IND vs NZ: ‘ಭಾರತೀಯರ ಹೃದಯ ಒಡೆದು ಟ್ರೋಫಿ ಗೆಲ್ಲುತ್ತೇವೆ’; ಫೈನಲ್​ಗೂ ಮುನ್ನ ಕಿವೀಸ್ ನಾಯಕನ ಹೇಳಿಕೆ

IND vs NZ: ‘ಭಾರತೀಯರ ಹೃದಯ ಒಡೆದು ಟ್ರೋಫಿ ಗೆಲ್ಲುತ್ತೇವೆ’; ಫೈನಲ್​ಗೂ ಮುನ್ನ ಕಿವೀಸ್ ನಾಯಕನ ಹೇಳಿಕೆ

2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 8 ರಂದು ನಡೆಯುವ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್, ಟ್ರೋಫಿಗಾಗಿ ಕೆಲವು ಹೃದಯಗಳನ್ನು ಒಡೆಯುವುದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ. ಅಂದರೆ ಟಿ20 ವಿಶ್ವಕಪ್ ಗೆದ್ದು ಟೀಂ ಇಂಡಿಯಾ ಅಭಿಮಾನಿಗಳ ಹೃದಯ ಒಡೆಯುವುದಕ್ಕೆ ನಾವು ಸಿದ್ಧ ಎಂಬುದು ಕಿವೀಸ್ ನಾಯಕನ ಹೇಳಿಕೆಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, 2023 ರ ಏಕದಿನ ವಿಶ್ವಕಪ್​ ಫೈನಲ್​ಗೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ನೀಡಿದ್ದ ಹೇಳಿಕೆಯನ್ನೇ ಪುನಾರವರ್ತಿಸಿದ್ದಾರೆ. ವಾಸ್ತವವಾಗಿ 2023 ರ ಏಕದಿನ ವಿಶ್ವಕಪ್ ಫೈನಲ್​ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಮ್ಮಿನ್ಸ್, ‘ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ಮೌನಗೊಳಿಸುವುದಾಗಿ’ ಹೇಳಿದ್ದರು. ಕಮ್ಮಿನ್ಸ್ ಹೇಳಿದಂತೆಯೇ ಫೈನಲ್ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ ಅಭಿಮಾನಿಗಳನ್ನು ಮೌನಕ್ಕೆ ತಳ್ಳಿತ್ತು.

ಇದೀಗ ಮಿಚೆಲ್ ಸ್ಯಾಂಟ್ನರ್ ಕೂಡ ಅದೇ ರೀತಿಯ ಹೇಳಿಕೆಯನ್ನು ನೀಡಿದ್ದು, ‘ಈ ಫೈನಲ್ ಗೆಲ್ಲಲು ತಮ್ಮ ತಂಡವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸದಿದ್ದರೂ, ಸಣ್ಣ ವಿವರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಪ್ರದರ್ಶನವನ್ನು ಸುಧಾರಿಸಲು ಪ್ರಯತ್ನಿಸುತ್ತೇವೆ. ‘ನಮ್ಮ ಗೆಲುವು ಕೆಲವು ಅಭಿಮಾನಿಗಳ ಹೃದಯವನ್ನು ಒಡೆದರೆ, ನಮ್ಮ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ನಾವು ಬಯಸುವುದರಿಂದ ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದಿದ್ದಾರೆ.

ಫೈನಲ್ ಪಂದ್ಯಕ್ಕೂ ಮುನ್ನ ಮಿಚೆಲ್ ಸ್ಯಾಂಟ್ನರ್ ನೀಡಿರುವ ಈ ಹೇಳಿಕೆ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಏಕೆಂದರೆ 2023 ರ ಏಕದಿನ ವಿಶ್ವಕಪ್ ಫೈನಲ್​ನಲ್ಲೂ ಕಮ್ಮಿನ್ಸ್ ಈ ರೀತಿಯ ಹೇಳಿಕೆಯನ್ನು ನೀಡಿ, ಹೇಳಿದಂತೆಯೇ ಮಾಡಿ ತೋರಿಸಿದ್ದರು. ಹೀಗಾಗಿ ಮಿಚೆಲ್ ಸ್ಯಾಂಟ್ನರ್ ಕೂಡ ಅದೇ ರೀತಿ ಮಾಡುತ್ತಾರೆಯೇ ಎಂಬುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದಾಗ್ಯೂ ಟಿ20 ಮಾದರಿಯಲ್ಲಿ ಭಾರತ ತಂಡ ಬಲಿಷ್ಠವಾಗಿರುವುದರಿಂದ ಕಿವೀಸ್ ನಾಯಕನ ಹೇಳಿಕೆಯನ್ನು ಅವರಿಗೆ ತಿರುಗುಬಾಣ ಮಾಡಲಿದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಟ್ಟುಹಬ್ಬಕ್ಕೆ ಯಶ್ ಕೊಟ್ಟ ಉಡುಗೊರೆಯೇನು? ರಾಧಿಕಾ ಪಂಡಿತ್ ಉತ್ತರ ಕೇಳಿ

