ಅದೇ ಖದರ್, ಅದೇ ಹೈಟ್, ಅದೇ ಲುಕ್; ದರ್ಶನ್ ರೀತಿಯೇ ಕಾಣ್ತಾರೆ ವಿನೀಶ್ – Kannada News | Darshan Thoogudeepa and His Son Vineesh in same look In a viral Photo which was taken during The Devil Shoot

ನಟ ದರ್ಶನ್ ಹಾಗೂ ಮಗ ವಿನೀಶ್ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಧವ್ಯ ಇದೆ. ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಗೆಳೆಯನ ರೀತಿ ವಿನೀಶ್​​ನ ದರ್ಶನ್ ಟ್ರೀಟ್ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಫೋಟೋಗಳು ವೈರಲ್ ಆಗುತ್ತವೆ.

ಈಗ ದರ್ಶನ್ ಹಾಗೂ ವಿನೀಶ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ದರ್ಶನ್ ಹಾಗೂ ವಿನೀಶ್ ಲುಕ್ ಹಾಗೂ ಖದರ್ ಒಂದೇ ರೀತಿ ಇದೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.

ವಿನೀಶ್ ಅವರಿಗೆ ಸ್ವಲ್ಪ ವಿಜಯಲಕ್ಷ್ಮೀ ಅವರ ಹೋಲಿಕೆ ಇದೆ. ಆದರೆ ಎತ್ತರ ಮಾತ್ರ ದರ್ಶನ್ ಅವರದ್ದೇ ಬಂದಿದೆ. ಅವರು ದರ್ಶನ್ ರೀತಿಯೇ ಕಟ್ಟುಮಸ್ತಾಗಿ ಕಾಣಿಸುತ್ತಿದ್ದಾರೆ. ಈ ಸಂದರ್ಭದ ಫೋಟೋನ ‘ಡೆವಿಲ್’ ತಂಡ ಹಂಚಿಕೊಂಡಿದೆ.

ಅಂದಹಾಗೆ, ಇದು ‘ಡೆವಿಲ್’ ಸಿನಿಮಾ ಶೂಟ್ ಸಂದರ್ಭದಲ್ಲಿ ತೆಗೆದ ಫೋಟೋ. ರಾಜಸ್ಥಾನದಲ್ಲಿ ತಂಡ ಬೀಡುಬಿಟ್ಟಾಗ ವಿನೀಶ್ ಕೂಡ ದರ್ಶನ್ ಜೊತೆ ತೆರಳಿದ್ದರು. ತಂದೆಯ ರೀತಿಯೇ ಶರ್ಟ್ ಧರಿಸಿ ಅವರು ಗಮನ ಸೆಳೆದಿದ್ದಾರೆ.

ದರ್ಶನ್ ಅವರಿಗೆ ಕುದುರೆ ಎಂದರೆ ಸಖತ್ ಇಷ್ಟ. ಅವರು ಕುದುರೆ ಸವಾರಿ ಮಾಡುತ್ತಾರೆ. ತಮ್ಮ ಫಾರ್ಮ್​​ಹೌಸ್​ನಲ್ಲಿ ಕುದುರೆಗಳನ್ನು ಅವರು ಸಾಕಿದ್ದಾರೆ. ವಿನೀಶ್ ಕೂಡ ಕುದುರೆ ಸವಾರಿ ಮಾಡಬಲ್ಲರು ಎಂಬುದು ವಿಶೇಷ. ಆ ಸಂದರ್ಭದ ಫೋಟೋನ ವಿನೀಶ್ ಈ ಮೊದಲು ಹಂಚಿಕೊಂಡಿದ್ದರು.

Published On – 10:22 am, Fri, 19 December 25

Source link

ಅಪ್ರಾಪ್ತೆ ಮೇಲೆ ಮ್ಯೂಸಿಕ್​​ ಮೈಲಾರಿ ಅತ್ಯಾಚಾರ ಕೇಸ್​​ಗೆ ಟ್ವಿಸ್ಟ್​​: ಸಂತ್ರಸ್ತೆ ವಿಡಿಯೋ ವೈರಲ್​​ – Kannada News | Twist in Music Mallari Assault Case, New Video of Minor Girl Goes Viral

ಬಾಗಲಕೋಟೆ, ಡಿಸೆಂಬರ್​​ 19: ಅಪ್ರಾಪ್ತೆ ಮೇಲೆ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅತ್ಯಾಚಾರ ಪ್ರಕರಣ ಕೇಸ್​​ಗೆ ಟ್ವಿಸ್ಟ್​​ ಸಿಕ್ಕಿದೆ. ಸಂತ್ರಸ್ತೆಯದ್ದು ಎನ್ನಲಾದ ವಿಡಿಯೋವಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೆಸರು ಕೆಡಿಸುವ ಉದ್ದೇಶದಿಂದ ನಾನು ಹಾಗೆಲ್ಲ ಹೇಳಿದ್ದೇನೆ, ನನ್ನದು ತಪ್ಪಾಗಿದೆ ಕ್ಷಮಿಸಿ ಎಂದು ಅಪ್ರಾಪ್ತೆ ಹೇಳಿರೋದು ವಿಡಿಯೋದಲ್ಲಿದೆ.

ಮ್ಯೂಸಿಕ್​​ ಮೈಲಾರಿ ಅಣ್ಣ, ಲತಾ, ಶ್ರಾವಣಿ ಮತ್ತು ಡ್ಯಾನ್ಸರ್​​ ರುಕ್ಕು ಬಗ್ಗೆ ನಾನು ಏನೇನೋ ಮಅತಾಡಿದ್ದೇನೆ. ಅವರ ಹೆಸರು ಕೆಡಿಸುವ ಜೊತೆಗೆ, ನಾನು ಹೆಸರು ಮಾಡುವ ಉದ್ದೇಶದಿಂದ ಆ ರೀತಿ ಹೇಳಿದ್ದು, ನನ್ನದು ತಪ್ಪಾಗಿದೆ. ನನ್ನ ಕ್ಷಮಿಸಿ ಎಂದು ಯುವತಿ ಕೈಮುಗಿದು ಹೇಳಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಪ್ರಾಪ್ತೆಯ ವಿರುದ್ದ ಮೈಲಾರಿ ಅಭಿಮಾನಿಗಳು ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್​​ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ; ಯೂಟ್ಯೂಬ್ ಸ್ಟಾರ್ ಮೈಲಾರಿ ವಿರುದ್ಧ ಪೋಕ್ಸೋ ಕೇಸ್

