ಮಧ್ಯಪ್ರದೇಶ: ರಕ್ತ ನಿಧಿಯಿಂದ ರಕ್ತ ಪಡೆದಿದ್ದ ನಾಲ್ವರು ಮಕ್ಕಳಿಗೆ ಎಚ್​ಐವಿ ಸೋಂಕು – Kannada News | MP Hospital HIV Scandal: 4 Thalassemia Children Infected After Blood Transfusion

ಭೋಪಾಲ್, ಡಿಸೆಂಬರ್ 19: ರಕ್ತ ನಿಧಿಯಿಂದ ರಕ್ತ ಪಡೆದಿದ್ದ ನಾಲ್ವರು ಮಕ್ಕಳಿಗೆ ಎಚ್​ಐವಿ(HIV) ಸೋಂಕು ತಗುಲಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಿಂದ ರಕ್ತ ವರ್ಗಾವಣೆ ಬಳಿಕ ಮಕ್ಕಳಲ್ಲಿ ಸೋಂಕು ದೃಢ ಪಟ್ಟಿದ್ದು, ರಕ್ತ ನಿಧಿಯ ಉಸ್ತುವಾರಿ ವೈದ್ಯರು ಹಾಗೂ ಪ್ರಯೋಗಾಲಯದ ಇಬ್ಬರು ಸಿಬ್ಬಂದಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಡಿ.16ರಂದು ಮಕ್ಕಳಲ್ಲಿ ಹೆಚ್​ಐವಿ ಸೋಂಕು ಇರೋದು ಬೆಳಕಿಗೆ ಬಂದಿತ್ತು.

ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ಸೋಂಕು ದೃಢಪಟ್ಟಿತ್ತು.ಮಕ್ಕಳು ಥಲಸ್ಸೇಮಿಯಾ ಎಂಬ ಅನುವಂಶಿಕ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದರ, ರಕ್ತ ಪಡೆದ ಬಳಿಕ ಮಕ್ಕಳಲ್ಲಿ ಹೆಚ್​ಐವಿ ಸೋಂಕು ದೃಢಪಟ್ಟಿತ್ತು. ವೈದ್ಯರನ್ನು ಅಮಾನತುಗೊಳಿಸಿ ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

ಸೋಂಕಿನ ಮೂಲವನ್ನು ಇನ್ನೂ ಗುರುತಿಸಲಾಗಿಲ್ಲ, ವಿಚಾರಣೆಯು ಆಸ್ಪತ್ರೆಯ ಕಾರ್ಯವೈಖರಿ ಮತ್ತು ರಕ್ತ ನಿಧಿಯ ಕಾರ್ಯವಿಧಾನಗಳ ಮೇಲೆ ಕೇಂದ್ರೀಕರಿಸಿದೆ. ಥಲಸ್ಸೇಮಿಯಾ ಇರುವ ಮಕ್ಕಳಿಗೆ ಪದೇ ಪದೇ ರಕ್ತ ವರ್ಗಾವಣೆ ಅಗತ್ಯವಿರುತ್ತದೆ ಎಂದು ಸಿಎಂಎಚ್​ಒ ಡಾ. ಮನೋಜ್ ಶುಕ್ಲಾ ಹೇಳಿದ್ದಾರೆ.

ಮತ್ತಷ್ಟು ಓದಿ: HIV AIDS: ಎಚ್‌ಐವಿ ಏಡ್ಸ್ ಕುರಿತು ಈಗಲೂ ತಿಳಿದುಕೊಳ್ಳಬೇಕಾದ ಅಂಶಗಳಿವು

ಬ್ಯಾಂಕ್ ನೀಡುವ ರಕ್ತವನ್ನು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರೀಕ್ಷಿಸಲಾಗುತ್ತದೆ ಮತ್ತು ಯಾವುದೇ ಸೋಂಕಿತ ಮಾದರಿಗಳಿದ್ದರೆ ಅವುಗಳನ್ನು ನಾಶಪಡಿಸಲಾಗುತ್ತದೆ ಎಂದು ಡಾ. ಶುಕ್ಲಾ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆಗಳ ಜಂಟಿ ತನಿಖಾ ತಂಡವು ಆಸ್ಪತ್ರೆಗೆ ತಲುಪಿ, ಎಚ್‌ಐವಿ ಸೋಂಕಿತ ರಕ್ತವನ್ನು ಯಾವ ಸಂದರ್ಭಗಳಲ್ಲಿ ನೀಡಲಾಯಿತು ಎಂಬುದನ್ನು ಪರಿಶೀಲಿಸಿದೆ.

ಡಿಸೆಂಬರ್ 16 ರಂದು ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಚಿಸಲ್ಪಟ್ಟ ಆರು ಸದಸ್ಯರ ಸಮಿತಿಯು ತನಿಖೆ ನಡೆಸುತ್ತಿದೆ. ಜಿಲ್ಲಾ ಆಸ್ಪತ್ರೆಯ ಮಾಜಿ ಸಿವಿಲ್ ಸರ್ಜನ್ ಡಾ. ಮನೋಜ್ ಶುಕ್ಲಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಲಿಖಿತ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಲಾಯಿತು. ಅವರ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲದಿದ್ದರೆ ಕಠಿಣ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಹೊರಗೆ ಅಕ್ರಮ ರಕ್ತ ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಗುರುವಾರ ಮೂವರನ್ನು ಬಂಧಿಸಲಾಗಿದೆ. ಆಸ್ಪತ್ರೆ ಆವರಣದ ಬಳಿ ರಕ್ತ ಮಾರಾಟ ಮಾಡಲಾಗುತ್ತಿದೆ ಎಂದು ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇವರಿಗೆ ಅಧ್ಯಕ್ಷರು ಯಾರು ಎಂಬುದೇ ಗೊತ್ತಿಲ್ಲ: ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ – Kannada News | Basanagouda patil Yatnal Backs Siddaramaiah, Mocks BJP Leaders: Says They Don’t Even Know Who Their President Is

ಬೆಳಗಾವಿ, ಡಿಸೆಂಬರ್ 19: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಪ್ರತಿಪಕ್ಷ ಬಿಜೆಪಿ ಅಧಿಕಾರ ಹಂಚಿಕೆ ಕಿತ್ತಾಟದ ಬಗ್ಗೆ ಪ್ರಸ್ತಾಪಿಸಿತು. ಈ ವೇಳೆ ಮಧ್ಯಪ್ರವೇಶಿಸಿದ ವಿಜಯಪುರ ನಗರ ಶಾಸಕ (ಬಿಜೆಪಿ ಉಚ್ಛಾಟಿತ ಶಾಸಕ) ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಮಾತನಾಡಿ ಬಿಜೆಪಿಗೆ ಟಾಂಗ್ ನೀಡಿದರು. ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವುದನ್ನು ಬಿಟ್ಟು ಹೇಳಿದ್ದನ್ನೇ ಹೇಳಿಕೊಂಡು ಸಮಯ ಹಾಳು ಮಾಡುತ್ತಾರೆ. ಪಾಪ ಅವರು (ಸಿದ್ದರಾಮಯ್ಯ) ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೋ ಇಲ್ಲವೋ ಅದು ಅವರಿಗೆ ಬಿಟ್ಟ ವಿಚಾರ. ಬಿಜೆಪಿ ಅವರಿಗೆ ಅಧ್ಯಕ್ಷ ಯಾರು ಎಂಬುದೇ ಸ್ಪಷ್ಟತೆ ಇಲ್ಲ ಎಂದು ಯತ್ನಾಳ್ ವ್ಯಂಗ್ಯವಾಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಗಳು ತನ್ನ ಪ್ರೀತಿ ವಿಷ್ಯ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ತಂದೆ – Kannada News | Dad’s cute reaction to daughter telling him she has a boyfriend