ಇಂದು (ಮಾರ್ಚ್ 07) ರಾಧಿಕಾ ಪಂಡಿತ್ (Radhika Pandit) ಹುಟ್ಟುಹಬ್ಬ. ಕನ್ನಡದ ಸ್ಟಾರ್ ನಟಿಯಾಗಿ ಮೆರೆದ ರಾಧಿಕಾ ಪಂಡಿತ್, ಯಶ್ ಅವರನ್ನು ಮದುವೆ ಆದ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡರು. ಅದರಲ್ಲೂ ಮಕ್ಕಳಾದ ಬಳಿಕ ನಟನೆಗೆ ಸಂಪೂರ್ಣ ವಿದಾಯವನ್ನೇ ಹೇಳಿಬಿಟ್ಟರು. ನಟನೆ ಬಿಟ್ಟು ಸಾಕಷ್ಟು ವರ್ಷಗಳಾಗಿದ್ದರೂ ಸಹ ರಾಧಿಕಾ ಪಂಡಿತ್ ಅವರ ಕ್ರೇಜ್ ಅಭಿಮಾನಿಗಳಲ್ಲಿ ಇನ್ನೂ ಕಡಿಮೆ ಆಗಿಲ್ಲ. ಇಂದು ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ರಾಜ್ಯದ ಹಲವು ಮೂಲೆಗಳಿಂದ ಅಭಿಮಾನಿಗಳು ಬಂದು ತಮ್ಮ ಮೆಚ್ಚಿನ ನಟಿಗೆ ಶುಭಾಶಯಗಳನ್ನು ಕೋರಿದರು. ಈ ವೇಳೆ ಟಿವಿ9 ಜೊತೆಗೆ ವಿಶೇಷವಾಗಿ ಮಾತನಾಡಿದ ರಾಧಿಕಾ ಪಂಡಿತ್, ಯಶ್ ತಮಗೆ ಕೊಟ್ಟ ಉಡುಗೊರೆ ಏನು? ಎಂಬುದನ್ನು ಸಹ ಹೇಳಿಕೊಂಡರು.

ಟಿವಿ9 ಜೊತೆಗೆ ಮಾತನಾಡಿದ ರಾಧಿಕಾ ಪಂಡಿತ್, ‘ನನಗೆ ವೈಯಕ್ತಿಕವಾಗಿ ಬಹಳ ಖುಷಿಯಾಗುತ್ತದೆ. ಇಷ್ಟು ವರ್ಷಗಳಾದ ಬಳಿಕವೂ ಕರ್ನಾಟಕದ ಹಲವು ಮೂಲೆಗಳಿಂದ ಜನ ಬಂದು ನನಗೆ ಜನ್ಮದಿನದ ಶುಭಾಶಯ ತಿಳಿಸುತ್ತಾರೆ. ಇದು ನಿಜಕ್ಕೂ ಖುಷಿಯ ವಿಷಯ. ಇವತ್ತಿನ ಒಂದು ದಿನ ನಾನು ಅವರೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇಷ್ಟಪಡುತ್ತೇನೆ. ಜನರಿಂದ ಇಷ್ಟೋಂದು ಪ್ರೀತಿ ಪಡೆಯುತ್ತಿರುವ ನಾನು ಅದೃಷ್ಟವಂತೆ ಎಂದೇ ಭಾವಿಸುತ್ತೇನೆ. ಕೆಲವರು ಜನರಿಗಷ್ಟೆ ಈ ರೀತಿಯ ಜನ ಪ್ರೀತಿ ಸಿಗುತ್ತದೆ. ಅದು ನನಗೆ ಸಿಕ್ಕಿರುವುದಕ್ಕೆ ನಾನು ಧನ್ಯ’ ಎಂದರು ರಾಧಿಕಾ.

ಇದನ್ನೂ ಓದಿ:ರಾಧಿಕಾ ಪಂಡಿತ್ ಮಗಳ ಹುಟ್ಟುಹಬ್ಬಕ್ಕೆ ಕ್ಯೂಟ್ ವಿಡಿಯೋ

‘ನಿಮ್ಮ ನಟನೆ ಇಷ್ಟವಾಗುತ್ತೆ, ನಿಮ್ಮ ಸಿನಿಮಾ ಇಷ್ಟವಾಗುತ್ತೆ ಎಂದು ಅಭಿಮಾನಿಗಳು ಹೇಳಿದಾಗ ಸಹಜವಾಗಿಯೇ ಖುಷಿ ಆಗುತ್ತದೆ. ಆದರೆ ನಿಮ್ಮ ವ್ಯಕ್ತಿತ್ವ ಇಷ್ಟ, ನೀವು ನನಗೆ ಸ್ಪೂರ್ತಿ, ನೀವು ನನಗೆ ಆದರ್ಶ ಎಂದು ಜನರು ಹೇಳಿದಾಗ ನಿಜಕ್ಕೂ ಹೆಮ್ಮೆ ಆಗುತ್ತದೆ. ಪ್ರತಿ ವರ್ಷವೂ ನಾನು ತಪ್ಪದೇ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಆ ಒಂದು ದಿನ ಅವರೊಟ್ಟಿಗೆ ಕಳೆಯುವುದು ನನಗೆ ಇಷ್ಟ. ಇದು ನನಗೆ ಕಷ್ಟ, ಮುಜುಗರ ಎಂದೆಲ್ಲ ಎನಿಸುವುದಿಲ್ಲ, ಅಭಿಮಾನಿಗಳನ್ನು ಭೇಟಿ ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ’ ಎಂದಿದ್ದಾರೆ ರಾಧಿಕಾ.

