ಕೊನೆಗೂ ರಿಲೀಸ್ ಆಗ್ತಿದೆ ಸೂರ್ಯ ಸಿನಿಮಾ; ಈಗಾದ್ರೂ ಸಿಗುತ್ತಾ ಗೆಲುವು?

ಕೊನೆಗೂ ರಿಲೀಸ್ ಆಗ್ತಿದೆ ಸೂರ್ಯ ಸಿನಿಮಾ; ಈಗಾದ್ರೂ ಸಿಗುತ್ತಾ ಗೆಲುವು?

ತಮಿಳು ನಟ ಸೂರ್ಯ (Suriya) ಅವರು ಇತ್ತೀಚೆಗೆ ದೊಡ್ಡ ಗೆಲುವು ಕಂಡಿಲ್ಲ. ಅವರ ನಟನೆಯ ‘ಕರುಪ್ಪು’ ಚಿತ್ರ ಹಲವು ಸಮಯದಿಂದ ಮುಂದಕ್ಕೆ ಹೋಗುತ್ತಲೇ ಇತ್ತು. ಕೊನೆಗೂ ಅದಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ‘ಕರುಪ್ಪು’ ಸಿನಿಮಾ ಮೇ 15ರಂದು ತೆರೆಗೆ ಬರುತ್ತಿದೆ. ಈಗ ಹೊಸ ಪೋಸ್ಟರ್ ಹಂಚಿಕೊಂಡು ಸಿನಿಮಾ ರಿಲೀಸ್ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಇದು ಅವರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

2020ರಲ್ಲಿ ರಿಲೀಸ್ ಆದ ಸೂರ್ಯ ನಟನೆಯ ‘ಸೂರರೈ ಪೊಟ್ರು’ ಸಿನಿಮಾ ಮೆಚ್ಚುಗೆ ಪಡೆಯಿತು. ಇದಾದ ಬಳಿಕ ಅವರ ನಟನೆಯ ಯಾವ ಚಿತ್ರವೂ ಗೆದ್ದಿಲ್ಲ. ಹೀಗಾಗಿ ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇದೆ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ‘ಕರುಪ್ಪು’ ಚಿತ್ರದ ಮೂಲಕ ಅವರಿಗೆ ಗೆಲುವು ಸಿಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.ಈ ಸಿನಿಮಾ 2024ರಲ್ಲೇ ಘೋಷಣೆ ಆಗಿದೆ.

ಕಾಲಿವುಡ್​​ನಲ್ಲಿ ಸೂರ್ಯ ಅವರ ಹೈಪ್ ಕಡಿಮೆ ಆಗಿದೆ ಎಂಬ ಮಾತಿದೆ. ಈಗ ‘ಕರುಪ್ಪು’ ಸಿನಿಮಾ ಮೂಲಕ ಅವರು ಕಂಬ್ಯಾಕ್ ಮಾಡಿದರೆ ಬದಲಾವಣೆ ನಿರೀಕ್ಷಿಸಬಹುದು. ಆರ್​​ಜೆ ಬಾಲಾಜಿ ಅವರು ‘ಕರುಪ್ಪು’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪ್ರಕಾಶ್ ಬಾಬು ಹಾಗೂ ಎಸ್​​ಆರ್​ ಪ್ರಭು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ರವಿಚಂದ್ರನ್, ರಾಹುಲ್ ರಾಜ್, ಗೋಪಿ ಕೃಷ್ಣನ್ ಮೊದಲಾದವರು ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ಸಾಯಿ ಅಭಯಂಕರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ

‘ಕರುಪ್ಪು’ ಸಿನಿಮಾ ರಿಲೀಸ್ ಆದ 20 ದಿನದ ಒಳಗೆ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿ, ಸಿನಿಮಾಗೆ ಸಿಕ್ಕ ಅವಧಿ ತುಂಬಾನೇ ಕಡಿಮೆ. ಅಷ್ಟು ಸಮಯದ ಒಳಗೆ ‘ಕರುಪ್ಪು’ ಚಿತ್ರ ಹಣವನ್ನು ಬಾಚಿಕೊಳ್ಳುವ ಅಗತ್ಯವಿದೆ.
ಸೂರ್ಯ ಅವರ ಜೊತೆ ಲೋಕೇಶ್ ಕನಗರಾಜ್ ಸಿನಿಮಾ ಮಾಡಬೇಕಿತ್ತು. ಅದು ಸಾಧ್ಯವಾಗಿಲ್ಲ. ವೆಟ್ರಿಮಾರನ್ ಜೊತೆ ಕೂಡ ಸೂರ್ಯ ಚಿತ್ರ ಮಾಡಬೇಕಿತ್ತು. ಅದು ಕೂಡ ಸಾಧ್ಯವಾಗಿಲ್ಲ. ಈಗ ‘ಕರುಪ್ಪು’ ಸಿನಿಮಾ ವಿಳಂಬ ಆಗಿತ್ತು. ಕೊನೆಗೂ ಚಿತ್ರ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ಕುಂಭ ರಾಶಿಯವರಿಗೆ ಹೇಗಿರಲಿದೆ?