ಪ್ರೀತಿ (love) ಅಂತ ಬಂದಾಗ ಹೆತ್ತವರ ಬಳಿ ಹೇಳಿದ್ರೆ ಏನು ಅಂದುಕೊಳ್ತಾರೆ, ಬೇಡ ಅಂದ್ರೆ ಏನ್ ಮಾಡೋದು ಹೀಗೆ ನಾನಾ ರೀತಿಯ ಪ್ರಶ್ನೆ ಕಾಡುತ್ತದೆ. ಆದರೆ ಕೆಲವರು ಧೈರ್ಯ ಮಾಡಿಕೊಂಡು ಪ್ರೀತಿ ವಿಷ್ಯ ತಂದೆ ತಾಯಿ ಮುಂದೇ ಹೇಳುವುದನ್ನು ನೋಡಬಹುದು. ಆದರೆ ಇಲ್ಲೊಬ್ಬಳು ಮಗಳು ತನ್ನ ತಂದೆ (father) ಮುಂದೆ ತನಗೆ ಬಾಯ್ ಫ್ರೆಂಡ್ ಇರುವುದಾಗಿ ಹೇಳಿದ್ದಾಳೆ. ಮಗಳ ಮಾತು ಕೇಳಿ ಜೋರಾಗಿ ನಕ್ಕು ಮಗಳ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

driiiishtiiii) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಗಳು ತಂದೆಯ ಕೈ ಹಿಡಿದುಕೊಂಡು ತನ್ನ ಪ್ರೀತಿ ವಿಷ್ಯ ಹೇಳುತ್ತಿರುವುದನ್ನು ನೋಡಬಹುದು. ತಂದೆ ಕೈ ಹಿಡಿದುಕೊಂಡು ನನಗೆ ಬಾಯ್‌ಫ್ರೆಂಡ್‌ ಇದ್ದಾನೆ ಪಪ್ಪ ಎಂದು ಹೇಳುತ್ತಾಳೆ. ಆದರೆ ಈ ಯುವತಿಯ ಧ್ವನಿಯಲ್ಲಿ ಭಯ ಹಾಗೂ ದುಃಖ ಎರಡು ಎದ್ದು ಕಾಣುತ್ತಿದೆ. ಆಗ ತಂದೆ ಇರಲಿ ಬಿಡು, ಅದರಲ್ಲೇನಿದೆ, ಎಲ್ಲರೂ ಪ್ರೀತಿ ಮಾಡ್ತಾರೆ, ನಾನು ಮಾಡಿದ್ದೆ, ನಿಮ್ಮಮ್ಮನೂ ಮಾಡಿದ್ರು ಎಂದು ನಗುತ್ತಾ ಹೇಳುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಆ ಬಳಿಕ ಮಗಳು ಹನ್ನೊಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎಂದು ಹೇಳುತ್ತಿದ್ದಂತೆ ತಂದೆ ನಗುತ್ತಲೇ ಎಲ್ಲವನ್ನೂ ಕೇಳಿಸಿಕೊಂಡಿದ್ದು, ಹುಡುಗನ ಫೋಟೊ ತೋರಿಸು ಎಂದು ಹೇಳಿ ತಂದೆ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ತಂದೆ

ಈ ವಿಡಿಯೋ 1.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುದ್ದಾದ ಕ್ಷಣ, ಅದ್ಭುತ ಸ್ಟೋರಿ ಎಂದಿದ್ದಾರೆ. ಇನ್ನೊಬ್ಬರು, ಬೆಂಬಲ ನೀಡುವ ಹಾಗೂ ಮುದ್ದಾದ ಕುಟುಂಬ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾವನಾತ್ಮಕ ಕ್ಷಣ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಗಳ ಲಾಭಕೋರತನಕ್ಕೆ ಪ್ರೇಕ್ಷಕ ಹೈರಾಣು: ಸಿಗಲಿದೆಯೇ ಮುಕ್ತಿ? – Kannada News | Will Amazon Prime and other OTTs stop playing ads

ಕೋವಿಡ್ ಬಳಿಕ ಭಾರತ ಸೇರಿದಂತೆ ವಿಶ್ವದಾದ್ಯಂತ ಒಟಿಟಿ (OTT) ವೇದಿಕೆಗಳು ಭಾರಿ ಪ್ರಚಲಿತಕ್ಕೆ ಬಂದವು. ಈಗಂತೂ ಭಾರತವೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಒಟಿಟಿ ವೇದಿಕೆಗಳು ಸಕ್ರಿಯವಾಗಿವೆ. ಆದರೆ ಅವುಗಳಲ್ಲಿ ಪ್ರಮುಖವಾದುವು ಸುಮಾರು 15 ರಿಂದ 20 ಎನ್ನಬಹುದು. ಕೋವಿಡ್ ಸಮಯದಲ್ಲಿ ಹಾಗೂ ಅದಾದ ಕೆಲ ವರ್ಷಗಳ ಬಳಿಕ ಪ್ರೇಕ್ಷಕನನ್ನು ಪ್ರಭು ಎಂದು ಪರಿಗಣಿಸಿ ಸೇವೆ ನೀಡುತ್ತಿದ್ದ ಒಟಿಟಿಗಳು ಈಗ ವರಸೆ ಬದಲಿಸಿವೆ. ಸಬ್​ಸ್ಕ್ರಿಪ್ಷನ್ ಪಡೆದ ಬಳಿಕವೂ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ. ಜಾಹೀರಾತು ಬೇಡವೆಂದರೆ ವಾರ್ಷಿಕ ಮೊತ್ತದ ಮೇಲೆ ಮತ್ತೆ ಹೆಚ್ಚುವರಿ ಹಣ ನೀಡುವಂತೆ ಪೀಡಿಸುತ್ತಿವೆ. ಇದೀಗ ಇದರಿಂದ ಮುಕ್ತಿ ಸಿಗುವ ಸಾಧ್ಯತೆ ಗೋಚರಿಸುತ್ತಿದೆ.