ಯಶ್ ಅವರು ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಟ್ಟರು? ಎಂಬ ಪ್ರಶ್ನೆಗೆ ಉತ್ತರಿಸಿದ ರಾಧಿಕಾ, ‘ನಾವು ವಸ್ತುಗಳನ್ನು ಉಡುಗೊರೆಯಾಗಿ ಕೊಡುವುದಿಲ್ಲ. ಪರಸ್ಪರರಿಗೆ ಸಮಯ ಕೊಡುವುದೇ ನಮ್ಮ ಪಾಲಿಗೆ ಉಡುಗೊರೆ. ನಾವು ಯಾವುದೇ ರೀತಿಯ ವಸ್ತುಗಳನ್ನು ಪರಸ್ಪರ ಕೊಡು-ಕೊಳ್ಳುವುದು ಮಾಡುವುದಿಲ್ಲ. ಇಬ್ಬರೂ ಜೊತೆಗಿರುವುದೇ ನಮಗೆ ಉಡುಗೊರೆ, ಸಣ್ಣ ಪುಟ್ಟ ವಿಷಯಗಳೇ ನಮಗೆ ಹೆಚ್ಚು ಪರಿಣಾಮಕಾರಿ ಎನಿಸುತ್ತವೆ’ ಎಂದಿದ್ದಾರೆ ನಟಿ ರಾಧಿಕಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಸಂಜು ಸ್ಯಾಮ್ಸನ್​ 26 ರನ್​ ಬಾರಿಸಿದರೆ ಭಾರತಕ್ಕೆ ಗೆಲುವು ಖಚಿತ

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಪರಾಭವನಾಮ ಸಂವತ್ಸರದ ವೃಷಭ ರಾಶಿಯ ವಾರ್ಷಿಕ ಭವಿಷ್ಯವನ್ನು ಇಲ್ಲಿ ವಿವರಿಸಿದ್ದಾರೆ. ಈ ವರ್ಷದಲ್ಲಿ ಗುರು ಗ್ರಹವು ಎರಡರಿಂದ ಮೂರನೇ ಮನೆಗೆ, ಶನಿ ಹನ್ನೊಂದರಲ್ಲಿ, ರಾಹು ಹತ್ತರಿಂದ ಒಂಬತ್ತಕ್ಕೆ ಮತ್ತು ಕೇತು ನಾಲ್ಕರಿಂದ ಮೂರನೇ ಮನೆಗೆ ಸಂಚರಿಸಲಿದೆ.

ವೃಷಭ ರಾಶಿಯವರಿಗೆ ಈ ವರ್ಷ ಆದಾಯದಲ್ಲಿ ಏರಿಕೆ ಕಂಡುಬರಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಯೋಜನೆಗಳಿಗೆ ಮನ್ನಣೆ ಸಿಗುತ್ತದೆ ಹಾಗೂ ಗುತ್ತಿಗೆದಾರರು, ಸಂಗೀತಗಾರರು, ಶಿಕ್ಷಕರು, ಎಂಜಿನಿಯರ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಸರ್ಕಾರಿ ನೌಕರರಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ರಾಜಕೀಯದಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ ಸಹ ಸಾಧ್ಯ. ಮಹಿಳೆಯರಿಗೆ ವೃತ್ತಿ ಕ್ಷೇತ್ರದಲ್ಲಿ ಬಡ್ತಿ, ಆಸ್ತಿ ವಿಷಯದಲ್ಲಿ ಶುಭ ಫಲಗಳು ದೊರೆಯಲಿವೆ. ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದಾದರೂ, ದೈವಾನುಗ್ರಹ ಉತ್ತಮವಾಗಿದೆ. ವರ್ಷದ ಉತ್ತರಾರ್ಧವು ಹೆಚ್ಚು ಶುಭಕರವಾಗಿರುತ್ತದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳಿಗೆ ಕೊಡಬೇಕಿದ್ದ ಹಾಸಿಗೆ,ಬೆಡ್‌ಶೀಟ್‌ ಅಧಿಕಾರಿ ಮನೆಯಲ್ಲಿ: ಲೋಕಾಯುಕ್ತ ಶಾಕ್

Source link

2 ವರ್ಷದ ಮಗುವಿಗೆ ಬಂತು ಮಾರಕ ಕಾಯಿಲೆ! ನೆರವಿನ ಭರವಸೆ ನೀಡಿದ ಕೇಂದ್ರ ಸಚಿವ ಹೆಚ್​ಡಿಕೆ

ಮಂಡ್ಯ, ಮಾರ್ಚ್​ 07: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಮಗುವಿಗೆ ನೆರವು ನೀಡುವಂತೆ ಪೋಷಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಸಹಾಯದ ಭರವಸೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಶಿವಾರ ಗ್ರಾಮದ ಎರಡು ವರ್ಷದ ಸಾಯಿ ಚಿರಾಗ್ ಎಂಬ ಮಗು ಎಸ್‌ಎಂಎ (Spinal Muscular Atrophy) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ.

