ಎಥೆನಾಲ್​ ಸಾಗಿಸುತ್ತಿದ್ದ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ – Kannada News | Ethanol Tanker Catches Fire After Accident in Ranebennur, Haveri

ಹಾವೇರಿ, ಮಾರ್ಚ್​​ 05: ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್​​ ಪಲ್ಟಿಯಾಗಿ, ಕ್ಷಣಾರ್ಧದಲ್ಲಿ ಹೊತ್ತಿ ಉರಿದಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಹೊರವಲಯದಲ್ಲಿರೋ ಹಲಗೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಹೆದ್ದಾರಿಯಿಂದ ಸರ್ವೀಸ್​​ ರಸ್ತೆಗೆ ಟ್ಯಾಂಕರ್​​ ಉರುಳಿ ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ. ಹುಬ್ಬಳ್ಳಿಯಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಟ್ಯಾಂಕರ್​​ ಪಲ್ಟಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಆಹಾ! ಎಂತ ಜೋಡಿ; ಚಿಂತೆಯೆನ್ನೆಲ್ಲಾ ಬಿಟ್ಟು ಬೀಡಿ ಸೇದುತ್ತಾ ಕುಳಿತ ವೃದ್ಧ ದಂಪತಿ – Kannada News | An elderly couple smoking a beedi, video goes viral

ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಗಂಡ ತನ್ನನ್ನು ಪ್ರೀತಿಸಲಿ, ಕಾಳಜಿ ವಹಿಸಲಿ ಎಂದು ಬಯಸುವುದು ಸಹಜ. ಅಂತಹ ಜೀವನ ಸಂಗಾತಿ ಸಿಕ್ಕರೆ ಆಕೆಗಿಂತ ಅದೃಷ್ಟವಂತೆ ಬೇರೆ ಯಾರಿಲ್ಲ. ಈ ವೃದ್ಧ ದಂಪತಿಯನ್ನು (elderly couple) ನೋಡಿದ್ರೆ  ನೀವು ಕೂಡ ಎಂತಹ ಜೋಡಿ ಇವರದ್ದು ಅನ್ನುತ್ತೀರಾ.  ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ದಂಪತಿಯೂ ಚಿಂತೆಯನ್ನೆಲ್ಲಾ ಬದಿಗೆ ಇಟ್ಟು  ಬೀಡಿ ಸೇದುತ್ತಾ ಕುಳಿತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.

Naveen_gowda_1983 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೃದ್ಧ ದಂಪತಿ ಮನೆಯ ಹೊರಗಡೆ ಕುಳಿತಿರುವುದನ್ನು ಕಾಣಬಹುದು. ಇತ್ತ ವೃದ್ಧ ಮಹಿಳೆ ಬೀಡಿಗೆ ಬೆಂಕಿ ಹಚ್ಚಿ ಸೇದುತ್ತಿದ್ದಾಳೆ. ಆ ಬಳಿಕ ತನ್ನ ಕೈಯಲ್ಲಿದ್ದ ಬೀಡಿಯನ್ನು ಪತಿಗೆ ನೀಡಿದ್ದು, ಆ ವೃದ್ಧ ವ್ಯಕ್ತಿಯೂ ಬೀಡಿ ಸೇದುವುದನ್ನು ನೀವು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿ ಪ್ರೀತಿ ವ್ಯಕ್ತಪಡಿಸಿದ ಆಟೋ ಡ್ರೈವರ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬೀಡಿಸಲಾಗದ ಬಂಧನ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಂತಹ ಜೋಡಿ, ಅಜ್ಜ ನಿಜಕ್ಕೂ ಭಾಗ್ಯವಂತ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಧರ್ಮ ಪತ್ನಿ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೇ. 60ರ ಗಡಿ ದಾಟಲಿದೆ ಡಿಎ, ಡಿಆರ್; ಜನವರಿಯ ತುಟ್ಟಿಭತ್ಯೆ ಎಷ್ಟು ಏರಬಹುದು? – Kannada News | Central Govt employees, 7th pay commission DA and DR likely to rise by 2pc in 2026 January June period

ನವದೆಹಲಿ, ಮಾರ್ಚ್ 5: ಜನವರಿಯಿಂದ ಬರಬೇಕಿರುವ ತುಟ್ಟಿಭತ್ಯೆ (DA- Dearness Allowance) ಹೆಚ್ಚಳದ ನಿರೀಕ್ಷೆಯಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಇದ್ದಾರೆ. ಜನವರಿಯಿಂದ ಜಾರಿಗೆ ಬರುವ ತುಟ್ಟಿಭತ್ಯೆ ಹೆಚ್ಚಳವನ್ನು ಮಾರ್ಚ್​ನಲ್ಲಿ ಪ್ರಕಟಿಸಲಾಗುತ್ತದೆ. ಅಂದರೆ ಈ ತಿಂಗಳು ಡಿಎ ಮತ್ತು ಡಿಆರ್ ಅನ್ನು ಘೋಷಿಸಲಾಗುತ್ತದೆ. ವರದಿಗಳ ಪ್ರಕಾರ ಈ ಬಾರಿ ತುಟ್ಟಿಭತ್ಯೆಯನ್ನು ಶೇ. 2ರಷ್ಟು ಮಾತ್ರವೇ ಏರಿಕೆ ಮಾಡಬಹುದು.

