Vastu Tips: ಮನಿ ಪ್ಲಾಂಟ್ ಇಟ್ಟರೂ ಹಣದ ಕೊರತೆಯೇ? ಹಾಗಿದ್ದರೆ ಈ 5 ವಾಸ್ತು ತಪ್ಪುಗಳ ಬಗ್ಗೆ ತಿಳಿಯಿರಿ – Kannada News | Money Plant Vastu: Avoid These Placement Mistakes for Financial Prosperity

ಅನೇಕ ಜನರು ಮನೆಗೆ ಸಮೃದ್ಧಿ ಬರಲಿ ಎಂದು ಮನಿ ಪ್ಲಾಂಟ್ (Money Plant) ಬೆಳೆಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ಲಾಭದ ಬದಲು ಭಾರಿ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಮನಿ ಪ್ಲಾಂಟ್ ಇಡುವಾಗ ನಾವು ಮಾಡುವ ಸಾಮಾನ್ಯ ತಪ್ಪುಗಳು ಮತ್ತು ಅವುಗಳ ಪರಿಣಾಮಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ.

ಈಶಾನ್ಯ ಮೂಲೆಯಲ್ಲಿ ಎಂದಿಗೂ ಇಡಬೇಡಿ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಈಶಾನ್ಯ (North-East) ಮೂಲೆಯಲ್ಲಿ ಮನಿ ಪ್ಲಾಂಟ್ ಅನ್ನು ಎಂದಿಗೂ ಇಡಬಾರದು. ಈ ದಿಕ್ಕಿನಲ್ಲಿ ಗಿಡವನ್ನು ಇಟ್ಟರೆ ಸಾಲದ ಹೊರೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಮನೆಯ ಆದಾಯದ ಬಹುಭಾಗವು ಅನಗತ್ಯ ವೈದ್ಯಕೀಯ ವೆಚ್ಚಗಳು ಮತ್ತು ಅನಾರೋಗ್ಯದ ಕಾರಣಕ್ಕೆ ಖರ್ಚಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಆರ್ಥಿಕ ಸ್ಥಿರತೆಗಾಗಿ ಈ ದಿಕ್ಕನ್ನು ತಪ್ಪಿಸುವುದು ಉತ್ತಮ.

ಸ್ನಾನಗೃಹದ ಹತ್ತಿರ ಬೇಡವೇ ಬೇಡ:

ಮನೆ ಅಲಂಕಾರಕ್ಕಾಗಿ ಇಂದು ಅನೇಕರು ಸ್ನಾನಗೃಹದ (Bathroom) ಒಳಗೆ ಅಥವಾ ಹತ್ತಿರ ಮನಿ ಪ್ಲಾಂಟ್ ಇಡುತ್ತಾರೆ. ಆದರೆ ಇದು ವಾಸ್ತು ಪ್ರಕಾರ ದೋಷಪೂರಿತವಾಗಿದೆ. ಮನಿ ಪ್ಲಾಂಟ್ ಐಶ್ವರ್ಯ ಕಾರಕನಾದ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ, ಆದರೆ ಸ್ನಾನಗೃಹವು ರಾಹುವಿನ ಸ್ಥಾನವೆಂದು ಪರಿಗಣಿಸಲಾಗಿದೆ. ಇವೆರಡರ ಸಂಯೋಗದಿಂದ ಆದಾಯದ ಮೂಲಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗಬಹುದು.

ಮಲಗುವ ಕೋಣೆಯಲ್ಲಿ ಈ ಎಚ್ಚರಿಕೆ ಇರಲಿ:

ಮಲಗುವ ಕೋಣೆಯಲ್ಲಿ ಮನಿ ಪ್ಲಾಂಟ್ ಇಡುವುದಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ನೀವು ಮಲಗುವ ದಿಕ್ಕಿನಲ್ಲಿ ಅಥವಾ ಬೆಡ್‌ನ ಹೆಡ್‌ಬೋರ್ಡ್ ಬಳಿ ಈ ಗಿಡವನ್ನು ಇಡಬೇಡಿ. ಹೀಗೆ ಮಾಡುವುದರಿಂದ ದಂಪತಿಗಳ ನಡುವೆ ಅನಗತ್ಯ ಜಗಳ ಮತ್ತು ಮನಸ್ತಾಪಗಳು ಉಂಟಾಗಬಹುದು. ಅಷ್ಟೇ ಅಲ್ಲದೆ, ಇದು ಮಾನಸಿಕ ಒತ್ತಡ ಮತ್ತು ಉದ್ವೇಗವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕತ್ತಲೆಯಾದ ಸ್ಥಳದಿಂದ ದೂರವಿಡಿ:

ಮನಿ ಪ್ಲಾಂಟ್ ಎಲ್ಲಿಟ್ಟರೂ ಬೆಳೆಯುತ್ತದೆ ಎಂಬುದು ನಿಜ, ಆದರೆ ಅದು ಸಕಾರಾತ್ಮಕ ಫಲ ನೀಡಬೇಕಾದರೆ ಬೆಳಕು ಮುಖ್ಯ. ಕತ್ತಲೆಯಾದ ಅಥವಾ ಮಂದ ಬೆಳಕಿರುವ ಸ್ಥಳದಲ್ಲಿ ಮನಿ ಪ್ಲಾಂಟ್ ಇಟ್ಟರೆ ಅದು ಆರ್ಥಿಕ ಸಂಕಷ್ಟಗಳನ್ನು ಆಕರ್ಷಿಸುತ್ತದೆ. ಗಿಡವು ಸರಿಯಾಗಿ ಬೆಳೆಯದೆ ಬಾಡಿ ಹೋದರೆ, ಅದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಬಳ್ಳಿಗಳು ನೆಲವನ್ನು ಮುಟ್ಟದಂತೆ ನೋಡಿಕೊಳ್ಳಿ:

ಮನಿ ಪ್ಲಾಂಟ್‌ನ ಬಳ್ಳಿಗಳು ಯಾವಾಗಲೂ ಮೇಲ್ಮುಖವಾಗಿ ಬೆಳೆಯಬೇಕು. ಒಂದು ವೇಳೆ ಬಳ್ಳಿಗಳು ಕೆಳಕ್ಕೆ ನೇತಾಡಿ ನೆಲವನ್ನು ಮುಟ್ಟುತ್ತಿದ್ದರೆ, ಅದನ್ನು ತಕ್ಷಣವೇ ಸರಿಪಡಿಸಿ. ಬಳ್ಳಿಗಳು ನೆಲ ಮುಟ್ಟುವುದು ಲಕ್ಷ್ಮಿ ದೇವಿಗೆ ಮಾಡುವ ಅವಮಾನ ಎಂದು ನಂಬಲಾಗಿದೆ. ಇದು ಮನೆಯಲ್ಲಿ ವಾಸ್ತು ದೋಷ ಉಂಟುಮಾಡಿ, ಬರಬೇಕಾದ ಐಶ್ವರ್ಯ ಮತ್ತು ಸಮೃದ್ಧಿಯನ್ನು ತಡೆಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯರಿಲ್ಲದ ವಿಶ್ವ ಏಕದಿನ XI ಪ್ರಕಟಿಸಿದ ಬಾಬರ್ ಆಝಂ – Kannada News | Babar Azam’s World ODI XI Sparks Debate: Shocking Exclusion of Indian Cricketers