ಜ್ಯೋತಿಷಿ ಕೆ. ವೆಂಕಟೇಶ್ ಶರ್ಮಾ ಅವರು ಯುಗಾದಿ ಭವಿಷ್ಯ 2026 ರ ಕುರಿತು ಕುಂಭ ರಾಶಿಯವರ ಫಲಗಳನ್ನು ವಿವರಿಸಿದ್ದಾರೆ. ಕುಂಭ ರಾಶಿಯವರು ಸಾಡೇ ಸಾತಿಯ ಕೊನೆಯ ಹಂತದಲ್ಲಿದ್ದು, ಇನ್ನೂ ಸುಮಾರು ಎರಡು ವರ್ಷ ನಾಲ್ಕು ತಿಂಗಳುಗಳ ಕಾಲ ಅದರ ಪ್ರಭಾವವಿರುತ್ತದೆ. ಈ ಅವಧಿಯಲ್ಲಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿರೀಕ್ಷಿತ ಹಣಕಾಸಿನ ಲಾಭಗಳು ದೊರೆಯುವ ಸಾಧ್ಯತೆ ಇದೆ. ಕುಟುಂಬ ಮತ್ತು ಸ್ನೇಹಿತರಿಂದ ಉತ್ತಮ ಸಹಾಯ ಲಭ್ಯವಾಗಲಿದೆ. ಆರೋಗ್ಯದ ವಿಚಾರದಲ್ಲಿ ರಕ್ತ ಸಂಬಂಧಿ ಕಾಯಿಲೆಗಳು ಮತ್ತು ಅಪಘಾತಗಳ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ಚಾಕು, ರೇಷ್ಮೆ ಕೆಲಸದಂತಹ ತೀಕ್ಷ್ಣ ವಸ್ತುಗಳ ಬಳಕೆಯಲ್ಲಿ ಜಾಗರೂಕರಾಗಿರಿ.

ಅನುಕೂಲಕ್ಕಾಗಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಯೋಗವಿದೆ. ರಾಹು ದೋಷ ನಿವಾರಣೆಗೆ ಮಂಗಳವಾರದಂದು ಲಕ್ಷ್ಮೀನೃಸಿಂಹ ಆರಾಧನೆ ಮಾಡಿ. ಶನಿ ಪ್ರಭಾವದಿಂದ ವ್ಯಾಧಿ ಮತ್ತು ಶತ್ರುಭಯ ಎದುರಾಗಬಹುದಾಗಿದ್ದು, ಎಳ್ಳು ದಾನ ಮತ್ತು ಆಂಜನೇಯ ಪ್ರಾರ್ಥನೆ ಮಾಡಬೇಕು. “ಓಂ ಕ್ರಾಂ ಕ್ರೀಂ ಕ್ರೌಂ ಸಃ ಶನಿದೇವಾಯ ನಮಃ” ಅಥವಾ “ಓಂ ಪ್ರಾಂ ಪ್ರೀಂ ಪ್ರೌಂ ಸಃ ಶಂ ಶನಯೇ ನಮಃ” ಮಂತ್ರಗಳನ್ನು ಜಪಿಸುವುದು ಪರಿಹಾರ ತರುತ್ತದೆ. ಬುಧವಾರ, ಶುಕ್ರವಾರ, ಶನಿವಾರಗಳು ಶುಭದಾಯಕ. ನೀಲಿ, ಹಸಿರು, ಹಳದಿ ಶುಭ ವರ್ಣಗಳು. ಪಶ್ಚಿಮ ದಿಕ್ಕು ಮತ್ತು 4, 5, 6, 8 ಶುಭ ಸಂಖ್ಯೆಗಳಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಪುಂಡರ ಅಟ್ಟಹಾಸ ನೋಡಿ! ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಲ್ಲಿ ಬಂದು ಚೆನ್ನೈ ಎಕ್ಸ್​ಪ್ರೆಸ್ ವೇನಲ್ಲಿ ವ್ಹೀಲಿಂಗ್

