ನೀವು ಮೊಬೈಲ್, ಲ್ಯಾಪ್‌ಟಾಪ್‌ ಹೆಚ್ಚಾಗಿ ಬಳಸುತ್ತೀರಾ? ಹಾಗಿದ್ರೆ ಈ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಲೇಬೇಕು! – Kannada News | Screen Time & Pain: How to Reduce Risk

ಇಂದಿನ ಕಾಲದಲ್ಲಿ, ಮೊಬೈಲ್ ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿವೆ. ಕೆಲಸ, ಅಧ್ಯಯನ, ಮನರಂಜನೆ ಮತ್ತು ಸಾಮಾಜಿಕ ಮಾಧ್ಯಮಕ್ಕಾಗಿ ಇವುಗಳ ಬಳಕೆ ಹೆಚ್ಚಾಗಿದೆ. ಆದರೆ ದೀರ್ಘಕಾಲದವರೆಗೆ ಮೊಬೈಲ್ ಫೋನ್ ನೋಡುವುದು ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದರಿಂದ ಕುತ್ತಿಗೆ (Neck) ಬಾಗುತ್ತದೆ ಮತ್ತು ಕಣ್ಣುಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದು ಬಿಗಿತ, ಕುತ್ತಿಗೆ ನೋವು (neck pain) ಮತ್ತು ಕಣ್ಣುಗಳಲ್ಲಿ ಸುಡುವ ಸಂವೇದನೆಗೆ ಕಾರಣವಾಗಬಹುದು. ಅನೇಕರು ಆರಂಭದಲ್ಲಿ ಇದನ್ನು ನಿರ್ಲಕ್ಷಿಸುತ್ತಾರೆ, ಆದರೆ ಕಾಲಾನಂತರದಲ್ಲಿ, ಈ ಸಮಸ್ಯೆ ಇನ್ನಷ್ಟು ಹದಗೆಡಬಹುದು. ಹಾಗಾಗಿ ಇಂತಹ ಸಂದರ್ಭಗಳಲ್ಲಿ, ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯ. ಅದಲ್ಲದೆ ನಿರಂತರವಾಗಿ, ಮೊಬೈಲ್ ಫೋನ್‌ ಮತ್ತು ಲ್ಯಾಪ್‌ಟಾಪ್‌ ನೋಡುವುದು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ತಲೆನೋವಿಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಪರಿಹರಿಸಿಕೊಳ್ಳದಿದ್ದರೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಈ ರೀತಿಯ ಸಮಸ್ಯೆ ತಡೆಯಲು ಯಾವ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕುತ್ತಿಗೆ ಮತ್ತು ಕಣ್ಣು ನೋವನ್ನು ತಡೆಗಟ್ಟಲು ಏನು ಮಾಡಬೇಕು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಕುತ್ತಿಗೆ ಮತ್ತು ಕಣ್ಣಿನಲ್ಲಿ ಕಂಡುಬರುವ ನೋವನ್ನು ತಡೆಗಟ್ಟಲು, ಮೊದಲು ನಿಮ್ಮ ಸ್ಕ್ರೀನ್-ವೀಕ್ಷಣಾ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದು ಅವಶ್ಯಕ. ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವಾಗ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಮರೆಯಬೇಡಿ. ಜೊತೆಗೆ ಕುತ್ತಿಗೆಯನ್ನು ಹೆಚ್ಚು ಬಗ್ಗಿಸುವುದನ್ನು ಕಡಿಮೆಮಾಡಿ. ಗಂಟೆಗಳ ಕಾಲ ನಿರಂತರವಾಗಿ ಮೊಬೈಲ್ ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ನೋಡಬೇಡಿ. ಅದರ ಬದಲು ನಡುವೆ ವಿರಾಮ ತೆಗೆದುಕೊಳ್ಳಿ. ಕಣ್ಣುಗಳಿಗೆ ಬಹಳ ಹತ್ತಿರದಲ್ಲಿ ಯಾವುದನ್ನು ಇಟ್ಟುಕೊಳ್ಳಬೇಡಿ. ಈ ಅಭ್ಯಾಸ ಹಾನಿಕಾರಕ. ಅಷ್ಟೇಅಲ್ಲ, ಕೆಲಸ ಮಾಡುವಾಗ ಕುರ್ಚಿ ಮತ್ತು ಮೇಜಿನ ಎತ್ತರ ಸರಿಯಾಗಿರಬೇಕು. ಇಲ್ಲವಾದಲ್ಲಿ ಕೆಟ್ಟ ಅಭ್ಯಾಸಗಳು ಕಾಲಾನಂತರದಲ್ಲಿ ನೋವನ್ನು ಹೆಚ್ಚಿಸಬಹುದು, ಆದ್ದರಿಂದ ಅವುಗಳನ್ನು ಸಮಯಕ್ಕೆ ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ನಿಮಗೂ ಪದೇ ಪದೇ ತಲೆ ನೋವಿನ ಜೊತೆಗೆ ಕಣ್ಣು ನೋವು ಬರುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?

ಕುತ್ತಿಗೆ ಮತ್ತು ಕಣ್ಣು ನೋವನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ, ಗಂಭೀರ ಸಮಸ್ಯೆಗಳು ಉಂಟಾಗಬಹುದು. ಗರ್ಭಕಂಠದ ನೋವು, ಸ್ನಾಯು ಸೆಳೆತ ಮತ್ತು ಕುತ್ತಿಗೆಯಲ್ಲಿ ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು. ದೃಷ್ಟಿ ದುರ್ಬಲಗೊಳ್ಳಬಹುದು, ಒಣ ಕಣ್ಣಿನ ಸಿಂಡ್ರೋಮ್ ಉಂಟಾಗಬಹುದು ಮತ್ತು ತಲೆನೋವು ನಿರಂತರವಾಗಿ ಕಂಡುಬರಬಹುದು. ಕೆಲವು ಸಂದರ್ಭಗಳಲ್ಲಿ, ನಿದ್ರೆಯ ಕೊರತೆ ಮತ್ತು ಹೆಚ್ಚಿದ ಒತ್ತಡವು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ:

  • ಪ್ರತಿ 20 ನಿಮಿಷಗಳಿಗೊಮ್ಮೆ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ.
  • ಮೊಬೈಲ್ ಬಳಸುವಾಗ ಸರಿಯಾದ ಅಂತರವನ್ನು ಕಾಪಾಡಿಕೊಳ್ಳಿ.
  • ಕುತ್ತಿಗೆ ಮತ್ತು ಕಣ್ಣುಗಳ ಆರೋಗ್ಯ ಕಾಪಾಡಲು ಲಘು ವ್ಯಾಯಾಮ ಮಾಡಿ.
  • ಸ್ಕ್ರೀನ್ ಸಮಯವನ್ನು ಮಿತಿಗೊಳಿಸಿ.
  • ಮಲಗುವ ಮೊದಲು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಗೆದ್ರೆ ಉಚಿತ ಪ್ರಯಾಣ: ಬೆಂಬಲ ಘೋಷಿಸಿದ ಆಟೋ ಡ್ರೈವರ್​ಗಳು – Kannada News | Auto drivers says if Gilli wins Bigg Boss they will give free auto rides

