮೂಡಿದೆ.

ಗಿಲ್ಲಿ ಜೊತೆಗೆ ಹೆಚ್ಚು ಇರಲು ರಕ್ಷಿತಾ ಬಯಸುತ್ತಾರೆ, ಗಿಲ್ಲಿ ಜೊತೆಗೆ ಕಾವ್ಯಾ ಅಥವಾ ಮುಂಚೆ ಸ್ಪಂದನಾ ಮಾತನಾಡಿದರೆ ಬೇಜಾರು ಮಾಡಿಕೊಳ್ಳುತ್ತಿದ್ದರು. ಮೊನ್ನೆಯಂತೂ ಗಿಲ್ಲಿ ಜೊತೆ ತಾವು ಮಾತ್ರ ಕೂರಬೇಕೆಂದು ಹೆಚ್ಚುವರಿ ಇದ್ದ ಬೀನ್ ಬ್ಯಾಗ್​​ಗಳನ್ನು ಬೇರೆಡೆ ತೆಗೆದುಕೊಂಡು ಹೋಗಿ ಇಟ್ಟು ಬಂದಿದ್ದರು. ಒಮ್ಮೆಯಂತೂ ಗಿಲ್ಲಿಯಂಥ ಬಾಯ್​​ಫ್ರೆಂಡ್ ಬೇಕು ಎಂದು ಸಹ ರಕ್ಷಿತಾ ಹೇಳಿದ್ದರು. ವೀಕೆಂಡ್ ಎಪಿಸೋಡ್​​ನಲ್ಲಿ ಸಹ ಈ ಬಗ್ಗೆ ಚರ್ಚೆ ಮಾಡಲಾಯ್ತು.

ಆದರೆ ವೀಕೆಂಡ್ ಚರ್ಚೆ ಬಳಿಕ ರಕ್ಷಿತಾ ತಮ್ಮ ವರಸೆ ಬದಲಿಸಿದ್ದಾರೆ. ಗಿಲ್ಲಿ ನನಗೆ ಇಷ್ಟವಿಲ್ಲ. ನನ್ನ ಬಾಯ್​​ಫ್ರೆಂಡ್ ಅಥವಾ ಪತಿ ಆಗುವ ಅರ್ಹತೆಯೇ ಗಿಲ್ಲಿಗೆ ಇಲ್ಲ ಎಂದಿದ್ದಾರೆ ರಕ್ಷಿತಾ. ಗಿಲ್ಲಿ, ಖಾಲಿ ಸಮಯದಲ್ಲಿ ಬಿಗ್​​ಬಾಸ್ ಸದಸ್ಯರಿಗೆ ಸಿನಿಮಾ ಕತೆ ಹೇಳುವುದು ಅಭ್ಯಾಸ. ಅದರಲ್ಲೂ ಬಿಗ್​​ಬಾಸ್ ಮನೆಯಲ್ಲಿ ನಡೆದಿದ್ದನ್ನೇ ಕತೆಯ ರೀತಿ ಹೇಳುತ್ತಾರೆ. ಹಾಗೆಯೇ ತಮ್ಮ ಹಾಗೂ ಕಾವ್ಯಾರ ಕತೆಯನ್ನು ಇತ್ತೀಚೆಗೆ ಹೇಳುತ್ತಿದ್ದರು. ಆಗ ರಕ್ಷಿತಾರ ವಿಷಯವನ್ನೂ ಎಳೆದು ತಂದು, ರಕ್ಷಿತಾ ತಮ್ಮ ಬಗ್ಗೆ ಇಷ್ಟ ಇರಿಸಿಕೊಂಡಿದ್ದಾರೆ ಎಂದು ಕತೆಯ ರೂಪದಲ್ಲಿ ಹೇಳಿದರು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಬಿಗ್​​ಬಾಸ್ ಕತೆಯನ್ನೇ ಹೇಳಿದ ಗಿಲ್ಲಿ: ವಿಡಿಯೋ

ಆಗ ಅಲ್ಲಿಯೇ ಇದ್ದ ರಕ್ಷಿತಾ, ಸಿಟ್ಟಿನಲ್ಲಿ, ‘ನೀವು ನನಗೆ ಏನೂ ಬೇಡ. ನಿಮ್ಮ ಬಗ್ಗೆ ನನಗೆ ಯಾವ ಅಭಿಪ್ರಾಯವೂ ಇಲ್ಲ. ನನ್ನ ಗಂಡ ಅಥವಾ ಬಾಯ್​​ಫ್ರೆಂಡ್ ಆಗುವ ಯಾವ ಅರ್ಹತೆಯೂ ನಿಮಗೆ ಇಲ್ಲ. ನಾನು ಮದುವೆ ಆಗುವ ಹುಡುಗನಲ್ಲಿ ಏನೇನು ಗುಣಗಳು ಇರಬೇಕು ಎಂದುಕೊಂಡಿದ್ದೆನೊ ಅದು ಯಾವುದು ಸಹ ಗಿಲ್ಲಿ ಅಲ್ಲಿ ಇಲ್ಲ’ ಎಂದು ರಕ್ಷಿತಾ ಹೇಳಿದ್ದಾರೆ.

ಬಳಿಕ ಕಾವ್ಯಾ, ‘ಹಾಗಿದ್ದರೆ ಗಿಲ್ಲಿ ಥರ ಹುಡುಗ ಬೇಕು ಎಂದು ಹೇಳಿದ್ದೆಯಲ್ಲ?’ ಎಂದು ಕೇಳಿದಾಗ, ರಕ್ಷಿತಾ, ‘ಹೌದು, ಆದರೆ ಅವರ ಕೆಲವು ಸ್ವಭಾವ ಇದೆಯಲ್ಲ ಅದು ನನಗೆ ಬೇಡ. ನಾನು ಅವರಿಗೆ ಕೆಲವು ಸ್ವಭಾವಗಳನ್ನು ಬದಲಾಯಿಸಿಕೊಳ್ಳಿ ಎಂದು ಹೇಳುತ್ತಲೇ ಇರುತ್ತೇನೆ. ಗಿಲ್ಲಿ ಬಗ್ಗೆ ಕೆಲವು ಕಂಪ್ಲೆಟ್ಸ್ ಸಹ ಹೇಳಿದ್ದೇನೆ. ಅವೆಲ್ಲ ಗುಣಗಳು ನನಗೆ ಬೇಡ. ಹೌದು, ನಾನು ಇಷ್ಟಪಡುವ ಕೆಲವು ಗುಣಗಳು ಅವರ ಬಳಿ ಇವೆ ಆದರೆ ಎಲ್ಲವೂ ಇಲ್ಲ’ ಎಂದಿದ್ದಾರೆ ರಕ್ಷಿತಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 2,500 ರೂಗೆ ಲವ್ ಇನ್ಷೂರೆನ್ಸ್; ಮದುವೆ ಬಳಿಕ ಬಂತು 1.2 ಲಕ್ಷ ರೂ ಹಣ – Kannada News | Love Insurance, Chinese woman claims over big money after marriage, here is the story details