ದೇವನಹಳ್ಳಿ, ಮಾರ್ಚ್​ 19: ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಿನಲ್ಲಿ ಬಂದ ಕೆಲ ಯುವಕರು ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡಿ ಅಟ್ಟಹಾಸ ಮೆರೆದ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಹೆದ್ದಾರಿಯ ಮಧ್ಯೆಯೇ ಗುಂಪು ಗುಂಪಾಗಿ ಬೈಕ್‌ಗಳನ್ನು ನಿಲ್ಲಿಸಿ ವ್ಹೀಲಿಂಗ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂಜಾನೆ ಹೊಸಕೋಟೆ ಸಮೀಪದ ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಈ ಘಟನೆ ನಡೆದಿದ್ದು, ವಾಹನಗಳ ಸಂಚಾರ ಮಧ್ಯೆಯೇ ಒಂದೇ ರಸ್ತೆಯಲ್ಲಿ ಎರಡೂ ಕಡೆಯಿಂದ ವ್ಹೀಲಿಂಗ್ ನಡೆಸಲಾಗಿದೆ. ಕೆಲವರು ಆಟೋ, ಆರ್‌ಎಕ್ಸ್ ಮತ್ತು ಡಿಯೋ ಬೈಕ್‌ಗಳಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಹೊಸಕೋಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿದ ವೇಳೆ, ಕೆಲವರು ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು 7 ಬೈಕ್‌ಗಳು, 2 ಕಾರುಗಳನ್ನು ವಶಕ್ಕೆ ಪಡೆದು, ಐದು ಮಂದಿಯನ್ನು ಬಂಧಿಸಿದ್ದಾರೆ.

ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಪುಂಡರು ಚಿತ್ರೀಕರಿಸಿದ ವಿಡಿಯೋಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೌದೆ ಒಲೆಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಹೋಳಿಗೆ! ಮಲ್ಲೇಶ್ವರಂನಲ್ಲಿ ಕಿಲೋಮೀಟರ್ ಉದ್ದದ ಕ್ಯೂ

ಬೆಂಗಳೂರು, ಮಾ.19: ಯುಗಾದಿ ಹಬ್ಬದ ಸಂಭ್ರಮದ ನಡುವೆಯೂ ಬೆಂಗಳೂರಿನಲ್ಲಿ ಸಿಲಿಂಡರ್ ಕೊರತೆಯು ಹೋಟೆಲ್ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ಈ ವರ್ಷ, ಅನೇಕ ಹೋಟೆಲ್‌ಗಳು ಸಾಂಪ್ರದಾಯಿಕ ಸೌದೆ ಒಲೆಗಳ ಮೇಲೆ ಅಡುಗೆ ಮಾಡಲು ಮೊರೆ ಹೋಗಿವೆ. ಇದರ ಮಧ್ಯೆಯೂ ಯುಗಾದಿಯ ಪ್ರಮುಖ ಸಿಹಿ ತಿಂಡಿ ಹೋಳಿಗೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಹೋಳಿಗೆ ಮನೆ ಮುಂದೆ ಹೋಳಿಗೆ ಖರೀದಿಸಲು ನೂರಾರು ಜನರು ಮುಗಿಬಿದ್ದಿರುವುದು ಕಂಡುಬಂದಿದೆ. ಸುಮಾರು 100 ಮೀಟರ್‌ಗೂ ಅಧಿಕ ಉದ್ದದ ಸರತಿ ಸಾಲು ಹೋಟೆಲ್‌ನಿಂದ ರಸ್ತೆಯುದ್ದಕ್ಕೂ ವಿಸ್ತರಿಸಿದೆ. ಸಿಲಿಂಡರ್ ಇಲ್ಲದ ಕಾರಣ ಹೋಳಿಗೆ ಮನೆ ಮಾಲೀಕರು ಸೌದೆ ಒಲೆಯಲ್ಲಿ ಹೋಳಿಗೆ ತಯಾರಿಸುತ್ತಿದ್ದು, ಗ್ರಾಹಕರಿಗೆ ವಿತರಿಸುತ್ತಿದ್ದಾರೆ. ಪ್ರತಿ ವರ್ಷ 7 ರಿಂದ 8 ಸಾವಿರಕ್ಕೂ ಹೆಚ್ಚು ಹೋಳಿಗೆಗಳು ಮಾರಾಟವಾಗುತ್ತಿದ್ದವು. ಆದರೆ ಈ ವರ್ಷ ಸಿಲಿಂಡರ್ ಕೊರತೆಯಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ಆದಾಗ್ಯೂ, ಗ್ರಾಹಕರನ್ನು ಕಳೆದುಕೊಳ್ಳಲು ಇಚ್ಛಿಸದ ಮಾಲೀಕರು ಎಲ್ಲಾ ಅಡೆತಡೆಗಳ ನಡುವೆಯೂ ಹೋಳಿಗೆ ನೀಡಲು ಶ್ರಮಿಸುತ್ತಿದ್ದಾರೆ. “ಎಷ್ಟೇ ಸಮಸ್ಯೆಗಳಿದ್ದರೂ ಯುಗಾದಿ ಹಬ್ಬವನ್ನು ಹೋಳಿಗೆಯೊಂದಿಗೆ ಆಚರಿಸಬೇಕು” ಎಂಬುದು ಗ್ರಾಹಕರ ಮಾತಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

