NEET UG Paper Leak: ನೀಟ್ ಹಗರಣ ಬಯಲಿಗೆಳೆದ ಹಾಸ್ಟೆಲ್ ಮಾಲೀಕ; ಕೋಟಿ ಕೋಟಿ ಹಗರಣಕ್ಕೆ ಬ್ರೇಕ್ ಹಾಕಿದ ಒಂದು ವಾಟ್ಸಾಪ್ ಸಂದೇಶ! – Kannada News | NEET UG Paper Leak: Sikar Hostel Owner Exposes Scandal, Leads to Exam Cancellation

ನೀಟ್ ಹಗರಣ ಬಯಲಿಗೆಳೆದ ಹಾಸ್ಟೆಲ್ ಮಾಲೀಕImage Credit source: gemini ai

ಸೀಕರ್, ರಾಜಸ್ಥಾನ: ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ನೀಟ್ (NEET-UG) ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ಇಂದು ಪ್ರಶ್ನೆಗಳು ಎದ್ದಿರುವಾಗ, ರಾಜಸ್ಥಾನದ ಸೀಕರ್ ಜಿಲ್ಲೆಯ ಹಾಸ್ಟೆಲ್ ಮಾಲೀಕರೊಬ್ಬರು ದೇಶದ “ರಿಯಲ್ ಹೀರೋ” ಆಗಿ ಹೊರಹೊಮ್ಮಿದ್ದಾರೆ. ಪೊಲೀಸರ ಉದಾಸೀನತೆ ಮತ್ತು ವ್ಯವಸ್ಥೆಯ ಅಡೆತಡೆಗಳ ನಡುವೆಯೂ ಎದೆಗುಂದದ ಇವರ ಹೋರಾಟ, ಇಂದು ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ.

ಟ್ವಿಸ್ಟ್ ಕೊಟ್ಟ ವಾಟ್ಸಾಪ್ ಮೆಸೇಜ್:

ಎಲ್ಲವೂ ಆರಂಭವಾಗಿದ್ದು ಕಳೆದ ಮೇ 2ರ ರಾತ್ರಿ. ಕೇರಳದಲ್ಲಿ ವೈದ್ಯಕೀಯ(MBBS) ಶಿಕ್ಷಣ ಪಡೆಯುತ್ತಿರುವ ಮಗ, ಸೀಕರ್‌ನಲ್ಲಿ ಹಾಸ್ಟೆಲ್ ನಡೆಸುತ್ತಿರುವ ತನ್ನ ತಂದೆಗೆ ವಾಟ್ಸಾಪ್ ಮೂಲಕ ಒಂದು ಪಿಡಿಎಫ್ (PDF) ಫೈಲ್ ಕಳುಹಿಸಿದ್ದನು. “ಇದು ನಾಳಿನ ಪರೀಕ್ಷೆಯ ‘ಗೆಸ್ ಪೇಪರ್’ ಇರಬಹುದು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಓದಲು ಹೇಳಿ” ಎಂಬುದು ಮಗನ ಮುಗ್ಧ ಆಶಯವಾಗಿತ್ತು. ಆದರೆ, ಆ ಒಂದು ಫೈಲ್ ಅಸಲಿ ಪರೀಕ್ಷೆಯ ಹಣೆಬರಹವನ್ನೇ ಬದಲಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಸತ್ಯ ಶೋಧನೆಯ ಹಾದಿ:

ಮರುದಿನ ಬೆಳಿಗ್ಗೆ ಹಾಸ್ಟೆಲ್ ಮಾಲೀಕರು ಆ ಪತ್ರಿಕೆಯನ್ನು ಹಿಡಿದು ವಿದ್ಯಾರ್ಥಿಗಳ ಬಳಿ ಹೋದಾಗ ಅವರು ಈಗಾಗಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಬಳಿಕ ಕುತೂಹಲದಿಂದ ಆ ಪತ್ರಿಕೆಯನ್ನು ಸ್ಥಳೀಯ ರಸಾಯನಶಾಸ್ತ್ರ (Chemistry) ಶಿಕ್ಷಕರೊಬ್ಬರಿಗೆ ತೋರಿಸಿದರು. ಸಂಜೆ ಪರೀಕ್ಷೆ ಮುಗಿದು ಅಸಲಿ ಪತ್ರಿಕೆ ಕೈ ಸೇರಿದಾಗ ಶಿಕ್ಷಕರು ಬೆಚ್ಚಿಬಿದ್ದಿದ್ದರು. ಮಗ ಕಳುಹಿಸಿದ್ದ ಪತ್ರಿಕೆಯಲ್ಲಿದ್ದ 135 ಪ್ರಶ್ನೆಗಳು ಅಸಲಿ ಪರೀಕ್ಷೆಯಲ್ಲಿ ಯಥಾವತ್ತಾಗಿ ಬಂದಿದ್ದವು. ಇದು ಕೇವಲ ಕಾಕತಾಳೀಯವಾಗಿರದೆ, ವ್ಯವಸ್ಥಿತವಾಗಿ ನಡೆದ “ಪೇಪರ್ ಲೀಕ್” ಎಂಬುದು ಸಾಬೀತಾಗಿತ್ತು.

ಪೊಲೀಸರ ನಿರಾಕರಣೆ:

ತಮ್ಮ ಬಳಿ ಇದ್ದ ಸಾಕ್ಷ್ಯಗಳೊಂದಿಗೆ ಹಾಸ್ಟೆಲ್ ಮಾಲೀಕ ಪೊಲೀಸ್​ ಠಾಣೆಯ ಮೆಟ್ಟಿಲೇರಿದರು. ಆದರೆ ಪೊಲೀಸರು ಸಹಾಯ ಮಾಡುವ ಬದಲು, “ಪರೀಕ್ಷೆ ರದ್ದು ಮಾಡಿಸುವ ಉದ್ದೇಶದಿಂದ ನೀವು ಸುಳ್ಳು ಹೇಳುತ್ತಿದ್ದೀರಿ” ಎಂದು ದೂರುದಾರರನ್ನೇ ದಬಾಯಿಸಿ ವಾಪಸ್ ಕಳುಹಿಸಿದ್ದರು. ಈ ಹಂತದಲ್ಲಿ ಯಾರಾದರೂ ಧೃತಿಗೆಡುವುದು ಸಹಜ, ಆದರೆ ಈ ಹಾಸ್ಟೆಲ್ ಮಾಲೀಕ ಮಾತ್ರ ಹಿಂದೆ ಸರಿಯಲಿಲ್ಲ.

