Headlines

ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್ – Kannada News | Lawyer Balan said Pavithra Gowda have higher chance of getting bail

ನಟ ದರ್ಶನ್ (Darshan), ಸುಪ್ರೀಂಕೋರ್ಟ್​​ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ನಿರಾಕರಣೆಗೊಂಡಿದೆ. ಸಾಕ್ಷ್ಯಗಳ ವಿಚಾರಣೆ ಬೇಗ ಮುಗಿಸಿ, ಒಂದೊಮ್ಮೆ ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ಮುಗಿದಿಲ್ಲವಾದರೆ ಜಾಮೀನು ಅರ್ಜಿಯನ್ನು ಪರಿಶೀಲಿಸಬಹುದು ಎಂದಿದೆ ಸುಪ್ರೀಂಕೋರ್ಟ್. ಇಂದಿನ ಸುಪ್ರೀಂ ತೀರ್ಪಿನ ವಿಶ್ಲೇಷಣೆ ಮಾಡಿರುವ ವಕೀಲ ಬಾಲನ್ ಅವರು, ದರ್ಶನ್ ಅವರಿಗಿಂತಲೂ ಪವಿತ್ರಾ ಗೌಡ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಿದೆ. ಮಹಿಳೆ ಮತ್ತು ಸಿಂಗಲ್ ಪೇರೆಂಟ್ ಆಗಿರುವ ಅವರು ಜಾಮೀನಿಗೆ ಪ್ರಯತ್ನಿಸಿದರೆ ಜಾಮೀನು ಸಿಗಬಹುದು ಎಂದಿದ್ದಾರೆ. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ…

Read More

ಹಳೆಯ ನೋವು ಮುಂದೆ ಆರ್ಥ್ರೈಟಿಸ್‌ಗೆ ಕಾರಣವಾಗುತ್ತದೆಯೇ? ಏನ್ ಹೇಳ್ತಾರೆ ತಜ್ಞರು – Kannada News | Preventing Arthritis After Injury: Orthopedic Tips For Long Term Joint Health

ಎಲುಬಿಗಾದ ಹಳೆಯ ನೋವು ಅಥವಾ ಗಾಯವನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಿದರೆ ಮುಂದೆ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹೌದು, ಆರೋಗ್ಯ ತಜ್ಞರ ಪ್ರಕಾರ ಫ್ರ್ಯಾಕ್ಚರ್ (Fracture), ಲಿಗಮೆಂಟ್ ಹಾನಿ (Ligament injury) ಅಥವಾ ಜಾಯಿಂಟ್ ಇಂಜುರಿ (Joint injury) ಆದಾಗ ಸರಿಯಾದ ಚಿಕಿತ್ಸೆ ಪಡೆಯದೇ ಇದ್ದರೆ, ಮುಂದಿನ ದಿನಗಳಲ್ಲಿ ಆರ್ಥ್ರೈಟಿಸ್‌ (Arthritis) ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲಿಯೂ ಹಲವರು ಗಾಯವಾದ ನಂತರ ಕೆಲ ದಿನ ವಿಶ್ರಾಂತಿ ಪಡೆದು ಮತ್ತೆ ಸಾಮಾನ್ಯ ಚಟುವಟಿಕೆಗೆ…

Read More

ಪ್ರಧಾನಿಯ ಬೆಂಗಾವಲು ಪಡೆಯನ್ನು ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ ಸಮಂತ್ ಗೋಯಲ್ – Kannada News | Not right to reduce PM Modi’s security amid austerity measures Former RAW chief Samant Goel says