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಫಿನಾಲೆ ವಾರ ಶುರುವಾಗಿದೆ. ಸ್ಪರ್ಧಿಗಳಿಗಾಗಿ ವೋಟಿಂಗ್ ಲೈನ್ ಓಪನ್ ಆಗಿದ್ದು, ಪ್ರೇಕ್ಷಕರು ತಮಗೆ ಬೇಕಾದವರಿಗೆ ಮತಗಳನ್ನು ಹಾಕುತ್ತಿದ್ದಾರೆ. ಗಿಲ್ಲಿ ಅಭಿಮಾನಿಗಳು ಸಹ ಅಭಿಯಾನ ಆರಂಭಿಸಿದ್ದು, ಗಿಲ್ಲಿಯ ಗೆಳೆಯರು ಕೆಲವು ಅಭಿಮಾನಿಗಳು ಇತ್ತೀಚೆಗೆ ಪ್ರೊಸೆಷನ್ ಸಹ ನಡೆಸಿದ್ದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಖುದ್ದು ಗಿಲ್ಲಿ ಪರವಾಗಿ ಮತ ಚಲಾಯಿಸುವಂತೆ ಕೋರಿದ್ದರು. ಇದೀಗ ಬೆಂಗಳೂರಿನ ಕೆಲ ಆಟೋ ಡ್ರೈವರ್​​ಗಳು ಗಿಲ್ಲಿಗೆ ಬೆಂಬಲ ಘೋಷಿಸಿದ್ದು, ಗಿಲ್ಲಿ ಬಿಗ್​​ಬಾಸ್ ಗೆದ್ದರೆ ಬೆಳಿಗ್ಗೆ ಐದು ಗಂಟೆಯಿಂದ ಸಂಜೆ ಏಳು ಗಂಟೆ ವರೆಗೂ ಉಚಿತ ಪ್ರಯಾಣ ಸೇವೆ ಕೊಡುವುದಾಗಿ ಘೋಷಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಾದಗಿರಿ ಮೈಲಾರಲಿಂಗ ಜಾತ್ರೆಯಲ್ಲಿ ಹಳದಿ ಮಾರುತ: ಭಂಡಾರದೋಕುಳಿಯಲ್ಲಿ ಮುಂದೆದ್ದ ಭಕ್ತರು – Kannada News | Yadagiri Mailaralingana Jatre: Mylapura Ancient Grand Bhandara

ಪಲ್ಲಿಕ್ಕಿ ಮೆರವಣಿಗೆಯನ್ನ ನೋಡುವುದ್ದಕ್ಕೆ ಸಾವಿರಾರು ಜನ ಸುತ್ತಮುತ್ತಲಿನ ಗುಡ್ಡ, ಮನೆಯ ಮಹಡಿ ಮೇಲೆ ಕುಳಿತುಕೊಂಡು ಪಲ್ಲಕ್ಕಿ ಮೇಲೆ ಭಂಡಾರವನ್ನ ಎರಚಿದರು. ಮೈಲಾರಲಿಂಗೇಶ್ವರನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ವಾಡಿಕೆಯಿತ್ತು. ಆದರೆ ಪ್ರಾಣಿ ಹಿಂಸೆ ನಿಷೇಧಿಸಲಾಗಿದೆ. ಇದರ ಜೊತೆಗೆ ರೈತರು ಬೆಳೆದ ಜೋಳದ ದಂಡು (ಸೊಪ್ಪೆ) ಹಾಗೂ ಕುರಿಗಳ ಉಣ್ಣೆಯನ್ನ ಪಲ್ಲಕ್ಕಿ ಮೇಲೆ ಎಸೆಯುತ್ತಿದ್ದರು. ಹೀಗೆ ಮಾಡುವುದರಿಂದ ಕುರಿಗಳಿಗೆ ಯಾವುದೇ ರೋಗ ರುಜಿನ ಬರಲ್ಲ, ಹಾಗೆ ಬೆಳೆ ಕೂಡ ಚೆನ್ನಾಗಿ ಬರುತ್ತೆ ಎನ್ನುವುದು ಭಕ್ತರ ನಂಬಿಕೆ. 

Source link

ಖಾಕಿ ಭರ್ಜರಿ ಬೇಟೆ​​: ಪ್ರತ್ಯೇಕ ಪ್ರಕರಣಗಳಲ್ಲಿ 1.2 ಕೋಟಿ ಮೌಲ್ಯದ ಡ್ರಗ್ಸ್, ಆನೆದಂತದ ವಿಗ್ರಹ ಜಪ್ತಿ – Kannada News | Drugs and ivory idol seized in separate incidents; worth over 1.2 crore

ಜಪ್ತಿ ಮಾಡಲಾದ ಡ್ರಗ್ಸ್​​ ಜೊತೆ ಬಂಧಿತ ಆರೋಪಿಗಳು

ಬೆಂಗಳೂರು/ಆನೇಕಲ್​​, ಜನವರಿ 14: ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ ಕೇಸ್​​ನಲ್ಲಿ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿ ಆಕೆ ಬಳಿ ಇದ್ದ 4 ಕೋಟಿ ರೂ. ಮೌಲ್ಯದ MDMA ಜಪ್ತಿ ಮಾಡಿರುವ ಘಟನೆ ಬೆನ್ನಲ್ಲೇ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳ ಪೊಲೀಸರು ಕೂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಡ್ರಗ್ ಡಿಲೀಂಗ್​​ನಲ್ಲಿ ತೊಡಗಿದ್ದ ಒರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಅರೆಸ್ಟ್​​ ಮಾಡಲಾಗಿದ್ದು, ಬಂಧಿತರಿಂದ 1 ಕೋಟಿ ಮೌಲ್ಯದ 101 ಗ್ರಾಂ ಕೊಕೇನ್ ಮತ್ತು 481 ಗ್ರಾಂ ಹೈಡ್ರೋ ಗಾಂಜಾ ಸೀಜ್ ಮಾಡಲಾಗಿದೆ. ಬೇಗೂರು ವ್ಯಾಪ್ತಿಯಲ್ಲಿ ವಾಸವಿದ್ದ ಆಕಾಶ್​​ ಮತ್ತು ಉಚೆ ನಡುರಿ ಬಂಧಿತರಾಗಿದ್ದು, ಪರಿಚಯಸ್ಥರು, ವಿದ್ಯಾರ್ಥಿಗಳು ಮತ್ತು ಐಟಿಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಇವರು ಡ್ರಗ್ ಮಾರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