ಅಮೆಜಾನ್ ಪ್ರೈಂ, ಹಾಟ್​​ಸ್ಟಾರ್ ಇನ್ನೂ ಕೆಲವು ಒಟಿಟಿಗಳು ಮೊದಲೆಲ್ಲ ಜಾಹೀರಾತು ಪ್ರದರ್ಶಿಸುತ್ತಿರಲಿಲ್ಲ. ಅದರಲ್ಲೂ ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿ ವೀಕ್ಷಣೆ ವೇಳೆಯಲ್ಲಿ ಜಾಹೀರಾತುಗಳ ಕಿರಿಕಿರಿಯೇ ಇರುತ್ತಿರಲಿಲ್ಲ. ಆದರೆ ಇತ್ತೀಚೆಗೆ ಕಳೆದ ಎರಡು-ಮೂರು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಕೆಲ ಒಟಿಟಿಗಳು ಜಾಹೀರಾತು ಪ್ರದರ್ಶನ ಆರಂಭಿಸಿವೆ. ಅದರಲ್ಲೂ ದುಬಾರಿ ಚಂದಾ ಮೊತ್ತವನ್ನು ತೆಗೆದುಕೊಳ್ಳುವ ಅಮೆಜಾನ್ ಪ್ರೈಂ, ಜಿಯೋ ಹಾಟ್​​ಸ್ಟಾರ್, ಸೋನಿ ಲಿವ್​ ಇನ್ನೂ ಕೆಲವು ಪ್ರಮುಖ ಒಟಿಟಿಗಳು ಜಾಹೀರಾತು ಪ್ರದರ್ಶನ ಮಾಡುತ್ತಿರುವುದು ಗ್ರಾಹಕರಿಗೆ ಕಿರಿ ಕಿರಿ ತಂದಿದೆ.

ಇದೀಗ ದೂರದ ಜರ್ಮನಿಯಲ್ಲಿ ಅಮೆಜಾನ್ ಪ್ರೈಂ ಮೇಲೆ ಈ ಬಗ್ಗೆ ದೂರು ದಾಖಲಾಗಿ, ನಡೆದಿರುವ ನ್ಯಾಯಾಲಯದ ವಿಚಾರಣೆಯಲ್ಲಿ ಅಮೆಜಾನ್ ಪ್ರೈಂ, ಸಬ್​ಸ್ಕ್ರಿಪ್ಷನ್ ಮೊತ್ತ ಪಡೆದ ಬಳಿಕ ಜಾಹೀರಾತು ಪಡೆಯುವಂತಿಲ್ಲ, ಹಾಗೂ ಜಾಹೀರಾತು ರಹಿತ ಸೇವೆಗೆ ಹೆಚ್ಚುವರಿ ಹಣ ತೆಗೆದುಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚನೆ ನೀಡಿದೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬರುತ್ತಿವೆ ಭರ್ಜರಿ ಸಿನಿಮಾಗಳು: ಪಟ್ಟಿ ಇಲ್ಲಿದೆ

ಅಮೆಜಾನ್ ಪ್ರೈಂ ಮೊದಲೆಲ್ಲ ಜಾಹೀರಾತು ಪ್ರದರ್ಶಿಸುತ್ತಿರಲಿಲ್ಲ. ಆದರೆ 2024 ರಲ್ಲಿ ಜಾಹೀರಾತು ಪ್ರದರ್ಶಿಸಲು ಆರಂಭಿಸಿತು. ಜೊತೆಗೆ ಕೆಲವು ಪ್ರಮುಖ ಸಿನಿಮಾಗಳನ್ನು ನೋಡಲು ಹೆಚ್ಚುವರಿ ಹಣ ಪಾವತಿಸುವಂತೆ ಸಹ ಮಾಡಿತು. ಆದರೆ ಅಮೆಜಾನ್ ಮೊದಲಿಗೆ ಜಾಹೀರಾತು ರಹಿತ ಕಂಟೆಂಟ್ ಪ್ರದರ್ಶನದ ಭರವಸೆಯನ್ನು ನೀಡಿ ಜನರಿಂದ ಚಂದಾ ವಸೂಲಿ ಮಾಡಿತ್ತು. ಆದರೆ ಬಳಿಕ ಜಾಹೀರಾತು ಪ್ರದರ್ಶಿಸುವ ಮೂಲಕ ಭರವಸೆಯನ್ನು ಮುರಿದಿದೆ. ಇದು ಅನೈತಿಕ ವ್ಯವಹಾರ ಎಂದು ಜರ್ಮನಿಯ ನ್ಯಾಯಾಲಯ ಹೇಳಿದೆ. ಅಮೆಜಾನ್, ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

ಆದರೆ ಜರ್ಮಿಯಲ್ಲಿ ಆಗಿರುವ ಈ ಬೆಳವಣಿಗೆ ಒಟಿಟಿ ವೀಕ್ಷಕರಿಗೆ ಭರವಸೆಯನ್ನಂತೂ ಮೂಡಿಸಿದೆ. ಅಮೆಜಾನ್ ಪ್ರೈಂನವರು ಒಂದೂವರೆ ನಿಮಿಷದ ಜಾಹೀರಾತನ್ನು ಪ್ರದರ್ಶಿಸುತ್ತಿದ್ದಾರೆ. ಎರಡೂವರೆ ಗಂಟೆಯ ಸಿನಿಮಾ ನೋಡಿದಲ್ಲಿ ಪ್ರೇಕ್ಷಕ ಈ ಜಾಹೀರಾತನ್ನು ಕನಿಷ್ಟ ಐದಾರು ಬಾರಿ ಆದರೂ ನೋಡಬೇಕಾಗಿದೆ. ಇನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ಪ್ರತಿ ಅರ್ಧ ಗಂಟೆಗೆ ಒಮ್ಮೆ ಒಂದು ನಿಮಿಷದ ಜಾಹೀರಾತು ಪ್ರಸಾರ ಆಗುತ್ತದೆ. ಸದ್ಯಕ್ಕೆ ಜಾಹೀರಾತು ರಹಿತವಾಗಿ ಸೇವೆ ಒದಗಿಸುತ್ತಿರುವ ಗುಣಮಟ್ಟದ ಒಟಿಟಿ ವೇದಿಕೆಯಾಗಿ ನೆಟ್​​ಫ್ಲಿಕ್ಸ್​ ಉಳಿದುಕೊಂಡಿದೆ. ಉತ್ತಮ ಗುಣಮಟ್ಟದ ಕಂಟೆಂಟ್ ಕೊಡುವ ಜೊತೆಗೆ ಯಾವುದೇ ಜಾಹೀರಾತು ಪ್ರದರ್ಶನವನ್ನು ಸಹ ನೆಟ್​ಫ್ಲಿಕ್ಸ್​ ಮಾಡುತ್ತಿಲ್ಲ. ಆದರೆ ಅಮೆಜಾನ್, ಹಾಟ್​​ಸ್ಟಾರ್​​ಗೆ ಹೋಲಿಸಿದರೆ ನೆಟ್​ಫ್ಲಿಕ್ಸ್​ನ ಸಬ್​ಸ್ಕ್ರಿಪ್ಷನ್ ಮೊತ್ತ ದುಬಾರಿ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಬ್ಬರಲ್ಲ ಇಬ್ಬರು ಔಟ್? ಟ್ವಿಸ್ಟ್ ಕೊಡಲು ಬಿಗ್ ಬಾಸ್ ರೆಡಿ – Kannada News | Bigg Boss Kannada 12: Double Eviction for Chaithra and Rajath? Secret Room Twist