ಲವ್ ಇನ್ಷೂರೆನ್ಸ್ (Love Insurance) ಪಾಲಿಸಿಯಿಂದ ಮಹಿಳೆಯೊಬ್ಬಳು ಭರ್ಜರಿ ಹಣ ಕ್ಲೇಮ್ ಮಾಡಿ ಗಳಿಸಿದ್ದಾಳೆ. ಹತ್ತು ವರ್ಷದ ಹಿಂದೆ ಈ ಮಹಿಳೆ ಕೇವಲ 2,500 ರೂಗೆ ಲವ್ ಇನ್ಷೂರೆನ್ಸ್ ಪಡೆದಿದ್ದಳು. ಇದೀಗ ವಿವಾಹದ ಬಳಿಕ ಇನ್ಷೂರೆನ್ಸ್ ಹಣ ಕ್ಲೇಮ್ ಮಾಡಿದ್ದಾಳೆ. ಇನ್ಷೂರೆನ್ಸ್ ಕಂಪನಿ ಈ ಮಹಿಳೆಗೆ 1.2 ಲಕ್ಷ ರೂ ಪಾವತಿಸಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಚೀನಾದಲ್ಲಿ. ಈ ಲವ್ ಇನ್ಷೂರೆನ್ಸ್ ಕೂಡ ಈಗ ಚಾಲ್ತಿಯಲ್ಲಿಲ್ಲ. ಆದರೂ ಈ ಲವ್ ಇನ್ಷೂರೆನ್ಸ್ ಸ್ಟೋರಿ ಇಂಟರೆಸ್ಟಿಂಗ್ ಆಗಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ವು ಎಂಬ ಹುಡುಗಿ 2015ರಲ್ಲಿ ತಾನು ಓದುತ್ತಿದ್ದ ಕಾಲೇಜಿನಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಚೈನಾ ಲೈಫ್ ಪ್ರಾಪರ್ಟಿ ಅಂಡ್ ಕ್ಯಾಷುವಾಲಿಟಿ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಎನ್ನುವ ಕಂಪನಿಯು ಆ ಸಂದರ್ಭದಲ್ಲಿ ಲವ್ ಇನ್ಷೂರೆನ್ಸ್ ಪಾಲಿಸಿ ಆಫರ್ ಮಾಡಿತ್ತು. 299 ಯುವಾನ್ (3,900 ರೂ) ಹಣಕ್ಕೆ ಈ ಪಾಲಿಸಿ ಮಾರಾಟವಾಗುತ್ತಿತ್ತು. ವುಗೆ ಈ ಪಾಲಿಸಿ 199 ಯುವಾನ್​ಗೆ ಸಿಕ್ಕಿತು. ಇದನ್ನು ತನ್ನ ಬಾಯ್​ಫ್ರೆಂಡ್​ಗೆ ಗಿಫ್ಟಾಗಿ ನೀಡಿದ್ದಳು ವು.

ಇದನ್ನೂ ಓದಿ: ಇನ್ನು 10-20 ವರ್ಷ ಮಾತ್ರ ಮನುಷ್ಯರು ಕೆಲಸ ಮಾಡಬೇಕಾಗಬಹುದು: ಇಲಾನ್ ಮಸ್ಕ್ ಹೀಗ್ಯಾಕಂದ್ರು ಗೊತ್ತಾ?

ಲವ್ ಇನ್ಷೂರೆನ್ಸ್ ನಿಯಮಗಳೇನಿತ್ತು..?

ಪ್ರೀತಿ ಪ್ರೇಮಗಳು ಬೇಗನೇ ಮುರಿದುಬೀಳುತ್ತವೆ. ಮದುವೆಯಲ್ಲಿ ಅಂತ್ಯವಾಗುವ ಪ್ರೇಮಕಥೆಗಳು ಬಹಳ ವಿರಳ. ಚೀನಾದಲ್ಲೂ ಇದೇ ಕಥೆ. ಹೀಗಾಗಿ, ಇನ್ಷೂರೆನ್ಸ್ ಕಂಪನಿಯು ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಲವ್ ಇನ್ಷೂರೆನ್ಸ್ ಪಾಲಿಸಿ ಆಫರ್ ಮಾಡಿದೆ. ಪಾಲಿಸಿ ಆರಂಭವಾದ ದಿನದಿಂದ ಮೂರನೇ ವಾರ್ಷಿಕೋತ್ಸವ ಮುಗಿದ ಬಳಿಕ 10 ವರ್ಷದೊಳಗೆ ಪ್ರೇಮಿಯನ್ನು ವಿವಾಹವಾದರೆ 10,000 ಗುಲಾಬಿ ಹೂ ಕೊಡುತ್ತೇವೆ. ಅಥವಾ 0.5 ಕೆರಟ್​ನ ಡೈಮಂಡ್ ರಿಂಗ್ ಕೊಡುತ್ತೇವೆ, ಅಥವಾ 10,000 ಯುವಾನ್ ಅನ್ನು ಕ್ಯಾಷ್ ರೂಪದಲ್ಲಿ ಕೊಡುತ್ತೇವೆ ಎಂದು ಕಂಪನಿ ಆಫರ್ ಕೊಟ್ಟಿತ್ತು.

ವು ಇಂಥದ್ದೊಂದು ಪಾಲಿಸಿಯನ್ನು ತನ್ನ ಪ್ರಿಯಕರನಿಗೆ ಕೊಟ್ಟಾಗ ಆತನಿಗೆ ಕಕ್ಕಾಬಿಕ್ಕಿಯಾಗಿತ್ತು. ‘ಈಕೆ ಲವ್ ಇನ್ಷೂರೆನ್ಸ್ ಖರೀದಿಸಿದ್ದಾಗಿ ಹೇಳಿದಾಗ ಆಕೆಗೆ ಯಾರೊ ಟೊಪ್ಪಿ ಹಾಕಿದ್ದಾರೆ ಎಂದೇ ಭಾವಿಸಿದ್ದೆ’ ಎಂದು ಈಗ ಈಕೆಯನ್ನು ವರಿಸಿರುವ ಆ ಪ್ರಿಯಕರ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಸೇವಕ ಅಲ್ಲ ಉತ್ಪಾದಕ ಆಗಬೇಕು: ಉದ್ಯಮಿ ಬಾಬಾ ಕಲ್ಯಾಣಿ ಸಲಹೆ