ಆನೆ ದಂತದಿಂದ ಮಾಡಿದ ವಿಗ್ರಹ ಮಾರಾಟ ಜಾಲ ಪತ್ತೆ

ಜಪ್ತಿ ಮಾಡಲಾದ ವಿಗ್ರಹಗಳ​​ ಜೊತೆ ಬಂಧಿತ ಆರೋಪಿಗಳು

ಆನೆ ದಂತದಿಂದ ಮಾಡಿದ ವಿಗ್ರಹ ಮಾರಾಟ ಜಾಲ ಪತ್ತೆ ಮಾಡಿರುವ ಜಿಗಣಿ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಶಬೀರ್ ಅಹಮದ್(50), ನರೇಂದ್ರ ಶರ್ಮಾ(45) ಆರೋಪಿಗಳಾಗಿದ್ದು, ರಾಧೆ ಮತ್ತು ಕೃಷ್ಣ ವಿಗ್ರಹಳನ್ನು ಇವರು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಮೊಹಮ್ಮದ್ ಶಬೀರ್ ಅಹ್ಮದ್ ಬೆಂಗಳೂರಿನ ಬನಶಂಕರಿ ನಿವಾಸಿಯಾಗಿದ್ದರೆ, ನರೇಂದ್ರ ಶರ್ಮಾ ಸುಧಾಮನಗರದವನು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಖತರ್ನಾಕ್​​ ಡ್ರಗ್​​ ಜಾಲ ಭೇದಿಸಿದ ಮಂಗಳೂರು ಸಿಸಿಬಿ; ಮಹಿಳೆ ಅರೆಸ್ಟ್​, 4 ಕೋಟಿ ಮೌಲ್ಯದ MDMA ಸೀಜ್​

20 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಿಗ್ರಹಗಳನ್ನು ಕೊಪ್ಪ ಗೇಟ್ ಸಮೀಪ ಮಾರಾಟ ಮಾಡಲು ಆರೋಪಿಗಳು ಬಂದಿರುವ ಖಚಿತ ಮಾಹಿತಿ ಮೇರೆ ಜಿಗಣಿ ಪೊಲೀಸರು ದಾಳಿ ನಡೆಸಿದ್ದರು. ವಿಗ್ರಹ ಸಮೇತವಾಗಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬೈಕ್​​ನ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿಯನ್ನ ಪಡೆಯದೆ ಇವರು ಆನೆ ದಂತದ ವಿಗ್ರಹ ಇಟ್ಟುಕೊಂಡಿದ್ದಲ್ಲದೆ, ಕಾನೂನು ಬಾಹಿರ ಮಾರಾಟಕ್ಕೂ ಯತ್ನಿಸಿದ್ದರು. ಇನ್ನು ಜಪ್ತಿ ಮಾಡಿರುವ ಆನೆದಂತದ ವಿಗ್ರಹಗಳನ್ನ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನಕ್ಕೆ ರವಾನಿಸಲಾಗಿದ್ದು, ಇವು ಎಷ್ಟು ವರ್ಷದ ಹಳೆಯದಾದ ಆನೆ ದಂತದಿಂದ ಮಾಡಿರುವ ವಿಗ್ರಹ ಎಂಬ ಬಗ್ಗೆ ತಜ್ಞರು ವರದಿ ನೀಡಲಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:23 pm, Wed, 14 January 26

Source link

ಬಿಗ್ ಬಾಸ್ ಕನ್ನಡ: ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ; ರೊಚ್ಚಿಗೆದ್ದ ಅಭಿಮಾನಿಗಳು – Kannada News | Bigg Boss Kannada 12 Finale Fans talk about Ashwini Gowda Versus Gilli Nata

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12 Finale) ಫಿನಾಲೆ ಹತ್ತಿರ ಆಗಿದೆ. ಈ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಗಿಲ್ಲಿ ನಟ (Gilli Nata) ಗೆಲ್ಲುತ್ತಾರೆ ಎಂದು ಇಡೀ ರಾಜ್ಯದಲ್ಲಿ ಅಭಿಪ್ರಾಯ ಮನೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾಡುತ್ತಿರುವ ಕಮೆಂಟ್ ಸುರಿಮಳೆಯೇ ಅದಕ್ಕೆ ಸಾಕ್ಷಿಯಾಗಿದೆ. ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಗಿಲ್ಲಿ ನಟ ಅವರ ಅಭಿಮಾನಿಗಳು ಅಶ್ವಿನಿ ಗೌಡ ವಿರುದ್ಧ ಕೊಂಚ ಗರಂ ಆಗಿದ್ದಾರೆ. ಕನ್ನಡ ಪರ ಹೋರಾಟಗಾರ್ತಿ ಎನ್ನುವ ಅಶ್ವಿನಿ ಗೌಡ (Ashwini Gowda) ಅವರು ಹೆಚ್ಚು ಇಂಗ್ಲಿಷ್ ಬಳಸುವುದೇ ವೀಕ್ಷಕರು ಕೋಪಕ್ಕೆ ಕಾರಣ ಆಗಿದೆ.

‘ಗಿಲ್ಲಿ ನಟ ಹಳ್ಳಿಯ ಪ್ರತಿಭೆ. ಬರೀ ಮಾಯಿ ಮಾತಲ್ಲಿ ಹೇಳಬಾರದು. ಇಡೀ ಕರ್ನಾಟಕದ ಜನರು ಅವನಿಗೆ ವೋಟ್ ಮಾಡಿ ಗೆಲ್ಲಿಸಬೇಕು. ಯಾರೋ ಹೇಳುತ್ತಾರೆ ಅಂತ ನಾವು ಮನಸ್ಸು ಬದಲಾಯಿಸಬಾರದು. ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಸರಿಯಾಗಿ ಕನ್ನಡ ಬಳಸುತ್ತಿಲ್ಲ. ಬರೀ ಇಂಗ್ಲಿಷ್ ಬಳಸುತ್ತಾರೆ. ಅವರಿಗೆ ನಾವು ಧಿಕ್ಕಾರ ಕೂಗಬೇಕಾಗಯತ್ತದೆ’ ಎಂದು ಗಿಲ್ಲಿ ನಟನ ಅಭಿಮಾನಿಯೊಬ್ಬರು ಹೇಳಿದ್ದಾರೆ.

‘ಹೋರಾಟಗಾರ್ತಿಯಾಗಿ ಹೆಣ್ಮಕ್ಕಳ ಪರ ನಿಲ್ಲುತ್ತೇನೆ ಅಂತ ಅಶ್ವಿನಿ ಗೌಡ ಹೇಳುತ್ತಾರೆ. ಆದರೆ ಒಬ್ಬ ಹೆಣ್ಮಗಳನ್ನು ಅವರು ಹೀಯಾಳಿಸುತ್ತಾರೆ. ಅಶ್ವಿನಿ ಗೌಡ ಬದಲು ಗಿಲ್ಲಿ ನಟ ಅವರಿಗೆ ವೋಟ್ ಮಾಡಿ ಗೆಲ್ಲಿಸಿ’ ಎಂದು ಅಭಿಮಾನಿಯೊಬ್ಬರು ಟಿವಿ9 ಜೊತೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ಯಾದ್ಯಂತ ಇರುವ ಗಿಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಜೋರಾಗಿ ಮಾಡುತ್ತಿದ್ದಾರೆ.

