ನಯನತಾರಾ VS ನಯನತಾರಾ; ‘ಟಾಕ್ಸಿಕ್’ ಜೊತೆ ರಿಲೀಸ್ ಆಗಲಿದೆ ನಟಿಯ ಮತ್ತೊಂದು ಸಿನಿಮಾ – Kannada News | Nayanthara vs Nayanthara: Box Office Clash as Toxic and HI Release in the Same Week

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ (Nayanthara) ಅಭಿಮಾನಿಗಳಿಗೆ ಆಗಸ್ಟ್ ತಿಂಗಳಲ್ಲಿ ದೊಡ್ಡ ಹಬ್ಬ ಕಾದಿದೆ. ಒಂದೇ ವಾರದಲ್ಲಿ ಅವರ ಎರಡು ವಿಭಿನ್ನ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿ ತಮ್ಮದೇ ಚಿತ್ರಗಳ ನಡುವೆ ಪೈಪೋಟಿ ಏರ್ಪಡುತ್ತಿದೆ. ಈ ನಿರ್ಧಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

ನಟ ಕವಿನ್ ಹಾಗೂ ನಯನತಾರಾ ಜೋಡಿಯಾಗಿ ನಟಿಸಿರುವ ‘ಹಾಯ್’ ಸಿನಿಮಾ ಆಗಸ್ಟ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನವ ನಿರ್ದೇಶಕ ವಿಷ್ಣು ಎಡವನ್ ನಿರ್ದೇಶಿಸಿದ್ದಾರೆ. ಇದೊಂದು ಸರಳ ಪ್ರೇಮಕಥೆಯ ಚಿತ್ರ. ಇದರಲ್ಲಿ ನಯನತಾರಾ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಿದ್ದಾರೆ.

ಇದಕ್ಕೂ ಎರಡು ದಿನ ಮೊದಲು ಅಂದರೆ ಆಗಸ್ಟ್ 26ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ. ಈ ಬೃಹತ್ ಆಕ್ಷನ್ ಸಿನಿಮಾದಲ್ಲಿ ನಯನತಾರಾ ಗಂಗಾ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಅವರ ದೊಡ್ಡ ತಾರಾಗಣವಿದೆ.

ದೊಡ್ಡ ಬಜೆಟ್‌ನ ‘ಟಾಕ್ಸಿಕ್’ ಜೊತೆಗೆ ‘ಹಾಯ್’ ಸಿನಿಮಾ ಬರುವುದು ಕೊಂಚ ಸಾಹಸದ ನಿರ್ಧಾರ ಎಂದೇ ಹೇಳಲಾಗುತ್ತಿದೆ. ಆದರೆ ಉತ್ತಮ ಕಥೆ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕರೆ ‘ಹಾಯ್’ ಚಿತ್ರವು ಖಂಡಿತ ಗೆಲ್ಲಲಿದೆ ಎಂಬ ಅಭಿಪ್ರಾಯ ಅನೇಕರದ್ದು. ಕುಟುಂಬ ಸಮೇತ ಬರುವ ಪ್ರೇಕ್ಷಕರನ್ನು ಈ ಸಿನಿಮಾ ಸೆಳೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಲು ನಯನತಾರಾ ಪಡೆದ ಸಂಭಾವನೆ ಬರೋಬ್ಬರಿ 12 ಕೋಟಿ ರೂ.?

ಒಂದೇ ವಾರದಲ್ಲಿ ನಯನತಾರಾ ನಟನೆಯ ಎರಡು ಸಿನಿಮಾಗಳು ತೆರೆಗೆ ಬರುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಬಾಕ್ಸ್ ಆಫೀಸ್ ಅಖಾಡದಲ್ಲಿ ಲೇಡಿ ಸೂಪರ್‌ಸ್ಟಾರ್ ಅವರ ಈ ಸಾಹಸಕ್ಕೆ ಜನ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಬರಿಮಲೆ ‘ವಾಕ್ದೋಷ’ ಪರಿಹಾರಕ್ಕೆ ವಿಶೇಷ ಪೂಜೆ: ಕೊಲ್ಲೂರು ಮೂಕಾಂಬಿಕಾ ಸೇರಿ 25 ಕ್ಷೇತ್ರಗಳಲ್ಲಿ ಧಾರ್ಮಿಕ ವಿಧಿವಿಧಾನ – Kannada News | Sabarimala ‘Vaakdosha’ Remedy: Special Rituals Held at 25 Temples Including Kollur Mookambika

ಶಬರಿಮಲೆ ‘ವಾಕ್ದೋಷ’ ಪರಿಹಾರImage Credit source: Pinterest

ಶಬರಿಮಲೆ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಪತ್ತೆಯಾಗಿದ್ದ ‘ವಾಕ್ದೋಷ’ ಪರಿಹಾರಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ (TDB) ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಿದೆ. ಮಂಡಲ-ಮಕರವಿಳಕ್ಕು(ಮಕರ ಜ್ಯೋತಿ) ತೀರ್ಥಯಾತ್ರೆ ಆರಂಭಕ್ಕೂ ಮುನ್ನ ಕೇರಳ ಮತ್ತು ಕರ್ನಾಟಕದ ಒಟ್ಟು 25 ಪ್ರಮುಖ ದೇವಾಲಯಗಳಲ್ಲಿ ವಿವಿಧ ಪರಿಹಾರ ಪೂಜೆಗಳು, ಪ್ರಾಯಶ್ಚಿತ್ತ ವಿಧಿವಿಧಾನಗಳು ಹಾಗೂ ಕಾಣಿಕೆ ಸಮರ್ಪಣೆಗಳನ್ನು ನೆರವೇರಿಸಲಾಗುತ್ತಿದೆ.

ಏನಿದು ಶಬರಿಮಲೆ ‘ವಾಕ್ದೋಷ’?

2018ರಲ್ಲಿ ಶಬರಿಮಲೆಯಲ್ಲಿ ನಡೆದ ಅಷ್ಟಮಂಗಲ ದೇವಪ್ರಶ್ನೆಯಲ್ಲಿ ‘ವಾಕ್ದೋಷ’ ಇರುವುದಾಗಿ ಸೂಚಿಸಲಾಗಿತ್ತು. ಭಕ್ತರೊಂದಿಗೆ ದೇವಸ್ಥಾನದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಅಸಭ್ಯವಾಗಿ, ಕಟುವಾಗಿ ಅಥವಾ ನಿಂದನಾತ್ಮಕವಾಗಿ ವರ್ತಿಸಿರುವುದು ಈ ದೋಷಕ್ಕೆ ಕಾರಣವೆಂದು ದೇವಪ್ರಶ್ನೆಯಲ್ಲಿ ತಿಳಿಸಲಾಗಿತ್ತು. ಈ ದೋಷದ ನಿವಾರಣೆಗಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಕಾಣಿಕೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಇದೀಗ TDB ವತಿಯಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೊಲ್ಲೂರು ಮೂಕಾಂಬಿಕೆಯಲ್ಲಿ ವಿಶೇಷ ಪೂಜೆ:

ಕರ್ನಾಟಕದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿಯೂ ವಿಶೇಷ ಪರಿಹಾರ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಇದರ ಭಾಗವಾಗಿ ಬೆಳ್ಳಿ ನಾಲಿಗೆ, ಬೆಳ್ಳಿಯ ಗಂಟೆ ಮತ್ತು ಬೆಳ್ಳಿಯ ಲೇಖನಿಯನ್ನು ಸಾಂಕೇತಿಕ ಕಾಣಿಕೆಯಾಗಿ ಸಮರ್ಪಿಸಲಾಗಿದೆ. ಆಗಸ್ಟ್ 3ರಂದು ಶಬರಿಮಲೆ ಸನ್ನಿಧಾನದಲ್ಲಿ ನಿರಪುತರಿ ಹಬ್ಬದ ಸಂದರ್ಭದಲ್ಲಿ ಪೂಜಿಸಲ್ಪಟ್ಟ ವಿಶೇಷ ಗಂಟೆಯನ್ನು ಕೊಲ್ಲೂರಿಗೆ ತರಲಾಗಿದೆ. ನವರಾತ್ರಿ ಉತ್ಸವದ ಬಳಿಕ ಇಲ್ಲಿ ಮಹಾಪೂಜೆ ನೆರವೇರಿಸಲು ನಿರ್ಧರಿಸಲಾಗಿದೆ.

