Reliance Jio: ಜಿಯೋ ಬಳಕೆದಾರರಿಗೆ ಅಚ್ಚರಿ ವೈಶಿಷ್ಟ್ಯ: ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ಹಣ ವಾಪಸ್ – Kannada News | Surprise feature for Jio users Money back even if recharged to wrong number

ಬೆಂಗಳೂರು (ಏ. 27): ನೀವು ನಿಮ್ಮ ಫೋನ್ ಅನ್ನು ರೀಚಾರ್ಜ್ ಮಾಡಿದಾಗ ಅದು ತಪ್ಪು ಸಂಖ್ಯೆಗೆ ರೀಚಾರ್ಜ್ ಆಗಿದೆಯೇ? ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ನೂರಾರು ರೂಪಾಯಿಗಳು ವ್ಯರ್ಥವಾಗುತ್ತವೆ. ಏಕೆಂದರೆ ರೀಚಾರ್ಜ್ ಮಾಡಬೇಕಾದ ವ್ಯಕ್ತಿಯ ಬದಲಿಗೆ, ನೀವು ಬೇರೆಯವರಿಗೆ ರೀಚಾರ್ಜ್ ಮಾಡಿರುತ್ತೀರಿ. ಆದಾಗ್ಯೂ, ಈಗ ಅಂತಹ ತಪ್ಪಿನ ನಂತರವೂ, ನಿಮ್ಮ ಹಣ ವ್ಯರ್ಥವಾಗುವುದಿಲ್ಲ ಏಕೆಂದರೆ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ವಿಶೇಷ ವೈಶಿಷ್ಟ್ಯವನ್ನು ತಂದಿದೆ, ಇದರ ಮೂಲಕ ತಪ್ಪು ರೀಚಾರ್ಜ್ ಅನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರೆ ಹಣವನ್ನು ಮರುಪಡೆಯಬಹುದು. ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ನಿರ್ದಿಷ್ಟ ಸಮಯದೊಳಗೆ ನಿಮ್ಮ ಹಣವನ್ನು ಮರುಪಾವತಿಸಲಾಗುತ್ತದೆ.

ಜಿಯೋ ಗ್ರಾಹಕರು ಈ ವೈಶಿಷ್ಟ್ಯವನ್ನು ಪಡೆಯುತ್ತಾರೆ

ಈ ವೈಶಿಷ್ಟ್ಯದ ಬಗ್ಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಆಕಸ್ಮಿಕವಾಗಿ ಯಾರಿಗಾದರೂ ರೀಚಾರ್ಜ್ ಮಾಡಿದರೆ, ಅವರೊಂದಿಗೆ ಮಾತನಾಡದೆಯೇ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಇದಕ್ಕೆ ಒಂದೇ ಷರತ್ತು ಎಂದರೆ ನಿಮ್ಮ ರೀಚಾರ್ಜ್ ಅನ್ನು MyJio ಆ್ಯಪ್ ಮೂಲಕ ಮಾಡಿರಬೇಕು. ನೀವು Paytm, PhonePe, ಅಥವಾ Google Pay ನಂತಹ ಇತರ ಅಪ್ಲಿಕೇಶನ್‌ಗಳ ಮೂಲಕ ತಪ್ಪಾಗಿ ರೀಚಾರ್ಜ್ ಮಾಡಿದರೆ ನಿಮಗೆ ಮರುಪಾವತಿ ಸಿಗುವುದಿಲ್ಲ.

ಜಿಯೋ ತಪ್ಪು ರೀಚಾರ್ಜ್‌ ಮಾಡಿದರೆ ಹಣವನ್ನು ಹೇಗೆ ಹಿಂಪಡೆಯುವುದು?

  • ಇದಕ್ಕಾಗಿ, ಮೊದಲು MyJio ಅಪ್ಲಿಕೇಷನ್ ತೆರೆಯಿರಿ ಮತ್ತು ಅದರಲ್ಲಿ ವಹಿವಾಟು ಹಿಸ್ಟರಿಗೆ ಹೋಗಿ.
  • ತಪ್ಪಾದ ರೀಚಾರ್ಜ್ ಸಂಭವಿಸಿದ ವಹಿವಾಟು ಇತಿಹಾಸವನ್ನು ವೀಕ್ಷಿಸಿ.
  • ಈ ವಿಭಾಗದಲ್ಲಿ, 3 ದಿನಗಳ ವಹಿವಾಟು ಇತಿಹಾಸದವರೆಗೆ ಯೋಜನೆಯನ್ನು ರದ್ದುಗೊಳಿಸುವ ಆಯ್ಕೆಯನ್ನು ನೀವು ಪಡೆಯುತ್ತೀರಿ.
  • ಈ ರದ್ದುಮಾಡು ಯೋಜನೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಇದರ ನಂತರ ನಿಮ್ಮನ್ನು ರದ್ದತಿಗೆ ಕಾರಣ ಮತ್ತು ಮರುಪಾವತಿಯ ಮೂಲವನ್ನು ಕೇಳಲಾಗುತ್ತದೆ.
  • ಅಗತ್ಯ ಉತ್ತರಗಳನ್ನು ಒದಗಿಸಿ ಮತ್ತು ರೀಚಾರ್ಜ್ ಅನ್ನು ರದ್ದುಗೊಳಿಸಿ. ಸ್ವಲ್ಪ ಸಮಯದ ನಂತರ ನಿಮ್ಮ ಹಣವನ್ನು ನಿರ್ದಿಷ್ಟ ಮೂಲಕ್ಕೆ ಮರುಪಾವತಿಸಲಾಗುತ್ತದೆ.
  • ನೀವು ಆಕಸ್ಮಿಕವಾಗಿ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ಈ ಹ್ಯಾಕ್ ಅಥವಾ ಟ್ರಿಕ್ ನಿಮಗೆ ಮರುಪಾವತಿ ಪಡೆಯಲು ಸಹಾಯ ಮಾಡುತ್ತದೆ. ಆದಾಗ್ಯೂ, ರೀಚಾರ್ಜ್ ಮಾಡಿದ 3 ಗಂಟೆಗಳ ಒಳಗೆ ಮಾತ್ರ ನೀವು ಈ ಹಣವನ್ನು ಮರಳಿ ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಿ.