‘ಗಿಲ್ಲಿ ತುಂಬಾ ಕಷ್ಟಪಟ್ಟು ಬಂದಿದ್ದಾನೆ. ಎಲ್ಲರ ಜೊತೆ ಮಾತನಾಡುತ್ತಾನೆ. ಗಿಲ್ಲಿ ಬಡವರ ಮಗ. ಹಾಗಾಗಿ ಅವನು ಗೆಲ್ಲಬೇಕು. ಅವನೇ ಗೆಲ್ಲುತ್ತಾನೆ ಎಂಬ ನಂಬಿಕೆ ಶೇಕಡ 100ರಷ್ಟು ಇದೆ. ಮೊದಲ ಸೀಸನ್​ನಿಂದ 12ನೇ ಸೀಸನ್ ತನಕ ಈ ಪರಿ ಕ್ರೇಜ್ ಯಾರಿಗೂ ಬಂದಿಲ್ಲ. ಗಿಲ್ಲಿಗೆ 1 ಮಿಲಿಯನ್ ಫಾಲೋವರ್​ಸ್ ಆಗಿದ್ದಾರೆ’ ಎಂದು ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು

‘ನಾವು ಯಾರೂ ಕೂಡ ದುಡ್ಡು ತೆಗೆದುಕೊಂಡಿಲ್ಲ. ಅವನ ಪ್ರತಿಭೆ ನೋಡಿ ಸ್ವಇಚ್ಛೆಯಿಂದ ಪ್ರಚಾರ ಮಾಡುತ್ತಿದ್ದೇವೆ. ರೈತನ ಮಗ ಅವನು ಗೆಲ್ಲುತ್ತಾನೆ’ ಎಂದು ಟಿವಿ9 ಜೊತೆ ಮಾತನಾಡಿದ ಅಭಿಮಾನಿಗಳು ಹೇಳಿದ್ದಾರೆ. ಗಿಲ್ಲಿ ಗೆದ್ದರೆ ಕೆಲವು ಆಟೋ ಚಾಲಕರು ಉಚಿತ ಸೇವೆ ನೀಡುವುದಾಗಿಯೂ ಹೇಳಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ಮೇಲೆ ಜನರು ತೋರಿಸುತ್ತಿರುವ ಪ್ರೀತಿ ದೊಡ್ಡದಾಗಿದೆ. ಜನವರಿ 17 ಮತ್ತು 18ರಂದು ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಿಲ್ಲಿಗೆ ನನ್ನ ಬಾಯ್​​ಫ್ರೆಂಡ್ ಆಗುವ ಅರ್ಹತೆ ಇಲ್ಲ ಎಂದ ರಕ್ಷಿತಾ – Kannada News | Bigg Boss Kannada: Rakshita Shetty said Gilli does not have qualities to be her husband

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆ ವಾರ ತಲುಪಿದೆ. ಸದ್ಯಕ್ಕೆ ಏಳು ಮಂದಿ ಸ್ಪರ್ಧಿಗಳಿದ್ದು ಇಂದು (ಬುಧವಾರ) ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಫಿನಾಲೆಗೆ ಉಳಿದುಕೊಂಡಿರುವ ಸ್ಪರ್ಧಿಗಳ ಮಾತು, ಹಾವ ಭಾವ ಎಲ್ಲವೂ ಪ್ರೇಕ್ಷಕರಿಗೆ ಪರಿಚಿತವಾಗಿಬಿಟ್ಟಿದೆ. ಗಿಲ್ಲಿಯ ಕಾಮಿಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್​​ಬಾಸ್ ಮನೆಯಲ್ಲಿ ಜೋಡಿಗಳು ಏರ್ಪಟ್ಟಿದ್ದವು. ಅದರಲ್ಲಿ ಬಹಳ ಜನಪ್ರಿಯತೆ ಪಡೆದಿದ್ದು ಗಿಲ್ಲಿ ಮತ್ತು ಕಾವ್ಯಾ ಜೋಡಿ. ಆದರೆ ಇತ್ತೀಚೆಗೆ ರಕ್ಷಿತಾ ಸಹ ಗಿಲ್ಲಿ ಜೊತೆ ಆಪ್ತವಾಗಿದ್ದು, ಗಿಲ್ಲಿಯನ್ನು ಇಷ್ಟಪಡುತ್ತಿರುವ ಅನುಮಾನ ಪ್ರೇಕ್ಷಕರಿಗೆ ಮೂಡಿದೆ.

ಗಿಲ್ಲಿ ಜೊತೆಗೆ ಹೆಚ್ಚು ಇರಲು ರಕ್ಷಿತಾ ಬಯಸುತ್ತಾರೆ, ಗಿಲ್ಲಿ ಜೊತೆಗೆ ಕಾವ್ಯಾ ಅಥವಾ ಮುಂಚೆ ಸ್ಪಂದನಾ ಮಾತನಾಡಿದರೆ ಬೇಜಾರು ಮಾಡಿಕೊಳ್ಳುತ್ತಿದ್ದರು. ಮೊನ್ನೆಯಂತೂ ಗಿಲ್ಲಿ ಜೊತೆ ತಾವು ಮಾತ್ರ ಕೂರಬೇಕೆಂದು ಹೆಚ್ಚುವರಿ ಇದ್ದ ಬೀನ್ ಬ್ಯಾಗ್​​ಗಳನ್ನು ಬೇರೆಡೆ ತೆಗೆದುಕೊಂಡು ಹೋಗಿ ಇಟ್ಟು ಬಂದಿದ್ದರು. ಒಮ್ಮೆಯಂತೂ ಗಿಲ್ಲಿಯಂಥ ಬಾಯ್​​ಫ್ರೆಂಡ್ ಬೇಕು ಎಂದು ಸಹ ರಕ್ಷಿತಾ ಹೇಳಿದ್ದರು. ವೀಕೆಂಡ್ ಎಪಿಸೋಡ್​​ನಲ್ಲಿ ಸಹ ಈ ಬಗ್ಗೆ ಚರ್ಚೆ ಮಾಡಲಾಯ್ತು.

