Ramdan 2026: ಫೆ. 19ರಿಂದ ಪವಿತ್ರ ರಂಜಾನ್ ಮಾಸ ಪ್ರಾರಂಭ: ಉಪವಾಸ, ಪ್ರಾರ್ಥನೆಯ ಮಹತ್ವ ತಿಳಿಯಿರಿ – Kannada News | Ramazan 2026: Fasting Rules, Dates and Significance of Roza in Islam

ಪ್ರಪಂಚದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಸೌದಿ ಅರೇಬಿಯಾದಲ್ಲಿ, ಫೆಬ್ರವರಿ 17 ರಂದು ಪವಿತ್ರ ರಂಜಾನ್ ತಿಂಗಳ ಚಂದ್ರ ಕಾಣಿಸಿಕೊಂಡಿದ್ದು, ಫೆಬ್ರವರಿ 18ರಿಂದ ಉಪವಾಸಗಳು ಆರಂಭವಾಗಿವೆ. ಮೆಕ್ಕಾ, ಮದೀನಾ ಸೇರಿದಂತೆ ಜಗತ್ತಿನಾದ್ಯಂತ ಇಸ್ಲಾಂ ಧರ್ಮದವರು ತಮ್ಮ ಸ್ಥಳೀಯ ಮಸೀದಿಗಳಲ್ಲಿ ತರಾವೀಹ್ ಪ್ರಾರ್ಥನೆ (Taraweeh) ಗಳಿಂದ ಈ ಮಾಸವನ್ನು ಆಚರಿಸುತ್ತಿದ್ದಾರೆ. ಅರೇಬಿಯಾ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಸಾಮಾನ್ಯವಾಗಿ ರಂಜಾನ್ ಉಪವಾಸದ ದಿನಕ್ಕೆ ಒಂದು ದಿನದ ವ್ಯತ್ಯಾಸವಿರುತ್ತದೆ, ಹಾಗಾಗಿ ಭಾರತದಲ್ಲಿ ಮೊದಲ ಉಪವಾಸವು ಫೆಬ್ರವರಿ 19 ರಿಂದಲೇ ಪ್ರಾರಂಭವಾಗಲಿದೆ.

ರೋಜಾ ಎಂದರೇನು?

ರಂಜಾನ್ ಉಪವಾಸ ಇಸ್ಲಾಂ ಧರ್ಮದಲ್ಲಿ ಅತ್ಯಂತ ಶ್ರದ್ಧಾ ಆರಾಧನಾ ಮಾದರಿಯಾಗಿದೆ. ಇದನ್ನು ರೋಜಾ ಎಂದು ಕರೆಯಲಾಗುತ್ತದೆ. ಮುಸ್ಲಿಮರು ಸೂರ್ಯೋದಯಕ್ಕೆ ಮುಂಚಿತವಾಗಿ ತಮ್ಮ ಉಪವಾಸ ನಿರ್ಧರಿಸುತ್ತಾರೆ ಮತ್ತು ಸೂರ್ಯಾಸ್ತದವರೆಗೆ ಆಹಾರ, ನೀರು, ಪಾನೀಯ ತ್ಯಜಿಸುತ್ತಾರೆ. ಉಪವಾಸ ಮುಗಿಯುವ ಕ್ಷಣದಲ್ಲಿ ಸೂರ್ಯಾಸ್ತದ ನಂತರ ಕುಟುಂಬ ಮತ್ತು ಸಮೂಹದೊಂದಿಗೆ ಇಫ್ತಾರ್ ಮಾಡಲಾಗುತ್ತದೆ. ಉಪವಾಸವು ಕೇವಲ ಆಹಾರ, ನೀರಿನ ತ್ಯಾಗವಲ್ಲ; ಅದು ಮನಸ್ಸಿನ ಶುದ್ಧೀಕರಣ, ಮಾತಿನ ಸಂಯಮ, ನಡವಳಿಕೆಯ ಶಿಸ್ತಿಗೆ ಪ್ರಮುಖ ಅವಕಾಶವನ್ನಾಗಿ ಪರಿಗಣಿಸಲಾಗಿದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ರಂಜಾನ್ ಉಪವಾಸದ ಮುಖ್ಯ ನಿಯಮಗಳು:

  • ಸೆಹ್ರಿ (Sehri): ಸೂರ್ಯೋದಯಕ್ಕೂ ಮುನ್ನ, ಬೆಳಿಗ್ಗೆ ಮೊದಲಿನ ಆಹಾರವನ್ನು ಸೇವಿಸುವುದು. ಇದನ್ನು ಉಪವಾಸಕ್ಕೆ ಸಿದ್ಧತೆ ಎಂದು ಪರಿಗಣಿಸಲಾಗುತ್ತದೆ. ಸೆಹ್ರಿಯ ನಂತರ, ಸೂರ್ಯಾಸ್ತದವರೆಗೆ ಯಾವುದೇ ಆಹಾರ, ನೀರು, ಅಥವಾ ಪಾನೀಯ ಸೇವಿಸುವಂತಿಲ್ಲ.
  • ಇಫ್ತಾರ್ (Iftar): ಸೂರ್ಯಾಸ್ತದ ನಂತರ ಮೊದಲು ಖರ್ಜೂರ ಮತ್ತು ನೀರು ಸೇವಿಸಿ ಉಪವಾಸ ಮುರಿಯಲಾಗುತ್ತದೆ. ಸಾಮಾನ್ಯವಾಗಿ ಆರಂಭಿಸಿ, ನಂತರ ಇಫ್ತಾರ್ ಮಾಡಲಾಗುತ್ತದೆ.
  • ಪ್ರಾರ್ಥನೆಗಳು: ಐದು ಬಾರಿ ನಮಾಜ್ (ಪ್ರಾರ್ಥನೆ) ಮತ್ತು ರಾತ್ರಿ ತರಾವೀಹ್ ನಮಾಜ್ ಗಳು ಅದರ ಪವಿತ್ರತೆಗೆ ಮುಖ್ಯ ಪಾತ್ರ ವಹಿಸುತ್ತವೆ.

