Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ – Kannada News | Optical illusion can you find the butterfly hiding in this picture

ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: TinEye

ಒಗಟು ಎಂದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಹೀಗಾಗಿ ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳತ್ತ ಆಸಕ್ತಿ ತೋರಿಸುತ್ತಾರೆ. ಇದು ನಿಮ್ಮ ಕಣ್ಣಿನ ದೃಷ್ಟಿ, ತಾಳ್ಮೆ ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೀಗ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸುವ ಸಮಯ. ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಕೇವಲ 5 ಸೆಕೆಂಡುಗಳಲ್ಲಿ ಬಣ್ಣದ ಚಿಟ್ಟೆಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನೀವು ಜಾಣರು ಎನ್ನುವುದು ಖಚಿತವಾಗುತ್ತದೆ.

ಈ ಚಿತ್ರ ನೋಡಿದಾಗ ಏನು ಕಾಣಿಸಿತು?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ನೂರಕ್ಕೆ ನೂರರಷ್ಟು ಪರೀಕ್ಷಿಸುತ್ತದೆ. ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಲಿವಿಂಗ್ ರೂಮ್. ಈ ರೂಮ್‌ನಲ್ಲಿ ವೃದ್ಧ ವ್ಯಕ್ತಿ ಕುಳಿತುಕೊಂಡಿದ್ದಾನೆ. ಆತನ ಪಕ್ಕದಲ್ಲಿ ಫೋಟೋ ಫ್ರೇಮ್‌ಗಳಿವೆ. ಮನೆಯ ಸಾಕು ನಾಯಿ ಕೂಡ ಪಕ್ಕದ ಸೋಫಾದಲ್ಲಿ ಕುಳಿತಿದೆ, ಇಲ್ಲಿ ಚಿಟ್ಟೆಯೊಂದಿದೆ. ನೀವು ಅದನ್ನು ಕೇವಲ 5 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.

ಇದನ್ನೂ ಓದಿ: ನೀವು ಬುದ್ಧಿವಂತರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಕಂಡು ಹಿಡಿಯಿರಿ

ನಿಮ್ಮ ಕಣ್ಣಿಗೆ ಚಿಟ್ಟೆ ಕಾಣಿಸಿತೇ ?

ಕೆಲವೊಮ್ಮೆ ಇಂತಹ ಒಗಟನ್ನು ಬಿಡಿಸುವಾಗ ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯ. ಈ ಚಿತ್ರದಲ್ಲಿ ಚಿಟ್ಟೆಯೊಂದಿದೆ. ತೀಕ್ಷ್ಣವಾದ ಕಣ್ಣು ನಿಮ್ಮದಾಗಿದ್ದರೆ ಈ ಚಿತ್ರದ ಇಂಚಿಂಚು ಕಣ್ಣಾಯಿಸಿ. ಎಷ್ಟೇ ಪ್ರಯತ್ನ ಪಟ್ಟರೂ ಚಿಟ್ಟೆ ಕಣ್ಣಿಗೆ ಬಿದ್ದಿಲ್ಲವೇ, ನಾವೇ ನಿಮಗೆ ಈ ಒಗಟಿನ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣವೀರ್ ಸಿಂಗ್, ಆದಿತ್ಯ ಚೋಪ್ರಾ ರಹಸ್ಯ ಸಭೆ; ಹಳೇ ಮುನಿಸು ಮರೆತು ಒಂದಾದ ಗುರು-ಶಿಷ್ಯ – Kannada News | Ranveer Singh Aditya Chopra hold closed door meeting at YRF after Dhurandhar success

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಬ್ಯಾಕ್-ಟು-ಬ್ಯಾಕ್ ಎರಡು ಭರ್ಜರಿ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕೇವಲ ನಾಲ್ಕೇ ತಿಂಗಳಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಬಾಲಿವುಡ್‌ನ ಪ್ರಮುಖ ನಿರ್ಮಾಪಕರು, ನಿರ್ದೇಶಕರು ಮತ್ತು ದೊಡ್ಡ ಬ್ರ್ಯಾಂಡ್‌ಗಳ ಮೊದಲ ಆಯ್ಕೆಯಾಗಿರುವ ರಣವೀರ್ ಸಿಂಗ್, ಇತ್ತೀಚೆಗಷ್ಟೇ ತಮಗೆ ಚಿತ್ರರಂಗದಲ್ಲಿ ಮೊದಲ ಬ್ರೇಕ್ ನೀಡಿದ್ದ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ (Aditya Chopra) ಅವರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಕಚೇರಿಯಲ್ಲಿ ನಡೆದ ಗೌಪ್ಯ ಸಭೆಯು ಬಾಲಿವುಡ್ ಅಂಗಳದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ರಣವೀರ್ ಸಿಂಗ್ ಅವರ ಇತ್ತೀಚಿನ ಬಿಗ್ ಹಿಟ್ ಸಿನಿಮಾ ‘ಧುರಂಧರ್’ ಸಾಧಿಸಿದ ಅಭೂತಪೂರ್ವ ಯಶಸ್ಸು ಆದಿತ್ಯ ಚೋಪ್ರಾಗೆ ವೈಯಕ್ತಿಕವಾಗಿ ತುಂಬಾ ಸಂತೋಷ ತಂದಿದೆ. ಏಕೆಂದರೆ, ರಣವೀರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿ, ಅವರು ಇಂದು ಈ ಮಟ್ಟಕ್ಕೆ ಬೆಳೆಯಲು ಬಲವಾದ ಅಡಿಪಾಯ ಹಾಕಿಕೊಟ್ಟಿದ್ದೇ ಆದಿತ್ಯ ಚೋಪ್ರಾ.

ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಈ ಸಭೆಯಲ್ಲಿ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಪರಸ್ಪರ ಆಲಂಗಿಸಿಕೊಂಡಿದ್ದಾರೆ. ಈ ಸುದೀರ್ಘ ಸಭೆಯಲ್ಲಿ ಇಬ್ಬರ ಭವಿಷ್ಯದ ಯೋಜನೆಗಳು, ‘ಧುರಂಧರ್’ ಸಿನಿಮಾದ ಭಾರಿ ಯಶಸ್ಸು ಹಾಗೂ ಮುಂದೆ ಜೊತೆಯಾಗಿ ಕೆಲಸ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆದಿದೆ.

ಈ ರಹಸ್ಯ ಸಭೆಯಲ್ಲಿ ಆದಿತ್ಯ ಚೋಪ್ರಾ ಮತ್ತು ರಣವೀರ್ ಸಿಂಗ್ ದೊಡ್ಡ ಮಟ್ಟದ ಸಿನಿಮಾವೊಂದಕ್ಕಾಗಿ ಕೈಜೋಡಿಸಲು ಆಸಕ್ತಿ ತೋರಿಸಿದ್ದಾರೆ. ಮುಂಬರುವ 6 ತಿಂಗಳ ಒಳಗಾಗಿ ರಣವೀರ್ ಸಿಂಗ್‌ಗಾಗಿ ಒಂದು ಭರ್ಜರಿ ಕಥೆಯನ್ನು ಸಿದ್ಧಪಡಿಸಿಕೊಂಡು ಬರುವುದಾಗಿ ಆದಿತ್ಯ ಚೋಪ್ರಾ ಭರವಸೆ ನೀಡಿದ್ದಾರೆ. ರಣವೀರ್ ಕೂಡ ಈ ಖ್ಯಾತ ನಿರ್ದೇಶಕ-ನಿರ್ಮಾಪಕನ ಕಥೆ ಕೇಳಲು ಕಾತುರರಾಗಿದ್ದಾರೆ. ರಣವೀರ್ ಸಿಂಗ್ ಅವರಿಗೆ ವೈಆರ್‌ಎಫ್ ಬ್ಯಾನರ್‌ಗೆ ಮರಳುವುದು ತವರು ಮನೆಗೆ ಮರಳಿದಷ್ಟೇ ವಿಶೇಷವಾಗಿದೆ.

ಇದನ್ನೂ ಓದಿ: ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ

ರಣವೀರ್ ಸಿಂಗ್ ಸದ್ಯ ಮತ್ತೊಂದು ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಿದ್ಧ ಲೇಖಕ ಅಮಿಶ್ ತ್ರಿಪಾಠಿ ಅವರ ಬೆಸ್ಟ್ ಸೆಲ್ಲರ್ ಕಾದಂಬರಿ ‘ಇಮ್ಮಾರ್ಟಲ್ಸ್ ಆಫ್ ಮೆಲುಹಾ’ ಹಕ್ಕುಗಳನ್ನು ರಣವೀರ್ ಪಡೆದುಕೊಂಡಿದ್ದು, ಸದ್ಯ ಇದು ಸ್ಕ್ರಿಪ್ಟಿಂಗ್ ಹಂತದಲ್ಲಿದೆ. ಒಟ್ಟಿನಲ್ಲಿ, ಯಶ್ ರಾಜ್ ಫಿಲ್ಮ್ಸ್ ಮತ್ತು ರಣವೀರ್ ಸಿಂಗ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Blue Sapphire: ನೀಲಮಣಿ ಧರಿಸುವ ಮುನ್ನ ಎಚ್ಚರ;ಈ 3 ರತ್ನಗಳ ಜೊತೆಯಾಗಿ ಧರಿಸಿದರೆ ಸಂಕಷ್ಟ ಗ್ಯಾರಂಟಿ! – Kannada News | Neelamani Gemstone: Best and Worst Pairings in Vedic Astrology for Success

ನೀಲಮಣಿ ರತ್ನ ಧರಿಸುವ ಮುನ್ನ ಎಚ್ಚರImage Credit source: Pinterest

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದ್ದು, ನವಗ್ರಹಗಳ ದೋಷ ನಿವಾರಣೆಗೆ ಇವುಗಳನ್ನು ಧರಿಸಲಾಗುತ್ತದೆ. ಇವುಗಳಲ್ಲಿ ಕರ್ಮಫಲ ದಾತನಾದ ಶನಿದೇವನಿಗೆ ಪ್ರಿಯವಾದ ನೀಲಮಣಿ (Blue Sapphire) ರತ್ನವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಕಾಡುವ ಶನಿಯ ಸಾಡೇ ಸಾತಿ (ಏಳೂವರೆ ಶನಿ) ಮತ್ತು ಧೈಯ್ಯಾ ಪ್ರಭಾವದಿಂದ ಉಂಟಾಗುವ ಕಷ್ಟಗಳನ್ನು ನಿವಾರಿಸಿ, ಜೀವನದಲ್ಲಿ ಶುಭ ಫಲಗಳನ್ನು ತರಲು ನೀಲಮಣಿ ಸಹಕಾರಿಯಾಗಿದೆ.