ಆದರೆ ವೀಕೆಂಡ್ ಚರ್ಚೆ ಬಳಿಕ ರಕ್ಷಿತಾ ತಮ್ಮ ವರಸೆ ಬದಲಿಸಿದ್ದಾರೆ. ಗಿಲ್ಲಿ ನನಗೆ ಇಷ್ಟವಿಲ್ಲ. ನನ್ನ ಬಾಯ್​​ಫ್ರೆಂಡ್ ಅಥವಾ ಪತಿ ಆಗುವ ಅರ್ಹತೆಯೇ ಗಿಲ್ಲಿಗೆ ಇಲ್ಲ ಎಂದಿದ್ದಾರೆ ರಕ್ಷಿತಾ. ಗಿಲ್ಲಿ, ಖಾಲಿ ಸಮಯದಲ್ಲಿ ಬಿಗ್​​ಬಾಸ್ ಸದಸ್ಯರಿಗೆ ಸಿನಿಮಾ ಕತೆ ಹೇಳುವುದು ಅಭ್ಯಾಸ. ಅದರಲ್ಲೂ ಬಿಗ್​​ಬಾಸ್ ಮನೆಯಲ್ಲಿ ನಡೆದಿದ್ದನ್ನೇ ಕತೆಯ ರೀತಿ ಹೇಳುತ್ತಾರೆ. ಹಾಗೆಯೇ ತಮ್ಮ ಹಾಗೂ ಕಾವ್ಯಾರ ಕತೆಯನ್ನು ಇತ್ತೀಚೆಗೆ ಹೇಳುತ್ತಿದ್ದರು. ಆಗ ರಕ್ಷಿತಾರ ವಿಷಯವನ್ನೂ ಎಳೆದು ತಂದು, ರಕ್ಷಿತಾ ತಮ್ಮ ಬಗ್ಗೆ ಇಷ್ಟ ಇರಿಸಿಕೊಂಡಿದ್ದಾರೆ ಎಂದು ಕತೆಯ ರೂಪದಲ್ಲಿ ಹೇಳಿದರು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಬಿಗ್​​ಬಾಸ್ ಕತೆಯನ್ನೇ ಹೇಳಿದ ಗಿಲ್ಲಿ: ವಿಡಿಯೋ

ಆಗ ಅಲ್ಲಿಯೇ ಇದ್ದ ರಕ್ಷಿತಾ, ಸಿಟ್ಟಿನಲ್ಲಿ, ‘ನೀವು ನನಗೆ ಏನೂ ಬೇಡ. ನಿಮ್ಮ ಬಗ್ಗೆ ನನಗೆ ಯಾವ ಅಭಿಪ್ರಾಯವೂ ಇಲ್ಲ. ನನ್ನ ಗಂಡ ಅಥವಾ ಬಾಯ್​​ಫ್ರೆಂಡ್ ಆಗುವ ಯಾವ ಅರ್ಹತೆಯೂ ನಿಮಗೆ ಇಲ್ಲ. ನಾನು ಮದುವೆ ಆಗುವ ಹುಡುಗನಲ್ಲಿ ಏನೇನು ಗುಣಗಳು ಇರಬೇಕು ಎಂದುಕೊಂಡಿದ್ದೆನೊ ಅದು ಯಾವುದು ಸಹ ಗಿಲ್ಲಿ ಅಲ್ಲಿ ಇಲ್ಲ’ ಎಂದು ರಕ್ಷಿತಾ ಹೇಳಿದ್ದಾರೆ.

ಬಳಿಕ ಕಾವ್ಯಾ, ‘ಹಾಗಿದ್ದರೆ ಗಿಲ್ಲಿ ಥರ ಹುಡುಗ ಬೇಕು ಎಂದು ಹೇಳಿದ್ದೆಯಲ್ಲ?’ ಎಂದು ಕೇಳಿದಾಗ, ರಕ್ಷಿತಾ, ‘ಹೌದು, ಆದರೆ ಅವರ ಕೆಲವು ಸ್ವಭಾವ ಇದೆಯಲ್ಲ ಅದು ನನಗೆ ಬೇಡ. ನಾನು ಅವರಿಗೆ ಕೆಲವು ಸ್ವಭಾವಗಳನ್ನು ಬದಲಾಯಿಸಿಕೊಳ್ಳಿ ಎಂದು ಹೇಳುತ್ತಲೇ ಇರುತ್ತೇನೆ. ಗಿಲ್ಲಿ ಬಗ್ಗೆ ಕೆಲವು ಕಂಪ್ಲೆಟ್ಸ್ ಸಹ ಹೇಳಿದ್ದೇನೆ. ಅವೆಲ್ಲ ಗುಣಗಳು ನನಗೆ ಬೇಡ. ಹೌದು, ನಾನು ಇಷ್ಟಪಡುವ ಕೆಲವು ಗುಣಗಳು ಅವರ ಬಳಿ ಇವೆ ಆದರೆ ಎಲ್ಲವೂ ಇಲ್ಲ’ ಎಂದಿದ್ದಾರೆ ರಕ್ಷಿತಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 2,500 ರೂಗೆ ಲವ್ ಇನ್ಷೂರೆನ್ಸ್; ಮದುವೆ ಬಳಿಕ ಬಂತು 1.2 ಲಕ್ಷ ರೂ ಹಣ – Kannada News | Love Insurance, Chinese woman claims over big money after marriage, here is the story details

ಲವ್ ಇನ್ಷೂರೆನ್ಸ್ (Love Insurance) ಪಾಲಿಸಿಯಿಂದ ಮಹಿಳೆಯೊಬ್ಬಳು ಭರ್ಜರಿ ಹಣ ಕ್ಲೇಮ್ ಮಾಡಿ ಗಳಿಸಿದ್ದಾಳೆ. ಹತ್ತು ವರ್ಷದ ಹಿಂದೆ ಈ ಮಹಿಳೆ ಕೇವಲ 2,500 ರೂಗೆ ಲವ್ ಇನ್ಷೂರೆನ್ಸ್ ಪಡೆದಿದ್ದಳು. ಇದೀಗ ವಿವಾಹದ ಬಳಿಕ ಇನ್ಷೂರೆನ್ಸ್ ಹಣ ಕ್ಲೇಮ್ ಮಾಡಿದ್ದಾಳೆ. ಇನ್ಷೂರೆನ್ಸ್ ಕಂಪನಿ ಈ ಮಹಿಳೆಗೆ 1.2 ಲಕ್ಷ ರೂ ಪಾವತಿಸಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಚೀನಾದಲ್ಲಿ. ಈ ಲವ್ ಇನ್ಷೂರೆನ್ಸ್ ಕೂಡ ಈಗ ಚಾಲ್ತಿಯಲ್ಲಿಲ್ಲ. ಆದರೂ ಈ ಲವ್ ಇನ್ಷೂರೆನ್ಸ್ ಸ್ಟೋರಿ ಇಂಟರೆಸ್ಟಿಂಗ್ ಆಗಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ವು ಎಂಬ ಹುಡುಗಿ 2015ರಲ್ಲಿ ತಾನು ಓದುತ್ತಿದ್ದ ಕಾಲೇಜಿನಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಚೈನಾ ಲೈಫ್ ಪ್ರಾಪರ್ಟಿ ಅಂಡ್ ಕ್ಯಾಷುವಾಲಿಟಿ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಎನ್ನುವ ಕಂಪನಿಯು ಆ ಸಂದರ್ಭದಲ್ಲಿ ಲವ್ ಇನ್ಷೂರೆನ್ಸ್ ಪಾಲಿಸಿ ಆಫರ್ ಮಾಡಿತ್ತು. 299 ಯುವಾನ್ (3,900 ರೂ) ಹಣಕ್ಕೆ ಈ ಪಾಲಿಸಿ ಮಾರಾಟವಾಗುತ್ತಿತ್ತು. ವುಗೆ ಈ ಪಾಲಿಸಿ 199 ಯುವಾನ್​ಗೆ ಸಿಕ್ಕಿತು. ಇದನ್ನು ತನ್ನ ಬಾಯ್​ಫ್ರೆಂಡ್​ಗೆ ಗಿಫ್ಟಾಗಿ ನೀಡಿದ್ದಳು ವು.