2015ರಲ್ಲಿ ಇಬ್ಬರೂ ಪ್ರೀತಿಸಲು ಆರಂಭಿಸಿದರು. 2025ರ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದಾರೆ. ಆ ಬಳಿಕ ಇನ್ಷೂರೆನ್ಸ್ ಹಣಕ್ಕೆ ಕ್ಲೇಮ್ ಮಾಡಿದ್ದಾರೆ. 10,000 ಗುಲಾಬಿ ಹೂ ಬೇಡ, ಡೈಮಂಡ್ ರಿಂಗ್ ಕೂಡ ಬೇಡ, 10,000 ಯುವಾನ್ (1.2 ಲಕ್ಷ ರೂ) ಹಣ ಕೊಡಿ ಎಂದು ಅರ್ಜಿ ಹಾಕಿದ್ದಾರೆ. ಈ ಹಣ ಬಂತಾ ಇಲ್ಲವಾ ಎಂಬುದು ಗೊತ್ತಿಲ್ಲ. ಅಂದಹಾಗೆ, ಆ ಚೀನಾ ಕಂಪನಿಯು ಈ ಲವ್ ಇನ್ಷೂರೆನ್ಸ್ ಪಾಲಿಸಿ ಸ್ಕೀಮ್ ಅನ್ನು 2017ರಲ್ಲೇ ನಿಲ್ಲಿಸಿದೆ. ಅಲ್ಲಿಯವರೆಗೆ ಮಾಡಿಸಿರುವ ಪಾಲಿಸಿಗಳು ಆ್ಯಕ್ಟಿವ್ ಇರುತ್ತವೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಷ ಲಕ್ಷ ಹಣ, ಒಡವೆ ಗಿಫ್ಟ್ ಕೊಟ್ರೂ ಮತ್ತೊಬ್ಬನ ಜತೆ ಚಕ್ಕಂದ: ಹಂತಕನ ಡೆತ್ ನೋಟ್​​​ನಲ್ಲಿ ಮಹಿಳೆ ಕೊಲೆ ರಹಸ್ಯ ಬಯಲು – Kannada News | Big twist To madanayakanahalli drakshayini Murder Case: Accused Veerabhadra reveals In Death Note Why Killed her

ಬೆಂಗಳೂರು, (ಜನವರಿ 14): ಮಾದನಾಯಕನಹಳ್ಳಿ ಪೊಲೀಸ್ ಠಾಣಾ (madanayakanahalli Police) ವ್ಯಾಪ್ತಿಯಲ್ಲಿ 55 ವರ್ಷದ ದಾಕ್ಷಾಯಿಣಿ ಕೊಲೆ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನವರಿ 10ರಂದು ಕುದುರೆಗೆರೆಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ದಾಕ್ಷಾಯಿಣಿಯನ್ನು ಸೋದರ ಮಾವ 60 ವರ್ಷದ ವೀರಭದ್ರ ಎಂಬಾತ ಕೊಡಲಿಯಿಂದ ಕೊಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ, ತಲೆ ಮರೆಸಿಕೊಂಡಿದ್ದ ಹಂತಕ ವೀರಭದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್​ ನೋಟ್ ಬರೆದಿಟ್ಟಿದ್ದು, ಲಕ್ಷ ಲಕ್ಷ ಹಣ, ಬಂಗಾರದ ಒಡವೆಗಳನ್ನು ಮಾಡಿಸಿಕೊಟ್ಟರೂ ಸಹ ದಾಕ್ಷಾಯಿಣಿ ಬೇರೊಬ್ಬನ ಜತೆ ಸಂಬಂಧ ಹೊಂದಿದ್ದಕ್ಕೆ ಹತ್ಯೆ ಮಾಡಿರುವುದಾಗಿ ವೀರಭದ್ರ ಡೆತ್​​ನೋಟ್​​ನಲ್ಲಿ ಬರೆದಿಟ್ಟಿದ್ದಾನೆ.

ದಾಕ್ಷಾಯಿಣಿಯನ್ನು ಸೋದರ ಮಾವ ಕೊಂದಿದ್ಯಾಕೆ?

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಭದ್ರ ದಾಕ್ಷಾಯಿಣಿಗೆ ಸೋದರ ಮಾವನಾಗಬೇಕು. ಚಿಕ್ಕಬಾಣಾವರ ನಿವಾಸಿಯಾಗಿರೋ ಈತ ಮೂಲತಃ ದೊಡ್ಡಬಳ್ಳಾಪುರದ ಕೊಳೂರಿನನವನು. ಕೊಲೆ ನಂತರ ತಲೆ ಮರೆಸಿಕೊಂಡಿದ್ದ ವೀರಭದ್ರ ಕೂಳೂರಿಗೆ ಹೋಗಿ ನಿರ್ಜನ ಪ್ರದೇರ್ಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಕ್ಷಾಯಿಣಿ ಜೊತೆ ಸಂಬಂಧ ಹೊಂದಿದ್ದ. ಹೀಗಾಗಿ ದಾಕ್ಷಾಯಿಣಿಗೆ ಹಣ ಹಾಗೂ ಒಡವೆಗಳನ್ನ ಕೂಡ ಮಾಡಿಸಿಕೊಟ್ಟಿದ್ದ. ಆದ್ರೆ ಕೆಲವು ತಿಂಗಳ ಹಿಂದೆ ದಾಕ್ಷಾಯಿಣಿಗೆ ಬೇರೊಬ್ಬನ ಜತೆ ಸಂಬಂಧವಿರುವುದು ಗೊತ್ತಾಗಿದೆ. ಹೀಗಾಗಿ ಕೊಟ್ಟ ಹಣ, ಒಡವೆಗಳನ್ನು ವಾಪಸ್ ಕೇಳಿದ್ದಾನೆ. ಆಗ ದಾಕ್ಷಾಯಿಣಿ ಮತ್ತು ಆಕೆಯ ಗೆಳೆಯ ಬೆದರಿಕೆ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡಿದ್ದ ವೀರಭದ್ರಯ್ಯ, ದಾಕ್ಷಾಯಿಣಿಯನ್ನು ಕೊಚ್ಚಿ ಕೊಂದಿರುವುದಾಗಿ ಡೆತ್​​ನೋಟ್​​ನಲ್ಲಿ ಉಲ್ಲೇಖಿಸಿದ್ದಾನೆ.

ಇದನ್ನೂ ಓದಿ: ಮೊಮ್ಮಗನ ಎದುರಲ್ಲೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದ ಸಂಬಂಧಿ?