ರತ್ನಗಳ ಸಂಯೋಜನೆಯಲ್ಲಿ ಎಚ್ಚರಿಕೆ ಅಗತ್ಯ:

ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಪ್ರಕಾರ, ಕೆಲವು ರತ್ನಗಳನ್ನು ನೀಲಮಣಿಯೊಂದಿಗೆ ಎಂದಿಗೂ ಧರಿಸಬಾರದು. ಶನಿ ದೇವನಿಗೆ ಶತ್ರುವಾಗಿರುವ ಗ್ರಹಗಳ ರತ್ನಗಳನ್ನು ಒಟ್ಟಿಗೆ ಧರಿಸುವುದರಿಂದ ವಿರುದ್ಧ ಪರಿಣಾಮಗಳು ಉಂಟಾಗುತ್ತವೆ. ಇಂತಹ ತಪ್ಪು ಮಾಡುವುದರಿಂದ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಸಿಗುವ ಬದಲು ಸಾಲು ಸಾಲು ತೊಂದರೆಗಳು ಎದುರಾಗಬಹುದು. ಹಾಗಾಗಿ, ನೀಲಮಣಿ ಧರಿಸುವಾಗ ಪ್ರಮುಖವಾಗಿ ಮೂರು ರತ್ನಗಳಿಂದ ದೂರವಿರಬೇಕಾಗುತ್ತದೆ.

ಮಾಣಿಕ್ಯ ರತ್ನವನ್ನು ಜೊತೆಯಾಗಿ ಧರಿಸಬೇಡಿ:

ಮಾಣಿಕ್ಯ ರತ್ನವು ಗ್ರಹಗಳ ರಾಜನಾದ ಸೂರ್ಯನನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಸೂರ್ಯ ಮತ್ತು ಶನಿ ತಂದೆ-ಮಗನ ಸಂಬಂಧವನ್ನು ಹೊಂದಿದ್ದರೂ, ಪರಸ್ಪರ ಕಡು ಶತ್ರುಗಳಾಗಿದ್ದಾರೆ. ಆದ್ದರಿಂದ ನೀಲಮಣಿ ಮತ್ತು ಮಾಣಿಕ್ಯವನ್ನು ಒಟ್ಟಿಗೆ ಧರಿಸುವುದು ಜ್ಯೋತಿಷ್ಯದಲ್ಲಿ ವಿರುದ್ಧಚಿಹ್ನೆಯನ್ನು ಹೊಂದಿದೆ. ಈ ಎರಡು ರತ್ನಗಳನ್ನು ಜೊತೆಯಾಗಿ ಧರಿಸುವುದರಿಂದ ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಮಾನ-ಗೌರವಕ್ಕೆ ಧಕ್ಕೆ ಬರಬಹುದು. ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಉಂಟಾಗುವುದರ ಜೊತೆಗೆ ಆರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ.

ಮುತ್ತು ಧರಿಸಬೇಡಿ:

ಮುತ್ತು ಮನಸ್ಕಾರಕನಾದ ಚಂದ್ರ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಶನಿ ಮತ್ತು ಚಂದ್ರ ಗ್ರಹಗಳ ನಡುವೆ ತೀವ್ರ ವೈರತ್ವವಿದೆ. ಇವೆರಡರ ಸಂಯೋಜನೆಯನ್ನು ಜ್ಯೋತಿಷ್ಯದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನೀಲಮಣಿಯೊಂದಿಗೆ ಮುತ್ತನ್ನು ಧರಿಸುವುದರಿಂದ ಮನಸ್ಸಿನ ಶಾಂತಿ ಸಂಪೂರ್ಣವಾಗಿ ಹಾಳಾಗುತ್ತದೆ. ಇದು ವ್ಯಕ್ತಿಯಲ್ಲಿ ವಿಪರೀತ ಮಾನಸಿಕ ಒತ್ತಡ, ನಕಾರಾತ್ಮಕ ಆಲೋಚನೆಗಳು ಮತ್ತು ಖಿನ್ನತೆಯನ್ನು (Depression) ಉಂಟುಮಾಡಬಹುದು.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಹವಳದ ಧರಿಸುವಿಕೆಯಿಂದ ಆರ್ಥಿಕ ನಷ್ಟದ ಭೀತಿ:

ಹವಳವು ಧೈರ್ಯ ಮತ್ತು ಶಕ್ತಿಯ ಸಂಕೇತವಾದ ಮಂಗಳ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿದೆ. ಮಂಗಳ ಮತ್ತು ಶನಿ ಪರಸ್ಪರ ವಿರುದ್ಧ ಸ್ವಭಾವದ ಗ್ರಹಗಳಾಗಿರುವುದರಿಂದ, ಇವೆರಡರ ರತ್ನಗಳ ಸಮಾಗಮ ಒಳ್ಳೆಯದಲ್ಲ. ನೀಲಮಣಿಯೊಂದಿಗೆ ಹವಳವನ್ನು ಧರಿಸುವುದರಿಂದ ವ್ಯಕ್ತಿಯ ಸ್ವಭಾವದಲ್ಲಿ ಆಕ್ರಮಣಕಾರಿ ಗುಣ ಮತ್ತು ಸಿಟ್ಟು ವಿಪರೀತವಾಗಿ ಹೆಚ್ಚಾಗುತ್ತದೆ. ಮಾತು ಮತ್ತು ವರ್ತನೆಯ ಮೇಲಿನ ನಿಯಂತ್ರಣ ತಪ್ಪಿ, ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ನಂಬಲಾಗಿದೆ.