ಶೇ. 2ರಷ್ಟು ಏರಿಕೆಯಾದರೆ ಏಳನೇ ವೇತನ ಆಯೋಗದಡಿಯಲ್ಲಿ ಸಿಗುವ ತುಟ್ಟಿಭತ್ಯೆ ಶೇ. 60 ದಾಟಿದಂತಾಗುತ್ತದೆ. ಎಂಟನೇ ವೇತನ ಆಯೋಗವು 2026ರ ಜನವರಿಯಿಂದಲೇ ಜಾರಿಗೆ ಬರುತ್ತದೆಯಾದರೂ, ಈ ಆಯೋಗ ಇನ್ನೂ ಕೂಡ ಯಾವುದೇ ಶಿಫಾರಸುಗಳ ವರದಿ ಕೊಟ್ಟಿಲ್ಲ. 2026ರ ನವೆಂಬರ್​ನಲ್ಲಿ ರಚನೆಯಾದ 8ನೇ ವೇತನ ಆಯೋಗ, 18 ತಿಂಗಳೊಳಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ನಿರ್ದೇಶನ ಹೊಂದಿದೆ.

ಅಂದರೆ, 2027ರಲ್ಲಿ ಇದರ ವರದಿ ಬರಬಹುದು. ಅಲ್ಲಿಯವರೆಗೆ 7ನೇ ವೇತನ ಆಯೋಗದ ಶಿಫಾರಸುಗಳೇ ಚಾಲನೆಯಲ್ಲಿರಬಹುದು. 8ನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದಲ್ಲಿ, 2026ರ ಜನವರಿಯಿಂದ ಮತ್ತೊಮ್ಮೆ ಡಿಎ ಮತ್ತು ಸಂಬಳದ ರಚನೆಯನ್ನು ಪರಿಷ್ಕರಿಸಬಹುದು.

ಇದನ್ನೂ ಓದಿ: 25,000 ರೂನಷ್ಟು ಕಡಿಮೆ ಸಂಬಳ ಇದ್ದರೆ ಹಣದ ನಿರ್ವಹಣೆ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಡಿಎ ಏರಿಕೆಯ ಲೆಕ್ಕಾಚಾರ ಏನು?

ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಅನುಸೂಚಿ (ಎಐಸಿಪಿಐ ಐಡಬ್ಲ್ಯು) ಆಧಾರದ ಮೇಲೆ ಡಿಎ ಹೆಚ್ಚಳ ನಿರ್ಧರಿಸಲಾಗುತ್ತದೆ. ಈ ಬಾರಿಯ ಡಿಎ ಹೆಚ್ಚಳಕ್ಕೆ 2025ರ ಡಿಸೆಂಬರ್ ತಿಂಗಳ ಅನುಸೂಚಿಯ ದತ್ತಾಂಶವನ್ನು ಪರಿಗಣಿಸಲಾಗಿದೆ. 2025ರ ಜುಲೈ-ಡಿಸೆಂಬರ್ ಅವಧಿಯ ಸಿಪಿಐ-ಐಡಬ್ಲ್ಯು ಸರಾಸರಿ 419.17 ಅಂಕಗಳಿವೆ. 7ನೇ ವೇತನ ಆಯೋಗದ ಸೂತ್ರದ ಪ್ರಕಾರ ಡಿಎ ಶೇ. 60.34 ಆಗುತ್ತದೆ. ದಶಾಂಶವನ್ನು ನಿರ್ಲಕ್ಷಿಸಿದಾಗ ತುಟ್ಟಿಭತ್ಯೆ ಶೇ. 60ಕ್ಕೆ ನಿಲ್ಲುತ್ತದೆ.

2025ರ ಜುಲೈ ತಿಂಗಳ ತುಟ್ಟಿಭತ್ಯೆ ಶೇ. 58 ಇತ್ತು. ಈಗ ಶೇ. 2 ಮಾತ್ರವೇ ಹೆಚ್ಚಳ ಆಗುವುದು. ಕಳೆದ ಒಂದು ದಶಕದಲ್ಲಿ ಕೆಲವೇ ಬಾರಿ ಇಷ್ಟು ಕಡಿಮೆ ಡಿಎ ಹೆಚ್ಚಳ ಆಗಿರುವುದು.

ಡಿಎ ಮತ್ತು ಡಿಆರ್ ಹೆಚ್ಚಳ ಯಾಕೆ?

ಡಿಎ ಎಂದರೆ ಡಿಯರ್ನೆಸ್ ಅಲೋಯನ್ಸ್. ಡಿಆರ್ ಎಂದರೆ ಡಿಯರ್ನೆಸ್ ರಿಲೀಫ್. ಡಿಎ ಅನ್ನು ಹಾಲಿ ಸೇವೆಯಲ್ಲಿರುವ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಡಿಆರ್ ಅನ್ನು ಸರ್ಕಾರಿ ನೌಕರಿಗಳಿಂದ ನಿವೃತ್ತರಾದ ಪಿಂಚಣಿದಾರರಿಗೆ ನೀಡಲಾಗುತ್ತದೆ.

ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

ಹಣದುಬ್ಬರ ಏರಿಕೆಯಿಂದ ಸಂಬಳ ಮತ್ತು ಪಿಂಚಣಿಯ ಮೌಲ್ಯ ಕಡಿಮೆ ಆಗಬಾರದು ಎನ್ನುವ ಉದ್ದೇಶದಿಂದ ಇದನ್ನು ವರ್ಷಕ್ಕೆ ಎರಡು ಬಾರಿ ಏರಿಸಲಾಗುತ್ತದೆ. ಹಣದುಬ್ಬರ ದರದ ಆಧಾರದ ಮೇಲೆ ಇದನ್ನು ಲೆಕ್ಕಾಚಾರ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಸೋಲಿಗೆ ಕೋಚ್ ಕಾರಣ: ಬಂಡಾಯವೆದ್ದ ಪಾಕ್ ಆಟಗಾರರು – Kannada News | Pakistan players revolted against Head Coach Mike Hesson

T20 World Cup 2026: ಟಿ20 ವಿಶ್ವಕಪ್​ನಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್​ನಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ಈ ಅಲ್ಲೋಲ ಕಲ್ಲೋಲದ ನಡುವೆ ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಪ್ರತಿ ಆಟಗಾರರಿಗೆ 50 ಲಕ್ಷ ರೂ. (PKR) ದಂಡ ವಿಧಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ಇದರ ನಡುವೆ ಸೋಲಿಗೆ ನಾವಲ್ಲ ಕಾರಣ, ಕೋಚ್ ಮೈಕ್ ಹೆಸ್ಸನ್ ಎಂದು ಪಾಕ್ ಆಟಗಾರರು ಬಂಡಾವೆದ್ದಿದ್ದಾರೆ.

ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ತಂಡ ಹೊರಬಿದ್ದ ನಂತರ, ಆಟಗಾರರು ಮುಖ್ಯ ಕೋಚ್ ಮೈಕ್ ಹೆಸ್ಸನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ನಾಯಕ ಸಲ್ಮಾನ್ ಅಲಿ ಅಘಾ ನೇತೃತ್ವದ ತಂಡದ ಆಟಗಾರರು ಮೈಕ್ ಹೆಸ್ಸನ್ ಅವರ ಕಾರ್ಯವೈಖರಿಯ ಬಗ್ಗೆ ಪಿಸಿಬಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ.

ಕೋಚ್ ಹೆಸ್ಸನ್ ಅವರು ನಾಯಕ ಅಥವಾ ಆಯ್ಕೆ ಸಮಿತಿಯನ್ನು ಸಂಪರ್ಕಿಸದೆ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ನಡವಳಿಕೆ ತುಂಬಾ ಕಠಿಣವಾಗಿತ್ತು ಎಂದು ಆಟಗಾರರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಹೀಗಾಗಿ ಟಿ20 ವಿಶ್ವಕಪ್​ನಲ್ಲಿನ ಸೋಲಿಗೆ ಆಟಗಾರರು ಅಲ್ಲ ಕಾರಣ. ಇದಕ್ಕೆ ಮುಖ್ಯ ಕಾರಣ ಕೋಚ್ ಮೈಕ್ ಹೆಸ್ಸನ್ ಎಂದು ಪಾಕ್ ಆಟಗಾರರು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ ಮೈಕ್ ಹೆಸ್ಸನ್ ಅವರ ಅತಿಯಾದ ಹಸ್ತಕ್ಷೇಪದಿಂದಾಗಿ ರಾಷ್ಟ್ರೀಯ ಆಯ್ಕೆಗಾರ ಅಲೀಮ್ ದಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಭಾರತದ ವಿರುದ್ಧದ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮತ್ತು ತಂಡದ ಆಯ್ಕೆಯಲ್ಲಿನ ತಪ್ಪುಗಳು ಸೋಲಿಗೆ ಕಾರಣವೆಂದು ಆಟಗಾರರು ದೂರಿದ್ದಾರೆ. ಇಲ್ಲಿ ತಂಡವನ್ನು ಆಯ್ಕೆ ಮಾಡಿರುವುದು ಮೈಕ್ ಹೆಸ್ಸನ್.

ಅವರ ಕೆಲ ನಿರ್ಧಾರಗಳು ಇಡೀ ತಂಡದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಪಾಕ್ ತಂಡದ ಕಳಪೆ ಪ್ರದರ್ಶನಕ್ಕೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಕೂಡ ಕಾರಣಕರ್ತರು ಎಂದು ಪಾಕಿಸ್ತಾನ್ ಆಟಗಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: VIDEO: ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಸಿಕ್ತು 20 ಸಾವಿರ ರೂ..!

ಸದ್ಯ ಆಟಗಾರರು ದೂರು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಟೇಬಲ್​ ಮೇಲಿದ್ದು, ಈ ದೂರಿನ ಹೊರತಾಗಿಯೂ ಮೈಕ್ ಹೆಸ್ಸನ್ ಅವರನ್ನು ಪದಚ್ಯುತಗೊಳಿಸುವ ಸಾಧ್ಯತೆಯಿಲ್ಲ ಬದಲಾಗಿ ಅವರ ನಡವಳಿಕೆಯ ಬಗ್ಗೆ ಕಠಿಣ ಎಚ್ಚರಿಕೆ ನೀಡಲಿದ್ದಾರೆ ಎಂದು ವರದಿಯಾಗಿದೆ.

Source link

ಆಂಥ್ರೋಪಿಕ್​ನಿಂದ ಉಚಿತ ಎಐ ಕೋರ್ಸ್​ಗಳು; ಕ್ಲಾಡ್ ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಸಿಗುತ್ತೆ; ಪಡೆಯುವುದು ಹೇಗೆ? – Kannada News | Anthropic starts several free AI courses online, know where and how to find them

ಬೆಂಗಳೂರು, ಮಾರ್ಚ್ 5: ಆಂಥ್ರೋಪಿಕ್ (Anthropic) ಕಂಪನಿಯ ಎಐ ಟೆಕ್ನಾಲಜಿ ಶಕ್ತ ಉತ್ಪನ್ನಗಳು ದೈನಂದಿನ ಕೆಲಸಗಳನ್ನು ಸಲೀಸುಗೊಳಿಸಲು ಬಹಳ ನೆರವಾಗುತ್ತವೆ. ಅದರ ಕ್ಲಾಡ್​ನಂತಹ ಎಐ ಟೂಲ್​ಗಳು ಹೆಚ್ಚೆಚ್ಚು ಕೆಲಸಗಳನ್ನು ಆಟೊಮೇಟ್​ಗೊಳಿಸಬಲ್ಲುವು. ಆದರೆ, ಈ ಟೂಲ್​ಗಳನ್ನು ಹೇಗೆ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದಿರಬೇಕು ಅಷ್ಟೇ. ಸಾಫ್ಟ್​ವೇರ್​ಗಳು ಬಹಳಷ್ಟು ಕೆಲಸಗಳನ್ನು ಆಟೊಮೇಟ್ ಮಾಡಿದ್ದವು. ಆದರೆ, ಸಾಫ್ಟ್​ವೇರ್ ಅನ್ನು ಹೇಗೆ ಬಳಸಬೇಕೆಂದು ಎನ್ನುವ ಜ್ಞಾನ ಇರಬೇಕು. ಹಾಗೆಯೇ, ಎಐ ಟೂಲ್​ಗಳ ಬಳಕೆ ಬಗ್ಗೆ ಜ್ಞಾನ ಅಗತ್ಯ.