ವಿಡಿಯೋ ಬಗ್ಗೆ ಅಪ್ರಾಪ್ತೆ ಸ್ಪಷ್ಟನೆ

ಇನ್ನು ಕ್ಷಮೆ ಕೇಳಿರುವ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಂತ್ರಸ್ತೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯುವಕನೊಬ್ಬನ ಜೊತೆ ಇರುವ ಮತ್ತೂ ತಪ್ಪಾಯಿತು ಎಂದು ಹೇಳಿರುವ ವಿಡಿಯೋ ಈಗಿನದ್ದಲ್ಲ. ನನ್ನ ಮೇಲೆ ಅತ್ಯಾಚಾರ ನಡೆದ ಬಳಿಕ ಎರಡನೇ ದಿನ ಮಾಡಿರೋದು. ಬೆಂಕಿ ಲತಾ ಡ್ಯಾನ್ಸರ್, ರುಕ್ಕು ಸಿಂಗರ್, ಡಿಜೆ ಮಾಂತೇಶ್ ಗೋಕಾಕ್​​ ಅವರು ಬಂದು ನನಗೆ ಹೊಡೆದು ಆ ವಿಡಿಯೋ ವಿಡಿಯೋ ಮಾಡಿಸಿದ್ದರು. ಅದೇ ವಿಡಿಯೋವನ್ನೀಗ  ಕೆಲವರು ಇನ್​​ಸ್ಟಾಗ್ರಾಮ್​​ನಲ್ಲಿ ಎಡಿಟ್ ಮಾಡಿ ಹಾಕ್ತಿದಾರೆ. ಈ ರೀತಿ ವಿಡಿಯೋ ಸೇರ್​​ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುತ್ತೇನೆ. ನಾನೊಬ್ಬ ದಲಿತ ಹುಡುಗಿಯಾಗಿದ್ದು, ನನಗೆ ನ್ಯಾಯ ಬೇಕು. ಆ ವಿಡಿಯೋ ಈಗಿನದ್ದು ಅಂತ ಯಾರು ತಿಳಿದುಕೊಳ್ಳಬೇಡಿ. ನನಗೆ ನ್ಯಾಯ ಕೊಡಿಸಿ, ಸಪೋರ್ಟ್ ಮಾಡಿ ಎಂದು ಯುವತಿ ಕೈ ಮುಗಿದು ಕೇಳಿಕೊಂಡಿದ್ದಾಳೆ.

ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮ್ಯೂಸಿಕ್​​ ಮೈಲಾರಿ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಪೋಕ್ಸೊ ಪ್ರಕರಣ ದಾಖಲಾಗಿದೆ. ಕೇಸ್​​ ಬೆನ್ನಲ್ಲೇ ತಲೆಮರಿಸಿಕೊಂಡಿದ್ದ ಮೈಲಾರಿ ಡಿಸೆಂಬರ್ 17ರಂದು ಮಹಾರಾಷ್ಟ್ರಕ್ಕೆ ತೆರಳುತ್ತಿರುವಾಗ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದ. ಮಹಾಲಿಂಗಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Silver Shivling Benefits: ಬೆಳ್ಳಿಯ ಶಿವಲಿಂಗ ಪೂಜಿಸುವುದರಿಂದ ಸಿಗುವ ಅದ್ಭುತ ಪ್ರಯೋಜನಗಳಿವು – Kannada News | Silver Shivling Benefits: Strengthen Venus and Moon, Attract Wealth and Peace

ನೀವು ಶಿವನ ಭಕ್ತರಾಗಿದ್ದರೆ, ನಿಮ್ಮ ಶುಕ್ರ ಮತ್ತು ಚಂದ್ರನನ್ನು ಬಲಪಡಿಸಲು ಯಾವ ಶಿವಲಿಂಗವನ್ನು ಮನೆಗೆ ತರಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ವಾಸ್ತವವಾಗಿ, ಬೆಳ್ಳಿಯ ಶಿವಲಿಂಗವು ನಿಮ್ಮ ಜೀವನಕ್ಕೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಬೆಳ್ಳಿ ಶುಕ್ರ ಮತ್ತು ಚಂದ್ರನನ್ನು ಸಂಕೇತಿಸುತ್ತದೆ. ಬೆಳ್ಳಿಯ ಶಿವಲಿಂಗವು ಈ ಎರಡು ಶುಭ ಗ್ರಹಗಳ ಶಕ್ತಿಯನ್ನು ಸಂಕೇತಿಸುತ್ತದೆ. ನಿಯಮಿತ ಪೂಜೆಯು ಆಧ್ಯಾತ್ಮಿಕ ಪ್ರಯೋಜನಗಳನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯ ಮತ್ತು ಆರ್ಥಿಕ ಶಾಂತಿಯಂತಹ ಲೌಕಿಕ ಪ್ರಯೋಜನಗಳನ್ನು ಸಹ ನೀಡುತ್ತದೆ.

ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದಾಗುವ ಪ್ರಯೋಜನಗಳು:

ಶಿವಲಿಂಗದ ಪೂಜೆಯಲ್ಲಿ ಬೆಳ್ಳಿಗೆ ವಿಶೇಷ ಸ್ಥಾನವಿದೆ. ಬೆಳ್ಳಿಯನ್ನು ಪೂಜಿಸುವುದರಿಂದ ಅನೇಕ ಶುಭ ಫಲಿತಾಂಶಗಳು ದೊರೆಯುತ್ತವೆ:

  • ಸಂಪತ್ತು: ಬೆಳ್ಳಿ ಶುಕ್ರ ಮತ್ತು ಚಂದ್ರರನ್ನು ಸಂಕೇತಿಸುತ್ತದೆ, ಆದ್ದರಿಂದ ಬೆಳ್ಳಿಯ ಶಿವಲಿಂಗವನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ.
  • ಮಾನಸಿಕ ಶಾಂತಿ: ಬೆಳ್ಳಿ ಮನಸ್ಸನ್ನು ಶಾಂತಗೊಳಿಸುವ ಅದ್ಭುತ ಗುಣವನ್ನು ಹೊಂದಿದೆ. ಇದನ್ನು ಪೂಜಿಸುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ.
  • ಆರೋಗ್ಯ ಪರಿಹಾರ: ಬೆಳ್ಳಿ ಶಿವಲಿಂಗಕ್ಕೆ ನಿಯಮಿತವಾಗಿ ಅಭಿಷೇಕ ಮಾಡುವುದು ಮತ್ತು ಅದಕ್ಕೆ ತೀರ್ಥಯಾತ್ರೆಯಲ್ಲಿ ಭಾಗವಹಿಸುವುದರಿಂದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಬೆಳ್ಳಿ ಶಿವಲಿಂಗವನ್ನು ಯಾರು ಪೂಜಿಸಬೇಕು?

ಕೆಲವು ವಿಶೇಷ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದ ತ್ವರಿತ ಪರಿಹಾರ ಪಡೆಯಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