ರಂಜಾನ್ ತಿಂಗಳ ಮಹತ್ವ:

ರಂಜಾನ್ ಭಗವಂತ ಅಲ್ಲಾನಿಗೆ ಸಮರ್ಪಿತ ಸಮಯವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ತಿಂಗಳು ಭಗವಂತನೊಂದಿಗೆ ಹೆಚ್ಚು ಸಂಪರ್ಕ ಸಾಧಿಸುವ ಸಮಯ. ಉಪವಾಸದ ಜೊತೆಗೆ ಪ್ರಾರ್ಥನೆ, ದಾನಧರ್ಮ — ಜಕಾತ್ ಮತ್ತು ಸದಾಗಾ ಮೂಲಕ ಮಾನವೀಯತೆ, ಸಹೋದರತ್ವ ಮತ್ತು ಸಹಾಯಭಾವವನ್ನು ಉತ್ತೇಜಿಸುವುದೇ ರಂಜಾನ್ ಹಬ್ಬದ ಅತ್ಯಂತ ಮಹತ್ವದ ಸಂದೇಶವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಟಾವಿಗೆ ಬಂದಿದ್ದ ಬೆಳೆ ತಿಂದು ತೇಗಿದ ಒಂಟಿ ಸಲಗ: ಆನೆ ಓಡಿಸಲು ರೈತರ ಹರಸಾಹಸ – Kannada News | Wild Elephant Damages Maize Crop in Chikkarangashetty Doddi of Hanur Taluk, Chamarajanagara

ಚಾಮರಾಜನಗರ, ಫೆಬ್ರವರಿ 18: ಗಡಿ ನಾಡು ಚಾಮರಾಜನಗರದಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿ ಮೀರಿದೆ. ಕಟಾವಿಗೆ ಬಂದಿದ್ದ ಮೆಕ್ಕೆಜೋಳವನ್ನು ಒಂಟಿ ಸಲಗ ತಿಂದು ತೇಗಿದ್ದು, ತಡರಾತ್ರಿ 3 ಗಂಟೆಯವರೆಗೂ ಕಾಡಾನೆ ಓಡಿಸಲು ಹನೂರು ತಾಲೂಕಿನ ಕಾಡಂಚಿನ ಪ್ರದೇಶ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದಲ್ಲಿ ರೈತರು ಹರಸಾಹಸ ಪಟ್ಟಿದ್ದಾರೆ. ನಂಜಶೆಟ್ಟಿ ಎಂಬುವವರಿಗೆ ಸೇರಿದ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆ, 5 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಸಂಪೂರ್ಣ ಹಾಳು ಮಾಡಿದೆ. ಒಂಟಿ ಸಲಗವನ್ನು ಓಡಿಸುವ ವೇಳೆ ಬಿದ್ದು ರೈತನ ಕಾಲಿಗೆ ಗಾಯ ಕೂಡ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಹಾರಾಷ್ಟ್ರ : ಬಸ್, ಆಟೋ ನಡುವೆ ಭೀಕರ ಅಪಘಾತ, ತುಂಡು ತುಂಡಾಗಿ ಬಿದ್ದ ಆಟೋ, ಶಾಲಾ ಮಕ್ಕಳು ಸೇರಿ ನಾಲ್ವರು ಸಾವು – Kannada News | ST Bus Rams Into Auto, Four Killed on the Spot in Fatal Crash in Maharashtra

ಅಮರಾವತಿ, ಫೆಬ್ರವರಿ 18: ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಹಾಗೂ ಆಟೋ ನಡುವೆ ಅಪಘಾತ(Accident) ಸಂಭವಿಸಿದ್ದು, ಶಾಲಾ ಮಕ್ಕಳು ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ವರುದ್-ರಾಜುರಾ ಬಜಾರ್ ರಸ್ತೆಯಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. ಈ ಭೀಕರ ಅಪಘಾತದ ನಂತರ ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ, ಅಮರಾವತಿ ಜಿಲ್ಲೆಯ ವರುದ್ ತಾಲೂಕಿನ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು ರಿಕ್ಷಾದಲ್ಲಿ ಕೆಲವು ಸ್ಥಳೀಯ ನಾಗರಿಕರು ಕೂಡ ಇದ್ದರು.

ಪ್ರಯಾಣಿಕರಿಂದ ತುಂಬಿದ್ದ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ರಿಕ್ಷಾ ತುಂಡು ತುಂಡಾಗಿ ಬಿದ್ದಿತ್ತು. ರಿಕ್ಷಾದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಶಾಲಾ ಮಕ್ಕಳೂ ಸೇರಿದ್ದಾರೆ. ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮತ್ತೊಂದು ಘಟನೆ
ಯಾವತ್ಮಲ್ ಜಿಲ್ಲೆಯ ಅರ್ನಿ ಬಸ್ ನಿಲ್ದಾಣದಲ್ಲಿ ಅಪಘಾತವೊಂದು ಸಂಭವಿಸಿದೆ. ಯಾವತ್ಮಲ್​ನಿಂದ ಪುಸಾದ್ ಮಾರ್ಗವಾಗಿ ಚಲಿಸುತ್ತಿದ್ದ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಬ್ರೇಕ್ ಫೇಲ್ ಆದ ಪರಿಣಾಮ ಬಸ್ ನಿಲ್ದಾಣದಲ್ಲಿರುವ ಪಿಲ್ಲರ್​ಗೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಪ್ರಯಾಣಿಕರಿದ್ದ ಪರಿಣಾಮ ಆ ಪ್ರದೇಶಲ್ಲಿ ಗದ್ದಲ ಉಂಟಾಯಿತು. ಆದರೆ ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮತ್ತಷ್ಟು ಓದಿ: ಹೊಸಕೋಟೆ ಬಳಿ ಬೈಕ್, ಕ್ಯಾಂಟರ್ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ: 7 ಜನ ಸಾವು

ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಾಗ ಚಾಲಕ ಬ್ರೇಕ್ ಹಾಕಲು ಪ್ರಯತ್ನಿಸಿದ್ದಾರೆ, ಆದರೆ ತಾಂತ್ರಿಕ ದೋಷದಿಂದ ಬ್ರೇಕ್ ಕೆಲಸ ಮಾಡಲಿಲ್ಲ. ನಿಯಂತ್ರಣ ತಪ್ಪಿರುವುದನ್ನು ಅರಿತು ಚಾಲಕ ಮುನ್ನೆಚ್ಚರಿಕೆವಹಿಸಿ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಬಸ್ಸಿನ ಕ್ಯಾಬಿನ್​ಗೆ ಹಾನಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫ್ರೀಯಾಗಿ ಮೂವಿ ಸಿಗುತ್ತೆ ಎಂದು ಡೌನ್ ಲೋಡ್ ಮಾಡ್ತಿದ್ದಿರಾ? ಡೌನ್ ಲೋಡ್ ಆಗುವ ಸಮಯವೇ ಆಗುತ್ತೆ ವಂಚಕರಿಗೆ ವರದಾನ, ಹೇಗೆ ಗೊತ್ತಾ? – Kannada News | Beware Free Movie Downloads: Bengaluru Resident Lost Thousands to Cyber Criminals

ಫ್ರೀಯಾಗಿ ಮೂವಿ ಸಿಗುತ್ತೆ ಎಂದು ಡೌನ್ ಲೋಡ್ ಮಾಡ್ತಿದ್ದಿರಾ?ಡೌನ್ ಲೋಡ್ ಆಗುವ ಸಮಯವೇ ಆಗುತ್ತೆ ವಂಚಕರಿಗೆ ವರದಾನ, ಹೇಗೆ ಗೊತ್ತಾ?

