Headlines

ಯಶ್​​ಗಾಗಿ ರೂಲ್ ಬ್ರೇಕ್ ಮಾಡಿದೆ: ಕೊಂಡಾಡಿದ ನಟಿ ನಯನತಾರಾ – Kannada News | Nayanathara talks highly about Yash and Geethu Mohandas

ನಯನತಾರಾ (Nayanthara), ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್, ಬಹಳ ಶಿಸ್ತು, ನಿಷ್ಠುರವಾದಿ ಎಂದು ಸಹ ನಯನತಾರಾ ಹೆಸರಾಗಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆಗಿರಲಿ, ಹಿಂದು-ಮುಂದು ನೋಡದೆ ತಮಗನಿಸಿದ್ದು ಹೇಳುತ್ತಾರೆ (ನಟ ಧನುಶ್​ ಜೊತೆಗಿನ ವಿವಾದ ನೆನಪಿರಬೇಕು). ನಯನತಾರಾ ಯಾವುದೇ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ವೇದಿಕೆಗಳ ಮೇಲೆ ಮಾನತಾಡುವುದಿಲ್ಲ. ಯಾರನ್ನೂ ಅನವಶ್ಯಕವಾಗಿ ಹೊಗಳುವುದಿಲ್ಲ. ಆದರೆ ಇಂದು (ಆಗಸ್ಟ್ 08) ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅವರನ್ನು ಮಾತ್ರವಲ್ಲ, ನಿರ್ದೇಶಕಿ…

Read More

ಕರ್ನಾಟಕ ಸಂಪುಟದಲ್ಲಿ ಮಹಿಳಾ ಸಚಿವರಿಲ್ಲ ಎಂದ ಕಿರಣ್ ರಿಜಿಜುಗೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು – Kannada News | CM DK Sivakumar hits back at Union Minister Kiren Rijiju over no woman in Karnataka cabinet remark

ಬೆಂಗಳೂರು, ಆಗಸ್ಟ್ 8: ಕರ್ನಾಟಕದ ಸಚಿವ ಸಂಪುಟದಲ್ಲಿ ಯಾವುದೇ ಮಹಿಳಾ ಸಚಿವರಿಲ್ಲ ಎಂಬ ವಿಷಯವಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಮಾಡಿದ ಟೀಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ (CM DK Shivakumar), “ಕಾಂಗ್ರೆಸ್ ಪಕ್ಷವು ಮಹಿಳಾ ಪ್ರಾತಿನಿಧ್ಯಕ್ಕೆ ಬದ್ಧವಾಗಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಸಂಸತ್ ಚುನಾವಣೆಯಲ್ಲಿ ನಾವು ಮಹಿಳೆಯರಿಗೆ ಎಷ್ಟು ಸೀಟುಗಳನ್ನು ನೀಡಿದ್ದೇವೆ ಎಂಬುದು ಬಿಜೆಪಿಯವರಿಗೆ ನೆನಪಿದೆ ಎಂದು ಭಾವಿಸುತ್ತೇನೆ. ಹಾಗಾಗಿ, ಕರ್ನಾಟಕದಲ್ಲಿ ನಾವು ಈ ಸಮಸ್ಯೆಯನ್ನು ಖಂಡಿತವಾಗಿಯೂ ಬಗೆಹರಿಸಲಿದ್ದೇವೆ. ಕೇಂದ್ರ…

Read More

ಯಶ್​ ‘ಟಾಕ್ಸಿಕ್’ ಟ್ರೇಲರ್​ ನೋಡಿ ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ – Kannada News | Felt Like I Made the Film Myself: Shivarajkumar Praises Yash and ‘Toxic’ Trailer

ಬೆಂಗಳೂರು, ಆಗಸ್ಟ್​​ 08: ನಟ ಯಶ್ ಅಭಿನಯದ ಮತ್ತು ಗೀತು ಮೋಹನ್‌ದಾಸ್ ನಿರ್ದೇಶನದ ಬಹು ತಾರಾಗಣವಿರುವ ‘ಟಾಕ್ಸಿಕ್’ (Toxic) ಚಿತ್ರದ ಟ್ರೇಲರ್​ ಇಂದು ಬಿಡುಗಡೆ ಆಗಿದೆ. ಸ್ಯಾಂಡಲ್​ವುಡ್​ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ನೋಡಿ ಬಳಿಕ ಮಾತನಾಡಿದ ಶಿವಣ್ಣ, ‘ಅದ್ಭುತವಾಗಿ ಮೂಡಿಬಂದಿದೆ. ನಾನು ಕೂಡ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನೇ ಸಿನಿಮಾ ಮಾಡಿದಷ್ಟು ಸಂತೋಷವಾಯ್ತು. ಯಶ್​​ ಈ ಮಟ್ಟಕ್ಕೆ ಬೆಳೆದು ಇಷ್ಟು ದೊಡ್ಡ ಸಿನಿಮಾ ಮಾಡಿರುವುದು ಕನ್ನಡಿಗರಾಗಿ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯಶ್…