ಇದನ್ನು ಮನಗಂಡೇ ಆಂಥ್ರೋಪಿಕ್ ಸಂಸ್ಥೆ ಅಕಾಡೆಮಿ ತೆರೆದಿದೆ. ಆಂಥ್ರೋಪಿಕ್ ಅಕಾಡೆಮಿಯಲ್ಲಿ ಆನ್​ಲೈನ್​ನಲ್ಲಿ ಉಚಿತವಾಗಿ ಎಐ ಕೋರ್ಸ್​ಗಳನ್ನು ಆಫರ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ವೃತ್ತಿಪರರು, ಡೆವಲಪರ್​ಗಳು ಹೀಗೆ ಎಲ್ಲಾ ವರ್ಗದ ಜನರಿಗೆ ವಿನ್ಯಾಸ ಮಾಡಲಾದ ಕೋರ್ಸ್​ಗಳಿವೆ. ಕ್ಲಾಡ್ ಎಐ ಮಾಡಲ್​ಗಳನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಈ ಕೋರ್ಸ್​ಗಳಲ್ಲಿ ಕಲಿಸಲಾಗುತ್ತದೆ.

ಆಂಥ್ರೋಪಿಕ್ ಸಂಸ್ಥೆ ಹಲವು ಕೋರ್ಸ್​ಗಳನ್ನು ಆರಂಭಿಸಿದೆ. ಸ್ಕಿಲ್​ಜಾರ್ ಪ್ಲಾಟ್​ಫಾರ್ಮ್​ನಲ್ಲಿ ಇವು ಉಚಿತವಾಗಿ ಲಭ್ಯ ಇವೆ. ಕೋರ್ಸೆರಾ ಮೂಲಕ ಇನ್ನಷ್ಟು ಪ್ರೀಮಿಯಮ್ ಕಂಟೆಂಟ್ ಲಭ್ಯ ಇರುತ್ತದೆ. ಕೋರ್ಸ್ ಕಲಿತು ಮುಗಿಸಿದರೆ ಸರ್ಟಿಫಿಕೇಶನ್ ಕೂಡ ನೀಡಲಾಗುತ್ತದೆ.

ಇದನ್ನೂ ಓದಿ: ಶೇ. 60ರ ಗಡಿ ದಾಟಲಿದೆ ಡಿಎ, ಡಿಆರ್; ಜನವರಿಯ ತುಟ್ಟಿಭತ್ಯೆ ಎಷ್ಟು ಏರಬಹುದು?

ಎಐನಲ್ಲಿ ಏನೂ ಗೊತ್ತಿಲ್ಲದ ಬಿಗನರ್ಸ್​ನಿಂದ ಹಿಡಿದು, ಎಐ ಆ್ಯಪ್​ಗಳನ್ನು ತಯಾರಿಸುವ ವೃತ್ತಿಪರರವರೆಗೆ ಎಲ್ಲರಿಗೂ ಸೂಕ್ತವಾಗುವ ಎಐ ಸ್ಕಿಲ್​ಗಳನ್ನು ಈ ಕೋರ್ಸ್​ಗಳಲ್ಲಿ ಕಲಿಯಬಹುದು.

ಆಂಥ್ರೋಪಿಕ್ ಆಫರ್ ಮಾಡಿರುವ ಎಐ ಕೋರ್ಸ್​ಗಳಿವು…

  • ಕ್ಲಾಡ್ ಕೋಡ್ ಇನ್ ಆ್ಯಕ್ಷನ್
  • ಕ್ಲಾಡ್ 101
  • ಎಐ ಫ್ಲುಯೆನ್ಸಿ: ಫ್ರೇಮ್​ವರ್ಕ್ ಅಂಡ್ ಫೌಂಡೇಶನ್ಸ್
  • ಬ್ಯುಲ್ಡಿಂಗ್ ವಿತ್ ದಿ ಕ್ಲಾಡ್ ಎಪಿಐ
  • ಇಂಟ್ರೊಡಕ್ಷನ್ ಟು ಮಾಡಲ್ ಕಾಂಟೆಕ್ಸ್ಟ್ ಪ್ರೋಟೋಕಾಲ್
  • ಎಐ ಫ್ಲುಯೆನ್ಸಿ ಫಾರ್ ಎಜುಕೇಟರ್ಸ್
  • ಎಐ ಫ್ಲುಯೆನ್ಸಿ ಫಾರ್ ಸ್ಟುಡೆಂಟ್ಸ್
  • ಮಾಡಲ್ ಕಾಂಟೆಕ್ಸ್ಟ್ ಪ್ರೋಟೋಕಾಲ್: ಅಡ್ವಾನ್ಸ್ಡ್ ಟಾಪಿಕ್ಸ್
  • ಕ್ಲಾಡ್ ವಿತ್ ಅಮೇಜಾನ್ ಬೆಡ್​ರಾಕ್
  • ಕ್ಲಾಡ್ ವಿತ್ ಗೂಗಲ್ ಕ್ಲೌಡ್ಸ್ ವೆರ್ಟೆಕ್ಸ್ ಎಐ
  • ಟೀಚಿಂಗ್ ಎಐ ಫ್ಲುಯೆನ್ಸಿ
  • ಎಐ ಫ್ಲುಯೆನ್ಸಿ ಫಾರ್ ನಾನ್​ಪ್ರಾಫಿಟ್ಸ್
  • ಇನ್​ಟ್ರೊಡಕ್ಷನ್ ಟು ಏಜೆಂಟ್ ಸ್ಕಿಲ್ಸ್

