Kashi Yatra: ಕಾಶಿಯಲ್ಲಿ 9 ರಾತ್ರಿಗಳು ಕಳೆದರೆ ಮೋಕ್ಷ ಸಿಗುತ್ತಾ? ಇದರ ಹಿಂದಿರುವ ಆಚರಣೆಗಳೇನು? – Kannada News | Kashi Yatra for Moksha: Spiritual Significance of 9 Nights in Varanasi

ಕಾಶಿಯಲ್ಲಿ 9 ರಾತ್ರಿಗಳು ಕಳೆದರೆ ಮೋಕ್ಷ ಸಿಗುತ್ತಾ? Image Credit source: Pinterest

ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ಭಕ್ತನ ಜೀವಿತಾವಧಿಯ ಅಂತಿಮ ಆಧ್ಯಾತ್ಮಿಕ ಗುರಿ ಎಂದರೆ ಅದು ‘ಕಾಶಿ ವಿಶ್ವನಾಥನ’ ದರ್ಶನ ಪಡೆಯುವುದು. ಪವಿತ್ರ ನಗರಿ ಕಾಶಿಗೆ ಭೇಟಿ ನೀಡಿ ಭಗವಂತನ ಪಾದಕ್ಕೆ ಶರಣಾದರೆ ಜನ್ಮ ಜನ್ಮಾಂತರಗಳ ಪಾಪಗಳು ಕರಗಿ, ಮೋಕ್ಷ ಸಿಗುತ್ತದೆ ಎಂಬುದು ಶತಶತಮಾನಗಳ ನಂಬಿಕೆ. ಅದಕ್ಕಾಗಿಯೇ ಕಾಶಿಯಲ್ಲಿ ಕಳೆಯುವ ಪ್ರತಿ ಕ್ಷಣವೂ ಅತ್ಯಂತ ಪವಿತ್ರ. ಅದರಲ್ಲೂ ವಿಶೇಷವಾಗಿ, ಶಾಸ್ತ್ರ ಸಂಪ್ರದಾಯಗಳ ಪ್ರಕಾರ “ಕಾಶಿಯಲ್ಲಿ 9 ರಾತ್ರಿಗಳ ಕಾಲ ತಂಗುವುದು” ಮನುಷ್ಯನನ್ನು ನೇರವಾಗಿ ಮೋಕ್ಷಕ್ಕೆ ಹತ್ತಿರ ಮಾಡುತ್ತದೆ ಎಂದು ಹೇಳಲಾಗುತ್ತದೆ. ಏನಿದು 9 ರಾತ್ರಿಗಳ ನಂಬಿಕೆ? ಇದರ ಹಿಂದಿರುವ ಆಚರಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಾಶಿಯಲ್ಲಿ 9 ರಾತ್ರಿಗಳ ನಂಬಿಕೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯ:

ಮನುಷ್ಯನು ಈ ಭೂಮಿಯ ಮೇಲೆ ಜನ್ಮ ತಳೆಯುವ ಮುನ್ನ ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳುಗಳ ಕಾಲ ಕಳೆಯುತ್ತಾನೆ. ಅದೇ ರೀತಿ, ಕಾಶಿಯು ಜನ್ಮ-ಮರಣಗಳ ಚಕ್ರದಿಂದ ಮುಕ್ತಿ ನೀಡಿ, ಆತ್ಮವನ್ನು ಪರಮಾತ್ಮನಲ್ಲಿ ಲೀನವಾಗಿಸುವ ಜನ್ಮರಹಿತ ಸ್ಥಿತಿಯ ಪವಿತ್ರ ಮಾರ್ಗವಾಗಿದೆ. ಪುರಾಣಗಳ ಪ್ರಕಾರ, ವ್ಯಾಸ ಮಹರ್ಷಿಗಳು ಹಿಂದೆ ಕಾಶಿಯಲ್ಲಿ ಒಂಬತ್ತು ತಿಂಗಳುಗಳ ಕಾಲ ಕಠಿಣ ಸಾಧನೆ ಮಾಡಲು ಸೂಚಿಸಿದ್ದರು. ಆದರೆ, ಕಲಿಯುಗದ ಮಾನವನಿಗೆ ಅಷ್ಟು ದೀರ್ಘಾವಧಿ ಸಾಧ್ಯವಾಗದ ಕಾರಣ, ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳು ಅದನ್ನು ‘ಒಂಬತ್ತು ರಾತ್ರಿಗಳಿಗೆ’ ಸೀಮಿತಗೊಳಿಸಿದವು. ಈ 9 ರಾತ್ರಿಗಳ ಸಾಧನೆಯು ತಾಯಿಯ ಒಂಬತ್ತು ತಿಂಗಳ ಗರ್ಭವಾಸದಷ್ಟೇ ಪವಿತ್ರವಾದದ್ದು ಎಂದು ನಂಬಲಾಗಿದೆ.

ಕಾಶಿ ವಾಸದ ಪ್ರಮುಖ ನಿಯಮಗಳು:

ಕಾಶಿಯಲ್ಲಿ ತಂಗುವ 9 ದಿನಗಳ ಅವಧಿಯಲ್ಲಿ ಭಕ್ತರು ಕಟ್ಟುನಿಟ್ಟಾದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ:

  • ನಿರಂತರ ಶಿವಸ್ಮರಣೆ: ಸದಾ ಕಾಲ ಕಾಶಿ ವಿಶ್ವನಾಥನ ಧ್ಯಾನದಲ್ಲಿ ತೊಡಗಿರಬೇಕು.
  • ದಿನಕ್ಕೆ ಒಂದೇ ಊಟ: ಇಂದ್ರಿಯ ನಿಗ್ರಹಕ್ಕಾಗಿ ದಿನದಲ್ಲಿ ಕೇವಲ ಒಂದು ಬಾರಿ ಮಾತ್ರ ಸಾತ್ವಿಕ ಆಹಾರ ಸೇವಿಸಬೇಕು.
  • ತ್ರಿಕಾಲ ಸ್ನಾನ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಬೇಕು.
  • ದಾನ ಧರ್ಮ: ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದು ಮತ್ತು ಬಡವರಿಗೆ, ಸಾಧುಗಳಿಗೆ ದಾನ ಮಾಡುವುದು ಕಡ್ಡಾಯ.
  • ದುರ್ಗುಣಗಳ ತ್ಯಾಗ: ಕೋಪ, ಅಹಂಕಾರ ಮತ್ತು ಸುಳ್ಳು ಹೇಳುವಂತಹ ನಕಾರಾತ್ಮಕ ಗುಣಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.