ತನಿಖೆಯ ಕಿಚ್ಚು ಹಚ್ಚಿದ ಇಮೇಲ್:

ಪೊಲೀಸರು ಕೈಬಿಟ್ಟರೂ ಹೋರಾಟ ನಿಲ್ಲಿಸದ ಅವರು, ಸೋರಿಕೆಯಾದ ಪತ್ರಿಕೆ ಮತ್ತು ಅಸಲಿ ಪತ್ರಿಕೆಯ ಪ್ರತಿಗಳನ್ನು ಲಗತ್ತಿಸಿ ನೇರವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಇಮೇಲ್ ಮಾಡಿದ್ದಾರೆ. ಈ ಇಮೇಲ್ ನೀಡಿದ ಶಾಕ್‌ನಿಂದ ಎಚ್ಚೆತ್ತ ಎನ್‌ಟಿಎ ತಕ್ಷಣ ತನಿಖೆಗೆ ಆದೇಶಿಸಿತು.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!

ತನಿಖೆಯ ಪ್ರಮುಖ ಅಂಶಗಳು:

ರಾಜಸ್ಥಾನದ ವಿಶೇಷ ಕಾರ್ಯಾಚರಣಾ ತಂಡ (SOG) ಹಗರಣದ ಆಳಕ್ಕೆ ಇಳಿದಾಗ ಇದು ಕೇವಲ ಸೀಕರ್ ಜಿಲ್ಲೆಗೆ ಸೀಮಿತವಾಗಿರದೆ ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರದವರೆಗೂ ಹಬ್ಬಿರುವುದು ಪತ್ತೆಯಾಯಿತು. ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಪ್ರಭಾವಿಗಳಿಗೆ ಮತ್ತು ಶ್ರೀಮಂತ ಅಭ್ಯರ್ಥಿಗಳಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿರುವುದು ಬಯಲಾಯಿತು.

ಅಂತಿಮ ಜಯ ಪರೀಕ್ಷೆ ರದ್ದು:

ಸೋರಿಕೆಯಾದ ಪತ್ರಿಕೆಯ ಪ್ರಶ್ನೆಗಳಿಗೂ ಅಸಲಿ ಪತ್ರಿಕೆಗೂ ಇದ್ದ ಸಾಮ್ಯತೆಯನ್ನು ಅಲ್ಲಗಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಎನ್‌ಟಿಎ ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಹಾಸ್ಟೆಲ್ ಮಾಲೀಕರ ಈ ದಿಟ್ಟ ನಿರ್ಧಾರ ಮತ್ತು ಪ್ರಾಮಾಣಿಕ ಹೋರಾಟದ ಫಲವಾಗಿ ಇಂದು ಬೃಹತ್ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲ ಪತ್ತೆಯಾಗಿದ್ದು, ಲಕ್ಷಾಂತರ ಅರ್ಹ ವಿದ್ಯಾರ್ಥಿಗಳ ಭವಿಷ್ಯಕ್ಕೆ ನ್ಯಾಯ ಸಿಗುವಂತಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡ ಇನ್ಫ್ಲುಯೆನ್ಸರ್ ಬ್ಲ್ಯಾಕ್‌ಮೇಲ್ ಕೇಸ್‌ಗೆ ಬಿಗ್ ಟ್ವಿಸ್ಟ್: ಉದ್ಯಮಿಯ ಕಳ್ಳಾಟ ಬಯಲಿಗೆಳೆದ ಪತ್ನಿ! – Kannada News | Shocking Twist in Kannada Influencer Blackmail Case: Wife Exposes Husband’s Real Face

ಕನ್ನಡ ಇನ್ಫ್ಲುಯೆನ್ಸರ್ ಬ್ಲ್ಯಾಕ್‌ಮೇಲ್ ಕೇಸ್‌ಗೆ ಬಿಗ್ ಟ್ವಿಸ್ಟ್

ಬೆಂಗಳೂರು, ಮೇ 13: ಕನ್ನಡದ ಪ್ರಭಾವಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ 1.5 ಕೋಟಿ ರೂ. ಬ್ಲ್ಯಾಕ್‌ಮೇಲ್ (Blackmail) ಆರೋಪ ಕೇಳಿಬಂದಿತ್ತು. ಆದರೆ ಪ್ರಕರಣವು ಈಗ ಸಿನಿಮಾ ಶೈಲಿಯ ತಿರುವು ಪಡೆದುಕೊಂಡಿದೆ. ತನ್ನ ಪತಿ ಕಾರ್ತಿಕ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸ್ವತಃ ಆತನ ಪತ್ನಿ ಹರ್ಷಿತಾ ಅವರೇ ಪೊಲೀಸರಿಗೆ ಪತ್ರ ಬರೆಯುವ ಮೂಲಕ ಉದ್ಯಮಿಯ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ.

ಮುಖ್ಯಾಂಶಗಳು

  • ಇನ್ಫ್ಲುಯೆನ್ಸರ್ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಪತ್ನಿಯ ದೂರಿನಿಂದ ಸ್ಫೋಟಕ ತಿರುವು ಸಿಕ್ಕಿದೆ
  •  ಪತಿ ಕಾರ್ತಿಕ್ ತನ್ನ ಲೈಂಗಿಕ ಅಕ್ರಮ ಮುಚ್ಚಿಹಾಕಲು ಸುಳ್ಳು ಕಥೆ ಸೃಷ್ಟಿಸಿದ್ದಾನೆ ಎಂದ ಪತ್ನಿ
  •  ಹಲವು ಯುವತಿಯರಿಗೆ ವಂಚಿಸಿರುವ ಕಾರ್ತಿಕ್