ನೀಲಮಣಿಯೊಂದಿಗೆ ಧರಿಸಬಹುದಾದ ಶುಭ ರತ್ನಗಳು:

ಶನಿ ದೇವನಿಗೆ ಮಿತ್ರ ಗ್ರಹಗಳಾದ ಬುಧ, ಶುಕ್ರ ಮತ್ತು ರಾಹುವಿನ ರತ್ನಗಳನ್ನು ನೀಲಮಣಿಯೊಂದಿಗೆ ಧರಿಸುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ. ಬುಧನ ರತ್ನವಾದ ಪಚ್ಚೆ (Emerald), ಶುಕ್ರನ ರತ್ನವಾದ ವಜ್ರ (Diamond) ಮತ್ತು ರಾಹುವಿನ ರತ್ನವಾದ ಗೋಮೇಧಿಕವನ್ನು (Hessonite) ನೀಲಮಣಿಯೊಂದಿಗೆ ಧರಿಸಬಹುದು. ಈ ರತ್ನಗಳ ಸಂಯೋಜನೆಯು ವ್ಯಕ್ತಿಗೆ ಭೌತಿಕ ಸೌಕರ್ಯಗಳು, ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಅಭೂತಪೂರ್ವ ಯಶಸ್ಸು ಹಾಗೂ ಅಪಾರ ಸಂಪತ್ತನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವರುಣನ ಅಬ್ಬರಕ್ಕೆ ದಾವಣಗೆರೆಯಲ್ಲಿ ಅಲ್ಲೋಲ ಕಲ್ಲೋಲ: ಅಡಿಕೆ ತೋಟ ಸರ್ವನಾಶ

ದಾವಣಗೆರೆ, ಮೇ 17: ಜಿಲ್ಲೆಯ ಹಲವೆಡೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯು ವ್ಯಾಪಕ ಅವಾಂತರಕ್ಕೆ ಕಾರಣವಾಗಿದೆ. ಬೇಸಿಗೆ ಮಳೆಯು ಆಲಿಕಲ್ಲು ಸಹಿತ ಅಪ್ಪಳಿಸಿದ್ದು, ಗಾಳಿಯ ರಭಸಕ್ಕೆ ದೇವಸ್ಥಾನದ ತಗಡಿನ ಶೀಟ್‌ಗಳು ಹಾರಿಹೋಗಿವೆ. ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಬಿರುಗಾಳಿ ಮತ್ತು ಮಳೆಯಿಂದ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ. ಬಸವಾಪಟ್ಟಣ ಗ್ರಾಮದ ಶಾಂತಗೌಡರು ಎಂಬುವರ ತೋಟದಲ್ಲಿ ಅರ್ಧ ಎಕರೆಯಷ್ಟು ಅಡಿಕೆ ಮರಗಳು ಬುಡ ಸಮೇತ ಕಿತ್ತು ಬಿದ್ದಿವೆ. ಹತ್ತಾರು ವರ್ಷಗಳಿಂದ ಫಲ ನೀಡುತ್ತಿದ್ದ ಅಡಿಕೆ ಮರಗಳು ನೆಲಸಮಗೊಂಡಿರುವುದು ರೈತರಿಗೆ ಆರ್ಥಿಕ ನಷ್ಟ ಉಂಟುಮಾಡಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಮಳೆಯಿಂದ ಉಂಟಾದ ಹಾನಿಯ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

20 ಸಿಕ್ಸ್​… ಅಲೆನ್ ಆರ್ಭಟಕ್ಕೆ ಹೊಸ ಇತಿಹಾಸ ನಿರ್ಮಾಣ!

Source link

Video: ಶ್ರೀಮದ್ ಭಾಗವತ ಸಪ್ತಾಹ; ಗಾಯಕನ ಗಾಯನಕ್ಕೆ ಮನಸೋತು ಹಣದ ಮಳೆ ಸುರಿಸಿದ ಭಕ್ತರು! – Kannada News | Viral Junagadh Dayro: Millions Showered on Gopal Sadhu for Girls’ Education Charity

ಜೂನಾಗಢ್: ಸಾಂಪ್ರದಾಯಿಕ ಗುಜರಾತಿ ‘ಡಾಯ್ರೋ’ (Dayro) ಕಾರ್ಯಕ್ರಮವೊಂದರಲ್ಲಿ ಜನಪ್ರಿಯ ಗಾಯಕರೊಬ್ಬರ ಮೇಲೆ ಭಕ್ತರು ಅಪಾರ ಪ್ರಮಾಣದ ಹಣದ ನೋಟುಗಳನ್ನು ಸುರಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಖಂಭಾಲಿಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾರಪೂರ್ತಿಯ ‘ಶ್ರೀಮದ್ ಭಾಗವತ್ ಸಪ್ತಾಹ’ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಸಂಗೀತ, ಕಥಾವಾಚನ, ಹಾಸ್ಯ ಮತ್ತು ಭಕ್ತಿಗೀತೆಗಳ ಮಿಶ್ರಣವಿರುವ ಗುಜರಾತ್‌ನ ಸಾಂಪ್ರದಾಯಿಕ ‘ಡಾಯ್ರೋ’ ಶೈಲಿಯ ಪ್ರದರ್ಶನ ನೀಡುತ್ತಿದ್ದ ಖ್ಯಾತ ಗಾಯಕ ಗೋಪಾಲ್ ಸಾಧು ಅವರ ಮೇಲೆ ಭಕ್ತರು ಕಂತೆ ಕಂತೆ ಹಾಗೂ ಚೀಲಗಟ್ಟಲೆ ನೋಟುಗಳನ್ನು ಸುರಿದಿದ್ದಾರೆ.