Read More

ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಗೆ ಪಿತೃ ವಿಯೋಗ – Kannada News | Jorge Messi, Lionel Messi’s Father, Passes Away at 68: A Legacy of Support

ಫುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರರ ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ( Lionel Messi) ಅವರ ತಂದೆ ಜಾರ್ಜ್ ಮೆಸ್ಸಿ (Jorge Messi) 68 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಮೆಸ್ಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜಾರ್ಜ್ ಮೆಸ್ಸಿ ಅವರ ನಿಧನವನ್ನು ಮೆಸ್ಸಿಯವರ ಬಾಲ್ಯದ ಕ್ಲಬ್, ನೆವೆಲ್ಸ್ ಓಲ್ಡ್ ಬಾಯ್ಸ್ ದೃಢಪಡಿಸಿದೆ. ಅನಾರೋಗ್ಯದಿಂದ…

Read More

ಒಂದು ಪಾರ್ಟಿಯಿಂದ ಹುಟ್ಟಿತು ‘ಟಾಕ್ಸಿಕ್’ ಸಿನಿಮಾ: ನಿರ್ಮಾಪಕ ಹೇಳಿದ್ದೇನು? – Kannada News | Producer KVN Venkat talks about How did Toxic movie started

‘ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಸೇರಿದಂತೆ ಹಲವಾರು ಮಂದಿ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು. ಆರಂಭದಲ್ಲಿಯೇ ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ಕೆವಿಎನ್​​ ಮಾಲೀಕ ವೆಂಕಟ್ ಅವರು ಚಿತ್ರತಂಡದ ಎಲ್ಲರಿಗೂ ಧನ್ಯವಾದ ಹೇಳಿದರು. ‘ಟಾಕ್ಸಿಕ್’ ಸಿನಿಮಾ ಆರಂಭ ಹೇಗಾಯ್ತು, ಯಶ್ ಅವರ ಗೆಳೆತನ ಸಿಕ್ಕಿದ್ದು ಹೇಗೆ ಇನ್ನೂ ಹಲವು ವಿಷಯಗಳ ಬಗ್ಗೆ ನಿರ್ಮಾಪಕ ವೆಂಕಟ್ ಮಾತನಾಡಿದರು. ವೆಂಕಟ್ ಅವರು ಹೇಳಿದಂತೆ ‘ಟಾಕ್ಸಿಕ್’ ಸಿನಿಮಾ ಶುರುವಾಗಿದ್ದು ಒಂದು ಪಾರ್ಟಿಯಿಂದ ಅಂತೆ. ಪಾರ್ಟಿಯೊಂದಕ್ಕೆ…

Read More

ಏಷ್ಯಾಕಪ್ ಸಮೀಪಿಸುತ್ತಿರುವ ಬೆನ್ನಲ್ಲೇ ಗಾಯಕ್ಕೆ ತುತ್ತಾದ ಜೆಮಿಮಾ ರೊಡ್ರಿಗಸ್

2026 ರ ಮಹಿಳಾ ಏಷ್ಯಾಕಪ್ ಇದೇ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ. ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿನ್ನೆಯಷ್ಟೇ ಪ್ರಕಟಿಸಿತ್ತು. ಇನ್ನು ಈ ಪಂದ್ಯಾವಳಿಗೆ ಟೀಂ ಇಂಡಿಯಾವನ್ನು ಸಹ ಪ್ರಕಟಿಸಲಾಗಿದೆ. ಹರ್ಮನ್​ಪ್ರೀತ್ ಕೌರ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದೆ. ತಂಡದ ಅನುಭವಿ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಗಾಯಕ್ಕೆ ತುತ್ತಾಗಿದ್ದಾರೆ. ಏಷ್ಯಾಕಪ್ ಪಂದ್ಯಾವಳಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಜೆಮಿಮಾ ಗಾಯಗೊಂಡಿರುವುದು ತಂಡವನ್ನು ಆತಂಕಕ್ಕೆ ತಳ್ಳಿದೆ. ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಮಹಿಳೆಯರ ದಿ…

Read More

ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಮತ್ತೊಂದು ತಿರುವು: ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ – Kannada News | Committee Formed Under the Leadership of Justice Guhanathan Narendar for Comprehensive Review of Bidadi Township Opinions