LPG ಸಿಲಿಂಡರ್​​ಗಳ ಕೊರತೆ: ಪ್ರಧಾನಿ ನರೇಂದ್ರ ಮೋದಿಗೆ ಬೆಂಗಳೂರು ಹೋಟೆಲ್​​ ಅಸೋಸಿಯೇಷನ್​​ ಪತ್ರ

ಬೆಂಗಳೂರು, ಮಾರ್ಚ್​​ 19: ರಾಜ್ಯದಲ್ಲಿ ಕಮರ್ಷಿಯಲ್​​ ಸಿಲಿಂಡರ್​​ಗಳ ಅಭಾವದಿಂದಾಗಿ ಹೋಟೆಲ್​​ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ರೆಸ್ಟೋರೆಂಟ್​​ಗಳು ಈಗಾಗಲೇ ಬಂದ್​​ ಆಗಿವೆ. ಪರಿಣಾಮ ಅದನ್ನೇ ನಂಬಿಕೊಂಡಿದ್ದ ಲಕ್ಷಾಂತರ ಕಾರ್ಮಿಕರು ಮತ್ತು ಕುಟುಂಬ ಬೀದಿಗೆ ಬಿದ್ದಿದೆ. ಹೀಗಾಗಿ ಸಿಲಿಂಡರ್​​ಗಳ ಪೂರೈಕೆಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅದಾಗಲೇ ಹೈಕೋರ್ಟ್​​ಗೆ ರಿಟ್​​ ಅರ್ಜಿ ಸಲ್ಲಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಅಸೋಸಿಯೇಷನ್ ಪತ್ರ ಬರೆದಿದ್ದು, ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತದಿಂದ ಉದ್ಭವಿಸಿರುವ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ  ಮತ್ತು ಭೇಟಿಗೆ ಸಮಯ ನೀಡುವಂತೆ ಪತ್ರದಲ್ಲಿ ಆಗ್ರಹಿಸಲಾಗಿದೆ.

ಪ್ರಧಾನಿ ಮೋದಿಗೆ ಬರೆದಿರುವ ಪತ್ರದ ಸಾರಾಂಶ

ಬೆಂಗಳೂರು ನಗರದಲ್ಲೇ 40,000ಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ನಾವು ಅಗತ್ಯ ಸೇವೆಗಳ ವಿಭಾಗಕ್ಕೆ ಸೇರಿದ್ದು, ಪ್ರಸ್ತುತ ವಾಣಿಜ್ಯ LPG ಸಿಲಿಂಡರ್‌ಗಳ ಕೊರತೆ ಮತ್ತು ಸರಬರಾಜಿನ ವ್ಯತ್ಯಯದಿಂದ ನಾವು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಈ ತುರ್ತು ಪರಿಸ್ಥಿತಿಯಲ್ಲಿ, ದಯವಿಟ್ಟು ಪೆಟ್ರೋಲಿಯಂ ಸಚಿವರಿಗೆ ಸೂಚನೆ ನೀಡಿ ನಮ್ಮ ದೈನಂದಿನ LPG ಅಗತ್ಯದ ಕನಿಷ್ಠ ಶೇ.50ರಷ್ಟು ಸರಬರಾಜು ಮಾಡಲು ಸಹಕರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ ಹೋಟೆಲ್‌ಗಳು ಮತ್ತು ಉಪಾಹಾರ ಮಂದಿರಗಳು ಸಾಮಾನ್ಯ ಜನರಿಗೆ ಪ್ರತಿದಿನದ ಆಹಾರವನ್ನು ಒದಗಿಸುತ್ತವೆ. ಇದರಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರು, ಆನ್‌ಲೈನ್ ಡೆಲಿವರಿ ಕೆಲಸಗಾರರು, ನಿರ್ಮಾಣ ಕಾರ್ಮಿಕರು, ಆಸ್ಪತ್ರೆಯ ರೋಗಿಗಳು, ಬ್ಯಾಚುಲರ್‌ಗಳು, ಹಿರಿಯ ನಾಗರಿಕರು ಮತ್ತು ಪಿಜಿ ವಸತಿಯಲ್ಲಿ ವಾಸಿಸುವವರು ಸೇರಿದ್ದಾರೆ ಎಂಬ ಅಂಶವನ್ನು ಪ್ರಧಾನಿಯವರ ಗಮನಕ್ಕೆ ತರಲಾಗಿದೆ.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್; ರಿಟ್​​ ಅರ್ಜಿ ಸಲ್ಲಿಕೆ