ಇದನ್ನೂ ಓದಿ: ಇನ್ನು 10-20 ವರ್ಷ ಮಾತ್ರ ಮನುಷ್ಯರು ಕೆಲಸ ಮಾಡಬೇಕಾಗಬಹುದು: ಇಲಾನ್ ಮಸ್ಕ್ ಹೀಗ್ಯಾಕಂದ್ರು ಗೊತ್ತಾ?

ಲವ್ ಇನ್ಷೂರೆನ್ಸ್ ನಿಯಮಗಳೇನಿತ್ತು..?

ಪ್ರೀತಿ ಪ್ರೇಮಗಳು ಬೇಗನೇ ಮುರಿದುಬೀಳುತ್ತವೆ. ಮದುವೆಯಲ್ಲಿ ಅಂತ್ಯವಾಗುವ ಪ್ರೇಮಕಥೆಗಳು ಬಹಳ ವಿರಳ. ಚೀನಾದಲ್ಲೂ ಇದೇ ಕಥೆ. ಹೀಗಾಗಿ, ಇನ್ಷೂರೆನ್ಸ್ ಕಂಪನಿಯು ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಲವ್ ಇನ್ಷೂರೆನ್ಸ್ ಪಾಲಿಸಿ ಆಫರ್ ಮಾಡಿದೆ. ಪಾಲಿಸಿ ಆರಂಭವಾದ ದಿನದಿಂದ ಮೂರನೇ ವಾರ್ಷಿಕೋತ್ಸವ ಮುಗಿದ ಬಳಿಕ 10 ವರ್ಷದೊಳಗೆ ಪ್ರೇಮಿಯನ್ನು ವಿವಾಹವಾದರೆ 10,000 ಗುಲಾಬಿ ಹೂ ಕೊಡುತ್ತೇವೆ. ಅಥವಾ 0.5 ಕೆರಟ್​ನ ಡೈಮಂಡ್ ರಿಂಗ್ ಕೊಡುತ್ತೇವೆ, ಅಥವಾ 10,000 ಯುವಾನ್ ಅನ್ನು ಕ್ಯಾಷ್ ರೂಪದಲ್ಲಿ ಕೊಡುತ್ತೇವೆ ಎಂದು ಕಂಪನಿ ಆಫರ್ ಕೊಟ್ಟಿತ್ತು.

ವು ಇಂಥದ್ದೊಂದು ಪಾಲಿಸಿಯನ್ನು ತನ್ನ ಪ್ರಿಯಕರನಿಗೆ ಕೊಟ್ಟಾಗ ಆತನಿಗೆ ಕಕ್ಕಾಬಿಕ್ಕಿಯಾಗಿತ್ತು. ‘ಈಕೆ ಲವ್ ಇನ್ಷೂರೆನ್ಸ್ ಖರೀದಿಸಿದ್ದಾಗಿ ಹೇಳಿದಾಗ ಆಕೆಗೆ ಯಾರೊ ಟೊಪ್ಪಿ ಹಾಕಿದ್ದಾರೆ ಎಂದೇ ಭಾವಿಸಿದ್ದೆ’ ಎಂದು ಈಗ ಈಕೆಯನ್ನು ವರಿಸಿರುವ ಆ ಪ್ರಿಯಕರ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಸೇವಕ ಅಲ್ಲ ಉತ್ಪಾದಕ ಆಗಬೇಕು: ಉದ್ಯಮಿ ಬಾಬಾ ಕಲ್ಯಾಣಿ ಸಲಹೆ

2015ರಲ್ಲಿ ಇಬ್ಬರೂ ಪ್ರೀತಿಸಲು ಆರಂಭಿಸಿದರು. 2025ರ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದಾರೆ. ಆ ಬಳಿಕ ಇನ್ಷೂರೆನ್ಸ್ ಹಣಕ್ಕೆ ಕ್ಲೇಮ್ ಮಾಡಿದ್ದಾರೆ. 10,000 ಗುಲಾಬಿ ಹೂ ಬೇಡ, ಡೈಮಂಡ್ ರಿಂಗ್ ಕೂಡ ಬೇಡ, 10,000 ಯುವಾನ್ (1.2 ಲಕ್ಷ ರೂ) ಹಣ ಕೊಡಿ ಎಂದು ಅರ್ಜಿ ಹಾಕಿದ್ದಾರೆ. ಈ ಹಣ ಬಂತಾ ಇಲ್ಲವಾ ಎಂಬುದು ಗೊತ್ತಿಲ್ಲ. ಅಂದಹಾಗೆ, ಆ ಚೀನಾ ಕಂಪನಿಯು ಈ ಲವ್ ಇನ್ಷೂರೆನ್ಸ್ ಪಾಲಿಸಿ ಸ್ಕೀಮ್ ಅನ್ನು 2017ರಲ್ಲೇ ನಿಲ್ಲಿಸಿದೆ. ಅಲ್ಲಿಯವರೆಗೆ ಮಾಡಿಸಿರುವ ಪಾಲಿಸಿಗಳು ಆ್ಯಕ್ಟಿವ್ ಇರುತ್ತವೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಷ ಲಕ್ಷ ಹಣ, ಒಡವೆ ಗಿಫ್ಟ್ ಕೊಟ್ರೂ ಮತ್ತೊಬ್ಬನ ಜತೆ ಚಕ್ಕಂದ: ಹಂತಕನ ಡೆತ್ ನೋಟ್​​​ನಲ್ಲಿ ಮಹಿಳೆ ಕೊಲೆ ರಹಸ್ಯ ಬಯಲು – Kannada News | Big twist To madanayakanahalli drakshayini Murder Case: Accused Veerabhadra reveals In Death Note Why Killed her