ಬೆಂಗಳೂರು, ಫೆಬ್ರವರಿ 18: ಹೊಸ ಸಿನೆಮಾ ರಿಲೀಸ್ ಆಗಿದೆ, ಓಟಿಟಿಗೂ ಬಂದಿದೆ ಆದರೆ ಹಣ ಕೊಟ್ಟು ನೋಡಲು ಮನಸ್ಸಿಲ್ಲವೆಂದು ಫ್ರೀಯಾಗಿ ಎಪಿಕೆ ಫೈಲ್ ಡೌನ್​ಲೋಡ್ ಮಾಡುವ ಗೀಳಿಗೆ ಬಿದ್ದವರು ಹಲವರು ಇದ್ದಾರೆ. ಆದರೆ ಹೀಗೆ ಉಚಿತವಾಗಿ ಸಿನಿಮಾ (Free Movie) ನೋಡಲು ಮುಂದಾದ ಕಾಂಟ್ರಾಕ್ಟರ್ ಒಬ್ಬರು ಸೈಬರ್ ವಂಚನೆಗೆ ಒಳಗಾಗಿ 56 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓಟಿಪಿ ಇಲ್ಲದೆಯೇ ಹೋಯ್ತು ಹಣ!

ಅಪರಿಚಿತ ವ್ಯಕ್ತಿಯೊಬ್ಬರು ಬಾಲಕೃಷ್ಣ ಎಂಬುವವರಿಗೆ ವಾಟ್ಸಾಪ್ ಮೂಲಕ ಬಾರ್ಡರ್-2 ಚಿತ್ರದ ಎಪಿಕೆ ಫೈಲ್ ಕಳುಹಿಸಿದ್ದರು. ಈ ಲಿಂಕ್ ಮೂಲಕ ಚಿತ್ರವನ್ನು ಡೌನ್‌ಲೋಡ್ ಮಾಡಲು ಮುಂದಾದಾಗ, ಸೈಬರ್ ವಂಚಕರು ಬಾಲಕೃಷ್ಣ ಅವರ ಖಾಸಗಿ ಡೇಟಾವನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಚಿತ್ರ ಡೌನ್‌ಲೋಡ್ ಆಗುತ್ತಿರುವ ಸಮಯವನ್ನು ದುರುಪಯೋಗಪಡಿಸಿಕೊಂಡ ವಂಚಕರು, ನಂತರ ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ 56 ಸಾವಿರ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ ಆನ್ಲೈನ್​ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು!

ಇದಕ್ಕೂ ಮೊದಲು ಬ್ಯಾಂಕ್​ನಿಂದ ಎಟಿಎಮ್ ಕಾರ್ಡ್​ ಕಳುಹಿಸಲು ನಿಮ್ಮ ಮನೆಯ ವಿಳಾಸ ಕಳುಹಿಸಿ ಎಂಬ ಹುಸಿ ಕರೆಯನ್ನೂ ಬಾಲಕೃಷ್ಣ ಸ್ವೀಕರಿಸಿದ್ದರು. ಆದರೆ ಇವರು ತಮ್ಮ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಂಡಿರಲಿಲ್ಲ. ನಂತರ ಫೆಬ್ರವರಿ 2ರಂದು ಅವರ ವಾಟ್ಸಾಪ್ಗೆ ಬೇರೊಂದು ನಂಬರ್​ನಿಂದ ಮೂವಿಯ ಎಪಿಕೆ ಫೈಲ್ ಬಂದಿತ್ತು ಎಂದು ದೂರುದಾರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ನವವಿವಾಹಿತ ಜೋಡಿಯನ್ನು ಕಂಡೊಡನೆ ಶುಭಾಶಯ ಕೋರಿದ ಶಾಲಾ ಬಸ್ಸಿನಲ್ಲಿದ್ದ ಪುಟಾಣಿಗಳು – Kannada News | Bengaluru: Special wishes from kids on school bus to newlywed couple in Bengaluru

ಬೆಂಗಳೂರು, ಫೆಬ್ರವರಿ 18: ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡಿಗೂ ಒಂದಷ್ಟು ಆಸೆ ಆಕಾಂಕ್ಷೆಯಿರುವುದು ಸಹಜ. ಮದುವೆಯ (marriage) ಬಗ್ಗೆ ಸಾಕಷ್ಟು ಕನಸು ಕಾಣುತ್ತಾರೆ. ಆದರೆ ಕೆಲವು ಘಟನೆಗಳು ಹೊಸ ಜೀವನಕ್ಕೆ ಕಾಲಿಟ್ಟ ಕ್ಷಣವನ್ನು ನೆನಪಿನಲ್ಲಿ ಬುತ್ತಿಯಲ್ಲಿ ಶಾಶ್ವತವಾಗಿರುವಂತೆ ಮಾಡುತ್ತದೆ. ಬೆಂಗಳೂರಿನಲ್ಲಿ ನವವಿವಾಹಿತ ದಂಪತಿಗೆ ಶಾಲಾ ಬಸ್ಸಿನಲ್ಲಿದ್ದ ಮಕ್ಕಳು (children) ಶುಭಾಶಯಗಳನ್ನು ಕೋರಿದ್ದಾರೆ. ಮಕ್ಕಳ ಅನಿರೀಕ್ಷಿತ ಶುಭಾಶಯಗಳು ದಂಪತಿಗಳ ಮೊಗದಲ್ಲಿ ನಗು ಮೂಡಿಸಿದೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ.