9 ದಿನಗಳ ಕಾಶಿ ಮಹಾಯಾತ್ರೆಯ ದೈನಂದಿನ ವಿಧಿವಿಧಾನಗಳು:

ಮೊದಲ ದಿನ: ಸಂಕಲ್ಪ ಮತ್ತು ಶುದ್ಧೀಕರಣ

ಯಾತ್ರೆಯು ಪವಿತ್ರ ‘ಮಣಿಕರ್ಣಿಕಾ ಘಾಟ್‌’ನಲ್ಲಿ ಗಂಗಾ ಸ್ನಾನದೊಂದಿಗೆ ಆರಂಭವಾಗುತ್ತದೆ. ಇಲ್ಲಿ ಪೂರ್ವಜರಿಗೆ ತರ್ಪಣ ಮತ್ತು ನೈವೇದ್ಯಗಳನ್ನು ಅರ್ಪಿಸಿ ಆತ್ಮಶುದ್ಧಿ ಮಾಡಿಕೊಳ್ಳಲಾಗುತ್ತದೆ. ಬಳಿಕ ದುಂಡಿ ವಿನಾಯಕ, ವಿಶಾಲಾಕ್ಷಿ ದೇವಿ ಮತ್ತು ಸಾಕ್ಷಿ ಗಣಪತಿಯ ದರ್ಶನ ಪಡೆದು, ರಾತ್ರಿ ಉಪವಾಸದೊಂದಿಗೆ ಶಿವನಾಮ ಸ್ಮರಣೆ ಮಾಡಲಾಗುತ್ತದೆ.

ಎರಡನೇ ದಿನ: ಅನ್ನಪೂರ್ಣೇಶ್ವರಿ ದರ್ಶನ

ಗಂಗಾ ಸ್ನಾನದ ನಂತರ ವಿಶ್ವನಾಥ ಹಾಗೂ ಕಾಶಿಯ ಅನ್ನದಾತೆಯಾದ ಅನ್ನಪೂರ್ಣ ದೇವಿಯ ದರ್ಶನ ಪಡೆಯಲಾಗುತ್ತದೆ. ಈ ದಿನ ಗಾಯತ್ರಿ ಮಂತ್ರ ಹಾಗೂ ಶಿವ ಪಂಚಾಕ್ಷರಿ ಮಂತ್ರಗಳ ಜಪಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

ಮೂರನೇ ದಿನ: ಘಾಟ್‌ಗಳ ಪ್ರದಕ್ಷಿಣೆ

ಕಾಶಿಯ ಪ್ರಸಿದ್ಧ ಘಾಟ್‌ಗಳಾದ ಅಸಿ ಘಾಟ್, ದಶಾಶ್ವಮೇಧ ಘಾಟ್ ಮತ್ತು ವರುಣಾ ನದಿಯ ದಂಡೆಯ ದೇವಾಲಯಗಳಿಗೆ ಭೇಟಿ ನೀಡಿ ಶಿವಲಿಂಗಗಳ ಪೂಜೆ ಮಾಡಲಾಗುತ್ತದೆ. ಇದು ಕಾಶಿಯ ಪವಿತ್ರ ಕ್ಷೇತ್ರವನ್ನು ಪ್ರದಕ್ಷಿಣೆ ಮಾಡಿದ ಪುಣ್ಯವನ್ನು ನೀಡುತ್ತದೆ.

ನಾಲ್ಕನೇ ದಿನ: ಕಾಲಭೈರವನ ರಕ್ಷಣೆ

ವಿಶ್ವನಾಥ ಮತ್ತು ದುಂಡಿ ವಿನಾಯಕನ ಜೊತೆಗೆ ಕಾಶಿಯ ಕೋತ್ವಾಲ (ರಕ್ಷಕ) ಎಂದೇ ಕರೆಯಲ್ಪಡುವ ಕಾಲಭೈರವನ ದರ್ಶನ ಪಡೆಯುವುದು ಈ ದಿನದ ವಿಶೇಷ. ಕಾಲಭೈರವನ ದರ್ಶನದಿಂದ ತೀರ್ಥಯಾತ್ರೆಗೆ ಯಾವುದೇ ವಿಘ್ನ ಬರದಂತೆ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿದೆ.

ಐದನೇ ದಿನ: ಕಠಿಣ ‘ಪಂಚಕ್ರೋಶ ಯಾತ್ರೆ’ಯ ಆರಂಭ

ಇಂದಿನಿಂದ ಕಾಶಿಯ ಅತ್ಯಂತ ಪವಿತ್ರವಾದ ಸುಮಾರು 80 ಕಿಲೋಮೀಟರ್‌ಗಳ ‘ಪಂಚಕ್ರೋಶ ಯಾತ್ರೆ’ ಆರಂಭವಾಗುತ್ತದೆ. ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು, ದಾರಿಯುದ್ದಕ್ಕೂ ಸಿಗುವ ಶಿವಲಿಂಗಗಳನ್ನು ದರ್ಶಿಸುತ್ತಾ, ನಿಗದಿಪಡಿಸಿದ ಗ್ರಾಮಗಳಲ್ಲಿ ರಾತ್ರಿ ತಂಗುತ್ತಾರೆ.

ಆರನೇ ದಿನ: ಮೌನ ವ್ರತ

ಪಂಚಕ್ರೋಶ ಯಾತ್ರೆ ಮುಂದುವರಿಯಲಿದ್ದು, ಭಕ್ತರು ದಾರಿಯ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಮನಸ್ಸನ್ನು ಭಗವಂತನ ಕಡೆಗೆ ಕೇಂದ್ರೀಕರಿಸಲು ಈ ದಿನದ ಪ್ರಯಾಣವನ್ನು ಸಂಪೂರ್ಣ ‘ಮೌನ’ವಾಗಿ ಕಳೆಯಲಾಗುತ್ತದೆ.

ಏಳನೇ ದಿನ: ತಪಸ್ಸು ಮತ್ತು ಧ್ಯಾನ

ಧ್ಯಾನ ಮತ್ತು ಭಕ್ತಿಗೆ ಈ ದಿನ ಮೀಸಲು. ಪವಿತ್ರ ವೃಕ್ಷಗಳ ನೆರಳಿನಲ್ಲಿ ಕುಳಿತು ಶಿವನನ್ನು ಧ್ಯಾನಿಸುವುದು ಮತ್ತು ದಾರಿಯಲ್ಲಿ ಸಿಗುವ ಜನರಿಗೆ ದಾನ ಧರ್ಮಗಳನ್ನು ಮಾಡುವುದು ವಿಶೇಷ ಫಲ ನೀಡುತ್ತದೆ.