ನನ್ನ ಪತಿ ಸುಳ್ಳು ಆರೋಪ ಮಾಡಿದ್ದಾರೆಂದ ಪತ್ನಿ

ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕನೆಂದು ಹೇಳಿಕೊಂಡಿರುವ ಕಾರ್ತಿಕ್, ತನಗೆ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ನನ್ನ ಖಾಸಗಿ ಫೋಟೋಗಳನ್ನು ಪತ್ನಿ ಹರ್ಷಿತಾಗೆ ಕಳುಹಿಸಿದ್ದಲ್ಲದೆ ನನ್ನ ಬಳಿ ಕೋಟಿಗಟ್ಟಲೆ ಹಣ ಕೇಳಿದ್ದಾಳೆ ಎಂದು ಆರೋಪಿಸಿದ್ದ. ಆದರೆ ಈ ಪ್ರಕರಣಕ್ಕೀಗ ಆತನ ಪತ್ನಿಯಿಂದಲೇ ಸ್ಫೋಟಕ ತಿರುವು ಸಿಕ್ಕಿದೆ. ಹರ್ಷಿತಾ ಜಯನಗರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತನ್ನ ಪತಿ ಸೃಷ್ಟಿಸಿರುವ ಬ್ಲ್ಯಾಕ್‌ಮೇಲ್ ಕಥೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಸಾಧನಾ ಶೆಟ್ಟಿ ಯಾವತ್ತೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ನನ್ನ ಪತಿಯೇ ತನ್ನ ಲೈಂಗಿಕ ಅಕ್ರಮಗಳನ್ನು ಮುಚ್ಚಿಹಾಕಲು ಆಕೆಯನ್ನು ಬ್ಲ್ಯಾಕ್‌ಮೇಲರ್ ಎಂದು ಚಿತ್ರಿಸುತ್ತಿದ್ದಾನೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರ್ತಿಕ್ ಒಬ್ಬ ದೊಡ್ಡ ಉದ್ಯಮಿಯೇನಲ್ಲ, ಆತ ಕೇವಲ ತನ್ನ ಕ್ಲಿನಿಕ್‌ನ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ ಕೆಲಸಗಾರ ಅಷ್ಟೇ ಎಂದು ಕ್ಲಿನಿಕ್​ನ ನಿರ್ದೇಶಕಿಯೂ ಆಗಿರುವ ಹರ್ಷಿತಾ ಸತ್ಯ ಬಿಚ್ಚಿಟ್ಟಿದ್ದಾರೆ.

ಕಾರ್ತಿಕ್ ಮನೆಗೆ ಬಂದಿದ್ದ ಸಾಧನಾ

ಮದುವೆಯಾಗುವುದಾಗಿ ನಂಬಿಸಿ ಸಾಧನಾ ಶೆಟ್ಟಿಯನ್ನು ಹೈದರಾಬಾದ್, ಬೆಂಗಳೂರು ಮತ್ತು ಮಾಲ್ಡೀವ್ಸ್‌ಗೆ ಕರೆದೊಯ್ದಿದ್ದ ಕಾರ್ತಿಕ್, ಆಕೆಗಾಗಿ ಹೈದರಾಬಾದ್​ನಲ್ಲಿ ಪಿಜಿ ವ್ಯವಸ್ಥೆಯನ್ನೂ ಮಾಡಿದ್ದ. ಆದರೆ ಆತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ 2025ರ ಆಗಸ್ಟ್ 8ರಂದು ಕಾರ್ತಿಕ್ ನಿವಾಸಕ್ಕೆ ಆಗಮಿಸಿದ್ದ ಇನ್ಪುಯೆನ್ಸರ್ ಸಾಧನಾ, ಆತ ನನಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆಂದು ಕುಟುಂಬಸ್ಥರ ಮುಂದೆ ಆರೋಪಿಸಿದ್ದಳು. ಈ ವೇಳೆ ನಮ್ಮ ಬಳಿ ಹಣವಿದೆ ಎಂದು ಅವಳು ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಕಾರ್ತಿಕ್ ತನ್ನ ಪತ್ನಿಯನ್ನು ನಂಬಿಸಿದ್ದ.

ಇದನ್ನೂ ಓದಿ ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಆರೋಪ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು

ಕಾರ್ತಿಕ್ ಮಾಸ್ಟರ್ ಪ್ಲ್ಯಾನ್

ಸಾಧನಾ ಏನಾದರೂ ಪೊಲೀಸರಿಗೆ ದೂರು ನೀಡಿದರೆ ಕಷ್ಟ ಎಂದು ಅರಿತ ಕಾರ್ತಿಕ್, ಆಕೆಯನ್ನೇ ಸಿಲುಕಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ತನ್ನ ಸ್ನೇಹಿತರ ಸಹಾಯದಿಂದ ಆಕೆಯ ಫೋನ್ ಕಳವು ಮಾಡಿಸಿ, ವಾಪಸ್ ನೀಡಿದ್ದಲ್ಲದೆ ಸಾಧನಾಗೆ ಹಲವು ಬಾರಿ ಬೆದರಿಕೆ ಕರೆಯನ್ನೂ ಮಾಡಿದ್ದ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆಂದು ಕತೆಯನ್ನೂ ಕಟ್ಟಿದ್ದ. ಇಷ್ಟೆಲ್ಲಾ ಆದ ನಂತರ ಪತಿ ಬದಲಾಗಿದ್ದಾನೆಂದು ಹರ್ಷಿತಾ ನಂಬಿದ್ದರು.

ಉದ್ಯಮಿಯ ಕರಾಳ ಮುಖ ಬಯಲು

ಆದರೆ ಸಾಧನಾ ಕಳುಹಿಸಿದ ಸಾಕ್ಷ್ಯಗಳನ್ನು ನೋಡಿದ ಬಳಿಕ ಹರ್ಷಿತಾ ಕೂಡ ಕಂಗಾಲಾಗಿದ್ದರು. ಕಾರ್ತಿಕ್ ಕೇವಲ ಸಾಧನಾ ಮಾತ್ರವಲ್ಲದೆ ಇನ್ನೂ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿರುವುದು ಅವರಿಗೆ ಯುವತಿಯಿಂದ ತಿಳಿದುಬಂತು. ನಂತರ ಎರಡು ತಿಂಗಳಿಂದ ಪತಿಯಿಂದ ದೂರವಿದ್ದ ಆಕೆ, ಪ್ರಕರಣ ಸಂಬಂಧ ಮಾಹಿತಿ ಕೇಳಿದ ಪೊಲೀಸರ ಮುಂದೆ ಪತಿಯ ಕರಾಳ ಮುಖ ಬಯಲಿಗೆಳೆದಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಜಯನಗರ ಪೊಲೀಸರು, ಕರ್ನಾಟಕ ಮತ್ತು ತೆಲಂಗಾಣ ಡಿಐಜಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹರ್ಷಿತಾ ರವಾನಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಪವಾರ್ ವಿಮಾನ ಅಪಘಾತಕ್ಕೀಡಾದ ಬಾರಾಮತಿಯ ಗ್ರಾಮದಲ್ಲೇ ಮತ್ತೊಂದು ವಿಮಾನ ಪತನ – Kannada News | Baramati Plane Crash: Training Aircraft Crashes in the Same Village Where Ajit Pawar Lost His Life