ಹಿಮಾ ಜಿ (Hima G) ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋದ ಶೀರ್ಷಿಕೆಯಲ್ಲಿ ಯಾದೃಚ್ಛಿಕವಾಗಿ ಶಾಲಾ ಬಸ್ ಆಶೀರ್ವಾದವಾಗಿ ಬದಲಾದಾಗ. ಮದುವೆ ಮಂಟಪಕ್ಕೆ ಹೋಗುವ ದಾರಿಯಲ್ಲಿ, ಒಂದು ಶಾಲಾ ಬಸ್ ಹಾದುಹೋಯಿತು. ಇದ್ದಕ್ಕಿದ್ದಂತೆ ಇಡೀ ಬಸ್ ನಲ್ಲಿದ್ದ ಮಕ್ಕಳು ‘ಹ್ಯಾಪಿ ಮ್ಯಾರೇಜ್ಡ್ ಲೈಫ್!’ ಎಂದು ಕೂಗಲು ಪ್ರಾರಂಭಿಸಿದರು. ಜೋರಾದ ಧ್ವನಿಯಲ್ಲಿ ತುಂಬಾನೇ ಶುದ್ಧವಾಗಿತ್ತು. ಹಾಗೂ ಅನಿರೀಕ್ಷಿತವಾಗಿತ್ತು. ನಾನು ಅದನ್ನು ರೆಕಾರ್ಡ್ ಮಾಡಲು ಸಹ ಸಾಧ್ಯವಾಗಲಿಲ್ಲ. ಆದರೆ ಆ ಕ್ಷಣ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಶುದ್ಧ ಆಶೀರ್ವಾದಗಳು ನಿಜವಾಗಿಯೂ ಪುಟ್ಟ ಹೃದಯಗಳಿಂದ ಬರುತ್ತವೆ. ನೀವಿಬ್ಬರೂ ನಿಜವಾಗಿಯೂ ಧನ್ಯರು … ಪ್ರತಿಯೊಬ್ಬರೂ ತಮ್ಮ ಪ್ರಮುಖ ದಿನದಂದು ಅಂತಹ ಶುದ್ಧ, ಮುಗ್ಧ ಆಶೀರ್ವಾದಗಳನ್ನು ಪಡೆಯುವುದಿಲ್ಲ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ನವ ಜೋಡಿಯೂ ತಮ್ಮ ಮದುವೆ ಮಂಟಪದ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಆ ಸಮಯದಲ್ಲಿ ಅದೇ ಮಾರ್ಗದಲ್ಲಿ ಹಾದುಹೋಗುತ್ತಿದ್ದ ಶಾಲಾ ಬಸ್‌ನಲ್ಲಿದ್ದ ಮಕ್ಕಳು ಈ ನವಜೋಡಿಗೆ ಶುಭಾಶಯ ಕೋರಿದ್ದಾರೆ. ಬಸ್ಸಿನೊಳಗಿದ್ದ ಮಕ್ಕಳು “ಹ್ಯಾಪಿ ಮ್ಯಾರೇಜ್ ಲೈಫ್!” ಎಂದು ಒಂದೇ ಸಮನೇ ಕೂಗಲು ಪ್ರಾರಂಭಿಸಿದ್ದಾರೆ. ಮುಗ್ಧ ಮನಸ್ಸಿನ ಮಕ್ಕಳು ಮನಸಾರೆ ಶುಭಾಶಯ ಕೋರಿದ್ದನ್ನು ನೋಡಿ ಮದುಮಗನು ಖುಷಿಯಲ್ಲಿ ನಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ.

ಈ ವಿಡಿಯೋ ಮೂರು ಮಿಲಿಯನ್ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಇದು ಹಣದಿಂದ ಖರೀದಿಸಲು ಸಾಧ್ಯವಾಗದ ಆಶೀರ್ವಾದ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಕ್ಕಳು ಶುದ್ಧ ಮನಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ, ನಿಮಗೆ ಒಳ್ಳೆಯದು ಆಗಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಶಾಶ್ವತವಾಗಿ ನೆನಪಿಸಿಕೊಳ್ಳುವ ಕ್ಷಣಗಳು” ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ – Kannada News | India AI Impact Summit, several innovations from Bharat Gen to Sky Air are on display

ನವದೆಹಲಿ, ಫೆಬ್ರುವರಿ 18: ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ (AI Impact Summit) ಜಾಗತಿಕವಾಗಿ ಅಭಿವೃದ್ಧಿಯಾಗಿರುವ, ಅಭಿವೃದ್ಧಿಯಾಗುತ್ತಿರುವ ಎಐ ತಂತ್ರಜ್ಞಾನಗಳು, ನಾವೀನ್ಯತೆ, ಆವಿಷ್ಕಾರಗಳ ಪ್ರದರ್ಶನವಾಗುತ್ತಿದೆ. ಭಾರತದ ವತಿಯಿಂದ ನೂರಾರು ಸ್ಟಾಲ್​ಗಳಲ್ಲಿ ದೇಶದ ಎಐ ಭವಿಷ್ಯದ ದಿಗ್ಸೂಚಿಯನ್ನು ಕಾಣಬಹುದಾಗಿದೆ. ದೇಶೀಯವಾಗಿ ಅಭಿವೃದ್ಧಿಯಾದ ಎಐ ಫೌಂಡೇಶನಲ್ ಮಾಡಲ್​ಗಳಿಂದ ಹಿಡಿದು ರೋಬೋಟಿಕ್ಸ್​ವರೆಗೆ ನೂರಾರು ಇನ್ನೋವೇಶನ್​ಗಳನ್ನು ಭಾರತೀಯರು ಜಗತ್ತಿಗೆ ತೋರ್ಪಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಎಐ ಆವಿಷ್ಕಾರಗಳು ನಡೆಯುವುದು ನಿಶ್ಚಿತವೆನಿಸಿದೆ.

ದೆಹಲಿಯ ಗಲ್ಗೋಟಿಯಾ ಯೂನಿವರ್ಸಿಟಿ ಇದೇ ಶೃಂಗಸಭೆಯಲ್ಲಿ ಸ್ಟಾಲ್ ಸ್ಥಾಪಿಸಿ, ಚೀನಾ ನಿರ್ಮಿತ ರೋಬೋನಾಯಿಯನ್ನು ಆವಿಷ್ಕರಿಸಿದ್ದು ತಾನೆಂದು ಹೇಳಿಕೊಂಡು ವಿವಾದ ಹುಟ್ಟುಹಾಕಿದೆ. ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಗಲ್ಗೋಟಿಯಾ ಯೂನಿವರ್ಸಿಟಿಯ ಒಂದು ಪ್ರಮಾದ ಇಟ್ಟುಕೊಂಡು ಭಾರತದ ಎಐ ಸಾಧನೆಗಳನ್ನು ಹೀಗಳೆಯುವುದು ಸರಿಯಲ್ಲ ಎನ್ನುವ ವಾದ ಇದೆ. ಪತ್ರಕರ್ತ ತಪಸ್ ಭಟ್ಟಾಚಾರಿ ಅವರು ಸಮಿಟ್​ನಲ್ಲಿ ಪ್ರದರ್ಶನಗೊಂಡಿರುವ ಭಾರತದ ಇತರ ಎಐ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಕೆಲ ಮಹತ್ವದ ಎಐ ಆವಿಷ್ಕಾರಗಳು ಈ ಕೆಳಕಂಡಂತಿವೆ:

ಇದನ್ನೂ ಓದಿ: ಎಐ ಸಮಿಟ್​​ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾಡಲ್​ಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ

ಭಾರತ್ ಜೆನ್ ಎಐ

ಭಾರತ್ ಜೆನ್ ಸಂಸ್ಥೆ 22 ಭಾರತೀಯ ಭಾಷೆಗಳನ್ನು ಬೆಂಬಲಿಸುವಂತಹ 17 ಬಿಲಿಯನ್ ಪ್ಯಾರಾಮೀಟರ್​ನ ಮಲ್ಟಿಲಿಂಗ್ವಲ್ ಮಾಡಲ್ ಆದ ಪರಮ್ 27ಬಿ ಅನ್ನು ಅನಾವರಣಗೊಳಿಸಿದೆ. ಭಾರತದ ದತ್ತಾಂಶ ಬಳಸಿ ನಿರ್ಮಿತವಾಗಿರುವ ಈ ಎಐ ಮಾಡಲ್, ಆರೋಗ್ಯ, ಫಿನ್​ಟೆಕ್, ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಅಳವಡಿಕೆಯನ್ನು ಸುಲಭಗೊಳಿಸುತ್ತದೆ.

