ಬಗೆದಷ್ಟು ಬಯಲಾಗ್ತಿದೆ ಪಿಲಿಕುಳದ ಅಕ್ರಮ: ಕಾಳಿಂಗ ಸರ್ಪದ ಹೆಸರಲ್ಲೂ ಭ್ರಷ್ಟಾಚಾರ? – Kannada News | Pilikula Scam Deepens: Corruption Alleged Even in the Name of King Cobra

ಮಂಗಳೂರು, ಫೆಬ್ರವರಿ 19: ಪಿಲಿಕುಳ ಝೂ‌‌ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ಗರಂ ಆಗಿತ್ತು. ಆ ಬೆನ್ನಲ್ಲೇ ಕಾಳಿಂಗ ಸರ್ಪದ ಹೆಸರಲ್ಲೂ ಇಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕಾಳಿಂಗ ಸರ್ಪ ಸಂತಾನಾಭಿವೃದ್ಧಿ ಕೇಂದ್ರ ತೆರೆದು 2 ಕೋಟಿಗೂ ಅಧಿಕ ಅನುದಾನ ಪಡೆದಿದ್ದ ಇಲ್ಲಿಯ ಆಡಳಿತ ಅವುಗಳ ಪಾಲನೆ ಮರೆತಿದೆ. ಹೀಗಾಗಿ ಸರಿಯಾಗಿ ಆಹಾರ, ಆರೈಕೆ ಸಿಗದೆ ಅವು ಸಾವನ್ನಪ್ಪಿವೆ ಎಂದು ದೂರಲಾಗಿದೆ.

2022ರ ಜುಲೈನಲ್ಲಿ ಮೊಟ್ಟೆಯೊಡೆದು 38 ಕಾಳಿಂಗ ಸರ್ಪ ಮರಿಗಳು ಹೊರ ಬಂದಿದ್ದ ವಿಚಾರ ಭಾರಿ ಸದ್ದು ಮಾಡಿತ್ತು. ಆದರೆ ಆ ಮರಿಗಳು ಈಗ ಏನಾಗಿವೆ ಎಂಬುದಕ್ಕೆ ದಾಖಲೆಗಳೇ ಇಲ್ಲ. ಇತ್ತ ಪಿಲುಕುಳದ ಆಡಳಿತ ಮಾತ್ರ ಆ ಮರಿಗಳನ್ನು ಚಾರ್ಮಾಡಿ ಬಳಿ ಬಿಟ್ಟಿದ್ದೇವೆ ಎಂದು ಸಬೂಬು ನೀಡುತ್ತಿದೆ. ಪಶ್ಚಿಮಘಟ್ಟಕ್ಕೆ ಮರಿಗಳನ್ನು ಬಿಡುವಾಗ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳಬೇಕು. ಇಲ್ಲಿ ಇವರು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೆ ಮರಿಗಳನ್ನು ಬಿಟ್ಟಿರುವ ಬಗ್ಗೆ ಯಾವುದೇ ದಾಖಲೆಯನ್ನೂ ಇಟ್ಟುಕೊಂಡಿಲ್ಲ ಎಂಬ ವಿಚಾರ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.

ಇದನ್ನೂ ಓದಿ:  ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್​​ ಗರಂ; ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ

ಈ ನಡುವೆ ಹಾವುಗಳಿಗೆ ಆಹಾರ ನೀಡಿದ ಬಿಲ್ ಸಹ ಪಡೆಯಲಾಗಿದ್ದು, ಮಾಂಸ ಪೂರೈಸುವ ವ್ಯಾಪಾರಿಯ ಹೆಸರಲ್ಲಿ ಹಣ ತೆಗೆದುಕೊಂಡಿದ್ದಾರೆ. ಸ್ನೇಕ್ ಫೀಡ್ ಎಂದು ಹೆಸರಿಟ್ಟು ಕೇರೆ ಹಾವು ಪೂರೈಕೆ ಮಾಡಲಾಗಿದ್ದು, ಈ‌ ಅಕ್ರಮಗಳ ಬಗ್ಗೆ ವೈಲ್ಡ್‌ ಲೈಫ್ ಕ್ರೈಮ್ ಕಂಟ್ರೋಲ್​​ಗೆ ದೂರು ನೀಡಿರೋದಾಗಿ ವನ್ಯಜೀವಿ ಸಂರಕ್ಷಕ ಭುವನ್ ತಿಳಿಸಿದ್ದಾರೆ.

2022ರಲ್ಲಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 38 ಕಾಳಿಂಗ ಸರ್ಪ ಮರಿಗಳು ಮೊಟ್ಟೆಯೊಡೆದು ಹೊರ ಬಂದಿವೆ ಎಂದು ಹೇಳಲಾಗಿತ್ತು. ಆದರೆ ದಾಖಲೆಯಲ್ಲಿ ಇರುವುದು ಕೇವಲ 22 ಮರಿಗಳ ಉಲ್ಲೇಖ ಮಾತ್ರ. ಅವು ಸಹ ಮೂರು ತಿಂಗಳು ಕಳೆಯುವುದರ ಒಳಗೆ ಮೃತಪಟ್ಟಿವೆ. ಕಾಳಿಂಗ ಸರ್ಪ ಸಂತಾನೋಭಿವೃದ್ಧಿ ಕೇಂದ್ರದ ಹೆಸರಲ್ಲಿ ಇವರು ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಸ್ಥಳೀಯ ಕಂಪನಿಯ ಸಿಎಸ್ಆರ್ ಅನುದಾನದಡಿ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದಾರೆ. ಪಿಲಿಕುಳ ಅವ್ಯವಸ್ಥೆಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್​​ನಲ್ಲಿ ನಡೆಯುತ್ತಿದ್ದು, ಈ ವಿಚಾರವನ್ನು ಸಹ ನ್ಯಾಯಾಲಯದ ಗಮನಕ್ಕೆ ತರೋದಾಗಿ ಭುವನ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದುವೆ ಮಾಹಿತಿ ಲೀಕ್ ಸಿಟ್ಟಾದ ರಶ್ಮಿಕಾ-ವಿಜಯ್ ಹೇಳಿದ್ದೇನು? – Kannada News | Rashmika and Vijay Deverakonda upset over their Wedding detail leak