ಭಾರತದಲ್ಲಿ ಐಪಿಎಲ್ ನಡೆಯುತ್ತಿರುವಂತೆ ಪಾಕಿಸ್ತಾನದಲ್ಲಿ ಪಿಎಸ್​ಎನ್ ನಡೆಯುತ್ತಿದೆ. ಈ ಲೀಗ್‌ನಲ್ಲಿ ಬಾಬರ್ ಆಝಂ ನಾಯಕತ್ವದ ಪೇಶಾವರ್ ಜಲ್ಮಿ ತಂಡ ಫೈನಲ್​ಗೇರಿದ್ದು, ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಆದರೆ ಅದಕ್ಕೂ ಮುನ್ನ ತಂಡದ ಪಾಡ್‌ಕ್ಯಾಸ್ಟ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದ ಬಾಬರ್ ಆಝಂಗೆ ತಮ್ಮ ವಿಶ್ವ ಏಕದಿನ 11 ಹೆಸರಿಸುವಂತೆ ಕೇಳಿಕೊಳ್ಳಲಾಗಿದೆ. ಅದರಂತೆ ಬಾಬರ್ ತಮ್ಮ ವಿಶ್ವ ಏಕದಿನ XI ಅನ್ನು ಆಯ್ಕೆ ಮಾಡಿದ್ದಾರೆ. ಆಶ್ಚರ್ಯಕರವಾಗಿ, ಬಾಬರ್ ಅವರ ಈ ತಂಡದಲ್ಲಿ ಯಾವುದೇ ಭಾರತೀಯ ಆಟಗಾರನಿಗೆ ಸ್ಥಾನ ನೀಡಲಾಗಿಲ್ಲ.

ಏಕದಿನ ಕ್ರಿಕೆಟ್​ಗೆ ಹೇಳಿ ಮಾಡಿಸಿರುವಂತಹ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಅದರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಏಕದಿನ ತಂಡದಿಂದ ಹೊರಗಿಟ್ಟು ನೋಡಲು ಯಾರಿಗೂ ಸಾಧ್ಯವಿಲ್ಲ. ಹೀಗಿರುವಾಗ ಬಾಬರ್ ತಮ್ಮ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಆಟಗಾರನಿಗೆ ಅವಕಾಶ ನೀಡಿಲ್ಲ. ಹಾಗಿದ್ದರೆ, ಬಾಬರ್ ಹೆಸರಿಸಿದ ತಂಡದಲ್ಲಿ ಯಾವ್ಯಾವ ದೇಶದ ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..

ಒಂದು ದೇಶದಿಂದ ಇಬ್ಬರು ಆಟಗಾರರ ಆಯ್ಕೆ

ಬಾಬರ್ ಆಝಂ ಅವರ ವಿಶ್ವ ಏಕದಿನ XI ನಲ್ಲಿ ಆಸ್ಟ್ರೇಲಿಯಾದ ಆಟಗಾರರಿಗೆ ಆರಂಭಿಕ ಸ್ಥಾನವನ್ನು ನೀಡಲಾಗಿದೆ. ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್​ಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಲಾಗಿದೆ. ದಕ್ಷಿಣ ಆಫ್ರಿಕಾದಿಂದ ಕಗಿಸೊ ರಬಾಡ ಮತ್ತು ಐಡೆನ್ ಮಾರ್ಕ್ರಾಮ್ ಆಯ್ಕೆಯಾಗಿದ್ದರೆ, ನ್ಯೂಜಿಲೆಂಡ್‌ ತಂಡದಿಂದ ರಚಿನ್ ರವೀಂದ್ರ ಮತ್ತು ಮಿಚೆಲ್ ಸ್ಯಾಂಟ್ನರ್ ಹಾಗೂ ಇಂಗ್ಲೆಂಡ್‌ ತಂಡದಿಂದ ಹ್ಯಾರಿ ಬ್ರೂಕ್ ಮತ್ತು ಜೋಫ್ರಾ ಆರ್ಚರ್, ಪಾಕಿಸ್ತಾನದಿಂದ ಶಾಹಿದ್ ಅಫ್ರಿದಿ ಮತ್ತು ಮೊಹಮ್ಮದ್ ರಿಜ್ವಾನ್ ಮತ್ತು ಅಫ್ಘಾನಿಸ್ತಾನದಿಂದ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ. ತಂಡದ 12 ನೇ ಆಟಗಾರನಾಗಿ ಬಾಬರ್ ಆಝಂ ತಮ್ಮ ಹೆಸರನ್ನು ಆಯ್ಕೆ ಮಾಡಿದ್ದಾರೆ.

ಭಾರತೀಯರಿಲ್ಲದ ವಿಶ್ವ 11

ಈಗ ಪ್ರಶ್ನೆ ಏನೆಂದರೆ, ಇದು ಯಾವ ರೀತಿಯ ವಿಶ್ವ ಏಕದಿನ XI, ಇದರಲ್ಲಿ ಭಾರತ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಅಥವಾ ಶ್ರೀಲಂಕಾದ ಒಬ್ಬರು ಆಟಗಾರರಿಲ್ಲ?. ವಾಸ ಬಾಬರ್ ಪ್ರತಿ ದೇಶದಿಂದ ಇಬ್ಬರು ಆಟಗಾರರನ್ನು ಆಯ್ಕೆ ಮಾಡಬೇಕಿದ್ದರಿಂದ ಪ್ರತಿ ದೇಶದಿಂದ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ವಿಶ್ವ ಏಕದಿನ 11 ವಿಷಯಕ್ಕೆ ಬಂದಾಗ, ಭಾರತೀಯ ಆಟಗಾರರಿಲ್ಲದೆ ಅದು ಅಪೂರ್ಣವೆನಿಸುತ್ತದೆ. ಬಾಬರ್‌ಗಿಂತ ಮೊದಲು, ತಮ್ಮ ವಿಶ್ವ XI ಅನ್ನು ರಚಿಸಿದ ಯಾರಾದರೂ ಯಾವಾಗಲೂ ತಮ್ಮ ಏಕದಿನ ತಂಡಗಳಲ್ಲಿ ರೋಹಿತ್, ವಿರಾಟ್ ಅಥವಾ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಬಾಬರ್​ಗೆ ಮಾತ್ರ ಭಾರತೀಯ ಆಟಗಾರರು ನೆನಪಿಗೆ ಬಂದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Assembly Election Results 2026: ಐದು ರಾಜ್ಯಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ, ನಾಳೆ ವಿಧಾನಸಭಾ ಚುನಾವಣಾ ಫಲಿತಾಂಶ – Kannada News | Five State Assembly Election Results 2026, date and time Vote Counting, Political Future Decided

