ಮದುವೆಯಾಗುವುದಾಗಿ ನಂಬಿಸಿ ಮೋಸ; ಮೊಹಮ್ಮದ್ ಶಮಿ ಸಹೋದರನ ಮೇಲೆ ಗಂಭೀರ ಆರೋಪ – Kannada News | Mohammed Kaif Fraud Allegations: Shami’s Brother Accused of Marriage Deceit and Betrayal

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ( Mohammed Shami) ಅವರ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನವೂ ಹಳಿತಪ್ಪಿದೆ. ಶಮಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಇತ್ತ ಶಮಿ ಅವರ ವೈವಾಹಿಕ ಜೀವನವೂ ಮುರಿದುಬಿದ್ದಿದೆ. 2014 ರಲ್ಲಿ ಶಮಿ, ಹಸಿನ್ ಜಹಾನ್ ಅವರನ್ನು ವಿವಾಹವಾಗಿದ್ದರು. ಆದರೆ 2018 ರಲ್ಲಿ ಹಸಿನ್ ಜಹಾನ್, ಶಮಿ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಘಟನೆಯು ಶಮಿ ಅವರ ವೃತ್ತಿಜೀವನದ ಮೇಲೂ ಪರಿಣಾಮ ಬೀರಿತ್ತು. ಇದೀಗ ಶಮಿ ಅವರ ಸಹೋದರ ಮೊಹಮ್ಮದ್ ಕೈಫ್ ವಿರುದ್ಧವೂ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಮೋಸ

ವಾಸ್ತವವಾಗಿ ಮೊಹಮ್ಮದ್ ಶಮಿ ಅವರ ಕಿರಿಯ ಸಹೋದರ ಮೊಹಮ್ಮದ್ ಕೈಫ್ ವಿರುದ್ಧ ಮಹಿಳೆಯೊಬ್ಬರು ವಂಚನೆ ಮತ್ತು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಚಾನೆಲ್​ವೊಂದಕ್ಕೆ ಸಂದರ್ಶನ ನೀಡಿರುವ ಮಹ್ವಿಶ್ ಎಂಬ ಮಹಿಳೆ, ‘ಆರಂಭದಲ್ಲಿ ನಮ್ಮಿಬ್ಬರ ನಡುವೆ ಸ್ನೇಹವಿತ್ತು, ಅದು ಕ್ರಮೇಣ ಪ್ರೀತಿಯಾಗಿ ಬದಲಾಯಿತು. ಆದರೆ ಮದುವೆಯ ವಿಷಯ ಬಂದಾಗ, ಕೈಫ್ ನಾನಾ ನೆಪಗಳನ್ನು ಹೇಳಲು ಪ್ರಾರಂಭಿಸಿದರು. ಕಾಮನ್ ಗೆಳೆಯನಿಂದ ನಾವಿಬ್ಬರು ಪರಸ್ಪರ ಪರಿಚಿತರಾದೆವು.

ಆ ನಂತರ ನಾವಿಬ್ಬರು ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದೆವು. ನಮ್ಮಿಬ್ಬರ ಸ್ನೇಹ ಸಂಬಂಧವಾಗಿ ಅರಳಿತು. ಹೀಗಾಗಿ ನಾನು ಕೈಫ್ ಅವರನ್ನು ಮದುವೆಯಾಗಲು ಬಯಸಿದ್ದೆ. ಆದರೆ ಕೈಫ್ ಬಳಿ ನಾನು ಈ ಬಗ್ಗೆ ಹೇಳಿದಕ್ಕೆ ಅವರು ನಾನಾ ಕಾರಣಗಳನ್ನು ನೀಡಲಾರಂಭಿಸಿದರು. ಈ ವಿಚಾರವನ್ನು ನಾನು ಕೈಫ್ ಅವರ ಅಣ್ಣ ಮೊಹಮ್ಮದ್ ಶಮಿ ಅವರೊಂದಿಗೂ ಮಾತನಾಡಿದ್ದೇನೆ. ಆದರೆ ಶಮಿ ಕೂಡ ಆ ನಂತರ ನನ್ನ ಫೋನ್‌ಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾರೆ ಎಂಬ ಆರೋಪಗಳನ್ನು ಹೊರಿಸಿದ್ದಾರೆ.

SIR ವಿಚಾರಣೆಗೆ ಹಾಜರಾಗಲು ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಸಮನ್ಸ್

ಮೊಹಮ್ಮದ್ ಕೈಫ್ ಯಾರು?