ಬಾರಾಮತಿಯ ಗೋಜ್‌ಬಾಬಿ ಗ್ರಾಮದ ಬಳಿ ರೆಡ್‌ಬರ್ಡ್ ಕಂಪನಿಯ ತರಬೇತಿ ವಿಮಾನ ಪತನImage Credit source: TV9 Network

ಮುಂಬೈ, ಮೇ 13: ಮಹಾರಾಷ್ಟ್ರದ (Maharashtra) ಬಾರಾಮತಿಯಲ್ಲಿ ಮತ್ತೆ ವಿಮಾನ ದುರಂತ ಸಂಭವಿಸಿದೆ. ಈ ವರ್ಷದ ಆರಂಭದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರಿದ್ದ ವಿಮಾನ ಅಪಘಾತಕ್ಕೀಡಾಗಿದ್ದ ಅದೇ ಗ್ರಾಮದ ವ್ಯಾಪ್ತಿಯಲ್ಲೇ ಬುಧವಾರ ತರಬೇತಿ ವಿಮಾನವೊಂದು ಪತನಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಬಾರಾಮತಿಯ ಗೋಜ್‌ಬಾಬಿ ಗ್ರಾಮದ ಬಳಿ ರೆಡ್‌ಬರ್ಡ್ ಕಂಪನಿಯ ತರಬೇತಿ ವಿಮಾನ ಪತನ.
  • ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪೈಲಟ್; ವಿಮಾನಕ್ಕೆ ಭಾರಿ ಹಾನಿ.
  • ಅಜಿತ್ ಪವಾರ್ ಅವರು ಮೃತಪಟ್ಟಿದ್ದ ಅದೇ ಸ್ಥಳದಲ್ಲಿ ನಡೆದ ಮತ್ತೊಂದು ವಿಮಾನ ದುರಂತ.

ಬಾರಾಮತಿಯ ಗೋಜ್‌ಬಾಬಿ ಗ್ರಾಮದ ಬಳಿ ತರಬೇತಿ ನಿರತ ವಿಮಾನ ಪತನಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇದು ‘ರೆಡ್‌ಬರ್ಡ್’ ವಿಮಾನಯಾನ ಸಂಸ್ಥೆಗೆ ಸೇರಿದ ತರಬೇತಿ ವಿಮಾನವಾಗಿದ್ದು, ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪತನವಾಗಿದೆ ಎಂಬುದು ತಿಳಿದುಬಂದಿದೆ. ವಿಮಾನಕ್ಕೆ ಭಾರಿ ಹಾನಿಯಾಗಿದೆ. ಆದಾಗ್ಯೂ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಜಿತ್ ಪವಾರ್ ವಿಮಾನ ಪತನದ ಕರಾಳ ನೆನಪು

ಇದೇ ವರ್ಷದ ಜನವರಿ 28 ರಂದು ಮಹಾರಾಷ್ಟ್ರದ ಪ್ರಭಾವಿ ನಾಯಕ ಅಜಿತ್ ಪವಾರ್ ಅವರಿದ್ದ ಚಾರ್ಟರ್ ವಿಮಾನವು ಇದೇ ಗ್ರಾಮದ ವ್ಯಾಪ್ತಿಯಲ್ಲಿ ಪತನಗೊಂಡಿತ್ತು. ಆ ಭೀಕರ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಜಿತ್ ಪವಾರ್ ಮೃತಪಟ್ಟ ಅದೇ ಸ್ಥಳದಲ್ಲಿ ಈಗ ಮತ್ತೊಂದು ವಿಮಾನ ಬಿದ್ದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ: ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಹೇಗೆ? ತನಿಖೆಯಲ್ಲಿ ಬಯಲಾದ ಸಂಗತಿಗಳಿವು

ಬಾರಾಮತಿಯಲ್ಲಿ ಪೈಲಟ್ ತರಬೇತಿ ನೀಡುವ ಪ್ರಮುಖ ಸಂಸ್ಥೆಗಳಲ್ಲಿ ರೆಡ್‌ಬರ್ಡ್ ಕೂಡ ಒಂದು. ಆದರೆ, ಈ ಹಿಂದೆಯೂ ಈ ಸಂಸ್ಥೆಯ ವಿಮಾನಗಳು ಪದೇ ಪದೇ ಅಪಘಾತಕ್ಕೀಡಾಗಿದ್ದರಿಂದ ಇದರ ಮೇಲೆ ನಿಷೇಧ ಹೇರಲಾಗಿತ್ತು. ಇಲ್ಲಿನ ರನ್‌ವೇಗಳು ‘ಟೇಬಲ್ ಟಾಪ್’ ಮಾದರಿಯಲ್ಲಿದ್ದು, ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್‌ಗಳ ಜಾಣ್ಮೆ ಅತ್ಯಂತ ಮುಖ್ಯವಾಗಿರುತ್ತದೆ ಎಂದು ಎನ್‌ಸಿಪಿ ಶಾಸಕ ಅನಿಲ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಘಟನೆ ಬಗ್ಗೆ ಡಿಜಿಸಿಎ ತನಿಖೆ ಆರಂಭಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs KKR ಪಂದ್ಯವನ್ನೇಕೆ ‘ಎಲ್​ ಪ್ರಿಮೊರೊ’ ಮ್ಯಾಚ್ ಎಂದು ಕರೆಯಲಾಗುತ್ತೆ? – Kannada News | Why is RCB vs KKR Match called ‘El Primero’ of IPL?

ವರ್ಷ 2008, ಏಪ್ರಿಲ್ 18ರ ರಾತ್ರಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಅಂದು ಕೇವಲ ಒಂದು ಕ್ರಿಕೆಟ್ ಪಂದ್ಯ ನಡೆಯುತ್ತಿರಲಿಲ್ಲ, ಬದಲಾಗಿ ವಿಶ್ವ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಲಿರುವ ‘ಇಂಡಿಯನ್ ಪ್ರೀಮಿಯರ್ ಲೀಗ್‘ (IPL) ಎಂಬ ಮಹಾಕ್ರಾಂತಿಗೆ ಮುನ್ನುಡಿ ಬರೆಯಲಾಗುತ್ತಿತ್ತು. ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು.