ಮಗುವಿನ ಪೋಷಕರಾದ ಚೇತನ್ ಮತ್ತು ಭಾರ್ಗವಿ ದಂಪತಿ ಮಂಡ್ಯದ ವಿಸಿ ಫಾರಂನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಗುವಿನ ಚಿಕಿತ್ಸೆಗೆ ಸುಮಾರು 16 ಕೋಟಿ ರೂಪಾಯಿ ಅಗತ್ಯವಿದ್ದು, ವಿದೇಶಗಳಿಂದ ಸುಮಾರು 1.75 ಕೋಟಿ ರೂಪಾಯಿ ನೆರವು ಸಿಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ, ಬಾಲಕನ ಚಿಕಿತ್ಸೆಗೆ ಸಾಧ್ಯವಾದಷ್ಟು ನೆರವು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ (PM Fund) ಮೂಲಕ ಸಹಾಯ ದೊರಕುವಂತೆ ಪ್ರಯತ್ನಿಸಲಾಗುತ್ತದೆ. ಜೊತೆಗೆ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಹೇಳಿದ್ದಾರೆ.

ಎಸ್‌ಎಂಎ ಮಾರಕವೇ?

ಇದೊಂದು ಅಪರೂಪದ ಜಿನೆಟಿಕ್ ಕಾಯಿಲೆಯಾಗಿದ್ದು, ಇದು ಮಕ್ಕಳ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಈ ಕಾಯಿಲೆ ನರಮಂಡಲದ ಮೇಲೆ ಪರಿಣಾಮ ಬೀರಿ ಮಕ್ಕಳಲ್ಲಿ ಕೈ-ಕಾಲುಗಳ ಚಲನೆ ನಿಧಾನವಾಗಿ ಕುಂದುತ್ತ ಹೋಗುವಂತೆ ಮಾಡುತ್ತದೆ. ಚಿಕಿತ್ಸೆ ಸಿಗದಿದ್ದರೆ ಮಗು ನಡೆಯುವುದು, ಕುಳಿತುಕೊಳ್ಳುವುದು ಅಥವಾ ಉಸಿರಾಟಕ್ಕೂ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ ಗ್ರಾಮೀಣ ಮಕ್ಕಳಿಗಾಗಿ ಕೇಂದ್ರದ ಗಿಫ್ಟ್: ಮಂಡ್ಯದಲ್ಲಿ ತಲೆಯೆತ್ತಲಿದೆ ಅತಿ ದೊಡ್ಡ ಸ್ಫೋರ್ಟ್ಸ್​ ಕಾಂಪ್ಲೆಕ್ಸ್​

ಸಾಯಿ ಚಿರಾಗ್‌ ಮಗುವಿಗೆ ಈಗಾಗಲೇ ಕಾಲುಗಳಲ್ಲಿ ಆರಂಭವಾದ ನಿಶಕ್ತಿ ನಿಧಾನವಾಗಿ ದೇಹದ ಮೇಲ್ಭಾಗಕ್ಕೂ ಹರಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗ ಸೋಂಕು ಸೊಂಟದವರೆಗೂ ತಲುಪಿದ್ದು, ಮುಂದಿನ ಆರು ತಿಂಗಳೊಳಗೆ ಚಿಕಿತ್ಸೆ ನೀಡದಿದ್ದರೆ ದೇಹಪೂರ್ತಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಮಗು ವಿಕಲಚೇತನನಾಗುವ ಭೀತಿ ವ್ಯಕ್ತವಾಗಿದ್ದು, ತಕ್ಷಣ ಚಿಕಿತ್ಸೆಗೆ ಸಹಾಯ ಮಾಡಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Women’s Day 2026 ನಿಮ್ಮ ನೆಚ್ಚಿನ ಮಹಿಳೆಗೆ ಈ ಉಡುಗೊರೆ ನೀಡುವ ಮೂಲಕ ವುಮೆನ್ಸ್‌ ಡೇಯನ್ನು ವಿಶೇಷವಾಗಿ ಆಚರಿಸಿ

ಮಹಿಳೆಯರ (Women’s) ಸಾಧನೆಗಳನ್ನು ಗೌರವಿಸಲು, ಮನೆ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು, ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಆಕೆಯ ತ್ಯಾಗ, ಪರಿಶ್ರಮವನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 8 ರಂದು  ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇಂತಹ ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಬಾಳಿನಲ್ಲಿ ವಿಶೇಷ ಸ್ಥಾನ ಪಡೆದ ಸ್ಪೆಷಲ್‌ ಮಹಿಳೆಗೆ ಸರ್‌ಪ್ರೈಸ್‌ ಉಡುಗೊರೆ ನೀಡುವ ಮೂಲಕ ನಿಮಗಾಗಿ ಆಕೆ ಮಾಡಿದ  ತ್ಯಾಗ, ಪರಿಶ್ರಮಕ್ಕೊಂದು ಥ್ಯಾಂಕ್ಸ್‌ ಹೇಳಬಹುದು. ಜೊತೆಗೆ ಆಕೆಯ ಮೊಗದಲ್ಲಿ ನಗು ಮೂಡಿಸಬಹುದು. ಹಾಗಾಗಿ ನಿಮ್ಮ ನೆಚ್ಚಿನ ಮಹಿಳೆಗೆ ಈ ಕೆಲವೊಂದು ಗಿಫ್ಟ್‌ಗಳನ್ನು ನೀಡುವ ಮೂಲಕ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಿ.