ಕಾಸರಗೋಡು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಧಿವಿಧಾನ:

ಕಾಸರಗೋಡಿನ ಬೆಳ ಕುಮಾರಮಂಗಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ಹಾಗೂ 1,001ರೂ. ಮಹಾಕಾಣಿಕೆ ಸಮರ್ಪಣೆ ಪೂರ್ಣಗೊಂಡಿದೆ. ಕೊಲ್ಲೂರಿನಲ್ಲಿ ಮಹಾಪೂಜೆ ನಡೆಯುವ ದಿನವೇ ಇಲ್ಲಿಯೂ ‘ರಂಗಪೂಜೆ’ ನೆರವೇರಿಸಲಾಗುತ್ತದೆ. ಇದಲ್ಲದೆ ಕಣ್ಣೂರಿನ ಎಡಕ್ಕಾಡ್ ಮಹಾವಿಷ್ಣು ದೇವಸ್ಥಾನ, ತೃಶ್ಶೂರಿನ ವಡಕ್ಕುಂನಾಥನ್ ದೇವಸ್ಥಾನ, ಇರಿಂಜಾಲಕುಡದ ಕೂಡಲ್ಮಾಣಿಕ್ಯಂ ದೇವಸ್ಥಾನ ಮತ್ತು ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನ ಸೇರಿದಂತೆ ಹಲವು ಪ್ರಸಿದ್ಧ ಕ್ಷೇತ್ರಗಳಲ್ಲಿ ನಿರಮಾಲೆ, ನೆಯ್ಯಿವಿಳಕ್ಕು, ಹಾಲುಪಾಯಸ ಹಾಗೂ ವಿವಿಧ ಕಾಣಿಕೆ ಸಮರ್ಪಣೆಗಳು ನಡೆಯುತ್ತಿವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

‘ಸುವರ್ಣ ಯುಗ’ದ ನಿರೀಕ್ಷೆ:

ಈ ಕುರಿತು TDB ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ. ಜಯಕುಮಾರ್ ಮಾತನಾಡಿದ್ದು, ಎಲ್ಲಾ ಪರಿಹಾರ ಪೂಜೆಗಳು ಪೂರ್ಣಗೊಂಡ ಬಳಿಕ ದೇವಸ್ವಂ ಮಂಡಳಿ ಮತ್ತು ಶಬರಿಮಲೆ ಕ್ಷೇತ್ರದ ಇತಿಹಾಸದಲ್ಲಿ ಹೊಸ ‘ಸುವರ್ಣ ಯುಗ’ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 16ರಿಂದ ಶಬರಿಮಲೆ ಮಾಸಿಕ ಪೂಜೆ:

ಇದೇ ವೇಳೆ, ಮಲಯಾಳಂ ಚಿಂಗಂ ತಿಂಗಳ ಮಾಸಿಕ ಪೂಜೆಗಾಗಿ ಶಬರಿಮಲೆ ದೇವಸ್ಥಾನದ ಬಾಗಿಲು ಆಗಸ್ಟ್ 16ರಂದು ಸಂಜೆ ತೆರೆಯಲಿದೆ. ಆಗಸ್ಟ್ 21ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದೆ. ನಂತರ ಓಣಂ ಹಬ್ಬದ ವಿಶೇಷ ಪೂಜೆಗಳಿಗಾಗಿ ಆಗಸ್ಟ್ 24ರಿಂದ 28ರವರೆಗೆ ದೇವಸ್ಥಾನ ಮತ್ತೆ ತೆರೆಯಲಿದೆ. ಶಬರಿಮಲೆ ದರ್ಶನಕ್ಕೆ ಆಗಮಿಸುವ ಭಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ವರ್ಚುವಲ್ ಕ್ಯೂ (Virtual Queue) ಕಾಯ್ದಿರಿಸಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:39 am, Sat, 8 August 26

Source link

ರಾಜ್ಯದಲ್ಲಿ ಈ ವರ್ಷ ಶಾಲಾ ದಾಖಲಾತಿ ಭಾರಿ ಕುಸಿತ: 4 ಲಕ್ಷ ವಿದ್ಯಾರ್ಥಿಗಳ ಕೊರತೆ – Kannada News | School Admissions in Karnataka Drop by Four Lakh This Year

ಬೆಂಗಳೂರು, ಆಗಸ್ಟ್ 08: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಾದ್ಯಂತ ಶಾಲಾ ದಾಖಲಾತಿಗಳ (School Admissions) ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ ನಾಲ್ಕು ಲಕ್ಷದಷ್ಟು ಕಡಿಮೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಖಾಸಗಿ ಹಾಗೂ ಸರ್ಕಾರಿ ಶಾಲೆಗಳೆರಡರಲ್ಲೂ ಈ ಇಳಿಕೆ ಕಂಡುಬಂದಿದ್ದು, ಶಿಕ್ಷಣ ಇಲಾಖೆ ಮತ್ತು ಶಾಲಾ ಆಡಳಿತ ಮಂಡಳಿಗಳಲ್ಲಿ ಆತಂಕ ಮೂಡಿಸಿದೆ.

ವಯಸ್ಸಿನ ಮಿತಿ ನಿಯಮ ಮತ್ತು ಪೋಷಕರ ಗೊಂದಲ

ದಾಖಲಾತಿಗಳು ಈ ಮಟ್ಟಿಗೆ ಕುಸಿಯಲು ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ವಯಸ್ಸಿನ ಮಿತಿ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಒಂದನೇ ತರಗತಿ ಪ್ರವೇಶಕ್ಕೆ ಜೂನ್ 1ರ ವೇಳೆಗೆ ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿತ್ತು.