ಬೆಂಗಳೂರು, (ಆಗಸ್ಟ್ 08): ಬಿಡದಿ ಟೌನ್‌ಶಿಪ್‌ ವಿವಾದ (Bidadi Township) ಮತ್ತೊಂದು ತಿರುವು ಪಡೆದುಕೊಂಡಿದೆ. ಟೌನ್ ಶಿಪ್ ಗೆ ಬಿಜೆಪಿ (BJP) ಹಾಗೂ ಜೆಡಿಎಸ್  (JDS)ಬಲವಾಗಿ ವಿರೋಧಿಸಿದ್ದು, ಆಗಸ್ಟ್ 9 ಮತ್ತು 10ರಂದು ಪಾದಯಾತ್ರೆ ನಡೆಸಲು ತೀರ್ಮಾನಿಸಿವೆ. ಇದರ ಮಧ್ಯೆ ಇದೀಗ ಡಿಕೆ ಶಿವಕುಮಾರ್ (Dk Shivakumar) ಸರ್ಕಾರ, ಬಿಡದಿ ಟೌನ್‌ಶಿಪ್‌ ಬಗ್ಗೆ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ ಮಾಡಿದ್ದು, 30 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಯೋಜನೆಗೆ ಯಾರಿಂದಲೂ…

Read More

‘ಟಾಕ್ಸಿಕ್’: ತಲೆ ತಗ್ಗಿಸೋಕೆ ಬಿಡಲ್ಲ, ಹೆಮ್ಮೆಯಿಂದ ಸಿನಿಮಾ ನೋಡಿ ಎಂದ ಯಶ್ – Kannada News | Yash speech at Toxic movie trailer release event is here

ನಾನು ಹಾಗೂ ಈ ‘ಟಾಕ್ಸಿಕ್’ (Toxic) ಸಿನಿಮಾ ಇಂದು ಈ ಹಂತಕ್ಕೆ ಬಂದಿರುವುದಕ್ಕೆ ಕರ್ನಾಟಕದ ಜನ ಕಾರಣ. ‘ಟಾಕ್ಸಿಕ್’ ಸಿನಿಮಾದ ನಿರ್ಮಾಣಕ್ಕೆ ನೇರ ಕಾರಣವೇ ಅವರು. ನಾನು ಪ್ರತಿ ಬಾರಿ ಸಿನಿಮಾ ಮಾಡಿದಾಗಲೂ ನನ್ನ ಬೆನ್ನು ತಟ್ಟಿ, ಯಶಸ್ಸು ನೀಡಿದಾಗೆಲ್ಲ, ನಾನು ಇನ್ನೂ ಒಳ್ಳೆಯ ಸಿನಿಮಾ ಮಾಡಬೇಕು ಎಂದು ಮುನ್ನಡೆಯುತ್ತಿದ್ದೆ. ಹಾಗೆಯೇ ಮುನ್ನಡೆದು ಮುನ್ನಡೆದು ಈಗ ‘ಟಾಕ್ಸಿಕ್’ ವರೆಗೂ ಬಂದಿದ್ದೀನಿ. ಇದು ನನ್ನ ಹೊಸ ಸಿನಿಮಾ ಆದರೆ ಇದರ ಇಂಧನ ನನ್ನ ಈ ಹಿಂದಿನ ಸಿನಿಮಾಗಳಿಗೆ ನೀವು…

Read More

‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾಯ್ ಮಾತು – Kannada News | Akshay Oberoi Talks About ‘Toxic’, Yash and Geetu Mohandas at Trailer Launch Event

ಬೆಂಗಳೂರು, ಆಗಸ್ಟ್​ 08: ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ (Akshay Oberoi), ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು, ‘ಟಾಕ್ಸಿಕ್ ಟ್ರೈಲರ್ ಅದ್ಭುತ. ಇಂತಹ ದೊಡ್ಡ ತಾರಾಗಣವಿರುವ ಪ್ರಾಜೆಕ್ಟ್‌ನ ಭಾಗವಾಗಿರುವುದು ಹೆಮ್ಮೆಯ ಸಂಗತಿ’ ಎಂದರು. ಇನ್ನು ‘ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕಾರ್ಯವೈಖರಿ ಮತ್ತು ನಟ ಯಶ್ ಅವರ ನಟನಾ ಶಕ್ತಿಯಿಂದ ತಮಗೆ ವೈಯಕ್ತಿಕವಾಗಿ ಹಾಗೂ ವೃತ್ತಿಜೀವನದಲ್ಲಿ ಸಾಕಷ್ಟು…

Read More

ಯುಪಿಐ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | UPI Payments to Remain Free for Consumers Government Clarifies

ನವದೆಹಲಿ, ಆಗಸ್ಟ್ 8: ಗ್ರಾಹಕರಿಗೆ ಯುಪಿಐ (UPI) ಪಾವತಿ ಸಂಪೂರ್ಣ ಉಚಿತವಾಗಿರಲಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಎಲ್ಲಾ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಯುಪಿಐ ಮೂಲಕ ಪಾವತಿ ಮಾಡುವಾಗ ಗ್ರಾಹಕರು ಯಾವುದೇ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಬಹುತೇಕ ವರ್ತಕರ ವಹಿವಾಟುಗಳು ಸಹ ಸಂಪೂರ್ಣ ಉಚಿತವಾಗಿ ಉಳಿಯಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವೇಳೆ ಎಂಡಿಆರ್ (MDR) ಶುಲ್ಕವನ್ನು ವಿಧಿಸಿದರೂ, ಅದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ…

Read More