  • ಜಾತಕದಲ್ಲಿ ಚಂದ್ರ ದೋಷ: ಜಾತಕದಲ್ಲಿ ಚಂದ್ರ ದುರ್ಬಲವಾಗಿರುವವರು ತೀವ್ರ ಮಾನಸಿಕ ಒತ್ತಡ, ಆತಂಕ ಅಥವಾ ನಿದ್ರಾಹೀನತೆಯಿಂದ ಬಳಲುತ್ತಾರೆ. ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದ ಅವರ ಮನಸ್ಸು ಸ್ಥಿರಗೊಳ್ಳುತ್ತದೆ ಮತ್ತು ಚಂದ್ರ ದೋಷ ದೂರವಾಗುತ್ತದೆ.
  • ಹೆರಿಗೆಗೆ ಸಂಬಂಧಿಸಿದ ಸಮಸ್ಯೆಗಳು: ಸಂತಾನ ಭಾಗ್ಯಕ್ಕಾಗಿ ದಂಪತಿಗಳು, ಪ್ರತಿ ಸೋಮವಾರ ಬೆಳ್ಳಿ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.
  • ಆರ್ಥಿಕ ತೊಂದರೆಗಳು: ಭಾರೀ ಸಾಲದ ಹೊರೆಯಿಂದ ಬಳಲುತ್ತಿರುವವರು ಮತ್ತು ವ್ಯವಹಾರದಲ್ಲಿ ಆಗಾಗ್ಗೆ ನಷ್ಟವನ್ನು ಎದುರಿಸುತ್ತಿರುವವರು ಅಡೆತಡೆಗಳನ್ನು ತೆಗೆದುಹಾಕಿ ಮತ್ತು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬೆಳ್ಳಿ ಶಿವಲಿಂಗವನ್ನು ಪೂಜಿಸಬಹುದು.
  • ಭಯ ಮತ್ತು ಆತಂಕ: ಅಪರಿಚಿತವಾದ ಯಾವುದೋ ವಿಷಯದ ಬಗ್ಗೆ ನಿರಂತರ ಭಯ ಅಥವಾ ಆತಂಕದಿಂದ ಬಳಲುತ್ತಿರುವವರು ಬೆಳ್ಳಿಯ ರೂಪದಲ್ಲಿ ಶಿವನನ್ನು ಪೂಜಿಸುವುದರಿಂದ ಅಪಾರ ಧೈರ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Peepal Tree: ಅರಳಿ ಮರ ಏಕೆ ಬಾಡುವುದಿಲ್ಲ? ಸೀತಾ ದೇವಿಯ ವರದಾನದ ಪೌರಾಣಿಕ ಕಥೆ ಇಲ್ಲಿದೆ – Kannada News | The Eternal Green: Unravelling the Mystery of the Peepal Tree

ಕಲಿಯುಗದಲ್ಲಿ ಎಂದಿಗೂ ಬಾಡದ ಅರಳಿ ವೃಕ್ಷದ ಹಿಂದಿನ ರಹಸ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ವಿಶೇಷ ಮಹತ್ವವಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬ ನುಡಿಯಂತೆ, ವೃಕ್ಷಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬುದು ಪಾರಂಪರಿಕ ನಂಬಿಕೆ. ಪೂಜ್ಯನೀಯ ವೃಕ್ಷಗಳಲ್ಲಿ, ಆಯುರ್ವೇದ ಗುಣಗಳನ್ನು ಹೊಂದಿರುವ ಮರಗಳಲ್ಲಿ, ದೇವತಾ ವೃಕ್ಷಗಳಲ್ಲಿ ಅರಳಿ ಮರಕ್ಕೆ ಅಗ್ರಸ್ಥಾನವಿದೆ. ಅನೇಕ ದೇವರುಗಳಿಗೆ ಪ್ರತೀಕವಾಗಿ ವೃಕ್ಷಗಳನ್ನು ಪೂಜಿಸುವ ಪದ್ಧತಿ ನಮ್ಮಲ್ಲಿದೆ. ಆದರೆ, ಅರಳಿ ಮರ ಎಂದಿಗೂ ಬಾಡುವುದಿಲ್ಲ ಅಥವಾ ಒಣಗುವುದಿಲ್ಲ ಎಂಬ ಕುತೂಹಲಕಾರಿ ವಿಷಯಕ್ಕೆ ಒಂದು ಪೌರಾಣಿಕ ಹಿನ್ನೆಲೆಯಿದೆ.

ಈ ಪ್ರಶ್ನೆಗೆ ಇತಿಹಾಸವನ್ನು ಅವಲೋಕಿಸಿದಾಗ ಒಂದು ಸ್ವಾರಸ್ಯಕರ ಕಥೆ ಹೊರಬರುತ್ತದೆ. ಶ್ರೀರಾಮ, ಲಕ್ಷ್ಮಣ ಮತ್ತು ಸೀತಾ ದೇವಿ ವನವಾಸದಲ್ಲಿದ್ದಾಗ ಗಯಾ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಲ್ಲಿ ಫಲ್ಗುಣಿ ನದಿಯ ದಡದಲ್ಲಿ ಸೀತಾ ದೇವಿಯನ್ನು ಕೂರಿಸಿ, ರಾಮ ಮತ್ತು ಲಕ್ಷ್ಮಣರು ಆಹಾರ ಅರಸಿ ಕಾಡಿಗೆ ತೆರಳುತ್ತಾರೆ. ಆ ಸಮಯದಲ್ಲಿ, ಫಲ್ಗುಣಿ ನದಿಯಿಂದ ಒಂದು ಕೈ ಆಚೆಗೆ ಬಂದು ಆಹಾರಕ್ಕಾಗಿ ಕೇಳುತ್ತದೆ. ಸೀತಾ ದೇವಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ತನ್ನಲ್ಲಿ ಯಾವುದೇ ಆಹಾರವಿಲ್ಲದಿದ್ದಾಗ, ತನ್ನ ದೈವಿಕ ಶಕ್ತಿಯಿಂದ ನದಿಯ ದಡದಲ್ಲಿರುವ ಮಣ್ಣನ್ನೇ ಅನ್ನವನ್ನಾಗಿ ಪರಿವರ್ತಿಸಿ ಆ ಕೈಗೆ ನೀಡುತ್ತಾಳೆ. ಈ ಘಟನೆಗೆ ಸಾಕ್ಷಿಯಾಗಿ, ರಾಮ-ಲಕ್ಷ್ಮಣರು ಮರಳಿದಾಗ ಹೇಳಲು, ಸೀತಾ ದೇವಿ ಐದು ಅಂಶಗಳನ್ನು ಸಾಕ್ಷಿ ಹೇಳಲು ಕೇಳುತ್ತಾಳೆ. ಅವುಗಳಲ್ಲಿ ಫಲ್ಗುಣಿ ನದಿ, ಒಂದು ಹಸು, ತುಳಸಿ ಗಿಡ, ಅರಳಿ ಮರ, ಮತ್ತು ಅಗ್ನಿ ದೇವರು ಸೇರಿದ್ದರು.

ವಿಡಿಯೋ ಇಲ್ಲಿದೆ ನೋಡಿ:

ರಾಮ-ಲಕ್ಷ್ಮಣರು ಮರಳಿದಾಗ, ಸೀತಾ ದೇವಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ಆದರೆ ರಾಮ-ಲಕ್ಷ್ಮಣರು ಇದನ್ನು ನಂಬುವುದಿಲ್ಲ. ಸತ್ಯವನ್ನು ಸಾಕ್ಷಿ ಹೇಳಲು ಕೇಳಿದಾಗ, ಫಲ್ಗುಣಿ ನದಿ ಮೌನ ವಹಿಸುತ್ತದೆ. ಆಗ ಸೀತಾ ದೇವಿ “ನಿನಗೆ ನೀರಿನ ಕೊರತೆ ಉಂಟಾಗಲಿ” ಎಂದು ಶಪಿಸುತ್ತಾಳೆ. ಇಂದಿಗೂ ಫಲ್ಗುಣಿ ನದಿ ಒಳಪ್ರವಾಹದಿಂದ ಹರಿಯುತ್ತದೆ. ನಂತರ ಹಸು ಸಾಕ್ಷಿ ಹೇಳಲು ಹಿಂದೇಟು ಹಾಕಿದಾಗ, ಸೀತಾ ದೇವಿ “ನೀನು ಜನರಿಗೆ ಆಹಾರವಾಗಿ ಮಾತ್ರ ಉಳಿಯಲಿ” ಎಂದು ಶಾಪ ನೀಡುತ್ತಾಳೆ. ಇಂದಿಗೂ ಗಯಾ ಕ್ಷೇತ್ರದಲ್ಲಿ ಪಿಂಡಗಳನ್ನು ಹಸುಗಳಿಗೆ ಆಹಾರವಾಗಿ ನೀಡುವ ಪದ್ಧತಿಯಿದೆ. ತುಳಸಿ ಗಿಡ ಕೂಡ ಸಾಕ್ಷಿ ಹೇಳಲು ಹಿಂಜರಿದಾಗ, “ನೀನು ಎಲ್ಲೆಂದರಲ್ಲಿ ಬೆಳೆದು ಬೆಳೆಯುವ ಗಿಡವಾಗಲಿ” ಎಂದು ಶಾಪ ನೀಡುತ್ತಾಳೆ. ಅಗ್ನಿ ದೇವರೂ ಕೂಡ ಸಾಕ್ಷಿ ನುಡಿಯಲಿಲ್ಲ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಆದರೆ, ಅರಳಿ ಮರ ಮಾತ್ರ ಸತ್ಯವನ್ನು ನಿಷ್ಠೆಯಿಂದ ನುಡಿಯುತ್ತದೆ. ಸೀತಾ ದೇವಿ ಪ್ರಸನ್ನಳಾಗಿ, ಅರಳಿ ಮರಕ್ಕೆ ಮಹಾನ್ ವರವನ್ನು ನೀಡುತ್ತಾಳೆ. “ಕಲಿಯುಗದಲ್ಲಿ ನೀನು ಎಂದಿಗೂ ಬಾಡದೆ, ಸದಾ ಹಸಿರಾಗಿ ಇರುವೆ. ನಿನ್ನಲ್ಲಿ ದೇವಾನುದೇವತೆಗಳು ನೆಲೆಸುವರು” ಎಂದು ಆಶೀರ್ವದಿಸುತ್ತಾಳೆ. ಅಂದಿನಿಂದ, ಅರಳಿ ಮರಕ್ಕೆ ಅಮರತ್ವದ ವರ ದೊರೆತು, ಅದು ಎಂದಿಗೂ ಬಾಡುವುದಿಲ್ಲ ಎಂಬ ನಂಬಿಕೆ ಇದೆ. ಅರಳಿ ಮರ 24 ಗಂಟೆಯೂ ಪ್ರಾಣವಾಯುವನ್ನು ಹೊರಸೂಸುತ್ತದೆ ಎಂದು ಆಧುನಿಕ ವಿಜ್ಞಾನವೂ ಒಪ್ಪುತ್ತದೆ. ಇತಿಹಾಸದಲ್ಲಿ ಅನೇಕ ದೃಷ್ಟಾಂತ ಕಥೆಗಳ ಮುಖೇನ ಅರಳಿ ಮರದಲ್ಲಿ ದೇವತೆಗಳು ವಾಸವಾಗಿದ್ದಾರೆಂದು ಹೇಳಲಾಗುತ್ತದೆ. ಅರಳಿ ಮರವನ್ನು ಸ್ಪರ್ಶಿಸುವುದರಿಂದ ಅಥವಾ ಅದರ ಹತ್ತಿರ ಓಡಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಚೇತರಿಕೆ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಇದು ಕೇವಲ ನಂಬಿಕೆಯಷ್ಟೇ ಅಲ್ಲದೆ, ವೈಜ್ಞಾನಿಕವಾಗಿ ಸಸ್ಯದ ಗುಣಧರ್ಮಗಳಲ್ಲೂ ಅಡಗಿದೆ. ಹೀಗೆ ಅರಳಿ ಮರ ಸದಾ ಹಸಿರಾಗಿರುವುದು ಇತಿಹಾಸ ಮತ್ತು ನಂಬಿಕೆಯ ಆಧಾರದ ಮೇಲೆ ನಿಂತಿದೆ ಎಂದು ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಜಸ್ಟ್‌ 13 ಸೆಕೆಂಡುಗಳಲ್ಲಿ ಒಂದೇ ರೀತಿ ಕಾಣುವ ಈ ಎರಡು ಚಿತ್ರದಲ್ಲಿನ 3 ವ್ಯತ್ಯಾಸಗಳನ್ನು ಗುರುತಿಸಿ – Kannada News | Optical illusion: Spot the 3 differences between these two pictures in 13 seconds.

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಕೆಲವೊಮ್ಮೆ ನೀವು ನಿಮ್ಮ ಮೆದುಳು ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಹೀಗಾದಾಗ ಈ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳತ್ತ ಗಮನ ಹರಿಸುವುದು ಉತ್ತಮ. ಈ ಚಿತ್ರಗಳಲ್ಲಿ ಕೆಲವೊಂದು ಟ್ರಿಕ್ಕಿ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಇದೀಗ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದೆ. ಎರಡು ಚಿತ್ರಗಳ ನಡುವೆ ಮೂರು ಸಣ್ಣ ವ್ಯತ್ಯಾಸಗಳಿವೆ. ಇಲ್ಲಿ ನಿಮಗಿರುವ ಸವಾಲು ಎಂದರೆ ಆ ವ್ಯತ್ಯಾಸಗಳನ್ನು ಕಂಡುಹಿಡಿಯುವುದು. ಈ ಒಗಟು ಬಿಡಿಸಲು ನಿಮಗೆ 13 ಸೆಕೆಂಡುಗಳು ಮಾತ್ರ ಇವೆ.

ಈ ಚಿತ್ರದಲ್ಲಿ ಏನಿದೆ ಎಂದು ಸೂಕ್ಷ್ಮವಾಗಿ ಗಮನಿಸಿ

ಕಣ್ಣನ್ನು ಮೋಸಗೊಳಿಸಿ, ಮೆದುಳಿಗೆ ಕೆಲಸ ನೀಡುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಒಗಟಿನ ಚಿತ್ರ ಟ್ರಿಕ್ಕಿಯಾಗಿದೆ. ಈ ಬ್ಯಾರೆಲ್‌ನಲ್ಲಿ ಮೂರು ಸೇಬು ಹಣ್ಣುಗಳಂತೆ ಕಾಣುತ್ತದೆ. ಅದರ ಪಕ್ಕದಲ್ಲಿರುವ ಚಿತ್ರವೂ ಒಂದೇ ರೀತಿ ಇದೆ. ಆದರೆ ಎರಡು ಚಿತ್ರಗಳ ನಡುವೆ ಮೂರು ಸಣ್ಣ ವ್ಯತ್ಯಾಸಗಳಿವೆ. 13 ಸೆಕೆಂಡುಗಳಲ್ಲಿ ಈ ವ್ಯತ್ಯಾಸಗಳನ್ನು ಗುರುತಿಸುವ ಚಾಲೆಂಜ್ ನಿಮ್ಮ ಮುಂದಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅವಿತು ಕುಳಿತಿರುವ ಇಲಿಯನ್ನು 5 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ

ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಭ್ರಮೆಯನ್ನುಂಟು ಮಾಡಬಹುದು. ಮೊದಲ ನೋಟದಲ್ಲೇ ನಿಮ್ಮನ್ನು ಮೋಸಗೊಳಿಸಬಹುದು. ಇಲ್ಲಿ ನೀಡಲಾಗಿರುವ ಎರಡು ಚಿತ್ರಗಳ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಳಿದ್ದಷ್ಟು ಸುಲಭವಲ್ಲ. ಒಂದು ವೇಳೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ಚಿಂತಿಸ ಬೇಡಿ. ಈ ಕೆಳಗಿನ ಚಿತ್ರದಲ್ಲಿ ಮೂರು ವ್ಯತ್ಯಾಸಗಳನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:53 am, Fri, 19 December 25