ಘಟನೆ ಹಿನ್ನೆಲೆ

ಬೆಂಗಳೂರು ವಾಯುವ್ಯ ವಿಭಾಗ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರೆಗೆರೆ ಕಾಲೋನಿಯಲ್ಲಿ ನಿವಾಸಿ ದಾಕ್ಷಾಯಿಣಮ್ಮ 8 ವರ್ಷದ ಹಿಂದೆ ಪತಿ ನಾಗರಾಜ್​​​ರನ್ನು ಕಳೆದುಕೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನ ಮದುವೆ ಕೂಡ ಮಾಡಿದ್ದಾರೆ. ಹಣಕಾಸಿನ ವ್ಯವಹಾರ ಹಾಗೂ ಮನೆ ಬಾಡಿಗೆ ಹಣದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಆದ್ರೆ, ಜನವರಿ 10ರಂದು ದಾಕ್ಷಾಯಿಣಿ, ಶಾಲೆಯಿಂದ ಮೊಮ್ಮಗನನ್ನು ಕರೆತರಲು ಹೊರಟಿದ್ದಾಗ ಬೈಕ್​ನಲ್ಲಿ ಬದು ಏಕಾಏಕಿ ಕೊಡಲಿಯಿಂದ ಕೊಚ್ಚಿ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಷ್ಟೇ ಅಲ್ಲದರೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆದರೆ ಅಷ್ಟರಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವರದಿ: ಮಂಜುನಾಥ್ ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Hamsa Mahapurusha Yoga: 12 ವರ್ಷಗಳ ನಂತರ ಗುರು-ಹಂಸ ಮಹಾ ಪುರುಷ ರಾಜಯೋಗ; ಈ 3 ರಾಶಿಗೆ ಅದೃಷ್ಟದ ಸುರಿಮಳೆ – Kannada News | Hamsa Mahapurusha Yoga: Jupiter Transit Blesses 3 Zodiacs with Immense Luck and Success

12 ವರ್ಷಗಳ ನಂತರ, ಗುರುವಿನ ಸಂಚಾರದಿಂದಾಗಿ, ಹಂಸ ಮಹಾ ಪುರುಷ ಯೋಗವು ರೂಪುಗೊಳ್ಳಲಿದೆ. ಇದರೊಂದಿಗೆ, ಮೂರು ರಾಶಿಗಳ ಜನರು ಹೆಚ್ಚಿನ ಅದೃಷ್ಟವನ್ನು ಪಡೆಯಲಿದ್ದಾರೆ. ಅವರು ಕೈಗೊಳ್ಳುವ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ಜೂನ್ 2026 ರಿಂದ ಈ ಯೋಗವು ಹೆಚ್ಚು ಸಕ್ರಿಯವಾಗಲಿದೆ. ಹನ್ನೆರಡು ರಾಶಿಗಳ ಪೈಕಿ ಆ ಮೂರು ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹಂಸ ಮಹಾಪುರುಷ ಯೋಗವು ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹದಿಂದ ರೂಪುಗೊಳ್ಳುವ ಒಂದು ಶಕ್ತಿಶಾಲಿ ರಾಜಯೋಗವಾಗಿದ್ದು, ಗುರುವು ತನ್ನ ಸ್ವಕ್ಷೇತ್ರ (ಮೀನ, ಧನು) ಅಥವಾ ಉಚ್ಚ ಕ್ಷೇತ್ರ (ಕರ್ಕ) ರಾಶಿಯಲ್ಲಿ ಕೇಂದ್ರ ಸ್ಥಾನದಲ್ಲಿ (1, 4, 7, 10ನೇ ಮನೆ) ಇದ್ದಾಗ ಉಂಟಾಗುತ್ತದೆ, ಇದು ವ್ಯಕ್ತಿಗೆ ಜ್ಞಾನ, ಸಂಪತ್ತು, ಗೌರವ ಮತ್ತು ಧಾರ್ಮಿಕ ಪ್ರವೃತ್ತಿಯನ್ನು ತರುತ್ತದೆ.

ಕನ್ಯಾ ರಾಶಿ:

ಮಹಾ ಪುರುಷ ರಾಜಯೋಗವನ್ನು ರೂಪಿಸುವ ಗುರುವು ಕನ್ಯಾ ರಾಶಿಯವರಿಗೆ ಆದಾಯದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಗುರುವು ನಿಮ್ಮ ರಾಶಿಯಿಂದ 11 ನೇ ಮನೆಯಲ್ಲಿ ಸಾಗುತ್ತಿರುವುದರಿಂದ, ಈ ಸಮಯದಲ್ಲಿ ನಿಮ್ಮ ಆದಾಯ ಗಮನಾರ್ಹವಾಗಿ ಹೆಚ್ಚಾಗಬಹುದು. ನೀವು ಹೊಸ ಮಾರ್ಗಗಳ ಮೂಲಕವೂ ಹಣವನ್ನು ಗಳಿಸುವಿರಿ. ಷೇರು ಮಾರುಕಟ್ಟೆ, ಊಹಾಪೋಹ ಮತ್ತು ಲಾಟರಿ ಮೂಲಕ ನೀವು ಲಾಭ ಗಳಿಸುವ ಸಾಧ್ಯತೆಯಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ವೃತ್ತಿಜೀವನವು ಉನ್ನತ ಮಟ್ಟವನ್ನು ತಲುಪುತ್ತದೆ. ಉದ್ಯಮಿಗಳು ದೊಡ್ಡ ವ್ಯಾಪಾರ ಒಪ್ಪಂದಗಳನ್ನು ಮಾಡುತ್ತಾರೆ. ಕನ್ಯಾ ರಾಶಿಯವರು ತಮ್ಮ ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ.