WhatsApp Plus: ಬರುತ್ತಿದೆ ಹೊಸ ವಾಟ್ಸ್ಆ್ಯಪ್ ಪ್ಲಸ್: ಇದಕ್ಕೆ ಹಣ ಪಾವತಿಸಬೇಕೇ?, ಏನೆಲ್ಲ ಫೀಚರ್ಸ್ ಇದೆ ನೋಡಿ

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಮ್​ಗೆ ಸಿನಿಮಾ ಆಫರ್ ಮಾಡಿದ ಸಲ್ಮಾನ್ ಖಾನ್ ; ಕನ್ನಡ ಹಿಟ್ ಚಿತ್ರದ ರಿಮೇಕ್ – Kannada News | Jogi Prem reveals Salman Khan sought ‘Jogi’ remake; Why Prem said no

ಜೋಗಿ ಪ್ರೇಮ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿ ಬರುತ್ತಿದೆ. ಈ ವಾರಾಂತ್ಯಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈಗ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ಅವರು ‘ಜೋಗಿ’ ಹಿಂದಿ ರಿಮೇಕ್ ಬಗ್ಗೆ ಮಾತನಾಡಿದ್ದಾರೆ. ಈಗಲೂ ಆ ಬಗ್ಗೆ ಸಾಜಿದ್ ಕೇಳುತ್ತಾರೆ ಎಂದು ಅವರು ಹೇಳಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಾಲಿವುಡ್ ಜೊತೆ  ದಕ್ಷಿಣ ಭಾರತದ ನಿರ್ದೇಶಕರ ಬಗ್ಗೆ ಒಲವು ಬಂದಿದೆ. ಇಲ್ಲಿಯ ನಿರ್ದೇಶಕರು ಹೆಚ್ಚು ಮಸಾಲಭರಿತ ಸಿನಿಮಾ ಮಾಡುತ್ತಾರೆ ಎಂಬುದನ್ನು ಅವರು ಬಲವಾಗಿ ನಂಬಿದ್ದಾರೆ. ಜೋಗಿ ಪ್ರೇಮ್ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಅವರಿಗೆ ಇದೆ. ಈ ಬಗ್ಗೆ ಪ್ರೇಮ್ ಮಾಹಿತಿ ನೀಡಿದ್ದಾರೆ.

‘ಸಾಜಿದ್ ನಾಡಿಯದ್ವಾಲಾ ಕರೆದು ಸಿನಿಮಾ ಮಾಡೋಣ ಎಂದಿದ್ದರು. ಜೋಗಿ ರಿಮೇಕ್ ಮಾಡೋಣ ಎಂಬುದು ಅವರ ಆಸೆ ಆಗಿತ್ತು. ಸಲ್ಮಾನ್ ಖಾನ್ ಕೇಳ್ತಾ ಇದಾರೆ ಎಂದೂ ಹೇಳಿದ್ದರು. ನಾನು ಅದು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಜೋಗಿ ರಿಲೀಸ್ ಆಗಿ 2 ದಶಕ ಕಳೆದಿದೆ. ಈಗ ಅದನ್ನು ರಿಮೇಕ್ ಮಾಡೋದು ಅಸಾಧ್ಯ ಎಂದು ನಾನು ಹೇಳಿದ್ದೇನೆ’ ಎಂಬುದಾಗಿ ಪ್ರೇಮ್ ವಿವರಿಸಿದ್ದಾರೆ.

ಸಲ್ಮಾನ್ ತಂಡದಿಂದ ಜೋಗಿ ಪ್ರೇಮ್​​ಗೆ ಈ ರೀತಿಯ ಬೇಡಿಕೆ ಬಂದಿತ್ತು ಎಂಬ ಸುದ್ದಿ ಈ ಮೊದಲೇ ವೈರಲ್ ಆಗಿತ್ತು. ಆದರೆ, ಪ್ರೇಮ್ ಅವರು ಈ ವಿಷಯದಲ್ಲಿ ಮುಂದುವರಿದಿರಲಿಲ್ಲ. ಈಗ ಅವರಿಗೆ ಪದೇ ಪದೇ ಈ ವಿಷಯದಲ್ಲಿ ಬೇಡಿಕೆ ಬರುತ್ತಿದೆ ಎಂಬ ವಿಷಯ ರಿವೀಲ್ ಆಗಿದೆ.

ಇದನ್ನೂ ಓದಿ: ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್​​ನ ಎತ್ತಿಕಟ್ಟಿದ ಟಾಲಿವುಡ್ ಮಂದಿ

‘ಕೆಡಿ’ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ವಿವಾದಗಳ ಮೂಲಕ ಈ ಸಿನಿಮಾ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಚಿತ್ರದ ಬಳಿಕ ಪ್ರೇಮ್ ಯಾವ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:08 am, Mon, 27 April 26

Source link

ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ – Kannada News | Hubballi Blood Banks Face Severe Shortage Due to Heatwave; Blood Donations Drop Drastically