ನವದೆಹಲಿ, ಮೇ 15: ಭಾರತದಲ್ಲಿ ಉಂಟಾಗಿರುವ ಇಂಧನದ ಬಿಕ್ಕಟ್ಟನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ವಾಹನಗಳ ಬಳಕೆಯನ್ನು ಕಡಿಮೆಗೊಳಿಸಲು ಸೂಚಿಸಿದ್ದರು. ಪ್ರಧಾನಿ ಮೋದಿ ಕೂಡ ತಮ್ಮ ಬೆಂಗಾವಲು ಪಡೆಯ ಪ್ರಮಾಣವನ್ನು ಕಡಿಮೆಗೊಳಿಸಿದ್ದರು. ಈ ಬಗ್ಗೆ ಭಾರತದ ಮಾಜಿ ಬಾಹ್ಯ ಗುಪ್ತಚರ ಸಂಸ್ಥೆ ರಾ (RAW) ಮುಖ್ಯಸ್ಥ ಸಮಂತ್ ಗೋಯಲ್ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಸ್ತುತ ಅಂತಾರಾಷ್ಟ್ರೀಯ ಭದ್ರತಾ ಪರಿಸ್ಥಿತಿ ಅಸ್ಥಿರವಾಗಿದೆ. ಅಮೆರಿಕವನ್ನು ಸುರಕ್ಷಿತ ದೇಶವೆಂದು ಪರಿಗಣಿಸಿದ್ದರೂ ಅದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ 3…

Read More

ಬೈನಾನ್ಸ್ ಸೆಕ್ಯೂರಿಟಿ ಗೈಡ್: ಹ್ಯಾಕರ್‌ಗಳಿಂದ ನಿಮ್ಮ ಕ್ರಿಪ್ಟೋ ರಕ್ಷಿಸಲು 7 ಸಲಹೆಗಳು – Kannada News | Secure the Crypto trading in Binance using these 7 tools

ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ (Crypto currency trading) ಸುರಕ್ಷತೆಯು ಅತ್ಯಂತ ಮುಖ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಹ್ಯಾಕಿಂಗ್ ನಡೆಯುವುದು ಪ್ಲಾಟ್‌ಫಾರ್ಮ್‌ನ ತಪ್ಪಿನಿಂದಲ್ಲ, ಬದಲಿಗೆ ಬಳಕೆದಾರರ ನಿರ್ಲಕ್ಷ್ಯದಿಂದ. ಬೈನಾನ್ಸ್‌ನಲ್ಲಿ (Binance) ಸುರಕ್ಷಿತವಾಗಿರಲು ಹೆಚ್ಚಿನ ಮಂದಿಗೆ ತಿಳಿಯದ ಕೆಲ ಟ್ರಿಕ್ಸ್​ಗಳಿವೆ. ಈ ಕೆಳಗಿನ 7 ಸೆಕ್ಯೂರಿಟಿ ಟೂಲ್‌ಗಳನ್ನು ಬಳಸಿದರೆ ಕ್ರಿಪ್ಟೋ ವ್ಯವಹಾರ ಸುರಕ್ಷಿತವಾಗಿರುತ್ತದೆ. ಬೈನಾನ್ಸ್ ಅಥೆಂಟಿಕೇಟರ್ (Binance Authenticator): ಕೇವಲ SMS OTP ಮೇಲೆ ಅವಲಂಬಿತರಾಗಬೇಡಿ, ಏಕೆಂದರೆ ‘ಸಿಮ್ ಸ್ವಾಪ್’ ಹಗರಣಗಳು ನಡೆಯುತ್ತಿವೆ. ಅಥೆಂಟಿಕೇಟರ್ ಆಪ್ ಬಳಸುವುದು ಹೆಚ್ಚು ಸುರಕ್ಷಿತ. ಆಂಟಿ-ಫಿಶಿಂಗ್ ಕೋಡ್…

Read More

ನಾನು ಸಿಎಂ ಆಗ್ಲಾ? ಎಂದವನ ಬಂಡವಾಳ ಬಯಲು: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್ – Kannada News | Investment Scam: Shivanand Neelannavar Accused in 4,500 Crore Fraud; House and Office Seized

ಶಿವಾನಂದ ನೀಲಣ್ಣವರ್Image Credit source: tv9 kannada ಬೆಳಗಾವಿ, ಮೇ 15: ಮಾಜಿ ಸೈನಿಕರು ಹಾಗೂ ಸಾರ್ವಜನಿಕರ ಕೋಟ್ಯಂತರ ರೂ ಹಣ ದುರಪಯೋಗವಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಶಿವಂ ಅಸೋಸಿಯೇಟ್ಸ್ (Shivam Associates) ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್​​ ಎಂಬಾತ ಯಾವುದೇ ನಿಯಮಗಳನ್ನು ಪಾಲಿಸದೆ, ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಬರೋಬ್ಬರಿ 40 ರಿಂದ 45 ಸಾವಿರ ಜನರಿಂದ ಅಂದಾಜು 4,500 ಕೋಟಿ ರೂ ಹೂಡಿಕೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದ್ದು, ಸದ್ಯ ಶಿವಾನಂದ ನೀಲಣ್ಣವರ್​​ ಮನೆ…