ಇದನ್ನೂ ಓದಿ: 25,000 ರೂನಷ್ಟು ಕಡಿಮೆ ಸಂಬಳ ಇದ್ದರೆ ಹಣದ ನಿರ್ವಹಣೆ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಕೋರ್ಸ್ ಆರಂಭಿಸುವುದು ಹೇಗೆ?

  • ಆಂಥ್ರೋಪಿಕ್ ಕೋರ್ಸ್​ಗಳು ಈ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯ ಇವೆ: anthropic.skilljar.com/
  • ಇಲ್ಲಿ ನೊಂದಣಿ ಮಾಡಿಕೊಂಡು ಸೈನ್ ಇನ್ ಆಗಬೇಕು.
  • ಸೈನಪ್ ಆಗಲು ಇಮೇಲ್ ಇತ್ಯಾದಿಯನ್ನು ಕೇಳಲಾಗುತ್ತದೆ.
  • ಸೈನ್ ಆದ ಬಳಿಕ ನಿಮಗೆ ಬೇಕಾದ ಕೋರ್ಸ್ ಆಯ್ದುಕೊಂಡು ಕಲಿಯಲು ಆರಂಭಿಸಬಹುದು.

ಈ ಎಲ್ಲಾ ಕೋರ್ಸ್​ಗಳು ಉಚಿತವಾಗಿ ಲಭ್ಯ ಇರುತ್ತವೆ. ಪ್ರೀಮಿಯಮ್ ಸಬ್​ಸ್ರಿಪ್ಷನ್​ನ ಅಗತ್ಯ ಇರುವುದಿಲ್ಲ. ಕಲಿಕೆ ಮುಗಿದ ಬಳಿಕ ಡಿಜಿಟಲ್ ಸರ್ಟಿಫಿಕೇಟ್ ಸಿಗುತ್ತದೆ. ಇದನ್ನು ಲಿಂಕ್ಡ್​ಇನ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಹಂಚಿಕೊಳ್ಳಬಹುದು. ಈ ಮೂಲಕ ನಿಮಗೆ ಎಐ ಜ್ಞಾನವಿರುವುದನ್ನು ತೋರ್ಪಡಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆರತಕ್ಷತೆಯಲ್ಲೂ ವಿಶೇಷ ಉಡುಗೆ ಧರಿಸಿ ಕಂಗೊಳಿಸಿದ ರಶ್ಮಿಕಾ-ವಿಜಯ್: ವಿಶೇಷತೆಯೇನು? – Kannada News | Vijay Deverakonda and Rashmika Mandanna reception dress decode

ಸ್ಟಾರ್ ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಇವರ ಮದುವೆ ಚಿತ್ರಗಳು ನ್ಯಾಷನಲ್ ನ್ಯೂಸ್ ಆಗಿದ್ದವು. ಮದುವೆಯ ದಿನ ಈ ಜೋಡಿ ಶಿವ-ಪಾರ್ವತಿಯ ರೂಪದಲ್ಲಿ ಕಂಗೊಳಿಸಿದ್ದರು. ಇಬ್ಬರೂ ಧರಿಸಿದ್ದ ಚಿನ್ನದ ಆಭರಣಗಳ ಡಿಸೈನ್ ಅಂತೂ ಸಖತ್ ವೈರಲ್ ಆಗಿದ್ದವು. ರಿಸೆಪ್ಷನ್​​ಗೂ ಸಹ ಭಿನ್ನವಾದ ಕಂಗೊಳಿಸುವ ಉಡುಗೆಗಳೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಸಾಮಾನ್ಯವಾಗಿ ಮದುವೆಗೆ ಶಾಸ್ತ್ರೀಯ ಉಡುಪು ಧರಿಸುವ ಜೋಡಿ, ರಿಸೆಪ್ಷನ್​​ಗೆ ಆಧುನಿಕ ರೀತಿಯ ಉಡುಪು ಧರಿಸುತ್ತಾರೆ. ಆದರೆ ವಿಜಯ್ ಮತ್ತು ರಶ್ಮಿಕಾ ತಮ್ಮ ರಿಸೆಪ್ಷನ್​​ಗೆ ಸಹ ಸರಳವಾದ ಆದರೆ ಸಾಂಪ್ರದಾಯಿಕವಾದ ಉಡುಗೆಗಳನ್ನು ಧರಿಸಿ ಮಿಂಚಿದರು.

ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನಿನ್ನೆ ರಾತ್ರಿ ಈ ಜೋಡಿಯ ಅದ್ಧೂರಿ ರಿಸೆಪ್ಷನ್‌ ನಡೆಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಗಳನ್ನು ಈ ಜೋಡಿ ಧರಿಸಿದ್ದರು. ಮತ್ತೊಂದು ವಿಶೇಷವೆಂದರೆ ಇಬ್ಬರ ಉಡುಗೆಗಳು ಅವರವರ ರಾಜ್ಯವನ್ನು ಪ್ರತಿನಿಧಿಸುತ್ತಿತ್ತು. ನಟಿ ರಶ್ಮಿಕಾ, ಮೈಸೂರು ರೇಷ್ಮೆ ಸೀರೆ ಧರಿಸಿದ್ದರೆ ವಿಜಯ್ ದೇವರಕೊಂಡ ತೆಲಂಗಾಣದ ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿದ್ದರು.