ಹುಬ್ಬಳ್ಳಿ, ಏಪ್ರಿಲ್ 27: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪ ಜನಜೀವನವನ್ನು ತತ್ತರಿಸಿಸಿದೆ. ಇದರ ಪರಿಣಾಮವಾಗಿ, ರಾಜ್ಯದ ಹಲವು ರಕ್ತ ನಿಧಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ತಾಪಮಾನ ಏರಿಕೆಯಿಂದಾಗಿ ರಕ್ತದಾನ ಮಾಡಲು ಹೆಚ್ಚಿನ ಜನರು ಹಿಂದೇಟು ಹಾಕುತ್ತಿದ್ದಾರೆ. ಹುಬ್ಬಳ್ಳಿ ನಗರದ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್‌ನಲ್ಲಿ ಪ್ರತಿದಿನ 90 ರಿಂದ 100 ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ, ಪ್ರಸ್ತುತ ಬೇಸಿಗೆಯ ಹಿನ್ನೆಲೆಯಲ್ಲಿ ಈ ಸಂಖ್ಯೆ 10 ರಿಂದ 15 ಯೂನಿಟ್‌ಗಳಿಗೆ ಕುಸಿದಿದೆ. ಬಿಸಿಲಿನಲ್ಲಿ ಸುಸ್ತು, ತಲೆಸುತ್ತು ಬರುವ ಸಾಧ್ಯತೆಗಳ ಭಯದಿಂದ ದಾನಿಗಳು ಹಿಂಜರಿಯುತ್ತಿದ್ದಾರೆ. ರೋಗಿಗಳಿಗೆ ರಕ್ತದ ಬೇಡಿಕೆ ಹೆಚ್ಚಾಗಿದ್ದರೂ, ಪೂರೈಕೆ ತೀವ್ರವಾಗಿ ಕಡಿಮೆಯಾಗಿದೆ.

ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕಿನ ಟ್ರಸ್ಟಿಗಳ ಪ್ರಕಾರ, ರಕ್ತದಾನ ಮಾಡಿದ ನಂತರ ಒಂದು ಗಂಟೆ ವಿಶ್ರಾಂತಿ ಪಡೆದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬಿಸಿಲಿದ್ದರೂ ರಕ್ತದಾನ ಮಾಡುವುದು ಸುರಕ್ಷಿತವಾಗಿದ್ದು, ಕೇವಲ ವಿಶ್ರಾಂತಿ ಪಡೆಯುವುದು ಅವಶ್ಯಕ ಎಂದು ತಿಳಿಸಲಾಗಿದೆ. ಹೀಗಾಗಿ, ದಾನಿಗಳು ಮುಂದೆ ಬಂದು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಪಾಲಿಗೆ ಕನ್ನಡಿಗನೇ ಕಂಟಕ..! – Kannada News | KL Rahul: The RCB Destroyer

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಕೆಲವು ಬ್ಯಾಟರ್‌ಗಳು ನಿರ್ದಿಷ್ಟ ತಂಡಗಳ ವಿರುದ್ಧ ಅಕ್ಷರಶಃ ಅಬ್ಬರಿಸುತ್ತಾರೆ. ಅಂತಹ ಸಾಲಿನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮೊದಲಿಗರು. ಇಲ್ಲಿ ಕೆಎಲ್​ಆರ್​ ಅಬ್ಬರಿಸುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂಬುದೇ ವಿಶೇಷ. ಅಂದರೆ ತನ್ನ ತವರು ತಂಡದ ವಿರುದ್ಧವೇ ರಾಹುಲ್ ತೋರುವ ಬ್ಯಾಟಿಂಗ್ ಪರಾಕ್ರಮ ಈ ಬಾರಿ ಕೂಡ ಮುಂದುವರೆದಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ 57 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್​ಸಿಬಿ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿತ್ತು.

ಇದೀಗ ಆರ್​ಸಿಬಿ ಮತ್ತು ಡಿಸಿ ಎರಡನೇ ಮುಖಾಮುಖಿಗೆ ಸಜ್ಜಾಗಿದೆ. ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತೀ ದೊಡ್ಡ ಚಿಂತೆ ಕೆಎಲ್ ರಾಹುಲ್. ಏಕೆಂದರೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್​ಆರ್​ ಅಬ್ಬರಕ್ಕೆ ಈ ಕೆಳಗಿನ ಅಂಕಿ ಅಂಶಗಳೇ ಸಾಕ್ಷಿ.

  • ಆರ್‌ಸಿಬಿ ವಿರುದ್ಧ ಕೆಎಲ್ ರಾಹುಲ್ 18 ಇನಿಂಗ್ಸ್​ ಆಡಿದ್ದಾರೆ. ಈ ವೇಳೆ ಅವರು 69.91ರ ಸರಾಸರಿಯಲ್ಲಿ ಒಟ್ಟು 839 ರನ್ ಕಲೆಹಾಕಿದ್ದಾರೆ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಎಲ್ ರಾಹುಲ್ ಒಂದು ಭರ್ಜರಿ ಶತಕ ಹಾಗೂ 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
  • ಐಪಿಎಲ್ 2020 ರಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದ ರಾಹುಲ್, ಕೇವಲ 69 ಎಸೆತಗಳಲ್ಲಿ ಅಜೇಯ 132 ರನ್ ಚಚ್ಚಿದ್ದರು.
  • ಈ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 7 ಪಂದ್ಯಗಳಲ್ಲಿ ಕೆಎಲ್ ರಾಹುಲ್ 151.68ರ ಸ್ಟ್ರೈಕ್ ರೇಟ್ನಲ್ಲಿ 270 ರನ್ ಗಳಿಸಿದ್ದಾರೆ.
  • ಈ ಬಾರಿಯ ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ವಿರುದ್ಧ ಕೆಎಲ್ ರಾಹುಲ್ ಕೇವಲ 34 ಎಸೆತಗಳಲ್ಲಿ 57 ರನ್​ ಚಚ್ಚಿದ್ದರು.

ದೆಹಲಿಯಲ್ಲೂ ಕನ್ನಡಿಗನ ದರ್ಬಾರ್:

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್‌ನಲ್ಲಿ ಕೆಎಲ್. ರಾಹುಲ್ ಅವರ ಪ್ರದರ್ಶನ ಅತ್ಯಂತ ಪ್ರಭಾವಶಾಲಿಯಾಗಿದೆ. ವಿಶೇಷವಾಗಿ ಈ 2026ರ ಐಪಿಎಲ್ ಸೀಸನ್​ನಲ್ಲಿ ಅವರು ಇದೇ ಅಂಗಳದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.