ಎಂಟನೇ ದಿನ: ಮಹಾಯಾತ್ರೆಯ ಮುಕ್ತಾಯ

ಪಂಚಕ್ರೋಶ ಯಾತ್ರೆಯನ್ನು ಮುಗಿಸಿ ಭಕ್ತರು ಪುನಃ ಮಣಿಕರ್ಣಿಕಾ ಘಾಟ್‌ಗೆ ಹಿಂತಿರುಗುತ್ತಾರೆ. ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿ ಅಂತಿಮ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಒಂಬತ್ತನೇ ದಿನ: ವಿದಾಯ ಮತ್ತು ಆಶೀರ್ವಾದ

ಇದು ಯಾತ್ರೆಯ ಕೊನೆಯ ದಿನ. ವಿಶ್ವನಾಥನಿಗೆ ಮಹಾ ಅಭಿಷೇಕ, ಬಿಲ್ವಾರ್ಚನೆ ನೆರವೇರಿಸಿ, ಅನ್ನಪೂರ್ಣ ದೇವಿಯ ಸನ್ನಿಧಿಯಲ್ಲಿ ದಾನವನ್ನು ಸ್ವೀಕರಿಸಿ ಹಾಗೂ ಅರ್ಪಿಸಿ ಕೃತಾರ್ಥರಾಗುತ್ತಾರೆ. ಕೊನೆಯದಾಗಿ ಕಾಲಭೈರವನ ಬಳಿ ಕಾಶಿಯಿಂದ ಹೊರಡಲು ಅನುಮತಿ (ಆಜ್ಞೆ) ಪಡೆದು ಯಾತ್ರೆಯನ್ನು ಮುಕ್ತಾಯಗೊಳಿಸುತ್ತಾರೆ.

ಜೀವಂತವಾಗಿರುವಾಗಲೇ ಮುಕ್ತಿ!

“ಕಾಶ್ಯಾಂ ಮರಣಾತ್ ಮುಕ್ತಿಃ” ಅಂದರೆ ಕಾಶಿಯಲ್ಲಿ ಪ್ರಾಣ ಬಿಟ್ಟರೆ ಮುಕ್ತಿ ಸಿಗುತ್ತದೆ ಎಂಬುದು ಶಾಸ್ತ್ರೋಕ್ತ ಮಾತು. ಆದರೆ, ಬದುಕಿರುವಾಗಲೇ ಮೋಕ್ಷದ ಆನಂದವನ್ನು ಅನುಭವಿಸಬೇಕಾದರೆ ಈ 9 ದಿನಗಳ ಕಠಿಣ ನಿಯಮಬದ್ಧ ಕಾಶೀವಾಸವನ್ನು ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಇದು ಮನುಷ್ಯನ ಅಹಂಕಾರವನ್ನು ಅಳಿಸಿ ಆಧ್ಯಾತ್ಮಿಕ ಜಾಗೃತಿ ಉಂಟುಮಾಡುತ್ತದೆ.

ಮನೆಗೆ ಮರಳಿದ ನಂತರ ಮಾಡಬೇಕಾದ ಅಂತಿಮ ಪೂಜೆ:

ಕಾಶಿ ಯಾತ್ರೆ ಮುಗಿಸಿ ಮನೆಗೆ ಮರಳಿದ ನಂತರ, ಒಂದು ಶುಭ ಮುಹೂರ್ತದಲ್ಲಿ ಕಾಶಿಯಿಂದ ತಂದ ಪವಿತ್ರ ಗಂಗಾಜಲ, ವಿಭೂತಿ ಮತ್ತು ಪ್ರಸಾದದ ಅಕ್ಕಿಯನ್ನು (ಅಕ್ಷತೆ) ಇಟ್ಟು ವಿಶೇಷ ಪೂಜೆ ನೆರವೇರಿಸಬೇಕು. ಹೀಗೆ ಮಾಡಿದಾಗ ಮಾತ್ರ ಕಾಶಿ ಮಹಾಯಾತ್ರೆಯು ಸಂಪೂರ್ಣ ಫಲವನ್ನು ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:36 pm, Sun, 17 May 26

Source link

RCB ವಿರುದ್ಧದ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಖಡಕ್ ಸಂದೇಶ! – Kannada News | Shreyas Iyer Sends Strong Message to RCB Ahead of Clash!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಪ್ಲೇಆಫ್ ರೇಸ್ ರೋಚಕ ಹಂತ ತಲುಪಿದೆ. ಇಂದು ನಡೆಯಲಿರುವ ಐಪಿಎಲ್​ನ 61ನೇ ಪಂದ್ಯದಲ್ಲಿ ಎರಡು ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ. ಅಂದರೆ ಇಂದಿನ ಮ್ಯಾಚ್​ನಲ್ಲಿ ಆರ್​ಸಿಬಿ ಗೆದ್ದರೆ 18 ಅಂಕಗಳೊಂದಿಗೆ ಪ್ಲೇಆಫ್​ಗೇರುವುದು ಖಚಿತ. ಮತ್ತೊಂದೆಡೆ ಪ್ಲೇಆಫ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಪಂಜಾಬ್ ಕಿಂಗ್ಸ್ (PBKS) ಆರ್​ಸಿಬಿ ವಿರುದ್ಧ ಗೆಲ್ಲಲೇಬೇಕು. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶ್ರೇಯಸ್ ಅಯ್ಯರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ನೇರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋತು ಸತತ ಐದು ಪಂದ್ಯಗಳ ಸೋಲಿನ ಆಘಾತದಲ್ಲಿದ್ದರೂ, ಆರ್‌ಸಿಬಿ ವಿರುದ್ಧದ ಮುಂದಿನ ಪಂದ್ಯಕ್ಕೆ ತಮ್ಮ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

“ನಾವು ಆರ್‌ಸಿಬಿ ವಿರುದ್ಧ ಆಡಲು ಇನ್ನು ಕಾಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಿದ್ಧವಾಗಿಯೇ ಕಣಕ್ಕಿಳಿಯಲಿದ್ದೇವೆ. ಈ ಮ್ಯಾಚ್​ನಲ್ಲಿ ಗೆಲ್ಲಲೇಬೇಕು, ಗೆಲ್ಲುತ್ತೇವೆ” ಎಂದು ಹೇಳುವ ಮೂಲಕ ಶ್ರೇಯಸ್ ಅಯ್ಯರ್ ಪ್ಲೇಆಫ್ ಪ್ರವೇಶಿಸುವ ಅದಮ್ಯ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಅಝ್ಮತುಲ್ಲಾ ಒಮರ್ಜಾಯ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 200 ಪ್ಲಸ್ ರನ್ ಗಳಿಸಿದರೂ, ಬೌಲಿಂಗ್ ವೈಫಲ್ಯದಿಂದಾಗಿ ಮುಂಬೈ ಇಂಡಿಯನ್ಸ್​ ಎದುರು ಸೋಲೊಪ್ಪಿಕೊಂಡಿತು. ಈ ಸೋಲನ್ನು ಅರಗಿಸಿಕೊಳ್ಳುವುದು “ತುಂಬಾ ಕಷ್ಟ” ಎಂದು ಒಪ್ಪಿಕೊಂಡ ಶ್ರೇಯಸ್ ಅಯ್ಯರ್, ತಂಡದ ಮೇಲೆ ಒತ್ತಡ ಇರುವುದು ನಿಜ ಆದರೆ ಒತ್ತಡದ ಸಂದರ್ಭದಲ್ಲೇ ಶ್ರೇಷ್ಠ ಪ್ರದರ್ಶನ ಹೊರಬರಲಿದೆ ಎಂದಿದ್ದಾರೆ.

