Headlines

IND vs NZ: ಟಿ20 ವಿಶ್ವಕಪ್ ಫೈನಲ್ ಯಾವ ಚಾನೆಲ್​ನಲ್ಲಿ ನೇರಪ್ರಸಾರ? ಉಚಿತವಾಗಿ ವೀಕ್ಷಿಸುವುದು ಹೇಗೆ?

2026 ರ ಟಿ20 ವಿಶ್ವಕಪ್‌ನ ಫೈನಲ್ (T20 World Cup Final 2026) ಕೊನೆಯ ಹಂತ ತಲುಪಿದೆ. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕಾಯುವಿಕೆಗೆ ಅಂತ್ಯ ಹಾಡಲು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣವು (Narendra Modi Stadium) ಸಜ್ಜಾಗಿದೆ. ಮಾರ್ಚ್ 8 ರ ಭಾನುವಾರದಂದು ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ಟ್ರೋಫಿ ಎತ್ತಿಹಿಡಿಯುವ ಸಲುವಾಗಿ ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಈ ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಇಲ್ಲಿಯವರೆಗೆ, ಐಸಿಸಿ ಈವೆಂಟ್‌ಗಳ…

Read More

ವಿಚ್ಛೇದನ, ತ್ರಿಷಾ ಬಗ್ಗೆ ಮೊದಲ ಬಾರಿ ಮಾತನಾಡಿದ ವಿಜಯ್

ದಳಪತಿ ವಿಜಯ್ (Thalapathy Vijay) ರಾಜಕೀಯ ಪಕ್ಷ ಸ್ಥಾಪಿಸಿದ್ದು, ತಮಿಳುನಾಡು ಚುನಾವಣೆಗೆ ಸಜ್ಜಾಗುತ್ತಿದ್ದಾರೆ, ತಮ್ಮ ಪಕ್ಷವನ್ನು ಸಜ್ಜು ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ದಳಪತಿ ವಿಜಯ್ ಅವರ ಖಾಸಗಿ ಬದುಕಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಲು ಆರಂಭಿಸಿವೆ. ವಿಜಯ್ ಅವರ ಪತ್ನಿ ಹಠಾತ್ತನೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ, ವಿಜಯ್​​ಗೆ ನಟಿಯೊಬ್ಬರೊಟ್ಟಿಗೆ ಸಂಬಂಧ ಇದೆ ಎಂದು ವಿಜಯ್ ಪತ್ನಿ ಆರೋಪಿಸಿದ್ದಾರೆ. ವಿಚ್ಛೇದನದ ಸುದ್ದಿ ಬಹಿರಂಗ ಆಗುತ್ತಿದ್ದಂತೆ ವಿಜಯ್ ಮತ್ತು ತ್ರಿಷಾ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ಅದೂ ಸಹ ಸಖತ್ ಸುದ್ದಿ ಆಗುತ್ತಿದೆ….

Read More

T20 World Cup 2026: ಫೈನಲ್​ಗಾಗಿಯೇ ವಿಶೇಷವಾಗಿ ಸಿದ್ಧವಾಗಿದೆ ಅಹಮದಾಬಾದ್‌ ಪಿಚ್

2026 ರ ಟಿ20 ವಿಶ್ವಕಪ್‌ನ ಫೈನಲ್ (2026 T20 World Cup Final) ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ಸಜ್ಜಾಗಿದೆ. ಆತಿಥೇಯ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ನಡೆಯಲಿರುವ ಈ ಪಂದ್ಯವೂ ಕೂಡ ಹೈಸ್ಕೋರಿಂಗ್ ಪಂದ್ಯವಾಗಲಿದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಏಕಂದರೆ ಮೋದಿ ಕ್ರೀಡಾಂಗಣದ ಪಿಚ್ ಅನ್ನು ಫೈನಲ್ ಪಂದ್ಯಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಹೀಗಾಗಿ ಫೈನಲ್ ಪಂದ್ಯವೂ ಕೂಡ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಸೆಮಿಫೈನಲ್‌…