ಇದರಿಂದಾಗಿ ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಜನಿಸಿದ ಹಾಗೂ ಈಗಾಗಲೇ ಎಲ್‌ಕೆಜಿ, ಯುಕೆಜಿ ಮುಗಿಸಿ ಒಂದನೇ ತರಗತಿಗೆ ಹೋಗಬೇಕಿದ್ದ ಸುಮಾರು 4 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿಯುವ ಭೀತಿ ಎದುರಾಗಿತ್ತು. ಪೋಷಕರ ಭಾರಿ ಒತ್ತಡ ಮತ್ತು ಪ್ರತಿಭಟನೆಯ ನಂತರ ಸರ್ಕಾರ ಕೊನೆಯ ಕ್ಷಣದಲ್ಲಿ 60 ದಿನಗಳ ವಯೋಮಿತಿ ಸಡಿಲಿಕೆ ಘೋಷಿಸಿ, 5 ವರ್ಷ 10 ತಿಂಗಳು ತುಂಬಿದ ಮಕ್ಕಳಿಗೂ ಪ್ರವೇಶಾವಕಾಶ ನೀಡಿತು. ಆದಾಗ್ಯೂ, ಈ ದೀರ್ಘಾವಧಿ ಗೊಂದಲ ಹಾಗೂ ಇಲಾಖೆಯ ಆದೇಶಗಳ ವಿಳಂಬದಿಂದಾಗಿ ಸಾವಿರಾರು ಪೋಷಕರು ತಮ್ಮ ಮಕ್ಕಳನ್ನು ಈ ವರ್ಷ ಶಾಲೆಗೆ ಸೇರಿಸದೆ ಪ್ರವೇಶ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ.

ಖಾಸಗಿ ಶಾಲೆಗಳ ಶುಲ್ಕ ಏರಿಕೆಯ ಬಿಸಿ

ದಾಖಲಾತಿ ಕುಸಿತಕ್ಕೆ ವಯೋಮಿತಿ ಗೊಂದಲ ಮಾತ್ರವಲ್ಲದೆ, ಖಾಸಗಿ ಶಾಲೆಗಳಲ್ಲಿ ಕಂಡುಬಂದಿರುವ 10 ರಿಂದ 20 ಪ್ರತಿಶತದಷ್ಟು ಅತಿಯಾದ ಶುಲ್ಕ ಏರಿಕೆ ಕೂಡ ಮತ್ತೊಂದು ಪ್ರಮುಖ ಕಾರಣವಾಗಿದೆ. ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಒಮ್ಮೆಗೇ ಲಕ್ಷಾಂತರ ರೂಪಾಯಿ ಪ್ರವೇಶ ಶುಲ್ಕ ಭರಿಸುವುದು ಕಷ್ಟಸಾಧ್ಯವಾಗಿದ್ದು, ಇದು ಕೂಡ ದಾಖಲಾತಿ ಪ್ರಮಾಣ ತಗ್ಗಲು ಕಾರಣವಾಗಿದೆ ಎಂದು ಶಿಕ್ಷಣ ತಜ್ಞರು ವಿಶ್ಲೇಷಿಸಿದ್ದಾರೆ.

ಆದರೆ, ಕೇವಲ 60 ದಿನಗಳ ಸಡಿಲಿಕೆ ಸಾಲದು, ಇದನ್ನು ಕನಿಷ್ಠ 90 ದಿನಗಳಿಗೆ ವಿಸ್ತರಿಸಬೇಕು ಅಥವಾ ಡಿಸೆಂಬರ್ 31 ರವರೆಗಿನ ಅವಧಿಯನ್ನು ಪರಿಗಣಿಸಬೇಕು ಎಂದು ಪೋಷಕರ ಸಂಘಟನೆಗಳು ಇಂದಿಗೂ ಆಗ್ರಹಿಸುತ್ತಿವೆ. ಒಂದು ವೇಳೆ ಸರ್ಕಾರ ಮತ್ತಷ್ಟು ವಯೋಮಿತಿ ಸಡಿಲಿಕೆ ನೀಡದಿದ್ದರೆ, ಮುಂಬರುವ ದಿನಗಳಲ್ಲೂ ಈ ದಾಖಲಾತಿ ಕೊರತೆ ಮುಂದುವರಿಯುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ, 4 ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ – Kannada News | Karnataka Weather Forecast August 8: Heavy Rain Alert in Coastal Karnataka, Holiday Declared in Four Dakshina Kannada Taluks

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಮಳೆಯಾಯಿತು.Image Credit source: tv9

ಬೆಂಗಳೂರು, ಆಗಸ್ಟ್ 8: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಚುರುಕಾಗಿದ್ದು, ಇಂದು (ಆಗಸ್ಟ್ 8) ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ (Weather Forecast) ನೀಡಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರಿ ಮಳೆಯ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪುತ್ತೂರು, ಬೆಳ್ತಂಗಡಿ, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಇಂದು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ

ಆಗಸ್ಟ್ 8ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಮುಂದಿನ ಅವಧಿಯಲ್ಲೂ ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ. ಆಗಸ್ಟ್ 9ರಂದು ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಶಿವಮೊಗ್ಗ, ಚಿಕ್ಕಮಗಳೂರಿಗೆ ಯೆಲ್ಲೋ ಅಲರ್ಟ್

ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು 30ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಇದರೊಂದಿಗೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನಲ್ಲೂ ಮಳೆ

ಉತ್ತರ ಒಳನಾಡಿನ ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ 40ರಿಂದ 50 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರ ಮಳೆಯ ಮುನ್ಸೂಚನೆ ಇದೆ.

ಆಗಸ್ಟ್ 9ರಂದು ಉತ್ತರ ಒಳನಾಡಿನಲ್ಲೂ ಮಳೆಯ ಪ್ರಮಾಣ ತುಸು ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಬಹುದು.

ಕರಾವಳಿಯಲ್ಲಿ ಭಾರಿ ಮಳೆ ದಾಖಲು

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಾಮಾನ್ಯವಾಗಿದ್ದು, ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 7 ಸೆಂ.ಮೀ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ 7 ಸೆಂ.ಮೀ ಮಳೆ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೃದ್ಧಾಶ್ರಮದಲ್ಲಿರುವ ಹಿರಿಯ ನಟ ಮೋಹನ್ ಶರ್ಮಾ ನೆರವಿಗೆ ಧಾವಿಸಿದ ನಟ ಮೋಹನ್‌ ಲಾಲ್ – Kannada News | Mohanlal Steps in to Support Veteran Actor Producer Mohan Sharma Amid Financial and Health Crisis

ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ಮೋಹನ್ ಶರ್ಮಾ ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಯಿಂದಾಗಿ ವೃದ್ಧಾಶ್ರಮದಲ್ಲಿ ದಿನ ದೂಡುತ್ತಿದ್ದಾರೆ. ತಿಂಗಳ ವೈದ್ಯಕೀಯ ವೆಚ್ಚವನ್ನೂ ಭರಿಸಲಾಗದೆ ಕಷ್ಟಪಡುತ್ತಿರುವ ಅವರ ಪರಿಸ್ಥಿತಿಗೆ ಈಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಸ್ಪಂದಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಟ ಮೋಹನ್‌ಲಾಲ್, ‘ನಾನು ಅವರು ನಿರ್ಮಿಸಿದ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ನಾನು ಅವರೊಂದಿಗೆ ಮಾತನಾಡಿದ್ದು, ನಮ್ಮ ತಂಡದ ಸದಸ್ಯರೊಬ್ಬರು ಅವರನ್ನು ಶೀಘ್ರವೇ ಭೇಟಿಯಾಗಲಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನಾವು ಮಾಡುತ್ತೇವೆ. ಚಿತ್ರರಂಗ ಎಂಬುದು ಒಂದು ರೀತಿಯ ಮಾಯಾಲೋಕ. ಇಂತಹ ಪರಿಸ್ಥಿತಿ ಬಂದಾಗ ಅದನ್ನು ಕರ್ಮ ಅಥವಾ ವಿಧಿ ಎಂದು ಕರೆಯುತ್ತಾರೆ. ಅವರ ಸ್ಥಿತಿ ಕೇಳಿ ನನಗೆ ತುಂಬಾ ಬೇಸರವಾಯಿತು’ ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ‘ಯಾರಿಗಾದರೂ ಸಹಾಯ ಮಾಡುವುದು ಎಂದರೆ ಅದನ್ನು ಎಲ್ಲರಿಗೂ ಪ್ರಚಾರ ಮಾಡುವುದಲ್ಲ. ಶಬ್ದವಿಲ್ಲದೆ ಸಹಾಯ ಮಾಡುವ ಅನೇಕ ಜನರಿದ್ದಾರೆ. ನಾವು ಹಿಂದೆ ‘ನೆಲ್ಲು’, ‘ಚಟ್ಟಕ್ಕಾರಿ’ ಮತ್ತು ಅವರು ನಿರ್ಮಿಸಿದ ‘ಇವೈಡ್ ತೊಡಂಗುನ್ನು’ ಮುಂತಾದ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ಚಿತ್ರರಂಗದಲ್ಲಿ ಇಂತಹ ಸಂಕಷ್ಟದಲ್ಲಿರುವವರು ಇನ್ನೂ ಅನೇಕರಿರಬಹುದು’ ಎಂದು ಹೇಳಿದರು.