Read More

ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಲಾರಿ ಡಿಕ್ಕಿ; ಇಬ್ಬರು ಪವಾಡಸದೃಶ ಪಾರು

ಕೊಪ್ಪಳ, ಮೇ 15: ಟ್ಯಾಂಕರ್​​ ಗುದ್ದಿದ ಪರಿಣಾಮ ಸೇತುವೆಯಿಂದ ಟ್ರ್ಯಾಕ್ಟರ್​​ ಬಿದ್ದು ಮಗು ಸೇರಿ 6 ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಅದೇ ತುಂಗಭದ್ರಾ ಸೇತುವೆ ಮೇಲೆ ಮತ್ತೊಂದು ಅಪಘಾತ ನಡೆದಿದೆ. ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್​​ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ಸಂಬಂಧ ಲಾರಿ ಚಾಲಕನನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಕೇವಲ ಹಾಲು, ತರಕಾರಿಗಾಗಿ ಪ್ರಾಣದ ಹಂಗು ತೊರೆದು ಕಳ್ಳರೊಂದಿಗೆ ಹೋರಾಡಿದ ಮಹಿಳೆ – Kannada News | Viral: Woman’s Brave Fight for Milk Exposes India’s Deep Economic Hardship

ಸಮಾಜದಲ್ಲಿ ಆರ್ಥಿಕ ಸಂಕಷ್ಟ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಈ ಘಟನೆ ಸಾಕ್ಷಿಯಾಗಿದೆ. ಕೇವಲ ಒಂದು ಲೀಟರ್ ಹಾಲು, ಕೆಲವು ತರಕಾರಿಗಳು ಮತ್ತು ಜೇಬಿನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಬೈಕ್‌ನಲ್ಲಿ ಬಂದ ಸರಗಳ್ಳರೊಂದಿಗೆ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮಹಿಳೆಯು ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಆ ಬ್ಯಾಗ್‌ನಲ್ಲಿ…

Read More

ಭೋಜಶಾಲಾ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಲಿದೆ; ಓವೈಸಿ ವಿಶ್ವಾಸ – Kannada News | Owaisi calls Bhojshala Temple verdict similar to Babri Mosque judgment

ನವದೆಹಲಿ, ಮೇ 15: ಮಧ್ಯಪ್ರದೇಶ ಹೈಕೋರ್ಟ್ ಭೋಜಶಾಲಾ ವಿವಾದಿತ ಪ್ರದೇಶವನ್ನು ಸರಸ್ವತಿ ದೇವಿಯ ದೇವಾಲಯವೆಂದು ಘೋಷಿಸಿದ್ದಕ್ಕೆ AIMIM ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಬಾಬ್ರಿ ಮಸೀದಿ ತೀರ್ಪಿನಂತೆಯೇ ಇದೆ ಎಂದು ಹೇಳಿರುವ ಅವರು ಸುಪ್ರೀಂ ಕೋರ್ಟ್ ಈ ತೀರ್ಪನ್ನು ರದ್ದುಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ಭೋಜಶಾಲಾ ತೀರ್ಪು ಮತ್ತು ರಾಮ ಜನ್ಮಭೂಮಿ ಮಂದಿರ-ಬಾಬ್ರಿ ಮಸೀದಿ ಪ್ರಕರಣದ ತೀರ್ಪಿನ ನಡುವೆ ಸ್ಪಷ್ಟವಾದ ಹೋಲಿಕೆಗಳು ಇವೆ…

Read More

ವೈದ್ಯೋ ನಾರಾಯಣೋ ಹರಿಃ: ನವಜಾತ ಶಿಶುವಿಗೆ ಮರುಜೀವ ನೀಡಿದ ವೈದ್ಯೆ – Kannada News | Life Returns in Saharanpur: How a Doctor’s Instinct and Bravery Saved a Dying Baby