ಸದ್ಯ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 12 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿ 4ನೇ ಸ್ಥಾನದಲ್ಲಿದೆ. ಆದರೆ ಸತತ 5 ಸೋಲುಗಳು ತಂಡದ ಆತ್ಮವಿಶ್ವಾಸಕ್ಕೆ ಧಕ್ಕೆ ತಂದಿವೆ.  ಪ್ರಸ್ತುತ ಸನ್ನಿವೇಶದಲ್ಲಿ ಪಂಜಾಬ್ ಕಿಂಗ್ಸ್​ ತಂಡ ನೇರವಾಗಿ ಪ್ಲೇಆಫ್ ತಲುಪಬೇಕಾದರೆ, ಮುಂದಿನ ಎರಡು ಪಂದ್ಯಗಳಲ್ಲಿ (RCB ಮತ್ತು LSG ವಿರುದ್ಧ) ಕಡ್ಡಾಯವಾಗಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ!

ಮತ್ತೊಂದೆಡೆ, ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಪಂದ್ಯಗಳಿಂದ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ಅರ್ಹತೆ ಪಡೆಯಲು ಆರ್‌ಸಿಬಿಗೆ ಕೇವಲ ಒಂದು ಜಯದ ಅಗತ್ಯವಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ.


ಸದ್ಯ ಶ್ರೇಯಸ್ ಅಯ್ಯರ್ ಅವರ ಈ ಆಕ್ರಮಣಕಾರಿ ಸಂದೇಶವು ಪಂಜಾಬ್ ತಂಡದಲ್ಲಿ ಇನ್ನೂ ಹೋರಾಟದ ಕಿಚ್ಚು ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಫಾರ್ಮ್‌ನಲ್ಲಿರುವ ಆರ್‌ಸಿಬಿಯನ್ನು ಧರ್ಮಶಾಲಾದಲ್ಲಿ ಮಣಿಸುವುದು ಪಂಜಾಬ್‌ ಕಿಂಗ್ಸ್ ತಂಡಕ್ಕೆ ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ಈ ಇಂದಿನ ಮ್ಯಾಚ್​ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.

Published On – 1:38 pm, Sun, 17 May 26

Source link

ಜೆಜೆನಗರ ಪಿಎಸ್​ಐ ಪದ್ಮನಾಭ್ ಮೇಲೆ ಹಲ್ಲೆ ಆರೋಪ! – Kannada News | JJ Nagar PSI Accused of Assault in Domestic Dispute Case

ಬೆಂಗಳೂರು, ಮೇ 17: ಜೆಜೆನಗರ ಪೊಲೀಸ್ ಠಾಣೆಯ ಪಿಎಸ್‌ಐ ಪದ್ಮನಾಭ್ ವಿರುದ್ಧ ಕೌಟುಂಬಿಕ ವಿವಾದದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಬರ್ಕತ್ ಪಾಷಾ ಎಂಬುವವರನ್ನು ಪಿಎಸ್‌ಐ ಪದ್ಮನಾಭ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುತ್ತಿಗೆ ಹಿಸುಕುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ಜೆಜೆನಗರ ಠಾಣಾ ವ್ಯಾಪ್ತಿಯ ಪಾದರಾಯನಪುರದಲ್ಲಿ ನಡೆದಿದೆ. ಪತಿ-ಪತ್ನಿ ನಡುವೆ ಕೆಲಸಕ್ಕೆ ಹೋಗುವ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು. ಸೀಮಂತದ ನಂತರ ಪತ್ನಿ ತವರಿಗೆ ಹೋದಾಗ, ಆಕೆಯನ್ನು ಕರೆತರಲು ಹೋದಾಗ ಗಲಾಟೆ ನಡೆದಿದೆ. ಈ ಘಟನೆಯು ಪೊಲೀಸ್ ಅಧಿಕಾರಿಯೊಬ್ಬರ ದುರ್ನಡತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರನ ದರ್ಶನಕ್ಕೆ ಜನವೋ ಜನ! – Kannada News | Devotee Surge at Male Mahadeshwara Hill for Shani Amavasya and Weekend

ಚಾಮರಾಜನಗರ, ಮೇ 17: ಶನಿ ಅಮಾವಾಸ್ಯೆ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೇ ಹರಿದುಬಂದಿದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಮಾದಪ್ಪನ ದರ್ಶನ ಪಡೆದು ವಿಶೇಷ ಸೇವೆಗಳನ್ನು ಸಲ್ಲಿಸಿದ್ದಾರೆ. ನಿನ್ನೆಯಿಂದಲೂ ಮಾದಪ್ಪನ ಭಕ್ತ ಸಮೂಹವು ಬೆಟ್ಟದ ಕಡೆಗೆ ಬರುತ್ತಿದ್ದು, ದೇವಾಲಯದ ಆವರಣ ಭಕ್ತರಿಂದ ತುಂಬಿಹೋಗಿದೆ. ಭಕ್ತರು ತಮ್ಮ ಭಕ್ತಿ ಸಮರ್ಪಿಸಲು ಚಿನ್ನದ ರಥ, ಬೆಳ್ಳಿ ರಥ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಹಾಗೂ ಬಸವ ರಥ ಸೇರಿದಂತೆ ಹಲವು ವಿಭಿನ್ನ ಸೇವೆಗಳನ್ನು ಮಾದಪ್ಪನಿಗೆ ಅರ್ಪಿಸಿದ್ದಾರೆ. ಈ ವಿಶೇಷ ಸೇವೆಗಳ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ – Kannada News | Rajinikanth clarifies rumors of jealousy after Vijay became Tamil Nadu CM