ಮಹಿಳಾ ದಿನದಂದು ನಿಮ್ಮ ನೆಚ್ಚಿನ ಮಹಿಳೆಗೆ ಈ ಉಡುಗೊರೆಗಳನ್ನು ನೀಡಿ:

ಹ್ಯಾಂಡ್‌ಬ್ಯಾಗ್‌: ನಿಮ್ಮ ತಾಯಿ, ಸಹೋದರಿ ಅಥವಾ ಹೆಂಡತಿ ಫ್ಯಾಷನ್ ಪ್ರಿಯರಾಗಿದ್ದರೆ ಅವರಿಗೆ ಸುಂದರವಾದ ಮತ್ತು ಸ್ಟೈಲಿಶ್ ಹ್ಯಾಂಡ್‌ಬ್ಯಾಗ್ ಉಡುಗೊರೆಯಾಗಿ ನೀಡಬಹುದು. ಅಲ್ಲದೆ ಸೀರೆ, ಬಟ್ಟೆಗಳನ್ನು ಕೂಡ ಗಿಫ್ಟ್‌ ಮಾಡಬಹುದು. ಖಂಡಿತವಾಗಿಯೂ ಈ ಗಿಫ್ಟ್‌ಗಳನ್ನು ಅವರು ಇಷ್ಟಪಡುತ್ತಾರೆ.

ವಾಚ್:‌ ಹೆಚ್ಚಿನ ಮಹಿಳೆಯರಿಗೆ ವಾಚ್‌ಗಳೆಂದರೆ ಸಖತ್‌ ಇಷ್ಟ. ಹೀಗಿರುವಾಗಿ ನಿಮ್ಮ ಜೀವನದ ಸ್ಪೆಷಲ್‌ ಮಹಿಳೆಗೆ ಮಹಿಳಾ ದಿನದಂದು ಸುಂದರವಾದ ವಾಚ್‌ ಒಂದನ್ನು ಉಡುಗೊರೆಯಾಗಿ ನೀಡಬಹುದು.

ಫೋಟೋ ಫ್ರೇಮ್:‌ ನೆನಪುಗಳಿಗಿಂತ ಉತ್ತಮ ಉಡುಗೊರೆ ಇನ್ನೊಂದಿಲ್ಲ. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಕುಟುಂಬದ ಫೋಟೋಗಳು ಮತ್ತು ಒಟ್ಟಿಗೆ ಕಳೆದ ವಿಶೇಷ ಕ್ಷಣಗಳ ಸುಂದರವಾದ ಫೋಟೋಗಳಿಗೆ  ಫ್ರೇಮ್ ಆಕಿ ಅದನ್ನು ಉಡುಗೊರೆಯಾಗಿ ನೀಡಬಹುದು. ಈ ಉಡುಗೊರೆ ನಿಮ್ಮ ಬಾಳಿನ ಸ್ಪೆಷಲ್‌ ಮಹಿಳೆಯ ಮುಖದಲ್ಲಿ ನಗು ಮೂಡಿಸುವುದು ಖಚಿತ.

ಮೇಕಪ್‌ ಕಿಟ್‌, ಸ್ಕಿನ್‌ಕೇರ್‌ ಉತ್ಪನ್ನ: ನಿಮ್ಮ ಸಂಗಾತಿ ಅಥವಾ ಸಹೋದರಿ ಮೇಕಪ್ ಇಷ್ಟಪಟ್ಟರೆ, ನೀವು ಅವರಿಗೆ ಬ್ಯೂಟಿ ಹ್ಯಾಂಪರ್ , ಸ್ಕಿನ್‌ ಕೇರ್‌ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಬಹುದು.

ಪುಸ್ತಕ: ನಿಮ್ಮ ಜೀವನದಲ್ಲಿನ ವಿಶೇಷ ಮಹಿಳೆ ಪುಸ್ತಕಗಳನ್ನು ಓದಲು ಇಷ್ಟಪಟ್ಟರೆ, ಅವಳಿಗೆ ಒಳ್ಳೆಯ ಪುಸ್ತಕವನ್ನು ಉಡುಗೊರೆಯಾಗಿ ನೀಡುವುದು ಉತ್ತಮ. ಈ ಉಡುಗೊರೆ ಅವಳಿಗೆ ತುಂಬಾ ವಿಶೇಷವಾಗಿರುತ್ತದೆ.

ಗಿಡಗಳು: ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಗಿಡಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಮಹಿಳಾ ದಿನದಂದು ನಿಮ್ಮ ನೆಚ್ಚಿನ ಮಹಿಳೆಗೆ ಒಂದಷ್ಟು ಗಿಡಗಳನ್ನು ಉಡುಗೊರೆ ನೀಡುವ ಮೂಲಕ ಆಕೆಯ ದಿನವನ್ನು ವಿಶೇಷವಾಗಿ ಆಚರಿಸಿ.

ಇದನ್ನೂ ಓದಿ: ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಚಾಣಕ್ಯರ ಸಲಹೆಗಳನ್ನು ಪಾಲಿಸಿ

ವಿಶೇಷ ಭೋಜನ ಕೂಟ ಆಯೋಜಿಸಿ: ನಿಮಗಾಗಿ ಎಲ್ಲವನ್ನು ಮಾಡುವ ನಿಮ್ಮ ನೆಚ್ಚಿನ ಮಹಿಳೆಯನ್ನು ರೆಸ್ಟೋರೆಂಟ್‌ಗೋ ಅಥವಾ ಟ್ರಿಪ್‌ ಗೋ ಕರೆದೊಯ್ಯಿರಿ. ಹೌದು ಏನನ್ನೂ ನಿರೀಕ್ಷಿಸದೆ ನಿಮಗಾಗಿ ಎಲ್ಲವನ್ನೂ ಮಾಡುವ ನಿಮ್ಮ ನೆಚ್ಚಿನ ಮಹಿಳೆಗೆ ಸ್ವಲ್ಪ ವಿಶ್ರಾಂತಿ ನೀಡಿ ಆಕೆಯನ್ನು ಎಲ್ಲಿಗಾದರೂ ಕರೆದುಕೊಂಡು ಹೋಗಿ. ಖಂಡಿತವಾಗಿಯೂ ಈ ಸರ್‌ಪ್ರೈಸ್‌ ಗಿಫ್ಟ್‌ ಅನ್ನು ಆಕೆ ಇಷ್ಟಪಡುತ್ತಾಳೆ.