ಅಂದು ಶುರುವಾದ ಉಭಯ ತಂಡಗಳ ಪೈಪೋಟಿ 19ನೇ ಸೀಸನ್​ನಲ್ಲೂ ಮುಂದುವರೆದಿದೆ. ಆದರೆ ಇದೀಗ ಈ ಪೈಪೋಟಿಯನ್ನು ಎಲ್​ ಪ್ರಿಮೆರೊ ಎಂದು ಕರೆಯಲಾಗುತ್ತಿದೆ. ಅಷ್ಟಕ್ಕೂ ಆರ್​ಸಿಬಿ ಮತ್ತು ಕೆಕೆಆರ್​ ನಡುವಣ ಪಂದ್ಯವನ್ನು ಎಲ್ ಪ್ರಿಮೆರೊ ಎಂದು ಏಕೆ ಕರೆಯಲಾಗುತ್ತೆ ಎಂದು ನೋಡುವುದಾದರೆ…

‘ಎಲ್ ಪ್ರಿಮೆರೊ’ (El Primero) ಸ್ಪ್ಯಾನಿಷ್ ಭಾಷೆಯಲ್ಲಿ “ಮೊದಲನೆಯದು” ಎಂದರ್ಥ. ಐಪಿಎಲ್ ಇತಿಹಾಸದ ಮೊಟ್ಟಮೊದಲ ಪಂದ್ಯ ಇದಾದ ಕಾರಣ ಇದಕ್ಕೆ ಈ ಹೆಸರು ಬಂದಿದೆ. ಈ ಹೆಸರು ಹೆಚ್ಚು ಪ್ರಚಲಿತವಾಗಲು ಕಾರಣ ಉಭಯ ತಂಡಗಳ ನಡುವಣ ಪೈಪೋಟಿ.

ಏಕೆಂದರೆ ಉಭಯ ತಂಡಗಳು ಈವರೆಗೆ 36 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 20 ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದರೆ, 15 ಮ್ಯಾಚ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಅಂದರೆ ಉಭಯ ತಂಡಗಳ ತಂಡಗಳ ನಡುವೆ ಸಮಬಲದ ಹೋರಾಟ ಕಂಡು ಬಂದಿರುವುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿ.

ಅದರಲ್ಲೂ ಇಂಟ್ರೆಸ್ಟಿಂಗ್ ಎಂದರೆ ಎರಡೂ ತಂಡಗಳು ಪರಸ್ಫರ 200+ ಸ್ಕೋರ್​ಗಳಿಸಿದೆ. ಹಾಗೆಯೇ ಉಭಯ ತಂಡಗಳು 100 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.

  • ಆರ್​ಸಿಬಿ ಕೆಕೆಆರ್ ವಿರುದ್ಧ ಕೇವಲ 49 ರನ್​ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ದಾಖಲೆ ಬರೆದಿದೆ.
  • ಕೆಕೆಆರ್ ತಂಡವು ಆರ್​ಸಿಬಿ ವಿರುದ್ಧ 84 ರನ್​ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

ಇದನ್ನೂ ಓದಿ: RCB vs KKR ಪಂದ್ಯಕ್ಕೆ 5 ಆಟಗಾರರು ಅಲಭ್ಯ!

ಇದರ ನಡುವೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಿದ್ದಾಜಿದ್ದಿಗೂ ಆರ್​ಸಿಬಿ ಮತ್ತು ಕೆಕೆಆರ್ ಪಂದ್ಯಗಳು ಸಾಕ್ಷಿಯಾಗಿದ್ದವು. ಈ ಎಲ್ಲಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯಗಳು ಅಭಿಮಾನಿಗಳ ಹಾಟ್ ಫೇವರೇಟ್ ಆಗಿ ಮಾರ್ಪಟ್ಟಿತ್ತು.

ಇದೀಗ ಉಭಯ ತಂಡಗಳು ಬದಲಾಗಿದೆ. ಈ ಬದಲಾವಣೆಯೊಂದಿಗೆ ಎಲ್​ ಪ್ರಿಮೆರೊ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅದು ಕೂಡ ದೂರದ ರಾಯ್​ಪುರ್​ನಲ್ಲಿ. ಅಂದರೆ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ರಾಯ್​ಪುರ್​ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅದರಂತೆ ಈ ಬಾರಿಯ ಮುಖಾಮುಖಿಯಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

Video: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ – Kannada News | A little girl who spoke to the calf, video goes viral

ಪುಟಾಣಿಗಳು (little girl) ಏನು ಮಾಡಿದ್ರು ಮುದ್ದಾಗಿ ಕಾಣುತ್ತಾರೆ. ಅಪ್ಪ ಅಮ್ಮನನ್ನು ಮುದ್ದಿಸುವ ರೀತಿ ನೋಡುವುದೇ ಚಂದ. ಕೆಲವೊಮ್ಮೆ ಈ ಪುಟಾಣಿಗಳು ತಮ್ಮ ನಡೆ ನುಡಿ, ಮಾತಿನಿಂದಲೇ ಎಲ್ಲರಿಗೂ ಇಷ್ಟವಾಗಿ ಬಿಡುತ್ತಾರೆ. ಆದರೆ ಇದೀಗ ಈ ಪುಟಾಣಿ ಕರುವಿನ ಜತೆಗೆ ಸಂಭಾಷಣೆಗೆ ಇಳಿದಿದೆ. ನಿನ್ನ ಹೆಸರೇನು ಎನ್ನುತ್ತಾ ಕರುವಿನ ಜತೆಗೆ ಮಾತನಾಡಲು ಶುರು ಮಾಡಿದೆ. ಈ ಮುಗ್ಧತೆ ತುಂಬಿದ ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