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ (Thalapathy Vijay) ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ಬಹುಮತ ಪಡೆದು ಸರ್ಕಾರ ರಚಿಸಿದ ಬೆನ್ನಲ್ಲೇ, ಸೂಪರ್‌ಸ್ಟಾರ್ ರಜನಿಕಾಂತ್ ಅವರ ನಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದವು. ಚುನಾವಣೆಯಲ್ಲಿ ಸೋಲುಂಡ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದನ್ನು ನೋಡಿ ಕೆಲವರು ಟೀಕೆ ಮಾಡಿದ್ದರು. ವಿಜಯ್ ಸಿಎಂ ಆಗಿರುವುದಕ್ಕೆ ರಜನಿ ಅವರಿಗೆ ಇಷ್ಟವಿಲ್ಲ ಎಂದು ಹಲವರು ಬಿಂಬಿಸಿದ್ದರು. ಸದ್ಯ ಈ ಎಲ್ಲಾ ವದಂತಿಗಳಿಗೆ ರಜನಿಕಾಂತ್ (Rajinikanth) ಭಾನುವಾರ (ಮೇ 17) ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜನಿಕಾಂತ್, ‘ಚುನಾವಣೆಯ ನಂತರ ನನ್ನ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ನಾನು ಈಗ ಪ್ರತಿಕ್ರಿಯಿಸದಿದ್ದರೆ ಆ ಸುಳ್ಳುಗಳೇ ನಿಜವಾಗಿಬಿಡುತ್ತವೆ. ಚುನಾವಣಾ ಫಲಿತಾಂಶದ ನಂತರ ನಾನು ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದನ್ನು ಟೀಕಿಸಲಾಗುತ್ತಿದೆ. ಆದರೆ ನಮ್ಮ ಸ್ನೇಹ ರಾಜಕೀಯಕ್ಕೂ ಮೀರಿದ್ದು. ಸ್ಟಾಲಿನ್ ಸೋತಿದ್ದಕ್ಕೆ ನನಗೆ ಬೇಸರವಾಗಿತ್ತು, ಹಾಗಾಗಿ ಒಬ್ಬ ಸ್ನೇಹಿತನಾಗಿ ಅವರನ್ನು ಭೇಟಿಯಾಗಿದ್ದೆ’ ಎಂದು ವಿವರಿಸಿದರು.

ನಟ ವಿಜಯ್ ಸಿಎಂ ಆಗಿದ್ದಕ್ಕೆ ರಜನಿಕಾಂತ್ ಅಸೂಯೆ ಪಡುತ್ತಿದ್ದಾರೆ ಮತ್ತು ಅವರಿಗೆ ಶುಭ ಕೋರಿಲ್ಲ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ‘ವಿಜಯ್ ಸಿಎಂ ಆದ ಸುದ್ದಿ ಕೇಳಿ ನನಗೆ ಭಾರಿ ಆಶ್ಚರ್ಯ ಮತ್ತು ಅಪಾರ ಸಂತೋಷವಾಯಿತು. ಅವರು ಗೆಲ್ಲುತ್ತಲೇ ನಾನು ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಶುಭ ಹಾರೈಸಿದ್ದೆ. ನಾನು ರಾಜಕೀಯದಲ್ಲೇ ಇಲ್ಲದಿರುವಾಗ ನನಗೆ ವಿಜಯ್ ಮೇಲೆ ಏಕೆ ಅಸೂಯೆ ಇರುತ್ತದೆ? ಒಂದು ವೇಳೆ ನನ್ನ ಸಮಕಾಲೀನರಾದ ಕಮಲ್ ಹಾಸನ್ ಸಿಎಂ ಆಗಿದ್ದರೆ ನನಗೆ ಒಂದು ಚೂರು ಅಸೂಯೆ ಆಗಬಹುದಿತ್ತೇನೋ. ವಿಜಯ್‌ಗೂ ನನಗೂ 25 ವರ್ಷಗಳ ತಲೆಮಾರಿನ ಅಂತರವಿದೆ, ನಮ್ಮಿಬ್ಬರ ನಡುವೆ ಸ್ಪರ್ಧೆ ಎಲ್ಲಿಂದ ಬರುತ್ತದೆ?’ ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ರಜನಿಕಾಂತ್, ‘ಅನಗತ್ಯವಾಗಿ ಮಾತನಾಡಲು ರಜನಿ ಅಷ್ಟು ಕೀಳು ಮಟ್ಟದ ಅಥವಾ ಚೀಪ್ ವ್ಯಕ್ತಿಯಲ್ಲ. ವಿಜಯ್ ಅವರು 52ನೇ ವಯಸ್ಸಿನಲ್ಲಿ ಎಂಜಿಆರ್ ಮತ್ತು ಎನ್‌ಟಿಆರ್ ಅವರಿಗಿಂತಲೂ ದೊಡ್ಡ ಸಾಧನೆ ಮಾಡಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಹಾಗೂ ಇಲ್ಲಿನ ಎರಡು ಪ್ರಮುಖ ದ್ರಾವಿಡ ಪಕ್ಷಗಳನ್ನು ಎದುರಿಸಿ ಅವರು ಗೆದ್ದಿದ್ದಾರೆ. ಇದು ಸಾಮಾನ್ಯ ವಿಷಯವಲ್ಲ. ಅವರ ಮೇಲೆ ನನಗೆ ಯಾವುದೇ ಅಸೂಯೆ ಇಲ್ಲ. ಬದಲಿಗೆ ದೊಡ್ಡ ನಿರೀಕ್ಷೆಗಳಿವೆ. ನನ್ನ ಬೆಸ್ಟ್ ವಿಶಸ್ ಯಾವಾಗಲೂ ವಿಜಯ್ ಜೊತೆ ಇರುತ್ತದೆ’ ಎಂದು ತಲೈವಾ ಹೊಗಳಿದ್ದಾರೆ.