ಮೋಹನ್ ಶರ್ಮಾ ಅವರ ಕಷ್ಟದ ಕಥೆ:

ಆರೋಗ್ಯ ಸಮಸ್ಯೆ ಹಾಗೂ ವೈದ್ಯಕೀಯ ವೆಚ್ಚ: ಕಾಲಿನ ಶಸ್ತ್ರಚಿಕಿತ್ಸೆ ಮತ್ತು ಲಿಗಮೆಂಟ್ ಸಮಸ್ಯೆಯಿಂದಾಗಿ ಸುಮಾರು 4 ರಿಂದ 5 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದರ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ವರ್ಟಿಗೋ ಸಮಸ್ಯೆಯಿದ್ದು, ಪ್ರತಿದಿನ ಇನ್ಸುಲಿನ್ ಪಡೆಯಬೇಕಾಗಿದೆ. ಕೇವಲ ಔಷಧಗಳಿಗಾಗಿಯೇ ತಿಂಗಳಿಗೆ ಸುಮಾರು 35,000 ರೂಪಾಯಿ ಬೇಕಾಗುತ್ತದೆ.

ಸಿನಿಮಾ ನಷ್ಟ ಮತ್ತು ಆಸ್ತಿ ಮಾರಾಟ:

ತಮ್ಮ ಕೊನೆಯ ದ್ವಿಭಾಷಾ ಚಿತ್ರ ‘ಗ್ರಾಮಮ್’ ನಿರ್ಮಾಣಕ್ಕೆ ಅಂದಾಜಿಸಿದ್ದ 1.25 ಕೋಟಿ ರೂ. ಬಜೆಟ್ ಏರಿ 2 ಕೋಟಿ ರೂ. ತಲುಪಿತ್ತು. ಸಾಲ ತೀರಿಸಲು ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿದ್ದ ತಮ್ಮ ಮನೆಯನ್ನೇ ಮಾರಾಟ ಮಾಡಬೇಕಾಯಿತು.

ಇದನ್ನೂ ಓದಿ: ನನಗೆ ’ಕಾಂತಾರ’ ಚಿತ್ರದಲ್ಲಿ ಅವಕಾಶ ಕೊಡಿ ಎಂದ ಮೋಹನ್​ ಲಾಲ್ 

ನೆರವಿನ ಹಸ್ತ

ಪ್ರಸ್ತುತ ರೋಟರಿ ಕ್ಲಬ್ ಸ್ನೇಹಿತರ ಸಲಹೆಯಂತೆ ವೃದ್ಧಾಶ್ರಮದಲ್ಲಿ ನೆಲೆಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಈಗಾಗಲೇ ಅವರಿಗೆ ಆರ್ಥಿಕ ನೆರವು ನೀಡಿದ್ದಾರೆ. ಪ್ರಸ್ತುತ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ ನೆರವು ಕೋರಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್: ಆಗಸ್ಟ್ 12 ರಿಂದ 14 ರವರೆಗೆ ರೈಲುಗಳ ಸುರಕ್ಷತಾ ತಪಾಸಣೆ – Kannada News | Bengaluru Metro Pink Line: Safety Inspection of Trains from August 12 to 14

ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್

ಬೆಂಗಳೂರು, ಆಗಸ್ಟ್ 08: ನಮ್ಮ ಮೆಟ್ರೋ (Namma Metro) ಫೇಸ್-2 ಅಡಿಯಲ್ಲಿ ಬಹುನಿರೀಕ್ಷಿತ ಪಿಂಕ್ ಲೈನ್ (ಕಾಳೇನ ಅಗ್ರಹಾರದಿಂದ ನಾಗವಾರ) ಕಾರಿಡಾರ್‌ನ ವಾಣಿಜ್ಯ ಸಂಚಾರದ ಸಿದ್ಧತೆಗಳು ಕೊನೆಯ ಹಂತಕ್ಕೆ ತಲುಪಿವೆ. ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿರುವ ಹೊಸ ಮೆಟ್ರೋ ರೈಲುಗಳ ತಾಂತ್ರಿಕ ಹಾಗೂ ಸುರಕ್ಷತಾ ತಪಾಸಣೆಯನ್ನು ಆಗಸ್ಟ್ 12 ರಿಂದ 14 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕೋರಿಕೆಯ ಮೇರೆಗೆ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು (CCRS) ಈ ರೋಲಿಂಗ್ ಸ್ಟಾಕ್ (ರೈಲು ಪೆಟ್ಟಿಗೆಗಳು) ತಪಾಸಣೆಯನ್ನು ಕೈಗೊಳ್ಳಲಿದ್ದಾರೆ.

ಕೊತ್ತನೂರು ಡಿಪೋದಲ್ಲಿ ತಪಾಸಣೆ

ಮೆಟ್ರೋ ಅಧಿಕಾರಿಗಳ ಮಾಹಿತಿಯ ಪ್ರಕಾರ, ಪಿಂಕ್ ಲೈನ್‌ಗಾಗಿ ಬಿಇಎಂಎಲ್ (BEML) ಪೂರೈಸಿರುವ ಹೊಸ ರೈಲು ಸೆಟ್‌ಗಳನ್ನು ಕೊತ್ತನೂರು ಡಿಪೋದಲ್ಲಿ ತೀವ್ರ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗುವುದು. ರೈಲುಗಳ ಬ್ರೇಕಿಂಗ್ ಸಿಸ್ಟಮ್, ಸಿಗ್ನಲಿಂಗ್ ತಂತ್ರಜ್ಞಾನದೊಂದಿಗಿನ ಸಮನ್ವಯತೆ ಮತ್ತು ಸ್ವಯಂಚಾಲಿತ ಚಾಲನಾ ಸಾಮರ್ಥ್ಯಗಳನ್ನು ತಜ್ಞರ ತಂಡವು ಪರಿಶೀಲಿಸಲಿದೆ.