ಸಾಂದರ್ಭಿಕ ಚಿತ್ರ Image Credit source: Deccan Chronicle

ನವದೆಹಲಿ, ಮೇ 03: ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ(Assembly Election Result)ಕ್ಕೆ ಕ್ಷಣಗಣನೆ ಶುರುವಾಗಿದೆ. ಚುನಾವಣಾ ಆಯೋಗವು 2026 ರ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಮೇ 4 ರಂದು ಘೋಷಿಸಲಿದೆ. ಸೋಮವಾರ ಸಂಜೆಯ ವೇಳೆಗೆ ಫಲಿತಾಂಶ ಬರುವ ನಿರೀಕ್ಷೆಯಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ ನಂತರ ಇವಿಎಂಗಳಲ್ಲಿ ದಾಖಲಾಗಿರುವ ಮತಗಳನ್ನು ಎಣಿಕೆ ಮಾಡುವ ಪ್ರಮಾಣಿತ ಪ್ರಕ್ರಿಯೆಯನ್ನು ನಡೆಯುತ್ತದೆ. ಎಲ್ಲಾ ಎಣಿಕೆ ಕೇಂದ್ರಗಳಲ್ಲಿ ಬಹುಹಂತದ ಭದ್ರತಾ ಕವಚವನ್ನು ಅಳವಡಿಸಲಾಗಿದ್ದು, ಏಕಕಾಲದಲ್ಲಿ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿಧಾನಸಭಾ ಚುನಾವಣೆಗಳ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಸುದೀರ್ಘ ಮತದಾನ ಪ್ರಕ್ರಿಯೆಯ ನಂತರ, ನಾಳೆ ಬೆಳಿಗ್ಗೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಚಿತ್ರಣ ಸ್ಪಷ್ಟವಾಗಲಿದೆ. ನಿಖರ ಮಾಹಿತಿಗಾಗಿ results.eci.gov.in ಗೆ ಭೇಟಿ ನೀಡಬಹುದು.

ಈ ಬಾರಿಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಫಾಲ್ಟಾ ಕ್ಷೇತ್ರವು ವಿಶೇಷ ಗಮನ ಸೆಳೆದಿದೆ. ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಇಲ್ಲಿ ಆಯೋಗವು ಮಹತ್ವದ ನಿರ್ಧಾರ ಕೈಗೊಂಡಿದೆ. ಫಾಲ್ಟಾ ಕ್ಷೇತ್ರದ ಎಲ್ಲಾ 285 ಬೂತ್‌ಗಳಲ್ಲಿ ಮೇ 21 ರಂದು ಹೊಸದಾಗಿ ಮತದಾನ ನಡೆಸಲು ಆಯೋಗ ಆದೇಶಿಸಿದೆ. ಹಿಂದಿನ ಸುತ್ತಿನ ಮತದಾನದ ಸಮಯದಲ್ಲಿ ನಡೆದ ತೀವ್ರವಾದ ಚುನಾವಣಾ ಅಪರಾಧಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಬುಡಮೇಲು ಮಾಡುವಿಕೆಯ ವರದಿಗಳಿಂದಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ದಿಷ್ಟ ಸ್ಥಾನದ ಮತ ಎಣಿಕೆಯು ಮೇ 24 ರಂದು ನಡೆಯಲಿದೆ.

ಮತ್ತಷ್ಟು ಓದಿ: ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ, ಬೆಳಗ್ಗೆ 8ರಿಂದ ಮತ ಎಣಿಕೆ

ಐದು ರಾಜ್ಯಗಳಲ್ಲಿ ಹರಡಿರುವ 824 ಕ್ಷೇತ್ರಗಳ ಈ ಚುನಾವಣಾ ಫಲಿತಾಂಶವು ಕೇವಲ ಅಧಿಕಾರ ಹಸ್ತಾಂತರವಲ್ಲ. ಪ್ರಮುಖ ರಾಜಕೀಯ ಪಕ್ಷಗಳಿಗೆ ಇದು ರಾಷ್ಟ್ರಮಟ್ಟದ ಜನಬೆಂಬಲವನ್ನು ಅಳೆಯುವ ಮಾಪಕವಾಗಿದೆ. ಮೇ 4ರ ಫಲಿತಾಂಶವು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಜನತೆಯ ತೀರ್ಪನ್ನು ಜಗತ್ತಿನ ಮುಂದೆ ತೆರೆದಿಡಲಿದೆ. ಪ್ರಜಾಪ್ರಭುತ್ವದ ಈ ದೊಡ್ಡ ಹಬ್ಬದ ಅಂತಿಮ ಫಲಿತಾಂಶವು ಭಾರತದ ರಾಜಕೀಯ ಭೂಪಟದಲ್ಲಿ ಹೊಸ ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ.

ಅಸ್ಸಾಂನಲ್ಲಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ, ಪುನರುಜ್ಜೀವನಗೊಳ್ಳುತ್ತಿರುವ ವಿರೋಧ ಪಕ್ಷದ ಮೈತ್ರಿಕೂಟದ ಸವಾಲಿನ ನಡುವೆಯೂ ತನ್ನ ಭದ್ರಕೋಟೆಯನ್ನು ರಕ್ಷಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿ ಮತದಾರರ ಮನಗೆಲ್ಲಲು ಕಸರತ್ತು ನಡೆಸಿವೆ. ಆದರೆ ಈಗಾಗಲೇ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು ಎಲ್ಲರ ಚಿತ್ತ ಫಲಿತಾಂಂಸದತ್ತ ಕೇಂದ್ರಿಕೃತವಾಗಿದೆ.

ಚುನಾವಣೆ ಘೋಷಣೆಯಾದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದ್ದ ಈ ಚುನಾವಣೆ ಹೆಚ್ಚು ಕುತೂಹಲ ಕೆರಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಪಾರುಮತ್ಯ ಮೆರೆದಿದ್ದು, ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ ಬುಡ ಅಲುಗಾಡಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಅಖಾಡದಲ್ಲಿ ಎರಡು ಪಕ್ಷಗಳು ಸೆಡ್ಡು ಹೊಡೆದಿರುವುದರಿಂದ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ.

ಮತ ಎಣಿಕೆಗಾಗಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಂಡಿದೆ. ಮೊದಲು ಅಂಚೆ ಮತಪತ್ರಗಳನ್ನು (Postal Ballots) ಎಣಿಸಲಾಗುತ್ತದೆ, ನಂತರ ಇವಿಎಂ (EVM) ಮತಗಳ ಎಣಿಕೆ ನಡೆಯಲಿದೆ. ಮರು ಮತದಾನದ ಕಾರಣದಿಂದಾಗಿ ಪಶ್ಚಿಮ ಬಂಗಾಳದ ಫಾಲ್ಟಾ ಕ್ಷೇತ್ರದ ಫಲಿತಾಂಶ ಮಾತ್ರ ಮೇ 24ಕ್ಕೆ ಪ್ರಕಟವಾಗಲಿದ್ದು, ಉಳಿದೆಲ್ಲಾ ಕ್ಷೇತ್ರಗಳ ಫಲಿತಾಂಶ ನಾಳೆ ಸಂಜೆಯೊಳಗೆ ಲಭ್ಯವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ: ಕೂಡಲೇ ಸಚಿವರನ್ನ ಕರೆದೊಯ್ದ ಸಿಬ್ಬಂದಿ – Kannada News | Fire Breaks Out at Sindhanur Mass Wedding Due to Short Circuit