ವಾಣಿಜ್ಯ LPG ಸರಬರಾಜು ಸಂಪೂರ್ಣವಾಗಿ ನಿಂತಿರುವುದು ಸುಮಾರು 40,000 ಸ್ವಯಂ ಉದ್ಯೋಗ ಹೊಂದಿರುವ ಹೋಟೆಲ್ ಮಾಲೀಕರಿಗೂ ಮತ್ತು ಈ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಭಾರೀ ಹೊಡೆತವಾಗಿದೆ. ಇದಲ್ಲದೆ, ನಮ್ಮ ಅಡುಗೆಮನೆಗಳಲ್ಲಿ ಬಳಕೆಯಾಗುವ ಹಾಲು, ಹಣ್ಣುಗಳು ಮತ್ತು ತರಕಾರಿಗಳಂತಹ ಕೃಷಿ ಉತ್ಪನ್ನಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಜೊತೆಗೆ, ನಾವು ಪ್ರತಿದಿನ ಸಾಮಾನ್ಯ ಜನರಿಗೆ ಉಚಿತ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನೂ ಒದಗಿಸುತ್ತೇವೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ, ಪ್ರಸ್ತುತ ವಾಣಿಜ್ಯ LPG ಸಮಸ್ಯೆಗಳು ಮತ್ತು ನಮ್ಮ ಆತಂಕಗಳ ಬಗ್ಗೆ ಚರ್ಚಿಸಲು ನಿಮ್ಮೊಂದಿಗೆ ಭೇಟಿಗೆ ಅವಕಾಶ ನೀಡುವಂತೆ ಕೋರುವುದಾಗಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ವರದಿ: ನಟರಾಜ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಪಂಚ್ ಕೋತಿಗೆ ಸಿಕ್ಳು ಹೊಸ ಗರ್ಲ್ಫ್ರೆಂಡ್, ಗೊಂಬೆ ಜತೆ ಇರೋಕೆ ಬಿಡ್ತಿಲ್ಲ ಆಕೆ

ಜಪಾನ್, ಮಾರ್ಚ್​ 19: ತಮ್ಮ ತಾಯಿಯಿಂದ ತಿರಸ್ಕರಿಸಲ್ಪಟ್ಟು ಜಪಾನ್ ಮೃಗಾಲಯದಲ್ಲಿ ಒಬ್ಬಂಟಿಯಾಗಿದ್ದ ಪಂಚ್ ಕೋತಿಗೆ ಅಂತೂ ಗರ್ಲ್​ಫ್ರೆಂಡ್ ಸಿಕ್ಕಿದ್ದಾಳೆ. ಆಕೆ ಪಂಚ್ ಕೋತಿಗೆ ಅದರ ಪ್ರೀತಿಯ ಗೊಂಬೆಯ ಜತೆ ಇರಲು ಆಕೆ ಬಿಡುತ್ತಿಲ್ಲ. ಪ್ರತಿ ಐದು ಹತ್ತು ನಿಮಷಕ್ಕೊಮ್ಮೆ ಬಂದು ಪಂಚ್ ಕೋತಿಯನ್ನು ಪ್ರೀತಿಯಿಂದ ಹಗ್ ಮಾಡುತ್ತಾಳೆ, ಇಬ್ಬರೂ ಜತೆಯಾಗಿ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಇಷ್ಟು ದಿನ ಒಂಟಿಯಾಗಿ ಬೇರೆ ಕೋತಿಗಳಿಂದ ಹಲ್ಲೆಗೆ ಒಳಗಾಗಿದ್ದ ಪಂಚ್ ಕೋತಿ ಈಗ ಸ್ನೇಹಿತೆ ಜತೆ ಖುಷಿಯಾಗಿ ಕಾಲ ಕಳೆಯುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಹರಿತವಾದ ಆಯುಧಗಳೊಂದಿಗೆ ಬಂದು ಪೊಲೀಸರನ್ನೇ ಹೆದರಿಸಿ ಓಡಿಸಿದ ಗೂಂಡಾಗಳು, ಆಮೇಲೆ ನಡೆದಿದ್ದೇ ಬೇರೆ