ಸಿಎಂಆರ್‌ಎಸ್ (CMRS) ಅಂತಿಮ ಪರಿಶೀಲನೆ

ಈ ಪ್ರಾಥಮಿಕ ತಪಾಸಣೆ ಮುಗಿದ ಬಳಿಕ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಪಿಂಕ್ ಲೈನ್‌ನ ಸಂಪೂರ್ಣ ಮೂಲಸೌಕರ್ಯಗಳ ವಿಸ್ತೃತ ಪರಿಶೀಲನೆ ನಡೆಸಲಿದ್ದಾರೆ.

  • ಪ್ರಾಯೋಗಿಕ ಸಂಚಾರ (Trial Runs)
  • ಸಿಗ್ನಲಿಂಗ್ ಮತ್ತು ಟೆಲಿಕಾಂ ವ್ಯವಸ್ಥೆ
  • ಸುರಕ್ಷತಾ ಜಾಲಗಳ ಸಂಯೋಜನೆ
  • ನಿಲ್ದಾಣಗಳು, ಟ್ರ್ಯಾಕ್ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ
  • ಪ್ರಯಾಣಿಕರ ಸೌಲಭ್ಯಗಳು ಮತ್ತು ತುರ್ತು ನಿರ್ಗಮನ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತದೆ.

ಹಂತ-ಹಂತವಾಗಿ ಮುಕ್ತಾಯಗೊಳ್ಳಲಿರುವ ಮಾರ್ಗ

ಪಿಂಕ್ ಲೈನ್ ಒಟ್ಟು 21.3 ಕಿಲೋಮೀಟರ್ ಉದ್ದವಿದ್ದು, ಇದರಲ್ಲಿ 7.5 ಕಿ.ಮೀ ಎತ್ತರಿಸಿದ ಮಾರ್ಗ (Elevated Stretch) ಹಾಗೂ 13.8 ಕಿ.ಮೀ ಅಂಡರ್​ ಗ್ರೌಂಡ್ ಮಾರ್ಗ ಒಳಗೊಂಡಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ನಿಲ್ದಾಣಗಳನ್ನು ಹೊಂದಿರುವ ಎತ್ತರಿಸಿದ ಮಾರ್ಗವು ಈಗಾಗಲೇ ಆರ್‌ಡಿಎಸ್‌ಒ (RDSO) ವೇಗ ತಪಾಸಣೆಯಲ್ಲಿ ಗಂಟೆಗೆ 90 ಕಿಮೀ ವೇಗದ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸಿಎಂಆರ್‌ಎಸ್‌ನಿಂದ ಅಂತಿಮ ಕ್ಲಿಯರೆನ್ಸ್ ಸಿಕ್ಕ ತಕ್ಷಣವೇ ಈ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಅಧಿಕಾರಿಗಳ ಪ್ರಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ಲಾ ಅಗತ್ಯ ಅನುಮೋದನೆಗಳು ಸಿಗುವ ನಿರೀಕ್ಷೆಯಿದೆ. ಉಳಿದ ಭೂಗತ ಮಾರ್ಗದ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷದ ಆರಂಭದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ಆಟಗಾರರಿಗೆ ಗೌತಮ್ ಗಂಭೀರ್ ಖಡಕ್ ವಾರ್ನಿಂಗ್! – Kannada News | IND vs SL: Gautam Gambhir’s Hard Talk to New Faces Ahead of Test Series

ಶ್ರೀಲಂಕಾ ವಿರುದ್ಧ ಆಗಸ್ಟ್ 15 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ನಿರ್ಣಾಯಕ ಟೆಸ್ಟ್ ಸರಣಿಗೂ ಮುನ್ನ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಆಟಗಾರರಲ್ಲಿ ಹೊಸ ಜೋಶ್ ತುಂಬಿದ್ದಾರೆ. ತಂಡದ ಸಾಂಪ್ರದಾಯಿಕ ‘ಪೆಪ್ ಟಾಕ್’ ಸಭೆಯಲ್ಲಿ ಮಾತನಾಡಿದ ಗಂಭೀರ್, ತಂಡಕ್ಕೆ ಆಯ್ಕೆಯಾಗಿರುವ ಮೂವರು ಹೊಸ ಮುಖಗಳನ್ನು ಆತ್ಮೀಯವಾಗಿ ಸ್ವಾಗತಿಸುವುದರ ಜೊತೆಗೆ, ಅಷ್ಟೇ ಕಠಿಣವಾದ ಎಚ್ಚರಿಕೆಯನ್ನೂ ನೀಡಿದ್ದಾರೆ. “ನಿಜವಾದ ಸವಾಲು ಈಗಷ್ಟೇ ಶುರುವಾಗಿದೆ, ಶ್ರೀಲಂಕಾದ ಪ್ರತಿ ಪ್ರಶ್ನೆಗೂ ನಮ್ಮ ಬಳಿ ಉತ್ತರ ಇರಬೇಕು” ಎಂದು ಗಂಭೀರ್ ತಿಳಿಸಿದ್ದಾರೆ.

ಮೂವರು ಹೊಸ ಮುಖಗಳಿಗೆ ಗಂಭೀರ್ ಹೇಳಿದ್ದೇನು?

ಭಾರತ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಇಬ್ಬರು ಆಟಗಾರರು ಹಾಗೂ ಒಬ್ಬರು ಸಪೋರ್ಟ್ ಸ್ಟಾಫ್ ಸದಸ್ಯರನ್ನು ಸ್ವಾಗತಿಸಿದ ಗಂಭೀರ್, ಅವರ ಶ್ರಮವನ್ನು ಶ್ಲಾಘಿಸಿದರು:

ಸರಾಂಶ್ ಜೈನ್ (ಆಲ್‌ರೌಂಡರ್): 33 ವರ್ಷದ ಸಾರಾಂಶ್ ಅವರನ್ನು ಸ್ವಾಗತಿಸಿದ ಗಂಭೀರ್, “ಇಲ್ಲಿಯವರೆಗೆ ತಲುಪಲು ನೀವು ದೇಶಿ ಕ್ರಿಕೆಟ್‌ನಲ್ಲಿ ಅಪಾರ ಕಷ್ಟಪಟ್ಟಿದ್ದೀರಿ. ಅವಕಾಶ ಸಿಕ್ಕಾಗ ದೇಶ ಮತ್ತು ನಿಮ್ಮ ಕುಟುಂಬ ಹೆಮ್ಮೆ ಪಡುವಂತೆ ಮಾಡಿ” ಎಂದರು.

ಆಖಿಬ್ ನಬಿ ದಾರ್ (ವೇಗದ ಬೌಲರ್): ಗಾಯಾಳು ಜಸ್​ಪ್ರೀತ್ ಬುಮ್ರಾ ಬದಲಿಗೆ ತಂಡ ಸೇರಿರುವ ಆಖಿಬ್‌ಗೆ ಶುಭ ಕೋರಿದ ಗಂಭೀರ್, “ನಿಮ್ಮ ಕಳೆದ ಸೀಸನ್ ಅದ್ಭುತವಾಗಿತ್ತು. ಜಮ್ಮು-ಕಾಶ್ಮೀರಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟಿರುವುದು ಸಣ್ಣ ಸಾಧನೆಯಲ್ಲ. ಆದರೆ ನೆನಪಿರಲಿ, ಇದು ಕೇವಲ ಆರಂಭವಷ್ಟೇ” ಎಂದು ಎಚ್ಚರಿಸಿದರು.