ರಾಯಚೂರು, ಮೇ 03: ಜಿಲ್ಲೆಯ ಸಿಂಧನೂರಿನಲ್ಲಿ 151 ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವಘಡವೊಂದು ಸಂಭವಿಸಿದೆ. ವೇದಿಕೆ ಮೇಲಿಂದ ಡಿಸಿಎಂ ಡಿಕೆ ಶಿವಕುಮಾರ್​ ತೆರಳಿದ ಬೆನ್ನಲ್ಲೇ  ಶಾರ್ಟ್​​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಇದೇ ವೇಳೆ ಸಚಿವ ಈಶ್ವರ ಖಂಡ್ರೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಸಿಬ್ಬಂದಿ ಕೂಡಲೇ ಅವರನ್ನು ಪಕ್ಕಕ್ಕೆ ಕರೆದುಕೊಂಡ ಹೋದರು. ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸುತ್ತಿದ್ದಂತೆ ಕೆಲಕಾಲ ಆತಂಕ ಉಂಟಾಗಿತ್ತು. ಹೊಗೆ ಹೆಚ್ಚಾದ ಹಿನ್ನೆಲೆ ಸ್ಥಳೀಯರು ಕೂಡ ಗಾಬರಿಗೊಂಡಿದ್ದರು. ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿ ಫೈರ್ ಉಪಕರಣದಿಂದ ಬೆಂಕಿ ನಂದಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Vastu Shastra: ಸಂಜೆ ವೇಳೆ ಉಪ್ಪು ಖರೀದಿಸಬಾರದು ಯಾಕೆ? ವಾಸ್ತು ಶಾಸ್ತ್ರದ ಈ ಸಂಗತಿ ನಿಮಗೂ ತಿಳಿದಿರಲಿ! – Kannada News | Salt’s Vastu Power: Remove Negative Energy, Attract Prosperity and Lakshmi Blessings

ಸಂಜೆ ವೇಳೆ ಉಪ್ಪು ಖರೀದಿಸಬಾರದು ಯಾಕೆ?Image Credit source: Pinterest

ಅಡುಗೆಗೆ ಉಪ್ಪು ಇಲ್ಲದಿದ್ದರೆ ರುಚಿಯೇ ಇರುವುದಿಲ್ಲ. ಆದರೆ ಉಪ್ಪು ಕೇವಲ ರುಚಿಗೆ ಮಾತ್ರ ಸೀಮಿತವಲ್ಲ; ವಾಸ್ತು ಶಾಸ್ತ್ರ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಉಪ್ಪಿಗೆ ಒಂದು ವಿಶಿಷ್ಟ ಸ್ಥಾನವಿದೆ. ಮನೆಯ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದರಿಂದ ಹಿಡಿದು ಆರ್ಥಿಕ ಸುಧಾರಣೆಯವರೆಗೆ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಈ ಉಪ್ಪಿನ ಬಳಕೆಗೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಾದ ನಿಯಮಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸಂಜೆ ವೇಳೆ ಉಪ್ಪನ್ನು ಏಕೆ ನೀಡಬಾರದು ಅಥವಾ ಖರೀದಿಸಬಾರದು?

ವಾಸ್ತು ಶಾಸ್ತ್ರ ಮತ್ತು ಶಾಸ್ತ್ರಗಳ ಪ್ರಕಾರ, ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಯಾರಿಗೂ ಉಪ್ಪನ್ನು ನೀಡಬಾರದು. ಯಾರಾದರೂ ನಿಮ್ಮ ಬಳಿ ಉಪ್ಪು ಕೇಳಿಕೊಂಡು ಬಂದರೂ ಸಹ, ರಾತ್ರಿಯ ಹೊತ್ತು ಕೊಡುವುದನ್ನು ನಯವಾಗಿ ನಿರಾಕರಿಸಬೇಕು. ಏಕೆಂದರೆ ರಾತ್ರಿಯಲ್ಲಿ ಉಪ್ಪು ನೀಡುವುದರಿಂದ ಮನೆಯಲ್ಲಿ ಬಡತನ ಆವರಿಸಬಹುದು ಮತ್ತು ನಕಾರಾತ್ಮಕ ಶಕ್ತಿ ಪ್ರವೇಶಿಸಬಹುದು ಎಂದು ನಂಬಲಾಗಿದೆ.

ಸಂಜೆ ವೇಳೆ ಉಪ್ಪನ್ನು ದಾನ ಮಾಡುವುದರಿಂದ ಅಥವಾ ಮನೆಯಿಂದ ಹೊರಗೆ ಕೊಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ಅವಳ ಅನುಗ್ರಹ ನಷ್ಟವಾಗುತ್ತದೆ ಎಂಬ ನಂಬಿಕೆಯಿದೆ. ರಾತ್ರಿಯ ಹೊತ್ತು ಉಪ್ಪು ಖರೀದಿಸುವುದು ಅಥವಾ ದಾನ ಮಾಡುವುದರಿಂದ ಶುಕ್ರ ಗ್ರಹ ದುರ್ಬಲಗೊಳ್ಳುತ್ತದೆ. ಇದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿಗೆ ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗಬಹುದು.

ಉಪ್ಪಿನ ದಾನ ಮತ್ತು ಅದರ ನಿಯಮಗಳು:

ವಾಸ್ತು ಶಾಸ್ತ್ರದಲ್ಲಿ ಶುಕ್ರವಾರದಂದು ಉಪ್ಪನ್ನು ದಾನ ಮಾಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಆದರೆ ಇಲ್ಲಿ ಒಂದು ಪ್ರಮುಖ ಎಚ್ಚರಿಕೆ ಇದೆ. ಧರ್ಮಗ್ರಂಥಗಳ ಪ್ರಕಾರ, ಉಪ್ಪನ್ನು ಎಂದಿಗೂ ಒಂದು ಕೈಯಿಂದ ನೇರವಾಗಿ ಇನ್ನೊಬ್ಬರ ಕೈಗೆ ನೀಡಬಾರದು. ಹಾಗೆ ಮಾಡುವುದರಿಂದ ನಿಮ್ಮ ಪುಣ್ಯ ಫಲಗಳು ಅಥವಾ ನೀವು ಗಳಿಸಿದ ಒಳ್ಳೆಯ ಕಾರ್ಯದ ಫಲಗಳು ಸ್ವೀಕರಿಸುವವರಿಗೆ ವರ್ಗಾವಣೆಯಾಗುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಯಾವಾಗಲೂ ಪಾತ್ರೆಯಲ್ಲಿ ಅಥವಾ ಕೆಳಗೆ ಇಟ್ಟು ಉಪ್ಪನ್ನು ನೀಡಬೇಕು. ಶುಕ್ರವಾರ ದಾನ ಮಾಡುವುದಿದ್ದರೂ ಸಹ ಅದನ್ನು ಸೂರ್ಯಾಸ್ತದ ಮೊದಲು ಮಾಡುವುದು ಉತ್ತಮ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮನೆಯಲ್ಲಿ ಸುಖ-ಸಮೃದ್ಧಿಗಾಗಿ ಉಪ್ಪಿನ ಸರಳ ಪರಿಹಾರಗಳು:

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು. ಶುಕ್ರವಾರದಂದು ಒಂದು ಸಣ್ಣ ಕೆಂಪು ಬಟ್ಟೆಯ ತುಂಡನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಗಂಟು ಕಟ್ಟಿ. ಇದನ್ನು ನಿಮ್ಮ ಅಡುಗೆಮನೆಯ ಒಂದು ಮೂಲೆಯಲ್ಲಿ ಇಡುವುದರಿಂದ ಲಕ್ಷ್ಮಿಯ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ.