  • ಐತಿಹಾಸಿಕ 152 ರನ್:* ಏಪ್ರಿಲ್ 25, 2026 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅಜೇಯ 152 ರನ್ (67 ಎಸೆತ) ಸಿಡಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟರ್ ಒಬ್ಬರು ದಾಖಲಿಸಿದ ಗರಿಷ್ಠ ಸ್ಕೋರ್. ಈ ಮೂಲಕ ಐಪಿಎಲ್​ ಪಂದ್ಯವೊಂದರಲ್ಲಿ 150 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  • ದೆಹಲಿ ದರ್ಬಾರ್: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ಈವರೆಗೆ 14 ಇನ್ನಿಂಗ್ಸ್‌ ಆಡಿದ್ದಾರೆ. ಈ ವೇಳೆ  52.0 ಸರಾಸರಿಯೊಂದಿಗೆ 520 ರನ್ ಗಳಿಸಿದ್ದಾರೆ. ಇಲ್ಲಿ ಅವರ ಸ್ಟ್ರೈಕ್ ರೇಟ್ 160.99 ರಷ್ಟಿರುವುದು ವಿಶೇಷ. ಇದು ದೆಹಲಿಯ ಪಿಚ್​ನಲ್ಲಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದಕ್ಕೆ ಸಾಕ್ಷಿ.
  • ಇತ್ತೀಚಿನ ಫಾರ್ಮ್: ಇದೇ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಅವರು 52 ಎಸೆತಗಳಲ್ಲಿ 92 ರನ್ ಸಿಡಿಸಿದ್ದರು. ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ 152 ರನ್​ ಚಚ್ಚಿದ್ದರು.

ಇದನ್ನೂ ಓದಿ: RCB ಪ್ಲೇಯಿಂಗ್ ಇಲೆವೆನ್​ನಲ್ಲಿ 2 ಬದಲಾವಣೆ ಬಹುತೇಕ ಖಚಿತ!

ಅತ್ತ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿರುವ ಕೆಎಲ್ ರಾಹುಲ್, ಇದೀಗ ದ್ವಿತೀಯ ಪಂದ್ಯದಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್​ಸಿಬಿ ತಂಡ ಗೆಲುವು ದಾಖಲಿಸಬೇಕಿದ್ದರೆ ಕೆಎಲ್ ರಾಹುಲ್ ಅವರನ್ನು ಬೇಗನೆ ಔಟ್ ಮಾಡುವುದು ಅನಿವಾರ್ಯ. ಒಂದು ವೇಳೆ ಕನ್ನಡಿಗ ಕ್ರೀಸ್ ಕಚ್ಚಿ ನಿಂತರೆ ಆರ್​ಸಿಬಿ ಪಾಲಿಗೆ ಕಂಟಕವಾಗಲಿದ್ದಾರೆ ಎಂಬುದಕ್ಕೆ ಈ ಹಿಂದಿನ ಅಂಕಿ ಅಂಶಗಳೇ ಸಾಕ್ಷಿ.

Source link

DC vs RCB: ದೆಹಲಿಯಲ್ಲಿ ಇತಿಹಾಸ ರಚಿಸಲು ಸಿದ್ಧವಾದ ವಿರಾಟ್ ಕೊಹ್ಲಿ – Kannada News | Virat Kohli all set to create history in Delhi in DC vc RCB IPL 2026 Match

ಏಪ್ರಿಲ್ 27, ಸೋಮವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026 ರ ದೊಡ್ಡ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ರನ್‌ಗಳ ಮಳೆ ಮತ್ತು ದಾಖಲೆಗಳ ಸುರಿಮಳೆಯಾಗುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ಅನೇಕ ವೈಯಕ್ತಿಕ ಸಾಧನೆಗಳು ಪಣಕ್ಕಿಡಲಾಗಿದೆ, ಈ ಪೈಕಿ ದೊಡ್ಡ ಆಕರ್ಷಣೆ ಕಿಂಗ್ ಕೊಹ್ಲಿ. ಪ್ರಸಿದ್ಧ ದೆಹಲಿ ಪಿಚ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಐಪಿಎಲ್ ಇತಿಹಾಸದಲ್ಲೇ ಶಾಶ್ವತವಾಗಿಡಲು ಕೆಲವು ದಾಖಲೆಗಳನ್ನು ಸ್ಥಾಪಿಸುವ ಹೊಸ್ತಿಲಲ್ಲಿದ್ದಾರೆ.

ವಿರಾಟ್ ಐಪಿಎಲ್‌ನಲ್ಲಿ 9,000 ರನ್‌ಗಳ ಸಮೀಪದಲ್ಲಿದ್ದಾರೆ

ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅತಿ ದೊಡ್ಡ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 9,000 ರನ್‌ಗಳನ್ನು ತಲುಪಿದ ವಿಶ್ವದ ಮೊದಲ ಆಟಗಾರನಾಗಲು ಕೊಹ್ಲಿಗೆ ಕೇವಲ 111 ರನ್‌ಗಳು ಬೇಕಾಗಿವೆ. ಬೇರೆ ಯಾವುದೇ ಬ್ಯಾಟ್ಸ್‌ಮನ್ ಈ ಅಂಕಿ ಅಂಶದ ಹತ್ತಿರವೂ ಬಂದಿಲ್ಲ. ಕೊಹ್ಲಿ ದೆಹಲಿ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರೆ, ಲೀಗ್‌ನಲ್ಲಿ 9,000 ರನ್‌ಗಳನ್ನು ದಾಟಿದ ಏಕೈಕ ಬ್ಯಾಟ್ಸ್‌ಮನ್ ಆಗುವ ಸಾಧ್ಯತೆ ಇದೆ.