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಮದುವೆ ಆಗಲಿದ್ದಾರೆ. ಮದುವೆ ವಿಚಾರವನ್ನೂ ಇಬ್ಬರೂ ಸಹ ಬಹಳ ಗುಟ್ಟಾಗಿರಿಸಿದ್ದರು. ಆದರೂ ಸಹ ಮದುವೆಯ ದಿನಾಂಕ, ಸ್ಥಳ, ಸಮಯ ಇನ್ನಿತರೆ ವಿಚಾರಗಳು ಲೀಕ್ ಆಗಿವೆ. ಅದು ಮಾತ್ರವೇ ಅಲ್ಲದೆ, ನಿನ್ನೆ ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಆಮಂತ್ರಣ ಪತ್ರಿಕೆಯ ವಿಡಿಯೋ ಸಹ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದು ರಶ್ಮಿಕಾ ಮತ್ತು ವಿಜಯ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಆಮಂತ್ರಣ ಪತ್ರಿಕೆಯ ವಿಡಿಯೋ ಅನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಇರುವ ವಸ್ತುಗಳನ್ನೆಲ್ಲ ತೋರಿಸಿದ್ದರು. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅದರ ಬೆನ್ನಲ್ಲೆ ವಿಜಯ್ ಮತ್ತು ರಶ್ಮಿಕಾ ಅವರ ತಂಡವು ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ಮದುವೆಗೆ ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ವಿಜಯ್ ಮತ್ತು ರಶ್ಮಿಕಾ ಮನವಿ ಮಾಡಿದ್ದಾರೆ. ಮದುವೆ ಮತ್ತು ರಿಸೆಪ್ಷನ್​​ಗೆ ಹಲವಾರು ಮಂದಿ ಗಣ್ಯರು ಆಗಮಿಸಲಿದ್ದು, ಒಂದೊಮ್ಮೆ ಮದುವೆ ನಡೆವ ಸ್ಥಳಕ್ಕೆ ಅಭಿಮಾನಿಗಳು ಬಂದರೆ ಭದ್ರತೆ ಸಮಸ್ಯೆ ಆಗುತ್ತದೆ ಎಂದು ವಿಜಯ್ ಮತ್ತು ರಶ್ಮಿಕಾ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮದುವೆ ಮತ್ತು ರಿಸೆಪ್ಷನ್ ಮಾಹಿತಿಯನ್ನು ಲೀಕ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 26 ರಂದು ವಿವಾಹವಾಗಲಿದ್ದಾರೆ. ಇವರ ವಿವಾಹದಲ್ಲಿ ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತ ಗೆಳೆಯರುಗಳು ಮಾತ್ರವೇ ಭಾಗಿ ಆಗಲಿದ್ದಾರೆ. ಆ ಬಳಿಕ ಮಾರ್ಚ್ 04 ರಂದು ಹೈದರಾಬಾದ್​​ನ ತಾಜ್ ಕೃಷ್ಣ ನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಆಯೋಜಿಸಲಾಗಿದ್ದು, ಆಂಧ್ರ, ತೆಲಂಗಾಣ ಸಿಎಂ ಅವರುಗಳಿಂದ ಹಿಡಿದು ತೆಲುಗು ಹಾಗೂ ಬಾಲಿವುಡ್​​ನ ಹಲವಾರು ಮಂದಿ ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ.

ಸಿನಿಮಾ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇದೆಂತಹ ಅವಮಾನ… ಪಾಕಿಸ್ತಾನ್ ತಂಡಕ್ಕೆ ‘ಬಾಬರ್’ ಭಯ

ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಪಾಕ್ ತಂಡದಿಂದಲೇ ಭಾರೀ ಅವಮಾನಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ನಡೆದ ಬಿಗ್ ಬ್ಯಾಷ್ ಲೀಗ್​ನಲ್ಲಿ ಸ್ಟೀವ್ ಸ್ಮಿತ್ ಬಾಬರ್​ಗೆ ಸ್ಟ್ರೈಕ್​ ನೀಡದೇ ಅವಮಾನಕ್ಕೀಡು ಮಾಡಿದ್ದರು. ಇದೀಗ ಪಾಕಿಸ್ತಾನ್ ತಂಡದ ಕೋಚ್ ಮೈಕ್ ಹೆಸ್ಸೆನ್ ನಿರ್ಣಾಯಕ ಪಂದ್ಯದಲ್ಲಿ ಬಾಬರ್ ಆಝಂ ಅವರನ್ನು ಬ್ಯಾಟಿಂಗ್​ಗೆ ಕಳುಹಿಸದೇ ಡಗೌಟ್​ನಲ್ಲಿ ಕೂರಿಸಿದ್ದಾರೆ.

ಕೊಲಂಬೊದ ಎಸ್​ಎಸ್​ಸಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನಮೀಬಿಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 107 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಬ್ಯಾಟಿಂಗ್​ಗೆ ಬರಲು ಬಾಬರ್ ಆಝಂ ಸಿದ್ಧರಾಗಿದ್ದರು.

ಆದರೆ ಬಾಬರ್ ಆಝಂ ಸ್ಥಾನದಲ್ಲಿ ಖ್ವಾಜಾ ನಫಾಯ್ ಅವರನ್ನು ಕಳುಹಿಸಲಾಯಿತು. ಆದರೆ ಖ್ವಾಜಾ ಕೇವಲ 5 ರನ್​ಗಳಿಸಿ ಔಟಾಗಿದ್ದರು. ಇದಾಗ್ಯೂ 5ನೇ ಕ್ರಮಾಂಕದಲ್ಲಿ ಬಾಬರ್ ಆಝಂ ಅವರನ್ನು ಕಳುಹಿಸಿರಲಿಲ್ಲ. ಬದಲಾಗಿ  ಶಾದಾಬ್ ಖಾನ್ ಅವರಿಗೆ ಮುಂಬಡ್ತಿ ನೀಡಲಾಯಿತು.