ParadigmIT ಸೋವರಿನ್ ಎಐ ಬಾಕ್ಸ್

ಪ್ಯಾರಾಡಿಗಮ್​ಐಟಿ ಕಂಪನಿಯ ಸೋವರಿನ್ ಎಐ ಬಾಕ್ಸ್ ಬಹುತೇಕ ದೇಶೀಯವಾಗಿ ನಿರ್ಮಿತಗೊಂಡ ಮಾಡಲ್. ಇದಕ್ಕೆ ಬೇಕಾಗುವ ದತ್ತಾಂಶವೆಲ್ಲವೂ ಭಾರತದ ಒಳಗೆಯೇ ಇರುತ್ತದೆ. ಸೂಕ್ಷ್ಮ ದತ್ತಾಂಶದ ರಕ್ಷಣೆ ಆಗುತ್ತದೆ.

ತಪಸ್ ಭಟ್ಟಾಚಾರಿ ಅವರ ಎಕ್ಸ್ ಪೋಸ್ಟ್

ಸ್ಕೈ ಏರ್ ಮೊಬಿಲಿಟಿ

ಸ್ಕೈ ಏರ್, ಅರೈವ್ ಎಐ ಮತ್ತು ಆಟ್ಟೋನಮಿ ಕಂಪನಿಗಳು ಜೊತೆಯಾಗಿ ಸೇರಿ ವಿಶ್ವದ ಮೊದಲ ಎಂಡ್-ಟು-ಎಂಡ್ ಆಟೊನಾಮಸ್ ಕಾಮರ್ಸ್ ಡೆಲಿವರಿ ಸಿಸ್ಟಂ ಅನ್ನು ನಿರ್ಮಿಸಿವೆ. ಇದರಲ್ಲಿ ಡ್ರೋನ್​ಗಳು ಪಾರ್ಸಲ್​ಗಳನ್ನು ಮನೆಬಾಗಿಲಿಗೆ ಸಾಗಿಸಬಲ್ಲವು. ಪ್ರಯೋಗಾವಧಿಯಲ್ಲಿ 36 ಲಕ್ಷಕ್ಕೂ ಅಧಿಕ ಡೋರ್ ಡೆಲಿವರಿ ಮಾಡಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಸ್ಕೈ ಏರ್ ಮೊಬಿಲಿಟಿ ಭಾರತೀಯ ಮೂಲದ ಕಂಪನಿಯಾಗಿದೆ. ಆಟ್ಟೋನಮಿ ಅಮೆರಿಕನ್ ಕಂಪನಿಯಾದರೂ ಭಾರತೀಯ ಮೂಲದವರು ಕಟ್ಟಿದ ಸಂಸ್ಥೆ.

ಇದನ್ನೂ ಓದಿ: ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್

ತಾರಕರಾಮ್ ಮಾರಂ

ತಾರಕರಾಮ್ ಮಾರಮ್ ನೇತೃತ್ವದ ವಿಶನ್ ಡಿಜಿಟಲ್ ಇಂಡಿಯಾದಿಂದ ಭಾರತದ ಮೊದಲ ಎಐ ಟ್ರೈನರ್ ಮೆಷೀನ್ ಅನಾವರಣಗೊಂಡಿದೆ. ಇಂಟೆಲ್ ನೆರವಿನಿಂದ ನಿರ್ಮಿಸಲಅದ ಎಐ ಲ್ಯಾಬ್ ಇದಾಗಿದೆ.

ಹಾಗೆಯೇ, ಸ್ಟಾರ್ಟಪ್ ಸನಾತನ ಎನ್ನುವ ಬೆಂಗಳೂರು ಮೂಲದ ಸಂಸ್ಥೆಯು ಭಾರತದ ಸಾಂಸ್ಕೃತಿಕ ಪರಂಪರೆ ರಕ್ಷಿಸಲು ಎಐ ಅಳವಡಿಕೆ ಮಾಡುತ್ತಿದೆ. ಇದೂ ಕೂಡ ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಗಮನ ಸೆಳೆದ ಆವಿಷ್ಕಾರವಾಗಿದೆ.

ಅಗ್ನೀವ ಮತ್ತು ಆದಿತ್ಯ ಎನ್ನುವ ಯುವ ವಿದ್ಯಾರ್ಥಿಗಳು ಸ್ಥಾಪಿಸಿದ ಡ್ರುಬ್ಲೆಟ್ ಇನ್ನೋವೇಶನ್ ಪ್ರೈ ಲಿ ಸಂಸ್ಥೆಯ ರೋಬೋಟಿಕ್ಸ್ ತಂತ್ರಜ್ಞಾನ, ಸರ್ವಮ್ ಎಐನ ಭಾರತೀಯ ಭಾಷೆಗಳ ಎಐ ಮಾಡಲ್​ಗಳು, ರಿಲಾಯನ್ಸ್ ಜಿಯೋದ ವಿವಿಧ ಎಐ ಆವಿಷ್ಕಾರಗಳು ಹೀಗೆ ನೂರಾರು ಭಾರತೀಯರ ಎಐ ಸಾಧನೆಗಳು ಸಮಿಟ್​ನಲ್ಲಿ ಅನಾವರಣಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರಿಗಳು ಎಷ್ಟೇ ಕಷ್ಟಪಟ್ಟು ಓದಿದ್ರೂ, ಹೆಬ್ಬೆಟ್ಟು ಹಾಕುವ ಮಂತ್ರಿಗಳ ಮಾತು ಕೇಳಲೇಬೇಕು: ಕಾಂಗ್ರೆಸ್​​ ಸಚಿವೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಸ್ಥಾನಮಾನ ಮತ್ತು ಅಧಿಕಾರಿಗಳ ಕಾರ್ಯವೈಖರಿಯ ನಡುವಿನ ಸಮರ ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಒಂದು ಮಾತು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. “ರಾಜಕೀಯದಲ್ಲಿ ಹೆಬ್ಬೆಟ್ಟು ಮುಖ್ಯಮಂತ್ರಿಯಾಗಬಹುದು, ಆದರೆ ಎಷ್ಟೇ ಓದಿ ಅಧಿಕಾರಿಗಳಾದರೂ ಅವರು ನಮ್ಮ ಕೆಳಗೆ ಕೆಲಸ ಮಾಡಬೇಕು ಎಂದು ತೆಲಂಗಾಣದ ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ. ಮುಲುಗಿನ ಅರಣ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (FCRI) ನೆನ್ನೆ (ಫೆ. 17) ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ. ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಅತೀವವಾಗಿ ಶ್ರಮಪಡಬೇಕು, ಹಗಲು-ರಾತ್ರಿ ಓದಬೇಕು. ಅಷ್ಟೆಲ್ಲಾ ಕಷ್ಟಪಟ್ಟು ಅಧಿಕಾರಿಗಳಾದ ಮೇಲೂ, ಅಂತಿಮವಾಗಿ ಅವರು ನಮ್ಮ (ರಾಜಕಾರಣಿಗಳ) ನಿರ್ದೇಶನದಂತೆ ನಡೆಯಬೇಕು” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ‘ಬಿಗ್ ಬ್ಯಾಷ್ ಲೀಗ್’

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್​ ಸೀಸನ್-16ರ ಮೊದಲ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ (ಚೆಪಾಕ್) ಈ ಪಂದ್ಯಕ್ಕೆ ಅತಿಥ್ಯ ವಹಿಸುವ ಸಾಧ್ಯತೆಯಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಈಗಾಗಲೇ ಚೆನ್ನೈಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಬಿಗ್ ಬ್ಯಾಷ್​ ಲೀಗ್​ ಪಂದ್ಯವನ್ನು ಭಾರತದಲ್ಲಿ ಆಯೋಜಿಸುತ್ತಿರುವುದೇಕೆ?