ಮನೆಕೆಲಸಗಳನ್ನು ಮಾಡಿ: ಮಹಿಳಾ ದಿನದಂದು ನೀವು ನಿಮ್ಮ ತಾಯಿ, ಸಂಗಾತಿಗೆ ನೀಡಬಹುದಾದ ಅತ್ಯಂತ ವಿಶೇಷ ಉಡುಗೊರೆ ಎಂದರೆ ವಿಶ್ರಾಂತಿ ದಿನ. ಹೌದು ಈ ದಿನ ಅವರಿಗೆ ವಿಶ್ರಾಂತಿ ಕೊಟ್ಟು ನೀವು ಮನೆಕೆಲಸಗಳನ್ನು ಮಾಡಿ, ಅವರಿಗಾಗಿ ಸ್ಪೆಷಲ್‌ ಅಡುಗೆಯನ್ನು ಮಾಡಿ, ಈ ವಿಶೇಷ ಉಡುಗೊರೆ ಸಣ್ಣದಾಗಿದ್ದರೂ, ಅವರಿಗೆ ಸಾಕಷ್ಟು ಖುಷಿಯನ್ನು ನೀಡುವುದು ಖಂಡಿತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾಕ್ಕೆ ಹೋದರೆ ಪಾರ್ಕಿಂಗ್​​ಗೆ ಹಣ ಕೊಡಬೇಕಿಲ್ಲ: ಹೈಕೋರ್ಟ್ ಆದೇಶ

ಸಿನಿಮಾ (Cinema) ವೀಕ್ಷಣೆಗೆ ಖರ್ಚಾಗುವ ಮೊತ್ತ ಹೆಚ್ಚಾಗಿದೆ ಎಂದು ಸಿನಿಮಾ ನಿರ್ಮಾಪಕರು, ವಿತಕರು ಮುಖ್ಯವಾಗಿ ಪ್ರೇಕ್ಷಕರು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಸಿನಿಮಾ ಟಿಕೆಟ್ ದರ, ಚಿತ್ರಮಂದಿರದಲ್ಲಿ ಸಿಗುವ ಪಾಪ್​​ಕಾರ್ನ್ , ಪೆಟ್ರೋಲ್-ಡೀಸೆಲ್ ದರ ಹೆಚ್ಚಾಗಿ ಪ್ರಯಾಣದ ಮೊತ್ತ ಹೆಚ್ಚಾಗಿದೆ. ಇದೆಲ್ಲದರ ಜೊತೆಗೆ ಸಿನಿಮಾ ನೋಡಲು ಹೋದರೆ ಪಾರ್ಕಿಂಗ್ ಶುಲ್ಕ ಸಹ ನೀಡಬೇಕಿದೆ. ಆದರೆ ಈ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಹಲವು ವರ್ಷಗಳಿಂದಲೂ ವಾದ-ಪ್ರತಿವಾದಗಳು ನಡೆಯುತ್ತಲೇ ಇದ್ದವು. ಸಿನಿಮಾ ಟಿಕೆಟ್ ಖರೀದಿ ಮಾಡಿದಾಗಲೇ ಚಿತ್ರಮಂದಿರದ ಅಥವಾ ಮಲ್ಟಿಪ್ಲೆಕ್ಸ್​ನ ಗ್ರಾಹಕ ಆಗಿರುವ ಪ್ರೇಕ್ಷಕನಿಗೆ ಪಾರ್ಕಿಂಗ್ ಅನ್ನು ಉಚಿತವಾಗಿ ಅಥವಾ ಸೇವೆಯ ರೂಪದಲ್ಲಿ ಕೊಡಬೇಕು ಎಂಬ ವಾದ ಇತ್ತು. ಇದೀಗ ಈ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಇನ್ನು ಮುಂದೆ ಸಿನಿಮಾ ನೋಡಲು ಹೋದ ಪ್ರೇಕ್ಷಕನಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್​​ನಲ್ಲಿ ಯಾವುದೇ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ. ಆದರೆ ಇದು ಸದ್ಯಕ್ಕೆ ಕರ್ನಾಟಕದಲ್ಲಿ ಜಾರಿಯಲ್ಲಿಲ್ಲ. ಇದು ಜಾರಿಯಲ್ಲಿರುವುದು ತೆಲಂಗಾಣದಲ್ಲಿ ಮಾತ್ರ. ಆರಂಭದಲ್ಲಿ ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್​​ಗಳಲ್ಲಿ ಪಾರ್ಕಿಂಗ್ ಶುಲ್ಕ ಪಡೆಯಲಾಗುತ್ತಿತ್ತು. ಬಳಿಕ ಸರ್ಕಾರವು ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್​​ಗಳೆರಡರಲ್ಲೂ ಸಹ ಸಿನಿಮಾ ನೋಡಲು ಬಂದವರಿಂದ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ ಎಂದು ಆದೇಶಿಸಿತು.