ಮೊಹಮ್ಮದ್ ಕೈಫ್ ಡಿಸೆಂಬರ್ 10, 1996 ರಂದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಜನಿಸಿದರು. ಬಂಗಾಳ ತಂಡದ ಪರ ದೇಶೀಯ ಕ್ರಿಕೆಟ್ ಆಡುವ ಕೈಫ್ ಬಲಗೈ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ವೇಗದ ಬೌಲರ್ ಆಗಿದ್ದಾರೆ. ಇದುವರೆಗೆ ಅವರು 14 ಪ್ರಥಮ ದರ್ಜೆ ಪಂದ್ಯಗಳು, 9 ಲಿಸ್ಟ್ ಎ ಪಂದ್ಯಗಳು ಮತ್ತು 1 ಟಿ20 ಪಂದ್ಯವನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 43 ವಿಕೆಟ್‌ಗಳನ್ನು ಮತ್ತು ಲಿಸ್ಟ್ ಎ ಪಂದ್ಯದಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದಾಗ್ಯೂ, ಅವರು ಇನ್ನೂ ಐಪಿಎಲ್‌ನಲ್ಲಿ ಆಡಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುದ್ಧ ಕೊನೆಗೊಳಿಸಲು ಇರಾನ್ ಮುಂದೆ ಹೊಸ ಕದನವಿರಾಮದ ಪ್ರಸ್ತಾಪವಿಟ್ಟ ಟ್ರಂಪ್ – Kannada News | Only fair conditions will be accepted Iran on US proposal to ending war

ವಾಷಿಂಗ್ಟನ್, ಮೇ 5: ಅಮೆರಿಕದ ಅಧ್ಯಕ್ಷ ಟ್ರಂಪ್ (Donald Trump) ಇರಾನ್ ಅನ್ನು ಮಂಡಿಯೂರುವಂತೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಅವರು ಒಪ್ಪಂದಕ್ಕಾಗಿ ಇರಾನ್‌ಗೆ ಹೊಸ ಪ್ರಸ್ತಾಪಗಳನ್ನು ಕಳುಹಿಸುತ್ತಿದ್ದಾರೆ. ಅಮೆರಿಕ ಇರಾನ್‌ಗೆ ಮತ್ತೊಂದು ಪ್ರಸ್ತಾಪವನ್ನು ಕಳುಹಿಸಿದೆ. ಇದರಲ್ಲಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಷರತ್ತುಗಳು ಸೇರಿವೆ. ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಲು ಅಮೆರಿಕ ಇರಾನ್‌ಗೆ 48 ಗಂಟೆಗಳ ಕಾಲಾವಕಾಶ ನೀಡಿದೆ.

ಶಾಂತಿ ಮಾತುಕತೆ ಆರಂಭವಾದಾಗಿನಿಂದ ಇರಾನ್ ತನ್ನ ಷರತ್ತುಗಳಿಂದ ಹಿಂದೆ ಸರಿದಿಲ್ಲ. ಇರಾನ್ ಅಮೆರಿಕದ ಹಿಂದಿನ ಪ್ರಸ್ತಾಪಗಳನ್ನು ಸ್ವೀಕರಿಸಲು ನಿರಾಕರಿಸಿರುವುದರಿಂದ ಎಲ್ಲರ ಕಣ್ಣುಗಳು ಈ ಪ್ರಸ್ತಾವನೆಯ ಮೇಲಿವೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವೆ, ಈ ಪ್ರದೇಶದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ (ಯುಎಸ್) 14 ಅಂಶಗಳ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವುದಾಗಿ ಇರಾನ್ ಹೇಳಿದೆ. ಇರಾನ್ ‘ನ್ಯಾಯಯುತ’ವಾದ ಷರತ್ತುಗಳನ್ನು ಮಾತ್ರ ಸ್ವೀಕರಿಸಲಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಇರಾನ್ ಸಮರ ಅಂತ್ಯ: ಟ್ರಂಪ್ ಆಡಳಿತದ ದಿಢೀರ್ ಘೋಷಣೆ, ಸಂಸತ್ತಿನ ಹಸ್ತಕ್ಷೇಪಕ್ಕೆ ಬೀಳಲಿದೆಯೇ ಬ್ರೇಕ್?

ಮುಂದಿನ ಎರಡು ದಿನಗಳಲ್ಲಿ ಇರಾನ್ ಕುರಿತು ಪ್ರತಿಕ್ರಿಯಿಸುತ್ತದೆ ಎಂದು ಅಮೆರಿಕ ನಿರೀಕ್ಷಿಸುತ್ತಿದ್ದರೂ, ಎರಡೂ ಕಡೆಯವರ ನಡುವೆ ಇನ್ನೂ ಅಂತಿಮ ಒಪ್ಪಂದಕ್ಕೆ ಬರಲಾಗಿಲ್ಲ. ಆಕ್ಸಿಯಾಮ್ ಪ್ರಕಾರ, ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದ ನಂತರ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಇದೀಗ ಒಂದು ಹಂತಕ್ಕೆ ಬರುವಂತೆ ಕಾಣುತ್ತಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿಗೆ ಮೋದಿಗೆ ಟ್ರಂಪ್ ಅಭಿನಂದನೆ