ಒಂದೇ ದೇಶದ ಪರ 10,000 ಟಿ20 ರನ್ ಗಳಿಸಿದ ಅಪರೂಪದ ದಾಖಲೆ

ಕೊಹ್ಲಿ ಐಪಿಎಲ್‌ನಲ್ಲಿ ಮಾತ್ರವಲ್ಲದೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿಯೂ ಐತಿಹಾಸಿಕ ಮೈಲಿಗಲ್ಲು ಸಾಧಿಸುವ ಹಾದಿಯಲ್ಲಿದ್ದಾರೆ. ಭಾರತದಲ್ಲಿ 10,000 ಟಿ20 ರನ್‌ಗಳನ್ನು ತಲುಪಲು ಅವರಿಗೆ ಕೇವಲ 68 ರನ್‌ಗಳು ಬೇಕಾಗಿವೆ. ದೆಹಲಿ ಕೊಹ್ಲಿಯ ತವರು ಮೈದಾನವಾಗಿದೆ, ಆದ್ದರಿಂದ ಇಲ್ಲಿ 68 ರನ್‌ಗಳನ್ನು ಗಳಿಸುವುದು ಇವರಿಗೆ ದೊಡ್ಡ ಕಷ್ಟವೇನಲ್ಲ.

Abhishek Sharma: ಹೋಟೆಲ್​ನಲ್ಲಿ ಅಭಿಷೇಕ್ ಶರ್ಮಾ ಅವರ ಕೈ ಹಿಡಿದು ತನ್ನತ್ತ ಎಳೆದ ಅಪರಿಚಿತ ಹುಡುಗಿ: ವಿಡಿಯೋ ವೈರಲ್

ದಾಖಲೆಗಳ ಸುನಾಮಿ ಮತ್ತು ದೈತ್ಯರ ಮೇಲೆ ಕಣ್ಣುಗಳು

ವಿರಾಟ್ ಕೊಹ್ಲಿ ಮಾತ್ರವಲ್ಲದೆ, ಎರಡೂ ತಂಡಗಳ ಹಲವಾರು ಆಟಗಾರರು ಸಹ ಈ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ತಲುಪುವ ಸನಿಹದಲ್ಲಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದ ಸಣ್ಣ ಬೌಂಡರಿಗಳು ಮತ್ತು ಸಮತಟ್ಟಾದ ಪಿಚ್ ಅನ್ನು ಗಮನಿಸಿದರೆ, ಪಂದ್ಯವು ಅನೇಕ ಐತಿಹಾಸಿಕ ಸಾಧನೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:23 am, Mon, 27 April 26

Source link

ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ: ತಡರಾತ್ರಿ ಪೊಲೀಸರ ದಾಳಿ, ನೂರಾರು ಅಕ್ಕಿ ಮೂಟೆಗಳು ಜಪ್ತಿ! – Kannada News | Koppal Rice Seizure: Rural Police Raid Near Dadegal; Hundreds of Anna Bhagya Rice Bags Seized

ಕೊಪ್ಪಳ, ಏಪ್ರಿಲ್ 27: ಜಿಲ್ಲೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುವ ದಂಧೆ ಎಗ್ಗಿಲ್ಲದೆ ಸಾಗುತ್ತಿದ್ದು, ಇದೀಗ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಖದೀಮರಿಗೆ ಶಾಕ್ ನೀಡಿದ್ದಾರೆ. ಕೊಪ್ಪಳ ತಾಲೂಕಿನ ದದೇಗಲ್ ಬಳಿ ತಡರಾತ್ರಿ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕೊಪ್ಪಳ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ನೂರಾರು ಅನ್ನಭಾಗ್ಯ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಡವರ ಹೊಟ್ಟೆ ಸೇರಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಾಗೂ ಅಕ್ಕಿ ಸಂಗ್ರಹವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪಡಿತರ ಅಕ್ಕಿ ದಂಧೆ ಹೆಚ್ಚಾಗುತ್ತಿದ್ದು, ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹತ್ಯೆ ಯತ್ನವೋ ಅಥವಾ ರಾಜಕೀಯ ಸ್ಕಿಟ್? ಅಮೆರಿಕ ಘಟನೆಯ ಸುತ್ತ ಹರಿದಾಡುತ್ತಿದೆ ಆಧಾರರಹಿತ ಊಹೆಗಳ ಮಹಾಪೂರ – Kannada News | White House Incident: Assassination Attempt or Political Stunt? Washington Rumors Explored

ವಾಷಿಂಗ್ಟನ್, ಏಪ್ರಿಲ್ 27: ಅಮೆರಿಕದ ಶ್ವೇತಭವನ(WhiteHouse)ದಲ್ಲಿ ನಡೆದ ವರದಿಗಾರರ ಔತಣಕೂಟದ ಹೊರಗೆ ಗುಂಡಿನ ಸದ್ದು ಕೇಳಿಬಂದ ಎರಡನೇ ನಿಮಿಷಗಳಲ್ಲಿ ಅಮೆರಿಕದಲ್ಲಿ ಎರಡು ವಿಧವಾದ ಚರ್ಚೆ ಆರಂಭಗೊಂಡಿತ್ತು. ಒಂದು ಕಡೆ ಭದ್ರತಾ ಲೋಪದ ಬಗ್ಗೆ ಆತಂಕ ವ್ಯಕ್ತವಾದರೆ, ಮತ್ತೊಂದು ಕಡೆ ಇದು ಅವರೇ ಸೃಷ್ಟಿಸಿದ ನಾಟಕ ಎಂಬ ಮಾತುಗಳು ಕೇಳಿಬಂದಿತ್ತು. ಸಾಮಾಜಿಕ ಮಾಧ್ಯಮದ ಬಳಕೆದಾರರು ಪ್ರತಿಯೊಂದು ಚಲನವಲನವನ್ನೂ ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದರು. ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಮುಖಭಾವದಿಂದ ಹಿಡಿದು, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಅಧ್ಯಕ್ಷರಿಗಿಂತ ಮೊದಲು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದರ ಬಗ್ಗೆ ತೀವ್ರ ಚರ್ಚೆಗಳು ನಡೆದವು.