ಆದರೆ ಕೋವಿಡ್ ಬಳಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ಸರ್ಕಾರವನ್ನು ಮನವಿ ಮಾಡಿ, ಆದೇಶದಿಂದ ವಿನಾಯಿತಿ ಪಡೆದರು. ಆದರೆ ಮಲ್ಟಿಪ್ಲೆಕ್ಸ್​​ಗಳಲ್ಲಿ ಪಾರ್ಕಿಂಗ್ ಶುಲ್ಕ ವಿನಾಯಿತಿ ಚಾಲ್ತಿಯಲ್ಲಿತ್ತು. ಆದರೆ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್ ಈ ಸಂಬಂಧ ಸಲ್ಲಿಕೆ ಆಗಿದ್ದ ಅರ್ಜಿಯ ವಿಚಾರಣೆ ನಡೆಸಿ, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​ ಎರಡರಲ್ಲೂ ಸಿನಿಮಾ ನೋಡಲು ಬಂದ ಪ್ರೇಕ್ಷಕನಿಂದ ಕಡ್ಡಾಯವಾಗಿ ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳುವಂತಿಲ್ಲ ಎಂದಿದೆ. ಆ ಮೂಲಕ ಈ ಹಿಂದಿನ ಸರ್ಕಾರಿ ಆದೇಶವನ್ನು ರದ್ದು ಮಾಡಿದೆ.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾ ಟ್ರೇಲರ್ ಚೆನ್ನಾಗಿದ್ದರೂ ಅಭಿಮಾನಿಗಳಿಗೆ ಕಾಣ್ತಿದೆ ಕೊರತೆ

ಕರ್ನಾಟಕದಲ್ಲಿ ಈ ನಿಯಮ ಜಾರಿಯಲ್ಲಿಲ್ಲ. ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡಲು ಹೋದರೆ ಪಾರ್ಕಿಂಗ್ ಶುಲ್ಕ ಭರಿಸುವುದು ಕಡ್ಡಾಯ ಆಗಿದೆ. ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್​ಗಳಲ್ಲಿ ಗಂಟೆಗೆ 80 ರಿಂದ 100 ರೂಪಾಯಿ ಸಹ ವಸೂಲಿ ಮಾಡಲಾಗುತ್ತದೆ. ಅಲ್ಲಿಗೆ ಒಂದು ಸಿನಿಮಾ ನೋಡಿ ಮರಳುವಷ್ಟರಲ್ಲಿ ಪಾರ್ಕಿಂಗ್ ಶುಲ್ಕವೇ ಸುಮಾರು 200-300 ಆಗಿರುತ್ತದೆ. ತೆಲಂಗಾಣ ರೀತಿಯ ನಿಯಮ ಕರ್ನಾಟಕದಲ್ಲಿಯೂ ಜಾರಿಗೆ ಬರಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

ತುಮಕೂರು, (ಮಾರ್ಚ್ 07): ಜನವರಿ 30ರಂದು ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎನ್ನಲಾಗಿದ್ದ ತುಮಕೂರು (Tumakuru) ತಾಲ್ಲೂಕಿನ ಹೆಬ್ಬೂರು ಹೊಬಳಿಯ ದಾಸರಹಳ್ಳಿ ನಿವಾಸಿ ಪರಮೇಶ್ ಸಾವು ಪ್ರಕರಣಕ್ಕೆ (Paramesh Murder Case) ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಹೌದು.. ಪರಮೇಶ್ ಮೃತಪಟ್ಟು ಇನ್ನು ತಿಂಗಳ ಕಾರ್ಯವೂ ಸಹ ನಡೆದಿರಲಿಲ್ಲ. ಆತನ ಸಾವು ಸಂಭವಿಸಿದ ಕೇವಲ 20 ದಿನಕ್ಕೆ ಪತ್ನಿ ಆಶಾ ಇನ್ನೊಂದು ಮದುವೆಯಾಗಿದ್ದೇ ಪರಮೇಶನ ಸಾವಿನ ರಹಸ್ಯ ಬಟಾಬಯಲಾಗಿದೆ. ಅದಾಗಲೇ ಎರಡು ಮದ್ವೆಯಾಗಿದ್ದ ಆಶಾಗೆ ಮೂರನೇ ಮದುವೆ ಆಸೆಗೆ ಬಿದ್ದು ಇದೀಗ ಜೈಲು ಸೇರಿದ್ದಾಳೆ.

ಕೊಲೆ ರಹಸ್ಯ ಬಯಲಿಗೆ ಬಂಂದಿದ್ಹೇಗೆ?