ಇದರ ನಡುವೆ ಟೆಹ್ರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಹೆಚ್ಚಿನ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. ಟ್ರೂತ್ ಸೋಶಿಯಲ್ ಮೂಲಕ ಪೋಸ್ಟ್ ಮಾಡಿರುವ ಅವರು, ಇರಾನ್ ಒಪ್ಪಂದವನ್ನು ಒಪ್ಪಿಕೊಳ್ಳುವುದನ್ನು ಅವಲಂಬಿಸಿ ಈ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಲಿದೆಯೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ ಎಂದು ಬರೆದಿದ್ದಾರೆ. “ಅವರು ಒಪ್ಪದಿದ್ದರೆ ಬಾಂಬ್ ದಾಳಿ ಪ್ರಾರಂಭವಾಗುತ್ತದೆ” ಎಂದು ಟ್ರಂಪ್ ಬರೆದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪ್ರತಿನಿತ್ಯ ಬ್ರಷ್ ಮಾಡಿದ್ರೂ ಕ್ಯಾವಿಟಿ ಉಂಟಾಗುತ್ತಿದ್ದರೆ ಈ ಸಮಸ್ಯೆ ತಡೆಯಲು ಸಿಂಪಲ್ ಐಡಿಯಾ ಇಲ್ಲಿದೆ – Kannada News | Tooth Decay Explained: Early Cavity Symptoms You Shouldn’t Ignore

ಪ್ರತಿದಿನ ಹಲ್ಲುಗಳನ್ನು ಬ್ರಷ್ (Brushing) ಮಾಡುತ್ತಿದ್ದರೂ ಕ್ಯಾವಿಟಿ ಸಮಸ್ಯೆ (Cavity) ಕಾಣಿಸಿಕೊಳ್ಳುವುದು ಹಲವರಲ್ಲಿ ಸಾಮಾನ್ಯವಾಗಿದೆ. ದಂತ ಆರೋಗ್ಯದ ಬಗ್ಗೆ ಜಾಗೃತಿ ಇದ್ದರೂ ಈ ಸಮಸ್ಯೆ ಉಂಟಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ. ದಂತ ವೈದ್ಯರ ಪ್ರಕಾರ, ಕ್ಯಾವಿಟಿ ಎಂದರೆ ದಂತದ ಮೇಲ್ಭಾಗದಲ್ಲಿ ಹಾನಿ ಉಂಟಾಗುವುದು. ಇದು ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ಉಂಟಾಗಿ, ನಿಧಾನವಾಗಿ ದಂತದಲ್ಲಿ ಕುಳಿ ಉಂಟುಮಾಡುತ್ತದೆ. ಪ್ರತಿದಿನ ಬ್ರಷ್ ಮಾಡುವುದು ಮಾತ್ರ ಸಾಕಾಗುವುದಿಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು ಕೂಡ ಅತ್ಯಗತ್ಯವಾಗುತ್ತದೆ. ಹಾಗಾದರೆ ಯಾವ ರೀತಿ ಹಲ್ಲುಜ್ಜಬೇಕು, ಕ್ಯಾವಿಟಿಯ ಆರಂಭಿಕ ಲಕ್ಷಣಗಳು ಹೇಗಿರುತ್ತವೆ, ಇದರಿಂದ ಮುಕ್ತಿ ಪಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಹಲ್ಲುಜ್ಜುವುದನ್ನು ಒಂದು ಕೆಲಸದ ರೀತಿ ಭಾವಿಸುತ್ತಾರೆ. ಹಾಗಾಗಿ ಆದಷ್ಟು ಬೇಗ ಅದನ್ನು ಮುಗಿಸಲು ಕಾಯುತ್ತಿರುತ್ತಾರೆ. ಆದರೆ ದಂತ ಅಥವಾ ಹಲ್ಲುಗಳ ಮೇಲೆ ಸರಿಯಾದ ಕೋನದಲ್ಲಿ ಬ್ರಷ್ ಮಾಡದೆ, ಬೇಗ ಬೇಗ ಮಾಡಿ ಮುಗಿಸುವುದರಿಂದ ದಂತಗಳ ನಡುವೆ ಇರುವ ಅಶುದ್ಧಿ ಸಂಪೂರ್ಣವಾಗಿ ಹೋಗುವುದಿಲ್ಲ. ತಜ್ಞರ ಪ್ರಕಾರ, ದಿನಕ್ಕೆ ಕನಿಷ್ಠ ಎರಡು ಬಾರಿ, ಎರಡು ನಿಮಿಷಗಳ ಕಾಲ ಸರಿಯಾದ ರೀತಿಯಲ್ಲಿ ಬ್ರಷ್ ಮಾಡಬೇಕು. ಅದರಲ್ಲಿಯೂ ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಕ್ಯಾವಿಟಿಗೆ ಪ್ರಮುಖ ಕಾರಣವಾಗಿದೆ. ಸಿಹಿ ತಿಂದ ನಂತರ ಬಾಯಿ ತೊಳೆಯದೇ ಇದ್ದರೆ, ಆ ಆಹಾರದ ಕಣಗಳು ದಂತಗಳ ಮೇಲೆ ಉಳಿದು ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತವೆ. ಇದರಿಂದ ಆಮ್ಲ ಉತ್ಪತ್ತಿಯಾಗಿ ದಂತ ಹಾನಿಯಾಗುತ್ತದೆ.

