ಮೆಷಿನ್​ಗಳು ಮನುಷ್ಯನ ಮಟ್ಟದ ಬುದ್ಧಿವಂತಿಕೆ ಹೊಂದಲು ಇನ್ನೆಷ್ಟು ವರ್ಷ ಬೇಕು? ಎಜಿಐ ಪಿತಾಮಹ ಬೆನ್ ಗರ್ಟ್ಜೆಲ್ ಹೇಳೋದಿದು – Kannada News | AI researcher Ben Goertzel predicts years for machine to have Human level intelligence

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್Image Credit source: Shutterstock

ನವದೆಹಲಿ, ಏಪ್ರಿಲ್ 19: ಎಲ್ಲೆಡೆ ಎಐನದ್ದೇ ಸುದ್ದಿ. ಎಲ್ಲೇ ಕೆಲಸ ಹೋದರೂ ಅದು ಎಐ ಎಫೆಕ್ಟ್ ಎನ್ನಲಾಗುತ್ತಿದೆ. ಯಂತ್ರದ ಬುದ್ಧಿವಂತಿಕೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಸಂಚಲನ ಸೃಷ್ಟಿಸುತ್ತೆ ಎನ್ನಲಾಗುತ್ತಿದೆ. ಅದರಲ್ಲೂ ಎಜಿಐ (AGI- ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್) ಆಗಮನವಾಗಿಬಿಟ್ಟರೆ ಮನುಷ್ಯರ ಕೆಲಸಗಳನ್ನೆಲ್ಲಾ ಯಂತ್ರಗಳು, ರೋಬೋಗಳು, ಇಂಟೆಲಿಜೆಂಟ್ ಸಾಫ್ಟ್​ವೇರ್​ಗಳೇ ಮಾಡಿ ಮುಗಿಸುತ್ತವೆ ಎಂದು ಪರಿಣಿತರುಗಳೇ ಹೇಳುತ್ತಿದ್ದಾರೆ. ಆದರೆ, ಮನುಷ್ಯರ ಬುದ್ಧಿಮತ್ತೆಯ ಮಟ್ಟವನ್ನು ಎಐಗೆ ಮುಟ್ಟಲು ಸಾಧ್ಯವಾಗಿಲ್ಲ. ಜನರೇಟಿವ್ ಎಐ ಅಥವಾ ಎಜಿಐನ ಪಿತಾಮಹ ಎಂದು ಖ್ಯಾತರಾಗಿರುವ ಬೆನ್ ಗರ್ಟ್ಜೆಲ್ (Ben Goertzel) ಪ್ರಕಾರ ಯಂತ್ರಗಳಿಗೆ ಮನುಷ್ಯರ ಮಟ್ಟದ ಬುದ್ಧಿಮತ್ತೆ ತಲುಪಲು ಹೆಚ್ಚು ಕಾಲ ಬೇಕಾಗಿಲ್ಲವಂತೆ.

ಮನುಷ್ಯರ ಬುದ್ಧಮತ್ತೆಯನ್ನು ಎಐ ತಲುಪಲು ಇನ್ನು ಕೇವಲ 2-3 ವರ್ಷ ಸಾಕು ಅಷ್ಟೇ ಎಂದು ಎಐ ರಿಸರ್ಚರ್ ಆಗಿರುವ ಬೆನ್ ಗರ್ಟ್ಜೆಲ್ ಹೇಳಿದ್ದರೆ. ಈ ಹಿಂದೆ ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಕೂಡ ಇದೇ ಟೈಮ್​ಫ್ರೇಮ್ ತಿಳಿಸಿದ್ದರು.

ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್: ಮತ್ತೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಭಾರತ

‘ಒಮ್ಮೆ ನಿಮಗೆ ಮನುಷ್ಯ ಮಟ್ಟದ ಎಜಿಐ ಸಿದ್ಧವಾಯಿತೆಂದರೆ, ಮಾನವನ ಬಹುತೇಕ ಎಲ್ಲಾ ಉದ್ಯೋಗಗಳು ನಿರರ್ಥಕ ಎನಿಸುತ್ತವೆ’ ಎಂದು ಗರ್ಟ್ಜೆಲ್ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ, ಹ್ಯೂಮನ್ ಇಂಟೆಲಿಜೆನ್ಸ್ ಮೀರಿಸುವ ಎಜಿಐ ಬಂದು ಬಿಟ್ಟರೆ ಅದು ಒಮ್ಮೆಗೇ ಅಳವಡಿಕೆ ಆಗದು. 2022ರಿಂದ ಜನರೇಟಿವ್ ಎಐ ಅನ್ನು ಕ್ರಮೇಣವಾಗಿ ಅಳವಡಿಲಾದಂತೆ, ಹಂತ ಹಂತವಾಗಿ ನಡೆಯುತ್ತದೆ ಎಂದು ಎಐ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಉಳಿಯುವ ಮತ್ತು ಅಳಿಯುವ ಉದ್ಯೋಗಗಳು

ಫೋರ್ಬ್ಸ್​ನ ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಬೆನ್ ಗರ್ಟ್ಜೆಲ್ ಅವರು ಎಐನಿಂದ ಬೇಗ ಹಾನಿಯಾಗುವ ಕೆಲಸಗಳು, ಹಾಗೂ ಎಐ ನಡುವೆಯೂ ಉಳಿಯಬಲ್ಲ ಕೆಲಸಗಳು ಯಾವುವೆಂದು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಅಕ್ಷಯ ತೃತೀಯ ಸ್ಪೆಷಲ್: ಒಡವೆ, ಡಿಜಿಟಲ್ ಗೋಲ್ಡ್, ಇಟಿಎಫ್- ಬಂಗಾರದ ಲಾಭ ಪಡೆಯಲು ಯಾವುದು ಬೆಸ್ಟ್?