ಸುಭದೀಪ್ ಘೋಷ್ (ಫೀಲ್ಡಿಂಗ್ ಕೋಚ್): ಹೊಸ ಫೀಲ್ಡಿಂಗ್ ಕೋಚ್ ಸುಭದೀಪ್ ಅವರನ್ನು ಸ್ವಾಗತಿಸಿದ ಗಂಭೀರ್, ಅವರ ಅಗಾಧ ಅನುಭವ ಮತ್ತು ಶಕ್ತಿಯು ಟೀಮ್ ಇಂಡಿಯಾದ ಫೀಲ್ಡಿಂಗ್ ಗುಣಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟೆಸ್ಟ್ ಸರಣಿಗೆ ‘ಮಹಾ’ ಗುರಿಗಳು:

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಸದ್ಯ ಭಾರತ ತಂಡ 5ನೇ ಸ್ಥಾನದಲ್ಲಿದೆ. ಹೀಗಾಗಿ ಫೈನಲ್ ರೇಸ್‌ನಲ್ಲಿ ಉಳಿಯಲು ಈ ಲಂಕಾ ಪ್ರವಾಸ ಗಂಭೀರ್‌ಗೆ ಅತ್ಯಂತ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಅವರು ತಂಡದ ಮುಂದೆ 3 ಪ್ರಮುಖ ಗುರಿಗಳನ್ನು ಇಟ್ಟಿದ್ದಾರೆ:

ಪ್ರತಿ ಪ್ರಶ್ನೆಗೂ ಉತ್ತರ ಸಿದ್ಧವಿರಲಿ: “ಆಗಸ್ಟ್ 15ರ ಬೆಳಗ್ಗೆ ನಾವು ಮೊದಲು ಬ್ಯಾಟಿಂಗ್ ಮಾಡಲಿ ಅಥವಾ ಬೌಲಿಂಗ್ ಮಾಡಲಿ, ಶ್ರೀಲಂಕಾ ತಂಡ ಎಸೆಯುವ ಪ್ರತಿಯೊಂದು ಸವಾಲಿಗೂ (ಪ್ರಶ್ನೆಗೂ) ನಮ್ಮ ಬಳಿ ತಕ್ಕ ಉತ್ತರ ಸಿದ್ಧವಿರಬೇಕು” ಎಂದು ಗಂಭೀರ್ ಆಟಗಾರರಿಗೆ ತಿಳಿಸಿದ್ದಾರೆ.

ಎಲ್ಲೆ ಮೀರಿ ಶ್ರಮಿಸಿ: ನೆಟ್ಸ್ ಪ್ರ್ಯಾಕ್ಟಿಸ್ ವೇಳೆ ಆಟಗಾರರು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಎಲ್ಲೆಗಳನ್ನು ಮೀರಿ ಕಷ್ಟಪಡಬೇಕು ಮತ್ತು ಅಭ್ಯಾಸ ಪಂದ್ಯಗಳ ಸಂಪೂರ್ಣ ಲಾಭ ಪಡೆಯಬೇಕು ಎಂದು ಸೂಚಿಸಿದ್ದಾರೆ.

ಸ್ಪಿನ್ ಪಿಚ್‌ಗಳ ಸವಾಲು: ಗಾಲೆ ಮೈದಾನದ ಟರ್ನಿಂಗ್ ಪಿಚ್‌ಗಳಲ್ಲಿ ಶ್ರೀಲಂಕಾದ ಸ್ಪಿನ್ನರ್‌ಗಳನ್ನು ಎದುರಿಸಲು ಬ್ಯಾಟರ್‌ಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಗಂಭೀರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್​ಗೆ ಗುಡ್ ಬೈ ಹೇಳಿದ ಅಜಿಂಕ್ಯ ರಹಾನೆ

ಒಟ್ಟಾರೆಯಾಗಿ, ಗೌತಮ್ ಗಂಭೀರ್ ಅವರ ಈ ಮಾತುಗಳು ಟೀಮ್ ಇಂಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತೀಯ ಆಟಗಾರರು ಯಾವ ರೀತಿ ಕಮಾಲ್‌ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Source link

ರಾಮನ ಪಾತ್ರಕ್ಕೆ ಹೃತಿಕ್, ದಶರಥನ ಪಾತ್ರಕ್ಕೆ ಅಮಿತಾಭ್; ಈ ಕಥೆ ಗೊತ್ತಾ? – Kannada News | Before Ranbir Kapoor, Hrithik Roshan Was Choice for Lord Ram in Sanjay Khan’s Unreleased Ramayana

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ಗೂ ಸುಮಾರು 18 ವರ್ಷಗಳ ಮುನ್ನವೇ ಮತ್ತೊಬ್ಬರು ನಿರ್ದೇಶಕರು ಇಂತಹದ್ದೇ ದೊಡ್ಡ ಕನಸು ಕಂಡಿದ್ದರು ಎಂಬುದು ಹಲವರಿಗೆ ತಿಳಿದಿಲ್ಲ.

2008ರಲ್ಲೇ ತಯಾರಾಗಿತ್ತು ‘ದಿ ಲೆಜೆಂಡ್ ಆಫ್ ರಾಮ’ ಯೋಜನೆ

‘ಜೈ ಹನುಮಾನ್’ ಹಾಗೂ ‘ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’ ನಂತಹ ಪ್ರಸಿದ್ಧ ಧಾರಾವಾಹಿಗಳನ್ನು ನಿರ್ಮಿಸಿದ್ದ ಸಂಜಯ್ ಖಾನ್, 2008ರಲ್ಲಿ ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮಾಯಣವನ್ನು ಆಧರಿಸಿ ‘ದಿ ಲೆಜೆಂಡ್ ಆಫ್ ರಾಮ’ ಎಂಬ ಸಿನಿಮಾ ಮಾಡಲು ಯೋಜನೆ ರೂಪಿಸಿದ್ದರು.

ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರಕ್ಕೆ ಹೃತಿಕ್ ರೋಷನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಹಾಗೆಯೇ ಲಕ್ಷ್ಮಣನ ಪಾತ್ರದಲ್ಲಿ ಝಾಯೆದ್ ಖಾನ್ ಮತ್ತು ದಶರಥ ಮಹಾರಾಜನ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯಿಸಬೇಕಿತ್ತು.

ಈ ಕುರಿತು ಅಂದು ಮಾತನಾಡಿದ್ದ ಝಾಯೆದ್ ಖಾನ್, ‘ನನ್ನ ತಂದೆ ಕಳೆದ ಮೂರು ವರ್ಷಗಳಿಂದ ಈ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮನ ಪಾತ್ರಕ್ಕೆ ಹೃತಿಕ್ ರೋಷನ್ ಗಿಂತ ಸೂಕ್ತ ನಟ ಬೇರೊಬ್ಬರಿಲ್ಲ’ ಎಂದು ಹೇಳಿದ್ದರು. ಈ ಚಿತ್ರವನ್ನು ಇಂಗ್ಲಿಷ್‌ನ ‘ಲಾರ್ಡ್ ಆಫ್ ದಿ ರಿಂಗ್ಸ್’ ಶೈಲಿಯಲ್ಲಿ ಅತ್ಯಂತ ಆಧುನಿಕವಾಗಿ ತೆರೆಗೆ ತರಲು ಸ್ಕ್ರಿಪ್ಟ್ ಕೂಡ ಸಿದ್ಧವಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ಟೇಕಾಫ್ ಆಗಲೇ ಇಲ್ಲ.