ಪಠಾಣ್, ಮಾರ್ಚ್​ 19: ಹರಿತವಾದ ಆಯುಧಗಳ ಜತೆ ಬಂದಿದ್ದ 18 ಮಂದಿ ದುಷ್ಕರ್ಮಿಗಳು ಪೊಲೀಸರನ್ನೇ ಹೆಸರಿಸಿ ಓಡಿಸಿರುವ ಆತಂಕಕಾರಿ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಮಾರ್ಚ್​ 15ರಂದು ರಾತ್ರಿ ಈ ಘಟನೆ ನಡೆದಿದೆ. ಗುಂಪೊಂದು ಕತ್ತಿ, ಮಚ್ಚಿನ ಜತೆ ಹಳ್ಳಿಯಲ್ಲಿರುವ ತೋಟದ ಮನೆಗೆ ನುಗ್ಗಿತ್ತು. ಎರಡು ಪೊಲೀಸ್ ವ್ಯಾನ್​ಗಳು ಸ್ಥಳದಲ್ಲಿ ನಿಂತು ಅಲ್ಲಿಂದ ಹೊರಟುಹೊದವು, ನಂತರ ನಡೆದಿದ್ದು ಹಿಂಸಾಚಾರ.

ಕೆಲವು ದಿನಗಳ ನಂತರ ಅದೇ ಗುಂಪಿನಲ್ಲಿರುವ ಜನರನ್ನು ಬೀದಿಗೆ ಎಳೆದುಕೊಂಡು ಹೋಗಿ ಲಾಠಿ ಏಟು ಕೊಟ್ಟು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು. ಚನಸ್ಮಾ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎಂಟು ವಾಹನಗಳಲ್ಲಿ 15 ರಿಂದ 20 ಜನರು ಬಂದು ಭವೇಶ್ ದೇಸಾಯಿ ಅವರ ತೋಟದ ಮನೆಯನ್ನು ಗುರಿಯಾಗಿಸಿಕೊಂಡಿದ್ದರು. ಗೇಟ್‌ಗಳನ್ನು ಬೀಳಿಸಿ, ಅಲ್ಲಿರುವ ವಸ್ತುಗಳೆಲ್ಲವನ್ನೂ ಧ್ವಂಸಗೊಳಿಸಿ, ಕೊಲೆ ಬೆದರಿಕೆ ಹಾಕಿದ್ದರು.ಜಿತುಭಾ, ಜಹುಭಾ, ದಲ್ಪುಜಿ ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ದೇವಾಲಯದ ದೇಣಿಗೆ ಸಂಬಂಧಿಸಿದ ವಿವಾದವೇ ಹಿಂಸಾಚಾರದ ಮೂಲವಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸರ್ಸೆ ನಿನ್ನ ಸೆರಗ ಸರ್ಸೆ’ ವಿವಾದ ಬಳಿಕ ಇನ್​​ಸ್ಟಾದಿಂದ ಮಾಯವಾದ ಐಶ್ವರ್ಯಾ ರಂಗರಾಜನ್

‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ರಿಲೀಸ್ ಆಗಿ ವಿವಾದ ಸೃಷ್ಟಿ ಮಾಡಿತು. ಈ ಹಾಡಿನ ಸಾಲುಗಳು ಚರ್ಚೆಯನ್ನು ಹುಟ್ಟುಹಾಕಿದವು. ಇದರಿಂದ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್, ಹಾಡಲ್ಲಿ ಡ್ಯಾನ್ಸ್ ಮಾಡಿದ ನೋರಾ ಫತೇಹಿ ಅವರನ್ನು ಟೀಕೆ ಮಾಡಲಾಗುತ್ತಿದೆ. ಈ ಘಟನೆ ಬಳಿಕ ಹಾಡಿನ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ಸೋಶಿಯಲ್ ಮೀಡಿಯಾದಿಂದ ಮಾಯವಾಗಿದ್ದಾರೆ.

‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಶನಿವಾರ (ಮಾರ್ಚ್ 14) ರಿಲೀಸ್ ಆಯಿತು. ಹಾಡು ಬಿಡುಗಡೆ ಆದ ಕೆಲವೇ ದಿನಕ್ಕೆ ವಿವಾದದ ಹೊಗೆ ಕಾಣಿಸಿಕೊಂಡಿತು. ಕನ್ನಡದಿಂದ ಹಿಡಿದು ಬಾಲಿವುಡ್​​ವರೆಗೆ ಈ ಚಿತ್ರದ ಹಾಡನ್ನು ಟೀಕಿಸಿದರು. ಸಾಹಿತ್ಯ ಅಶ್ಲೀಲವಾಗಿದೆ ಎಂದು ಟೀಕಿಸಲಾಯಿತು. ಈಗ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ಯೂಟ್ಯೂಬ್​​ನಿಂದ ತೆಗೆಯಲಾಗಿದೆ.