ನಕಾರಾತ್ಮಕ ಶಕ್ತಿ ನಿವಾರಣೆ:

ಮನೆಯನ್ನು ಒರೆಸುವ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಶುಚಿಗೊಳಿಸುವುದರಿಂದ ಮನೆಯಲ್ಲಿರುವ ದೃಷ್ಟಿ ದೋಷ ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಉಪ್ಪನ್ನು ಯಾವಾಗಲೂ ಗಾಜಿನ ಪಾತ್ರೆಯಲ್ಲಿ ಇಡುವುದು ಉತ್ತಮ. ಇದು ಚಂದ್ರ ಮತ್ತು ಶನಿ ದೋಷಗಳನ್ನು ನಿವಾರಿಸಲು ಸಹಕಾರಿ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ತಮ್ಮದೇ ಸರ್ಕಾರದ ವಿರುದ್ಧ ಕೈ ಶಾಸಕ ಅಸಮಾಧಾನ – Kannada News | Congress MLA Prasad Abbayya Un Happy On Hubballi dharwad Police

ಹುಬ್ಬಳ್ಳಿ, (ಮೇ 03): ಹುಬ್ಬಳ್ಳಿ ಧಾರವಾಡ (Hubballi And Dharwad) ಅವಳಿ ನಗರ ವ್ಯಾಪಾರ ಮತ್ತು ಶಿಕ್ಷಣ ದಿಂದ ಸುಪ್ರಸಿದ್ದಿಯನ್ನು ಪಡೆದಿವೆ. ಧಾರವಾಡಕ್ಕೆ ವಿದ್ಯಾರ್ಜನೆಗಾಗಿ ರಾಜ್ಯದ ವಿವಿಧಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ರೆ ಹುಬ್ಬಳ್ಳಿ ಗೆ ವ್ಯಾಪರಕ್ಕೆ ದೇಶದ ವಿವಿದಡೆಯಿಂದ ಜನ ಬರ್ತಾರೆ. ಇಂತಹ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಪೊಲೀಸ ಕಮಿಷನರೇಟ್ ಇದ್ದು ಪೊಲೀಸ ಕಮಿಷನರ್, ಡಿಸಿಪಿ,ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸ ಸಿಬ್ಬಂದಿ ಇದ್ದಾರೆ. ಆದ್ರೆ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಸ್ವತಃ ಪೊಲೀಸರ ವಸೂಲಿ ಮಾಡೋದು, ರೌಡಿ ಸೀಟರ್ ಗಳಿಗೆ ನೆರವಾಗೋದು ಸೇರಿದಂತೆ ಅನೇಕ ಕಾನೂನು ಬಾಹಿರ ಕೆಲಸಗಳನ್ನು ಮಾಡ್ತಿರೋ ಆರೋಪ ಕೇಳಿ ಬರ್ತಿವೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅಸಮಾಧಾನ ಹೊರಹಾಕಿದ್ದಾರೆ.

ಪೊಲೀಸರ ವರ್ತನೆಗೆ ಕೈ ಶಾಸಕ ಅಸಮಾಧಾನ

ಅದರಲ್ಲೂ ಧಾರವಾಡದಲ್ಲಿ ವಿದ್ಯಾರ್ಥಿಯೋರ್ವ‌ ಪೊಲೀಸರು ಹಣಕ್ಕಾಗಿ ಪೀಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ‌ ನಂತರ ಪೊಲೀಸರ ಮೇಲೆ ಹೆಚ್ಚಿನ ಆರೋಪಗಳು ಕೇಳಿ ಬರ್ತಿವೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸೋದು, ಅನ್ಯಾಯ, ಅಕ್ರಮ ಮಾಡಿದವರನ್ನು ಕಂಬಿ ಹಿಂದೆ ಕಳುಹಿಸಬೇಕಿದ್ದ ಪೊಲೀಸರೇ ಹಣಕ್ಕಾಗಿ ಅನ್ಯಾಯದ ಮಾರ್ಗ ಹಿಡದಿದ್ದಾರೆ ಅಂತ ಅನೇಕ ಬಿಜೆಪಿ ಶಾಸಕರು ಆರೋಪಿಸಿದ್ದರು. ಇದೀಗ ಸ್ವತ ಆಡಳಿತ ಪಕ್ಷದ ಶಾಸಕರು ಕೂಡಾ ಅವಳಿ ನಗರದ ಪೊಲೀಸರ ವರ್ತನೆಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ತಲೆದಂಡ

ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಗಳು ಬೇಕು

ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ, ಪೊಲೀಸರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವಳಿ ನಗರದಲ್ಲಿ ಪೊಲೀಸ ಇಲಾಖೆಯಲ್ಲಿ ಯಾವುದು ಸರಿಯಿಲ್ಲ. ಪೊಲೀಸರೇ ರಿಯಲ್ ಎಸ್ಟೇಟ್ ದಂಧೆ ಮಾಡೋದು, ಅಕ್ರಮ ದಂಧೆ ಮಾಡೋರಿಗೆ ಸಹಾಯ ಮಾಡೋದು ಸೇರಿದಂತೆ ಅನೇಕ ಆರೋಪಗಳು ಕೇಳಿ ಬರ್ತಿವೆ. ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗ್ತಿದೆ. ಹೀಗಾಗಿ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಗಳನ್ನು ಹುಬ್ಬಳ್ಳಿ ಧಾರವಾಡ ಕ್ಕೆ ಹಾಕುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಸಿಎಂ ಭೇಟಿ ಮಾಡಿ ಕೂಡಾ ಈ ಬಗ್ಗೆ ಮನವಿ ಸಲ್ಲಿಸುತ್ತೇನೆ. ಆದಷ್ಟು ಬೇಗನೆ ಅವಳಿ ನಗರದಲ್ಲಿರೋ ಅಧಿಕಾರಿಗಳ ವರ್ಗಾವಣೆ ಗ್ಯಾರಂಟಿ ಅಂತ ಹೇಳಿದ್ದಾರೆ.

ಹುಬ್ಬಳ್ಳಿ ಧಾರವಾಡ ಕೆಲ ಪೊಲೀಸರು ಹಣಕ್ಕಾಗಿ ಜನರನ್ನು ಪೀಡಿಸೋ ಆರೋಪಗಳು ಹೆಚ್ಚಾಗುತ್ತಿವೆ. ಗುಂಡಾಗಳು ಪೊಲೀಸ ಠಾಣೆಗಳಲ್ಲಿ ಯಾರ ಅಂಜಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು, ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ಪೊಲೀಸರ ಮೂಗಿನ ನೇರದಲ್ಲಿ ನಡೆದ್ರು ಅವರ ವಿರುದ್ಧ ಕಠಿಣ ಕ್ರಮವಾಗುತ್ತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನ್ಯಾಯ ಕೇಳಿಕೊಂಡು ಠಾಣೆಗೆ ಹೋದ್ರು ಅವರಿಂದ ಕೂಡಾ ಕೆಲವರು ಹಣ ವಸೂಲಿ ಮಾಡುತ್ತಿದ್ದಾರೆ. ಇನ್ನು ಅವಳಿ ನಗರದಲ್ಲಿ ಈ ಹಿಂದೆ ಪೊಲೀಸ ಕಮಿಷನರ್ ರೌಡಿ ಪರೇಡ್ ಮಾಡಿ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದರು. ಡ್ರಗ್ಸ್ ಪೆಡ್ಲರ್ ಗಳನ್ನು ಮಟ್ಟ ಹಾಕೋ ಕೆಲಸಕ್ಕೆ ಕೂಡಾ ಮುಂದಾಗಿದ್ದರು. ಆದ್ರೆ ಇವುಗಳಲ್ಲಿ ಕೂಡಾ ಕೆಲ ಅಧಿಕಾರಿಗಳು ಹಣ ಮಾಡಲು ಹೋಗಿದ್ದು ಗುಟ್ಟಾಗಿ ಉಳಿದಿಲ್ಲ.