ಇದಕ್ಕೆ ಮುಖ್ಯ ಕಾರಣ ಬಾಬರ್ ಅವರ ನಿಧಾನಗತಿಯ ಬ್ಯಾಟಿಂಗ್. ಇದಕ್ಕೂ ಮುನ್ನ ನಡೆದ ಭಾರತದ ವಿರುದ್ಧ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಬಾಬರ್ 7 ಎಸೆತಗಳಲ್ಲಿ ಕೇವಲ 5 ರನ್​ ಗಳಿಸಿದ್ದರು. ಹಾಗೆಯೇ ನೆದರ್​ಲೆಂಡ್ಸ್ ವಿರುದ್ಧ 18 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 15 ರನ್​ಗಳು ಮಾತ್ರ.

ಇತ್ತ ನಮೀಬಿಯ ವಿರುದ್ಧದ ಪಂದ್ಯವು ನಿರ್ಣಾಯಕವಾಗಿದ್ದರಿಂದ ಬಾಬರ್​ಗೆ ಬ್ಯಾಟಿಂಗ್ ಅವಕಾಶ ನೀಡದಿರಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದ್ದಾರೆ. ಹೀಗಾಗಿ ಖ್ವಾಜಾ ನಫಾಯ್ ಹಾಗೂ ಶಾದಾಬ್ ಖಾನ್​​ಗೆ ಮುಂಬಡ್ತಿ ನೀಡಲಾಗಿದೆ.

ವಿಶೇಷ ಎಂದರೆ ಪಾಕಿಸ್ತಾನ್ ತಂಡವು 69 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದೆ. ಈ ವೇಳೆ ಬಾಬರ್​ಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡದಿರುವುದು ಇದೇ ಮೊದಲು. ಅಂದರೆ ಬಾಬರ್ ಆಝಂ ಕಣಕ್ಕಿಳಿದರೆ ತಂಡದ ರನ್ ಗತಿ ಕುಂಠಿತವಾಗಲಿದೆ ಎಂಬ ಭಯವೊಂದು ಪಾಕಿಸ್ತಾನ್ ತಂಡಕ್ಕೆ ಆವರಿಸಿದೆ. ಹೀಗಾಗಿಯೇ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ನೀಡಿಲ್ಲ. ಇದರಿಂದ ಭಾರೀ ಅವಮಾನಕ್ಕೊಳಗಾಗಿರುವ ಬಾಬರ್ ಆಝಂ ಮುಂದಿನ ಪಂದ್ಯದಿಂದ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.

 

 

 

Source link

ಕಾಲುವೆ ನಿರ್ಮಾಣಕ್ಕಾಗಿ ರೈತರ ಜಮೀನನ್ನು ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ – Kannada News | UKP Land Compensation: Court Orders Seizure of KBJNL Assets After Farmer Battle

ಆಲಮಟ್ಟಿ ಫೆ.19: ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಕಾಲುವೆ ನಿರ್ಮಾಣಕ್ಕೆ ಜಮೀನು ನೀಡಿದ್ದ ರೈತರಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ, ವಿಜಯಪುರದ 1ನೇ ಹೆಚ್ಚುವರಿ ನ್ಯಾಯಾಲಯದ ಆದೇಶದಂತೆ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ವ್ಯವಸ್ಥಾಪಕ ನಿರ್ದೇಶಕರ (MD) ಕಚೇರಿಯನ್ನು ಜಪ್ತಿ ಮಾಡಲಾಗಿದೆ. ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ರೈತ ಮಹಾದೇವ ಲಿಗಾಡೆ ಹಾಗೂ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಅಕ್ರುಸಾಬ ಮುಲ್ಲಾ ಸೇರಿದಂತೆ ಹಲವಾರು ರೈತರ ಜಮೀನನ್ನು ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ವರ್ಷಗಳು ಕಳೆದರೂ ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ನ್ಯಾಯದಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ನೀಡಿದ್ದ ಗಡುವನ್ನು ಅಧಿಕಾರಿಗಳು ಪದೇ ಪದೇ ಉಲ್ಲಂಘಿಸಿದ ಕಾರಣ, ಇಂದು ಆಲಮಟ್ಟಿಯಲ್ಲಿರುವ ಎಂಡಿ ಕಚೇರಿಯ ಮೇಲೆ ದಾಳಿ ನಡೆಸಿ 1 ಇನ್ನೋವಾ ಕಾರು ಮತ್ತು 1 ಜೀಪು, 20 ಕುರ್ಚಿಗಳು ಮತ್ತು 22 ಟೇಬಲ್‌ಗಳು, 10 ಕಂಪ್ಯೂಟರ್‌ಗಳು ಸೇರಿದಂತೆ ಇತರೆ ಕಚೇರಿ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್​​ಪಾಲ್ ಬಳಿ ಹೋಗಿ ಕಣ್ಣೀರು ಹಾಕಿದ್ದ ಸಲದಾತ; ಕಾರಣ ಏನು? – Kannada News | Rajpal Yadav’s 9 Cr Debt Saga: Check Bounce, Jail and Lender’s Struggle