ವಕೀಲರು, ಗ್ರಾಫಿಕ್ ಡಿಸೈನರ್​ಗಳು ಮೊದಲಾದವರು ಎಐನಿಂದ ಬೇಗ ಹೊಡೆತ ತಿನ್ನಬಹುದು. ಆದರೆ, ಪ್ಲಂಬರ್​ಗಳು, ಎಲೆಕ್ಟ್ರಿಶಿಯನ್​ಗಳು ಮತ್ತು ಶಿಕ್ಷಕರು ಮೊದಲಾದವರು ಮುಂದೆಯೂ ಅಗತ್ಯ ಹೊಂದಿರುತ್ತಾರೆ. ಅದರಲ್ಲೂ ಶಿಕ್ಷಣಕ್ಕೆ ಮಾನವೀಯ ಸ್ಪರ್ಶ ಬಹಳ ಅಗತ್ಯ ಇರುವುದರಿಂದ ಶಿಕ್ಷಕ ಉದ್ಯೋಗ ಹೆಚ್ಚು ಕಾಲ ಪ್ರಸ್ತುತದಲ್ಲಿ ಇರಬಹುದು ಎಂಬುದು ಬೆನ್ ಗರ್ಟ್ಜೆಲ್ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:41 pm, Sun, 19 April 26

Source link

ನಟಿಯ ಕೈಯಲ್ಲಿ ವಿವಿಐಪಿ ಐಪಿಎಲ್ ಟಿಕೆಟ್, ಎಲ್ಲರ ಕಣ್ಣು ಸಿಎಂ ಮೇಲೆ – Kannada News | Kushita Kallapu Post IPL ticket photos raised questions Around Revanth Reddy

ಐಪಿಎಲ್ (IPL) ಸೀಸನ್ ಚಾಲ್ತಿಯಲ್ಲಿದೆ. ಕೋಟ್ಯಂತರ ಮಂದಿ ಟಿವಿಗಳಲ್ಲಿ ಪಂದ್ಯಗಳನ್ನು ನೋಡುತ್ತಿದ್ದಾರೆ. ಕ್ರೀಡಾಂಗಣಕ್ಕೆ ಹೋಗಿ ಪಂದ್ಯ ನೋಡಲಂತೂ ನೂಕು-ನುಗ್ಗಲಿದೆ. ಟಿಕೆಟ್​​ಗಳೇ ಸಿಗುತ್ತಿಲ್ಲ. ಸಿಕ್ಕರು ಬ್ಲಾಕ್​​ನಲ್ಲಿ ಒಂದಕ್ಕೆ ಹತ್ತರಷ್ಟು ಬೆಲೆ. ಆದರೆ ಇದೀಗ ನಟಿ, ಇನ್​​ಸ್ಟಾಗ್ರಾಂ ಇನ್​ಫ್ಲ್ಯುಯೆನ್ಸರ್ ಒಬ್ಬರು ತಮಗೆ ಸಿಕ್ಕಿದ್ದ ಐಪಿಎಲ್ ಟಿಕೆಟ್​​ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿದೆ. ಏಕೆಂದರೆ ನಟಿ ಹಂಚಿಕೊಂಡಿದ್ದಿದ್ದು ವಿವಿಐಪಿ ಟಿಕೆಟ್ ಅದೂ ಮಾರಾಟದ ಟಿಕೆಟ್ ಅಲ್ಲ ಬದಲಿಗೆ ಕಾಯ್ದಿರಿಸಿದ ಟಿಕೆಟ್. ಟಿಕೆಟ್​​ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಎಲ್ಲರ ಕಣ್ಣು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮೇಲೆ ಬಿದ್ದಿದೆ.

ತೆಲಂಗಾಣದಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕುಶಿತಾ ಕಲ್ಲಪು ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಟಿಕೆಟ್​​ನ ಚಿತ್ರಗಳನ್ನು ಹಂಚಿಕೊಂಡಿದ್ದರು. ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ಟಿಕೆಟ್​​ಗಳವು. ಆದರೆ ಅವು ಸಾಮಾನ್ಯ ಟಿಕೆಟ್ ಆಗಿರಲಿಲ್ಲ ವಿವಿಐಪಿ ಪಾಸ್‌ಗಳಾಗಿದ್ದವು. ಸೂಕ್ಷ್ಮವಾಗಿ ಗಮನಿಸಿದರೆ ಆ ಟಿಕೆಟ್​​ಗಳು ಸರ್ಕಾರದ ಉನ್ನತ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮೀಸಲಿಟ್ಟಿದ್ದ ಟಿಕೆಟ್​ಗಳಾಗಿದ್ದವು.

ಸೋಷಿಯಲ್ ಮೀಡಿಯಾ ಬಳಕೆದಾರರು ಆ ಪಾಸ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವು ಮುಖ್ಯಮಂತ್ರಿಗಳ ಕಚೇರಿ ಅಥವಾ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ‘ಕಾಂಪ್ಲಿಮೆಂಟರಿ’ ಕೋಟಾದ ಪಾಸ್‌ಗಳು ಎಂಬುದು ಬೆಳಕಿಗೆ ಬಂದಿದೆ. ಇದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಕಚೇರಿಯಿಂದಲೇ ಕುಶಿತಾಗೆ ತಲುಪಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕ್ಯೂ ನಿಂತು ಅಥವಾ ಆನ್‌ಲೈನ್‌ನಲ್ಲಿ ಪರದಾಡುತ್ತಿರುವಾಗ, ಇನ್‌ಫ್ಲುಯೆನ್ಸರ್‌ಗಳಿಗೆ ಇಂತಹ ಪ್ರೀಮಿಯಂ ಪಾಸ್‌ಗಳು ಸುಲಭವಾಗಿ ಸಿಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಇದು ‘ವಿಐಪಿ ಸಂಸ್ಕೃತಿ’ಯ ದುರುಪಯೋಗ ಎಂದು ಟೀಕಿಸಲಾಗುತ್ತಿದೆ.

ಇದನ್ನೂ ಓದಿ:IPL Black Ticket: ಐಪಿಎಲ್ ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ, ಡಿಎನ್‌ಎ ಸಂಸ್ಥೆಗೆ ಸಿಸಿಬಿ ಶಾಕ್!

ಕರ್ನಾಟಕ ರಾಜಕೀಯದಲ್ಲೂ ಸಹ ಐಪಿಎಲ್ ಟಿಕೆಟ್ ವಿಚಾರ ಸದ್ದು ಮಾಡಿತು. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರವು ಸ್ಟೇಡಿಯಂಗೆ ನೀರು, ವಿದ್ಯುತ್ ಮತ್ತು ಭದ್ರತೆ ನೀಡುತ್ತದೆ, ಆದರೆ ಕೆಎಸ್‌ಸಿಎ ಶಾಸಕರಿಗೆ ಗೌರವ ನೀಡುತ್ತಿಲ್ಲ ಮತ್ತು ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಾಟ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು. ಈ ವಿಷಯ ಗಂಭೀರ ಸ್ವರೂಪ ಪಡೆದ ನಂತರ, ಸ್ಪೀಕರ್ ಯು.ಟಿ. ಖಾದರ್ ಅವರ ಸೂಚನೆಯಂತೆ ಕೆಎಸ್‌ಸಿಎ ಶಾಸಕರಿಗೆ ಟಿಕೆಟ್ ನೀಡಲು ಒಪ್ಪಿಕೊಂಡಿತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯಕ್ಕೆ ಪ್ರತಿಯೊಬ್ಬ ಶಾಸಕರಿಗೆ (MLA/MLC) ತಲಾ 3 ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಂತರಾಷ್ಟ್ರೀಯ ಪಂದ್ಯಗಳಿಗಾದರೆ 2 ಉಚಿತ ಟಿಕೆಟ್ ಮತ್ತು 2 ಟಿಕೆಟ್‌ಗಳನ್ನು ಖರೀದಿಸುವ ಅವಕಾಶ ನೀಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