ತುಲಾ ರಾಶಿ:

ಗುರು-ಹಂಸ ಮಹಾಪುರುಷ ರಾಜಯೋಗವು ರೂಪುಗೊಳ್ಳಲಿರುವುದರಿಂದ ತುಲಾ ರಾಶಿಯವರಿಗೆ ಅಪಾರ ಲಾಭಗಳು ದೊರೆಯುತ್ತವೆ. ಈ ರಾಜಯೋಗವು ನಿಮ್ಮ ಸಂಚಾರ ಜಾತಕದ ಕರ್ಮ ಮನೆಯಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಕೆಲಸ ಮತ್ತು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೋಡುತ್ತೀರಿ. ಕೆಲಸ ಮಾಡುವವರು ಕಚೇರಿಯಲ್ಲಿ ತಮ್ಮ ಕೆಲಸಕ್ಕೆ ಮೆಚ್ಚುಗೆಯನ್ನು ಪಡೆಯುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಹಿರಿಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ಭವಿಷ್ಯದ ಯೋಜನೆಗಳು ಬಹಳ ವ್ಯವಸ್ಥಿತ ಮತ್ತು ಬಲವಾಗಿ ಕಾಣುತ್ತವೆ. ಸಾಮಾಜಿಕ ಬೆಂಬಲವಿರುತ್ತದೆ. ಈ ಸಮಯದಲ್ಲಿ, ಉದ್ಯಮಿಗಳು ಉತ್ತಮ ಆರ್ಥಿಕ ಲಾಭಗಳನ್ನು ಸಾಧಿಸಬಹುದು. ಹೊಸ ಉದ್ಯಮಿಗಳು ಪ್ರಾರಂಭಿಸಲು ಇದು ಒಳ್ಳೆಯ ಸಮಯ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ವೃಶ್ಚಿಕ ರಾಶಿ:

ಈ ರಾಶಿಯು ಹಂಸ ಮಹಾ ಪುರುಷ ರಾಜಯೋಗದಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ರಾಜಯೋಗವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇಲ್ಲಿ, ಮಂಗಳನ ಸ್ಥಾನವು ತುಂಬಾ ಬಲವಾಗಿರುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಕೈಗೊಂಡರೂ, ನಿಮಗೆ ಅದೃಷ್ಟ ಸಿಗುತ್ತದೆ. ನೀವು ಕೆಲವು ಧಾರ್ಮಿಕ ಅಥವಾ ಶುಭ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬಹುದು. ಈ ಅವಧಿಯು ಆಧ್ಯಾತ್ಮಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಕಾರಾತ್ಮಕವಾಗಿರುತ್ತದೆ. ನೀವು ಸೃಜನಶೀಲ ಚಟುವಟಿಕೆಗಳು ಮತ್ತು ಕಲಾತ್ಮಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಈ ಸಮಯದಲ್ಲಿ ಪ್ರಯಾಣ ಅಥವಾ ಹೊಸ ಸಂಬಂಧಗಳು ಹೊಸ ಅವಕಾಶಗಳನ್ನು ತೆರೆಯುತ್ತವೆ. ನಿಮ್ಮ ವರ್ಧಿತ ಸೃಜನಶೀಲತೆಯಿಂದ ನೀವು ನಿಮ್ಮ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಸಂಕಷ್ಟದಲ್ಲಿದ್ದ ತಂಡಕ್ಕೆ ಅಜೇಯ ಶತಕದ ಮೂಲಕ ಆಸರೆಯಾದ ಕೆಎಲ್ ರಾಹುಲ್ – Kannada News | Rahul’s Unbeaten 112 Rescues India in 2nd ODI vs NZ | Rajkot Match

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೆ ಪ್ರಮುಖ ಆಟಗಾರರ ವಿಕೆಟ್ ಪತನ ಆಘಾತವನ್ನುಂಟು ಮಾಡಿತ್ತು. ಆದರೆ ಈ ಪಂದ್ಯದಲ್ಲಿ ತಂಡದ ಪರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ರಾಹುಲ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಾಹುಲ್ ತಂಡವನ್ನು 284 ರನ್​ಗಳಿಗೆ ಕೊಂಡೊಯ್ದಿದ್ದು ಮಾತ್ರವಲ್ಲದೆ ತಾವು ಕೂಡ 92 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದರು.

Source link

ಬೆಳಗಾವಿಯಲ್ಲಿ ಶ್ವಾನಗಳ ಅಟ್ಟಹಾಸ: ಒಂದೇ ವರ್ಷದಲ್ಲಿ 10 ಜನರನ್ನು ಬಲಿ ಪಡೆದ ಬೀದಿನಾಯಿಗಳು – Kannada News | Belagavi Dog Menace Escalates: 21K Bites, 10 Deaths in a Year, Public Outcry

ಬೆಳಗಾವಿ, ಜನವರಿ 14: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಬೀದಿ ನಾಯಿಗಳ (Stray Dog) ಅಟ್ಟಹಾಸ ಜೋರಾಗಿದೆ. ಮಕ್ಕಳ ಮೇಲೆ ನಾಯಿಗಳ ದಾಳಿ ಮುಂದುವರೆದಿದ್ದು, ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನೊಂದು ಕಡೆ ಒಂದು ವರ್ಷದ ಅವಧಿಯಲ್ಲಿ ನಾಯಿ ಕಡಿತಕ್ಕೆ 10 ಜನ ಬಲಿಯಾಗಿದ್ದು, ಎಲ್ಲರಲ್ಲಿ ಆತಂಕ ಮೂಡಿಸಿದೆ. ಇನ್ನೂ ಮಹಾನಗರ ಪಾಲಿಕೆಯಲ್ಲಿ ನಾಯಿ ಹಿಡಿಯುವ ಚರ್ಚೆ ಕೂಡ ನಡೆದಿದೆ.

ಬೀದಿ ನಾಯಿಗೆ ನಲುಗಿದ ಜನರು 

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಬೀದಿ ನಾಯಿಗಳ ದಾಳಿಗೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇಂದು ಚಿಕ್ಕೋಡಿ ಪಟ್ಟಣದ ವೆಂಕಟೇಶ ಗಲ್ಲಿಯಲ್ಲಿ ಬೀದಿ ನಾಯಿಗಳು ಹಿಂಡು ಕಟ್ಟಿಕೊಂಡು ಮನೆ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ದಾಳಿ ನಡೆಸಿವೆ. ಸ್ಥಳೀಯರು ಮಗುವನ್ನ ರಕ್ಷಣೆ ಮಾಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ದಾಳಿ: ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ರುತ್ವಿಕ್ ಕುದರೆ ಎಂಬ ಮಗುವಿನ ಮೇಲೆ ದಾಳಿ ಮಾಡಿದ್ದ ನಾಯಿಗಳು, ಮುಖ ಕಚ್ಚಿ ಗಾಯಗೊಳಿಸಿದ್ದು ಮಗುವಿಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಅಂಗನವಾಡಿ ಪಕ್ಕದಲ್ಲೇ ಘಟನೆ ಆಗಿದ್ದು ಹೀಗಾಗಿ ನಾಯಿಗಳನ್ನ ಬೇರೆಡೆ ಸ್ಥಳಾಂತರ ಮಾಡುವಂತೆ ಅಂಗನವಾಡಿ ಶಿಕ್ಷಕಿ ಮನವಿ ಮಾಡಿಕೊಂಡಿದ್ದಾರೆ. ಇತ್ತ ಅಧಿಕಾರಿಗಳ ಗಮನಕ್ಕೆ ತಂದರೂ ನಾಯಿಗಳನ್ನ ಹಿಡಿಯುವ ಕೆಲಸ ಆಗುತ್ತಿಲ್ಲ ಎಂದು ಬಾಲಕನ ತಂದೆ ಆನಂದ ಕುದರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬೆಳಗಾವಿ ನಗರದಲ್ಲಿ ಒಂದು ಮಗುವಿಗೆ ನಾಯಿ ಕಚ್ಚಿ ಗಾಯಗೊಳಿಸಿತ್ತು. ಹೀಗೆ ಪ್ರತಿಯೊಂದು ಭಾಗದಲ್ಲೂ ನಾಯಿಗಳ ಅಟ್ಟಹಾಸ ಜೋರಾಗಿದ್ದು ಮಹಿಳೆಯರು, ಮಕ್ಕಳು, ವೃದ್ಧರು ಮನೆಯಿಂದ ಹೊರ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಹತ್ತು ಜನರು ಸಾವು 

ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ 2025 ಒಂದು ವರ್ಷದ ಅವಧಿಯಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 10 ಜನ ನಾಯಿ ಕಡಿತದಿಂದಲೇ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ 21,703 ಜನರಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಾಯಿಗಳ ಪರಾಕ್ರಮ ಮೆರೆಯುತ್ತಿದ್ದರು ಜಿಲ್ಲಾಡಳಿತ ಸೈಲೆಂಟ್ ಆಗಿದೆ ಅನ್ನೋ ಕೂಡ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಿಷ್ಟು 

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ನೀಡಿದ ದಾಖಲೆಗಳೇ ನಾಯಿಗಳ ದಾಳಿಯ ಭೀಕರತೆ ಬಿಚ್ಚಿಡುತ್ತಿದೆ. ಬೀದಿ ನಾಯಿ ದಾಳಿ ಬಗ್ಗೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೂಡ ಚರ್ಚೆ ಆಗಿದ್ದು, ನಾಯಿಗಳ ಸ್ಥಳಾಂತರ ಹಾಗೂ ಸಂತಾನಹರಣ ಚಿಕಿತ್ಸೆ ಕುರಿತು ಕೂಡ ಚರ್ಚೆ ಮಾಡಲಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇತ್ತ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾಯಿಗಳ ಸ್ಥಳಾಂತರಕ್ಕೆ ಪ್ಲ್ಯಾನ್​​ ಮಾಡಿದ್ದು, ಅದಕ್ಕೆ ಬೇಕಾದ ಶೆಲ್ಟರ್ ಕೂಡ ನಿರ್ಮಾಣ ಮಾಡಿ ಸರಿ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿ ಸಮೀಕ್ಷೆಗೆ ಶಿಕ್ಷಣ ಸಂಸ್ಥೆಗಳ ವಿರೋಧ; ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದ ಶಿಕ್ಷಕರು

ಬೆಳಗಾವಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಇತ್ತಿಚೇಗೆ ಬೀದಿ ನಾಯಿಗಳ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಮಕ್ಕಳು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಎಲ್ಲರ ಮೇಲೆ ದಾಳಿ ನಡೆಸಿವೆ ಅನ್ನೋದಕ್ಕೆ ಆರೋಗ್ಯ ಇಲಾಖೆ ನೀಡಿದ ಅಂಕಿ ಅಂಶಗಳೇ ಸಾಕ್ಷಿ. ಇತ್ತ ನಾಯಿ ದಾಳಿಯಿಂದ 10 ಜನ ಕಳೆದ ವರ್ಷದಲ್ಲಿ ಸಾವನ್ನಪ್ಪಿರುವುದು ಭಯ ಹುಟ್ಟಿಸಿದೆ. ಸದ್ಯ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಹೆಚ್ಚಿರುವ ನಾಯಿಗಳನ್ನ ಬೇರೆಡೆ ಸ್ಥಳಾಂತರ ಮಾಡಬೇಕಿದೆ. ಜೊತೆಗೆ ನಾಯಿ ಕಚ್ಚಿಸಿಕೊಂಡವರು ಕೂಡ ತಕ್ಷಣ ಚಿಕಿತ್ಸೆ ಪಡೆದುಕೊಂಡು ಜೀವ ಉಳಿಸಿಕೊಳ್ಳುವುದು ಒಳಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:51 pm, Wed, 14 January 26

Source link

BOM Recruitment 2026: ಬ್ಯಾಂಕ್ ಆಫ್ ಮಹಾರಾಷ್ಟ್ರ 600 ಅಪ್ರೆಂಟಿಸ್ ನೇಮಕಾತಿ; ಪದವೀಧರರು ಅರ್ಹರು – Kannada News | Bank of Maharashtra Apprentice Recruitment 2026: Apply for 600 Posts Online

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡುವ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಗುಡ್​​ ನ್ಯೂಸ್​. ಬ್ಯಾಂಕ್ ಆಫ್ ಮಹಾರಾಷ್ಟ್ರ 600 ಅಪ್ರೆಂಟಿಸ್ ಹುದ್ದೆಗಳನ್ನು ಘೋಷಿಸಿದೆ. ಒಂದು ಸಣ್ಣ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜನವರಿ 15 ರಿಂದ ಪ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಅಪ್ರೆಂಟಿಸ್‌ಶಿಪ್ ಎಂದರೇನು?

ಅಪ್ರೆಂಟಿಸ್‌ಶಿಪ್ ಎನ್ನುವುದು ಒಂದು ರೀತಿಯ ತರಬೇತಿಯಾಗಿದ್ದು, ಇದರಲ್ಲಿ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ತಂತ್ರಗಳನ್ನು ಕಲಿಯುವುದು ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ನಿಗದಿತ ಅವಧಿಗೆ, ಸಾಮಾನ್ಯವಾಗಿ ಆರು ತಿಂಗಳು ಅಥವಾ ಒಂದು ವರ್ಷ ಇರುತ್ತದೆ. ಈ ಅವಧಿಯಲ್ಲಿ, ಅಭ್ಯರ್ಥಿಗಳು ಬ್ಯಾಂಕ್ ಕೆಲಸದಲ್ಲಿ ಪ್ರಾಯೋಗಿಕ ತರಬೇತಿಯನ್ನು ಪಡೆಯುತ್ತಾರೆ. ಇದು ಹೊಸಬರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಸಿವಿಯನ್ನು ಬಲಪಡಿಸುತ್ತದೆ ಮತ್ತು ಅದರ ಮೌಲ್ಯವನ್ನು ಹೆಚ್ಚಿಸುತ್ತದೆ. ನೀವು ಪ್ರಾಯೋಗಿಕವಾಗಿ ತತ್ವಗಳನ್ನು ಕಲಿತಿದ್ದರೆ, ನಿಮಗೆ ಉದ್ಯೋಗ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು . ಅವರು ಸ್ಥಳೀಯ ಭಾಷೆಯನ್ನು ಅರ್ಥಮಾಡಿಕೊಳ್ಳಲು, ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಅವರು ಭಾಷೆಯನ್ನು ಅಧ್ಯಯನ ಮಾಡಿದ್ದಾರೆಂದು ತೋರಿಸುವ 10 ನೇ / 12 ನೇ ತರಗತಿಯ ಅಂಕಪಟ್ಟಿ ಅಗತ್ಯವಿದೆ.