ಘಟನೆಗೆ ಕೆಲವೇ ಕ್ಷಣಗಳ ಮೊದಲು ಅಧ್ಯಕ್ಷರ ಜೊತೆಗಿದ್ದ ಪ್ರಸಿದ್ಧ ಮಾನಸಿಕ ತಜ್ಞ ಓಜ್ ಪರ್ಲ್‌ಮನ್ ಅವರ ಉಪಸ್ಥಿತಿಯೂ ಅನುಮಾನದ ಸುಳಿಗೆ ಸಿಲುಕಿತು. ಅವರು ಹಿಡಿದಿದ್ದ ಕಾಗದದ ತುಣುಕು ಏನೋ ರಹಸ್ಯ ಸಂಕೇತವಾಗಿತ್ತು ಎಂಬ ಸುಳ್ಳು ಸುದ್ದಿಗಳು ಹರಿದಾಡಿದವು.

ಆರೋಪಿ ಅಲೆನ್‌ನನ್ನು ಗುಂಡು ಹಾರಿಸದೆ ಜೀವಂತವಾಗಿ ಸೆರೆಹಿಡಿದಿದ್ದು ಹೇಗೆ ಎಂಬ ಪ್ರಶ್ನೆ ಆನ್‌ಲೈನ್‌ನಲ್ಲಿ ಕೇಳಿಬಂತು. ಆತನನ್ನು ಶರ್ಟ್ ಇಲ್ಲದ ಸ್ಥಿತಿಯಲ್ಲಿ ಬಂಧಿಸಿರುವ ಚಿತ್ರಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟವು. ಆತ ಕಮಲಾ ಹ್ಯಾರಿಸ್ ಅವರ ಪ್ರಚಾರಕ್ಕೆ ಸಣ್ಣ ದೇಣಿಗೆ ನೀಡಿದ್ದ ಎಂಬ ವರದಿಗಳು ರಿಪಬ್ಲಿಕನ್ ಬೆಂಬಲಿಗರಿಗೆ ಅಸ್ತ್ರವಾದರೆ, ಆತ ಯಾವ ಪಕ್ಷಕ್ಕೂ ಸೇರಿಲ್ಲ ಎಂಬ ಅಧಿಕೃತ ದಾಖಲೆಗಳು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದವು.

ಮತ್ತಷ್ಟು ಓದಿ: ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕೆಲವು ರಾಜಕೀಯ ವಿಮರ್ಶಕರು ಈ ಘಟನೆಯನ್ನು ಬೇರೆ ಆಯಾಮದಲ್ಲಿ ನೋಡಿದರು. ಇರಾನ್ ಜೊತೆಗಿನ ಉದ್ವಿಗ್ನತೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಈ ನಾಟಕವಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ಇನ್ನು ಕೆಲವರು, ಹಳೆಯ ಹಿಲ್ಟನ್ ಹೋಟೆಲ್ ಬದಲಿಗೆ ಶ್ವೇತಭವನದಲ್ಲಿ ಹೊಸದಾದ, ಸುರಕ್ಷಿತವಾದ ‘ಬಾಲ್ ರೂಂ’ ನಿರ್ಮಿಸುವ ಟ್ರಂಪ್ ಅವರ ದೀರ್ಘಕಾಲದ ಹಠಕ್ಕೆ ಈ ಘಟನೆ ಬಲ ನೀಡಲಿದೆ ಎಂದು ವಿಶ್ಲೇಷಿಸಿದರು.

ಅಧಿಕೃತ ಸಂಸ್ಥೆಗಳು ಮತ್ತು ಸುದ್ದಿಗಳಿಗಿಂತ ಸೋಶಿಯಲ್ ಮೀಡಿಯಾ ಊಹೆಗಳಿಗೆ ಜನ ಮಾರುಹೋಗುತ್ತಿದ್ದಾರೆ.ಒಂದೇ ಘಟನೆಯನ್ನು ಎರಡು ಪಕ್ಷಗಳು ತಮ್ಮ ಲಾಭಕ್ಕೆ ತಕ್ಕಂತೆ ವಿಶ್ಲೇಷಿಸುತ್ತಿವೆ. ಸತ್ಯಾಂಶಗಳು ದೃಢೀಕರಣಗೊಳ್ಳುವ ಮೊದಲೇ ಸುಳ್ಳು ಸುದ್ದಿಗಳು ಜಾಗತಿಕ ಮಟ್ಟದಲ್ಲಿ ತಲುಪುತ್ತಿವೆ.

ವಾಷಿಂಗ್ಟನ್‌ನ ಈ ಘಟನೆಯು ಕೇವಲ ಒಬ್ಬ ವ್ಯಕ್ತಿಯ ಹತ್ಯೆ ಯತ್ನವಾಗಿ ಉಳಿಯದೆ, ಆಧುನಿಕ ಜಗತ್ತಿನಲ್ಲಿ ಮಾಹಿತಿ ಮತ್ತು ಸಂವಹನವು ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಸತ್ಯಾಂಶಗಳಿಗಿಂತ ಸಿದ್ಧಾಂತಗಳೇ ಮೇಲುಗೈ ಸಾಧಿಸುತ್ತಿರುವ ಈ ಕಾಲದಲ್ಲಿ ಜಾಗರೂಕತೆ ಅತ್ಯಗತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬದಲಾದ ಕರಣ್ ಜೋಹರ್; ಬಾಲಿವುಡ್ ನೆಪೋ ಕಿಡ್ಸ್ ಕಳ್ಳಾಟ ಬಯಲು ಮಾಡಿದ ನಿರ್ಮಾಪಕ – Kannada News | Karan Johar Slams Bollywood Paid PR: KJo Exposes Fake Promotions and Actress Authenticity

ಕರಣ್ ಜೋಹರ್ ಅವರು (Karan Johar) ಬಾಲಿವುಡ್​​ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಹೊಸ ಮುಖಗಳಿಗೆ ಮಣೆ ಹಾಕುವುದು ಎಂದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ. ಆದರೆ, ಇತ್ತೀಚೆಗೆ ಅವರು ನಿರ್ಮಾಣದಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ. ಈಗ ಬಾಲಿವುಡ್ ಯುವ ನಟಿಯರು ಸೇರಿದಂತೆ ಬಾಲಿವುಡ್ ಪಿಆರ್ ವ್ಯವಸ್ಥೆ ಬಗ್ಗೆ ಅವರು ನೀಡಿದ ಹೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿದೆ. ಕರಣ್ ನೆಪೋ ಕಿಡ್​​ಗಳ ಬಗ್ಗೆ ತೋರಿಸುತ್ತಿದ್ದ ಒಲವು ಕಡಿಮೆ ಆದಂತೆ ಕಾಣಿಸುತ್ತಿದೆ.