KKR vs RR IPL 2026 Live Score: ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ – Kannada News | Kolkata Knight Riders vs Rajasthan Royals IPL 2026 Live Cricket Score KKR vs RR Match on 19th April latest news in Kannada

  • 19 Apr 2026 03:16 PM (IST)

    KKR vs RR IPL 2026: ಕೆಕೆಆರ್

    ಅಜಿಂಕ್ಯ ರಹಾನೆ (ನಾಯಕ), ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ರೋವ್ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣದೀಪ್ ಸಿಂಗ್, ಅನುಕೂಲ್ ರಾಯ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ, ವರುಣ್ ಚಕ್ರವರ್ತಿ.

  • 19 Apr 2026 03:15 PM (IST)

    KKR vs RR IPL 2026: ರಾಜಸ್ಥಾನ್ ರಾಯಲ್ಸ್

    ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ರವಿ ಬಿಷ್ಣೋಯ್.

  • 19 Apr 2026 03:06 PM (IST)

    KKR vs RR IPL 2026: ಟಾಸ್ ಗೆದ್ದ ರಾಜಸ್ಥಾನ್

    ಟಾಸ್ ಗೆದ್ದ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೆಕೆಆರ್ ಬೌಲಿಂಗ್ ಮಾಡಲಿದೆ.

  • Source link

    ಸುಟ್ಟಘಟ್ಟ ಗ್ರಾಮದ ತೋಟದಲ್ಲಿ ಪ್ರತ್ಯಕ್ಷವಾಯಿತು ಕಾಡಾನೆಗಳ ಹಿಂಡು! – Kannada News | 3 Wild Elephants Spotted in Channapatna Farm; Forest Dept Responds

    ರಾಮನಗರ, ಏಪ್ರಿಲ್ 19: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮ ಸಮೀಪ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿವೆ.ಗ್ರಾಮದ ಶಿವಶಂಕರ್ ಎಂಬುವರ ತೋಟದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭೀತಿ ಉಂಟಾಗಿದೆ. ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಹಿಮ್ಮೆಟ್ಟಿಸಲು ಸಿಬ್ಬಂದಿ ಕ್ರಮ ಕೈಗೊಂಡಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ‘ಕಿಲಾಡಿ ಮೇಘ’ ಸಿನಿಮಾದಲ್ಲಿ ದೈವಾರಾಧಕನ ಪಾತ್ರದಲ್ಲಿ ಶಂಕರ್ ಅಶ್ವತ್ಥ್ – Kannada News | Shankar Ashwath Mahalakshmi starrer Kiladi Megha Kannada movie press meet

    ‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ಮಹಾಲಕ್ಷ್ಮಿ ನಟಿಸಿದ ‘ಕಿಲಾಡಿ ಮೇಘ’ (Kiladi Megha) ಸಿನಿಮಾದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿವೆ. ಮೇಘ ಎಂಬ ಪಾತ್ರದಲ್ಲಿ ಮಹಾಲಕ್ಷ್ಮಿ ಅವರು ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಹಿರಿಯ ನಟ ಶಂಕರ್ ಅಶ್ವಥ್ (Shankar Ashwath) ಅವರು ದೈವಾರಾಧಕನ ಪಾತ್ರ ನಿರ್ವಹಿಸಿದ್ದಾರೆ ಎಂಬುದು ವಿಶೇಷ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಚಿತ್ರತಂಡದವರು ಮಾತನಾಡಿದ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.

    ‘ಸುಲೋಚನಾ ಪ್ರೊಡಕ್ಷನ್ಸ್’ ಮೂಲಕ ಸುಲೋಚನಾ ಸುಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡಿರುವ ಬಿ.ಟಿ. ಮಂಜುನಾಥ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಣದ ಹಿಂದೆ ಹೋದಾಗ ಏನೇನೆಲ್ಲ ಆಗುತ್ತದೆ ಎಂಬುದನ್ನು ಹಾರರ್ ಕಥೆಯ ಮೂಲಕ ಈ ಸಿನಿಮಾದಲ್ಲಿ ಹೇಳಲಾಗಿದೆ.

    ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನೃತ್ಯ‌ಕಲಾವಿದನಾಗಿ ಹಾಗೂ ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸಿರುವ ಸುಕುಮಾರ್ ಅವರು ಮೊದಲ ಬಾರಿಗೆ ‘ಕಿಲಾಡಿ ಮೇಘ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 13 ವರ್ಷದ ಹುಡುಗಿಯ ಸುತ್ತ ನಡೆಯುವ ಕಥೆಯಿದು ಎಂದು ನಿರ್ದೇಶಕ ಬಿ.ಟಿ. ಮಂಜುನಾಥ್ ಅರಗ ಅವರು ಹೇಳಿದರು.

    ‘ಮೊದಲು ಈ ಸಿನಿಮಾವನ್ನು ರಾಜೇಶ್ ರಾಜ ಅವರು ಆರಂಭಿಸಿದ್ದರು. ಕಾರಣಾಂತರಗಳಿಂದ ಅವರಿಗೆ ಚಿತ್ರವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ ನಾನು ಚಿತ್ರವನ್ನು ಕೈಗೆತ್ತಿಕೊಂಡು ಸಾಂಗ್, ಫೈಟ್ ಸೇರಿದಂತೆ ಉಳಿದ ಭಾಗ ಮುಗಿಸಿ ರಿಲೀಸ್ ಹಂತಕ್ಕೆ ತಂದಿದ್ದೇನೆ’ ಎಂದು ನಿರ್ದೇಶಕರು ಹೇಳಿದರು.