ವಯೋಮಿತಿ:

ಅಭ್ಯರ್ಥಿಗಳು ಕನಿಷ್ಠ 20 ವರ್ಷ ವಯಸ್ಸಿನವರಾಗಿರಬೇಕು ಮತ್ತು 28 ವರ್ಷಕ್ಕಿಂತ ಹೆಚ್ಚಿರಬಾರದು. ಆದಾಗ್ಯೂ, ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಅರ್ಜಿ ಸಲ್ಲಿಸುವುದು ಹೇಗೆ?

  • ಈ ನೇಮಕಾತಿಗಾಗಿ, ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್ bankofmaharashtra.bank.in ನಲ್ಲಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
  • ನೀವು ಮೊದಲು ನೋಂದಾಯಿಸಿಕೊಳ್ಳಬೇಕು, ನಂತರ ನೀವು ಸ್ವೀಕರಿಸಿದ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.
  • ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಹಂತ ಹಂತವಾಗಿ ಭರ್ತಿ ಮಾಡಿ.
  • ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಸರಿಯಾದ ಗಾತ್ರದಲ್ಲಿ ಡಾಕ್ಯುಮೆಂಟ್ ಅಪ್‌ಲೋಡ್ ವಿಭಾಗದಲ್ಲಿ ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ನಮೂನೆಯ ಪ್ರಿಂಟ್ ತೆಗೆದುಕೊಂಡು ಅದನ್ನು ಸುರಕ್ಷಿತವಾಗಿ ಇರಿಸಿ.
  • ಮೆರಿಟ್ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡ ನಂತರ, ದಾಖಲೆ ಪರಿಶೀಲನೆಗಾಗಿ ನೀವು ಎಲ್ಲಾ ದಾಖಲೆಗಳೊಂದಿಗೆ ಬ್ಯಾಂಕ್ ಅನ್ನು ತಲುಪಬೇಕಾಗುತ್ತದೆ.
  • ಈ ನೇಮಕಾತಿಗೆ ಸಂಬಂಧಿಸಿದಂತೆ ಒಂದು ಕಿರು ಅಧಿಸೂಚನೆಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ವಿವರವಾದ ಅಧಿಸೂಚನೆಯು ಶೀಘ್ರದಲ್ಲೇ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಗುರು ಕಚ್ಚುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | Risks of Biting Nails with Teeth

ಉಗುರು ಕಚ್ಚುವುದು (Biting Nails) ಸಾಮಾನ್ಯ. ಆದರೆ ಇದು ಆರೋಗ್ಯಕ್ಕೆ ಬಹಳ ಹಾನಿಕಾರಕ ಅಭ್ಯಾಸ ಎಂಬುದು ನಿಮಗೆ ತಿಳಿದಿದೆಯೇ, ಹೌದು, ಇದು ಒತ್ತಡ, ಆತಂಕ ಅಥವಾ ಬೇಸರದಿಂದ ಪ್ರಾರಂಭವಾಗುತ್ತದೆ. ಅನೇಕರು ಇದನ್ನು ಸಣ್ಣ ಅಭ್ಯಾಸವೆಂದು ನಿರ್ಲಕ್ಷಿಸುತ್ತಾರೆ, ಆದರೆ ಕಾಲಾನಂತರದಲ್ಲಿ ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಉಗುರು ಕಚ್ಚುವುದರಿಂದ ಅದರಲ್ಲಿನ ಕೊಳಕು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ನೇರವಾಗಿ ದೇಹವನ್ನು ಪ್ರವೇಶಿಸುತ್ತದೆ. ಇದು ಬಾಯಿ, ಹೊಟ್ಟೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಈ ಅಭ್ಯಾಸ ಹಲ್ಲುಗಳ ರಚನೆ ಮತ್ತು ಒಸಡುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಉಗುರು ಕಚ್ಚುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉಗುರು ಕಚ್ಚುವ ಅಭ್ಯಾಸದಿಂದ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಉಗುರು ಕಚ್ಚುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಏಕೆಂದರೆ ಉಗುರುಗಳಲ್ಲಿನ ಕೊಳಕು ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸುತ್ತವೆ. ಇದು ಅತಿಸಾರ, ಹೊಟ್ಟೆ ನೋವು ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟು ಮಾತ್ರವಲ್ಲ, ಒಸಡುಗಳ ಊತ, ರಕ್ತಸ್ರಾವ ಮತ್ತು ಹಲ್ಲಿನ ಸೋಂಕುಗಳು ಸಹ ಕಂಡುಬರಬಹುದು. ಜೊತೆಗೆ ನಿರಂತರವಾಗಿ ಉಗುರು ಕಚ್ಚುವುದರಿಂದ ಹಲ್ಲುಗಳಿಗೆ ಹಾನಿಯಾಗಬಹುದು, ಕ್ರಮೇಣ ಹಲ್ಲು ಸವೆಯಬಹುದು, ವಕ್ರ ಹಲ್ಲುಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಉಗುರು ಕಚ್ಚುವ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಹೇಗೆ?