Source link

ನಂಜನಗೂಡು ಬಳಿ ಕೆಎಸ್​​ಆರ್​ಟಿಸಿ ಬಸ್ ಬೆಂಕಿಗಾಹುತಿ​​: ಪ್ರಯಾಣಿಕರು ಪಾರಾಗಿದ್ದೇ ರೋಚಕ

ಮೈಸೂರು, ಡಿಸೆಂಬರ್​ 19: ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ ಮೈಸೂರಿನ ನಂಜನಗೂಡು ಹೊಸಳ್ಳಿ ಗೇಟ್ ಬಳಿ ನಡೆದಿದೆ. ಅದೃಷ್ಟವಶಾತ್​​ ಬಸ್​ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಬಚಾವ್​​ ಆಗಿದ್ದಾರೆ. ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಬಸ್​​ನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡಿದ್ದು, ಎಚ್ಚೆತ್ತ ಚಾಲಕ ಹೊಸಳ್ಳಿ ಗೇಟ್ ಬಳಿ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಿದ ಪರಿಣಾಮ, ಬೆಂಕಿಗೆ ಬಸ್​​ ಆಹುತಿಯಾಗಿದೆ. ಈ ಬಗ್ಗೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Indian Railways Update: ರೈಲ್ವೆ ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಟಿಕೆಟ್​ ಅನ್ನು ಮೊಬೈಲ್​ನಲ್ಲಿ ತೋರಿಸಿದ್ರೆ ಸಾಲ್ದು – Kannada News | Indian Railways New Rule: Printed Ticket Mandatory to Stop Digital Fraud

ನವದೆಹಲಿ, ಡಿಸೆಂಬರ್ 19: ಹೆಚ್ಚುತ್ತಿರುವ ಡಿಜಿಟಲ್ ವಂಚನೆ ತಡೆಯುವ ದೃಷ್ಟಿಯಿಂದ ಭಾರತೀಯ ರೈಲ್ವೆ(Indian Railways) ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ರೈಲ್ವೆ ಟಿಕೆಟ್ ಅನ್ನು ಮೊಬೈಲ್​ನಲ್ಲಿ ತೋರಿಸಿದರೆ ಸಾಲದು ಬದಲಾಗಿ ಮುದ್ರಿತ ಟಿಕೆಟ್ ಅನ್ನು ಕೈಯಲ್ಲಿಟ್ಟುಕೊಂಡಿರಬೇಕು. ತಂತ್ರಜ್ಞಾನದ ದುರುಪಯೋಗವನ್ನು ತಡೆಯುವ ಗುರಿಯನ್ನು ರೈಲ್ವೆ ಹೊಂದಿದೆ. ಭಾರತೀಯ ರೈಲ್ವೆ ಮಾಡಿದ ಹೊಸ ಟಿಕೆಟಿಂಗ್ ನಿಯಮಗಳ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿವೆ.

ಇಂದಿನ ಕಾಲದಲ್ಲಿ, ಕೃತಕ ಬುದ್ಧಿಮತ್ತೆ ( AI) ಬಳಕೆ ವೇಗವಾಗಿ ಹೆಚ್ಚುತ್ತಿದೆ . ಎಐ ಕೆಲಸವನ್ನು ಸುಲಭಗೊಳಿಸಿದರೂ, ಅದರ ದುರುಪಯೋಗವು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ . ಇತ್ತೀಚೆಗೆ, ಎಐ ಬಳಸಿ ರಚಿಸಲಾದ ನಕಲಿ ಟಿಕೆಟ್‌ಗಳ ಗಂಭೀರ ಪ್ರಕರಣವನ್ನು ರೈಲ್ವೆ ಎದುರಿಸಿದೆ . ಈ ಘಟನೆಯ ನಂತರ, ರೈಲ್ವೆಯ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು ಮತ್ತು ತನಿಖೆಯನ್ನು ಬಿಗಿಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು . ರೈಲ್ವೆ ಈಗ ಅಂತಹ ಡಿಜಿಟಲ್ ವಂಚನೆಯನ್ನು ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

ಈ ಘಟನೆ ಜೈಪುರದಲ್ಲಿ ನಡೆದಿದೆ . ತನಿಖೆಯ ಸಮಯದಲ್ಲಿ, ಕೆಲವು ವಿದ್ಯಾರ್ಥಿಗಳು ತಮ್ಮ ಮೊಬೈಲ್​ನಲ್ಲಿ ಟಿಕೆಟ್ ತೋರಿಸಿ ಪ್ರಯಾಣಿಸಿದ್ದರು. ಕ್ಯೂಆರ್ ಕೋಡ್ , ಪ್ರಯಾಣ ಮಾಹಿತಿ ಮತ್ತು ಶುಲ್ಕ ಎಲ್ಲವೂ ಸರಿಯಾಗಿದೆ. ಆದಾಗ್ಯೂ, ಟಿಸಿ ಟಿಕೆಟ್‌ಗಳನ್ನು ಹೆಚ್ಚು ವಿವರವಾಗಿ ಪರಿಶೀಲಿಸಿದಾಗ, ಸತ್ಯ ಹೊರಬಂದಿತ್ತು. ಎಐ ಉಪಕರಣವನ್ನು ಬಳಸಿಕೊಂಡು , ವಿದ್ಯಾರ್ಥಿಗಳು ಒಂದೇ ಟಿಕೆಟ್ ಖರೀದಿಸಿ, ಏಳು ಪ್ರಯಾಣಿಕರ ಹೆಸರುಗಳು ಅದರಲ್ಲಿ ತೋರಿಸುವಂತೆ ಮಾಡಿದ್ದಾರೆ. ಇದರರ್ಥ ಏಳು ಜನರು ಒಂದೇ ಟಿಕೆಟ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಮತ್ತಷ್ಟು ಓದಿ: Video:ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಬಿದ್ದ ವೃದ್ಧರನ್ನು ದೇವರಂತೆ ಬಂದು ರಕ್ಷಿಸಿದ ರೈಲ್ವೆ ಪೊಲೀಸ್

ತಪಾಸಣೆ ವ್ಯವಸ್ಥೆ ಕಠಿಣ
ಈ ಘಟನೆಯ ನಂತರ , ರೈಲ್ವೆ ಎಲ್ಲಾ ವಿಭಾಗಗಳಿಗೆ ಎಚ್ಚರಿಕೆ ನೀಡಿದೆ . ಸಂದೇಹವಿದ್ದಲ್ಲಿ , ಯುಟಿಎಸ್ ಸಂಖ್ಯೆ ಮತ್ತು ಬಣ್ಣದ ಕೋಡ್ ಅನ್ನು ಪರಿಶೀಲಿಸಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ .ಇದು ಟಿಕೆಟ್ ನಿಜವಾದದ್ದೇ ಎಂದು ತಕ್ಷಣವೇ ನಿರ್ಧರಿಸುತ್ತದೆ . ಕಾಯ್ದಿರಿಸದ ಟಿಕೆಟ್‌ನ ಮುದ್ರಿತ ಪ್ರತಿಯನ್ನು ಕೊಂಡೊಯ್ಯುವುದು ಕಡ್ಡಾಯ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ . ಹೆಚ್ಚುವರಿಯಾಗಿ , ಭವಿಷ್ಯದಲ್ಲಿ ವಂಚನೆಯನ್ನು ತಡೆಗಟ್ಟಲು ಟಿಕೆಟ್ ಬ್ರೋಕರ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ .

ಟಿಕೆಟ್ ವಂಚನೆ
ಭಾರತೀಯ ರೈಲ್ವೆಯಲ್ಲಿ ಟಿಕೆಟ್‌ಗಳಿಗೆ ಸಂಬಂಧಿಸಿದ ಇಂತಹ ವಂಚನೆಗಳನ್ನು ತಡೆಗಟ್ಟಲು, ಭಾರತೀಯ ರೈಲ್ವೆ ಈಗ ಯುಟಿಎಸ್, ಎಟಿವಿಎಂಗಳು ಅಥವಾ ಟಿಕೆಟ್ ಕೌಂಟರ್‌ಗಳ ಮೂಲಕ ನೀಡಲಾದ ಕಾಯ್ದಿರಿಸದ ಟಿಕೆಟ್‌ಗಳ ಮುದ್ರಿತ ಪ್ರತಿಯನ್ನು ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸಿದೆ. ಆದಾಗ್ಯೂ, ಈ ನಿಯಮವು ಇ-ಟಿಕೆಟ್‌ಗಳು ಮತ್ತು ಎಂಟಿ-ಕಟ್ ಟಿಕೆಟ್‌ಗಳಿಗೆ ಅನ್ವಯಿಸುವುದಿಲ್ಲ.

ಕಡ್ಡಾಯ ನಿಯಮ

ರೈಲ್ವೆ ಪ್ರಯಾಣಿಕರಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ . ಈ ನಿಯಮದ ಪ್ರಕಾರ , ಯುಟಿಎಸ್ , ಎಟಿವಿಎಂ ಅಥವಾ ಮೊಬೈಲ್ ಪರದೆಯಲ್ಲಿ ಪ್ರದರ್ಶಿಸಲಾದ ಕೌಂಟರ್‌ಗಳಿಂದ ಖರೀದಿಸಿದ ಕಾಯ್ದಿರಿಸದ ಟಿಕೆಟ್‌ಗಳು ಮಾನ್ಯವಾಗಿರುವುದಿಲ್ಲ . ಪ್ರಯಾಣಿಕರು ಟಿಕೆಟ್‌ನ ಮುದ್ರಿತ ಪ್ರತಿಯನ್ನು ಕೊಂಡೊಯ್ಯಬೇಕಾಗುತ್ತದೆ. ಆದಾಗ್ಯೂ , ಇ -ಟಿಕೆಟ್‌ಗಳು ಮತ್ತು ಎಂ – ಟಿಕೆಟ್‌ಗಳನ್ನು ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ನಕಲಿ ಟಿಕೆಟ್‌ಗಳು ಮತ್ತು ವಂಚನೆಯನ್ನು ತಡೆಗಟ್ಟಲು, ಸುರಕ್ಷಿತ ಮತ್ತು ಪಾರದರ್ಶಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:48 am, Fri, 19 December 25

Source link

ಸಿಎಂ ಸಿದ್ದರಾಮಯ್ಯ ಬಣದ ಡಿನ್ನರ್​​ ಮೀಟಿಂಗ್​​ ವೇಳೆ ಏನೆಲ್ಲ ಚರ್ಚೆ?: ಇಲ್ಲಿದೆ ಇನ್​​ಸೈಡ್​​ ಮಾಹಿತಿ – Kannada News | CM Siddaramaiahs Team Holds Dinner Meeting in Belagavi, Inside Details

ಡಿನ್ನರ್​​ ಮೀಟಿಂಗ್​​ ಬಂದ ನಾಯಕರು

ಬೆಳಗಾವಿ, ಡಿಸೆಂಬರ್​​ 19: ಚಳಿಗಾಲದ ಅಧಿವೇಶನದ ನಡುವೆ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ಡಿನ್ನರ್​​ ಪಾಲಿಟಿಕ್ಸ್​​ ಜೋರಾಗಿ ನಡೆಯುತ್ತಿದೆ. ಸಚಿವ ಸತೀಶ್​​ ಜಾರಕಿಹೊಳಿ ಏರ್ಪಡಿಸಿದ್ದ ಡಿನ್ನರ್​​ನಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಅವರ ಆಪ್ತವಲಯ ಭಾಗಿಯಾಗಿದೆ. ಅನಾರೋಗ್ಯದ ನಡುವೆಯೂ ಸಿದ್ದರಾಮಯ್ಯ ಡಿನ್ನರ್​​ನಲ್ಲಿ ಭಾಗಿಯಾಗಿದ್ದಾರೆ. ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ನಾಯಕರಿಗೆ ಹೈಕಮಾಂಡ್​​ ಬುಲಾವ್​​ ಸಾಧ್ಯತೆ ಹಿನ್ನಲೆ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ ಎನ್ನಲಾಗಿದೆ.

ಡಿನ್ನರ್​​ ಮೀಟಿಂಗ್​​ ವೇಳೆ ಏನೆಲ್ಲ ಚರ್ಚೆ?

ಊಟದ ಹೆಸರಲ್ಲಿ ಸಿದ್ದರಾಮಯ್ಯ ಬಣದ ನಾಯಕರೆಲ್ಲ ಒಟ್ಟಿಗೆ ಸೇರಿದ್ದರೂ ಹಲವು ರಾಜಕೀಯ ವಿಚಾರಗಳು ಈ ವೇಳೆ ಚರ್ಚೆಯಾಗಿವೆ. ಸಿದ್ದರಾಮಯ್ಯ ದೆಹಲಿಗೆ ಹೋಗುವ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್​​ ದೆಹಲಿಗೆ ಹೋಗುವ ಸಾಧ್ಯತೆ ಇದೆ. ಒಂದೊಮ್ಮೆ ಅಂದುಕೊಂಡಂತೆ ಆದ್ರೆ ಯಾವ ರೀತಿಯಾಗಿ ತಾವು ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಅಲ್ಲದೆ ಸಿಎಂ ಸ್ಥಾನ ಬದಲಾವಣೆ ವಿಚಾರ ಬಂದ್ರೆ ಅದನ್ನು ಹೇಗೆ ನಿಭಾಯಿಸಬೇಕು, ಸಿಎಂ ಸ್ಥಾನ ಬದಲಾವಣೆ ಆದರೆ ಅದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಯಾವ ರೀತಿ ಡ್ಯಾಮೇಜ್ ಆಗಲಿದೆ ಅನ್ನೋದನ್ನ ಹೇಗೆ ಮನವರಿಕೆ ಮಾಡಬೇಕು ಎಂಬ ಬಗ್ಗೆಯೂ ಮಾತುಕತೆ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಮುಂದುವರಿದ ಡಿನ್ನರ್ ಮೀಟಿಂಗ್; ಅನಾರೋಗ್ಯದ ನಡುವೆಯೂ ಸಿಎಂ ಭಾಗಿ

ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಡಿ. ಸಿಎಂ ಸ್ಥಾನ ಬಿಟ್ಟು ಕೊಟ್ಟರೆ ಸಾಂಪ್ರಾದಾಯಿಕ ಅಹಿಂದಾ ಮತಗಳು ದೂರವಾಗುವ ಸಾಧ್ಯತೆ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿ. ಅಹಿಂದಾ ಸಚಿವರು, ಬಹುತೇಕ ಶಾಸಕರು ತಮ್ಮ ಪರವಾಗಿದ್ದಾರೆಂದು ಗಟ್ಟಿಯಾಗಿ ಹೇಳಿ ಎಂದು ಸಿದ್ದರಾಮಯ್ಯ ಅವರ ಮೇಲೆ ಬೆಂಬಲಿಗರು ಈ ವೇಳೆ ಒತ್ತಡ ಹೇರಿದ್ದಾರೆ. ರಾಜಣ್ಣರಂತೆ ಇನ್ನುಳಿದ ಅಹಿಂದಾ ನಾಯಕರು ರಾಹುಲ್‌ ಗಾಂಧಿಗೆ ಪತ್ರ ಚಳುವಳಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಸಿದ್ದರಾಮಯ್ಯರ ವರ್ಚಸ್ಸು ಹೆಚ್ಚಿಸಲು ಶಕ್ತಿ ಪ್ರದರ್ಶನದಂತಹ ಸಮಾವೇಶ ಆಯೋಜನೆ ಬಗ್ಗೆಯೂ ಚಿಂತಿಸಲಾಗಿದ್ದು, ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಮಾದರಿಯಲ್ಲಿ ಜನವರಿ ವೇಳೆ ಅಹಿಂದಾ ಸಮಾವೇಶ ನಡೆಸುವ ಬಗ್ಗೆ ಚರ್ಚೆಯಾಗಿದೆ. ಈ ಸಮಾವೇಶದಲ್ಲಿ ಲಕ್ಷಾಂತರ ಜನರನ್ನು ಸೇರಿ ರಾಜ್ಯದ ಜನ ಸಿದ್ದರಾಮಯ್ಯ ಪರ ಇದ್ದಾರೆಂಬ ಸಂದೇಶ ರವಾನಿಸುವ ಪ್ಲ್ಯಾನ್ ಮಾಡಲಾಗಿದೆ.

ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಸಿದ್ದರಾಮಯ್ಯ ಬೆಂಬಲಿಗರು ಕಣ್ಣಿಟ್ಟಿದ್ದು, ಸಿಎಂ ಹುದ್ದೆಯ ಜೊತೆಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲೂ ಪ್ರಯತ್ನಿಸೋಣ. ಆ ಮೂಲಕ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡ್ತಿರುವ ಡಿಕೆಶಿಗೆ ಕೌಂಟರ್‌ ಕೊಡೋಣ ಎಂಬ ಬಗ್ಗೆಯೂ ಮಾತುಕತೆ ನಡೆದಿದ್ದು, ಜನವರಿ ತಿಂಗಳಲ್ಲಿ ಸತೀಶ್ ಜಾರಕಿಹೊಳಿ‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಒತ್ತಡ ಹಾಕುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:14 am, Fri, 19 December 25

Source link

Friday Dos and Don’ts: ಶುಕ್ರವಾರ ತಪ್ಪಿಯೂ ಈ ಕೆಲಸ ಮಾಡಬೇಡಿ; ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು – Kannada News | Friday Dos and Don’ts: Boost Lakshmi’s Blessings and Financial Prosperity

ಹಿಂದೂ ಧರ್ಮದಲ್ಲಿ, ಪ್ರತಿ ದಿನವೂ ಒಂದೊಂದು ದೇವರಿಗೆ ಮೀಸಲಾಗಿರುತ್ತದೆ. ಶುಕ್ರವಾರವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಈ ದಿನದಂದು ಲಕ್ಷ್ಮಿ ದೇವಿಗೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಈ ದಿನವನ್ನು ಶುಕ್ರ ಗ್ರಹಕ್ಕೂ ಸಮರ್ಪಿಸಲಾಗಿದೆ. ಶುಕ್ರನನ್ನು ಭೌತಿಕ ಸಂತೋಷ, ವೈವಾಹಿಕ ಆನಂದ, ಐಷಾರಾಮಿ, ಖ್ಯಾತಿ ಮತ್ತು ಕಲೆಯಲ್ಲಿ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ. ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದರಿಂದ ಅವಳ ವಿಶೇಷ ಆಶೀರ್ವಾದವನ್ನು ಪಡೆಯಬಹುದು. ಅದರಂತೆ ಶುಕ್ರವಾರದಂದು ಈ ಐದು ಕೆಲಸಗಳನ್ನು ಎಂದಿಗೂ ಮಾಡಬಾರದು. ಶುಕ್ರವಾರದಂದು ಈ ಕೆಲಸಗಳನ್ನು ಮಾಡುವುದರಿಂದ ಮನೆಗೆ ಬಡತನ ಬರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಶುಕ್ರವಾರದಂದು ಮಾಡಬಾರದ ಈ ಐದು ವಿಷಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಮಾಂಸ ಮತ್ತು ಮದ್ಯ ತಪ್ಪಿಸಿ:

ಶುಕ್ರವಾರದಂದು ಮಾಂಸ ಮತ್ತು ಮದ್ಯ ಸೇವಿಸಬಾರದು. ಇದು ಲಕ್ಷ್ಮಿ ದೇವಿಯನ್ನು ಕೋಪಗೊಳಿಸುತ್ತದೆ ಮತ್ತು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ.

ಜಗಳವಾಡಬೇಡಿ:

ಶುಕ್ರವಾರದಂದು ಯಾರೊಂದಿಗೂ ಜಗಳವಾಡಬಾರದು. ಹಾಗೆ ಮಾಡುವುದರಿಂದ ಜಾತಕದಲ್ಲಿ ಶುಕ್ರ ಗ್ರಹ ದುರ್ಬಲಗೊಳ್ಳುತ್ತದೆ ಮತ್ತು ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ನಂಬಲಾಗಿದೆ.

ಹಣದ ವಹಿವಾಟು ಮಾಡಬೇಡಿ:

ಶುಕ್ರವಾರದಂದು ಹಣದ ವಹಿವಾಟುಗಳನ್ನು ತಪ್ಪಿಸಬೇಕು. ಈ ದಿನದಂದು ಹಣವನ್ನು ಪಡೆಯುವುದು ಅಥವಾ ಸಾಲ ನೀಡುವುದು ಸಹ ಮಾಡಬಾರದು. ನಂಬಿಕೆಗಳ ಪ್ರಕಾರ, ಈ ದಿನದಂದು ಹಣದ ವಹಿವಾಟು ಮಾಡುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು.