ಆರತಕ್ಷತೆ ಕಾರ್ಯಕ್ರಮದಲ್ಲಿ ಗಾಢ ಕೆಂಪು ಬಣ್ಣದ (Deep Red) ಭವ್ಯವಾದ ಮೈಸೂರು ಸಿಲ್ಕ್ ಸೀರೆಯನ್ನು ರಶ್ಮಿಕಾ ಧರಿಸಿದ್ದರು. ಈ ಸೀರೆಯ ಬಾರ್ಡರ್‌ನಲ್ಲಿ ಚಿನ್ನದ ಜರಿ ಕೆಲಸವಿದ್ದು, ವಿಶೇಷವಾಗಿ ಮೈಸೂರು ರಾಜಮನೆತನದ ಲಾಂಛನವಾದ ಗಂಡಭೇರುಂಡ ಪಕ್ಷಿಯ ವಿನ್ಯಾಸವನ್ನು ಬೆಳ್ಳಿ ಮತ್ತು ಬಂಗಾರದ ಎಳೆಗಳಿಂದ ನೆಯ್ಯಲಾಗಿತ್ತು. ರಶ್ಮಿಕಾ ತಮ್ಮ ಕರ್ನಾಟಕದ ನಂಟನ್ನು ನೆನಪಿಸುವ ಉಡುಗೆ ಧರಿಸಿ ಕಂಗೊಳಿಸಿದರು.

ಇದನ್ನೂ ಓದಿ:ರಶ್ಮಿಕಾನಾ ವಿಜಯ್ ಎಷ್ಟು ಕೇರ್ ಮಾಡ್ತಾರೆ ನೋಡಿ

ಕೊರಳಿನಲ್ಲಿ ನಕ್ಷಿ ಕೆಲಸದ ನವಿಲು ವಿನ್ಯಾಸದ ಹಾರ, ಕೆಂಪು ಕೆಂಪು ಮಾಣಿಕ್ಯ ಮತ್ತು ಹಸಿರು ಪಚ್ಚೆ ಹರಳುಗಳು ಕೆತ್ತಿದ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದರು. ಹಣೆಯಲ್ಲಿ ಸಣ್ಣ ಬಿಂದಿ, ಮಲ್ಲಿಗೆ ಹೂ ಮುಡಿದ ಜಡೆ ರಶ್ಮಿಕಾ ಅವರ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು.

ಇನ್ನು ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರಿಗೆ ಪೂರಕವಾಗಿ ತಿಳಿ ಬಿಳಿ ಬಣ್ಣದ ರೇಷ್ಮೆ ಪಂಚೆ ಹಾಗೂ ವಿ-ನೆಕ್ ಶರ್ಟ್ ಧರಿಸಿದ್ದರು. ಅವರ ಅಂಗವಸ್ತ್ರದ ಮೇಲೆ ಗಜ-ಕೇಸರಿ ವಿನ್ಯಾಸವಿದ್ದು, ಇದು ಅವರ ರಾಯಲ್ ಲುಕ್‌ಗೆ ಸಾಕ್ಷಿಯಾಗಿತ್ತು. ಯಾವುದೇ ಅಬ್ಬರವಿಲ್ಲದ, ಅತ್ಯಂತ ಸರಳ ಹಾಗೂ ಸುಂದರ ಬಿಳಿ ಚಿನ್ನದ ಸರಗಳನ್ನು ಧರಿಸುವ ಮೂಲಕ ವಿಜಯ್ ಎಲ್ಲರ ದೃಷ್ಟಿ ಸೆಳೆದರು.

ಮಾರ್ಚ್ 4ರಂದು ನಡೆದ ಈ ಅದ್ಧೂರಿ ಔತಣಕೂಟದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟ-ನಟಿಯರು, ನಿರ್ದೇಶಕರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್, ತೆಲುಗು ಚಿತ್ರರಂಗದ ಗಣ್ಯರಾದ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಇನ್ನೂ ಹಲವಾರು ಮಂದಿ ಇವರ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಬಗ್ಗೆ ಹಿಂದಿ ಸಿನಿಮಾ ತಂಡ ಅಸಮಾಧಾನ ನಿರ್ಮಾಪಕರು ಹೇಳಿದ್ದೇನು? – Kannada News | Producer Ramesh Taurani upset with Toxic movie team regarding release date