ಇದನ್ನೂ ಓದಿ: ಹಲ್ಲುಜ್ಜಿದ ತಕ್ಷಣ ಯಾಕೆ ನೀರು ಕುಡಿಯಬಾರದು? ಈ ಗಂಭೀರ ಕಾರಣ ತಿಳಿದ್ರೆ ನೀವೆಂದು ಈ ತಪ್ಪು ಮಾಡಲ್ಲ

ಕ್ಯಾವಿಟಿಯ ಆರಂಭಿಕ ಲಕ್ಷಣಗಳು:

ಕ್ಯಾವಿಟಿ ಆರಂಭದಲ್ಲಿ ಸಣ್ಣ ಲಕ್ಷಣಗಳಿಂದಲೇ ಕಾಣಿಸಿಕೊಳ್ಳುತ್ತದೆ. ದಂತದಲ್ಲಿ ತಂಪು ಅಥವಾ ಬಿಸಿ ತಟ್ಟುವುದು, ಸಣ್ಣ ನೋವು, ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ನೀರು ಕುಡಿಯುವಾಗ ಅಥವಾ ಆಹಾರ ತಿನ್ನುವಾಗ ನೋವು ಉಂಟಾಗುವುದು ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗಂಭೀರವಾಗಬಹುದು.

ಕ್ಯಾವಿಟಿ ತಡೆಯಲು ಸಲಹೆಗಳು:

ಸಾಮಾನ್ಯವಾಗಿ ಕ್ಯಾವಿಟಿ ತಡೆಗಟ್ಟಲು ದಿನಕ್ಕೆ ಎರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು, ಫ್ಲಾಸ್ ಬಳಕೆ, ಸಿಹಿ ಹಾಗೂ ಜಂಕ್ ಫುಡ್ ಕಡಿಮೆ ಮಾಡುವುದು ಮುಖ್ಯ. ಯಾವುದೇ ತೊಂದರೆ ಕಂಡುಬಂದರೆ ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಒಟ್ಟಾರೆ, ದಂತ ಆರೈಕೆಯಲ್ಲಿ ಸರಿಯಾದ ಪದ್ಧತಿ ಮತ್ತು ಆಹಾರ ಕ್ರಮ ಪಾಲಿಸಿದರೆ ಕ್ಯಾವಿಟಿ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಏನು ವಿಶೇಷ? – Kannada News | PM Narendra Modi to Visit Bengaluru on May 10, Says R Ashok

ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಅಧಿಕಾರ ಹಾಗೂ ಕೇರಳ ರಾಜ್ಯದ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಹಿನ್ನೆಲೆ HAL ಏರ್​ಪೋರ್ಟ್ ಪ್ರವೇಶದ್ವಾರ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 10ರಂದು ಬೆಳಿಗ್ಗೆ 9 ಗಂಟೆಗೆ ಮೋದಿ ಅವರು HAL ಏರ್‌ಪೋರ್ಟ್‌ಗೆ ಆಗಮಿಸಲಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಇದೊಂದು ಸಂಪೂರ್ಣ ಬಿಜೆಪಿ ಕಾರ್ಯಕ್ರಮವಾಗಿದ್ದು, ನಂತರ ಅವರು ರವಿಶಂಕರ್ ಗುರೂಜಿ ಆಶ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆರ್​​. ಅಶೋಕ್ ಮಾಹಿತಿ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ‘ನಿರಾಶೆಯಾಗಿದೆ’.. ಕೈತಪ್ಪಿದ ಫೈನಲ್ ಆತಿಥ್ಯ; ಹೇಳಿಕೆ ಬಿಡುಗಡೆ ಮಾಡಿದ ಕೆಎಸ್​ಸಿಎ – Kannada News | BCCI Shifts IPL 2026 Playoffs/Final from Bengaluru; KSCA Expresses Disappointment

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಐಪಿಎಲ್ 2026 (IPL 2026) ರ ಪ್ಲೇಆಫ್‌ ಹಾಗೂ ಫೈನಲ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಬಿಸಿಸಿಐ (BCCI) ಕೂಡ ಐಪಿಎಲ್ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ನಡೆಸಲು ನಿರ್ಧರಿಸಿತ್ತು. ಇತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಐಪಿಎಲ್ ಫೈನಲ್​ಗೆ ಸಕಲ ತಯಾರಿ ಮಾಡಿಕೊಂಡಿತ್ತು. ಆದರೆ ಲೀಗ್ ಪಂದ್ಯಗಳು ಮುಗಿಯುವುದಕ್ಕೂ ಮುನ್ನ ಪ್ಲೇಆಫ್‌ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿರುವ ಬಿಸಿಸಿಐ, ಪ್ಲೇಆಫ್‌ ಹಾಗೂ ಫೈನಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಈ ಬಗ್ಗೆ ಬಿಸಿಸಿಐ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. ಇದೀಗ ಫೈನಲ್ ಕೈತಪ್ಪಿದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೆಎಸ್​​ಸಿಎ ಈ ಬಗ್ಗೆ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ನಿರಾಶೆಯಾಗಿದೆ; ಕೆಎಸ್​ಸಿಎ

ಬೆಂಗಳೂರುದಲ್ಲಿ ಐಪಿಎಲ್ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಸ್ಪಷ್ಟೀಕರಣ ನೀಡುತ್ತಿದ್ದು, ಮೊದಲಿಗೆ, ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿರುವುದಕ್ಕೆ ಕೆಎಸ್​ಸಿಎ ನಿರಾಶೆ ವ್ಯಕ್ತಪಡಿಸುತ್ತದೆ. ಕೆಎಸ್​ಸಿಎ ಅಧ್ಯಕ್ಷರು ಹಾಗೂ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಈ ವಿಷಯವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದು, ಬೆಂಗಳೂರಿನಲ್ಲಿ ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು KSCAಯ ಸಿದ್ಧತೆ, ಆಸಕ್ತಿ ಹಾಗೂ ಇಚ್ಛೆಯನ್ನು ಅಧಿಕೃತವಾಗಿ ತಿಳಿಸಿದ್ದರು.