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸಾಕಷ್ಟು ಭಿನ್ನ ತಿರುವುಗಳು ಬಂದಿವೆ. ಕಳೆದ ವಾರ ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಫೇಕ್ ಎಲಿಮಿನೇಷನ್​ ಅಲ್ಲಿ ಹೊರಗೆ ತಂದು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ. ಬಿಗ್ ಬಾಸ್ ಆಟವನ್ನು ಅವರು ಸೀಕ್ರೆಟ್ ರೂಂನಿಂದ ನೋಡುತ್ತಿದ್ದಾರೆ. ಈ ವಾರ ರಕ್ಷಿತಾ (Rakshitha Shetty) ಹಾಗೂ ಧ್ರುವಂತ್ ದೊಡ್ಮನೆ ಒಳಗೆ ಬರಲಿದ್ದು, ಮತ್ತಿಬ್ಬರು ಹೊರ ಹೋಗಲಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಸ್ಪಂದನಾ, ಮಾಳು ಸೇರಿದಂತೆ ಕೆಲವರು ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ. ಹೀಗಾಗಿ, ನಾಮಿನೇಟ್ ಆದವರ ಪೈಕಿ ಯಾರೊಬ್ಬರೂ ಮನೆಯಿಂದ ಹೊರ ಹೋಗುವುದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಆದರೆ, 58ನೇ ದಿನಕ್ಕೆ ಅತಿಥಿಗಳಾಗಿ ಬಂದು ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಹಾಗೂ ಚೈತ್ರಾ ಕುಂದಾಪುರ ಈ ಬಾರಿ ಬಿಗ್ ಬಾಸ್​ನಿಂದ ಹೊರ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಚೈತ್ರಾ ಹಾಗೂ ರಜತ್ ಸ್ಪರ್ಧಿಗಳಲ್ಲ, ಅವರನ್ನು ಕೆಲವೇ ವಾರಕ್ಕೆ ಮನೆಯಿಂದ ಕಳುಹಿಸಲಾಗುತ್ತದೆ ಎಂಬ ಟಾಕ್ ಮೊದಲಿನಿಂದಲೂ ಇದೆ. ಆದರೆ, ಅದು ಈವರೆಗೆ ನಿಜವಾಗಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗಿದೆ. ಈ ವಾರ ಇವರಿಬ್ಬರೂ ಹೊರ ಹೋಗೋದು ಖಚಿತ ಎನ್ನಲಾಗುತ್ತಿದೆ.

ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ಈ ವಾರವೂ ಎಲಿಮಿನೇಷ ಮಾಡದೆ ಸುಮ್ಮನೆ ಕೂರೋದು ಅನುಮಾನವೇ. ಏಕೆಂದರೆ ಬಿಗ್ ಬಾಸ್ ಪೂರ್ಣಗೊಳ್ಳಲು ಇನ್ನು ಕೆಲವೇ ವಾರ ಇದೆ. ಆದರೆ, ಸ್ಪರ್ಧಿಗಳ ಸಂಖ್ಯೆ ಮಾತ್ರ 13 ಇದೆ. ಇದನ್ನು ಕಡಿಮೆ ಮಾಡಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಚೈತ್ರಾ ಹಾಗೂ ರಜತ್​ನ ಮನೆಯಿಂದ ಹೊರ ಹಾಕೋ ಸಾಧ್ಯತೆ ಇದೆ.

ಇದನ್ನೂ ಓದಿ: ಸೈಲೆಂಟ್ ಆಗಿ ಬಿಗ್ ಬಾಸ್ ಮನೆ ಒಳಗೆ ಬಂದು ಅಧ್ವಾನ ಮಾಡಿದ ರಕ್ಷಿತಾ ಶೆಟ್ಟಿ

ವೀಕ್ಷಕರ ಊಹೆಗೆ ವಿರುದ್ಧವಾಗಿಯೇ ಈ ಸೀಸನ್ ನಡೆಯುತ್ತಾ ಇದೆ. ಈಗ ವೋಟಿಂಗ್ ಲೈನ್ ಓಪನ್ ಆಗದೆ ಇರುವುದನ್ನು ನೋಡಿ ಚೈತ್ರಾ ಹಾಗೂ ರಜತ್ ಹೋಗಬಹುದು ಎಂದು ಊಹಿಸಲಾಗಿದೆ. ಆದರೆ, ಇದಕ್ಕೆ ಮತ್ತೊಂದು ಟ್ವಿಸ್ಟ್​ನ ಬಿಗ್ ಬಾಸ್ ನೀಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಥಳಿಸಿ, ಮರಕ್ಕೆ ಕಟ್ಟಿಹಾಕಿ, ಸುಟ್ಟು ಹಾಕಿದ ಪಾಪಿಗಳು – Kannada News | Bangladesh Incident: Hindu Youth Killed Following Violent Assault

ಢಾಕಾ, ಡಿಸೆಂಬರ್ 19: ಬಾಂಗ್ಲಾದೇಶ(Bangladesh)ದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರ ಮತ್ತು ಪ್ರತಿಭಟನೆಗಳ ಮಧ್ಯೆ, ಮೂಲಭೂತವಾದದ ಭಯಾನಕ ಮುಖ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಗುಂಪೊಂದು ಧರ್ಮನಿಂದೆಯ ಆರೋಪದ ಮೇಲೆ ಹಿಂದೂ ಯುವಕನನ್ನು ಕ್ರೂರವಾಗಿ ಕೊಲ್ಲಲಾಗಿದೆ. ಮೃತ ವ್ಯಕ್ತಿಯನ್ನು ದೀಪು ಚಂದ್ರ ದಾಸ್ ಎಂದು ಗುರುತಿಸಲಾಗಿದ್ದು, ಭಲುಕಾ ಉಪ ಜಿಲ್ಲೆಯ ದುಬಾಲಿಯಾ ಪಾರಾ ಪ್ರದೇಶದಲ್ಲಿ ಜವಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಭೀಕರ ಘಟನೆಯಲ್ಲಿ, ಗುಂಪೊಂದು ದೀಪು ಚಂದ್ರ ಅವರನ್ನು ಮರಕ್ಕೆ ಕಟ್ಟಿ ಥಳಿಸಿ ಕೊಂದಿದ್ದಾರೆ.

ವಿಪಕ್ಷ ನಾಯಕ ಷರೀಫ್ ಉಸ್ಮಾನ್ ಹಾದಿ ಕೊಲೆ ಬಳಿಕ ನಂತರ ದೇಶಾದ್ಯಂತ ವ್ಯಾಪಕ ಹಿಂಸಾಚಾರ ಮತ್ತು ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಸ್ಥಳೀಯರ ಗುಂಪೊಂದು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದೆ.