ನಟನೆ ಬರದೆ ಇದ್ದರೂ ತೊಂದರೆ ಇಲ್ಲ, ಪಿಆರ್ ಕೆಲಸ ಮಾಡೋದನ್ನು ಮಾತ್ರ ಯುವ ನಟಿಯರು ಚೆನ್ನಾಗಿ ಮಾಡುತ್ತಾರೆ ಎಂಬುದು ಅನೇಕರ ಆರೋಪ. ಅದು ಮಿತಿಮೀರಿದೆ ಎಂಬ ಅಭಿಪ್ರಾಯವನ್ನು ಕರಣ್ ಜೋಹರ್ ಹೊರಹಾಕಿದ್ದಾರೆ. ತಿಳಿಸುವ ಎಲ್ಲಾ ಅಭಿನಂದನೆಗಳಿಗೂ ಬೆಲೆ ಕಟ್ಟಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನಿಜ ಹೊಗಳಿಕೆ ಯಾವದು ಹಾಗೂ ಕೃತಕ ಹೊಗಳಿಕೆ ಯಾವುದು ಎಂಬುದು ಗೊತ್ತಾಗದಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

‘ಬಾಲಿವುಡ್ ಸದ್ಯ ನಡೆಯುತ್ತಿರುವ ಪ್ರಚಾರದ ಆರ್ಭಟ ನಿಲ್ಲಬೇಕು. ಅಬ್ಬರದ ಪ್ರಚಾರಕ್ಕಿಂತ ಸಾಧನೆಗಳು ತಾವಾಗಿಯೇ ಮಾತನಾಡಬೇಕು. ಇಂದಿನ ದಿನಗಳಲ್ಲಿ ಪ್ರಚಾರ ಎಂಬುದು ಸಂಪೂರ್ಣವಾಗಿ ಹಣದ ಮೇಲೆ ಅವಲಂಬಿತವಾಗಿದೆ. ನೀವು ಸುಂದರವಾಗಿ ಕಾಣುತ್ತಿದ್ದೀರಿ ಎಂದು ಯಾರಾದರೂ ಹೇಳಬೇಕೆಂದರೆ ಅಥವಾ ನೀವು ಭೂಮಿಯ ಮೇಲಿನ ಅತ್ಯುತ್ತಮ ನಟ ಎಂದು ಕರೆಸಿಕೊಳ್ಳಬೇಕೆಂದರೆ ಅದಕ್ಕೆ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಪ್ರಚಾರವು ಈಗ ಕೇವಲ ‘ಪೇಯ್ಡ್‌’ (Paid PR) ಆಗಿರುವುದರಿಂದ ಅದರಲ್ಲಿ ನೈಜತೆ ಇಲ್ಲ’ ಎಂದು ಕರಣ್ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.

‘ನಾನು ನೀಡಿದ ಈ ಹೇಳಿಕೆ ಜಾನ್ವಿ ಕಪೂರ್ ಅಥವಾ ಶನಾಯ ಕಪೂರ್ ಅವರನ್ನೇ ಉದ್ದೇಶಿಸಿ ಹೇಳಿದ್ದಲ್ಲ. ಇದು ಇಡೀ ಚಿತ್ರರಂಗದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವುದಾಗಿ’ ಕರಣ್ ವಿಶೇಷವಾಗಿ ಉಲ್ಲೇಖಿಸಿದರು.‘ಪ್ರಚಾರದ (PR) ಅಬ್ಬರ ಈಗ ಮಿತಿಮೀರಿದೆ . ಪ್ರಚಾರ ಮತ್ತು ಮಾರ್ಕೆಟಿಂಗ್ ಎಂಬುದು ಬಹಳ ಮುಖ್ಯವಾದ ಕೆಲಸಗಳು. ಅವುಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಘನತೆಯಿಂದ ನಿರ್ವಹಿಸಬೇಕೇ ಹೊರತು ಅತಿರೇಕಕ್ಕೆ ಹೋಗಬಾರದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಣಾ ದಗ್ಗುಬಾಟಿ, ಕರಣ್ ಜೋಹರ್ ಸಿನಿಮಾನಲ್ಲಿ ನಟಿಸಲ್ಲ ಅಕ್ಷಯ್ ಕುಮಾರ್

‘ಇಂದು ಪ್ರತಿಯೊಂದೂ ಹಣಕ್ಕೆ ಲಭ್ಯವಿದೆ. ಪ್ರೇಕ್ಷಕರಿಗೆ ನಿಜವಾಗಿಯೂ ಯಾವುದು ಇಷ್ಟವಾಗುತ್ತಿದೆ ಮತ್ತು ಯಾವುದು ಇಲ್ಲ ಎಂಬುದನ್ನು ಅಳೆಯುವುದು ಅಸಾಧ್ಯವಾಗಿದೆ. ಜನರು ಯಾವುದನ್ನಾದರೂ ಮೆಚ್ಚುತ್ತಿದ್ದರೆ, ಅದು ನಿಜವಾದ ಮೆಚ್ಚುಗೆಯೋ ಅಥವಾ ಮೆಚ್ಚಲು ಹಣ ನೀಡಲಾಗಿದೆಯೇ? ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲ ಕೇವಲ ಜನರಿಗಷ್ಟೇ ಅಲ್ಲ, ನನಗೂ ಆಗುತ್ತಿದೆ. ನಾನು ಕೆಲವೊಮ್ಮೆ ಇದಕ್ಕೆ ಹಣ ಪಾವತಿಸುತ್ತೇನೆ’ ಎಂದು ಕರಣ್ ಒಪ್ಪಿಕೊಂಡಿದ್ದಾರೆ. ಅವರು ಇಷ್ಟು ಮುಕ್ತವಾಗಿ ಮಾತನಾಡಿದ್ದು ಇದೇ ಮೊದಲು. ಈ ಬೆಳವಣಿಗೆ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ! – Kannada News | Rare Black Leopard Sighted by Early Morning Safari Goers in Chamarajanagar