ಪ್ರಸ್ತುತ ಸೀಸನ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯಗಳು ಸುಗಮ ನಿರ್ವಹಣೆ, ಜನಸ್ತೋಮ ನಿಯಂತ್ರಣ, ಕಾರ್ಯಾಚರಣಾ ದಕ್ಷತೆ ಹಾಗೂ ಪ್ರೇಕ್ಷಕರ ಅನುಭವದ ದೃಷ್ಟಿಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಇಂತಹ ಮಹತ್ವದ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸುವ ಸಾಮರ್ಥ್ಯವನ್ನು KSCA ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಸಂಬಂಧ KSCA, ಬೆಂಗಳೂರಿನಲ್ಲಿ ಪ್ರಸ್ತುತ ಐಪಿಎಲ್ ಸೀಸನ್ ಅನ್ನು ಯಾವ ರೀತಿಯ ಕಾರ್ಯಾಚರಣಾ ವ್ಯವಸ್ಥೆಯಡಿ ನಡೆಸಲಾಯಿತು ಎಂಬುದನ್ನು ವಿವರಿಸುವ ಸಮಗ್ರ ಪತ್ರವನ್ನು BCCIಗೆ ಕಳುಹಿಸಿತ್ತು. ಈ ವ್ಯವಸ್ಥೆಗಳು ಮತ್ತು ಪ್ರೋಟೋಕಾಲ್‌ಗಳು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೇ ಅನುಸರಿಸಲಾಗುತ್ತಿದ್ದು, ಈ ಸೀಸನ್‌ನಲ್ಲಿಯೂ ಹಾಗೂ ಹಿಂದಿನ ಪ್ಲೇಆಫ್ ಪಂದ್ಯಗಳ ಆಯೋಜನೆಯಲ್ಲಿಯೂ ಸಮಾನವಾಗಿ ಜಾರಿಗೊಳಿಸಲಾಗಿತ್ತು.

ಬಿಸಿಸಿಐ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ

KSCA ಕಳುಹಿಸಿದ್ದ ಪತ್ರ ಸಂಪೂರ್ಣವಾಗಿ ವಾಸ್ತವಾಧಾರಿತ, ಕಾರ್ಯಾಚರಣಾತ್ಮಕ ಹಾಗೂ ಸ್ಪಷ್ಟೀಕರಣಾತ್ಮಕ ಸ್ವರೂಪದ್ದಾಗಿದ್ದು, ಇಂತಹ ಮಹತ್ವದ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದ ಲಾಜಿಸ್ಟಿಕ್ಸ್ ಮತ್ತು ಹಿತಾಸಕ್ತಿದಾರರ ಅಗತ್ಯಗಳ ಕುರಿತು ಪಾರದರ್ಶಕತೆ ಒದಗಿಸುವ ಉದ್ದೇಶವನ್ನಷ್ಟೇ ಹೊಂದಿತ್ತು. ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು KSCA ಸಂಪೂರ್ಣ ಸಿದ್ಧತೆಯಲ್ಲಿದ್ದರೂ, BCCI ಈ ಪಂದ್ಯಗಳನ್ನು ಬೇರೆಡೆ ನಡೆಸಲು ನಿರ್ಧಾರ ಕೈಗೊಂಡಿರುವುದನ್ನು ನಾವು ಅರಿತುಕೊಂಡಿದ್ದೇವೆ. ಈ ನಿರ್ಧಾರದ ನಿರ್ದಿಷ್ಟ ಕಾರಣಗಳನ್ನು KSCAಗೆ ಅಧಿಕೃತವಾಗಿ ತಿಳಿಸದಿದ್ದರೂ, BCCIಯ ನಿರ್ಧಾರಾಧಿಕಾರ ಮತ್ತು ಪ್ರಾಧಿಕಾರವನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ.