lifewithdevisha ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮುಗ್ಧ ಮನಸ್ಸುಗಳ ನಡುವಿನ ಶುದ್ಧ ಸಂಭಾಷಣೆಯನ್ನು ಕಾಣಬಹುದು. ಪುಟಾಣಿಯೊಂದು ಕರುವಿನ ಜತೆಗೆ ಮಾತಿಗಿಳಿಗಿದೆ. ಕರುವಿನ ಮುಂದೆ ಕುಳಿತು ನಿನ್ನ ಹೆಸರೇನು ಎಂದು ಕೇಳುತ್ತಿದ್ದಂತೆ ಕರುವು ಮಾತ್ರ ಅತ್ತಿಂದ ಇತ್ತ ನೋಡುತ್ತಾ ಕುಳಿತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮನೆಯಂಗಳಕ್ಕೆ ಬಂದ ನವಿಲಿಗೆ ಕ್ಲಾಸ್ ತೆಗೆದುಕೊಂಡ ಪುಟಾಣಿ, ಮುಂದೇನಾಯ್ತು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಾನು ಬಾಲ್ಯದಲ್ಲಿ ಹೀಗೆಯೇ ಇದ್ದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಹೆಸರು ಕ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ.. ಮತ್ತೊಬ್ಬರು, ಮುಗ್ಧ ಮನಸ್ಸುಗಳು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಜಿಲಾಕರ್ ಬಳಕೆಯಲ್ಲಿ ಕರ್ನಾಟಕ ಟಾಪ್! ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿ ಗೌರವ – Kannada News | Karnataka Wins National Award for Best DigiLocker Integration Initiatives 2026

ಡಿಜಿಲಾಕರ್ ಬಳಕೆಯಲ್ಲಿ ಕರ್ನಾಟಕ ಟಾಪ್!

ಬೆಂಗಳೂರು, ಮೇ 13: ಡಿಜಿಟಲ್ ಇಂಡಿಯಾ ಅಭಿಯಾನದಡಿ ಸಾರ್ವಜನಿಕ ಸೇವೆಗಳನ್ನು ಸರಳಗೊಳಿಸುವಲ್ಲಿ ಕರ್ನಾಟಕ ರಾಜ್ಯವು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಡಿಜಿಲಾಕರ್ (Digilocker) ಏಕೀಕರಣ ಮತ್ತು ಅನುಷ್ಠಾನದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕವನ್ನು ರಾಷ್ಟ್ರೀಯ ಮಟ್ಟದಲ್ಲಿ ಸನ್ಮಾನಿಸಿದೆ.

ಮುಖ್ಯಾಂಶಗಳು

  •  ಡಿಜಿಲಾಕರ್ ಏಕೀಕರಣದಲ್ಲಿ ಕರ್ನಾಟಕಕ್ಕೆ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.
  •  ರಾಜ್ಯದ 2.7 ಕೋಟಿ ನಾಗರಿಕರು ಸಕ್ರಿಯವಾಗಿ ಡಿಜಿಲಾಕರ್ ಬಳಸುತ್ತಾ ಮುಂಚೂಣಿಯಲ್ಲಿದ್ದಾರೆ.
  •  ಶೇಕಡಾ 73 ರಷ್ಟು ಸರ್ಕಾರಿ ಸೇವೆಗಳು ಈಗ ಡಿಜಿಲಾಕರ್‌ನಲ್ಲಿ ಲಭ್ಯವಿವೆ.

ಮೇ 11 ರಂದು ನವದೆಹಲಿಯಲ್ಲಿ ನಡೆದ ‘ರಾಜ್ಯ ಡೇಟಾಗಾಗಿ ಸೈಬರ್ ಭದ್ರತಾ ಚೌಕಟ್ಟುಗಳನ್ನು ಬಲಪಡಿಸುವ ರಾಷ್ಟ್ರೀಯ ಸಮಾಲೋಚನಾ ಕಾರ್ಯಾಗಾರ’ದಲ್ಲಿ ಈ ಗೌರವವನ್ನು ನೀಡಲಾಯಿತು. ರಾಷ್ಟ್ರೀಯ ಇ-ಆಡಳಿತ ವಿಭಾಗದ (NeGD) ಅಧ್ಯಕ್ಷ ಶ್ರೀ ನಂದ ಕುಮಾರಮ್ ಅವರು ಕರ್ನಾಟಕದ ಅಧಿಕಾರಿಗಳು ಮತ್ತು ಎಸ್‌ಇಎಂಟಿ (SeMT) ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕದ ಸಾಧನೆ

ದೇಶದಲ್ಲೇ ಅತಿ ಹೆಚ್ಚು ಡಿಜಿಲಾಕರ್ ಖಾತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದ ಸುಮಾರು 2.7 ಕೋಟಿಗೂ ಹೆಚ್ಚು ನಾಗರಿಕರು ಡಿಜಿಲಾಕರ್ ಸೇವೆಗಳನ್ನು ಬಳಸುತ್ತಿದ್ದಾರೆ. ರಾಜ್ಯ ಸರ್ಕಾರದ ಶೇ73 ರಷ್ಟು ಇ-ಸೇವೆಗಳನ್ನು ಈಗಾಗಲೇ ಡಿಜಿಲಾಕರ್‌ನೊಂದಿಗೆ ಯಶಸ್ವಿಯಾಗಿ ಸಂಯೋಜಿಸಲಾಗಿದೆ. ಇದು ‘ಡಿಜಿಟಲ್ ಕರ್ನಾಟಕ’ದತ್ತ ರಾಜ್ಯ ಇಟ್ಟಿರುವ ದೃಢ ಹೆಜ್ಜೆಯಾಗಿದೆ. ವಿಶೇಷವಾಗಿ ಕರ್ನಾಟಕವು ತನ್ನ ವ್ಯಾಪ್ತಿಯ ಎಲ್ಲಾ 5 ವಿದ್ಯುತ್ ಸರಬರಾಜು ಕಂಪನಿಗಳನ್ನು (BESCOM, MESCOM ಇತ್ಯಾದಿ) ಅತ್ಯಂತ ವೇಗವಾಗಿ ಡಿಜಿಲಾಕರ್ ವೇದಿಕೆಗೆ ಅಳವಡಿಸಿದೆ. ಇದರ ಫಲವಾಗಿ ಸುಮಾರು 3 ಕೋಟಿ ವಿದ್ಯುತ್ ಬಿಲ್ ದಾಖಲೆಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತಿವೆ.

ಇದನ್ನೂ ಓದಿ ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ!

ನಾಗರಿಕರಿಗೆ ಏನು ಪ್ರಯೋಜನ?