    ಚಿತ್ರದ ನಿರ್ಮಾಪಕ ಸುಕುಮಾರ್ ಮಾತನಾಡಿ, ‘ಈ ಸಿನಿಮಾದಲ್ಲಿ ನಾನು ಕಲಾವಿದನಾಗಿ ನಟಿಸಲು ಹೋದವನು. ವಿಧಿ ಇಲ್ಲದೇ ನಾನೇ ನಿರ್ಮಾಪಕ ಆಗಬೇಕಾಯಿತು. ನಾನು ಮತ್ತು ಮಂಜುನಾಥ್ ಇಬ್ಬರೂ ಡಾನ್ಸರ್ ಆಗಿ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇವೆ. ಹಣದ ಹಿಂದೆ ಹೋಗಬಾರದು ಎನ್ನುವುದೇ ಕಿಲಾಡಿ ಮೇಘ ಸಿನಿಮಾದ ಕಥೆ’ ಎಂದರು.

    ಇದನ್ನೂ ಓದಿ: ನಿನ್ನೆ-ಮೊನ್ನೆ ಬಂದ ಬಚ್ಚಾ ಎಂದಿದ್ದ ಶಂಕರ್​ ಅಶ್ವತ್ಥ್​ ವಿರುದ್ಧ ಮನೆ ಮಂದಿಯೆಲ್ಲಾ ಒಟ್ಟಾಗಿ ತಿರುಗಿ ಬಿದ್ರು!

    ಶಂಕರ್ ಅಶ್ವಥ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ನಾನು ನಿಜವಾಗಿಯೂ ಅನುಭವಿಸಿ ಮಾಡಿದಂಥ ಪಾತ್ರ ಇದು. ಯಾವುದೋ ಒಂದು ಜೀವ ತುಡಿತಕ್ಕೆ ಒಳಗಾಗಿರುತ್ತದೆ. ಅದನ್ನು ರಕ್ಷಣೆ ಮಾಡಲು ನಾನು ಬರುತ್ತೇನೆ’ ಎಂದು ಅವರು ಹೇಳಿದರು. ಕೆ.ಎಂ. ಇಂದ್ರ ಅವರ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

    Source link

    ಇನ್ನೇನು ಟೇಕ್ ಆಫ್ ಆಗುವಷ್ಟರಲ್ಲೇ ಪ್ರಯಾಣಿಕ ಅಸ್ವಸ್ಥ: ಮಾನವೀಯತೆಗೆ ಸಾಕ್ಷಿಯಾದ ವಿಮಾನ – Kannada News | Passenger sickness During Flight take off at Kempegowda international airport bengaluru

    ಬೆಂಗಳೂರು, (ಏಪ್ರಿಲ್ 19): ಇಂಡಿಗೋ ವಿಮಾನ (indifo Flight) ಮಾನವೀಯತೆಗೆ ಸಾಕ್ಷಿಯಾಗಿದೆ. 6E 840 ನಂಬರಿನ ಇಂಡಿಗೋ ಫ್ಲೈಟ್ ಬೆಂಗಳೂರಿನಿಂದ (Bengaluru) ದೆಹಲಿಗೆ (Delhi) ತೆರಳಲು ಟೇಕ್ ಆಫ್ ಆಗ್ಬೇಕು ಎನ್ನುವಷ್ಟರಲ್ಲೇ ಪ್ರಯಾಣಿಕನೋರ್ವ ಅಸ್ವಸ್ಥಗೊಂಡಿದ್ದು, ಕೂಡಲೇ ಕಂಪಾರ್ಟ್ಮೆಂಟ್​ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಡಾಕ್ಟರ್ ನೆರವಿಗೆ ದಾವಿಸಿದ್ದಾರೆ. ​ವಿಮಾನದೊಳಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಸಿಬ್ಬಂದಿ, ಸ್ಟಾಫ್ – ಪೈಲಟ್ ಸಹಾಯದಿಂದ ಅಸ್ವಸ್ಥಗೊಂಡ ಪ್ರಯಾಣಿಕನನ್ನ ವಿಮಾನದಿಂದ ಆ್ಯಂಬುಲೆನ್ಸ್​ಗೆ ಶಿಫ್ಟ್​ ಮಾಡಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಡಾಕ್ಟರ್ ಹಾಗೂ ಸಿಬ್ಬಂದಿ ಕೆಲಸಕ್ಕೆ ಇತರೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    ವಿಳಂಬವಾದ್ರು ಬಿಜೆಪಿ ಮಹಿಳಾ ಮೀಸಲಾತಿ ಬಿಲ್ ಜಾರಿ ಮಾಡುತ್ತೆ: ಸಂಸದ ತೇಜಸ್ವಿ ಸೂರ್ಯ – Kannada News | BJP will enforce women’s reservation bill despite delay: MP Tejasvi Surya

    ಬಿಜೆಪಿ ಸಂಸದ ತೇಜಸ್ವಿ ಸೂರ್ಯImage Credit source: tv9 kannada

    ಬೆಂಗಳೂರು, ಏಪ್ರಿಲ್​ 19: ಮಹಿಳಾ ಮೀಸಲಿಗೆ (Women’s Reservation Bill) ಸೋಲು ಆಗಿರುವುದು ರಾಜ್ಯದಲ್ಲೂ ಕಿಚ್ಚು ಹಚ್ಚಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮಣಿಯರು ಸಿಡಿದೆದಿದ್ದಾರೆ. ರಾಜ್ಯ ವಿವಿಧೆಡೆ ಪ್ರತಿಭಟನೆ ಮಾಡಲಾಗುತ್ತಿದೆ. ಬೆಂಗಳೂರಿನ ಜೆಪಿ ನಗರದ ಆರ್​.ವಿ.ಕಾಲೇಜು ಬಳಿ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಭಾಗಿಯಾಗಿದ್ದು, ಹೆಣ್ಣು ಮಕ್ಕಳು ನಮ್ಮ ಜೊತೆ‌ ಕೂರಬಾರದು ಅಂತ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ನೂರಕ್ಕೆ ನೂರು ಈ ಬಿಲ್ ಜಾರಿ ಮಾಡುತ್ತೇವೆ. ಸ್ವಲ್ಪ ವಿಳಂಬ ಆಗಬಹುದು ಆದರೆ ಬಿಜೆಪಿ ಮಾಡುತ್ತದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್​​ನ ಲಾಜಿಕ್ ಅರ್ಥ ಆಗುತ್ತಿಲ್ಲ ಎಂದ ತೇಜಸ್ವಿ ಸೂರ್ಯ