ಹೊಡೆದು ಕೊಂದ ಜನ

ಗುಂಪು ದೀಪು ಚಂದ್ರ ದಾಸ್ ಅವರನ್ನು ಹೊಡೆದು ಕೊಂದು, ನಂತರ ಅವರ ದೇಹವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದೆ ಎಂದು ಆರೋಪಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಶವವನ್ನು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮೈಮೆನ್ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.

ಮತ್ತಷ್ಟು ಓದಿ: Video: ವಿಪಕ್ಷ ನಾಯಕ ಉಸ್ಮಾನ್ ಹಾದಿ ಹತ್ಯೆ, ಮತ್ತೆ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ

ಪ್ರಕರಣದಲ್ಲಿ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಮೃತರ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ದೂರು ಬಂದ ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆಗಳು ಮುಂದುವರೆದಿವೆ

ಷರೀಫ್ ಉಸ್ಮಾನ್ ಹಾದಿ ಅವರ ಮರಣದ ನಂತರ ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ . ಪ್ರತಿಭಟನಾಕಾರರು ಪತ್ರಿಕಾ ಕಚೇರಿಗಳು, ಅವಾಮಿ ಲೀಗ್ ನಾಯಕರ ಮನೆಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಢಾಕಾ ಮತ್ತು ಚಿತ್ತಗಾಂಗ್‌ನಲ್ಲಿಯೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಯಿತು ಮತ್ತು ಭಾರತೀಯ ರಾಜತಾಂತ್ರಿಕ ಆವರಣಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಟಾಕ್ಸಿಕ್’ಗೆ ಸ್ಪರ್ಧೆ ಕೊಡಲು ಬರುತ್ತಿದೆ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ – Kannada News | Ram Charan starrer Peddi movie releasing on March 27

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಬಹಳ ಮುಂಚಿತವಾಗಿಯೇ ‘ಟಾಕ್ಸಿಕ್’ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿತ್ತು. ಆದರೆ ಇದೀಗ ಕೆಲವು ಸಿನಿಮಾಗಳು ‘ಟಾಕ್ಸಿಕ್’ ಜೊತೆ ಸ್ಪರ್ಧೆಗೆ ಬೀಳುತ್ತಿವೆ. ಈಗಾಗಲೇ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾದ ಎರಡನೇ ಭಾಗ ಮಾರ್ಚ್ 19ರಂದೇ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅಡಿವಿಸೇಷ್ ನಟನೆಯ ‘ಡಕೈತ್’ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ಇದೀಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ಸಹ ‘ಟಾಕ್ಸಿಕ್’ಗೆ ಸ್ಪರ್ಧೆ ಒಡ್ಡಲು ಬರುತ್ತಿದೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ‘ಪೆದ್ದಿ’ ಸಿನಿಮಾ, ‘ಟಾಕ್ಸಿಕ್’ ಬಿಡುಗಡೆ ಆದ ಒಂದು ವಾರದ ಬಳಿಕ ಬಿಡುಗಡೆ ಆಗಲಿದೆ. ಅಂದರೆ ಮಾರ್ಚ್ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಒಂದು ವಾರದ ಬಳಿಕ ಬಿಡುಗಡೆ ಆದರೂ ಸಹ ಈ ಸಿನಿಮಾ ‘ಟಾಕ್ಸಿಕ್’ ಜೊತೆ ಸ್ಪರ್ಧೆಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ‘ಪೆದ್ದಿ’ ಸಿನಿಮಾಕ್ಕೆ ಈಗಾಗಲೇ ಒಳ್ಳೆಯ ಕ್ರೇಜ್ ಇದ್ದು, ‘ಟಾಕ್ಸಿಕ್’ಗೆ ಈ ಸಿನಿಮಾ ಪ್ರಬಲ ಸ್ಪರ್ಧೆಯನ್ನೇ ಒಡ್ಡುವ ಸಾಧ್ಯತೆ ಇದೆ.

ಇದನ್ನೂ ಓದಿ:‘ಚಿಕಿರಿ’ ಹಾಡಿನ ಶೂಟ್​ಗೆ ರಾಮ್ ಚರಣ್ ಹಾಗೂ ತಂಡ ಪಟ್ಟ ಕಷ್ಟ ಅಷ್ಟಿಷ್ಟಲ್ಲ..

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಚಿಕಿರಿ-ಚಿಕಿರಿ ಹಾಡು ಈಗಾಗಲೇ ಸಖತ್ ವೈರಲ್ ಆಗಿದೆ. ಈ ಮೊದಲು ಬಿಡುಗಡೆ ಆಗಿದ್ದ ಸಿನಿಮಾದ ಸಣ್ಣ ಟೀಸರ್ ಸಹ ಸಖತ್ ಹಿಟ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿತ್ತು. ಆದರೆ ಇತ್ತೀಚೆಗೆ ‘ಪೆದ್ದಿ’ ಸಿನಿಮಾದ ಶೂಟಿಂಗ್ ನಿಗದಿತ ವೇಗದಲ್ಲಿ ನಡೆಯುತ್ತಿಲ್ಲ, ಹಾಗಾಗಿ ಸಿನಿಮಾದ ಬಿಡುಗಡೆ ತಡವಾಗಬಹುದು ಎಂಬ ಸುದ್ದಿ ಹರಿದಾಡಿತ್ತು. ಆದರ ಬೆನ್ನಲ್ಲೆ ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಉಪ್ಪೆನ’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಬುಚ್ಚಿಬಾಬು ಸನಾ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಕ್ರಿಕೆಟ್​ ಪ್ರಧಾನ ಅಂಶವಾಗಿದೆ. ಹಳ್ಳಿಯ ಕ್ರಿಕೆಟ್ ಆಟಗಾರನೊಬ್ಬನ ಕತೆಯನ್ನು ‘ಪೆದ್ದಿ’ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದು, ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:32 pm, Fri, 19 December 25

Source link

IRCTC Coastal Karnataka Tour: IRCTC ಟೂರ್ ಪ್ಯಾಕೇಜ್; 6 ದಿನಗಳ ಕರಾವಳಿ ಕರ್ನಾಟಕದ ಆಧ್ಯಾತ್ಮಿಕ ಪ್ರವಾಸದಲ್ಲಿ ಭಾಗಿಯಾಗಿ – Kannada News | IRCTC Coastal Karnataka Tour: Explore Udupi, Murudeshwar, Sringeri Package

ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಪ್ಯಾಕೇಜ್‌ಗಳನ್ನು ಸಹ ತಂದಿದೆ. ದೇಶಾದ್ಯಂತ ವಿವಿಧ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸ್ಥಳಗಳನ್ನು ಜನರು ಸುಲಭವಾಗಿ ಭೇಟಿ ಮಾಡಲು ಇದು ಕಡಿಮೆ ಬೆಲೆಯಲ್ಲಿ ಅನೇಕ ವಿಶೇಷ ಪ್ಯಾಕೇಜ್‌ಗಳನ್ನು ತರುತ್ತದೆ. ಇವುಗಳ ಮೂಲಕ, ನೀವು ಅಪರಿಚಿತ ಪ್ರವಾಸಿ ಸ್ಥಳಗಳಿಗೆ ಹೋಗಲು ಬಯಸಿದರೆ, ನೀವು ಯಾವುದೇ ಚಿಂತೆಯಿಲ್ಲದೆ ಹೋಗಿ ಹಿಂತಿರುಗಬಹುದು.