ಈ ಏಕೀಕರಣದಿಂದಾಗಿ ರಾಜ್ಯದ ನಾಗರಿಕರು ತಮ್ಮ ಪ್ರಮುಖ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಭೌತಿಕ ದಾಖಲೆಗಳ ಪರಿಶೀಲನೆಯ ಬದಲು ಡಿಜಿಲಾಕರ್ ಮೂಲಕವೇ ದಾಖಲೆಗಳನ್ನು ಒದಗಿಸಬಹುದಾಗಿದೆ. ಇದರಿಂದಾಗಿ ಪಾರದರ್ಶಕತೆ ಹೆಚ್ಚುವುದಲ್ಲದೆ, ನಾಗರಿಕರ ಜೀವನ ಗಮನಾರ್ಹವಾಗಿ ಸುಧಾರಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ಕರ್ನಾಟಕದ ಈ ಮಾದರಿಯು ಇತರ ರಾಜ್ಯಗಳಿಗೆ ಸ್ಫೂರ್ತಿಯಾಗಿದ್ದು, ಸುರಕ್ಷಿತ ಮತ್ತು ನಾಗರಿಕ ಸ್ನೇಹಿ ಡಿಜಿಟಲ್ ಆಡಳಿತ ನೀಡುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು. ಕರ್ನಾಟಕದೊಂದಿಗೆ ಗುಜರಾತ್, ಕೇರಳ, ನಾಗಾಲ್ಯಾಂಡ್ ಮತ್ತು ರಾಜಸ್ಥಾನ ರಾಜ್ಯಗಳನ್ನೂ ಸಹ ವಿವಿಧ ವಿಭಾಗಗಳಲ್ಲಿ ಸನ್ಮಾನಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು – Kannada News | Dileep Raj Death: Mortal Remains kept at his house for the last respect

ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (Dileep Raj) ಅವರು ಅಕಾಲಿಕವಾಗಿ ನಿಧನರಾಗಿರುವುದು ನೋವಿನ ಸಂಗತಿ. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ದಿಲೀಪ್ ರಾಜ್ ಅವರು ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಅವರ ನಿಧನಕ್ಕೆ ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ನಿವಾಸದಲ್ಲಿ ದಿಲೀಪ್ ರಾಜ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದೆ. ಕಿರುತೆರೆ ಮತ್ತು ಚಿತ್ರರಂಗದ ಅನೇಕರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. 47ನೇ ವಯಸ್ಸಿಗೆ ದಿಲೀಪ್ ರಾಜ್ ಅವರು ಹೃದಯಾಘಾತದಿಂದ (Heart Attack) ನಿಧನರಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Tamil Nadu Assembly session Floor test Live: ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ – Kannada News | Tamil Nadu Assembly session Floor test Live: CM Joseph’s TVK Faces Confidence Motion in Assembly

ಚೆನ್ನೈ, ಮೇ 13: ತಮಿಳುನಾಡು ವಿಧಾನಸಭೆಯಲ್ಲಿ ಇಂದು ತೀವ್ರ ಕುತೂಹಲ ಕೆರಳಿಸಿರುವ ನಟ, ರಾಜಕಾರಣಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಶಕ್ತಿ ಪ್ರದರ್ಶನ ನಡೆಯುತ್ತಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯ್ ಅವರು ಇಂದು ಸದನದಲ್ಲಿ ವಿಶ್ವಾಸಮತಯಾಚನೆ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಪ್ರಸ್ತಾಪಿಸಿದ ಸರ್ಕಾರಿ ನಿರ್ಣಯದ ಮೇಲೆ ಶಾಸಕರು ಮತ ಚಲಾಯಿಸಲಿದ್ದಾರೆ. ಮ್ಯಾಜಿಕ್ ನಂಬರ್ ತಲುಪಲು ವಿಜಯ್ ಯಶಸ್ವಿಯಾಗುತ್ತಾರೆಯೇ ಅಥವಾ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣ ಸೃಷ್ಟಿಯಾಗಲಿದೆಯೇ ಎಂಬುದು ಇಡೀ ದೇಶದ ಗಮನ ಸೆಳೆದಿದೆ. ವಿಶ್ವಾಸಮತಯಾಚನೆಯ ನೇರಪ್ರಸಾರ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಜೊತೆಗಿನ ನಂಟಿನಿಂದ ಹೆಚ್ಚಿದ ತ್ರಿಶಾ ಕ್ರೇಜ್; ಗಗನಕ್ಕೇರಿದ ಸಂಭಾವನೆ – Kannada News | Trisha Krishnan Remuneration hike after Thalapathy Vijay TVK win

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ವೃತ್ತಿಜೀವನ ಈಗ ಸುವರ್ಣ ಕಾಲದಲ್ಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ಸೌತ್ ಸುಂದರಿ ಈಗ ತಮ್ಮ ಸಂಭಾವನೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಮುಖ್ಯಮಂತ್ರಿ ಆಗಿರುವ ವಿಜಯ್ (Thalapathy Vijay) ಜೊತೆ ತ್ರಿಶಾ ಅವರು ಆಪ್ತವಾಗಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತ್ರಿಶಾ ಜನಪ್ರಿಯತೆ ಕೂಡ ಡಬಲ್ ಆಗಿದೆ. ಅದಕ್ಕೆ ತಕ್ಕಂತೆ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ಆದ್ದರಿಂದ ಸಂಭಾವನೆ (Trisha Krishnan Remuneration) ಕೂಡ ಜಾಸ್ತಿ ಆಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ‘ಪೊನ್ನಿಯಿನ್ ಸೆಲ್ವನ್’ ಮತ್ತು ‘ಲಿಯೋ’ ರೀತಿಯ ದೊಡ್ಡ ಚಿತ್ರಗಳ ನಂತರ ತ್ರಿಶಾ ಅವರ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಿದೆ. ಸದ್ಯ ಕಾಲಿವುಡ್ ಮತ್ತು ಟಾಲಿವುಡ್‌ನ ದೊಡ್ಡ ಬಜೆಟ್ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ, ತ್ರಿಶಾ ಈಗ ಪ್ರತಿ ಚಿತ್ರಕ್ಕೆ ಸುಮಾರು 10ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೇರಿದ್ದಾರೆ.