ತುಮಕೂರು ತಾಲೂಕಿನ ಹೆಬ್ಬೂರಿನ ದಾಸರಹಳ್ಳಿ ನಿವಾಸಿ ಮೃತ ಪರಮೇಶ್ , ಆಶಾಳನ್ನ ಎರಡನೇ ಮದುವೆ ಆಗಿದ್ದ. ಮಾಗಡಿ ಮೂಲದ ಆಶಾ ಗಂಡ ಸತ್ತ ಬಳಿಕ ಪರಮೇಶ್​ನ 2ನೇ ಪತಿ ಆಗಿ ಸ್ವೀಕರಿಸಿ 10 ವರ್ಷ ಸಂಸಾರ ಮಾಡಿದ್ದಳು. ಆದ್ರೆ ಜನವರಿ 30ರಂದು ಪರಮೇಶ್ ಮೃತಪಟ್ಟಿದ್ದ. ಹಾರ್ಟ್ ಅಟ್ಯಾಕ್ ಆಗಿದೆ ಎಂದು ಆಶಾ ತರಾತುರಿಯಲ್ಲಿ ಗಂಡನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಳು. ಪರಮೇಶ್ ಸತ್ತಾಗ ಯಾರೊಬ್ಬರಿಗೂ ಸಣ್ಣ ಅನುಮಾನ ಬಂದಿರಲಿಲ್ಲ. ಆದ್ರೆ ಗಂಡ ಸತ್ತ ಇಪ್ಪತ್ತೇ ದಿನಕ್ಕೆ ಆಶಾ 3ನೇ ಮದ್ವೆ ಆಗಿದ್ದಳು. ಆಗಲೇ ನೋಡಿ ಮೃತ ಪರಮೇಶ್ ಸಂಬಂಧಿಕರಿಗೆ ಸೊಸೆ ಮೇಲೆ ಅನುಮಾನ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಹೆಬ್ಬೂರು ಪೊಲೀಸ್ರು ತನಿಖೆ ಕೈಗೊಳ್ಳುತ್ತಿದ್ದಂತೆಯೇ ಪರಮೇಶ್ ಕೊಲೆ ಸತ್ಯ ಬಯಲಾಗಿದೆ. ನಿನ್ನ ಗಂಡನನ್ನು ಯಾಕೆ ಹತ್ಯೆ ಮಾಡಿದೆ ತಾಯಿ ಅಂತಿದ್ದಂತೆ ಆಕೆ ಚಂದ್ರಪ್ಪನ ಜೊತೆಗಿನ ಪ್ರಣಯ ಪ್ರಸಂಗ ಬಿಚ್ಚಿಟ್ಟಿದ್ದಾಳೆ.

ಇದನ್ನೂ ಓದಿ: ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು

ಮತ್ತೊಬ್ಬನ ಮೇಲಿನ ಆಸೆಗೆ ಗಂಡನನ್ನು ಕೊಂದ್ಲು

ಈ ಸ್ಟೋರಿಯಲ್ಲಿ ಅಸಲಿ ಟ್ವಿಸ್ಟ್ ಇನ್ನೂ ಇದೆ. ಗಂಡನನ್ನೇ ಕೊಂದ ಖತರ್ನಾಕ್ ಆಶಾ, ಚಂದ್ರಪ್ಪ ಎಂಬಾತನ ಮೋಡಿಗೆ ಮರುಳಾಗಿದ್ದಳು. ಕುಣಿಗಲ್ ಮೂಲದ ಚಂದ್ರಪ್ಪ ತನ್ನ ಮೊದಲ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದ. ಗಂಡನ ಕಾಟ ತಾಳದೆ ಪತ್ನಿ ನೇಣಿಗೆ ಕೊರಳೊಡ್ಡಿದ್ದಳು. ಇದೇ ಕೇಸಲ್ಲಿ ಜೈಲಿನಲ್ಲಿ ಕಂಬಿ ಎಣಿಸಿ ಬಂದಿದ್ದ ಚಂದ್ರಪ್ಪ, ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ.ಈ ಗ್ಯಾಪ್​​​ನಲ್ಲಿ ಆಶಾ ಹಾಗೂ ಚಂದ್ರಪ್ಪನ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಬಳಿಕ ಇಬ್ಬರು ಮದುವೆ ನಿರ್ಧಾರಕ್ಕೆ ಬಂದಿದ್ದಾರೆ. ಆದ್ರೆ, ತನ್ನ 2ನೇ ಗಂಡ ಇದ್ದರೆ 3ನೇ ಮದುವೆ ಆಗಲು ಆಗಲ್ಲ ಎಂದು ಪ್ಲ್ಯಾನ್ ಮಾಡಿದ್ದ ಆಶಾ, ಉಸಿರುಗಟ್ಟಿಸಿ ಪರಮೇಶ್​ನ ಕಥೆ ಮುಗಿಸಿದ್ದಳು.

ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದಳು. ಇದನ್ನು ಎಲ್ಲರೂ ಸಹ ನಂಬಿ ಕಣ್ಣೀರಿಡುತ್ತ ಪರಮೇಶನ ಅಂತ್ಯಕ್ರಿಯೆ ಮಾಡಿ ಮುಸಿಗಿದ್ದರು. ಇದಾಗಿ ಕೇವಲ ಇಪ್ಪತ್ತೇ ದಿನಕ್ಕೆ ಆಶಾ, ಪ್ರಿಯಕರ ಚಂದ್ರಪ್ಪನನ್ನು ಮದುವೆಯಾಗಿ ಹನಿಮೂನ್​ಗೆ ಹೊರಟಿದ್ದಳು. ಆದ್ರೆ ಏನು ಮಾಡುವುದು ಗ್ರಹಚಾರ ಕೆಟ್ಟು ಈಗ ಇಬ್ಬರೂ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಸಿಸಿ ನಾಕೌಟ್‌ಗಳಲ್ಲಿ ಭಾರತ- ಕಿವೀಸ್ ಎಷ್ಟು ಬಾರಿ ಮುಖಾಮುಖಿಯಾಗಿವೆ? ಯಾರದ್ದು ಮೇಲುಗೈ?

Source link

Exit mobile version