IPL 2026: ಆರ್​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಐಪಿಎಲ್ ಫೈನಲ್ ಬೆಂಗಳೂರಿನಿಂದ ಅಹಮದಾಬಾದಿಗೆ ಶಿಫ್ಟ್

KSCA ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ವದ ಪಂದ್ಯಗಳನ್ನು ಆಯೋಜಿಸಲು ಸದಾ ಸಿದ್ಧವಾಗಿದ್ದು, ಭಾರತದಲ್ಲಿ ಕ್ರಿಕೆಟ್ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಗೆ BCCI, ಫ್ರಾಂಚೈಸಿಗಳು, ಸರ್ಕಾರದ ಅಧಿಕಾರಿಗಳು ಹಾಗೂ ಎಲ್ಲಾ ಹಿತಾಸಕ್ತಿದಾರರಿಗೆ ತನ್ನ ಸಂಪೂರ್ಣ ಸಹಕಾರವನ್ನು ಮುಂದುವರಿಸಲಿದೆ. ಮಾಧ್ಯಮ ವಲಯ ಹಾಗೂ ಕ್ರಿಕೆಟ್ ಅಭಿಮಾನಿಗಳ ನಿರಂತರ ಬೆಂಬಲ, ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗುರು’ವಿಗೆ ವಿದಾಯ ಹೇಳಿದ ವಿಜಯ್, ಗೆಳೆಯನ ನೋವಿಗೆ ಜೊತೆ – Kannada News | Thalapathy Vijay pay his last respects to producer RB Choudary Express condolences to family

ದಳಪತಿ ವಿಜಯ್ (Thalapathy Vijay) ಇತಿಹಾಸ ಬರೆದಿದ್ದಾರೆ. ತಮ್ಮ ಅಭೂತಪೂರ್ವ ಸ್ಟಾರ್​​ಡಮ್, ಅಭಿಮಾನಿ ಬಳಗವನ್ನು ಬಳಸಿಕೊಂಡು ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆ ಗೆದ್ದಿದ್ದು, ಸಿಎಂ ಆಗಲಿದ್ದಾರೆ. ಆದರೆ ಇಂಥಹಾ ಖುಷಿಯ ಸಮಯದಲ್ಲಿಯೇ ವಿಜಯ್ ಅವರ ಚಿತ್ರರಂಗದ ಗುರುಗಳಲ್ಲಿ ಒಬ್ಬರಾದ ಆರ್​​ಬಿ ಚೌಧರಿ ಅವರು ನಿಧನ ಹೊಂದಿದ್ದಾರೆ. ಖ್ಯಾತ ನಿರ್ಮಾಪಕ ಆರ್​​ಬಿ ಚೌಧರಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದು, ವಿಜಯ್, ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಅವರ ಅಂತಿಮ ದರ್ಶನ ಪಡೆದಿರುವುದಲ್ಲದೆ, ಗೆಳೆಯನಿಗೆ ಸಾಂತ್ವನ ಸಹ ಹೇಳಿದ್ದಾರೆ.

ಆರ್​​ಬಿ ಚೌಧರಿ ಅವರು ವಿಜಯ್​​ಗೆ ಹಲವು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅವರ ಸ್ಟಾರ್​​ಡಮ್​​ಗೆ ಕಾರಣವಾದ ನಿರ್ಮಾಪಕ. ಅದು ಮಾತ್ರವೇ ಅಲ್ಲದೆ, ವಿಜಯ್ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ನಟ ಜೀವ ಅವರ ತಂದೆಯೂ ಹೌದು. ಆರ್​​ಬಿ ಚೌಧರಿ ಅವರು ರಾಜಸ್ಥಾನದ ಹಳ್ಳಿಯೊಂದರ ಬಳಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರ ಅಂತಿಮ ದರ್ಶನವನ್ನು ವಿಜಯ್ ಅವರು ಇಂದು (ಮೇ 6) ಸಂಜೆ ಪಡೆದಿದ್ದಾರೆ.

ವಿಜಯ್ ಅವರು ಆರ್​​ಬಿ ಚೌಧರಿ ಅವರ ಅಂತಿಮ ದರ್ಶನ ಪಡೆದು, ಗೆಳೆಯ ಜೀವ ಅವರನ್ನು ಆಲಂಗಿಸಿಕೊಂಡು ಅವರಿಗೆ ಸಾಂತ್ವನ ಹೇಳಿದ್ದಾರೆ. ಜೀವ ಮತ್ತು ವಿಜಯ್ ಒಟ್ಟಿಗೆ ‘ನನ್ಬ’ ಸಿನಿಮಾನಲ್ಲಿ ನಟಿಸಿದ್ದರು. ‘ನನ್ಬ’ ಎಂದರೆ ತಮಿಳಿನಲ್ಲಿ ಗೆಳೆಯ ಎಂದರ್ಥ. ಇಬ್ಬರೂ ಬಹಳ ಆತ್ಮೀಯ ಗೆಳೆಯರಾಗಿದ್ದರು. ಅದಕ್ಕಿಂತಲೂ ಮುಖ್ಯವಾಗಿ, ವಿಜಯ್ ಅವರು ಸ್ಟಾರ್ ಆಗಿ ಚಿತ್ರರಂಗದಲ್ಲಿ ಬೆಳೆಯಲು ಆರ್​​ಬಿ ಚೌಧರಿ ಅವರು ಬಹು ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರು.

ಇದನ್ನೂ ಓದಿ:ದಳಪತಿ ವಿಜಯ್ ಗೆದ್ದಿದ್ದಕ್ಕೆ ದುನಿಯಾ ವಿಜಿ ಹೇಳಿದ್ದೇನು?