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಕಳೆದ 15 ಸೀಸನ್​ಗಳನ್ನು ಆಸ್ಟ್ರೇಲಿಯಾದಲ್ಲೇ ಆಯೋಜಿಸಿದ್ದರು. ಇದೀಗ ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ…

ಹೂಡಿಕೆದಾರರ ಸೆಳೆತ: ಬಿಬಿಎಲ್‌ನ ಕೆಲವು ಫ್ರಾಂಚೈಸಿಗಳನ್ನು (ತಂಡಗಳನ್ನು) ಖಾಸಗೀಕರಣಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಜಿಸಿದೆ. ಭಾರತದಲ್ಲಿ ಪಂದ್ಯ ಆಯೋಜಿಸುವ ಮೂಲಕ ಐಪಿಎಲ್ ತಂಡಗಳ ಮಾಲೀಕರು ಅಥವಾ ಭಾರತೀಯ ಉದ್ಯಮಿಗಳನ್ನು ಈ ಲೀಗ್‌ನಲ್ಲಿ ಹೂಡಿಕೆ ಮಾಡಲು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ.

ಮಾರುಕಟ್ಟೆ ವಿಸ್ತರಣೆ: ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿದೆ. ಇಲ್ಲಿನ ಅಪಾರ ಅಭಿಮಾನಿ ಬಳಗವನ್ನು ತಲುಪುವ ಮೂಲಕ ಲೀಗ್‌ನ ಜನಪ್ರಿಯತೆ ಮತ್ತು ಪ್ರಸಾರ ಹಕ್ಕುಗಳ ಮೌಲ್ಯವನ್ನು ಹೆಚ್ಚಿಸಲು ಆಸ್ಟ್ರೇಲಿಯಾ ಬಯಸಿದೆ.

ಜಾಗತಿಕ ಪೈಪೋಟಿ: ಪ್ರಸ್ತುತ ಸೌತ್ ಆಫ್ರಿಕಾ ಟಿ20 ಲೀಗ್ (SA20) ಮತ್ತು ಇಂಟರ್​ನ್ಯಾಷನಲ್ ಲೀಗ್ ಟಿ20 (ILT20-ಯುಎಇ) ಲೀಗ್‌ಗಳು ಭಾರತೀಯ ಉದ್ಯಮಿಗಳ ಹೂಡಿಕೆಯಿಂದಾಗಿ ವೇಗವಾಗಿ ಬೆಳೆಯುತ್ತಿವೆ. ಈ ಲೀಗ್‌ಗಳಿಗೆ ಪೈಪೋಟಿ ನೀಡಲು ಮತ್ತು ಐಪಿಎಲ್ ನಂತರದ ವಿಶ್ವದ 2ನೇ ಶ್ರೇಷ್ಠ ಲೀಗ್ ಎನಿಸಿಕೊಳ್ಳಲು ಬಿಗ್ ಬ್ಯಾಷ್ ಲೀಗ್​ ಹೊಸ ಪ್ರಯತ್ನಕ್ಕೆ ಕೈ ಹಾಕಲು ಮುಂದಾಗಿದೆ.

ಈಗಾಗಲೇ ಹಾಲಿ ಚಾಂಪಿಯನ್ ಪರ್ತ್ ಸ್ಕಾಚರ್ಸ್ ತಂಡವು ಭಾರತದಲ್ಲಿ ಉದ್ಘಾಟನಾ ಪಂದ್ಯವಾಡಲು ಒಪ್ಪಿಗೆ ಸೂಚಿಸಿದೆ. ಇತ್ತ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ನ ಅಧಿಕಾರಿಗಳು​ ಎಂ.ಎ. ಚಿದಂಬರಂ ಸ್ಟೇಡಿಯಂ (ಚೆಪಾಕ್)  ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಇದಾಗ್ಯೂ ಬಿಗ್ ಬ್ಯಾಷ್ ಲೀಗ್​ನ ಮೊದಲ ಪಂದ್ಯಕ್ಕೆ ಬಿಸಿಸಿಐ ಅನುಮತಿ ನೀಡಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಐಪಿಎಲ್​ನ ಜನಪ್ರಿಯತೆ ಕುಗ್ಗ ಬಾರದೆಂಬ ಕಾರಣಕ್ಕೆ ಬಿಸಿಸಿಐ ಭಾರತೀಯ ಪುರುಷ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿದೆ.

ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಬಿಗ್ ಬ್ಯಾಷ್ ಲೀಗ್ ಭಾರತದಲ್ಲೇ ಪಂದ್ಯ ಆಯೋಜಿಸಲು ಪ್ಲ್ಯಾನ್ ರೂಪಿಸುತ್ತಿದೆ. ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಲಿದ್ದಾರಾ ಎಂಬುದೇ ಈಗ ಕುತೂಹಲ.

 

Source link

ಗೊಂದಲದ ಗೂಡಾದ ‘ಡಾನ್ 3’ ಸಿನಿಮಾ; ಮಧ್ಯಸ್ಥಿಕೆ ವಹಿಸಿದ ಸ್ಟಾರ್ ಹೀರೋ – Kannada News | Don 3 Controversy: Aamir Khan Steps In to Resolve Ranveer Singh Farhan Akhtar Dispute

‘ಡಾನ್ 3’ ಸಿನಿಮಾ ಘೋಷಣೆ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈವರೆಗೆ ಚಿತ್ರದ ಶೂಟಿಂಗ್ ಶುರುವಾಗಿಲ್ಲ. ಇದಕ್ಕೆ ಕಾರಣವೂ ಇದೆ. ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ಡಾನ್ ಪಾತ್ರ ಮಾಡಬೇಕಿರೋ ರಣವೀರ್ ಸಿಂಗ್ ಮಧ್ಯೆ ಯಾವುದೂ ಸರಿ ಇಲ್ಲ. ರಣವೀರ್ ಸ್ಕ್ರಿಪ್ಟ್ ವಿಷಯದಲ್ಲಿ ಖುಷಿಯಾಗಿಲ್ಲ ಎನ್ನಲಾಗಿದೆ. ಸಂಭಾವನೆ ವಿಷಯದಲ್ಲೂ ಕಿರಿಕ್ ಆಗಿದೆ. ಹೀಗಿರುವಾಗಲೇ ‘ಡಾನ್ 3’ ಸಿನಿಮಾದ ವಿವಾದ ಬಗೆಹರಿಸಲು ಆಮಿರ್ ಖಾನ್ ಆಗಮಿಸಿದ್ದಾರೆ ಎನ್ನಲಾಗಿದೆ.