    ಬಿಬಿಎಂಪಿ ತೆಗೆದು 5 ಮಹಾನಗರ ಪಾಲಿಕೆಗಳನ್ನಾಗಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಳ ಆಗಿದೆ ಅಂತಾ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಹೇಳುತ್ತಾರೆ. 198 ಇದ್ದ ವಾರ್ಡ್​​ಗಳನ್ನು ಜಿಬಿಎ ಮಾಡಿ 369ಕ್ಕೆ ಹೆಚ್ಚಿಸಿದ್ದಾರೆ. ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಡಿಲಿಮಿಟೇಶನ್ (ಕ್ಷೇತ್ರ ಮರು ವಿಂಗಡಣೆ) ಮಾಡಿದರೆ ತೊಂದರೆಯಿಲ್ಲ ಎನ್ನುವ ಕಾಂಗ್ರೆಸ್, ಸಂಸತ್ ಮಟ್ಟದಲ್ಲಿ ಮಾಡಿದರೆ ಇವರಿಗೆ ತೊಂದರೆ ಆಗುತ್ತಾ. ಇದರಲ್ಲಿ ಕಾಂಗ್ರೆಸ್ ಲಾಜಿಕ್ ಅರ್ಥ ಆಗುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಮೂರು ವಿಧೇಯಕ ಮಿಕ್ಸ್ ಮಾಡಿದ್ದರಿಂದ ಬಿದ್ದೋಗಿದೆ: ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲ; ಸಿಎಂ ಸಿದ್ದರಾಮಯ್ಯ

    1992ರಿಂದ ಮಹಿಳಾ ಮೀಸಲಾತಿ ಬಿಲ್​ ಬಗ್ಗೆ ಚರ್ಚೆ ನಡೆಯುತ್ತಿದೆ. ಮೀಸಲಾತಿ ವಿಚಾರದಲ್ಲಿ ಆಗಿನಿಂದಲೂ ಬಿಜೆಪಿ ನಿಲುವು ಒಂದೇ ಇದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಆದಷ್ಟು ಬೇಗ ಕೊಡಬೇಕು. ಇದು ಭಾರತೀಯ ಜನತಾ ಪಕ್ಷದ ನಿಲುವಾಗಿದೆ. ಲೋಕಸಭೆಯಲ್ಲಿ ಬಿಲ್ ಚರ್ಚೆಗೆ ಬಂದಾಗಲೆಲ್ಲಾ ಬಿಜೆಪಿ ಬೆಂಬಲಿಸಿದೆ ಎಂದರು.

    ಮಹಿಳಾ ಮೀಸಲಾತಿ ಮಸೂದೆಯನ್ನ ಕಾಂಗ್ರೆಸ್ 1992ರಿಂದ ಸೋಲಿಸುತ್ತಾ ಬರುತ್ತಿದೆ

    1992ರಿಂದ ಇಲ್ಲಿಯವರೆಗೆ ಮಹಿಳಾ ಮೀಸಲಾತಿ ಮಸೂದೆಯನ್ನ ಕಾಂಗ್ರೆಸ್ ಪಕ್ಷವು ಹೇಗಾದರೂ ಮಾಡಿ ಸೋಲಿಸುತ್ತಾ ಬರುತ್ತಿದೆ. ಲಾಲೂಪ್ರಸಾದ್​, ಮುಲಾಯಂ ಸಿಂಗ್ ಮೂಲಕ ಬಿಲ್ ಸೋಲಿಸಿದರು. ಅವರೆಲ್ಲಾ ಇನ್ನೊಮ್ಮೆ ಸೇರಿ ಲೋಕಸಭೆಯಲ್ಲಿ ಪ್ರತಿ ಹರಿದುಹಾಕಿದರು. ಬಿಜೆಪಿ ಸರ್ಕಾರ 2023ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅಂಗೀಕಾರಗೊಳಿಸ್ತು. 40 ವರ್ಷದಿಂದ ಬಾಕಿ ಇದ್ದ ಬಿಲ್ 2023ರಲ್ಲಿ ಲೋಕಸಭೆಯಲ್ಲಿ ಬಿಲ್​ ಪಾಸ್ ಮಾಡಿ ಜಾರಿ ಮಾಡಿದ್ದು ಬಿಜೆಪಿ. ಬಿಜೆಪಿ ವಿಪಕ್ಷ ಆಗಿದ್ದಾಗೆಲ್ಲ ಮಹಿಳಾ ಮೀಸಲಾತಿಗೆ ಬೆಂಬಲಿಸಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಕಾಂಗ್ರೆಸ್ ಮಹಿಳಾ ವಿರೋಧಿ ಎಂದ ಬಿಜೆಪಿ: ದೇಶದ ಮಹಿಳೆಯರ ಗೆಲುವು ಎಂದ ಕೈ; ನಾಯಕರ ಕೆಸರೆರಚಾಟ

    2023ರಲ್ಲಿ ಬಿಲ್ ಪಾಸ್ ಆದಾಗ ಜಾರಿ ಮಾಡುವ ಉದ್ದೇಶ ಇತ್ತು. ಹೊಸ ಜನಗಣತಿ ಆಧಾರದ ಮೇಲೆ ಜಾರಿ ಮಾಡುವ ಉದ್ದೇಶ ಇತ್ತು. 2011ರ ಜನಗಣತಿ ಆಧಾರದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ನಿರ್ಧರಿಸಿತ್ತು. ಅದರಂತೆ ಜಾರಿಗೆ ಮುಂದಾಗಿದಕ್ಕೆ ಅದಕ್ಕೂ ಕಾಂಗ್ರೆಸ್​​ ಕಲ್ಲುಹಾಕಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

    Source link

    ನೋಯ್ಡಾ ಹಿಂಸಾಚಾರದ ಮಾಸ್ಟರ್​ಮೈಂಡ್ ಆದಿತ್ಯ ಆನಂದ್ ಅರೆಸ್ಟ್​ – Kannada News | Key Planner of Noida Workers’ Stir arrested in Tamil Nadu

    ನೋಯ್ಡಾ, ಏಪ್ರಿಲ್ 19: ನೋಯ್ಡಾದಲ್ಲಿ ಇತ್ತೀಚೆಗೆ ನಡೆದ ಭೀಕರ ಹಿಂಸಾಚಾರ(Violence) ಮತ್ತು ಬೆಂಕಿ ಹಚ್ಚುವಿಕೆ ಪ್ರಕರಣದ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF), ತಮಿಳುನಾಡಿನ ತಿರುಚ್ಚಿಯಲ್ಲಿ ಈ ಘಟನೆಯ ಪ್ರಮುಖ ಆರೋಪಿಯನ್ನು ಹೆಡೆಮುರಿ ಕಟ್ಟಿದೆ. ಹಿಂಸಾಚಾರದ ನಂತರ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಆದಿತ್ಯ ಆನಂದ್ ಎಂಬಾತ ನೋಯ್ಡಾದಿಂದ ಚೆನ್ನೈಗೆ, ಅಲ್ಲಿಂದ ತಿರುಚ್ಚಿಗೆ ಪಲಾಯನ ಮಾಡಿದ್ದ. ಈತನ ಚಲನವಲನದ ಬಗ್ಗೆ ನಿಖರ ಮಾಹಿತಿ ಪಡೆದ STF ನೋಯ್ಡಾ ಘಟಕದ ತಂಡವು ತಮಿಳುನಾಡಿಗೆ ಹೋಗಿ ಆತನನ್ನು ಬಂಧಿಸಿದೆ.