ಟಾಕ್ಸಿಕ್’ (Toxic) ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು, ಆದರೆ ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಮಧ್ಯ ಪ್ರಾಚ್ಯದಲ್ಲಿ ಚಾಲ್ತಿಯಲ್ಲಿರುವ ಯುದ್ಧ ಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಜೂನ್ 4ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಆದರೆ ‘ಟಾಕ್ಸಿಕ್’ ಸಿನಿಮಾ ತಂಡ ಹೊಸ ಸಿನಿಮಾ ಘೋಷಣೆ ಮಾಡಿದ ಬಳಿಕ ಬಾಲಿವುಡ್ ಸಿನಿಮಾ ಒಂದು ‘ಟಾಕ್ಸಿಕ್’ ವಿರುದ್ಧ ಅಸಮಾಧಾನ ಹೊರಹಾಕಿದೆ. ವರುಣ್ ಧವನ್ ನಟಿಸುತ್ತಿರುವ ಹೊಸ ಸಿನಿಮಾದ ನಿರ್ಮಾಪಕರು ‘ಟಾಕ್ಸಿಕ್’ ತಂಡದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ವರುಣ್ ಧವನ್ ನಟಿಸಿ ಅವರ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡುತ್ತಿರುವ ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’ ಸಿನಿಮಾ ಸಹ ಜೂನ್ 04ರಂದೇ ಬಿಡುಗಡೆ ಆಗಲಿದೆ. ಸಿನಿಮಾವನ್ನು ನಿರ್ಮಾಪಕ ರಮೇಶ್ ತುರಾನಿ ನಿರ್ಮಾಣ ಮಾಡುತ್ತಿದ್ದು, ‘ಟಾಕ್ಸಿಕ್’ ಸಿನಿಮಾದ ಘೋಷಣೆಯಿಂದ ಅವರು ಅಸಮಾಧಾನಗೊಂಡಿದ್ದಾರೆ. ‘ಯಾವುದೇ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸುವ ಮುಂಚೆ ಅದೇ ದಿನಾಂಕವನ್ನು ಮುಂಚಿತವಾಗಿ ಬುಕ್ ಮಾಡಿಕೊಂಡಿರುವ ತಂಡದ ಅನುಮತಿ ಪಡೆದುಕೊಳ್ಳುವ ಪದ್ಧತಿ ಇದೆ. ಆದರೆ ‘ಟಾಕ್ಸಿಕ್’ ತಂಡದವರು ನಮ್ಮನ್ನು ಸಂಪರ್ಕಿಸದೇ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ರಿಲೀಸ್ ಮುಂದೂಡಿಕೆ: ಲಾಭ ಪಡೆಯಲು ಮುಂದಾದ ಪವನ್ ಕಲ್ಯಾಣ್

ಆದರೆ ಕೆವಿಎನ್ ನಿರ್ಮಾಣ ಸಂಸ್ಥೆಯ ಪ್ರತಿನಿಧಿಯೊಬ್ಬರು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ನಾವು ಬಿಡುಗಡೆ ದಿನಾಂಕ ಘೋಷಿಸುವ ಮುಂಚೆಯೇ ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’ ಸಿನಿಮಾದ ನಿರ್ಮಾಪಕರನ್ನು ಭೇಟಿ ಆಗಿ ಮಾತನಾಡಿದ್ದೆವು. ತಮ್ಮ ಸಿನಿಮಾದ ಹಿಂದಿ ಆವೃತ್ತಿಯ ವಿತರಕ ಅನಿಲ್ ತಡಾನಿ ಅವರ ಮಧ್ಯಸ್ಥಿಕೆಯಲ್ಲಿ ನಾವು ನಿರ್ಮಾಪಕರೊಟ್ಟಿಗೆ ಮಾತನಾಡಿ, ನಮ್ಮ ಅನಿವಾರ್ಯತೆಯನ್ನು ಅವರಿಗೆ ತಿಳಿಸಿದೆವು’ ಎಂದಿದ್ದಾರೆ.

‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’ ಸಿನಿಮಾ ಹಾಸ್ಯಮಯ ಪ್ರೇಮಕಥೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ವರುಣ್ ಧವನ್ ನಾಯಕ. ನಾಯಕಿಯರಾಗಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ಒಟ್ಟಿಗೆ ನಟಿಸುತ್ತಿದ್ದಾರೆ. ಜೂನ್ 04 ರಂದು ಸಿನಿಮಾ ಬಿಡುಗಡೆ ಆಗುವುದಾಗಿ ಈ ಹಿಂದೆಯೇ ಈ ಚಿತ್ರತಂಡ ಘೋಷಿಸಿತ್ತು. ಆದರೆ ಈಗ ‘ಟಾಕ್ಸಿಕ್’ ಅದೇ ದಿನದಂದು ಬಿಡುಗಡೆ ಆಗುತ್ತಿರುವುದರಿಂದ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಟ್ಕಾ ದಂಧೆ ಎಫೆಕ್ಟ್​​: ಕರ್ತವ್ಯಲೋಪ ಹಿನ್ನೆಲೆ ಗುತ್ತಲ ಠಾಣೆ ಪಿಎಸ್​ಐ ತಲೆದಂಡ – Kannada News | Guttal PSI Suspended for Dereliction of Duty After Deputy Speaker’s Matka Raid

ಗುತ್ತಲ ಠಾಣೆಯ PSI ಬಸನಗೌಡ ಬಿರಾದಾರ Image Credit source: Tv9 Kannada

ಹಾವೇರಿ, ಮಾರ್ಚ್​​ 05: ಗುತ್ತಲ ಪಟ್ಟಣದಲ್ಲಿ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿರುವ ಕಾರಣ ಕರ್ತವ್ಯಲೋಪ ಹಿನ್ನೆಲೆ ಗುತ್ತಲ ಠಾಣೆಯ PSI ಬಸನಗೌಡ ಬಿರಾದಾರ ಅವರನ್ನು ಅಮಾನತು ಮಾಡಿ ದಾವಣಗೆರೆ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡ ಆದೇಶ ಮಾಡಿದ್ದಾರೆ. 3 ದಿನಗಳ ಹಿಂದೆ ಗುತ್ತಲ ಪಟ್ಟಣಕ್ಕೆ ಭೇಟಿ ನೀಡಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮಟ್ಕಾ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ್ದರು. ಸ್ವತಃ ತಾವೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಹೀಗಾಗಿ ಮಟ್ಕಾ ದಂಧೆಕೋರರನ್ನು ಹಿಡಿಯಲು ಶಾಸಕರೇ ಬರಬೇಕಾಯಿತು ಎಂದು ಪೊಲೀಸ್​ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಪಿಎಸ್​ಐ ತಲೆದಂಡ ಮಾಡಿ ಐಜಿಪಿ ಆದೇಶಿಸಿದ್ದಾರೆ.