ಚಿತ್ರರಂಗದ ಬಗ್ಗೆ ಆಮಿರ್ ಖಾನ್ ಹೆಚ್ಚು ಕಾಳಜಿವಹಿಸುತ್ತಾರೆ. ಏನೇ ಆದರೂ ಸರಿ ಒಳ್ಳೆಯ ಸಿನಿಮಾ ಬರಬೇಕು ಎಂಬುದು ಅವರ ಗುರಿ. ‘ಡಾನ್ 3’ ಸಿನಿಮಾ ಸೆಟ್ಟೇರಿದರೆ ಒಂದಷ್ಟು ಮಂದಿ ಕೆಲಸ ಸಿಗುತ್ತದೆ. ಸಿನಿಮಾ ಹಿಟ್ ಆದರೆ, ಬಾಲಿವುಡ್​​ನಲ್ಲಿ ಒಂದೊಳ್ಳೆಯ ಬಿಸ್ನೆಸ್ ಆಗುತ್ತದೆ ಎಂಬುದು ಆಮಿರ್ ಉದ್ದೇಶ. ಹೀಗಾಗಿ, ಸಿನಿಮಾ ನಿಲ್ಲಬಾರದು ಎಂಬ ಉದ್ದೇಶವನ್ನು ಅವರು ಹೊಂದಿದ್ದಾರೆ.

‘ಡಾನ್ 3’ ಸಿನಿಮಾ ಸೆಟ್ಟೇರುವ ಮೊದಲೇ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಸಿನಿಮಾದ ಸ್ಕ್ರಿಪ್ಟ್ ಕೆಲಸ, ಟೀಸರ್ ಶೂಟ್ ಸೇರಿದಂತೆ ಸಾಕಷ್ಟು ಖರ್ಚು ಮಾಡಲಾಗಿದೆ. ಈಗ ರಣವೀರ್ ಸಿಂಗ್ ಸಿನಿಮಾದಿಂದ ಹೊರ ನಡೆದಿರುವುದರಿಂದ, ಅವರು 40 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಫರ್ಹಾನ್ ಬೇಡಿಕೆ ಇಟ್ಟಿದ್ದಾರೆ.

ಈ ಮಧ್ಯೆ ರಣವೀರ್ ಸಿಂಗ್ ಅವರು ಹೊಸ ಆರೋಪ ಮಾಡಿದ್ದಾರೆ. ‘ಫರ್ಹಾನ್ ಅಖ್ತರ್​​ಗೆ ಡಾನ್ ಪಾತ್ರದಲ್ಲಿ ಹೃತಿಕ್​​ನ ಆಯ್ಕೆ ಮಾಡಿಕೊಳ್ಳುವ ಆಲೋಚನೆ ಇದೆ’ ಎಂದಿದ್ದಾರೆ. ಆದರೆ, ಹೃತಿಕ್ ಈ ವಿಷಯವನ್ನು ಅಲ್ಲಗಳೆದಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ‘ಡಾನ್ 3’ ಗೊಂದಲದ ಗೂಡಾಗಿದೆ.

ಸದ್ಯದ ಮಾಹಿತಿ ಪ್ರಕಾರ ಆಮಿರ್ ಖಾನ್ ಅವರು ರಣವೀರ್ ಹಾಗೂ ಫರ್ಹಾನ್ ಒಡೆತನದ ಎಕ್ಸೆಲ್ ಎಂಟರ್​​ಟೇನ್​ಮೆಂಟ್ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನದಲ್ಲಿ ಇದ್ದಾರೆ. ಆಮಿರ್ ತಮ್ಮದೇ ಮನೆಯಲ್ಲಿ ಸಿನಿಮಾಗೆ ಸಂಬಂಧಿಸಿದವರನ್ನು ಕರೆಸಿ ಸಭೆ ಆಯೋಜನೆ ಮಾಡಿದ್ದರು ಎಂದು ಹೇಳಲಾಗುತ್ತಾ ಇದೆ. ಈ ಸಮಸ್ಯೆಗೆ ಪರಿಹಾರ ಸಿಕ್ಕರೆ ಒಂದೊಳ್ಳೆಯ ಸಿನಿಮಾ ನಿರೀಕ್ಷಿಸಬಹುದು.

ಇದನ್ನೂ ಓದಿ: ‘ಧುರಂಧರ್’ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ ‘ಡಾನ್ 3’ ಸಿನಿಮಾ ಭವಿಷ್ಯ

ಸದ್ಯದ ಬೆಳವಣಿಗೆಯಿಂದ ಶಾರುಖ್ ಖಾನ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಏಕೆಂದರೆ, ಶಾರುಖ್ ಖಾನ್ ಅವರು ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ನಟಿಸಿದ್ದರು. ‘ಡಾನ್ 3’ ಚಿತ್ರದಲ್ಲಿ ಅವರಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಲ್ಮಾನ್​ ಖಾನ್​ ಮದುವೆ ಆಗಿಲ್ಲ ಯಾಕೆ? ಕಾರಣ ಬಿಚ್ಚಿಟ್ಟಿದ್ದ ತಂದೆ ಸಲೀಂ – Kannada News | Why Salman Khan not married father Salim Khan explained once

ಸಲ್ಮಾನ್ ಖಾನ್ (Salman Khan) ಬಾಲಿವುಡ್​ನ ಸ್ಟಾರ್ ನಟ, ಅವರನ್ನು ಭಾಯ್​ ಜಾನ್ ಎಂದು ಸಹ ಕರೆಯಲಾಗುತ್ತದೆ. ಹಲವು ದಶಕಗಳ ಕಾಲ ಬಾಲಿವುಡ್​ ಸ್ಟಾರ್ ನಟನಾಗಿ ಉಳಿದಿರುವ ಸಲ್ಮಾನ್ ಖಾನ್ ಒಂದು ಸಮಯದಲ್ಲಿ ಯುವತಿಯರ ಫೇವರೇಟ್ ನಟರಾಗಿದ್ದರು. ಸಲ್ಮಾನ್ ಖಾನ್ ಅವರ ಹೆಸರು ಹಲವಾರು ನಟಿಯರೊಟ್ಟಿಗೆ ಕೇಳಿ ಬಂದಿದೆ. ಐಶ್ವರ್ಯಾ ರೈ, ಕತ್ರಿನಾ ಕೈಫ್, ಸೋಮಿ ಅಲಿ, ಸಂಗೀತಾ ಬಿಜಲಾನಿ ಒಬ್ಬಿಬ್ಬರಲ್ಲ. ಆದರೆ ಯಾರನ್ನೂ ಅವರು ಮದುವೆ ಆಗಿಲ್ಲ. ಈಗಲೂ ಸಹ ಸಲ್ಮಾನ್ ಖಾನ್ ಸಿಂಗಲ್. ಆದರೆ ಸಲ್ಮಾನ್ ಖಾನ್ ಏಕೆ ಮದುವೆ ಆಗಲಿಲ್ಲ, ಅವರ ಪ್ರೇಮಪ್ರಸಂಗಗಳು ಅರ್ಧದಲ್ಲೇ ಏಕೆ ನಿಂತು ಹೋದವು ಎಂಬ ಬಗ್ಗೆ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಹಿಂದೊಮ್ಮೆ ಹೇಳಿಕೊಂಡಿದ್ದರು.