ಚೆಕ್ ಬೌನ್ಸ್ ಪ್ರಕರಣದಲ್ಲಿ ನಟ ರಾಜ್‌ಪಾಲ್ ಯಾದವ್‌ಗೆ (Rajpal Yadav) ಕೊನೆಗೂ ಜಾಮೀನು ಸಿಕ್ಕಿದೆ. ಸಾಲ ಮರುಪಾವತಿಸಲು ವಿಫಲರಾದ ರಾಜ್‌ಪಾಲ್ ತಿಹಾರ್ ಜೈಲಿನಲ್ಲಿ ಶರಣಾದರು. ಜೈಲು ಅಧಿಕಾರಿಗಳ ಮುಂದೆ ಭಾವುಕರಾಗಿ, ‘ನನ್ನಲ್ಲಿ ಹಣವಿಲ್ಲ, ನಾನು ಒಂಟಿಯಾಗಿದ್ದೇನೆ, ನನಗೆ ಸ್ನೇಹಿತರಿಲ್ಲ’ ಎಂದು ಹೇಳಿದರು. ಇದರ ನಂತರ, ಬಾಲಿವುಡ್ ಉದ್ಯಮದ ಅನೇಕ ಸೆಲೆಬ್ರಿಟಿಗಳು ಅವರಿಗೆ ಸಹಾಯ ಮಾಡಲು ಮುಂದೆ ಬಂದರು. ಸೋನು ಸೂದ್, ಸಲ್ಮಾನ್ ಖಾನ್, ಮಿಕಾ ಸಿಂಗ್, ಗುರ್ಮೀತ್ ಚೌಧರಿ, ಇಂದರ್‌ಜಿತ್ ಸಿಂಗ್ ಅವರಿಗೆ ಆರ್ಥಿಕ ಸಹಾಯ ಘೋಷಿಸಿದರು. ಈ ಮಧ್ಯೆ, ರಾಜ್‌ಪಾಲ್ ಯಾದವ್‌ಗೆ ಸಾಲ ನೀಡಿದ ವ್ಯಕ್ತಿಯ ಪ್ರತಿಕ್ರಿಯೆ ಬೆಳಕಿಗೆ ಬಂದಿದೆ.

2010ರಲ್ಲಿ, ರಾಜ್‌ಪಾಲ್ ಯಾದವ್ ತಮ್ಮ ಒಂದು ಚಿತ್ರಕ್ಕಾಗಿ ಎಂ.ಎಸ್. ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಧವ್ ಗೋಪಾಲ್ ಅಗರ್ವಾಲ್ ಅವರಿಂದ 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ರಾಜ್‌ಪಾಲ್ ‘ಅತಾ ಪತ ಲಾಪತ’ ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಆದರೆ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು ಮತ್ತು ಇದರಿಂದಾಗಿ ಅವರು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು. ಬಡ್ಡಿ, ದಂಡ, ವಿಳಂಬವಾದ ಪಾವತಿಗಳಿಂದಾಗಿ, ಬಾಕಿ ಮೊತ್ತ ಸುಮಾರು 9 ಕೋಟಿ ರೂಪಾಯಿಗಳಿಗೆ ಏರಿತು. ಸಾಲವನ್ನು ಮರುಪಾವತಿಸಲು ಅವರು ಸಾಲದಾತರಿಗೆ ಹಲವಾರು ಚೆಕ್‌ಗಳನ್ನು ನೀಡಿದ್ದರು. ಆದರೆ ಈ ಚೆಕ್‌ಗಳು ಬೌನ್ಸ್ ಆದವು. ಇದರಿಂದಾಗಿ, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲಾಯಿತು.

ಮಾಧವ್ ಅಗರ್ವಾಲ್ ಅವರು ಇತರರಿಂದ ಹಣವನ್ನು ಎರವಲು ಪಡೆದು ರಾಜ್‌ಪಾಲ್‌ಗೆ ಸಾಲ ನೀಡಿರುವುದಾಗಿ ಹೇಳಿದ್ದಾರೆ. ಆದ್ದರಿಂದ, ರಾಜ್‌ಪಾಲ್ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದ ಕಾರಣ ಅವರು ದೊಡ್ಡ ಹೊಡೆತವನ್ನು ಅನುಭವಿಸಿದ್ದಾರೆ. ‘ರಾಜ್‌ಪಾಲ್ ನನಗೆ ವೈಯಕ್ತಿಕ ಖಾತರಿಯನ್ನು ಸಹ ನೀಡಿದ್ದರು. ಇದು ಸಾಲವಾಗಿತ್ತು, ಹೂಡಿಕೆಯಲ್ಲ. ಏಕೆಂದರೆ ಹೂಡಿಕೆಗಳಲ್ಲಿ ಯಾವುದೇ ವೈಯಕ್ತಿಕ ಖಾತರಿಗಳು ಅಥವಾ ಚೆಕ್‌ಗಳಿಲ್ಲ’ ಎಂದು ಅವರು ವಿವರಿಸಿದರು. ಸಾಲ ನೀಡಿದ ನಂತರ, ಮಾಧವ್ ಮೂರು ವರ್ಷಗಳ ಕಾಲ ಕಾದರು. ಅಂತಿಮವಾಗಿ 2013 ರಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದರು. ಮಾಧವ್ ಅಗರ್ವಾಲ್ ಅವರು ರಾಜ್‌ಪಾಲ್ ಅವರ ಮನೆಗೆ ಹೋಗಿ ಹಣಕ್ಕಾಗಿ ಅಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ಬೇಕು: ರಾಜ್​ಪಾಲ್ ಯಾದವ್ ಬೇಡಿಕೆ

‘ರಾಜ್‌ಪಾಲ್ ಯಾದವ್ ಅವರನ್ನು ಜೈಲಿಗೆ ಕಳುಹಿಸಿದ್ದರಿಂದ ನನಗೆ ಸಂತೋಷ ಅಥವಾ ಗೌರವ ಸಿಗುತ್ತಿಲ್ಲ. ನಾನು ಒಬ್ಬ ಉದ್ಯಮಿ ಮತ್ತು ನನಗೆ ನನ್ನ ಹಣ ವಾಪಸ್ ಬೇಕು’ ಎಂದು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026: ಮೋದಿ ಭಾಷಣ ಕನ್ನಡದಲ್ಲಿ ಕೇಳಿ – Kannada News | PM Modi’s Vision for New India at Delhi’s India AI Impact Summit 2026

ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026’ (India AI Impact Summit 2026) ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಮಾಡಿದ್ದಾರೆ. ಅದನ್ನು ಕನ್ನಡಕ್ಕೆ ಎಐ ಮೂಲಕ ಅನುವಾದ ಮಾಡಲಾಗಿದೆ. ಇಂದಿನ ಈ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ ಕೇವಲ ತಂತ್ರಜ್ಞಾನದ ಸಮಾವೇಶವಲ್ಲ, ಇದು ನವ ಭಾರತದ ಸಂಕಲ್ಪದ ಪ್ರತೀಕವಾಗಿದೆ ಎಂದು ಮೋದಿ ಇದರಲ್ಲಿ ಹೇಳಿದ್ದಾರೆ ಈ ಬಗ್ಗೆ ಲೈವ್​​ ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Tirumala: ತಿರುಮಲದಲ್ಲಿ ಭಕ್ತರಿಗೆ ಮತ್ತೊಂದು ಸೌಲಭ್ಯ; ಪಾದರಕ್ಷೆ ನಿರ್ವಹಣೆಗೆ ಡಿಜಿಟಲ್ ಪರಿಹಾರ – Kannada News | TTD’s QR System Revolutionizes Tirumala Footwear Storage for Devotees

QR ಆಧಾರಿತ ಸ್ಮಾರ್ಟ್ ಪಾದರಕ್ಷೆ ವ್ಯವಸ್ಥೆ

ತಿರುಮಲ ಶ್ರೀವಾರಿ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಭಕ್ತರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಟಿಟಿಡಿ ಹಲವು ಹೊಸ ಸೌಲಭ್ಯಗಳನ್ನು ಹಂತ ಹಂತವಾಗಿ ಪರಿಚಯಿಸುತ್ತಿದೆ. ಈ ಕ್ರಮದಲ್ಲಿ ಈಗ ಭಕ್ತರು ಹೆಚ್ಚು ಎದುರಿಸುತ್ತಿದ್ದ ಒಂದು ಸಾಮಾನ್ಯ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ಪರಿಹಾರ ಒದಗಿಸಲಾಗಿದೆ.

ತಿರುಮಲಕ್ಕೆ ಬರುವ ಭಕ್ತರಲ್ಲಿ ಅನೇಕರು ತಮ್ಮ ಪಾದರಕ್ಷೆಗಳನ್ನು ಎಲ್ಲಿ ಸುರಕ್ಷಿತವಾಗಿ ಇಡಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಕೆಲವರು ಅವನ್ನು ರಸ್ತೆಯ ಬದಿಯಲ್ಲಿ ಅಥವಾ ಯಾದೃಚ್ಛಿಕ ಸ್ಥಳಗಳಲ್ಲಿ ಬಿಡುವುದರಿಂದ ಅವು ಕಾಣೆಯಾಗುವುದು, ಅಸ್ವಚ್ಛತೆ ಉಂಟಾಗುವುದು ಮುಂತಾದ ಸಮಸ್ಯೆಗಳು ಕಂಡುಬಂದಿವೆ. ಪಾದರಕ್ಷೆ ಸಂಗ್ರಹಿಸಲು ವಿಶೇಷ ಕೌಂಟರ್‌ಗಳು ಇದ್ದರೂ, ಅಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ಠೇವಣಿ ಇಡಲು ಮತ್ತು ಮರಳಿ ಪಡೆಯಲು ಸಮಯ ಹಿಡಿಯುತ್ತಿತ್ತು.

ಈ ಸಮಸ್ಯೆಗೆ ಪರಿಹಾರವಾಗಿ TTD QR-ಆಧಾರಿತ ಸ್ಮಾರ್ಟ್ ಪಾದರಕ್ಷೆ ಟ್ರ್ಯಾಕಿಂಗ್ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯಡಿ ಭಕ್ತರು ತಮ್ಮ ಪಾದರಕ್ಷೆಗಳನ್ನು ಕೌಂಟರ್‌ನಲ್ಲಿ ನೀಡಿದಾಗ QR ಕೋಡ್ ರಸೀದಿ ಪಡೆಯುತ್ತಾರೆ. ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪಾದರಕ್ಷೆಗಳನ್ನು ವೇಗವಾಗಿ ಮತ್ತು ಸುಲಭವಾಗಿ ಮರಳಿ ಪಡೆಯಬಹುದು. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ, ಭಕ್ತರಿಗೆ ಹೆಚ್ಚಿನ ಸೌಲಭ್ಯವೂ ದೊರೆಯುತ್ತಿದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಈ ವ್ಯವಸ್ಥೆಯನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾಯಿತಾದರೂ, ಪ್ರಸ್ತುತ ಕೆಲವು ಸ್ಥಳಗಳಲ್ಲಿ ಮಾತ್ರ ಸೌಲಭ್ಯ ಲಭ್ಯವಿದೆ. ಆದರೆ ಭಕ್ತರ ಹೆಚ್ಚಿನ ಓಡಾಟ ಇರುವ ಪ್ರದೇಶಗಳಲ್ಲಿ ಶೀಘ್ರದಲ್ಲೇ ಇನ್ನಷ್ಟು ಕೌಂಟರ್‌ಗಳನ್ನು ಸ್ಥಾಪಿಸಲು TTD ಸಿದ್ಧತೆ ನಡೆಸುತ್ತಿದೆ. ಕಲ್ಯಾಣಕಟ್ಟೆ, ATC ವೃತ್ತ ಮತ್ತು ಬೇಡಿ ಆಂಜನೇಯಸ್ವಾಮಿ ದೇವಾಲಯದ ಬಳಿಯೂ ಈ ಸ್ಮಾರ್ಟ್ ಪಾದರಕ್ಷೆ ಕೌಂಟರ್‌ಗಳನ್ನು ಆರಂಭಿಸಲು ಯೋಜಿಸಲಾಗಿದೆ. ಈ ಯೋಜನೆ ಕೋರಮಾಂಡರ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