ನೋಟಿನ ರಾಶಿಯ ನಡುವೆಯೂ ನಿಲ್ಲದ ಗಾಯನ:

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್‌ನಲ್ಲಿ, ಗಾಯಕ ಗೋಪಾಲ್ ಸಾಧು ಅವರು ಹಾರ್ಮೋನಿಯಂ ನುಡಿಸುತ್ತಾ ಅತ್ಯಂತ ಶಾಂತಚಿತ್ತರಾಗಿ ಹಾಡುವುದನ್ನು ಮುಂದುವರಿಸಿರುವುದು ಕಂಡುಬಂದಿದೆ. ಅವರ ಸುತ್ತಲೂ 10, 20, 50, 100 ಹಾಗೂ 500 ರೂ. ಮುಖಬೆಲೆಯ ನೋಟುಗಳು ಮಳೆಯಂತೆ ಸುರಿದು ದೊಡ್ಡ ಬೆಟ್ಟದಂತೆ ರಾಶಿ ಬಿದ್ದಿದ್ದವು. ಒಂದು ಹಂತದಲ್ಲಂತೂ ಹಣದ ರಾಶಿ ಎಷ್ಟು ಹೆಚ್ಚಾಯಿತೆಂದರೆ, ಗಾಯಕ ಬಹುತೇಕ ಆ ನೋಟುಗಳ ಅಡಿಯಲ್ಲೇ ಮುಳುಗಿಹೋಗಿದ್ದಾರೆ. ಆದರೂ ತಮ್ಮ ಗಾಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ!

ದಾನ ಕಾರ್ಯಕ್ಕೆ ಬಳಕೆಯಾಗಲಿದೆ ಕೋಟ್ಯಂತರ ಹಣ:

ಅಹೀರ್ ಸಮಾಜದ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಘಟಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗುಜರಾತ್‌ನ ಜಾನಪದ ಸಂಗೀತ ಕೂಟಗಳಲ್ಲಿ ಕಲಾವಿದರನ್ನು ಗೌರವಿಸುವ ಈ ಸಾಂಪ್ರದಾಯಿಕ ಪದ್ಧತಿಯನ್ನು ‘ಉಚ್ಚಮ್ನಿ’ (Uchchamni) ಎಂದು ಕರೆಯಲಾಗುತ್ತದೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಸಂಪೂರ್ಣ ಹಣವನ್ನು ಅಹೀರ್ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್ ಸೌಲಭ್ಯಕ್ಕಾಗಿ ಅಹಮದಾಬಾದ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಗುಜರಾತ್ ಅಹೀರ್ ಕನ್ಯಾ ಛಾತ್ರಾಲಯ’ ಯೋಜನೆಗೆ ದೇಣಿಗೆಯಾಗಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧಾರ! – Kannada News | IPL 2026: 10 Matches, 8 Teams, 4 Playoff Spots

IPL 2026: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಠಿಣ ಪ್ಲೇಆಫ್ ರೇಸ್‌ಗೆ 2026ರ ಸೀಸನ್ ಸಾಕ್ಷಿಯಾಗಿದೆ. ಲೀಗ್​ ಹಂತದ 60 ಪಂದ್ಯಗಳು ಮುಗಿದರೂ ಇನ್ನೂ ಕೂಡ ಯಾವುದೇ ತಂಡದ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ಉಳಿದಿರುವ ಕೊನೆಯ 10 ಲೀಗ್ ಪಂದ್ಯಗಳು 8 ತಂಡಗಳ ಭವಿಷ್ಯವನ್ನು ನಿರ್ಧರಿಸಲಿವೆ. ಈಗಾಗಲೇ ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ.

ಇದೀಗ 8 ತಂಡಗಳ ನಡುವೆ 4 ಸ್ಥಾನಗಳಿಗಾಗಿ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಈ ವಾರದೊಳಗೆ ಪ್ಲೇಆಫ್ ಆಡಲಿರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.

8 ತಂಡಗಳ ಪ್ಲೇಆಫ್  ಸಮೀಕರಣಗಳು:

  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – ಅಂಕಗಳು: 16
  •  ಉಳಿದಿರುವ ಪಂದ್ಯಗಳು: 2 (vs PBKS, SRH)
  • ಸಮೀಕರಣ: ಹಾಲಿ ಚಾಂಪಿಯನ್ಸ್ ಆರ್‌ಸಿಬಿ ಸದ್ಯ ಅತ್ಯುತ್ತಮ ನೆಟ್ ರನ್ ರೇಟ್ (+1.053) ಹೊಂದಿದೆ. ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದರೂ ಪ್ಲೇಆಫ್ ಆಡುವುದು ಖಚಿತವಾಗಲಿದೆ. ಎರಡೂ ಪಂದ್ಯ ಗೆದ್ದರೆ ಟಾಪ್-2 ಸ್ಥಾನ ಸಿಗಲಿದೆ.