ಆಸ್ತಿ ಖರೀದಿಸಬೇಡಿ:

ಶುಕ್ರವಾರದಂದು ಆಸ್ತಿ ಖರೀದಿಸುವುದನ್ನು ತಪ್ಪಿಸಬೇಕು. ಹಾಗೆ ಮಾಡುವುದರಿಂದ ಸಂಪತ್ತಿನ ಒಳಹರಿವಿಗೆ ಅಡ್ಡಿಯಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೇ ಈ ದಿನ ಯಾರನ್ನೂ ಅವಮಾನಿಸಬಾರದು.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಅಡುಗೆಮನೆ ವಸ್ತುಗಳನ್ನು ಖರೀದಿಸಬೇಡಿ:

ಶುಕ್ರವಾರದಂದು ನೀವು ಯಾವುದೇ ಅಡುಗೆಮನೆ ವಸ್ತುಗಳನ್ನು ಖರೀದಿಸಬಾರದು. ನೀವು ಯಾರಿಂದಲೂ ಉಚಿತವಾಗಿ ಏನನ್ನೂ ಸ್ವೀಕರಿಸಬಾರದು. ಹಾಗೆ ಮಾಡುವುದರಿಂದ ನಿಮ್ಮ ಸಾಲ ಹೆಚ್ಚಾಗುತ್ತದೆ.

ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸಿ:

ಶುಕ್ರವಾರ ಸಂಜೆ, ಮುಖ್ಯ ದ್ವಾರದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ. ಲಕ್ಷ್ಮಿ ದೇವಿಗೆ ಕಮಲದ ಹೂವು, ತೆಂಗಿನಕಾಯಿ ಮತ್ತು ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಿ. ಬಡವರಿಗೆ ಮತ್ತು ನಿರ್ಗತಿಕರಿಗೆ ಹಣ, ಆಹಾರ ಮತ್ತು ಬಿಳಿ ಬಟ್ಟೆಗಳನ್ನು ದಾನ ಮಾಡಿ. ಈ ಎಲ್ಲಾ ಕಾರ್ಯಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾನ್ ಮಧ್ಯೆಯೂ ‘ಧುರಂಧರ್’ ವೀಕ್ಷಿಸಿದ 20 ಲಕ್ಷ ಪಾಕ್ ಮಂದಿ – Kannada News | Ranveer Singh Starrer Dhurandhar Movie Super Hit In Pakistan Here is how

‘ಧುರಂಧರ್’ ಸಿನಿಮಾದಲ್ಲಿ (Dhurandhar Movie)  ರಣವೀರ್ ಸಿಂಗ್ ಸ್ಪೈ ಪಾತ್ರ ಮಾಡಿದ್ದಾರೆ. ಭಾರತದ ಸೈನಿಕನೋರ್ವ ಪಾಕಿಸ್ತಾನದ ಉಗ್ರ ಸಂಘಟನೆ ಜೊತೆ ಸೇರಿ, ಅಲ್ಲಿಯವರಂತೆ ಬೆರೆತು ಅವರ ಎದೆಯಲ್ಲಿ ಭಯ ಹುಟ್ಟಿಸೋ ಕಥೆಯನ್ನು ಚಿತ್ರ ಹೊಂದಿದೆ. ಪಾಕಿಸ್ತಾನ ಮಾಡಿದ ಕೆಟ್ಟ ಕೆಲಸಗಳನ್ನು ತೋರಿಸಲಾಗಿದೆ. ಈ ಚಿತ್ರ ಪಾಕಿಸ್ತಾನದಲ್ಲಿ ಬ್ಯಾನ್ ಆಗಿದೆ. ಆದರೂ ಸಿನಿಮಾ ಆ ದೇಶದಲ್ಲಿ ಸೂಪರ್ ಹಿಟ್ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.

ಭಾರತದಲ್ಲಿ ಪಾಕ್ ಸಿನಿಮಾಗಳು ಹಾಗೂ ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳು ಥಿಯೇಟರ್​​ನಲ್ಲಿ ಪ್ರದರ್ಶನ ಕಾಣುವುದಿಲ್ಲ. ಮೊದಲು ಹಿಂದಿ ಚಿತ್ರಕ್ಕೆ ಪಾಕಿಸ್ತಾನ ಕೂಡ ಒಂದು ದೊಡ್ಡ ಮಾರುಕಟ್ಟೆ ಆಗಿತ್ತು. ಆದರೆ, ಎರಡೂ ದೇಶಗಳ ಮಧ್ಯೆ ಮೂಡಿರುವ ದ್ವೇಷದ ಕಾರಣಕ್ಕೆ ಭಾರತದ ಸಿನಿಮಾ ಅಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಆದಾಗ್ಯೂ ಪಾಕ್ ಮಂದಿ ಚಿತ್ರವನ್ನು ವೀಕ್ಷಿಸಿದ್ದಾರೆ.

1999ರ ಖಂದಹಾರ್ ಹೈಜಾಕ್, 26/11ರ ಮುಂಬೈ ದಾಳಿ ಮದಲಾದ ವಿಷಯಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ ಭಾರತದಲ್ಲಿ ಸಾಕಷ್ಟು ಹೈಪ್ ಪಡೆದುಕೊಂಡಿದೆ. ಈ ಚಿತ್ರ ಕೇವಲ ಎರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಬರೋಬ್ಬರಿ 20 ಲಕ್ಷ ಬಾರಿ ಅಕ್ರಮವಾಗಿ ಡೌನ್​ಲೋಡ್ ಆದ ಬಗ್ಗೆ ವರದಿ ಆಗಿದೆ. ಅಂದರೆ, ಕನಿಷ್ಠ 20 ಲಕ್ಷ ಪಾಕ್ ಮಂದಿ ಈ ಸಿನಿಮಾನ ವೀಕ್ಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಬಾರಿ ಡೌನ್​ಲೋಡ್ ಆದ ಪೈರೇಟೆಡ್ ಸಿನಿಮಾ ಇದಾಗಲಿದೆ.

ಪಾಕಿಸ್ತಾನ ಒಂದು ಉಗ್ರರಾಷ್ಟ್ರ ಎಂದು ಸಿನಿಮಾದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ನಿರ್ದೇಶಕ ಆದಿತ್ಯ ಧಾರ್. ಸಿನಿಮಾ ಈ ರೀತಿ ವೀಕ್ಷಣೆ ಕಂಡಿರುವುದರಿಂದ ನಿರ್ಮಾಪಕರಿಗೆ 50-60 ಕೋಟಿ ರೂಪಾಯಿ ನಷ್ಟ ಆಗಿದೆ. ಆದರೆ, ನಿರ್ದೇಶಕರು ಪಾಕಿಸ್ತಾನಕ್ಕೆ ತಲುಪಿಸಬೇಕಿದ್ದ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿದ್ದಾರೆ. ಪಾಕಿಸ್ತಾನ ಮಾಡಿದ ಕೆಟ್ಟ ಕೆಲಸಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾಗೆ ಸಿಕ್ಕ ಹೈಪ್ ನೋಡಿ ಅಲ್ಲಿನ ಜನರಿಗೆ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಸಿನಿಮಾದ ಪೈರಸಿ ಕಾಪಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: 167 ಕೋಟಿ ರೂ. ಒಡೆಯ, ಧುರಂಧರ್ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?

ಧುರಂಧರ್ ಸಿನಿಮಾದ ಗಳಿಕೆ 460 ಕೋಟಿ ರೂಪಾಯಿ ಆಗಿದೆ. ಶನಿವಾರದ ವೇಳೆಗೆ ಸಿನಿಮಾದ ಕಲೆಕ್ಷನ್ 500 ಕೋಟಿ ರೂಪಾಯಿ ತಲುಪಲಿದೆ. ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ‘ಧುರಂಧರ್’ ಹೊರ ಹೊಮ್ಮುವ ಸಾಧ್ಯತೆ ಉದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version