ಡೆಪ್ಯುಟಿ ಸ್ಪೀಕರ್​​ಗೆ ದೂರು ನೀಡಿದ್ದ ಮಹಿಳೆಯರು

ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಹಾವೇರಿ ತಾಲೂಕಿನ ಗುತ್ತಲ ಪಟ್ಟಣಕ್ಕೆ ರುದ್ರಪ್ಪ ಲಮಾಣಿ ಭೇಟಿ ನೀಡಿದ್ದರು, ಈ ವೇಳೆ ಸ್ಥಳೀಯ ಮಹಿಳೆಯರು ಡೆಪ್ಯುಟಿ ಸ್ಪೀಕರ್​​ಗೆ ಪ್ರಾಥಮಿಕ ಮಕ್ಕಳ ಶಾಲೆ ಸಮೀದ ಕೊಠಡಿಯೊಂದರಲ್ಲಿ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ದೂರು ನೀಡಿದ್ದರು. ಅವ್ಯಾಹತವಾಗಿ ದಂಧೆ ನಡೆಯುತ್ತಿದ್ದು, ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲದ ಸ್ಥಿತಿ ಉದ್ಭವಿಸಿರೋದಾಗಿ ಅಲವತ್ತುಕೊಂಡಿದ್ದರು. ಕೂಡಲೇ ಸ್ಥಳಕ್ಕೆ ರುದ್ರಪ್ಪ ಲಮಾಣಿ ಭೇಟಿ ನೀಡಿದಾಗ ವ್ಯಕ್ತಿಯೋರ್ವ ಮಟ್ಕಾ ಬರೆಯುತ್ತಿರುವುದು ಕಂಡುಬಂದಿತ್ತು.

ಇದನ್ನೂ ಓದಿ: ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿ ಬುಕ್ಕಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ‌ ಶಾಸಕ

ಮಹಿಳೆಯರು ದೂರಿರುವಂತೆ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿರುವುದನ್ನು ಕಂಡು ಗರಂ ಆದ ರುದ್ರಪ್ಪ ಲಮಾಣಿ, ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಪಿಎಸ್​ಐಗೆ ಆರೋಪಿಯನ್ನು ಒಪ್ಪಿಸಿದ್ದ ಡೆಪ್ಯುಟಿ ಸ್ಪೀಕರ್​​, ಅಧಿಕಾರಿಗಳನ್ನು ತರಾಟೆಗೆ ಪಡೆದ ಪ್ರಸಂಗವೂ ನಡೆದಿತ್ತು. ಕೂಡಲೇ ಮಟ್ಕಾ ದಂಧೆಗೆ ಕಡಿವಾಣ ಹಾಕುವಂತೆ ತಹಶೀಲ್ದಾರ್​​ ಮತ್ತು ಪೊಲೀಸ್​​ ಸಿಬ್ಬಂದಿಗೆ ರುದ್ರಪ್ಪ ಲಮಾಣಿ ಸೂಚಿಸಿರೋದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿತ್ತು. ಪೊಲೀಸರು ಮಾಡಬೇಕಾದ ಕೆಲಸವನ್ನು ಜನಪ್ರತಿನಿಧಿಯೇ ಬಂದು ಮಾಡಬೇಕಾಯಿತು ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಹೀಗಾಗಿ ಎಚ್ಚೆತ್ತ ಪೊಲೀಸ್​​ ಇಲಾಖೆ ಘಟನೆಗೆ ಸಂಬಂಧಿಸಿದಂತೆ ಗುತ್ತಲ ಠಾಣೆಯ PSI ಬಸನಗೌಡ ಬಿರಾದಾರ ಅವರನ್ನು ಸಸ್ಪೆಂಡ್​​ ಮಾಡಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:13 pm, Thu, 5 March 26

Source link

ರಶ್ಮಿಕಾ-ವಿಜಯ್ ಆರತಕ್ಷತೆಯಲ್ಲಿ ಭಾಗಿಯಾದ ಕನ್ನಡದ ಸೆಲೆಬ್ರಿಟಿಗಳು

Source link

ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್! ಬಿಸಿಲಿನ ಬೇಗೆಯಲ್ಲೂ ಪ್ರಾಣಿಗಳು ಕೂಲ್ ಕೂಲ್ – Kannada News | Bannerghatta Zoo Fights Summer Heat: Ice candy and fruits fed to zoo animals

ಬೆಂಗಳೂರು, ಮಾರ್ಚ್​ 05: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ರಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಝೂ ಸಿಬ್ಬಂದಿ ಪ್ರಾಣಿಗಳಿಗೆ ಎಳನೀರು, ಹಣ್ಣು, ತರಕಾರಿ ಬಳಸಿ ಲಾಲಿಪಾಪ್ ಮತ್ತು ಐಸ್‌ಕ್ಯಾಂಡಿ ರೂಪದಲ್ಲಿ ಪೌಷ್ಠಿಕ ಆಹಾರ ನೀಡುತ್ತಿದ್ದಾರೆ. ಆನೆ, ಜಿಂಕೆ, ಮಂಗ, ಕರಡಿ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ತಂಪಾದ ಆಹಾರ ಮತ್ತು ನೀರಿನ್ನು ನೀಡಲಾಗುತ್ತಿದೆ. ದಿನಕ್ಕೆ ಆನೆಗಳಿಗೆ ಸ್ನಾನ, ಕಲ್ಲಂಗಡಿ ಹಣ್ಣು ಮತ್ತು ನೀರಿನ ಹೊಂಡಗಳ ಮೂಲಕ ತಂಪಾದ ವಾತಾವರಣ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಸಹ ಮರಗಿಡಗಳ ನೆರವಿನಿಂದ ತಟ್ಟಿದ ಬಿಸಿಲಿನಿಂದ ರಕ್ಷಣೆ, ಕುಳಿತು ವಿಶ್ರಾಂತಿ ಪಡೆಯಲು ಶೆಲ್ಟರ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸಿಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version