ತೀರ ಸಾಧಾರಣ ಯಶಸ್ಸನ್ನಷ್ಟೆ ಕಂಡು, ದೊಡ್ಡ ಹಿಟ್ ಗಾಗಿ ವಿಜಯ್ ಕಾತರರಾಗಿದ್ದಾಗ 1996 ರಲ್ಲಿ ಚೌಧರಿ ಅವರು ವಿಜಯ್ ಅವರಿಗಾಗಿ ‘ಪೂವೇ ಉನಕ್ಕಾಗ’ ಸಿನಿಮಾ ನಿರ್ಮಿಸಿದರು. ಅದು ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ 1999ರಲ್ಲಿ ಮತ್ತೊಂದು ಸಿನಿಮಾ ನಿರ್ಮಿಸಿದರು. ಅದೂ ಸಹ ಬ್ಲಾಕ್ ಬಸ್ಟರ್. ಫ್ಯಾಮಿಲಿ ಆಡಿಯೆನ್ಸ್ ನಟ ಎನಿಸಿಕೊಂಡಿದ್ದ ವಿಜಯ್ ಅವರಿಗೆ ಮಾಸ್ ಹೀರೋ ಇಮೇಜು ಕೊಟ್ಟ ‘ತಿರುಪಾಚ್ಚಿ’ ಸಿನಿಮಾವನ್ನು ಸಹ ಚೌಧರಿ ಅವರೇ ನಿರ್ಮಿಸಿದ್ದು. ಬಳಿಕ 2014 ರಲ್ಲಿ ಬಂದ ಮತ್ತೊಂದು ಬ್ಲಾಕ್ ಬಸ್ಟರ್ ‘ಜಿಲ್ಲಾ’ ಸಿನಿಮಾವನ್ನೂ ಸಹ ಸೂಪರ್ ಗುಡ್ ಫಿಲಮ್ಸ್​ನ ಚೌಧರಿ ಅವರೇ ನಿರ್ಮಿಸಿದ್ದು.

ಚೌಧರಿ ಅವರು ಈ ವರೆಗೆ 99 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 100ನೇ ಸಿನಿಮಾವನ್ನು ವಿಜಯ್ ಜೊತೆಗೇ ನಿರ್ಮಾಣ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಆದರೆ ವಿಜಯ್ ಹಠಾತ್ತನೆ ಸಿನಿಮಾದಿಂದ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಆದರೆ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮುಂಚೆಯೇ ಚೌಧರಿ ನಿಧನ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೀವು ಮಾಡುವ ಈ ತಪ್ಪುಗಳು ಕುಕ್ಕರ್‌ ಸ್ಫೋಟಗೊಳ್ಳಲು ಕಾರಣವಾಗಬಹುದು – Kannada News | These mistakes you make can cause your pressure cooker to explode‌

ಈಗಂತೂ ಪ್ರತಿ ಮನೆಯಲ್ಲೂ ಕುಕ್ಕರ್‌ (pressure cooker) ಬಳಕೆ ಮಾಡಲಾಗುತ್ತದೆ. ಅನ್ನ ಬೇಯಿಸುವುದರಿಂದ ಹಿಡಿದು ಸಾರು, ಸಾಂಬಾರ್‌ ಮಾಡುವವರೆಗೆ ಪ್ರತಿಯೊಂದು ಅಡುಗೆಯನ್ನೂ ಹೆಚ್ಚಿನವರು ಕುಕ್ಕರ್‌ನಲ್ಲಿಯೇ ಮಾಡುತ್ತಾರೆ. ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುವುದಲ್ಲದೆ ಗ್ಯಾಸ್‌ ಕೂಡ ಉಳಿತಾಯವಾಗುತ್ತದೆ. ವಿಷಯ ಏನೆಪ್ಪಾ ಅಂದ್ರೆ ಅನೇಕರಿಗೆ  ಕುಕ್ಕರ್‌ ಹೇಗೆ ಬಳಸಬೇಕು ಎಂಬ ಅರಿವಿಲ್ಲ. ಈ ಸಣ್ಣ ನಿರ್ಲಕ್ಷ್ಯ, ಅಜಾಗರೂಕತೆ ಕುಕ್ಕರ್‌ ಸ್ಫೋಟಗೊಳ್ಳಲು ಕಾರಣವಾಗಬಹುದು. ಆದ್ದರಿಂದ ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಈ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅತ್ಯಗತ್ಯ.