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕೆಲ ದಕ್ಷ ಮತ್ತು ಪ್ರಮಾಣಿಕ ಪೊಲೀಸರು, ಪೊಲೀಸ ಅಧಿಕಾರಿಗಳು ಇದ್ದಾರೆ. ಆದ್ರೆ ಕೆಲ ಪೊಲೀಸರು ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ದರಿಂದ ಇಲಾಖೆಗೆ ಕೆಟ್ಟು ಹೆಸರು ಬರ್ತಿದೆ. ಹೀಗಾಗಿ ಗೃಹ ಇಲಾಖೆ ಅವಳಿ ನಗರದ ಪೊಲೀಸರ ಮೇಲೆ ಯಾವ ಕ್ರಮ ಕೈಗೊಳ್ಳುತ್ತದೆ, ಯಾರೆಲ್ಲರ ವರ್ಗಾವಣೆ ಯಾಗುತ್ತದೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ? – Kannada News | AC Blasts: What Caused Delhi’s Tragedy? Essential Safety Tips & Prevention Guide

ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಇತ್ತೀಚೆಗೆ ಎಸಿ ಸ್ಫೋಟಗೊಂಡು ಉಂಟಾದ ಭೀಕರ ಬೆಂಕಿಯಿಂದಾಗಿ 9 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸ್ಫೋಟ (AC blast) ಹೇಗಾಯಿತು, ಏನು ಕಾರಣ ಎಂದು ಇನ್ನೂವರೆಗೆ ಗೊತ್ತಾಗಿಲ್ಲ. ಎಸಿ ಯೂನಿಟ್​ನೊಳಗೆ ಶಾರ್ಟ್ ಸರ್ಕ್ಯೂಟ್ ಆಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಜ್ಞರ ಪ್ರಕಾರ, ಬೇಸಿಗೆಯ ಧಗೆಯಲ್ಲಿ ಏರ್ ಕಂಡೀಷನರ್​ಗಳು ಸ್ಫೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ. ಬೇಸಿಗೆಯ ತೀವ್ರ ಶಾಖದಿಂದಾಗಿ ಎಸಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇಂತಹ ಸ್ಫೋಟಗಳು ಸಂಭವಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಎಸಿ ಸ್ಫೋಟಕ್ಕೆ ಸಂಭಾವ್ಯ ಕಾರಣಗಳೇನು?

  • ಅತಿಯಾದ ಬಳಕೆ: ಬೇಸಿಗೆಯಲ್ಲಿ ದಿನವಿಡೀ ಎಸಿಗಳನ್ನು ಚಾಲನೆಯಲ್ಲಿಡುವುದರಿಂದ ಅವುಗಳಲ್ಲಿ ಅತಿಯಾದ ಉಷ್ಣತೆ (Overheating) ಉಂಟಾಗುತ್ತದೆ.
  • ಕಳಪೆ ನಿರ್ವಹಣೆ: ಸರಿಯಾದ ಸಮಯದಲ್ಲಿ ಸರ್ವಿಸ್ ಮಾಡಿಸದಿರುವುದು, ಫಿಲ್ಟರ್‌ಗಳಲ್ಲಿ ಧೂಳು ತುಂಬಿಕೊಳ್ಳುವುದು ಗಾಳಿಯ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತದೆ.
  • ವೈರಿಂಗ್ ದೋಷ: ಹಳೆಯ ವೈರಿಂಗ್ ಅಥವಾ ಶಾರ್ಟ್ ಸರ್ಕ್ಯೂಟ್ ಸ್ಫೋಟಕ್ಕೆ ಪ್ರಮುಖ ಕಾರಣವಾಗುತ್ತದೆ.
  • ಅಸಮರ್ಪಕ ಗ್ಯಾಸ್ ಒತ್ತಡ: ಕಂಪ್ರೆಸರ್‌ನಲ್ಲಿ ಗ್ಯಾಸ್ ಲೀಕ್ ಆಗುವುದು ಅಥವಾ ಒತ್ತಡದಲ್ಲಿ ಏರುಪೇರಾಗುವುದು ಅಪಾಯಕಾರಿ.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ತಂಪು ಸುದ್ದಿ: ಮೇ ಮಧ್ಯಭಾಗದಲ್ಲೇ ಮುಂಗಾರು ಎಂಟ್ರಿ!

ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳು

  • ನಿಯಮಿತ ಸರ್ವಿಸ್: ವರ್ಷಕ್ಕೆ ಕನಿಷ್ಠ ಎರಡು ಬಾರಿ ಪರಿಣಿತರಿಂದ ಎಸಿ ಸರ್ವಿಸ್ ಮಾಡಿಸಿ. ಮುಖ್ಯವಾಗಿ ಬೇಸಿಗೆ ಶುರುವಾಗುವ ಮೊದಲು ತಪಾಸಣೆ ಮಾಡುವುದು ಅತ್ಯಗತ್ಯ.
  • ಬ್ರೇಕ್ ನೀಡಿ: ಎಸಿಯನ್ನು ಸತತವಾಗಿ ಗಂಟೆಗಟ್ಟಲೆ ಓಡಿಸಬೇಡಿ. ಮಧ್ಯದಲ್ಲಿ ಸ್ವಲ್ಪ ಸಮಯ ಸ್ವಿಚ್ ಆಫ್ ಮಾಡುವ ಮೂಲಕ ಕಂಪ್ರೆಸರ್‌ಗೆ ವಿಶ್ರಾಂತಿ ನೀಡಿ.
  • ಸರಿಯಾದ ವೋಲ್ಟೇಜ್: ಎಸಿಗೆ ಸ್ಥಿರವಾದ ವಿದ್ಯುತ್ ಪೂರೈಕೆ ಇರಲಿ. ವೋಲ್ಟೇಜ್ ಸ್ಟೆಬಿಲೈಸರ್ ಬಳಸುವುದು ಸುರಕ್ಷಿತ.
  • ಧೂಳು ಸ್ವಚ್ಛಗೊಳಿಸಿ: ಹದಿನೈದು ದಿನಕ್ಕೊಮ್ಮೆ ಎಸಿಯ ಫಿಲ್ಟರ್‌ಗಳನ್ನು ನೀವೇ ಸ್ವಚ್ಛಗೊಳಿಸಿ.
  • ಹಳೆಯ ಎಸಿಗಳ ಬದಲಾವಣೆ: ನಿಮ್ಮ ಎಸಿ ತುಂಬಾ ಹಳೆಯದಾಗಿದ್ದರೆ (10 ವರ್ಷಕ್ಕಿಂತ ಹೆಚ್ಚು), ಅದನ್ನು ಬದಲಿಸುವುದು ಉತ್ತಮ. ಹಳೆಯ ಕಂಪ್ರೆಸರ್‌ಗಳು ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು.