TTD ತಿಳಿಸಿದ ಮಾಹಿತಿಯ ಪ್ರಕಾರ, ಈಗಾಗಲೇ 8,45,816 ಭಕ್ತರು ಈ ವ್ಯವಸ್ಥೆಯ ಸೌಲಭ್ಯವನ್ನು ಬಳಸಿದ್ದಾರೆ. ಇದರ ಪರಿಣಾಮವಾಗಿ ತಿರುಮಲದಲ್ಲಿ ಸ್ವಚ್ಛತೆ ಹೆಚ್ಚಿರುವುದಲ್ಲದೆ, ಪಾದರಕ್ಷೆ ಕಾಣೆಯಾಗುವ ಪ್ರಕರಣಗಳೂ ಕಡಿಮೆಯಾಗಿವೆ. ಆದರೆ ಕೆಲವು ಭಕ್ತರು ತಂತ್ರಜ್ಞಾನದ ಅರಿವಿನ ಕೊರತೆಯಿಂದಾಗಿ ಈ ವ್ಯವಸ್ಥೆಯನ್ನು ಇನ್ನೂ ಬಳಸುತ್ತಿಲ್ಲ. ಆದ್ದರಿಂದ, TTD ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಪ್ರಚಾರ ಕಾರ್ಯಗಳನ್ನು ಕೈಗೊಂಡಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:11 pm, Thu, 19 February 26

Source link

Sarvam AI: ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರಿನ ‘ಸರ್ವಂ AI’ನ ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್ ಯಾರು? – Kannada News | India’s Sarvam AI Challenges Global Giants: Pratyush Kumar Leads Bengaluru’s AI Innovation

ಡಾ. ಪ್ರತ್ಯೂಷ್ ಕುಮಾರ್Image Credit source: Indian Express

ನವದೆಹಲಿ, ಫೆಬ್ರವರಿ 19: ಭಾರತ ನಿಧಾನವಾಗಿ ಕೃತಕ ಬುದ್ಧಿಮತ್ತೆ(AI)ಯ ಜಗತ್ತಿನಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ. ಹೆಚ್ಚಾಗಿ ಅಮೆರಿಕ ಮತ್ತು ಚೀನಾದವರು ಪ್ರಾಬಲ್ಯ ಹೊಂದಿದ್ದಾರೆ. ಬೆಂಗಳೂರು ಮೂಲದ ಸ್ಟಾರ್ಟ್ಅಪ್ ‘ ಸರ್ವಂ AI’ ಈ ಕ್ಷೇತ್ರದಲ್ಲಿ ಒಂದು ಮಾರ್ಗದರ್ಶಕನಾಗಿ ಹೊರಹೊಮ್ಮುತ್ತಿದೆ.ಇದು ಭಾರತದೊಳಗೆ ಮೂಲಭೂತ AI ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

2023ರಲ್ಲಿ ಆರಂಭವಾದ ಸರ್ವಂ ಎಐ ಎನ್ನುವ ಕಂಪನಿ, ಇವತ್ತು ಗೂಗಲ್ ಜೆಮಿನಿ ಮತ್ತು ಚಾಟ್ ಜಿಪಿಟಿಯಂತಹ ದೈತ್ಯ ಎಐ ಮಾಡೆಲ್‌ಗಳನ್ನು ಕೆಲವು ಪ್ರಮುಖ ಬೆಂಚ್‌ ಮಾರ್ಕ್‌ಗಳಲ್ಲಿ ಹಿಂದಿಕ್ಕಿದೆ. ಈ ಜಾಗತಿಕ ಎಐ ದಿಗ್ಗಜರಿಗೆ ಬೆಂಗಳೂರಿನ ಒಂದು ಸ್ಟಾರ್ಟ್‌ಅಪ್‌ ಶಾಕ್ ಕೊಟ್ಟಿದೆ ಎಂದರೆ ತಪ್ಪಾಗದು.  ಡಾ. ಪ್ರತ್ಯೂಷ್ ಕುಮಾರ್ ಹಾಗೂ ಡಾ. ವಿವೇಕ್ ರಾಘವನ್ ಇದನ್ನು ನಿರ್ಮಿಸಿದ್ದಾರೆ.

ಈ ಸಂಸ್ಥೆ ಇದೇ ಮೊದಲ ಬಾರಿ ದೇಶೀಯ ಎಐ ಚಾಲಿತ, ಕನ್ನಡಕ ಹೊರತಂದಿದ್ದು, ಎಐ ಇಂಪಾಕ್ಟ್​​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇದರ ಅನುಭವ ಪಡೆದಿದ್ದರು. ‘ಸರ್ವಂ​ ಕೆಜೆ ಎಐ ಸ್ಮಾರ್ಟ್ ಗ್ಲಾಸ್’. ಇದು ನಿಮ್ಮ ಮುಖದ ಅಂದ ಹೆಚ್ಚಿಸುವುದಷ್ಟೇ ಅಲ್ಲ, ಅದು ಜಗತ್ತನ್ನು ನೋಡುವ, ಆಲಿಸುವ, ಅರ್ಥಮಾಡಿಕೊಳ್ಳುವ, ಪ್ರತಿಕ್ರಿಯಿಸುವ ಮತ್ತು ದೃಶ್ಯ ಸೆರೆಹಿಡಿಯುವ ಗ್ಯಾಜೆಟ್.

ಇದನ್ನು ಭಾರತದಲ್ಲಿ ವಿನ್ಯಾಸ ಮಾಡಲಾಗಿದ್ದು, ಭಾರತದಲ್ಲೇ ನಿರ್ಮಿಸಲಾಗಿದೆ. ಭಾರತದ ಎಐನೊಂದಿಗೆ ಅಳವಡಿಸಲಾಗಿದೆ. ಮೇಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಅವರು ಹೇಳಿದ್ದಾರೆ. ಈ ಸ್ಟಾರ್ಟ್​ಅಪ್ ಸ್ಥಾಪನೆಯಾಗಿ ಎರಡು ವರ್ಷಕ್ಕೆ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಅಂದಿನಿಂದ ಇದು ಗೂಗಲ್‌ನ ಜೆಮಿನಿ ಮತ್ತು ಓಪನ್‌ಎಐನ ಚಾಟ್‌ಜಿಪಿಟಿಯಂತಹ ಜಾಗತಿಕ ಎಐ ಹೆವಿವೇಯ್ಟ್‌ಗಳನ್ನು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ನಲ್ಲಿ ನಿರ್ದಿಷ್ಟ ಮಾನದಂಡಗಳಲ್ಲಿ ಮೀರಿಸಿದೆ.