  • ಗುಜರಾತ್ ಟೈಟಾನ್ಸ್ (GT) – ಅಂಕಗಳು: 16
  • ಉಳಿದಿರುವ ಪಂದ್ಯ: 1 (vs CSK)
  • ಸಮೀಕರಣ: ಗುಜರಾತ್ ಟೈಟಾನ್ಸ್ ಈಗಾಗಲೇ 13 ಪಂದ್ಯಗಳನ್ನು ಆಡಿದ್ದು 16 ಅಂಕ ಗಳಿಸಿದೆ. ಕೊನೆಯ ಪಂದ್ಯವನ್ನು ಗೆದ್ದರೆ ಪ್ಲೇಆಫ್ ಜೊತೆಗೆ ಟಾಪ್-2 ರೇಸ್‌ನಲ್ಲಿ ಉಳಿಯಲಿದೆ. ಒಂದು ವೇಳೆ ಸೋತರೆ ಪ್ಲೇಆಫ್​ಗೇರಲು ಇತರ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.
  • ಸನ್‌ರೈಸರ್ಸ್ ಹೈದರಾಬಾದ್ (SRH) – ಅಂಕಗಳು: 14
  • ಉಳಿದಿರುವ ಪಂದ್ಯಗಳು: 2 (vs CSK, RCB)
  • ಸಮೀಕರಣ: ಎಸ್‌ಆರ್‌ಹೆಚ್ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ಸುಲಭವಾಗಿ 18 ಅಂಕಗಳೊಂದಿಗೆ ಕ್ವಾಲಿಫೈ ಆಗಲಿದೆ. ಒಂದು ಪಂದ್ಯ ಗೆದ್ದು 16 ಅಂಕ ಗಳಿಸಿದರೂ ಉತ್ತಮ ರನ್ ರೇಟ್ ನೆರವಿನಿಂದ ಪ್ಲೇಆಫ್​ಗೇರುವ ಅವಕಾಶ ಇದೆ.
  • ಪಂಜಾಬ್ ಕಿಂಗ್ಸ್ (PBKS) – ಅಂಕಗಳು: 13
  •  ಉಳಿದಿರುವ ಪಂದ್ಯಗಳು: 2 (vs RCB, LSG)
  • ಸಮೀಕರಣ: ಸತತ 5 ಸೋಲುಗಳಿಂದ ಕಂಗಾಲಾಗಿರುವ ಪಂಜಾಬ್ ಕಿಂಗ್ಸ್​ ತಂಡಕ್ಕೆ ಇನ್ನುಳಿದ ಪಂದ್ಯಗಳು ‘ಡೂ ಆರ್ ಡೈ ಮ್ಯಾಚ್’. ಪಂಜಾಬ್ ಪಡೆ 17 ಅಂಕ ತಲುಪಲು ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ಸೋತರೆ ರೇಸ್‌ನಿಂದ ಹೊರಬೀಳುವ ಆತಂಕವಿದೆ.
  • ರಾಜಸ್ಥಾನ್ ರಾಯಲ್ಸ್ (RR) – ಅಂಕಗಳು: 12
  • ಉಳಿದಿರುವ ಪಂದ್ಯಗಳು: 3 (vs DC, LSG, MI)
  • ಸಮೀಕರಣ: ರಾಜಸ್ಥಾನ್ ರಾಯಲ್ಸ್​ ಕೈಯಲ್ಲಿ ಇನ್ನೂ 3 ಪಂದ್ಯಗಳಿವೆ. ಈ ಮೂರನ್ನೂ ಗೆದ್ದರೆ ಯಾವುದೇ ಅಡೆತಡೆಯಿಲ್ಲದೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.
  •  ಚೆನ್ನೈ ಸೂಪರ್ ಕಿಂಗ್ಸ್ (CSK) – ಅಂಕಗಳು: 12
  • ಉಳಿದಿರುವ ಪಂದ್ಯಗಳು: 2 (vs SRH, GT)
  • ಸಮೀಕರಣ: ಸಿಎಸ್​ಕೆ ತಂಡವು  ಪ್ಲೇಆಫ್ ಆಸೆಯನ್ನು ಜೀವಂತವಾಗಿಡಲು ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು 16 ಅಂಕ ಗಳಿಸಬೇಕು. ಹಾಗೆಯೇ ಇತರ ತಂಡಗಳ ಸೋಲನ್ನು ಸಹ ಎದುರು ನೋಡಬೇಕು.
  • ಕೋಲ್ಕತ್ತಾ ನೈಟ್ ರೈಡರ್ಸ್ (KKR) – ಅಂಕಗಳು: 11
  • ಉಳಿದಿರುವ ಪಂದ್ಯಗಳು: 2 (vs MI, DC)
  • ಸಮೀಕರಣ: ಕೆಕೆಆರ್ ಗರಿಷ್ಠ 15 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯ. ಪ್ಲೇಆಫ್ ತಲುಪುವ ಸಾಧ್ಯತೆ ಕೇವಲ 3.6% ರಷ್ಟಿದ್ದು, ಪವಾಡಗಳು ಸಂಭವಿಸಿದರೆ ಮಾತ್ರ ಕೊಲ್ಕತ್ತಾ ನೈಟ್ ರೈಡರ್ಸ್​ ಮುಂದಿನ ಹಂತಕ್ಕೇರಬಹುದು.
  • ಡೆಲ್ಲಿ ಕ್ಯಾಪಿಟಲ್ಸ್ (DC) – ಅಂಕಗಳು: 10
  • ಉಳಿದಿರುವ ಪಂದ್ಯಗಳು: 2 (vs RR, KKR)
  • ಸಮೀಕರಣ: ಡೆಲ್ಲಿ ಕ್ಯಾಪಿಟಲ್ಸ್​ ತಂಡ ಉಳಿದಿರುವ 2 ಮ್ಯಾಚ್​ಗಳನ್ನು ಗೆದ್ದರೂ ಗರಿಷ್ಠ 14 ಅಂಕ ತಲುಪಬಹುದು. ಆದರೆ ಅತ್ಯಂತ ಕಳಪೆ ನೆಟ್ ರನ್ ರೇಟ್ (-0.993) ಹೊಂದಿರುವುದರಿಂದ ಇವರ ಪ್ಲೇಆಫ್ ಕನಸು ಬಹುತೇಕ ಅಂತ್ಯವಾಗಿದೆ ಎನ್ನಬಹುದು.