ಎಸಿ ಸ್ಫೋಟಗೊಳ್ಳುವ ಸಾಧ್ಯತೆಗೆ ಎಚ್ಚರಿಕೆ ಸಂಕೇತಗಳು

  • ಎಸಿಯಿಂದ ವಿಚಿತ್ರವಾದ ಶಬ್ದ ಬರುವುದು.
  • ಸುಟ್ಟ ವಾಸನೆ ಬರುವುದು.
  • ಕೂಲಿಂಗ್ ದಿಢೀರನೆ ಕಡಿಮೆಯಾಗುವುದು.
  • ವೈರಿಂಗ್‌ನಲ್ಲಿ ಬಿಸಿಯಾಗುವುದು ಅಥವಾ ಕಿಡಿ ಕಂಡುಬರುವುದು.

ಇದನ್ನೂ ಓದಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ನ್ಯೂಜಿಲೆಂಡ್; ದೇಶಕ್ಕಾಗುವ ಪ್ರಯೋಜನಗಳೇನು?

ಇಂತಹ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಎಸಿ ಆಫ್ ಮಾಡಿ ತಂತ್ರಜ್ಞರನ್ನು ಸಂಪರ್ಕಿಸುವುದು ಜೀವ ಉಳಿಸಲು ಸಹಕಾರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೂರಾರು ಜೀವ ಉಳಿಸಿದ ವೈದ್ಯನಿಗೆ ಸಿಗಲಿಲ್ಲ ಚಿಕಿತ್ಸೆ; ಡಾಕ್ಟರ್ ದುರಂತ ಸಾವು – Kannada News | Doctor Dies Due to Lack of Medical Care in Remote Uttara Kannada Village

ಕಾರವಾರ, ಮೇ 03: ನೂರಾರು ರೋಗಿಗಳ ಜೀವ ಉಳಿಸಿದ್ದ ವೈದ್ಯರೊಬ್ಬರು (doctor) ಕೊನೆಗಳಿಗೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ತಿವ್ರ ಎದೆ ನೋವಿನಿಂದ ಅಸುನೀಗಿರುವ (death) ಹೃದಯವಿದ್ರಾವಕ ಘಟನೆ ಕರ್ನಾಟಕ ಗೋವಾ ಗಡಿಯಲ್ಲಿರುವ ಡಿಗ್ಗಿ ಎಂಬ ಗ್ರಾಮದಲ್ಲಿ ನಡೆದಿದೆ. ಡಾ.ಲೆನ್ವರ್ ಲೋಬೋ ಮೃತ ವೈದ್ಯ. ಸದ್ಯ ಇಡೀ ಡಿಗ್ಗಿ ಗ್ರಾಮವೇ ಡಾ. ಲೋಬೋ ಮರಣ ಹಿನ್ನೆಲೆ ಕಂಬನಿ ಮಿಡಿದಿದೆ.

ನಡೆದಿದ್ದೇನು?

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡಿಗ್ಗಿ ಕೂಗ್ರಾಮ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಈ ಡಿಗ್ಗಿ ಗ್ರಾಮಕ್ಕೆ ಹೋಗಲು ಕೆಲವರು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಕಳೆದ ಮೂರು ವರ್ಷಗಳಿಂದ ಡಾ.ಲೆನ್ವರ್ ಲೋಬೋ ಕೆಲಸ ಮಾಡುತ್ತಿದ್ದರು. ಶಿರಸಿಯ ಸ್ಕೋಡಾ ವೇಸ್ ಸಂಸ್ಥೆ ಕರಾರಿನ ಮೇಲೆ ಗ್ರಾಮದಲ್ಲಿ ಆಸ್ಪತ್ರೆ ನಡೆಸುತಿತ್ತು. ಚಿಕಿತ್ಸೆ ಪಡೆಯಲು ಗೋವಾ ರಾಜ್ಯದ ಕೂಗ್ರಾಮದಿಂದ ಜನರು ಬರುತ್ತಿದ್ದರು. ಡಾ.ಲೋಬೋ ಚಿಕಿತ್ಸೆಯಿಂದ ಅದೆಷ್ಟೋ ಜನರು ಗುಣಮುಖರಾಗಿದ್ದಾರೆ. ಅವರ ಕಾರ್ಯಕ್ಕೆ ಇಡೀ ಡಿಗ್ಗಿ ಗ್ರಾಮಕ್ಕೆ ಗ್ರಾಮವೇ ಶ್ಲಾಘಿಸುತ್ತಿತ್ತು. ಆದರೆ ದುರ್ವಿದಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: 13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ರಾತ್ರಿ ವೇಳೆ ವೈದ್ಯ ಲೋಬೋ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆದರೆ ಆಸ್ಪತ್ರೆಗೆ ಹೋಗಲು ವಾಹನ ಹಾಗೂ ಮೊಬೈಲ್ ನೆಟವರ್ಕ್ ಕೂಡ ಇರಲಿಲ್ಲ. ಹೀಗಾಗಿ ಬೆಳಗಿನ ಜಾವ ವಾಹನ ತರಿಸಿಕೊಂಡು ಜೋಯಿಡಾ ಕಡೆಗೆ ಹೊರಟ್ಟಿದ್ದರು. ಈ ವೇಳೆ ಎದೆನೋವು ಮತ್ತಷ್ಟು ಹೆಚ್ಚಳವಾಗಿ ಸೂಕ್ತ ಚಿಕಿತ್ಸೆ ಸಿಗದೇ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ವ್ಯಕ್ತಿ ಸಾವು

ಚಿತ್ರದುರ್ಗ ಜಿಲ್ಲೆಯ ಜಗಳೂರು ಮೂಲದ ವ್ಯಕ್ತಿ ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಐಎಂ ಫಯಾಜ್(45) ಮೃತ ವ್ಯಕ್ತಿ. ಜಗಳೂರಿನ ನಿವೃತ್ತ ಶಿಕ್ಷಕ ಇಬ್ರಾಹಿಂ ಸಾಬ್ ಅವರ ಪುತ್ರ ಫಯಾಜ್. ಟಿವಿ9ಗೆ ಮೃತ ಐಎಂ ಫಯಾಜ್ ಕುಟುಂಬ ಸದಸ್ಯರಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ಫಯಾಜ್ ಕುಟುಂಬಸ್ಥರ ಜೊತೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿಯ ಗುಡಿಕಲ್​​ ದರ್ಗಾದ ಉರುಸ್​ಗೆ ತೆರಳಿದ್ದರು. ಉರುಸ್ ಮುಗಿಸಿಕೊಂಡು ವಾಪಸಾಗುವಾಗ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

19 ಕೆಜಿ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​ಗೆ ಎಷ್ಟು ಖರ್ಚು ಆಗುತ್ತೆ ಗೊತ್ತಾ? – Kannada News | Mysuru Congress Leader M Laxman Revels how much expenditure commercial gas cylinder