ಮತ್ತಷ್ಟು ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಪ್ರತ್ಯೂಷ್ ಕುಮಾರ್ ಯಾರು?
ಡಾ.  ಪ್ರತ್ಯೂಷ್ ಕುಮಾರ್ ಬೆಂಗಳೂರಿನಲ್ಲಿರುವ ಎಐ ಸ್ಟಾರ್ಟ್​ ಅಪ್ ಸರ್ವಂ ಎಐನ ಸಿಇಒ ಆಗಿದ್ದಾರೆ. ಅವರು ಡಾ. ವಿವೇಕ್ ರಾಘವನ್ ಅವರೊಂದಿಗೆ ಸರ್ವಂ ಎಐಯನ್ನು ಸ್ಥಾಪಿಸಿದ್ದಾರೆ. ಅವರು ಇಟಿಎಚ್ ಜ್ಯೂರಿಚ್​ನಿಂದ ಪಿಎಚ್​ಡಿ ಮತ್ತು ಐಐಟಿ ಬಾಂಬೆಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು ಮೈಕ್ರೋಸಾಫ್ಟ್ ರಿಸರ್ಚ್, ಐಬಿಎಂ ರಿಸರ್ಚ್ ಮತ್ತು ಐಐಟಿ ಮದ್ರಾಸ್‌ನಲ್ಲಿ ಸಹಾಯಕ ಅಧ್ಯಾಪಕ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಭಾರತೀಯ ಭಾಷೆಗಳಿಗಾಗಿ ಭಾರತಕ್ಕಾಗಿ AI4 ಮತ್ತು ಕೈಗೆಟುಕುವ ಆನ್‌ಲೈನ್ ಕಲಿಕೆಗಾಗಿ PadhAI ಅಭಿವೃದ್ಧಿಯಲ್ಲಿ ಅವರ ಪಾತ್ರ ಹೆಚ್ಚು.

ಇನ್ನು ವಿವೇಕ್ ರಾಘವನ್ ಬಗ್ಗೆ ಹೇಳವುದಾದರೆ, ಐಐಟಿ ದೆಹಲಿ ಪದವೀಧರರಾದ ರಾಘವನ್, ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ.ಸಿನೋಪ್ಸಿಸ್ ಮತ್ತು ಮ್ಯಾಗ್ಮಾ ಡಿಸೈನ್ ಆಟೊಮೇಷನ್‌ನಂತಹ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಎಲೆಕ್ಟ್ರಾನಿಕ್ ಡಿಸೈನ್ ಆಟೊಮೇಷನ್ (ಇಡಿಎ) ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

ಸರ್ವಂ AI ನ ಕೆಲಸ ಏಕೆ ವಿಶೇಷವಾಗಿದೆ?
ಸರ್ವಂ AI ದೊಡ್ಡ ಮತ್ತು ಭಾರವಾದ ಕ್ಲೌಡ್ ಮಾದರಿಗಳಿಗಿಂತ ಹಗುರವಾದ, ವೇಗದ ಮತ್ತು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ AI ಅನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸಿದೆ. ಕಂಪನಿಯು ಭಾರತೀಯ ಭಾಷೆಗಳು, ಕಡಿಮೆ ಇಂಟರ್ನೆಟ್ ವೇಗ ಮತ್ತು ಮೊಬೈಲ್‌ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರ OCR ಮತ್ತು ಧ್ವನಿ ಪರಿಕರಗಳು ಸರ್ಕಾರಿ ಸೇವೆಗಳು, ಕಾಲ್ ಸೆಂಟರ್‌ಗಳು, ಬ್ಯಾಂಕಿಂಗ್ ಮತ್ತು ಡಿಜಿಟಲ್ ದಾಖಲೆಗಳಲ್ಲಿ ಉಪಯುಕ್ತವೆಂದು ಸಾಬೀತುಪಡಿಸಬಹುದು. ಅದಕ್ಕಾಗಿಯೇ ತಂತ್ರಜ್ಞಾನ ಜಗತ್ತಿನಲ್ಲಿ ಇದರ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಚಾಟ್ ಜಿಪಿಟಿ ಜೆಮಿನಿ ಯಾವ ಕ್ಷೇತ್ರಗಳಲ್ಲಿ ಹಿಂದುಳಿದಿವೆ?
ಸರ್ವಮ್ AI ನ ಪರಿಕರಗಳಾದ ಸರ್ವಂ ವಿಷನ್ ಮತ್ತು ಬುಲ್‌ಬುಲ್, ನಿರ್ದಿಷ್ಟ ಮಾನದಂಡ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಭಾರತೀಯ ಭಾಷೆಗಳಿಗೆ OCR ಪರೀಕ್ಷೆಗಳಲ್ಲಿ ಸರ್ವಂ ವಿಷನ್ ಜೆಮಿನಿ ಮತ್ತು ಚಾಟ್‌ಜಿಪಿಟಿಗಿಂತ ಹೆಚ್ಚು ನಿಖರವಾದ ಫಲಿತಾಂಶಗಳನ್ನು ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯೋಗಿ, ದಿಗಂತ್, ಸತೀಶ್: ವೇದಿಕೆ ಮೇಲೆ ಮೂವರು ಗೆಳೆಯರ ಮಾತುಗಳು – Kannada News | Neenasam Satish, Yogi, Diganth funny talk watch video