Read More

ಇದು ರಾಷ್ಟ್ರಪತಿಗೆ ಮಾಡಿದ ಅವಮಾನ: ದೀದಿ ಸರ್ಕಾರ ಎಲ್ಲಾ ಮಿತಿಗಳನ್ನು ಮೀರಿದೆ ಎಂದ ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ, ಮಾ.7: ಸಿಲಿಗುರಿ ಸಮೀಪದ ಬಿಧಾನ್ನಗರದಲ್ಲಿ ಆಯೋಜಿಸಲಾಗಿದ್ದ 9ನೇ ಅಂತರಾಷ್ಟ್ರೀಯ ಸ್ಯಾಂತಾಲ್ (Santal) ಸಮ್ಮೇಳನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಉಂಟಾದ ಕಹಿ ಅನುಭವದ ಕುರಿತು ಪ್ರಧಾನಿ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮ್ಮೇಳನದ ವೇದಿಕೆಯನ್ನು ಕೊನೆಯ ಕ್ಷಣದಲ್ಲಿ ಸಣ್ಣ ಜಾಗಕ್ಕೆ ಬದಲಾಯಿಸಿದ್ದಕ್ಕೆ ರಾಷ್ಟ್ರಪತಿಗಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. “ಸ್ಯಾಂತಾಲ್ ಸಮುದಾಯವು ಒಗ್ಗೂಡುವುದು ಯಾರಿಗೋ ಇಷ್ಟವಿಲ್ಲದಂತಿದೆ” ಎಂದು ಅವರು ಮಾರ್ಮಿಕವಾಗಿ ನುಡಿದರು. ದೇಶದ ಪ್ರಥಮ ಪ್ರಜೆ ರಾಜ್ಯಕ್ಕೆ ಭೇಟಿ ನೀಡಿದಾಗ ಮುಖ್ಯಮಂತ್ರಿಗಳು ಸ್ವಾಗತಿಸುವುದು ಸಂಪ್ರದಾಯ. ಆದರೆ…

Read More

ವಾರೆವ್ಹಾ..! ಬೆಂಗಳೂರಿನಲ್ಲಿ ಓದಿದ ಹುಡುಗ ನೇಪಾಳದ ಮುಂದಿನ ಪ್ರಧಾನಿ

ಕಾಠ್ಮಂಡು, ಮಾ.7: ಕಳೆದ ವರ್ಷ ನಡೆದ ತೀವ್ರ ಸ್ವರೂಪದ ‘ಜೆನ್-ಜಿ’ (Gen Z) ಪ್ರತಿಭಟನೆಗಳ ನಂತರ ನಡೆದ ನೇಪಾಳದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ದೊಡ್ಡ ರಾಜಕೀಯ ಕ್ರಾಂತಿ ಸಂಭವಿಸಿದೆ. ರಾಪರ್ ಹಾಗೂ ಇಂಜಿನಿಯರ್ ಆಗಿದ್ದ, ಕಾಠ್ಮಂಡುವಿನ ಮಾಜಿ ಮೇಯರ್ ಬಲೇಂದ್ರ ಶಾ ಅವರ ನೂತನ ಪಕ್ಷವಾದ ಆರ್‌ಎಸ್‌ಪಿ (RSP) ಕ್ಲೀನ್ ಸ್ವೀಪ್ ಮಾಡುವತ್ತ ಹೆಜ್ಜೆ ಹಾಕಿದೆ. ಇನ್ನು ಬಲೇಂದ್ರ ಶಾ ಹಾಗೂ ಕರ್ನಾಟಕಕ್ಕೂ ಒಂದು ಸಂಬಂಧವಿದೆ. ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್…

Read More

ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್

ಬಿಗ್​​ಬಾಸ್​ (Bigg Boss) ಇಂದಾಗಿ ಜನಪ್ರಿಯತೆ ಗಳಿಸಿರುವ ಡಾಗ್ ಸತೀಶ್ ಅಲಿಯಾಸ್ ಕ್ಯಾಡಬಾಮ್ ಸತೀಶ್ ಇತ್ತೀಚೆಗಷ್ಟೆ ರಜತ್ ಮತ್ತು ವಿನಯ್ ವಿರುದ್ಧ ದೂರು ನೀಡಿದ್ದರು, ಮಾತ್ರವಲ್ಲದೆ ರಜತ್ ಕಿಶನ್ ಎಂಬುವರು ಸಹ ದೂರು ನೀಡಿದ್ದು ರಜತ್ ವಿರುದ್ಧ ಎಫ್​​ಐಆರ್ ಸಹ ದಾಖಲಾಗಿದೆ. ಸುದೀಪ್ ಅವರ ಹಾಡನ್ನು ಇನ್​​ಸ್ಟಾಗ್ರಾಂ ವಿಡಿಯೋಕ್ಕೆ ಹಾಕಿಕೊಂಡಿದ್ದಕ್ಕೆ ರಜತ್ ಮತ್ತು ವಿನಯ್, ಸತೀಶ್ ಅವರಿಗೆ ಕಮೆಂಟ್ ಮಾಡಿ ಬೈದಿದ್ದರು. ಇದೀಗ ಘಟನೆ ಬಗ್ಗೆ ಡಾಗ್ ಸತೀಶ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಅಂದು ನಡೆದಿದ್ದೇನು? ವಿನಯ್…

Read More

Video: ಮಮತಾ ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ..ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರ

ಕೋಲ್ಕತ್ತಾ, ಮಾರ್ಚ್​ 07: ರಾಷ್ಟ್ರಪತಿ ದ್ರೌಪದಿ ಮುರ್ಮು ಉತ್ತರ ಬಂಗಾಳಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಂತಾರಾಷ್ಟ್ರೀಯ ಸಂತಾಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳುವುದು ಹಾಗಿರಲಿ ಕಾರ್ಯಕ್ರಮಕ್ಕೂ ಆಗಮಿಸದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ನನ್ನ ತಂಗಿಯಂತೆ, ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ ಎಂದು ಬೇಸರದ ಮಾತುಗಳನ್ನಾಡಿದ್ದಾರೆ. ಬಿಧಾನ್‌ನಗರದಲ್ಲಿ ನಿಗದಿಯಾಗಿದ್ದ ಈ ಕಾರ್ಯಕ್ರಮವನ್ನು ದಟ್ಟಣೆ ಮತ್ತು ಭದ್ರತಾ ಸಮಸ್ಯೆಗಳಿಂದಾಗಿ ಬಾಗ್ಡೋಗ್ರಾ ವಿಮಾನ ನಿಲ್ದಾಣದ ಬಳಿಯ ಗೋಶೈಪುರದ ಸಣ್ಣ ಪ್ರದೇಶಕ್ಕೆ…

Read More

ಬಾಲ್ಯದ ದಿನಗಳಲ್ಲಿ ಕೊಬ್ಬರಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿದ್ರಾಮಯ್ಯ!

ಮೈಸೂರು, (ಮಾರ್ಚ್ 07): ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ಪಿಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಆದಿಶಕ್ತ್ಯಾತ್ಮಕ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಕುಂಭಕಳಶದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಭಾಗವಹಿಸಿದ್ದು, ಇದೇ ವೇಳೆ ತಂಬಿಟ್ಟು, ಕೊಬ್ಬರಿ ಮಿಠಾಯಿ ಬಗ್ಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಚಾಮುಂಡೇಶ್ವರಿ, ವರುಣ ಕ್ಷೇತ್ರದ ಜನರಿಗೆ ಕೃತಜ್ಞತೆಯಿಂದ ಇರುವೆ. ವಿಶೇಷವಾಗಿ ಪಿಲ್ಲಹಳ್ಳಿ ಜನ ಯಾವತ್ತೂ ಕೈಬಿಟ್ಟಿಲ್ಲ. ದೇವರು ದೇವಸ್ಥಾನದ ಒಳಗೆ ಇರುತ್ತಾನೆ ಅನ್ನೋದು ನಂಬಿಕೆ ಅಷ್ಟೇ. ಪೂಜೆ…

Read More

Chanakya Niti: ಯಾವುದೇ ಕಾರಣಕ್ಕೂ ಇಂತಹ ಜನರ ಸಹವಾಸ ಮಾಡಬೇಡಿ ಎಂದಿದ್ದಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು  (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಜೀವನಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಜೊತೆಗೆ  ನಮ್ಮ ಯಶಸ್ಸು ನಮ್ಮ ಕಠಿಣ ಪರಿಶ್ರಮದ ಮೇಲೆ ಮಾತ್ರವಲ್ಲದೆ ನಮ್ಮ ಸಹವಾಸದ ಮೇಲೂ ಅವಲಂಬಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವು ಜನರ ಸಹವಾಸವು ನಮ್ಮ ಭವಿಷ್ಯವನ್ನು ಕತ್ತಲೆಯಾಗಿಸಬಹುದು. ಅಂತಹ ಜನರು ಆಜನ್ಮ ಶತ್ರುಗಳಿದ್ದಂತೆ. ಅಂತಹವರು ನಿಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ನಿಧಾನವಾಗಿ ನಾಶಮಾಡುತ್ತಾರೆ. ಆದ್ದರಿಂದ, ಅಂತಹ ಜನರ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು…

Read More

ಮಾರ್ಚ್ 9ಕ್ಕೆ ನಿರ್ಧಾರವಾಗಲಿದೆ ‘ಜನ ನಾಯಗನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್

ಕೆವಿಎನ್ (KVN) ನಿರ್ಮಾಣ ಸಂಸ್ಥೆ ಇಕ್ಕಟ್ಟಿಗೆ ಸಿಲುಕಿದೆ. ಕೆವಿಎನ್ ನಿರ್ಮಾಣ ಮಾಡಿರುವ ಎರಡು ದೊಡ್ಡ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆ ಮುಂದೂಡಲಾಗಿದೆ. ಕೆವಿಎನ್ ಮತ್ತು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಒಟ್ಟಿಗೆ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಿಂದ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಅದಕ್ಕೆ ಮುಂಚೆಯೇ ಕೆವಿಎನ್ ಅವರೇ ನಿರ್ಮಿಸಿರುವ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ರಾಜಕೀಯ ಕಾರಣಗಳಿಂದಾಗಿ ಬಿಡುಗಡೆ ಆಗದೆ ಡಬ್ಬದಲ್ಲೇ ಕುಳಿತಿದೆ. ಆದರೆ ಇದೀಗ ಮಾರ್ಚ್ 9ಕ್ಕೆ ‘ಜನ ನಾಯಗನ್’…

Read More