ಉಗುರು ಕಚ್ಚುವ ಅಭ್ಯಾಸವನ್ನು ತಡೆಯಲು ಮೊದಲು ಅದರ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ಯೋಗ, ಧ್ಯಾನ ಮತ್ತು ಆಳವಾದ ಉಸಿರಾಟ ಸೇರಿದಂತೆ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಜೊತೆಗೆ ಉಗುರು ಕಚ್ಚುವುದನ್ನು ತಡೆಯಲು ಅವುಗಳನ್ನು ಚಿಕ್ಕದಾಗಿ ಕತ್ತರಿಸುತ್ತೀರಿ. ಅಗತ್ಯವಿದ್ದರೆ, ಸಲಹೆಗಾರರು ಅಥವಾ ವೈದ್ಯರಿಂದ ಸಹಾಯ ಪಡೆಯಿರಿ. ಯಾವಾಗಲೂ ಬಾಯಿ ಮತ್ತು ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳಿ. ಒತ್ತಡ ಹೆಚ್ಚಾದಾಗ ವಿರಾಮ ತೆಗೆದುಕೊಳ್ಳಿ. ಮಕ್ಕಳಲ್ಲಿ ಈ ಅಭ್ಯಾಸ ಕಂಡುಬರುವ ಮೊದಲೇ ಈ ಬಗ್ಗೆ ಗಮನ ಕೊಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಗುಲಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಹೆಣವಾಗಿ ಪತ್ತೆ: ಪ್ರಾಣಿ ದಾಳಿಯೋ? ಕೊಲೆಯೋ? – Kannada News | Beltangady Teen Found Dead in Pond; Murder Suspected

ಮಂಗಳೂರು, ಜನವರಿ 14: ಧನುರ್ಮಾಸ ಹಿನ್ನೆಲೆ ದೇಗುಲಕ್ಕೆಂದು ಮುಜಾನೆಯೇ ಮನೆಯಿಂದ ಹೊರಟಿದ್ದ 9ನೇ ತರಗತಿಯ ಬಾಲಕನೊಬ್ಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಸುಮಂತ್​​ (15) ಮೃತ ದುರ್ದೈವಿಯಾಗಿದ್ದು, ಬಾಲಕನ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಕುವೆಟ್ಟು ಸಮೀಪದ ಸಂಬೋಳ್ಯ ಬರಮೇಲು ನಿವಾಸಿಯಾದ ಸುಬ್ರಹ್ಮಣ್ಯ ನಾಯಕ್ ಅವರ ಮಗ ಸುಮಂತ್​​ ಧನುರ್ಮಾಸದ ಹಿನ್ನಲೆಯಲ್ಲಿ ಬೆಳಗ್ಗೆ 4 ಗಂಟೆಗೆ ಎದ್ದು ನಾಳದಲ್ಲಿರೋ ದೇವಸ್ಥಾನಕ್ಕೆ ಹೋಗಿಬರುತ್ತಿದ್ದ. ಹಾಗೆ ಇಂದು ಕೂಡ ದೇವಸ್ಥಾನಕ್ಕೆ ಅಂತಾ ಹೋಗಿದ್ದಾನೆ. ಆದರೆ ಈತನ ಸಹೋದರ ಸುದರ್ಶನ್​​ಗೆ ಬೆಳಗ್ಗೆ 6.30ರ ಸುಮಾರಿಗೆ ದೇವಸ್ಥಾನದಿಂದ ಸ್ನೇಹಿತರು ಕರೆ ಮಾಡಿ ಸುಮಂತ್ ದೇವಸ್ಥಾನಕ್ಕೆ ಯಾಕೆ ಬರಲಿಲ್ಲ ಅಂತಾ ಕೇಳಿದ್ದಾರೆ. ಆಗ ಸುಮಂತ್​​ ಮಿಸ್ಸಿಂಗ್​​ ಆಗಿರುವ ವಿಚಾರ ಮನೆಯವರಿಗೆ ಗೊತ್ತಾಗಿದೆ. ಮನೆಯಿಂದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಿ ರಸ್ತೆ ಸಮೀಪ ನಿಲ್ಲಿಸಿದ್ದ ಬೈಸಿಕಲ್​​ ತೆಗೆದುಕೊಂಡು ಸುಮಂತ್​​ ದೇಗುಲಕ್ಕೆ ಹೋಗುತ್ತಿದ್ದ. ಅಲ್ಲಿಗೆ ಹೋಗಿ ನೋಡಿದ್ರೆ ಸೈಕಲ್ ನಿಲ್ಲಿಸಿದ್ದಲಿಯೇ ಇತ್ತು. ಇದ್ರಿಂದ ಅನುಮಾನಗೊಂಡು ಆತನನ್ನು ಎಲ್ಲರೂ ಹುಡುಕಿದ್ದಾರೆ. ಈ ವೇಳೆ ರಕ್ತದ ಹನಿಗಳು ಪತ್ತೆಯಾಗಿದ್ದು, ಅವನ್ನು ಹಿಂಬಾಲಿಸಿ ಹೋದಾಗ ಸಮೀಪದ ಕೆರೆ ಪಕ್ಕದಲ್ಲೇ ಇದ್ದ ಕಲ್ಲೊಂದಕ್ಕೆ ರಕ್ತ ಅಂಟಿಕೊಂಡಿರೋದು ಕಾಣಿಸಿದೆ. ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಬಂದು ಕೆರೆಯಲ್ಲಿ ಹುಡುಕಾಡಿದಾಗ ಅಲ್ಲಿ ಸುಮಂತ್ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ತಾಯಿಗೆ ಹೊಡೆದ ಎಂದು ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಮಗ

ನಾಯಿ ಅಟ್ಟಿಸಿಕೊಂಡು ಬಂದು ಕಚ್ಚಿದ ಕಾರಣ ಬಾಲಕ ಓಡಿ ಹೋಗಿ ಕೆರೆಗೆ ಬಿದ್ದಿದ್ದಾನೆ ಅಂತಾ ಆರಂಭದಲ್ಲಿ ಅನುಮಾನಿಸಲಾಗಿತ್ತು. ಚಿರತೆ ದಾಳಿಯಿಂದ ಸಾವನ್ನಪ್ಪಿರಬಹುದು ಅಂತಲೂ ಅಂದಾಜಿಸಲಾಗಿತ್ತು. ಆದ್ರೆ ಬಾಕಲನ ತಲೆಯ ಮೇಲ್ಭಾಗದಲ್ಲಿ ಮಚ್ಚಿನಲ್ಲಿ ಹೊಡೆದಿರುವ ರೀತಿ ಎರಡು ಕಡೆ ಗಾಯವಾಗಿರೋದು ಕಂಡುಬಂದಿದೆ. ಹಾಗಿ ಇದು ಕೊಲೆಯಾಗಿರಬಹುದೆಂಬ ಅನುಮಾನ ಮೂಡಿದ್ದು, ಎಸ್ಪಿ ಡಾ.ಅರುಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಾಗ್ ಸ್ಕ್ವಾಡ್​ನಿಂದಲೂ ತಪಾಸಣೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಘಟನೆ ಹೇಗಾಯ್ತು ಅಂತಾ ಗೊತ್ತಾಗಲಿದ್ದು, ಎಲ್ಲ ಆಯಾಮದಲ್ಲಿಯೂ ತನಿಖೆ ಮಾಡುತ್ತೇವೆ ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version