ಬೆಂಗಳೂರು, (ಜನವರಿ 14): ಮಾದನಾಯಕನಹಳ್ಳಿ ಪೊಲೀಸ್ ಠಾಣಾ (madanayakanahalli Police) ವ್ಯಾಪ್ತಿಯಲ್ಲಿ 55 ವರ್ಷದ ದಾಕ್ಷಾಯಿಣಿ ಕೊಲೆ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನವರಿ 10ರಂದು ಕುದುರೆಗೆರೆಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ದಾಕ್ಷಾಯಿಣಿಯನ್ನು ಸೋದರ ಮಾವ 60 ವರ್ಷದ ವೀರಭದ್ರ ಎಂಬಾತ ಕೊಡಲಿಯಿಂದ ಕೊಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ, ತಲೆ ಮರೆಸಿಕೊಂಡಿದ್ದ ಹಂತಕ ವೀರಭದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್​ ನೋಟ್ ಬರೆದಿಟ್ಟಿದ್ದು, ಲಕ್ಷ ಲಕ್ಷ ಹಣ, ಬಂಗಾರದ ಒಡವೆಗಳನ್ನು ಮಾಡಿಸಿಕೊಟ್ಟರೂ ಸಹ ದಾಕ್ಷಾಯಿಣಿ ಬೇರೊಬ್ಬನ ಜತೆ ಸಂಬಂಧ ಹೊಂದಿದ್ದಕ್ಕೆ ಹತ್ಯೆ ಮಾಡಿರುವುದಾಗಿ ವೀರಭದ್ರ ಡೆತ್​​ನೋಟ್​​ನಲ್ಲಿ ಬರೆದಿಟ್ಟಿದ್ದಾನೆ.

ದಾಕ್ಷಾಯಿಣಿಯನ್ನು ಸೋದರ ಮಾವ ಕೊಂದಿದ್ಯಾಕೆ?

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಭದ್ರ ದಾಕ್ಷಾಯಿಣಿಗೆ ಸೋದರ ಮಾವನಾಗಬೇಕು. ಚಿಕ್ಕಬಾಣಾವರ ನಿವಾಸಿಯಾಗಿರೋ ಈತ ಮೂಲತಃ ದೊಡ್ಡಬಳ್ಳಾಪುರದ ಕೊಳೂರಿನನವನು. ಕೊಲೆ ನಂತರ ತಲೆ ಮರೆಸಿಕೊಂಡಿದ್ದ ವೀರಭದ್ರ ಕೂಳೂರಿಗೆ ಹೋಗಿ ನಿರ್ಜನ ಪ್ರದೇರ್ಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಕ್ಷಾಯಿಣಿ ಜೊತೆ ಸಂಬಂಧ ಹೊಂದಿದ್ದ. ಹೀಗಾಗಿ ದಾಕ್ಷಾಯಿಣಿಗೆ ಹಣ ಹಾಗೂ ಒಡವೆಗಳನ್ನ ಕೂಡ ಮಾಡಿಸಿಕೊಟ್ಟಿದ್ದ. ಆದ್ರೆ ಕೆಲವು ತಿಂಗಳ ಹಿಂದೆ ದಾಕ್ಷಾಯಿಣಿಗೆ ಬೇರೊಬ್ಬನ ಜತೆ ಸಂಬಂಧವಿರುವುದು ಗೊತ್ತಾಗಿದೆ. ಹೀಗಾಗಿ ಕೊಟ್ಟ ಹಣ, ಒಡವೆಗಳನ್ನು ವಾಪಸ್ ಕೇಳಿದ್ದಾನೆ. ಆಗ ದಾಕ್ಷಾಯಿಣಿ ಮತ್ತು ಆಕೆಯ ಗೆಳೆಯ ಬೆದರಿಕೆ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡಿದ್ದ ವೀರಭದ್ರಯ್ಯ, ದಾಕ್ಷಾಯಿಣಿಯನ್ನು ಕೊಚ್ಚಿ ಕೊಂದಿರುವುದಾಗಿ ಡೆತ್​​ನೋಟ್​​ನಲ್ಲಿ ಉಲ್ಲೇಖಿಸಿದ್ದಾನೆ.

ಇದನ್ನೂ ಓದಿ: ಮೊಮ್ಮಗನ ಎದುರಲ್ಲೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದ ಸಂಬಂಧಿ?

ಘಟನೆ ಹಿನ್ನೆಲೆ

ಬೆಂಗಳೂರು ವಾಯುವ್ಯ ವಿಭಾಗ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರೆಗೆರೆ ಕಾಲೋನಿಯಲ್ಲಿ ನಿವಾಸಿ ದಾಕ್ಷಾಯಿಣಮ್ಮ 8 ವರ್ಷದ ಹಿಂದೆ ಪತಿ ನಾಗರಾಜ್​​​ರನ್ನು ಕಳೆದುಕೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನ ಮದುವೆ ಕೂಡ ಮಾಡಿದ್ದಾರೆ. ಹಣಕಾಸಿನ ವ್ಯವಹಾರ ಹಾಗೂ ಮನೆ ಬಾಡಿಗೆ ಹಣದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಆದ್ರೆ, ಜನವರಿ 10ರಂದು ದಾಕ್ಷಾಯಿಣಿ, ಶಾಲೆಯಿಂದ ಮೊಮ್ಮಗನನ್ನು ಕರೆತರಲು ಹೊರಟಿದ್ದಾಗ ಬೈಕ್​ನಲ್ಲಿ ಬದು ಏಕಾಏಕಿ ಕೊಡಲಿಯಿಂದ ಕೊಚ್ಚಿ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಷ್ಟೇ ಅಲ್ಲದರೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆದರೆ ಅಷ್ಟರಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವರದಿ: ಮಂಜುನಾಥ್ ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Hamsa Mahapurusha Yoga: 12 ವರ್ಷಗಳ ನಂತರ ಗುರು-ಹಂಸ ಮಹಾ ಪುರುಷ ರಾಜಯೋಗ; ಈ 3 ರಾಶಿಗೆ ಅದೃಷ್ಟದ ಸುರಿಮಳೆ – Kannada News | Hamsa Mahapurusha Yoga: Jupiter Transit Blesses 3 Zodiacs with Immense Luck and Success

12 ವರ್ಷಗಳ ನಂತರ, ಗುರುವಿನ ಸಂಚಾರದಿಂದಾಗಿ, ಹಂಸ ಮಹಾ ಪುರುಷ ಯೋಗವು ರೂಪುಗೊಳ್ಳಲಿದೆ. ಇದರೊಂದಿಗೆ, ಮೂರು ರಾಶಿಗಳ ಜನರು ಹೆಚ್ಚಿನ ಅದೃಷ್ಟವನ್ನು ಪಡೆಯಲಿದ್ದಾರೆ. ಅವರು ಕೈಗೊಳ್ಳುವ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ಜೂನ್ 2026 ರಿಂದ ಈ ಯೋಗವು ಹೆಚ್ಚು ಸಕ್ರಿಯವಾಗಲಿದೆ. ಹನ್ನೆರಡು ರಾಶಿಗಳ ಪೈಕಿ ಆ ಮೂರು ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹಂಸ ಮಹಾಪುರುಷ ಯೋಗವು ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹದಿಂದ ರೂಪುಗೊಳ್ಳುವ ಒಂದು ಶಕ್ತಿಶಾಲಿ ರಾಜಯೋಗವಾಗಿದ್ದು, ಗುರುವು ತನ್ನ ಸ್ವಕ್ಷೇತ್ರ (ಮೀನ, ಧನು) ಅಥವಾ ಉಚ್ಚ ಕ್ಷೇತ್ರ (ಕರ್ಕ) ರಾಶಿಯಲ್ಲಿ ಕೇಂದ್ರ ಸ್ಥಾನದಲ್ಲಿ (1, 4, 7, 10ನೇ ಮನೆ) ಇದ್ದಾಗ ಉಂಟಾಗುತ್ತದೆ, ಇದು ವ್ಯಕ್ತಿಗೆ ಜ್ಞಾನ, ಸಂಪತ್ತು, ಗೌರವ ಮತ್ತು ಧಾರ್ಮಿಕ ಪ್ರವೃತ್ತಿಯನ್ನು ತರುತ್ತದೆ.