ನೀನಾಸಂ ಸತೀಶ್ (Neenasam Satish) ನಟನೆಯ ‘ರೈಸ್ ಆಫ್ ಅಶೋಕ’ ಸಿನಿಮಾದ ಟ್ರೈಲರ್ ಬಿಡುಗಡೆ ನಿನ್ನೆಯಷ್ಟೆ ಅದ್ಧೂರಿಯಾಗಿ ನಡೆಯಿತು. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ದಿಗಂತ್ ಇನ್ನೂ ಹಲವರು ಭಾಗಿ ಆಗಿದ್ದರು. ಯೋಗಿ, ದಿಗಂತ್ ಮತ್ತು ಸತೀಶ್ ಅವರುಗಳು ಆತ್ಮೀಯ ಗೆಳೆಯರು ಸಹ. ವೇದಿಕೆ ಮೇಲೆ ಮೂವರು ಒಟ್ಟಿಗೆ ಸೇರಿ ಪರಸ್ಪರರ ಕಾಲೆಳೆದುಕೊಂಡರು. ರಾತ್ರಿ ಆದ್ರೆ ಸತೀಶ್ ಬೈತಾನೆ ಎಂದು ಯೋಗಿ ದೂರಿದರೆ, ದಿಗಂತ್ ಸಿನಿಮಾ ಮುಹೂರ್ತಕ್ಕೆ ಹೋಗಿದ್ದ ಕತೆಯೊಂದನ್ನು ನೆನಪಿಸಿಕೊಂಡು ತಮಾಷೆ ಮಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ಟಾಕ್ಸಿಕ್’ ಟ್ರೇಲರ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಸರ್​​ಪ್ರೈಸ್ ಕೊಟ್ಟ ಯಶ್ – Kannada News | Yash’s ‘Toxic’ Teaser Release Date Out: What to Expect from the Highly Anticipated Film

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೊದಲು ಎಲ್ಲಾ ಪಾತ್ರಗಳ ಪರಿಚಯವನ್ನು ತಂಡದವರು ಮಾಡಿದ್ದರು. ಈಗ ಸಿನಿಮಾದ ಟೀಸರ್ ರಿಲೀಸ್ ಮಾಡುವ ಸಮಯ. ಫೆಬ್ರವರಿ 20ರ ಬೆಳಿಗ್ಗೆ 9.35ಕ್ಕೆ ಟೀಸರ್ ಬಿಡುಗಡೆ ಕಾಣಲಿದೆ. ಈ ಟೀಸರ್ ರಿಲೀಸ್ ಆದ ಬಳಿಕ ಸಿನಿಮಾ ಬಗ್ಗೆ ಇರೋ ಕ್ರೇಜ್ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

‘ಟಾಕ್ಸಿಕ್’ ಟ್ರೇಲರ್ ಬಗ್ಗೆ ಇತ್ತೀಚೆಗೆ ಸುದ್ದಿ ಹರಿದಾಡಿದೆ. ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬರಲಿದೆ ಎಂಬ ಮಾಹಿತಿ ಇದೆ. ಅದಕ್ಕೂ ಮೊದಲು ಅಭಿಮಾನಿಗಳಿಗೆ ಸರ್​​ಪ್ರೈಸ್ ಸಿಕ್ಕಿದೆ. ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಬಗ್ಗೆ ತಂಡ ಮಾಹಿತಿ ನೀಡಿದೆ. ಈ ವಿಷಯ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಈ ಮೊದಲು ‘ಟಾಕ್ಸಿಕ್’ ರಾಯ ಪಾತ್ರ ಪರಿಚಯಿಸೋ ಟೀಸರ್ ರಿಲೀಸ್ ಮಾಡಲಾಗಿತ್ತು. ಟೀಸರ್​​​ನಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಇದ್ದವು. ಆ ದೃಶ್ಯಗಳ ಕಾರಣಕ್ಕೆ ಟೀಸರ್ ಸಾಕಷ್ಟು ಸದ್ದು ಮಾಡಿತು. ಈಗ ಹೊಸ ಟೀಸರ್ ಮೂಲಕ ಪ್ರೇಕ್ಷಕರ ಎದುರು ಬರಲು ಯಶ್ ರೆಡಿ ಆಗಿದ್ದಾರೆ. ಈ ಟೀಸರ್​​ನಲ್ಲೂ ಬೋಲ್ಡ್ ದೃಶ್ಯಗಳು ಇರುತ್ತವೆಯೇ ಎಂಬುದು ಸದ್ಯದ ಪ್ರಶ್ನೆ.

‘ಟಾಕ್ಸಿಕ್’ ಸಿನಿಮಾದ ಪ್ರಚಾರ ವೇಗವಾಗಿ ಸಾಗುತ್ತಿಲ್ಲ ಎಂಬ ಬೇಸರ ಅಭಿಮಾನಿಗಳಿಗೆ ಇತ್ತು. ಈಗ ‘ಟೀಸರ್’ ಮೂಲಕ ಸಿನಿಮಾ ಪ್ರಚಾರಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಮುಂದಕ್ಕೆ ಹೋಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ರಿಲೀಸ್ ಆಗಿರೋ ಪೋಸ್ಟರ್​​ನಲ್ಲಿ ರಿಲೀಸ್ ದಿನಾಂಕದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರೋದು ಖಚಿತವಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್​​ಗೆ ಕೇಡು ಬಯಸಿದ ಧುರಂಧರ್​ನ ಕರ್ಮ ಹಿಂಬಾಲಿಸುತ್ತಿದೆ’; ಹಿಂದಿ ಯೂಟ್ಯೂಬರ್​​ ಸೆನ್ಸೇಷನ್ ಹೇಳಿಕೆ

‘ಟಾಕ್ಸಿಕ್’ ಚಿತ್ರಕ್ಕೆ ಯಶ್ ನಾಯಕ. ಗೀತು ಮೋಹನ್​ದಾಸ್ ಅವರು ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ಅನೇಕರಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್ ಮೂಲಕ ಅಭಿಮಾನಿಗಳ ಒಂದಷ್ಟು ಪ್ರಶ್ನೆಗೆ ಉತ್ತರ ಸಿಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version