ಇದನ್ನೂ ಓದಿ: ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಸಿಎಂ ಆಗಿರುವ ವಿಜಯ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಉಹಾಪೋಹಗಳಿಗೆ ರಜನಿಕಾಂತ್ ಅವರ ಈ ಹೇಳಿಕೆಯು ಸಂಪೂರ್ಣ ಬ್ರೇಕ್ ಹಾಕಿದೆ. ಸುದ್ದಿಗೋಷ್ಠಿಯ ಮೂಲಕ ಅವರು ಎಲ್ಲ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯ ಕೊಲೆ; ಸಂಬಂಧಿಕರೇ ಹಣ ದೋಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇಂಡೋನೇಷ್ಯಾದ ಪೆಕನ್‌ಬಾರು ನಗರದ ರುಂಬೈನಲ್ಲಿ ದುಮರಿಸ್ ಬೋರು ಸಿಟಿಯೊ (60) ಎಂಬ ವೃದ್ಧೆಯನ್ನು ಕೊಲೆ ಮಾಡಿ ದರೋಡೆ ಮಾಡಿರುವುದು ವರದಿಯಾಗಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಘಟನಾ ಸ್ಥಳದ ಮರು ಪರಿಶೀಲನೆ ನಡೆಸಿ ನಾಲ್ಕು ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಮರದ ದಿಂಬಿನಿಂದ ವೃದ್ಧೆಯ ಮೇಲೆ ಹಲ್ಲೆ ನಡೆಸಿರುವುದು ಮತ್ತು ಕ್ಯಾಮೆರಾಗಳನ್ನು ಧ್ವಂಸಗೊಳಿಸಿರುವುದು ಪತ್ತೆಯಾಗಿದೆ. ಸಿಸಿಟಿವಿ ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಮೃತರ ಸಂಬಂಧಿಯೇ ಆದ ‘AF’ ಎಂಬ ಮಹಿಳೆಯ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಸದ್ಯ ಆಕೆ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆ ಮತ್ತು ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB ಪಂದ್ಯಕ್ಕೆ 80,000 ರೂ: ಐಪಿಎಲ್ ಟಿಕೆಟ್ ದಂಧೆ ಬಯಲು! – Kannada News | IPL 2026 Ticket Scam: rs 80,000 For RCB’s Match, DDCA Official Involved

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ 2026 ಪಂದ್ಯಗಳ ಉಚಿತ ಪಾಸ್‌ಗಳನ್ನು (Complimentary Passes) ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಪಂದ್ಯ ವೀಕ್ಷಿಸಲು ಇರುವ ಭಾರಿ ಬೇಡಿಕೆಯನ್ನು ಬಳಸಿಕೊಂಡು, ಕೇವಲ ಒಂದು ಟಿಕೆಟ್ ಅನ್ನು ಬರೋಬ್ಬರಿ ₹80,000 ವರೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಈ ದಂಧೆಯ ಹಿಂದೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (DDCA) ಉನ್ನತ ಅಧಿಕಾರಿಯೊಬ್ಬರ ಕೈವಾಡ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಾಸ್ಟರ್ ಮೈಂಡ್ ಯಾರು?

  •  ಅಧಿಕಾರಿಯ ಕೈವಾಡ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (DDCA) ಹಿರಿಯ ಅಧಿಕಾರಿಯೊಬ್ಬರು ಈ ದಂಧೆಯ ಮಾಸ್ಟರ್‌ಮೈಂಡ್ ಆಗಿದ್ದು, ಸಾರ್ವಜನಿಕರಿಗೆ ಸಿಗಬೇಕಾದ ಪಾಸ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರು ಪೆಟ್ರೋಲ್ ಬಂಕ್ ಉದ್ಯೋಗಿಯೊಬ್ಬರ ಮೂಲಕ ಈ ಟಿಕೆಟ್‌ಗಳನ್ನು ರಸ್ತೆ ಬದಿಯ ಏಜೆಂಟರಿಗೆ ತಲುಪಿಸುತ್ತಿದ್ದರು.
  • ಬೇಡಿಕೆಗೆ ತಕ್ಕಂತೆ ದರ: ಆಟಗಾರರ ಜನಪ್ರಿಯತೆಗೆ ಅನುಗುಣವಾಗಿ ಟಿಕೆಟ್ ದರವನ್ನು ₹8,000 ರಿಂದ ₹80,000 ರವರೆಗೆ ನಿಗದಿಪಡಿಸಲಾಗಿತ್ತು. ವಿರಾಟ್ ಕೊಹ್ಲಿ ಆಡುವ RCB ಪಂದ್ಯಗಳಿಗೆ ಗರಿಷ್ಠ ₹80,000 ವರೆಗೆ ವಸೂಲಿ ಮಾಡಲಾಗುತ್ತಿತ್ತು.

  • ಮೃತ ಸದಸ್ಯರ ಹೆಸರಲ್ಲಿ ಪಾಸ್: ಸ್ಟೇಡಿಯಂನ ಸಾಮಾನ್ಯ ವಿತರಣಾ ವ್ಯವಸ್ಥೆಯನ್ನು ಬೈಪಾಸ್ ಮಾಡಿ, ಪ್ರತಿ ಪಂದ್ಯಕ್ಕೆ 1,000 ರಿಂದ 1,200 ಉಚಿತ ಪಾಸ್‌ಗಳನ್ನು ಸೈಡ್ ಮಾಡಲಾಗುತ್ತಿತ್ತು. ದಂಧೆಕೋರರು ಮೃತಪಟ್ಟ ಅಥವಾ ವಿದೇಶದಲ್ಲಿರುವ (NRI) ಸದಸ್ಯರ ಹೆಸರಿನಲ್ಲೂ ಪಾಸ್‌ಗಳನ್ನು ಪಡೆದು ಮಾರಾಟ ಮಾಡಿದ್ದಾರೆ.

ಇದನ್ನೂ  ಓದಿ: ವಿರಾಟ್ ಕೊಹ್ಲಿ ಯಾರಿಗೆ ಏನು ಸಾಬೀತುಪಡಿಸಬೇಕು? ಅಶ್ವಿನ್ ನೇರ ಪ್ರಶ್ನೆ!

  • ಪೊಲೀಸ್ ಕಾರ್ಯಾಚರಣೆ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಕ್ರೀಡಾಂಗಣದ ಹೊರಗೆ ಟಿಕೆಟ್ ಮಾರುತ್ತಿದ್ದ ಮೂವರನ್ನು ಪೊಲೀಸರು ರೆಡ್-ಹ್ಯಾಂಡ್ ಆಗಿ ಹಿಡಿದಾಗ ಈ ಹಗರಣ ಬಯಲಾಗಿದೆ. ಈ ಸಂಬಂಧ ಈಗಾಗಲೇ ನಾಲ್ಕು ಡಿಡಿಸಿಎ ಅಧಿಕಾರಿಗಳನ್ನು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ.

ನಿಯಮಗಳ ದುರುಪಯೋಗ:

ಐಪಿಎಲ್ ನಿಯಮಗಳ ಪ್ರಕಾರ, ಪಂದ್ಯ ಆಯೋಜಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯದ ಶೇ. 10 ರಿಂದ 15 ರಷ್ಟು ಟಿಕೆಟ್‌ಗಳನ್ನು ಉಚಿತ ಪಾಸ್‌ಗಳಾಗಿ ನೀಡಬೇಕಾಗುತ್ತದೆ. ದೆಹಲಿ ಸ್ಟೇಡಿಯಂನಲ್ಲಿ ಪ್ರತಿ ಪಂದ್ಯಕ್ಕೆ ಡಿಡಿಸಿಎಗೆ ಸುಮಾರು 6,000 ಪಾಸ್‌ಗಳು ಸಿಗುತ್ತವೆ. ಆದರೆ ಅರ್ಹರಿಗೆ ತಲುಪಬೇಕಾದ ಈ ಪಾಸ್‌ಗಳ ಪೈಕಿ ಐದನೇ ಒಂದು ಭಾಗವನ್ನು ಬ್ಲಾಕ್ ಮಾರ್ಕೆಟ್‌ಗೆ ತಳ್ಳಲಾಗಿತ್ತು.