ಕಾಲಕಾಲಕ್ಕೆ ಪ್ರವಾಸಿಗರಿಗಾಗಿ ಹೊಸ ಪ್ಯಾಕೇಜ್‌ಗಳನ್ನು ತರುತ್ತಿರುವ IRCTC ಇತ್ತೀಚೆಗೆ ಮತ್ತೊಂದು ವಿಶೇಷ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಅದು ಕರಾವಳಿ ಕರ್ನಾಟಕ ಪ್ಯಾಕೇಜ್ ಪ್ರವಾಸ. ಸಂಕ್ರಾಂತಿ ರಜಾದಿನಗಳಲ್ಲಿ ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಲು ಬಯಸುವವರಿಗೆ ಇದು ಉತ್ತಮ ಅವಕಾಶ.

ಈ ಪ್ಯಾಕೇಜ್ ಮೂಲಕ, ನೀವು ಕರ್ನಾಟಕದ ಆಧ್ಯಾತ್ಮಿಕ ಸ್ಥಳಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು ಅನುಭವಿಸಬಹುದು. ಈ ಪ್ರವಾಸ ಪ್ಯಾಕೇಜ್ IRCTC ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದು 5 ರಾತ್ರಿಗಳು, 6 ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ನೀವು ಉಡುಪಿ, ಕೊಲ್ಲೂರು, ಶೃಂಗೇರಿ, ಮುರುಡೇಶ್ವರ ಮತ್ತು ಮಂಗಳೂರಿನ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಪ್ರಯಾಣವು ಹೈದರಾಬಾದ್‌ನಿಂದ ಪ್ರಾರಂಭವಾಗುತ್ತದೆ. ಈ ರೈಲು ಪ್ರತಿ ಮಂಗಳವಾರ ಕಾಚೆಗುಡ ರೈಲು ನಿಲ್ದಾಣದಿಂದ ಹೊರಡುತ್ತದೆ.

ಪ್ಯಾಕೇಜ್ ಬೆಲೆ:

ಸ್ಲೀಪರ್ ಕ್ಲಾಸ್‌ನಲ್ಲಿ, ಒಬ್ಬ ವ್ಯಕ್ತಿಗೆ ರೂ.38,600, ಡಬಲ್ ಶೇರಿಂಗ್‌ಗೆ 20,650 ರೂ., ಟ್ರಿಪಲ್ ಶೇರಿಂಗ್‌ಗೆ 15,970 ರೂ., ಹಾಸಿಗೆ ಇರುವ ಮಗುವಿಗೆ 9,100 ರೂ. ಮತ್ತು ಹಾಸಿಗೆ ಇಲ್ಲದ ಮಗುವಿಗೆ 7,720 ರೂ. ದರವಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಪ್ರಯಾಣದ ವಿವರಗಳು:

ಈ ರೈಲು ಮಂಗಳವಾರ ಬೆಳಿಗ್ಗೆ ಹೈದರಾಬಾದ್‌ನ ಕಾಚೆಗುಡ ರೈಲು ನಿಲ್ದಾಣದಿಂದ ಹೊರಟು ಬುಧವಾರ ಬೆಳಿಗ್ಗೆ 9.15 ಕ್ಕೆ ಮಂಗಳೂರಿಗೆ ತಲುಪಲಿದೆ. ಆ ದಿನ ಉಡುಪಿ ಮತ್ತು ಶ್ರೀ ಕೃಷ್ಣ ದೇವಾಲಯಕ್ಕೆ, ಗುರುವಾರ ಮೂಕಾಂಬಿಕಾ ದೇವಾಲಯ, ಮುರುಡೇಶ್ವರದ ಶಿವ ದೇವಾಲಯ ಮತ್ತು ಗೋಕರ್ಣಕ್ಕೆ ಭೇಟಿ ನೀಡಲಾಗುವುದು. ಶುಕ್ರವಾರ ಹೊರನಾಡಿನ ಅನ್ನಪೂರ್ಣ ದೇವಾಲಯ ಮತ್ತು ಶೃಂಗೇರಿ ಶಾರದಾಂಬಾ ದೇವಾಲಯಕ್ಕೆ ಭೇಟಿ . ಶನಿವಾರ ಮಂಗಳಾದೇವಿ ದೇವಾಲಯ, ಕದ್ರಿ ಮಂಜುನಾಥ ದೇವಾಲಯ, ತಣ್ಣೀರುಬಾವಿ ಬೀಚ್ ಮತ್ತು ಮಂಗಳೂರಿನ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡಲಿದೆ. ಭಾನುವಾರ ರೈಲು ಕಾಚೆಗುಡಕ್ಕೆ ಹಿಂತಿರುಗುತ್ತದೆ. ಆದ್ದರಿಂದ, ನೀವು ಕರ್ನಾಟಕದ ಕರಾವಳಿ ಪ್ರದೇಶವನ್ನು ಅನ್ವೇಷಿಸಲು ಬಯಸಿದರೆ, ಈ ಪ್ಯಾಕೇಜ್ ನಿಮಗೆ ಸೂಕ್ತ ಆಯ್ಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:35 pm, Fri, 19 December 25

Source link

Video: ಮೂರು ತಿಂಗಳ ಗರ್ಭಿಣಿಯ ಕಪಾಳಕ್ಕೆ ಹೊಡೆದ ಪೊಲೀಸ್ ಅಧಿಕಾರಿ – Kannada News | Ernakulam Incident: Video Shows Woman With Infant Allegedly Slapped by Police Officer