ಕನ್ಯಾ ರಾಶಿ:

ಮಹಾ ಪುರುಷ ರಾಜಯೋಗವನ್ನು ರೂಪಿಸುವ ಗುರುವು ಕನ್ಯಾ ರಾಶಿಯವರಿಗೆ ಆದಾಯದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಗುರುವು ನಿಮ್ಮ ರಾಶಿಯಿಂದ 11 ನೇ ಮನೆಯಲ್ಲಿ ಸಾಗುತ್ತಿರುವುದರಿಂದ, ಈ ಸಮಯದಲ್ಲಿ ನಿಮ್ಮ ಆದಾಯ ಗಮನಾರ್ಹವಾಗಿ ಹೆಚ್ಚಾಗಬಹುದು. ನೀವು ಹೊಸ ಮಾರ್ಗಗಳ ಮೂಲಕವೂ ಹಣವನ್ನು ಗಳಿಸುವಿರಿ. ಷೇರು ಮಾರುಕಟ್ಟೆ, ಊಹಾಪೋಹ ಮತ್ತು ಲಾಟರಿ ಮೂಲಕ ನೀವು ಲಾಭ ಗಳಿಸುವ ಸಾಧ್ಯತೆಯಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ವೃತ್ತಿಜೀವನವು ಉನ್ನತ ಮಟ್ಟವನ್ನು ತಲುಪುತ್ತದೆ. ಉದ್ಯಮಿಗಳು ದೊಡ್ಡ ವ್ಯಾಪಾರ ಒಪ್ಪಂದಗಳನ್ನು ಮಾಡುತ್ತಾರೆ. ಕನ್ಯಾ ರಾಶಿಯವರು ತಮ್ಮ ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ.

ತುಲಾ ರಾಶಿ:

ಗುರು-ಹಂಸ ಮಹಾಪುರುಷ ರಾಜಯೋಗವು ರೂಪುಗೊಳ್ಳಲಿರುವುದರಿಂದ ತುಲಾ ರಾಶಿಯವರಿಗೆ ಅಪಾರ ಲಾಭಗಳು ದೊರೆಯುತ್ತವೆ. ಈ ರಾಜಯೋಗವು ನಿಮ್ಮ ಸಂಚಾರ ಜಾತಕದ ಕರ್ಮ ಮನೆಯಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಕೆಲಸ ಮತ್ತು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೋಡುತ್ತೀರಿ. ಕೆಲಸ ಮಾಡುವವರು ಕಚೇರಿಯಲ್ಲಿ ತಮ್ಮ ಕೆಲಸಕ್ಕೆ ಮೆಚ್ಚುಗೆಯನ್ನು ಪಡೆಯುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಹಿರಿಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ಭವಿಷ್ಯದ ಯೋಜನೆಗಳು ಬಹಳ ವ್ಯವಸ್ಥಿತ ಮತ್ತು ಬಲವಾಗಿ ಕಾಣುತ್ತವೆ. ಸಾಮಾಜಿಕ ಬೆಂಬಲವಿರುತ್ತದೆ. ಈ ಸಮಯದಲ್ಲಿ, ಉದ್ಯಮಿಗಳು ಉತ್ತಮ ಆರ್ಥಿಕ ಲಾಭಗಳನ್ನು ಸಾಧಿಸಬಹುದು. ಹೊಸ ಉದ್ಯಮಿಗಳು ಪ್ರಾರಂಭಿಸಲು ಇದು ಒಳ್ಳೆಯ ಸಮಯ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ವೃಶ್ಚಿಕ ರಾಶಿ:

ಈ ರಾಶಿಯು ಹಂಸ ಮಹಾ ಪುರುಷ ರಾಜಯೋಗದಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ರಾಜಯೋಗವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇಲ್ಲಿ, ಮಂಗಳನ ಸ್ಥಾನವು ತುಂಬಾ ಬಲವಾಗಿರುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಕೈಗೊಂಡರೂ, ನಿಮಗೆ ಅದೃಷ್ಟ ಸಿಗುತ್ತದೆ. ನೀವು ಕೆಲವು ಧಾರ್ಮಿಕ ಅಥವಾ ಶುಭ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬಹುದು. ಈ ಅವಧಿಯು ಆಧ್ಯಾತ್ಮಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಕಾರಾತ್ಮಕವಾಗಿರುತ್ತದೆ. ನೀವು ಸೃಜನಶೀಲ ಚಟುವಟಿಕೆಗಳು ಮತ್ತು ಕಲಾತ್ಮಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಈ ಸಮಯದಲ್ಲಿ ಪ್ರಯಾಣ ಅಥವಾ ಹೊಸ ಸಂಬಂಧಗಳು ಹೊಸ ಅವಕಾಶಗಳನ್ನು ತೆರೆಯುತ್ತವೆ. ನಿಮ್ಮ ವರ್ಧಿತ ಸೃಜನಶೀಲತೆಯಿಂದ ನೀವು ನಿಮ್ಮ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಸಂಕಷ್ಟದಲ್ಲಿದ್ದ ತಂಡಕ್ಕೆ ಅಜೇಯ ಶತಕದ ಮೂಲಕ ಆಸರೆಯಾದ ಕೆಎಲ್ ರಾಹುಲ್ – Kannada News | Rahul’s Unbeaten 112 Rescues India in 2nd ODI vs NZ | Rajkot Match

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೆ ಪ್ರಮುಖ ಆಟಗಾರರ ವಿಕೆಟ್ ಪತನ ಆಘಾತವನ್ನುಂಟು ಮಾಡಿತ್ತು. ಆದರೆ ಈ ಪಂದ್ಯದಲ್ಲಿ ತಂಡದ ಪರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ರಾಹುಲ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಾಹುಲ್ ತಂಡವನ್ನು 284 ರನ್​ಗಳಿಗೆ ಕೊಂಡೊಯ್ದಿದ್ದು ಮಾತ್ರವಲ್ಲದೆ ತಾವು ಕೂಡ 92 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದರು.

Source link

Exit mobile version