ಈ ಹಿಂದೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಕ್ಯಾಂಟೀನ್ ಸಿಬ್ಬಂದಿ ಮತ್ತು ಕೆಎಸ್‌ಸಿಎ (KSCA) ಅಧಿಕಾರಿಯೊಬ್ಬರು ಆರ್‌ಸಿಬಿ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರಿ ಸಿಕ್ಕಿಬಿದ್ದಿದ್ದರು. ಈಗ ದೆಹಲಿಯಲ್ಲೂ ಇಂತಹುದೇ ದೊಡ್ಡ ಹಗರಣ ಬೆಳಕಿಗೆ ಬಂದಿದೆ.

ಕಾನೂನು ಸೆಕ್ಷನ್‌ಗಳು:

ಈ ಐಪಿಎಲ್ ಟಿಕೆಟ್ ದಂಧೆಯ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಈ ಕೆಳಗಿನ ಕಠಿಣ ಸೆಕ್ಷನ್‌ಗಳನ್ನು ಹೂಡಲಾಗಿದೆ…

ಸೆಕ್ಷನ್ 316(2) BNS (ಕ್ರಿಮಿನಲ್ ನಂಬಿಕೆ ದ್ರೋಹ): ಸಾರ್ವಜನಿಕರಿಗೆ ಅಥವಾ ಅರ್ಹ ಸದಸ್ಯರಿಗೆ ವಿತರಿಸಬೇಕಾದ ಉಚಿತ ಪಾಸ್‌ಗಳನ್ನು ಸ್ವಂತ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಡಿಡಿಸಿಎ (DDCA) ಅಧಿಕಾರಿಗಳ ವಿರುದ್ಧ ಈ ಸೆಕ್ಷನ್ ಹಾಕಲಾಗಿದೆ.

ಸೆಕ್ಷನ್ 318(2) ಮತ್ತು 319 BNS (ವಂಚನೆ ಮತ್ತು ನಕಲಿ ವೇಷ ಧರಿಸುವುದು): ಬಂಧಿತ ಆರೋಪಿಗಳು ತಾವು “ಡಿಡಿಸಿಎ ಸಂಸ್ಥೆಯ ಅಧಿಕೃತ ಪ್ರತಿನಿಧಿಗಳು” ಎಂದು ಸುಳ್ಳು ಹೇಳಿ ಕ್ರಿಕೆಟ್ ಪ್ರೇಮಿಗಳನ್ನು ನಂಬಿಸಿ ವಂಚಿಸಿದ್ದಕ್ಕಾಗಿ ಈ ಸೆಕ್ಷನ್ ಅನ್ವಯಿಸಲಾಗಿದೆ.

ಸೆಕ್ಷನ್ 61(2) BNS (ಅಪರಾಧ ಸಂಚು / ಕ್ರಿಮಿನಲ್ ಪಿತೂರಿ): ಉನ್ನತ ಅಧಿಕಾರಿಗಳು, ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ದಲ್ಲಾಳಿಗಳು ಒಟ್ಟಾಗಿ ಸೇರಿ ಯೋಜಿತವಾಗಿ ಬ್ಲಾಕ್ ಮಾರ್ಕೆಟ್ ದಂಧೆ ನಡೆಸಲು ನೆಟ್‌ವರ್ಕ್ ರೂಪಿಸಿದ್ದಕ್ಕಾಗಿ ಈ ಸೆಕ್ಷನ್ ಹಾಕಲಾಗಿದೆ.

ಸೆಕ್ಷನ್ 3(5) BNS (ಸಾಮಾನ್ಯ ಉದ್ದೇಶ): ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಒಂದೇ ಕ್ರಿಮಿನಲ್ ಉದ್ದೇಶದಿಂದ ಒಟ್ಟಾಗಿ ಅಪರಾಧ ಎಸಗಿರುವುದನ್ನು ಇದು ಸೂಚಿಸುತ್ತದೆ. ಹೀಗಾಗಿ ಈ ಸೆಕ್ಷನ್ ಅನ್ನು ಅನ್ವಯಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್ ಅಭಿಮಾನಿಗಳ ನಿಷ್ಕಲ್ಮಶ ಪ್ರೀತಿ ಮತ್ತು ಕ್ರೇಝ್ ಅನ್ನೇ ಬಂಡವಾಳ ಮಾಡಿಕೊಂಡು ನಡೆಯುತ್ತಿದ್ದ ಬೃಹತ್ ದಂಧೆಯ ಮುಖವಾಡ ಈಗ ಕಳಚಿದೆ. ಸಾಮಾನ್ಯ ಜನರಿಗೆ ಸಿಗಬೇಕಾದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್‌ಗೆ ತಳ್ಳಿ, ₹80,000 ವರೆಗೆ ಸುಲಿಗೆ ಮಾಡುತ್ತಿದ್ದ ಈ ಜಾಲದಲ್ಲಿ ಸ್ವತಃ ಕ್ರಿಕೆಟ್ ಮಂಡಳಿಯ (DDCA) ಅಧಿಕಾರಿಗಳೇ ಭಾಗಿಯಾಗಿರುವುದು ವ್ಯವಸ್ಥೆಯ ದುರಂತ ಎನ್ನದೇ ವಿಧಿಯಿಲ್ಲ.

Source link

ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​: ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ – Kannada News | New Bengaluru Mumbai Express: Two Day Weekly Service Starts for Travelers

ಬೆಂಗಳೂರು, ಮುಂಬೈ ಎಕ್ಸ್ಪ್ರೆಸ್ ಟ್ರೈನ್​​ಗೆ ಹಸಿರು ನಿಶಾನೆImage Credit source: Tv9 Kannada

ಬೆಂಗಳೂರು, ಮೇ 17: ಬೆಂಗಳೂರು-ಮುಂಬೈ ನಡುವೆ ಸಂಚಾರ ಮಾಡಲಿರುವ ಹೊಸ ಎಕ್ಸ್​​ಪ್ರೆಸ್​​ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ವರ್ಚುವಲ್​​ ಮೂಲಕ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಸಂಸದರಾದ ಪಿಸಿ ಮೋಹನ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಬೆಂಗಳೂರು ಟು ಮುಂಬೈಗೆ ಸಂಚರಿಸುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಇಲಾಖೆ ಈ ಹೊಸ ರೈಲನ್ನು ಘೋಷಿಸಿತ್ತು.