ಕೊಚ್ಚಿ, ಡಿಸೆಂಬರ್ 19: ಪೊಲೀಸ್ ಅಧಿಕಾರಿಯೊಬ್ಬರು ಮೂರು ತಿಂಗಳ ಗರ್ಭಿಣಿಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಕೊಚ್ಚಿಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಯಾವುದೇ ಸುಳ್ಳು ಪ್ರಕರಣ ದಾಖಲಿಸಿ ಮಹಿಳೆಯ ಪತಿಯನ್ನು ಪೊಲೀಸರು ಠಾಣೆಗೆ ಎಳೆದುಕೊಂಡು ಬಂದಿದ್ದರು. ಅದನ್ನು ಪ್ರಶ್ನೆ ಮಾಡಲು ಬಂದಿದ್ದ ಮಹಿಳೆಗೆ ಎಚ್​ಎಸ್​ಒ ಪ್ರತಾಪ್ ಚಂದ್ರನ್ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ. ಈ ಘಟನೆ 2024ರಲ್ಲಿ ನಡೆದಿದ್ದರೂ ವಿಡಿಯೋ ಈಗ ವೈರಲ್ ಆಗಿದೆ. ಅವರನ್ನು ಈಗ ಆಲಪ್ಪುಳ ಜಿಲ್ಲೆಯ ಅರೂರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ವೀಡಿಯೊ ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ, ಮುಖ್ಯಮಂತ್ರಿ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಿದರು. ವಿಡಿಯೋದಲ್ಲಿರುವ ಮಹಿಳೆಯನ್ನು ಎನ್.ಜೆ. ಶೈಮೋಲ್ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಬೆನ್ ಜೋ ಅವರು ಘಟನೆಯ ನಂತರ ಪತ್ರಿಕಾಗೋಷ್ಠಿ ನಡೆಸಿ, ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ನಡೆಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಎರ್ನಾಕುಲಂ ಉತ್ತರ ರೈಲ್ವೆ ನಿಲ್ದಾಣದ ಬಳಿ ನಡೆಸುತ್ತಿರುವ ಪ್ರವಾಸಿ ಮಂದಿರದ ಮುಂದೆ ಕಳ್ಳತನದ ಆರೋಪ ಹೊತ್ತಿರುವ ಇಬ್ಬರು ಯುವಕರನ್ನು ಬಲವಂತವಾಗಿ ಬಂಧಿಸಿದ್ದನ್ನು ಚಿತ್ರೀಕರಿಸಿದ್ದಕ್ಕಾಗಿ ಶ್ರೀ ಜೋ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣದಲ್ಲಿ ಮೂರನೇ ಆರೋಪಿಯನ್ನಾಗಿ ಮಾಡಲಾಗಿತ್ತು. ತನ್ನ ಪತಿಯ ಬಗ್ಗೆ ವಿಚಾರಿಸಲು ತನ್ನ ಮಗುವಿನೊಂದಿಗೆ ಠಾಣೆಗೆ ಹೋದಾಗ ಶೈಮೋಲ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸರ್ಕಾರ ನೋಟ್ ಪ್ರಿಂಟ್ ಮಾಡಿ ಸಾಲ ತೀರಿಸಬಹುದಲ್ಲ? ಹೆಚ್ಚು ನೋಟ್ ಪ್ರಿಂಟ್ ಮಾಡಿದರೆ ಏನು ಅಪಾಯ? – Kannada News | Know what happens if government prints more money

ಯಾರನ್ನ ನೋಡಿದರೂ ಸಾಲ, ಎಲ್ಲಿ ನೋಡಿದರೂ ಬೆಲೆ ಏರಿಕೆ, ಇದು ದುಬಾರಿ ದುನಿಯಾ ಅನಿಸುತ್ತದೆ. ಸರ್ಕಾರ ಬೇಕಾದಷ್ಟು ನೋಟುಗಳನ್ನು ಮುದ್ರಿಸಿ ಅಗತ್ಯ ಇದ್ದವರಿಗೆ ಹಂಚಬಹುದಲ್ಲ, ಸರ್ಕಾರದ ಸಾಲವನ್ನೂ ತೀರಿಸಬಹುದಲ್ಲ ಎಂದು ಕೆಲವರಿಗಾದರೂ ಅನಿಸಿರಬಹುದು. ವಾಸ್ತವದಲ್ಲಿ, ಹಾಗೆ ಮಾಡಲು ಸಾಧ್ಯ ಇಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ತನ್ನ ಕುತ್ತಿಗೆ ತಾನೇ ಕುಯ್ದುಕೊಂಡಂತೆ. ವೆನಿಜುವೆಲಾ, ಜಿಂಬಾಬ್ವೆ ಇತ್ಯಾದಿ ಕೆಲವಾರು ದೇಶಗಳು ಹೀಗೆ ಮಾಡಲು ಹೋಗಿ ಈಗಲೂ ಒದ್ದಾಡುತ್ತಿವೆ. ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನ (Pakistan), ಶ್ರೀಲಂಕಾದಂತಹ ದೇಶಗಳು ಈ ದುಸ್ಸಾಹಸಕ್ಕೆ ಕೈಹಾಕಿಲ್ಲ. ಹೀಗೆ ಕರೆನ್ಸಿ ನೋಟುಗಳನ್ನು ಮನಬಂದಂತೆ ಪ್ರಿಂಟ್ ಮಾಡಲು ಆಗುವುದಿಲ್ಲ. ಅದಕ್ಕೆ ಒಂದು ಕ್ರಮ, ನೀತಿ, ನಿಯಮ, ಕಟ್ಟುಪಾಡುಗಳು ಇರುತ್ತವೆ.

ಹೆಚ್ಚು ನೋಟುಗಳನ್ನು ಮುದ್ರಿಸಿದರೆ ಏನಾಗುತ್ತದೆ?

ಯಾವುದೇ ಅರ್ಥವ್ಯವಸ್ಥೆಯಲ್ಲಿ ಹಣದ ಹರಿವು ಸಮರ್ಪಕವಾಗಿರಬೇಕು. ತೀರಾ ಹೆಚ್ಚಿರಬಾರದು, ತೀರಾ ಕಡಿಮೆ ಇರಬಾರದು. ಸರಕುಗಳ ಉತ್ಪಾದನೆಯ ಮೌಲ್ಯ ಅಥವಾ ಜಿಡಿಪಿಗೆ ಅನುಗುಣವಾಗಿ ಹಣದ ಸರಬರಾಜು ಇರುತ್ತದೆ. ಇದರಲ್ಲಿ ಏರುಪೇರಾದರೆ ಆಗ ಸರಕುಗಳ ಮೌಲ್ಯದಲ್ಲಿ ವೈಪರೀತ್ಯಗಳು ಕಾಣಿಸುತ್ತವೆ. ಹೆಚ್ಚು ಹಣವನ್ನು ಅರ್ಥವ್ಯವಸ್ಥೆಗೆ ತೂರಿಬಿಟ್ಟಾಗ ಸರಕುಗಳ ಬೆಲೆ ಹೆಚ್ಚುತ್ತದೆ. ಇದರಿಂದ ಹಣದುಬ್ಬರ ಅಧಿಕಗೊಳ್ಳುತ್ತದೆ.