ತ್ರಿಶಾ ಕೈಯಲ್ಲಿ ಈಗ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಿವೆ. ಚಿರಂಜೀವಿ ಅಭಿನಯದ ‘ವಿಶ್ವಂಭರ’ ಸಿನಿಮಾಗೆ ತ್ರಿಶಾ ನಾಯಕಿ ಆಗಿದ್ದಾರೆ. ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾದಲ್ಲಿ ಕೂಡ ತ್ರಿಶಾ ನಟಿಸಿದ್ದಾರೆ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಕಾಂಬಿನೇಷನ್​ನ ಹೊಸ ಸಿನಿಮಾಗೂ ಅವರೇ ನಾಯಕಿ ಆಗುವ ಸಾಧ್ಯತೆ ಇದೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಟನಾ ಪ್ರಾಧಾನ್ಯತೆಯ ಪಾತ್ರಗಳ ಮೂಲಕವೂ ತ್ರಿಶಾ ಗಮನ ಸೆಳೆಯುತ್ತಿದ್ದಾರೆ. ಚಿತ್ರರಂಗಕ್ಕೆ ಹೊಸ ನಟಿಯರ ಆಗಮನವಾಗುತ್ತಿದ್ದರೂ, ತ್ರಿಶಾ ಅವರ ಬೇಡಿಕೆ ಕುಗ್ಗಿಲ್ಲದಿರುವುದು ವಿಶೇಷ. ಈಗಿನ ಸಂಭಾವನೆ ಏರಿಕೆಯು ಅವರ ಜನಪ್ರಿಯತೆ ಮತ್ತು ನಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರು ಹಲವು ವರ್ಷಗಳಿಂದ ಆಪ್ತವಾಗಿದ್ದಾರೆ. ಅವರ ಒಡನಾಟದ ಬಗ್ಗೆ ಸಾಕಷ್ಟು ಗಾಸಿಪ್​ಗಳಿವೆ. ಇತ್ತೀಚೆಗೆ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ತ್ರಿಶಾ ಮತ್ತು ವಿಜಯ್ ಅವರು ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಈ ಎಲ್ಲ ಕಾರಣಗಳಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾದರಿ ದಂಪತಿಯಾಗಿದ್ದ ದಿಲೀಪ್-ಶ್ರೀವಿದ್ಯಾ; ಕಾಂಬಿನೇಷನ್​​ನಲ್ಲಿ ಬಂದಿತ್ತು ಹಿಟ್ ಸೀರಿಯಲ್ – Kannada News | Dileep Raj and Srividya: A Beautiful Love Story and a Successful Production Journey

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅವರ ಪತ್ನಿ ಶ್ರೀವಿದ್ಯಾ ಮತ್ತು ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇವರಿಬ್ಬರದು ಕೇವಲ ದಾಂಪತ್ಯವಲ್ಲ, ಅದೊಂದು ಸುಂದರ ಸೃಜನಶೀಲ ಜರ್ನಿ. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೇ ಪರಿಚಿತರಾಗಿದ್ದ ಇವರು, ಪರಸ್ಪರರ ಕನಸುಗಳಿಗೆ ಬೆನ್ನೆಲುಬಾಗಿ ನಿಂತವರು. ದಿಲೀಪ್ ರಾಜ್ ನಟನೆಯಲ್ಲಿ ತೊಡಗಿಸಿಕೊಂಡರೆ, ಶ್ರೀವಿದ್ಯಾ ಅವರು ಅವರಿಗೆ ಪ್ರತಿಯೊಂದು ಹಂತದಲ್ಲೂ ಶಕ್ತಿಯಾಗಿ ನಿಂತರು.

ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಜಂಟಿಯಾಗಿ ‘ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್’ ಸಂಸ್ಥೆಯನ್ನು ಆರಂಭಿಸಿದರು. ಶ್ರೀವಿದ್ಯಾ ಅವರು ನಿರ್ಮಾಣದ ಆರ್ಥಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ, ದಿಲೀಪ್ ಕ್ರಿಯೇಟಿವ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಈ ಜೋಡಿಯ ಕಠಿಣ ಪರಿಶ್ರಮದ ಫಲವಾಗಿ ಕನ್ನಡ ಕಿರುತೆರೆಗೆ ಅನೇಕ ಸೂಪರ್ ಹಿಟ್ ಧಾರಾವಾಹಿಗಳು ಲಭಿಸಿದವು.

ಜೀ ಕನ್ನಡ ವಾಹಿನಿಯ ಅತಿದೊಡ್ಡ ಯಶಸ್ಸಾದ ‘ಹಿಟ್ಲರ್ ಕಲ್ಯಾಣ’ ಇವರ ಜಂಟಿ ನಿರ್ಮಾಣದ ಹೆಗ್ಗುರುತು. ಈ ಧಾರಾವಾಹಿಯಲ್ಲಿ ದಿಲೀಪ್ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದರು.

‘ಪಾರು’ ಹಾಗೂ ಇತ್ತೀಚಿನ ‘ಕೃಷ್ಣ ರುಕ್ಕು’ ಧಾರಾವಾಹಿಗಳ ಹಿಂದೆ ಈ ದಂಪತಿಗಳ ಸೃಜನಶೀಲ ಶ್ರಮವಿತ್ತು. ಸದಾ ನಗುಮುಖದಿಂದ ಕೆಲಸ ಮಾಡುತ್ತಿದ್ದ ಈ ಜೋಡಿ, ನೂರಾರು ತಂತ್ರಜ್ಞರಿಗೆ ಬದುಕು ನೀಡಿದ್ದರು.

ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ ಎಂಬುದಕ್ಕೆ ದಿಲೀಪ್ ಮತ್ತು ಶ್ರೀವಿದ್ಯಾ ಉದಾಹರಣೆಯಾಗಿದ್ದರು. ಶ್ರೀವಿದ್ಯಾ ಅವರ ಪ್ರತಿಯೊಂದು ನಿರ್ಧಾರಕ್ಕೂ ದಿಲೀಪ್ ಗೌರವ ನೀಡುತ್ತಿದ್ದರು.

ಇಂದು ದಿಲೀಪ್ ರಾಜ್ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರು ಪತ್ನಿಯೊಂದಿಗೆ ಸೇರಿ ಕಟ್ಟಿದ ಈ ಕಲಾ ಸಾಮ್ರಾಜ್ಯ ಮತ್ತು ಅವರು ನೀಡಿದ ಅದ್ಭುತ ಧಾರಾವಾಹಿಗಳು ಸದಾ ಕನ್ನಡಿಗರ ನೆನಪಿನಲ್ಲಿರುತ್ತವೆ.

Published On – 9:20 am, Wed, 13 May 26

Source link

Exit mobile version