ವಾರದಲ್ಲಿ ಎರಡು ದಿನ ಸಂಚಾರ

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​​ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್​​ ನಡುವೆ
ವಾರಕ್ಕೆ ಎರಡು ದಿನ ಬೆಂಗಳೂರು ಟು ಮುಂಬೈ ನಡುವೆ ಈ ಎಕ್ಸ್​​ಪ್ರೆಸ್​​ ರೈಲು ಸಂಚಾರ ‌ಮಾಡಲಿದೆ. ಶನಿವಾರ ಮತ್ತು ಮಂಗಳವಾರದಂದು ಬೆಂಗಳೂರಿನಿಂದ ಮುಂಬೈಗೆ, ಭಾನುವಾರ ಮತ್ತು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಓಡಾಟ ನಡೆಸಲಿದೆ. ಬೆಂಗಳೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಪುಣೆ, ಮುಂಬೈ ನಗರಗಳ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ರೈಲು 17 ಕೋಚ್​​ಗಳನ್ನು ಹೊಂದಿದ್ದು, ಒಂದು ಎಸಿ 2-ಟೈರ್, ನಾಲ್ಕು ಎಸಿ 3-ಟೈರ್, ಆರು ಸ್ಲೀಪರ್ ಮತ್ತು ನಾಲ್ಕು ಸಾಮಾನ್ಯ ದರ್ಜೆಯ ಬೋಗಿಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ದರ ಏರಿಕೆ ಬಿಸಿ​​; ಸರ್ಕಾರದ ಮೊರೆ ಹೋದ ಆಟೋ ಚಾಲಕರು

ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಬಂದ ಸೋಮಣ್ಣ

ಪೆಟ್ರೋಲ್ ಮಿತ ಬಳಕೆ, ಚಿನ್ನ ಖರೀದಿಸದಂತೆ ಮೋದಿ ಕರೆ ಹಿನ್ನೆಲೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಬಂದಿದ್ದಾರೆ. ಎಂ.ಜಿ.ರಸ್ತೆ ನಿಲ್ದಾಣದಿಂದ ಸ್ವಾಮಿ ವಿವೇಕಾನಂದ ನಿಲ್ದಾಣದವರೆಗೆ ಮೆಟ್ರೋ ಪ್ರಯಾಣ ಮಾಡಿದ ಸಚಿವರು, ಅಲ್ಲಿಂದ SMVT ರೈಲು ನಿಲ್ದಾಣದವರೆಗೆ ಎಲೆಕ್ಟ್ರಿಕ್ ಬೈಕ್​ನಲ್ಲಿ ಪ್ರಯಾಣಿಸಿ ಗಮನ ದೆಳೆದಿದ್ದಾರೆ. ಈ ವೇಳೆ ವಿ.ಸೋಮಣ್ಣಗೆ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಜೊತೆಯಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:39 am, Sun, 17 May 26

Source link

ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ, ಇಂಧನ ಮಾರಾಟ ಶೇ.50ರಷ್ಟು ಕುಸಿತ – Kannada News | PM Modis Call for Economic Patriotism Sees Sharp Drop in Bengaluru Gold and Fuel Consumption

ಬೆಂಗಳೂರು, ಮೇ 17: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತಾಸಕ್ತಿ ಕಾಪಾಡಲು ನೀಡಿರುವ ಕರೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ ಮತ್ತು ಇಂಧನ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟವು ಶೇಕಡ 50ರಷ್ಟು ಕಡಿಮೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಸಹ ಕೊಂಚ ಇಳಿಕೆಯನ್ನು ಕಂಡಿದೆ. ಬಂಕ್‌ಗಳಲ್ಲಿ ಪ್ರತಿದಿನ 150 ರಿಂದ 250 ಲೀಟರ್ ಇಂಧನ ಮಾರಾಟ ಕಡಿಮೆಯಾಗಿದ್ದು, ನಾಗರಿಕರು ತಮ್ಮ ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಮೆಟ್ರೋ ಮತ್ತು ಸಾರಿಗೆ ಬಸ್‌ಗಳತ್ತ ಮುಖ ಮಾಡಿದ್ದಾರೆ. ಆಭರಣ ಪ್ರಿಯರು ಸಹ ಚಿನ್ನಾಭರಣ ಖರೀದಿಯನ್ನು ಕಡಿಮೆ ಮಾಡಿಕೊಂಡಿದ್ದು, ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಮದುವೆ ಸೇರಿದಂತೆ ಅನಿವಾರ್ಯ ಕಾರ್ಯಕ್ರಮಗಳಿಗಾಗಿ ತಾಳಿ ಬೊಟ್ಟು, ಉಂಗುರಗಳಂತಹ ಅಗತ್ಯ ಚಿನ್ನಾಭರಣಗಳನ್ನು ಮಾತ್ರ ಜನರು ಖರೀದಿಸುತ್ತಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸುಧಾಕರ್ ನುಡಿ ನಮನ ಕಾರ್ಯಕ್ರಮದಲ್ಲಿ ಭಾವುಕರಾದ ಶಾಸಕ ರಘುಮೂರ್ತಿ!

ಚಿತ್ರದುರ್ಗ, ಮೇ 17: ಚಳ್ಳಕೆರೆಯಲ್ಲಿ ನಡೆದ ದಿವಂಗತ ಶಾಸಕ ಡಿ. ಸುಧಾಕರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಹಾಲಿ ಶಾಸಕ ಟಿ. ರಘುಮೂರ್ತಿ ಭಾವುಕರಾಗಿ ಮಾತನಾಡಿದ್ದಾರೆ. ಡಿ. ಸುಧಾಕರ್ ಅವರೊಂದಿಗಿನ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಅವರಿಬ್ಬರ ನಡುವೆ ಸಹೋದರ ಸಂಬಂಧವಿತ್ತು ಎಂದು ರಘುಮೂರ್ತಿ ಸ್ಮರಿಸಿಕೊಂಡರು. 2008ರಲ್ಲಿ ತಾವು ಶಾಸಕರಾಗಲು ಬಂದ ದಿನಗಳಿಂದ ಸುಧಾಕರ್ ಅವರೊಂದಿಗಿನ ಸಂಪರ್ಕವನ್ನು ನೆನಪಿಸಿಕೊಂಡರು.

 

 

Source link

Exit mobile version