ಶ್ರೀರಾಮನ ಪಾತ್ರದ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು?

ಈ ನಡುವೆ ನಿತೇಶ್ ತಿವಾರಿ ರಾಮಾಯಣದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಆಯ್ಕೆಯಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ವತಃ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದರು.

‘ನನಗೆ ಈ ಆಫರ್ ಬಂದಾಗ ‘ನಾನು ಈ ಪಾತ್ರಕ್ಕೆ ಅರ್ಹನೇ?’ ಎಂಬ ಪ್ರಶ್ನೆ ಮೂಡಿತ್ತು. ಆದರೆ ರಾಮಾಯಣ ಎಂಬುದು ಸಾವಿರಾರು ವರ್ಷಗಳಿಂದ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ಪ್ರತಿಯೊಬ್ಬ ಭಕ್ತನ ಮನಸ್ಸಿನಲ್ಲೂ ಶ್ರೀರಾಮನ ಬಗ್ಗೆ ಅವರದ್ದೇ ಆದ ಒಂದು ಕಲ್ಪನೆ ಇರುತ್ತದೆ. ಹೀಗಾಗಿ ಶ್ರೀರಾಮನ ಪಾತ್ರಕ್ಕೆ ನಿರ್ದಿಷ್ಟವಾಗಿ ‘ಇವರೇ ಸರಿ’ ಎನ್ನುವ ನಟ ಯಾರೂ ಇರಲು ಸಾಧ್ಯವಿಲ್ಲ. ಸರಿಯಾದ ಉದ್ದೇಶ, ಭಕ್ತಿ ಮತ್ತು ನಂಬಿಕೆಯಿಂದ ಈ ಪಾತ್ರವನ್ನು ನಿರ್ವಹಿಸುವುದಷ್ಟೇ ಮುಖ್ಯ’ ಎಂದು ರಣಬೀರ್ ತಿಳಿಸಿದ್ದರು.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ 8ರ ನಂಟು; ಇದರ ಹಿಂದಿದೆ ರೋಚಕ ಸಂಖ್ಯಾಶಾಸ್ತ್ರ

ಪ್ರಸ್ತುತ ನಮೀತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿರುವ ಈ ಬಿಗ್ ಬಜೆಟ್ ‘ರಾಮಾಯಣ’ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಹಾಗೂ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ 8ರ ನಂಟು; ಇದರ ಹಿಂದಿದೆ ರೋಚಕ ಸಂಖ್ಯಾಶಾಸ್ತ್ರ – Kannada News | Toxic Trailer Launch: Rocking Star Yash Event Encrypted with Mystery Number 8

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಭಾರತೀಯ ಚಿತ್ರರಂಗವೇ ಕಾದು ಕುಳಿತಿರುವ ‘ಟಾಕ್ಸಿಕ್’ ಸಿನಿಮಾದ (Toxic Movie) ಅದ್ದೂರಿ ಟ್ರೇಲರ್ ಲಾಂಚ್ ಕಾರ್ಯಕ್ರಮ ಇಂದು ಕಪಾಲಿ ಎಎಂಬಿ ಸಿನಿಮಾಸ್‌ನಲ್ಲಿ ಅತ್ಯಂತ ಖಾಸಗಿಯಾಗಿ ನಡೆಯುತ್ತಿದೆ. ಈ ಈವೆಂಟ್‌ನ ಬೆನ್ನಲ್ಲೇ ಇದೀಗ ಅಭಿಮಾನಿಗಳ ಕಣ್ಣು ಬಿದ್ದಿರುವುದು ಒಂದು ವಿಶಿಷ್ಟ ಲೆಕ್ಕಾಚಾರದ ಮೇಲೆ! ಅದೇನೆಂದರೆ, ಈ ಟ್ರೇಲರ್ ಲಾಂಚ್ ಕಾರ್ಯಕ್ರಮದ ಹಿಂದೆ ನಿಗೂಢ ‘8’ರ ಸಂಖ್ಯೆಯ ಬಲವಾದ ನಂಟಿದೆ.

ದಿನಾಂಕದಿಂದ ವರ್ಷದವರೆಗೆ ಎಂಟರ ಜಾಲ

ಇಂದು ಆಗಸ್ಟ್ 8. ಅಂದರೆ ದಿನಾಂಕ 8, ತಿಂಗಳು ಕೂಡ 8 (ಆಗಸ್ಟ್) ಮತ್ತು ಪ್ರಸ್ತುತ ವರ್ಷ 2026ರ ಕೊನೆಯ ಸಂಖ್ಯೆ 26 (2+6=8). ಹೀಗೆ ದಿನಾಂಕ, ತಿಂಗಳು ಹಾಗೂ ವರ್ಷ—ಮೂರೂ ಕೋನಗಳಿಂದಲೂ ಸೇರಿಸಿದರೆ ಸಿಗುವುದು ‘8’. ಇದು ಕೇವಲ ಕಾಕತಾಳೀಯವೋ ಅಥವಾ ಚಿತ್ರತಂಡ ಬೇಕೆಂದೇ ಮಾಡಿದ ಮಾಸ್ಟರ್ ಪ್ಲಾನೋ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಸಮಯದಲ್ಲೂ ಅಡಗಿದೆಯಾ ‘ಲಕಿ 8’ ಗುಟ್ಟು?

ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಇದುವರೆಗೂ ಟ್ರೇಲರ್ ರಿಲೀಸ್ ಆಗುವ ನಿಖರ ಸಮಯವನ್ನು ಬಹಿರಂಗಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಈ ಸಮಯದಲ್ಲೂ ‘8’ರ ಮ್ಯಾಜಿಕ್ ಇರಲಿದೆ. ಉದಾಹರಣೆಗೆ, ಸಂಜೆ 5:03 (5+3=8) ಅಥವಾ 6:02 (6+2=8), 7:01 (7+1)ರಂತೆ ಅಂಕಿಗಳ ಮೊತ್ತ 8 ಬರುವಂತಹ ಸಮಯಕ್ಕೇ ಟ್ರೇಲರ್ ಅನಾವರಣಗೊಳ್ಳುವ ಸಾಧ್ಯತೆಯಿದೆ.

ಹಿಂದಿನ ಹಾಡಿನಲ್ಲೂ ಮಿಂಚಿದ್ದ 8ರ ರಹಸ್ಯ

ಈ ‘8’ರ ಟ್ರೆಂಡ್ ಇಂದಿನ ಟ್ರೇಲರ್‌ಗೆ ಮಾತ್ರ ಸೀಮಿತವಾಗಿಲ್ಲ. ಈ ಮೊದಲು ಬಿಡುಗಡೆಯಾಗಿದ್ದ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಕೂಡ ಬೆಳಿಗ್ಗೆ 11:33ಕ್ಕೆ ರಿಲೀಸ್ ಆಗಿತ್ತು. ಆ ಸಮಯದ ಅಂಕಿಗಳನ್ನು ಕೂಡಿ ನೋಡಿದರೆ (1+1+3+3) ಬರುವ ಮೊತ್ತವೂ ‘8’ ಆಗಿತ್ತು.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೇಲರ್ ಲಾಂಚ್ ಕಾರ್ಯಕ್ರಮದ ವಿಶೇಷತೆಗಳೇನು? ಇಲ್ಲಿದೆ ವಿವರ