ಚಾಮರಾಜನಗರ, ಏಪ್ರಿಲ್ 27: ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಫಾರಿ ವಲಯದಲ್ಲಿ ಅಪರೂಪದ ಕಪ್ಪು ಚಿರತೆಯೊಂದು ಪ್ರತ್ಯಕ್ಷವಾಗಿ ಪ್ರವಾಸಿಗರನ್ನು ಆಕರ್ಷಿಸಿದೆ. ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಈ ವಿಶಿಷ್ಟ ಕರಿಚಿರತೆಯ ದರ್ಶನವಾಗಿದೆ. ಅಪರೂಪದ ಕರಿಚಿರತೆಯನ್ನು ನೋಡಿದ ಪ್ರವಾಸಿಗರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಪಿ.ಜಿ.ಪಾಳ್ಯ ಸಫಾರಿ ವಲಯದ ವನ್ಯಜೀವಿ ವೈವಿಧ್ಯತೆಗೆ ಮತ್ತಷ್ಟು ಮೆರಗು ನೀಡಿದೆ. ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶಗಳ ಭಾಗವಾಗಿರುವ ಈ ವಲಯವು ಅನೇಕ ಅಪರೂಪದ ಪ್ರಾಣಿಗಳಿಗೆ ನೆಲೆಯಾಗಿದೆ. ಕರಿಚಿರತೆಯು ಮೆಲನಿಸ್ಟಿಕ್ ಗುಣಲಕ್ಷಣಗಳನ್ನು ಹೊಂದಿರುವ ಚಿರತೆಯಾಗಿದ್ದು, ಅದರ ಗಾಢವಾದ ಕಪ್ಪು ಬಣ್ಣದಿಂದಾಗಿ ಇದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಪ್ಲೇಯಿಂಗ್ ಇಲೆವೆನ್​ನಲ್ಲಿ 2 ಬದಲಾವಣೆ ಬಹುತೇಕ ಖಚಿತ! – Kannada News | IPL 2026: RCB Playing XI against Delhi Capitals

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಎರಡು ಬದಲಾವಣೆ ಮಾಡಿಕೊಳ್ಳುವುದು ಬಹುತೇಕ ಖಚಿತ. ಏಕೆಂದರೆ ಆರ್​ಸಿಬಿ ತಂಡದ ಇಬ್ಬರು ಆಟಗಾರರು ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ.
  • ಆರ್​ಸಿಬಿ ವೇಗಿ ರಾಸಿಖ್ ದಾರ್ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಸಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಇಲ್ಲಿ ಫಿಲ್ ಸಾಲ್ಟ್ ಬದಲಿಗೆ ಆರ್​ಸಿಬಿ ಪರ ಜೇಕಬ್ ಬೆಥೆಲ್ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಕಳೆದ ಮ್ಯಾಚ್​ನಲ್ಲಿ ಬೆಥೆಲ್ ಆರಂಭಿಕನಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸಲಿದ್ದಾರೆ.

ಆದರೆ ರಾಸಿಖ್ ದಾರ್ ಬದಲಿಗೆ ಈ ಮ್ಯಾಚ್​ನಲ್ಲಿ ಯಾರು ಆಡಲಿದ್ದಾರೆ ಎಂಬುದೇ ಪ್ರಶ್ನೆ. ಏಕೆಂದರೆ ಆರ್​ಸಿಬಿ ತಂಡದಲ್ಲಿ ಹೆಚ್ಚುವರಿ ಅನುಭವಿ ವೇಗಿಗಳ ಕೊರತೆ ಇದೆ. ಈಗಾಗಲೇ ಅಭಿನಂದನ್ ಸಿಂಗ್ ಅವರಿಗೆ ಚಾನ್ಸ್ ನೀಡಿದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇನ್ನು ಉಳಿದಿರುವುದು ಮಂಗೇಶ್ ಯಾದವ್. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುವ ವೇಗಿ ಮಂಗೇಶ್ ಪಾದಾರ್ಪಣೆ  ಮಾಡಿದರೂ ಅಚ್ಚರಿಪಡಬೇಕಿಲ್ಲ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ವಿರಾಟ್ ಕೊಹ್ಲಿ
  2. ಜೇಕಬ್ ಬೆಥೆಲ್
  3. ದೇವದತ್ ಪಡಿಕ್ಕಲ್
  4. ರಜತ್ ಪಾಟಿದಾರ್ (ನಾಯಕ)
  5. ಟಿಮ್ ಡೇವಿಡ್
  6. ಜಿತೇಶ್ ಶರ್ಮಾ
  7. ಕೃನಾಲ್ ಪಾಂಡ್ಯ
  8. ರೊಮಾರಿಯೊ ಶೆಫರ್ಡ್
  9. ಜೋಶ್ ಹೇಝಲ್​ವುಡ್
  10. ಭುವನೇಶ್ವರ್ ಕುಮಾರ್
  11. ಮಂಗೇಶ್ ಯಾದವ್.
  12. ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).

ಇದನ್ನೂ ಓದಿ: ಚೆಂಡು ವಿಕೆಟ್​ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್,  ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ಯಶ್ ದಯಾಲ್ (ಅಲಭ್ಯ).

Source link

Exit mobile version