ಇದನ್ನೂ ಓದಿ: IPL 2026: ಇಂದಿನ  ಪಂದ್ಯಕ್ಕೂ RCB ತಂಡದ ಸ್ಟಾರ್ ಆಟಗಾರ ಅಲಭ್ಯ!

ಇನ್ನು 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದ್ದು, ಇದಾಗ್ಯೂ ಈ ತಂಡಗಳ ವಿರುದ್ಧದ ಫಲಿತಾಂಶಗಳು ಇತರೆ ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧರಿಸಲಿದೆ.

Published On – 10:32 am, Sun, 17 May 26

Source link

ಇಂಧನ ಬೆಲೆ ಮತ್ತಷ್ಟು ಹೆಚ್ಚಳ: ತಜ್ಞರಿಂದ 8ರಿಂದ 10 ರೂಪಾಯಿ ಏರಿಕೆ ಬಗ್ಗೆ ಭವಿಷ್ಯ – Kannada News | Fuel Price Hike: Experts Warn of Eight to Ten Rupee Increase Amid Global Oil Crisis

ಬೆಂಗಳೂರು, ಮೇ 17: ಇಂಧನ ಬೆಲೆ ಏರಿಕೆ ದೇಶದಲ್ಲಿ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪೆಟ್ರೋಲ್ ಮತ್ತು ಡಿಸೇಲ್ ದರಗಳು ಲೀಟರ್‌ಗೆ ಮೂರು ರೂಪಾಯಿ ಏರಿಕೆಯಾಗಿರುವ ಬೆನ್ನಲ್ಲೇ, ಸಿಎನ್‌ಜಿ ಬೆಲೆಯು ಸಹ ಕಳೆದ ಎರಡು ದಿನಗಳಲ್ಲಿ ಒಟ್ಟು ಮೂರು ರೂಪಾಯಿ ಹೆಚ್ಚಾಗಿದೆ. ಆದರೆ, ತಜ್ಞರ ಪ್ರಕಾರ, ಈ ಏರಿಕೆ ಕೇವಲ ಆರಂಭವಷ್ಟೇ. ಜಾಗತಿಕ ತೈಲ ಬಿಕ್ಕಟ್ಟು ಮತ್ತು ಬೆಲೆ ಏರಿಕೆಯ ಪ್ರವೃತ್ತಿ ಗಮನಿಸಿದರೆ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಬರುವ ದಿನಗಳಲ್ಲಿ ಎಂಟರಿಂದ ಹತ್ತು ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಈ ಇಂಧನ ಬೆಲೆ ಏರಿಕೆಯು ಕೇವಲ ವಾಹನ ಸವಾರರ ಮೇಲೆ ಮಾತ್ರವಲ್ಲದೆ, ಇಡೀ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಡಿಸೇಲ್ ಬೆಲೆ ಹೆಚ್ಚಳದಿಂದ ಸರಕು ಸಾಗಣೆ ವಾಹನಗಳ ವೆಚ್ಚ ಗಣನೀಯವಾಗಿ ಏರಿಕೆಯಾಗಲಿದ್ದು, ಇದು ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ಪೆಟ್ರೋಲಿಯಂ ಇಲಾಖೆಯ ಪ್ರಕಾರ, ಭಾರತದಲ್ಲಿ ಪ್ರತಿದಿನ ಕನಿಷ್ಠ 55 ಲಕ್ಷ ಬ್ಯಾರೆಲ್ ಕಚ್ಚಾ ತೈಲಕ್ಕೆ ಬೇಡಿಕೆಯಿದ್ದು, ಸದ್ಯ 65 ದಿನಗಳಿಗೆ ಸಾಕಾಗುವಷ್ಟು ಪೆಟ್ರೋಲ್ ಮತ್ತು ಡಿಸೇಲ್ ಸಂಗ್ರಹವಿದೆ. ಈ ಪರಿಸ್ಥಿತಿಯು ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟ ತರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಔಷಧಗಳ ಬೆಲೆಯೂ ಏರಿಕೆ!