ರಿಲೀಸ್ ದಿನಾಂಕ

‘ಟಾಕ್ಸಿಕ್’ ಸಿನಿಮಾ 26-08-26ಕ್ಕೆ ರಿಲೀಸ್ ಆಗುತ್ತಿದೆ. ಇಲ್ಲಿಯೂ 8ರ ನಂಟು ಅಡಗಿದೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಯಶ್ ಹುಟ್ಟಿದ್ದು 8ನೇ ತಾರೀಕಿನಂದು. ಹೀಗಾಗಿ, ಅವರಿಗೆ ಈ ಸಂಖ್ಯೆ ಲಕ್ಕಿ ಅಂತ ಪರಿಗಣಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್​ಗೆ ಗುಡ್ ಬೈ ಹೇಳಿದ ಅಜಿಂಕ್ಯ ರಹಾನೆ – Kannada News | Ajinkya Rahane retired from IPL

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೇರಿದಂತೆ ಭಾರತೀಯ ಕ್ರಿಕೆಟ್‌ನ ಎಲ್ಲಾ ಫಾರ್ಮ್ಯಾಟ್‌ಗಳಿಗೂ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ರಹಾನೆ ಯುಗಕ್ಕೆ ತೆರೆ ಬಿದ್ದಿದೆ.

ಕೆಲ ದಿನಗಳ ಹಿಂದೆಯಷ್ಟೇ 38 ವರ್ಷದ ಹಿರಿಯ ಆಟಗಾರ ರಹಾನೆ, ಸಾಮಾಜಿಕ ಜಾಲತಾಣದಲ್ಲಿ ಭಾವುಕ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ ನಿವೃತ್ತಿ ನಿರ್ಧಾರವನ್ನು ಜಗತ್ತಿಗೆ ತಿಳಿಸಿದ್ದರು. ಈ ವಿಡಿಯೋಗೆ “ಕ್ಯಾಪ್ ನಂಬರ್ 278, ಸೈನಿಂಗ್ ಆಫ್” ಎಂಬ ಶೀರ್ಷಿಕೆ ನೀಡುವ ಮೂಲಕ ಅಭಿಮಾನಿಗಳಿಗೆ ಮತ್ತು ಬಿಸಿಸಿಐಗೆ ಧನ್ಯವಾದ ಅರ್ಪಿಸಿದ್ದರು. ಇದೀಗ ಐಪಿಎಲ್​ಗೂ ಗುಡ್ ಬೈ ಹೇಳಿ ವಿದೇಶಿ ಲೀಗ್​ನತ್ತ ಮುಖ ಮಾಡಿದ್ದಾರೆ.

ಕೆಕೆಆರ್ ತಂಡಕ್ಕೆ ಹೊಸ ನಾಯಕ:

ಅಜಿಂಕ್ಯ ರಹಾನೆ ತಮ್ಮ ಕೊನೆಯ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವನ್ನು ಮುನ್ನಡೆಸಿದ್ದರು. ಇದೀಗ ಅವರು ದಿಢೀರ್ ಆಗಿ ಎಲ್ಲಾ ಮಾದರಿಯ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ, ಮುಂಬರುವ ಐಪಿಎಲ್ ಸೀಸನ್‌ಗಾಗಿ ಹೊಸ ನಾಯಕನನ್ನು ಹುಡುಕಬೇಕಾದ ದೊಡ್ಡ ಜವಾಬ್ದಾರಿ ಕೆಕೆಆರ್ ಫ್ರಾಂಚೈಸಿ ಹೆಗಲಿಗೇರಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಕೆಕೆಆರ್ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ.

6 ತಂಡಗಳ ಪರ ಕಣಕ್ಕಿಳಿದಿದ್ದ ರಹಾನೆ:

ಅಜಿಂಕ್ಯ ರಹಾನೆ ತಮ್ಮ ಐಪಿಎಲ್​ ವೃತ್ತಿಜೀವನದಲ್ಲಿ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಅದರಲ್ಲಿ ಎರಡು ತಂಡಗಳ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು.

  • ಮುಂಬೈ ಇಂಡಿಯನ್ಸ್,
  • ರಾಜಸ್ಥಾನ್ ರಾಯಲ್ಸ್
  • ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
  • ಡೆಲ್ಲಿ ಕ್ಯಾಪಿಟಲ್ಸ್
  • ಚೆನ್ನೈ ಸೂಪರ್ ಕಿಂಗ್ಸ್
  • ಕೊಲ್ಕತ್ತಾ ನೈಟ್ ರೈಡರ್ಸ್​.

ರಹಾನೆ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಗಳ ನಾಯಕನಾಗಿ ಕಣಕ್ಕಿಳಿದಿದ್ದರು. ಅದರಲ್ಲೂ ಕೆಕೆಆರ್ ತಂಡದ ನಾಯಕನಾಗಿಯೇ ಕೊನೆಯ ಐಪಿಎಲ್ ಪಂದ್ಯವಾಡಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಗುಡ್ ಬೈ ಹೇಳಿದ್ದಾರೆ.

ರಹಾನೆ ಐಪಿಎಲ್ ವೃತ್ತಿಜೀವನ:

  • ಒಟ್ಟು ಪಂದ್ಯಗಳು: 212
  • ಒಟ್ಟು ರನ್‌ಗಳು: 5,367
  • ಬ್ಯಾಟಿಂಗ್ ಸರಾಸರಿ: 30.15
  • ಶತಕ / ಅರ್ಧಶತಕ: 2 ಶತಕ ಹಾಗೂ 35 ಅರ್ಧಶತಕಗಳು

ವಿದೇಶಿ ಲೀಗ್‌ನತ್ತ ರಹಾನೆ!

ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಂತೆಯೇ ಅಜಿಂಕ್ಯ ರಹಾನೆ ಅವರಿಗೆ ವಿದೇಶಿ ಲೀಗ್‌ಗಳಿಂದ ಭರ್ಜರಿ ಆಫರ್‌ಗಳು ಬರಲು ಆರಂಭಿಸಿವೆ. ಬಿಸಿಸಿಐ ನಿಯಮಾವಳಿಗಳ ಪ್ರಕಾರ ನಿವೃತ್ತರಾದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಲು ಮುಕ್ತಾವಕಾಶವಿರುತ್ತದೆ. ಅದರಂತೆ, ಆಗಸ್ಟ್ 26 ರಿಂದ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ಟೂರ್ನಿಯಲ್ಲಿ ರಹಾನೆ ಅವರು ‘ಆಮ್‌ಸ್ಟರ್ಡ್ಯಾಮ್ ಫ್ಲೇಮ್ಸ್’ ತಂಡದ ಪರ ಪ್ರಮುಖ (ಮಾರ್ಕ್ಯೂ) ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್: ಹೊಸ ‘ಫಿಟ್​ನೆಸ್​ ಟೆಸ್ಟ್’ ಜಾರಿ!

ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸ್ಟೀವ್ ವಾ ಈ ತಂಡದ ಸಹ-ಮಾಲೀಕರಾಗಿದ್ದು, ಅಜಿಂಕ್ಯ ರಹಾನೆ ಅವರ ಲೀಡರ್‌ಶಿಪ್ ಗುಣವನ್ನು ಕೊಂಡಾಡಿದ್ದಾರೆ. ಅದರಂತೆ ರಹಾನೆ ಮುಂಬರುವ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

Source link

Exit mobile version