‘ಸರ್ಸೆ’ ಹಾಡಿಗೆ ಕನ್ನಡದಲ್ಲಿ ಸಾಂಗ್ ಬರೆದಿದ್ದು ಜೋಗಿ ಪ್ರೇಮ್ ಅವರು. ಈ ಹಾಡನ್ನು ಹಾಡಿದ್ದು ಐಶ್ವರ್ಯಾ ಅವರು. ಈ ಕಾರಣಕ್ಕೆ ಅವರ ಇನ್​​ಸ್ಟಾ ಖಾತೆಗೆ ಸಾಕಷ್ಟು ಸಂದೇಶ ಹಾಗೂ ಕಮೆಂಟ್​​ಗಳು ಬಂದಿರಬಹುದು. ಈ ಕಾರಣದಿಂದ ಇನ್​​ಸ್ಟಾಗ್ರಾಮ್​​ನಿಂದ ದೂರ ಉಳಿದರೇ ಎನ್ನುವ ಪ್ರಶ್ನೆ ಮೂಡಿದೆ. ವಿವಾದ ತಣ್ಣಗಾದ ಬಳಿಕ ಅವರು ಕಂಬ್ಯಾಕ್ ಮಾಡಬಹುದು ಎಂಬ ನಿರೀಕ್ಷೆ ಇದೆ.

ಇನ್​​ಸ್ಟಾಗ್ರಾಮ್ ಖಾತೆಯನ್ನು ಡಿ ಆ್ಯಕ್ಟಿವೇಟ್ ಮಾಡಲು ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಈಗ ಹಾಡಿನ ವಿವಾದ ಸಂದರ್ಭದಲ್ಲೇ ಅವರು ಡಿ ಆ್ಯಕ್ಟಿವೇಟ್ ಮಾಡಿರುವುದರಿಂದ ಸಾಕಷ್ಟು ಚರ್ಚೆ ಆಗಿದೆ. ಇದು ಕಾಕತಾಳೀಯ ಕೂಡ ಇರಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ‘ಸರ್ಸೆ ಸೆರಗು’ ಹಾಡು ವಿವಾದ: ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ಪ್ರೇಮ್

‘ಸರ್ಸೆ ನಿನ್ನ ಸೆರಗ ಸರ್ಸೆ’ ಸಾಂಗ್​​​ನ ಲಿರಿಕ್ಸ್​​ನ ಸಂಪೂರ್ಣವಾಗಿ ಬದಲಿಸಿ ಹೊಸ ಹಾಡಿನ ಮೂಲಕ ಬರೋದಾಗಿ ಜೋಗಿ ಪ್ರೇಮ್ ಹೇಳಿದ್ದಾರೆ. ಸಿನಿಮಾ ರಿಲೀಸ್​​ಗೆ ಕೆಲವೇ ವಾರಗಳು ಬಾಕಿ ಇರುವಾಗ ವಿವಾದ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಜೂನ್‌ನಿಂದ ಈ ರಾಶಿಗೆ ರಾಜಯೋಗ ಆರಂಭ

ಮಕರ ರಾಶಿಯವರಿಗೆ ಯುಗಾದಿ 2026 ಶುಭಕರವಾಗಿದ್ದು, ಕಳೆದ ಎಂಟು ವರ್ಷಗಳಿಂದ ಅನುಭವಿಸಿದ ತೊಂದರೆಗಳಿಗೆ ಪರಿಹಾರ ದೊರೆಯಲಿದೆ. ಜೂನ್‌ನಿಂದ ಮಕರ ರಾಶಿಯವರಿಗೆ ರಾಜಯೋಗ ಆರಂಭವಾಗಲಿದೆ ಎಂದು ಜ್ಯೋತಿಷಿ ಕೆ ವೆಂಕಟೇಶ್ ಶರ್ಮಾ ಭವಿಷ್ಯ ನುಡಿದಿದ್ದಾರೆ. ವ್ಯಾಪಾರದಲ್ಲಿ ನಿಧಾನಗತಿಯ ಬೆಳವಣಿಗೆ ಕಂಡುಬರಲಿದ್ದು, ಹಣಕಾಸು ಉಳಿತಾಯ ಉತ್ತಮವಾಗಲಿದೆ. ಕುಟುಂಬದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಆರೋಗ್ಯದ ವಿಚಾರದಲ್ಲಿ ಸಂಧಿ ನೋವುಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಜೂನ್ ಎರಡರಂದು ಗುರು ಉಚ್ಚ ಸ್ಥಾನಕ್ಕೆ ಬರುವುದರಿಂದ ಹಣಕಾಸು, ಮದುವೆ ಆಗದವರಿಗೆ, ವಿದ್ಯಾರ್ಥಿಗಳಿಗೆ, ಹೊಸ ಕೆಲಸ ಹುಡುಕುವವರಿಗೆ ಇದು ಉತ್ತಮ ಸಮಯವಾಗಿದೆ.

ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಕೆಲವು ಸವಾಲುಗಳೂ ಇವೆ. ರಾಹುವಿನಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು, ಇದಕ್ಕೆ ಸುಬ್ರಹ್ಮಣ್ಯೇಶ್ವರ ಮತ್ತು ಲಕ್ಷ್ಮೀನರಸಿಂಹನ ಆರಾಧನೆ ಸೂಚಿಸಲಾಗಿದೆ. ಕೇತುವಿನಿಂದ ಮೃತ್ಯುಭಯ ಇರಬಹುದು, ಗಣಪತಿಯ ಆರಾಧನೆ ಮಾಡುವುದು ಉತ್ತಮ. ಶನಿ ಸ್ತೋತ್ರ ಪಠಿಸುವುದು, ಕಪ್ಪು ಬಟ್ಟೆಯಲ್ಲಿ ಉಪ್ಪು, ಬೆಲ್ಲ, ಒಣಮೆಣಸಿನಕಾಯಿ ಕಟ್ಟಿ ಮೂರು ಸುತ್ತು ತಿರುಗಿಸಿ ನದಿ ಅಥವಾ ನೀರಿನಲ್ಲಿ ಬಿಡುವುದರಿಂದ ದೃಷ್ಟಿ ದೋಷಗಳು ನಿವಾರಣೆಯಾಗಿ ಉತ್ತಮ ಫಲ ಸಿಗಲಿದೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

Video: ಲಿಫ್ಟ್​ನಲ್ಲಿ ಕ್ಲೋಸ್ ಬಟನ್ ಒತ್ತಿ, ಏನೋ ಮರೆತೆ ಎಂದು ಆಚೆ ಹೋದ ತಾಯಿ, ಲಿಫ್ಟ್​ ಒಳಗೆ ಸಿಲುಕಿದ ಬಾಲಕಿ

ತಾಯಿ ಮಗಳಿಬ್ಬರು ಲಿಫ್ಟ್​ ಒಳಗೆ ಪ್ರವೇಶಿಸಿದ್ದಾರೆ, ಕ್ಲೋಸ್ ಬಟನ್ ಒತ್ತಿದ್ದಾರೆ, ಆ ಸಮಯಕ್ಕೆ ಸರಿಯಾಗಿ ಮಹಿಳೆ ಏನೋ ಮರೆತು ಹೋಗಿದ್ದೀನೆಂದು  ಲಿಪ್ಟ್​​ನಿಂದ ಆಚೆ ಹೋಗಿದ್ದಾಳೆ. ಆ ಬಾಲಕಿ ಲಿಫ್ಟ್​ ಒಳಗೆ ಇರುವ ಸಮಯದಲ್ಲಿ ಬಾಗಿಲು ಮುಚ್ಚಿದೆ. ಆಗ ಬಾಲಕಿ ಗಾಬರಿಗೊಂಡು ಅಳುವುದರ ಜತೆಗೆ ಲಿಫ್ಟ್​ ಬಟನ್ ಪ್ರೆಸ್ ಮಾಡುತ್ತಿತ್ತು. ಒಮ್ಮೆ ಲಿಫ್ಟ್​ ಬಾಗಿಲು ತೆರೆಯಿತು ಆದರೆ ಅದು ತನ್ನ ಫ್ಲೋರ್ ಅಲ್ಲ ಎಂಬ ಅರಿವು ಮಗುವಿಗಿದ್ದ ಕಾರಣ ಅದು ಹೊರಗೆ ಹೋಗಲಿಲ್ಲ, ಅಂತಿಮವಾಗಿ ತಾಯಿ ಇದ್ದ ಫ್ಲೋರ್​​ಗೆ ಲಿಫ್ಟ್​ ಬಂದು ಬಾಗಿಲು ತೆರೆದಾಗ ಆ ಬಾಲಕಿಗೆ ಆದ ಖುಷಿ ಅಷ್ಟಿಷ್ಟಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version