ಉದಾಹರಣೆಗೆ, ಒಂದು ದೇಶದಲ್ಲಿ 100 ತೆಂಗಿನಕಾಯಿ ಸರಕುಗಳ ಉತ್ಪಾದನೆ ಆಗುತ್ತಿದೆ ಎಂದಿಟ್ಟುಕೊಳ್ಳಿ. ಅದನ್ನು ಖರೀದಿಸಲು 100 ರೂಪಾಯಿಯು ಚಲಾವಣೆಯಲ್ಲಿರುತ್ತದೆ ಎಂದು ಭಾವಿಸೋಣ. ಒಂದು ಕಾಯಿಗೆ ಒಂದು ರೂ ಬೆಲೆ ಇರುತ್ತದೆ. ಈಗ ನೀವೇನಾದರೂ 200 ರೂ ಅನ್ನು ವ್ಯವಸ್ಥೆಗೆ ಸೇರಿಸಿದಾಗ ಒಂದು ಕಾಯಿಗೆ ಹೆಚ್ಚು ಹಣ ಕೊಡಲು ಸಿದ್ಧರಿರುತ್ತೀರಿ. ಆಗ ಕಾಯಿ ಬೆಲೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ

ವೆನಿಜುವೆಲಾ, ಜಿಂಬಾಬ್ವೆ ಮೊದಲಾದ ಅನೇಕ ದೇಶಗಳು ಇಂಥ ಪ್ರಯೋಗಕ್ಕೆ ಕೈಹಾಕಿ ಸುಟ್ಟುಕೊಂಡಿವೆ. ಅಲ್ಲಿ ಒಂದು ರೊಟ್ಟಿ ಖರೀದಿಸಬೇಕೆಂದರೆ ಸಾವಿರಾರು ರುಪಾಯಿ ಕೊಡಬೇಕು. ಅಷ್ಟರಮಟ್ಟಿಗೆ ಹಣದ ಮೌಲ್ಯ ಕಡಿಮೆ ಆಗಿದೆ.

ಆರ್ಥಿಕತೆ ಬೆಳೆದಾಗ ಹೆಚ್ಚಿನ ಹಣ ಬಿಡುಗಡೆ ಆಗಬೇಕು…

ಆರ್ಥಿಕತೆ ಬೆಳೆದಂತೆ ಚಲಾವಣೆಯ ಹಣವನ್ನೂ ಹೆಚ್ಚಿಸಬೇಕು. ಇಲ್ಲದಿದ್ದರೆ ಹಣ ಕುಸಿತ ಅಥವಾ ಡೀಫ್ಲೇಶನ್ ಸ್ಥಿತಿ ನಿರ್ಮಾಣ ಆಗುತ್ತದೆ. ಉದಾಹರಣೆಗೆ, ಒಂದು ದೇಶದ ಜಿಡಿಪಿ ಹೆಚ್ಚುತ್ತಿರುತ್ತದೆ. ಅಂದರೆ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ. ಆರ್ಥಿಕತೆಗೆ ಒಂದಿಷ್ಟು ಹಣದುಬ್ಬರವೂ ಬೇಕು. ಬ್ಯುಸಿನೆಸ್​ಗಳು ಅಥವಾ ಉದ್ದಿಮೆಗಳು ತಮ್ಮ ಉತ್ಪನ್ನನ್ನು ಮಾರಿ ಲಾಭ ಗಳಿಸಬೇಕೆಂದರೆ ಹಣದುಬ್ಬರ ಅಥವಾ ಬೆಲೆ ಏರಿಕೆ ಅಗಲೇಬೇಕು. ಆದರೆ ಅದು ಮಿತಿಯಲ್ಲಿರಬೇಕು. ಹೀಗಾಗಿ, ಸರ್ಕಾರವು ಹಣದುಬ್ಬರಕ್ಕೆ ಟಾರ್ಗೆಟ್ ಫಿಕ್ಸ್ ಮಾಡುತ್ತದೆ. ಭಾರತ ಸರ್ಕಾರ ಸದ್ಯ ಶೇ. 4ರ ಹಣದುಬ್ಬರವನ್ನು ಟಾರ್ಗೆಟ್ ಆಗಿ ಮಾಡಿಕೊಂಡಿದೆ. ಅಷ್ಟಿದ್ದರೆ ಆರ್ಥಿಕತೆಯು ಸಮತೋಲನದಿಂದ ಸಾಗುತ್ತದೆ ಎಂಬುದು ಭಾವನೆ. ಇದನ್ನು ತಜ್ಞರಿರುವ ಸಮಿತಿಗಳು ನಿರ್ಧರಿಸುತ್ತವೆ.

ಈಗ ಜಿಡಿಪಿ ಬೆಳೆದಾಗ ಅದರ ಜೊತೆಗೆ ಹಣದುಬ್ಬರವನ್ನೂ ಸೇರಿಸಿದಾಗ ಉತ್ಪನ್ನಗಳು ಹಾಗೂ ಅದರ ಬೆಲೆ ಏರುತ್ತವೆ. ಅದಕ್ಕೆ ಅನುಗುಣವಾಗಿ ಹಣವೂ ಚಲಾವಣೆಯಲ್ಲಿ ಇರಬೇಕು. ಆಗ ಸರ್ಕಾರವು ಹೊಸ ಹಣದ ಹರಿವನ್ನು ಸೇರಿಸಬೇಕು. ಅದೂ ಜಿಡಿಪಿ ಹೆಚ್ಚಳ, ಹಣದುಬ್ಬರ ಇವೆಲ್ಲವನ್ನೂ ಲೆಕ್ಕಾಚಾರ ಮಾಡಿಯೇ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು?

ಹಣ ಹೆಚ್ಚಿಸಬೇಕಾದರೆ ನೋಟು ಪ್ರಿಂಟ್ ಮಾಡಬೇಕೆಂದೇನಿಲ್ಲ…

ಒಂದು ದೇಶದಲ್ಲಿರುವ ಹಣವೆಲ್ಲವೂ ಕರೆನ್ಸಿ ರೂಪದಲ್ಲೇ ಇರಬೇಕೆಂದೇನಿಲ್ಲ. ಎಲೆಕ್ಟ್ರಾನಿಕ್ ರೂಪದಲ್ಲೂ ಇರುತ್ತದೆ. ಜನರ ಕ್ಯಾಷ್ ವಹಿವಾಟಿಗೆ ಅನುಕೂಲವಾಗಲೆಂದು ನೋಟುಗಳನ್ನು ಪ್ರಿಂಟ್ ಮಾಡಲಾಗುತ್ತದೆ. ಅರ್ಥ ವ್ಯವಸ್ಥೆಗೆ ಹೆಚ್ಚು ಹಣದ ಅಗತ್ಯ ಇದ್ದಾಗ ಸರ್ಕಾರ (ಆರ್​ಬಿಐ) ಬೇರೆ ಬೇರೆ ವಿಧಾನಗಳಲ್ಲಿ ಹಣವನ್ನು ಹರಿಸುತ್ತದೆ. ಅದರಲ್ಲಿ ಒಂದು ವಿಧಾನವು ಆರ್​ಬಿಐನ ಓಪನ್ ಮಾರ್ಕೆಟ್ ಅಪರೇಷನ್ಸ್. ಈ ವಿಧಾನದಲ್ಲಿ ಸರ್ಕಾರಿ ಬಾಂಡ್​ಗಳನ್ನು ಆರ್​ಬಿಐ ಖರೀದಿಸುವ ಮೂಲಕ ಹಣವನ್ನು ಬಿಡುಗಡೆ ಮಾಡುತ್ತದೆ. ಇದು ಡಿಜಿಟಲ್ ಹಣವೇ ಆಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version