    ಏಪ್ರಿಲ್ 18 ರಂದು ಬೆಳಗಿನ ಜಾವ 1.40 ಗಂಟೆಗೆ, ತಿರುಚ್ಚಿ ರೈಲು ನಿಲ್ದಾಣದಲ್ಲಿ ಆದಿತ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗೌತಮ್ ಬುದ್ಧ ನಗರದ ನ್ಯಾಯಾಲಯ ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ಕೇವಲ ಎರಡು ದಿನಗಳಲ್ಲೇ ಈ ಕಾರ್ಯಾಚರಣೆ ನಡೆದಿದೆ.

    ಆರೋಪಿ ಆದಿತ್ಯ ಆನಂದ್ ಹಿನ್ನೆಲೆ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಈತ ಬಿಹಾರದ ವೈಶಾಲಿಯವನಾಗಿದ್ದು, ಜಮ್‌ಶೆಡ್‌ಪುರದಲ್ಲಿ ಬಿ.ಟೆಕ್ ಮುಗಿಸಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಗುರುಗ್ರಾಮದಲ್ಲಿದ್ದ ಈತ ನಂತರ ನೋಯ್ಡಾಗೆ ಶಿಫ್ಟ್ ಆಗಿದ್ದ. ಇಂತಹ ಉನ್ನತ ಶಿಕ್ಷಣ ಪಡೆದ ವ್ಯಕ್ತಿಯೊಬ್ಬ ಇಷ್ಟೊಂದು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಸ್ಕೆಚ್ ಹಾಕಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

    ಮತ್ತಷ್ಟು ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!

    ತನಿಖೆಯ ವೇಳೆ ಬಯಲಾದ ಮಾಹಿತಿ ಪ್ರಕಾರ, ಮಾರ್ಚ್ 30 ಮತ್ತು ಏಪ್ರಿಲ್ 1 ರ ನಡುವೆ ನೋಯ್ಡಾದಲ್ಲಿ ಕೆಲವು ಸಂಘಟನೆಗಳ ಸದಸ್ಯರೊಂದಿಗೆ ರಹಸ್ಯ ಸಭೆಗಳು ನಡೆದಿದ್ದವು. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವ ಸೋಗಿನಲ್ಲಿ, ನೋಯ್ಡಾದಲ್ಲಿ ಬೃಹತ್ ಪ್ರಮಾಣದ ಹಿಂಸಾಚಾರ ಮತ್ತು ಆಸ್ತಿಪಾಸ್ತಿಗೆ ಬೆಂಕಿ ಹಚ್ಚುವ ಸಂಚು ರೂಪಿಸಲಾಗಿತ್ತು. ಇದರ ಫಲವಾಗಿಯೇ ಏಪ್ರಿಲ್ 13 ರಂದು ನೋಯ್ಡಾ ಬೀದಿಗಳಲ್ಲಿ ಹಿಂಸಾಚಾರ ನಡೆದಿತ್ತು.

    ಬಂಧಿತ ಆದಿತ್ಯನನ್ನು ತಮಿಳುನಾಡಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವ STF, ಆತನನ್ನು ಸಾರಿಗೆ ಬಂಧನಕ್ಕೆ (Transit Remand) ಒಳಪಡಿಸಿದೆ. ಆತನನ್ನು ನೋಯ್ಡಾಗೆ ಕರೆತಂದ ನಂತರ ಜೈಲಿಗೆ ಕಳುಹಿಸಲಾಗುತ್ತದೆ. ಆದಿತ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ಈ ಜಾಲದ ಉಳಿದ ಕೊಂಡಿಗಳ ಪತ್ತೆಗೆ ಮುಂದಾಗಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ವಿಧ್ವಂಸಕ ಮನಸ್ಥಿತಿ ಹೊಂದಿದ್ದ ಆದಿತ್ಯನ ಬಂಧನವು ನೋಯ್ಡಾ ಹಿಂಸಾಚಾರದ ಹಿಂದಿರುವ ದೊಡ್ಡ ಪಿತೂರಿಯನ್ನು ಭೇದಿಸಲು ಪೊಲೀಸರಿಗೆ ಪ್ರಮುಖ ದಾರಿಯಾಗಿದೆ.

    ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಘಟನೆಗಳು ಕೇವಲ ಸ್ವಯಂಪ್ರೇರಿತ ಹಿಂಸಾಚಾರವಲ್ಲ, ಆದರೆ ಯೋಜಿತ ಪಿತೂರಿ ಎಂದು ಶಂಕಿಸಲಾಗಿದೆ. ಈ ಸಂದರ್ಭದಲ್ಲಿ, ಪೊಲೀಸರು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ ಮತ್ತು ಪಿತೂರಿಯ ಕೋನದ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ. ತನಿಖಾ ತಂಡಗಳು ವಿವಿಧ ಸ್ಥಳಗಳಿಂದ ನೂರಾರು ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ಬಳಸಿಕೊಂಡು ಅವರು ದುಷ್ಕರ್ಮಿಗಳನ್ನು ಗುರುತಿಸುತ್ತಿದ್ದಾರೆ.

    ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

    Source link

    ‘ನರಸಿಂಹ’ ಬಳಿಕ ಈಗ ‘ಪರಶುರಾಮ’ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ – Kannada News | Hombale announced Mahavatar Parashuram animated movie released teaser

    ‘ಕೆಜಿಎಫ್’ (KGF), ‘ಕಾಂತಾರ’ ಸರಣಿ, ‘ಸಲಾರ್’ ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲಮ್ಸ್ (Hombale Films), ಕಳೆದ ವರ್ಷ ವಿಶಿಷ್ಟ ಸಾಹಸವೊಂದನ್ನು ಮಾಡಿತು. ‘ಮಹಾವತಾರ ನರಸಿಂಹ’ ಅನಿಮೇಟೆಡ್ ಸಿನಿಮಾವನ್ನು ವಿತರಣೆ ಮಾಡಿತು. ಒಳ್ಳೆಯ ವಿತರಣೆ ಮತ್ತು ಮಾರುಕಟ್ಟೆ ತಂತ್ರಗಳಿಂದ ಹೇಗೆ ಒಂದು ಸಿನಿಮಾವನ್ನು ಅದ್ಧೂರಿಯಾಗಿ ಗೆಲ್ಲಿಸಬಹುದು ಎಂದು ತೋರಿಸಿಕೊಟ್ಟಿತು. ‘ಕ್ಲೀಮ್ ಪ್ರೊಡಕ್ಷನ್ಸ್’ ನಿರ್ಮಿಸಿದ್ದ ‘ಮಹಾವತಾರ ನರಸಿಂಹ’ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ಪ್ರೆಸೆಂಟ್ ಮಾಡಿತ್ತು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಇದೀಗ ಅದೇ ‘ಮಹಾವತಾರ’ ಸರಣಿಯ ಎರಡನೇ ಸಿನಿಮಾವನ್ನು ಹೊಂಬಾಳೆ ಘೋಷಿಸಿದೆ. ಈ ಬಾರಿ ಹೊಂಬಾಳೆಯೂ ನಿರ್ಮಾಣ ಕ್ರಿಯೆಯಲ್ಲಿ ಭಾಗಿ ಆಗಲಿದೆ.

    ‘ಮಹಾವತಾರ ನರಸಿಂಹ’ ಬಿಡುಗಡೆ ಆದಾಗಲೇ ಈ ‘ಮಹಾವತಾರ’ ಸರಣಿ ಮುಂದುವರೆಯುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಅದರಂತೆ ಈಗ ‘ಮಹಾವತಾರ ಪರಶುರಾಮ’ ಸಿನಿಮಾವನ್ನು ಘೋಷಿಸಲಾಗಿದೆ. ‘ಯಾವಾಗ ಧರ್ಮ ಬೀಳುತ್ತದೆಯೋ ಆಗೆಲ್ಲ ‘ಪರಶು’ ಏಳುತ್ತದೆ’ ಎಂಬ ಕ್ಯಾಚಿ ಲೈನ್ ಜೊತೆಗೆ ಅನಿಮೇಟೆಡ್ ವಿಡಿಯೋ ಒಂದನ್ನು ಟೀಸರ್ ರೀತಿ ಬಿಡುಗಡೆ ಮಾಡಲಾಗಿದೆ. ಪೌರಾಣಿಕ ಕತೆಯಾದ ಪರಶುರಾಮನ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾ ಮುಂದಿನ ವರ್ಷ ಡಿಸೆಂಬರ್​​ನಲ್ಲಿ ತೆರೆಗೆ ಬರಲಿದೆ.

    ಇದನ್ನೂ ಓದಿ:ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿಯಿಂದಲೂ ದೂರಾದರೇ ರಿಷಬ್?

    ‘ಮಹಾವತಾರ ಪರಶುರಾಮ’ ಸಿನಿಮಾವನ್ನು ಅಶ್ವಿನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ‘ಮಹಾವತಾರ ನರಸಿಂಹ’ ಸಿನಿಮಾವನ್ನೂ ಇದೇ ಅಶ್ವಿನ್ ಅವರೇ ನಿರ್ದೇಶಿಸಿದ್ದರು. ‘ಮಹಾವತಾರ ಪರಶುರಾಮ’ ಸಿನಿಮಾವನ್ನು ಹೊಂಬಾಳೆ ಮತ್ತು ಕ್ಲೀಮ್ ಜಂಟಿಯಾಗಿ ನಿರ್ಮಿಸುತ್ತಿದ್ದು, ವಿಜಯ್ ಕಿರಗಂದೂರು ಜೊತೆಗೆ ಶಿಲ್ಪಾ ಧವನ್ ಸಹ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ, ಅನಿಮೇಟೆಡ್ ಸಿನಿಮಾ ಆಗಿರಲಿದ್ದು, ‘ಮಹಾವತಾರ ನರಸಿಂಹ’ ಸಿನಿಮಾಕ್ಕಿಂತಲೂ ತಾಂತ್ರಿಕವಾಗಿ ಇನ್ನಷ್ಟು ಗುಣಮಟ್ಟ ಹೊಂದಿರುವ ಸ್ಪಷ್ಟ ಸುಳಿವು ಟೀಸರ್​ನಿಂದ ಸಿಗುತ್ತಿದೆ.

    ವಿಷ್ಣುವಿನ ಅವತಾರಗಳ ಕತೆಯನ್ನು ಅನಿಮೇಟೆಡ್ ಸಿನಿಮಾಗಳನ್ನಾಗಿ ನಿರ್ಮಿಸಲಾಗುತ್ತಿದ್ದು, ಈಗಾಗಲೇ ‘ಮಹಾವತಾರ ನರಸಿಂಹ’ ಸಿನಿಮಾ ಆಗಿ ಸೂಪರ್ ಹಿಟ್ ಆಗಿದೆ. ಇದೀಗ ‘ಮಹಾವತಾರ ಪರಶುರಾಮ’ ಸಿನಿಮಾ ಆಗುತ್ತಿದೆ. 2029 ಕ್ಕೆ ರಾಮನ ಕುರಿತಾದ ‘ಮಹಾವತಾರ ರಘುರಾಮ’, ಬಳಿಕ ಕೃಷ್ಣನ ಕುರಿತಾಗಿ ‘ಮಹಾವತಾರ ದ್ವಾರಕಾದೀಶ’, ‘ಮಹಾವತಾರ ಗೋಕುಲನಂದ’, ಬಳಿಕ ಕಲ್ಕಿ ಅವತಾರದ ಕುರಿತಾಗಿ ‘ಮಹಾವತಾರ ಕಲ್ಕಿ 1’ ಮತ್ತು ‘ಮಹಾವತಾರ ಕಲ್ಕಿ 2’ ಸಿನಿಮಾಗಳು ನಿರ್ಮಾಣ ಆಗಲಿವೆ.

    ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    ಪಂದ್ಯಕ್ಕೆ ಕರೆದಿಲ್ಲವೆಂದು ಕ್ರಿಕೆಟ್ ಪಿಚ್ ಅನ್ನೇ ಉಳುಮೆ ಮಾಡಿದ ಭೂಪ! – Kannada News | Tractor Terror: Angry Local Ploughs Cricket Pitch Over Invitation Snub

    ಕ್ರಿಕೆಟ್ ಅಂದ್ರೆ ಕ್ರೇಝ್, ಆದರೆ ಇಲ್ಲಿ ನಡೆದಿದ್ದು ಮಾತ್ರ ಕ್ರೇಝ್​ನ ಪರಮಾವಧಿ! ಪಂದ್ಯಕ್ಕೆ ಕರೆದಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಯುವಕನೊಬ್ಬ, ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಲಕ್ಷಣ ಕೃತ್ಯ ಎಸಗಿದ್ದಾನೆ. ಇಡೀ ಮೈದಾನ ಫೈನಲ್ ಪಂದ್ಯದ ಸಂಭ್ರಮದಲ್ಲಿದ್ದಾಗ, ದಿಢೀರನೆ ಟ್ರ್ಯಾಕ್ಟರ್‌ನೊಂದಿಗೆ ಎಂಟ್ರಿ ಕೊಟ್ಟ ಈ ಭೂಪ, ಇಡೀ ಪಿಚ್ ಅನ್ನೇ ಉಳುಮೆ ಮಾಡಿ ಆಯೋಜಕರಿಗೆ ಬಿಗ್ ಶಾಕ್ ನೀಡಿದ್ದಾನೆ. ಕ್ರೀಡಾ ಸ್ಫೂರ್ತಿಯೇ ಮರೆತ ಈ ಯುವಕನ ಹಠಕ್ಕೆ ಈಗ ಇಡೀ ಪಂದ್ಯಾವಳಿಯೇ ಬಲಿಯಾಗಿದೆ! ಇಂತಹದೊಂದು ವಿಧ್ವಂಸಕ ಕೃತ್ಯ ನಡೆದಿದ್ದು ಮಹಾರಾಷ್ಟದ ಜಳಗಾಂವ್ ಜಿಲ್ಲೆಯ ಧರಣಗಾಂವ್‌ನಲ್ಲಿ..!

    ಘಟನೆಯ ವಿವರ:

    ಧರಣಗಾಂವ್‌ನಲ್ಲಿ ‘ಜಳಗಾಂವ್ ರೂರಲ್ ಎಂಎಲ್ಎ ಕಪ್’ (Jalgaon Rural MLA Cup) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವು ಅತ್ಯಂತ ರೋಚಕವಾಗಿ ಸಾಗುತ್ತಿತ್ತು. ಆಟಗಾರರು ಮತ್ತು ಪ್ರೇಕ್ಷಕರು ಪಂದ್ಯದ ಸಂಭ್ರಮದಲ್ಲಿದ್ದಾಗ, ಇದ್ದಕ್ಕಿದ್ದಂತೆ ಯುವಕನೊಬ್ಬ ಟ್ರ್ಯಾಕ್ಟರ್‌ನೊಂದಿಗೆ ಮೈದಾನಕ್ಕೆ ನುಗ್ಗಿದ್ದಾನೆ.

    ಅಲ್ಲದೆ ನೇರವಾಗಿ ಪಿಚ್​ನತ್ತ ಸಾಗಿದ ಯುವಕ, ಟ್ರ್ಯಾಕ್ಟರ್‌ಗೆ ಅಳವಡಿಸಿದ್ದ ನೇಗಿಲಿನಿಂದ ಪಿಚ್ ಅನ್ನು ಪೂರ್ತಿಯಾಗಿ ಉಳುಮೆ ಮಾಡಿ ಹಾಳುಗೆಡವಿದ್ದಾನೆ.

    ವರದಿಗಳ ಪ್ರಕಾರ, ಈ ಕೃತ್ಯಕ್ಕೆ ಆಹ್ವಾನದ ವಿಚಾರವೇ ಮುಖ್ಯ ಕಾರಣ ಎನ್ನಲಾಗಿದೆ. ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಆತನನ್ನು ಅಥವಾ ಸ್ಥಳೀಯ ಪ್ರಮುಖ ನಾಯಕರೊಬ್ಬರನ್ನು ಆಹ್ವಾನಿಸದಿದ್ದಕ್ಕೆ ಕೋಪಗೊಂಡ ಯುವಕ ಈ ರೀತಿ ಪ್ರತಿಕ್ರಿಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ, ಆಟಗಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸದಿದ್ದಕ್ಕೆ ಅಸಮಾಧಾನಗೊಂಡು ಆತ ಈ ವಿಧ್ವಂಸಕ ಕೃತ್ಯ ಎಸಗಿದ್ದಾನೆ.

    ಆಮೇಲೇನಾಯ್ತು?

    ಪಿಚ್ ಸಂಪೂರ್ಣವಾಗಿ ಹಾನಿಗೀಡಾದ ಕಾರಣ, ಅಂತಿಮ ಪಂದ್ಯವನ್ನು ತಕ್ಷಣವೇ ರದ್ದುಗೊಳಿಸಲಾಯಿತು. ಇದೀಗ ಪಿಚ್ ಮೇಲೆ ಟ್ರ್ಯಾಕ್ಟರ್ ಓಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

    ಇನ್ನು ಈ ಪಂದ್ಯಾವಳಿಗಾಗಿ  ಮೈದಾನವನ್ನು ಸಿದ್ಧಪಡಿಸಲು ದಿನಗಟ್ಟಲೆ ಶ್ರಮವಹಿಸಿದ್ದ ಆಯೋಜಕರು ಮತ್ತು ಆಟಗಾರರು ಈ ಘಟನೆಯಿಂದ ಕಂಗಾಲಾಗಿದ್ದಾರೆ.

    ಇದನ್ನೂ ಓದಿ: ಐಪಿಎಲ್​ನಲ್ಲಿ ‘ದುರಾದೃಷ್ಟ’ದ ದಾಖಲೆ ಬರೆದ ಇಶಾನ್ ಕಿಶನ್

    ಸದ್ಯಕ್ಕೆ ಈ ಬಗ್ಗೆ ಅಧಿಕೃತವಾಗಿ ಪೊಲೀಸ್ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿಲ್ಲವಾದರೂ, ಸ್ಥಳೀಯರಲ್ಲಿ ಈ ಘಟನೆಯು ತೀವ್ರ ಚರ್ಚೆಗೆ ಕಾರಣವಾಗಿದೆ.

    Published On – 2:35 pm, Sun, 19 April 26

    Source link

    Exit mobile version