ಬೆಂಗಳೂರು, ಮೇ 17: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನ ಸಾಮಾನ್ಯರಿಗೆ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಈಗ ಬಿಪಿ, ಶುಗರ್ ಸೇರಿದಂತೆ ದಿನಬಳಕೆಯ ಔಷಧಿಗಳ ಬೆಲೆಯೂ ಶೇ 15 ರಿಂದ 20 ರಷ್ಟು ದುಬಾರಿಯಾಗುವ ಆತಂಕ ಎದುರಾಗಿದೆ . ಮಾತ್ರೆಗಳ ಫಾಯಿಲ್ಸ್ ತಯಾರಿಕೆಗೆ ಪೆಟ್ರೋ ಕೆಮಿಕಲ್ ಅತ್ಯಗತ್ಯವಾಗಿದ್ದು, ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಇದರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಹಳೆಯ ಎಂಆರ್‌ಪಿ ದರದಲ್ಲೇ ಔಷಧಿಗಳು ಸಿಗುತ್ತಿದ್ದರೂ, ಮುಂದಿನ ದಿನಗಳಲ್ಲಿ ಕಚ್ಚಾ ವಸ್ತುಗಳ ಕೊರತೆಯಿಂದ ಬೆಲೆ ಹೆಚ್ಚಾಗುವ ಭೀತಿ ಇದೆ ಎಂದು ಮೆಡಿಕಲ್ ವಿತರಕರು ತಿಳಿಸಿದ್ದಾರೆ. ಸಾಗಾಣಿಕೆ ವೆಚ್ಚವೂ ಹೆಚ್ಚುತ್ತಿರುವುದರಿಂದ ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನೈಜ ಘಟನೆಗಳ ಆಧಾರಿತ ‘ಬೇಲ್’ ಸಿನಿಮಾ ಟೀಸರ್; ಗಮನ ಸೆಳೆದ ಶಿವಣ್ಣ ಲುಕ್ – Kannada News | Shiva Rajkumar starrer Bail Kannada movie teaser by Pavan Wadeyar KVN Productions

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ (Shiva Rajkumar) ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಪಾತ್ರಗಳ ಮೂಲಕ ಅಭಿಮಾನಿಗಳ ಎದುರು ಬರುತ್ತಾರೆ. ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಆ ಪೈಕಿ ಕನ್ನಡದ ‘ಬೇಲ್’ ಸಿನಿಮಾ (Bail Kannada Movie) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಎಂಬುದು ವಿಶೇಷ. ಈಗ ‘ಬೇಲ್’ ಸಿನಿಮಾದ ಟೀಸರ್ (Bail Teaser) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶಿವರಾಜ್​ಕುಮಾರ್ ಅವರ ಲುಕ್ ರಿವೀಲ್ ಆಗಿದೆ. ಅಭಿಮಾನಿಗಳಿಗೆ ಶಿವಣ್ಣನ ಈ ಲುಕ್ ಇಷ್ಟ ಆಗಿದೆ.

‘ಬೇಲ್’ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್​ನಿಂದ ನಿರೀಕ್ಷೆ ಜಾಸ್ತಿ ಆಗಿದೆ. ಇದರಲ್ಲಿ ಶಿವರಾಜ್​ಕುಮಾರ್ ಅವರು ಖಡಕ್ ಡೈಲಾಗ್ ಹೊಡೆದಿದ್ದಾರೆ. ಇದು ಪಕ್ಕಾ ಮಾಸ್ ಸಿನಿಮಾ ಎಂಬುದು ಸ್ಪಷ್ಟವಾಗಿದೆ.

‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ‘ಬೇಲ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಟೀಸರ್​ನಲ್ಲಿ ಅದ್ದೂರಿತನ ಕಾಣಿಸುತ್ತಿದೆ. ಈ ಚಿತ್ರದಲ್ಲಿ ಶಿವಣ್ಣ ಅವರು ವಿಜಿ ಎಂಬ ಪಾತ್ರ ಮಾಡುತ್ತಿದ್ದಾರೆ. ‘ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವತ್ತೂ ಆಗೋದಿಲ್ಲ’ ಎಂಬ ಡೈಲಾಗ್ ಈಗ ಟ್ರೆಂಡ್ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ‘ಬೇಲ್’ ಸಿನಿಮಾ ಬಿಡುಗಡೆ ಆಗಲಿದೆ.

‘ಬೇಲ್’ ಸಿನಿಮಾ ಟೀಸರ್:

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರು ಡಿಫರೆಂಟ್ ಸಿನಿಮಾಗಳನ್ನು ನೀಡಿದ್ದಾರೆ. ಸ್ಟಾರ್ ನಟರ ಜೊತೆ ಕೆಲಸ ಮಾಡಿ ಅವರು ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಶಿವರಾಜ್​ಕುಮಾರ್ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಇನ್ನಷ್ಟು ಹೆಚ್ಚಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಚಿತ್ರ ಆದ್ದರಿಂದ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ

ಈಗ ಬಿಡುಗಡೆ ಆಗಿರುವ ಟೀಸರ್ ಗಮನ ಸೆಳೆದಿದೆಯಾದರೂ ಚಿತ್ರದ ಕಥೆ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಈ ಸಣ್ಣ ತುಣುಕಿನಿಂದ ಕಥೆ ಬಗ್ಗೆ ಕುತೂಹಲ ಡಬಲ್ ಆಗಿದೆ. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version