ಸಹಾರನ್‌ಪುರ, ಮೇ,15 : ಉತ್ತರ ಪ್ರದೇಶದ ಸಹಾರನ್‌ಪುರದ ನಾನೋಟಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪವಾಡವೊಂದು ನಡೆದಿದೆ. ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಉಸಿರಾಟ ನಿಲ್ಲಿಸಿ ಸಾವಿನ ಅಂಚಿನಲ್ಲಿದ್ದ ನವಜಾತ ಶಿಶುವಿಗೆ ವೈದ್ಯೆಯೊಬ್ಬರು ತಮ್ಮ ಉಸಿರನ್ನೇ ನೀಡಿ ಮರುಜೀವ ಕೊಟ್ಟಿದ್ದಾರೆ. ನಾನೋಟಾ ಕೇಂದ್ರದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹುಟ್ಟಿದ ತಕ್ಷಣ ಮಗು ಉಸಿರಾಡುತ್ತಿರಲಿಲ್ಲ. ಆಸ್ಪತ್ರೆಯಲ್ಲಿದ್ದ ಆಮ್ಲಜನಕದ ಯಂತ್ರ (Oxygen Machine) ಕೆಲಸ ಮಾಡದಿದ್ದಾಗ ಅಲ್ಲಿನ ವಾತಾವರಣದಲ್ಲಿ ಗಾಬರಿ ಮತ್ತು ನಿಶ್ಯಬ್ದ ಆವರಿಸಿತು. ಇಂತಹ ಕ್ಲಿಷ್ಟ ಸಮಯದಲ್ಲಿ ಡಾ….

Read More

IPL 2026: ಆರ್​ಸಿಬಿಗೆ ಎಂಟ್ರಿಕೊಟ್ಟ ಇಂಗ್ಲೆಂಡ್ ವೇಗಿ; ಸಿಎಸ್​ಕೆ ತಂಡಕ್ಕೆ ಕುಲ್ದೀಪ್‌ ಯಾದವ್ ಸೇರ್ಪಡೆ – Kannada News | IPL 2026 Player Changes: Kuldeep Yadav Joins CSK, Richard Gleeson Boosts RCB

2026 ರ ಐಪಿಎಲ್‌ನ (IPL 2026) ಲೀಗ್ ಹಂತಕ್ಕೆ ಇನ್ನೇನು ತೆರೆ ಬೀಳಲಿದೆ. ಅದಾದ ಬಳಿಕ ಪ್ಲೇಆಫ್ ಸುತ್ತು ಶುರುವಾಗಲಿದೆ. ಆದಾಗ್ಯೂ ಈವರೆಗೆ ಯಾವ ತಂಡಕ್ಕೂ ಪ್ಲೇಆಫ್ ಟಿಕೆಟ್ ಸಿಕ್ಕಿಲ್ಲ. ಕೆಲವು ತಂಡಗಳ ಸ್ಥಾನ ಖಚಿತವಾದರೂ ಇನ್ನು ಕೆಲವು ತಂಡಗಳು ತೀವ್ರಪೈಪೋಟಿ ನಡೆಸುತ್ತಿವೆ. ಅಂತಹ ತಂಡಗಳಲ್ಲಿ ಆರ್​ಸಿಬಿಗೆ (RCB) ಪ್ಲೇಆಫ್ ಸ್ಥಾನ ಭಾಗಶಃ ಖಚಿತವಾಗಿದ್ದರೆ, ಇತ್ತ ಸಿಎಸ್​ಕೆಗೂ (CSK) ಪ್ಲೇಆಫ್​ಗೇರುವ ಅವಕಾಶವಿದೆ. ಇದೀಗ ಈ ಎರಡೂ ತಂಡಗಳಿಗೆ ಹೊಸ ಆಟಗಾರರ ಆಗಮನವಾಗಿದೆ. ವಾಸ್ತವವಾಗಿ ಈ ಸೀಸನ್​ನಲ್ಲಿ ಆಟಗಾರರ…

Read More