ಸಲ್ಮಾನ್ ಖಾನ್​ ಭಿನ್ನ ಮನಸ್ಥಿತಿಯ ಬಗ್ಗೆ ಮಾತನಾಡಿದ್ದ ಸಲೀಂ ಖಾನ್, ‘ಸಲ್ಮಾನ್ ಖಾನ್​ ಮನಸ್ಥಿತಿ ತುಸು ಭಿನ್ನವಾದುದು, ಆತನಿಗೆ ತನ್ನ ತಾಯಿಯ ಮೇಲೆ ವಿಪರೀಪ ಪ್ರೀತಿ. ತಾನು ಪ್ರೀತಿಸುವ ಯುವತಿಯರಲ್ಲಿ ತನ್ನ ತಾಯಿಯನ್ನು ಕಾಣಲು ತವಕಿಸುತ್ತಿದ್ದ. ಸಲ್ಮಾನ್ ಖಾನ್ ಪ್ರೀತಿಸಿದ ಯುವತಿಯರು ಸಿನಿಮಾ ರಂಗದವರೇ ಆಗಿರುತ್ತಿದ್ದರು. ಅವರನ್ನು ಮದುವೆಯಾಗಿ ಆತ ತಮ್ಮ ತಾಯಿಯಂತೆ ಮನೆಯಲ್ಲಿ ಇರಿಸಲು ಬಯಸುತ್ತಿದ್ದ ಎನಿಸುತ್ತದೆ. ಆದರೆ ಸಿನಿಮಾ ರಂಗದ ಯುವತಿಯರು ಸಾಕಷ್ಟು ಆಸೆ, ವೃತ್ತಿಯಲ್ಲಿ ನಿರೀಕ್ಷೆಗಳನ್ನು ಇರಿಸಿಕೊಂಡವರಾಗಿರುತ್ತಾರೆ, ಅವರಿಗೆ ಮನೆಯಲ್ಲಿ ಕೂರುವುದು ಇಷ್ಟವಾಗಲ್ಲ, ಹಾಗಾಗಿ ಸಲ್ಮಾನ್ ಖಾನ್​ರ ಬಹುತೇಕ ಪ್ರೇಮಪ್ರಸಂಗಗಳು ಮದುವೆಯ ವರೆಗೂ ಬರಲೇ ಇಲ್ಲ’ ಎಂದಿದ್ದರು ಸಲೀಂ.

‘ತಾನು ಮದುವೆ ಆಗುವ ಯುವತಿ, ತನ್ನ ಮನೆಯಲ್ಲಿರಬೇಕು, ತಂದೆ-ತಾಯಿಗಳನ್ನು ನೋಡಿಕೊಳ್ಳಬೇಕು, ಮಕ್ಕಳ ಹೋಮ್​​ವರ್ಕ್ ಮಾಡಿಸಬೇಕು, ಮಕ್ಕಳನ್ನು ಶಾಲೆಗೆ ಬಿಡಲು ಹೋಗಬೇಕು, ಹೀಗೆ ತನ್ನ ತಾಯಿ ತನಗೆ ಮಾಡಿದ್ದೆಲ್ಲವನ್ನೂ ನನ್ನ ಪತ್ನಿ ಮಾಡಬೇಕು ಎಂಬ ನಿರೀಕ್ಷೆ ಸಲ್ಮಾನ್ ಖಾನ್​ನದ್ದಾಗಿತ್ತು ಆದರೆ ಅದು ಸಾಧ್ಯವಿರಲಿಲ್ಲ. ನಟಿಯರಿಗೆ ನಿರೀಕ್ಷೆಗಳಿರುತ್ತವೆ, ಆಕಾಂಕ್ಷೆಗಳಿರುತ್ತವೆ, ವೃತ್ತಿಯಲ್ಲಿ ಸಾಧನೆ ಮಾಡುವ ಹಂಬಲ ಇರುತ್ತದೆ, ಅವರಿಗೆ ಇದೆಲ್ಲ ಮಾಡಲು ಸಾಧ್ಯವಾಗುವುದಿಲ್ಲ, ಅದು ತಪ್ಪು ಸಹ ಅಲ್ಲ. ಹಾಗಾಗಿ ಸಲ್ಮಾನ್ ಖಾನ್​ ಮದುವೆ ಆಗಲಿಲ್ಲ’ ಎಂದಿದ್ದರು ಸಲೀಂ ಖಾನ್.

ಇದನ್ನೂ ಓದಿ:ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್; ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಸಹ ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿ, ‘ನನಗೆ ನನ್ನ ತಾಯಿಯೆಂದರೆ ಬಹಳ ಪ್ರೀತಿ, ನನ್ನ ಜೀವನದಲ್ಲಿ ನನಗೆ ಏನಾದರೂ ಅದ್ಭುತ ಉಡುಗೊರೆ ಸಿಕ್ಕಿದ್ದರೆ ಅದು ನನ್ನ ತಾಯಿಯೇ. ನನ್ನ ತಂದೆ ಬೇರೊಂದು ಮದುವೆ ಆದಾಗ ನನಗೆ ಅತೀವ ಸಿಟ್ಟು ಬಂದಿತ್ತು. ನನ್ನ ತಾಯಿಯ ದುಃಖವನ್ನು ನನಗೆ ನೋಡಲು ಆಗಿರಲಿಲ್ಲ. ನನ್ನ ತಂದೆ ಯಾವಾಗ ಮನೆಗೆ ಬರುವರೋ ಎಂದು ನನ್ನ ತಾಯಿ ಕಾಯುತ್ತಿದ್ದಾಗ ಅದನ್ನು ನೋಡಿ ನನಗೆ ಬಹಳ ದುಃಖವಾಗುತ್ತಿತ್ತು’ ಎಂದು ಸಲ್ಮಾನ್ ಖಾನ್ ಹೇಳಿದ್ದರು. ಸಲ್ಮಾನ್ ಖಾನ್ ತಾಯಿಯ ಹೆಸರು ಸುಶೀಲ ಆದರೆ ಸಲೀಂ ಖಾನ್, ಸುಶೀಲಾ ಅವರಿಗೆ ವಿಚ್ಛೇದನ ನೀಡಿ ಹೆಲೆನ್ ಅವರನ್ನು ವಿವಾಹವಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:23 pm, Wed, 18 February 26

Source link

Exit mobile version