TV9 ಬಿಗ್ ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಚಾಮರಾಜನಗರ, (ಜೂನ್ 24): ಅದೆಷ್ಟೋ ಆದಿವಾಸಿಗಳು ಕರ್ನಾಟಕದಲ್ಲೂ ಸಹ ಬದುಕಿದ್ದು ಸತ್ತಂತೆ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಚಾಮರಾಜನಗರದ ಕಾಡಿನಲ್ಲಿ ವಾಸಿಸುತ್ತಿರುವ ಆನೆ ದಿಂಬ ಹಾಡಿಯ ಜನರಿಗೆ ಮೂಲಸೌಲಭ್ಯಗಳು, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳೇ ಸಿಗುತ್ತಿಲ್ಲ. ಕಳೆದ 10 ವರ್ಷಗಳಿಂದ ಹಾಡಿಯ ವಾಸಿಗಳು ರೇಷನ್ ಕಾರ್ಡ್ ಗಾಗಿ ಕಚೇರಿಯಿಂದ ಕಚೇರಿ ಅಲೆದು ರೋಸಿ ಹೋಗಿದ್ದರು. ಆದರೂ ರೇಷನ್ ಕಾರ್ಡ್ ಸಿಕ್ಕಿಲಲ್. ಹೀಗಾಗಿ ಈ ಬಗ್ಗೆ ನಿಮ್ಮ ಟಿವಿ9, ಆದಿವಾಸಿ ಸೋಲಿಗರು ಶೀರ್ಷಿಕೆ ಅಡಿ ಸುದ್ದಿ…