ಮೈಸೂರು, (ಮೇ 03): ವಾಣಿಜ್ಯ ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕೇಂದ್ರ ಸರ್ಕಾರವ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಕಚ್ಚಾ ತೈಲಗೆ 19 ಕೆಜಿಗೆ ಎಷ್ಟು ಖರ್ಚು? 19 ಕೆ.ಜಿ ಗ್ಯಾಸ್ ಸಿಲಿಂಡರ್​​ ತಯಾರಿಕೆಗೆ ಎಷ್ಟು ಖರ್ಚಾಗುತ್ತೆ ಎನ್ನುವುದನ್ನು ಎಳೆ ಎಳೆಯಾಗಿಬಿಚ್ಚಿಟ್ಟಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಂ ಲಕ್ಷ್ಮಣ್, ಕಚ್ಚಾ ತೈಲಗೆ 19 ಕೆಜಿಗೆ 1900 ಖರ್ಚು ಬೀಳುತ್ತದೆ. ಸಿಪ್ಪಿಂಗ್, ಟ್ರಾನ್ಸ್ಫರ್ಟ್ ,ರೀಫೈನ್ ಡೀಲರ್ ಕಮಿಷನ್ ಸೇರಿ ಒಟ್ಟು 2370 ರೂ ಖುರ್ಚು ಬೀಳುತ್ತದೆ. ಕೇಂದ್ರ ಸರ್ಕಾರ ಈಗ ಮಾರಾಟ ಮಾಡುತ್ತಿರುವುದು 3155 ರೂಪಾಯಿಗೆ. ಇದರ ಜೊತೆ ಜಿಎಸ್‌ಟಿ ಬೇರೆ ಇರುತ್ತದೆ ಎಂದರು.

ಮೇ 1 ರಂದು ಕೇಂದ್ರ ಸರ್ಕಾರ ಏಕಾಏಕಿ 993 ರೂ ಗ್ಯಾಸ್ ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಿದೆ
ಈ ವರ್ಷದಲ್ಲೇ ಗ್ಯಾಸ್ ಬೆಲೆ ಐದು ಬಾರಿ ಜಾಸ್ತಿ ಮಾಡಿದ್ದಾರೆ. 2026 ಜನವರಿ ಆರಂಭದಲ್ಲಿ 1774 ರೂ ಇತ್ತು
ಇಂದು ಜಿಎಸ್‌ಟಿ ಸೇರಿ 4000 ರೂಗೆ ತಲುಪಿದೆ. ಗ್ಯಾಸ್ ಸಿಲಿಂಡರ್ ಗಳ ಕೃತಕ ಅಭಾವ ಸೃಷ್ಟಿ ಮಾಡಿದ್ದೇ ಕೇಂದ್ರ ಸರ್ಕಾರ. ಗೃಹ ಬಳಕೆ ಸಿಲಿಂಡರ್ ಬೆಲೆ ಕೂಡ ಶೀಘ್ರದಲ್ಲೇ ಜಾಸ್ತಿ ಮಾಡುತ್ತಾರೆ. ಈಗಾಗಲೇ ವೈಟ್ ಪೆಟ್ರೋಲ್ ಬೆಲೆ 7 ರೂ ಜಾಸ್ತಿ ಮಾಡಿದ್ದಾರೆ. ಎಕ್ಸ್ಪೋರ್ಟ್ ಪೆಟ್ರೋಲ್ ಗೆ 23 ರೂ ಕಡಿಮೆ ಮಾಡಿದ್ದಾರೆ. ಯುದ್ದ ಶುರುವಾದ ಮೇಲೆ ನಿಜವಾಗಿಯೂ ಲಾಸ್ ಆಗ್ತಾ ಇದೆಯಾ ? ಎಂದು ಪ್ರಶ್ನಿಸಿದರು.

ಯುದ್ದ ಆರಂಭವಾದ ಬಳಿಕ ದೇಶದ 35 ಸಾವಿರ ಕೋಟಿ ರೂ. ನಷ್ಟ ಆಗಿದೆ. 14 ಕೆ.ಜಿ ಸಿಲಿಂಡರ್ 915 ರೂ ಇದೆ. ಜಿಎಸ್‌ಟಿ 18% ಹಾಕುತ್ತಾರೆ. ಬಿಜೆಪಿ ಸರ್ಕಾರ ಬಡವರ ರಕ್ತವನ್ನು ಹೀರುತ್ತಿದೆ. ಕಾಂಗ್ರೆಸ್ ಸರ್ಕಾರ 1,2 ರೂ ಏರಿಕೆ ಮಾಡಿದ್ದಾರೆ ಬಾಯಿ ಬಡಿದುಕೊಳ್ಳುತ್ತಾರೆ. ರಾಜ್ಯ ಸರ್ಕಾರದ ವಿರುದ್ಧ ಮಾತಾಡೋರು ಕೇಂದ್ರ ಸರ್ಕಾರದ ವಿರುದ್ದ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ವಾಗ್ದಾಳಿ ನಡೆಸಿದರು.

Source link

ಮಂಡ್ಯ ವಿವಿ ಮುಚ್ಚಿಸಿದ್ರೆ ಬೆಂಕಿ ಹಚ್ಚಿಸುತ್ತೇವೆ: ಸ್ವ ಪಕ್ಷದ ಸಚಿವರ ವಿರುದ್ಧ ಗುಡುಗಿದ ಕೈ ಶಾಸಕ‌ – Kannada News | MLA Ravikumar Gowda Ganiga Warns His Government And Minister for Mandya VV close

ಮಂಡ್ಯ, (ಮೇ 03): ಮಂಡ್ಯ ವಿಶ್ವವಿದ್ಯಾಯಲಯ (Mandya University) ಮುಚ್ಚುಲು ಮುಂದಾಗಿರುವ ತಮ್ಮದೇ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಕೆಂಡಾಮಂಡಲರಾಗಿದ್ದಾರೆ. ಮಂಡ್ಯ ವಿವಿ ಮುಚ್ಚಿಸಿದ್ರೆ ಬೆಂಕಿ ಹಚ್ಚಿಸುತ್ತೇವೆ. ಸಚಿವನ್ನು ಮಂಡ್ಯ ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ ವಿವಿ ಯುವ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರವಿ ಗಣಿಗ, ನಾನು ಶಾಸಕನಾಗಿ ಇರ್ತೀನೋ ಇಲ್ಲವೋ. ಆದ್ರೆ ಮಂಡ್ಯ ವಿವಿ ಮುಚ್ಚಲು ಬಿಡಲ್ಲ‌‌. ನಾವು ಮೈಸೂರಿನ ಗುಲಾಮರಾಗಿ ಇರುವುದು ಬೇಡ. ನಮಗೆ ಸ್ವಂತ ವಿವಿ ಬೇಕು,ಇದು ಮಂಡ್ಯದ ಸ್ವಾಭಿಮಾನ ಎಂದು ಗುಡುಗಿದರು

ಕೆಲ ದಿನಗಳ ಹಿಂದೆ‌ ಮಂಡ್ಯ ಸೇರಿದಂತೆ ರಾಜ್ಯದ ಹೊಸ ವಿವಿಗಳನ್ನ ಮುಚ್ಚುವ ಬಗ್ಗೆ ಉನ್ನತ್ತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಪ್ರಸ್ತಾಪ ಮಾಡಿದ್ದರು. . ಆದರೆ ಮಂಡ್ಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಅದಾದ ಬಳಿಕ ಕಳೆದ ಸರ್ಕಾರದ ಅವಧಿಯಲ್ಲಿ ಮಂಡ್ಯ ವಿವಿ ಘೋಷಣೆಯಾಗಿತ್ತು. ಆದ್ರೆ ಹಣಕಾಸ ವಿಚಾರದಿಂದ ಮಂಡ್ಯ ವಿವಿ ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿತ್ತು. ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಸ್ವಪಕ್ಷದ ಶಾಸಕ ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Source link

Exit mobile version