ನಿಮ್ಮ ಈ ತಪ್ಪುಗಳಿಂದ ಕುಕ್ಕರ್‌ ಸ್ಫೋಟಗೊಳ್ಳಬಹುದು:

ಗ್ಯಾಸ್ಕೆಟ್ ರಬ್ಬರ್‌ನ ನಿರ್ಲಕ್ಯ: ಪ್ರೆಶರ್ ಕುಕ್ಕರ್‌ನಲ್ಲಿ ರಬ್ಬರ್ ಗ್ಯಾಸ್ಕೆಟ್ ಮತ್ತು ಸೀಟಿ ಅತ್ಯಗತ್ಯ. ಒಟ್ಟಾಗಿ, ಅವೆರಡು ಆಂತರಿಕ ಒತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಹೆಚ್ಚುವರಿ ಉಗಿಯನ್ನು ಬಿಡುಗಡೆ ಮಾಡುತ್ತವೆ. ಆದರೆ ಅನೇಕ ಮಂದಿ ಗ್ಯಾಸ್ಕೆಟ್‌ ರಬ್ಬರ್‌ ಸಡಿಲವಾದರೂ, ಅವು ಸವೆದು ಹೋದರು ಅದನ್ನು ಚೇಂಜ್‌ ಮಾಡುವುದುದಿಲ್ಲ. ಇದು ಪ್ರೆಶರ್ ಕುಕ್ಕರ್‌ನೊಳಗಿನ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ, ಇದು ಕುಕ್ಕರ್‌ ಬ್ಲಾಸ್ಟ್‌ ಆಗಲು ಕಾರಣವಾಗುತ್ತದೆ. ಆದ್ದರಿಂದ ಸೀಟಿ ಮತ್ತು ಗ್ಯಾಸ್ಕೆಟ್ ಅನ್ನು ನಿಯತಕಾಲಿಕವಾಗಿ ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ತಕ್ಷಣ ಅವುಗಳನ್ನು ಬದಲಾಯಿಸಿ.

ಕುಕ್ಕರ್ ಅನ್ನು ಅತಿಯಾಗಿ ತುಂಬಿಸುವುದು: ಅನೇಕರು ಕುಕ್ಕರ್‌ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಆಹಾರ ತುಂಬಿಸುತ್ತಾರೆ. ಹೀಗೆ ಕುಕ್ಕರ್‌ ಸಂಪೂರ್ಣವಾಗಿ ತುಂಬುವವರೆಗೆ ಅದರಲ್ಲಿ ಅನ್ನ, ತರಕಾರಿ ಬೇಯಿಸಬಾರದು. ಇದರಿಂದ ಕುಕ್ಕರ್‌ ಒಳಗೆ ಉತ್ಪತ್ತಿಯಾಗುವ ಉಗಿ ಹೊರಗೆ ಹೋಗಲು ಯಾವುದೇ ಮಾರ್ಗವಿರುವುದಿಲ್ಲ. ಇದು ಒತ್ತಡದ ಮಟ್ಟ ವೇಗವಾಗಿ ಏರಿಕೆಯಾಗಲು ಕಾರಣವಾಗುತ್ತದೆ. ಇದರಿಂದ ಕುಕ್ಕರ್‌ ಸ್ಫೋಟಗೊಳ್ಳಬಹುದು. ಆದ್ದರಿಂದ ಯಾವಾಗಲೂ ಕಕ್ಕರ್‌ನ ಸಾಮರ್ಥ್ಯದ  2/3 ರಷ್ಟು ಮಾತ್ರ ಆಹಾರವನ್ನು ತುಂಬಿಸಬೇಕು.

ಸೀಟಿಯನ್ನು ಸ್ವಚ್ಛಗೊಳಿಸದಿರುವುದು: ಸೀಟಿ ಒತ್ತಡ ಬಿಡುಗಡೆಗೆ  ಕುಕ್ಕರ್‌ನ ಪ್ರಮುಖ ಭಾಗವಾಗಿದೆ. ಅದರಲ್ಲಿ ಕೊಳೆ ಅಥವಾ ಆಹಾರ ಕಣಗಳು ಸಿಲುಕಿಕೊಂಡರೆ, ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಉಗಿ ತಪ್ಪಿಸಿಕೊಳ್ಳುವುದನ್ನು ತಡೆಯುತ್ತದೆ, ಇದರಿಂದ ಕುಕ್ಕರ್ ಒಳಗೆ ಒತ್ತಡ ಹೆಚ್ಚಾಗುತ್ತದೆ ಮತ್ತು ಕುಕ್ಕರ್ ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪ್ರತಿ ಬಳಕೆಯ ನಂತರ ಸೀಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ವೆಂಟ್ ಪೈಪ್‌ನಲ್ಲಿ ಯಾವುದೇ ಅಡಚಣೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಪಾತ್ರೆ ತೊಳೆಯುವ ಸ್ಪಾಂಜ್‌ಗಳ ಸ್ವಚ್ಛತೆಯ ಬಗ್ಗೆ ಇರಲಿ ತುಸು ಹೆಚ್ಚು ಕಾಳಜಿ

ಕಡಿಮೆ ನೀರು ಸೇರಿಸುವುದು: ಕೆಲವರು ಕುಕ್ಕರ್‌ನಲ್ಲಿ ಆಹಾರ ಬೇಯಿಸುವಾಗ ಅಗತ್ಯಕ್ಕಿಂತಲೂ ಕಡಿಮೆ ಪ್ರಮಾಣದ ನೀರನ್ನು ಸೇರಿಸುತ್ತಾರೆ. ಇದು ಆಹಾರವನ್ನು ಸುಡುವುದಲ್ಲದೆ, ಒಳಗೆ ಅತಿಯಾದ ಶಾಖವನ್ನು ಉತ್ಪಾದಿಸುತ್ತದೆ. ಇದು ಕುಕ್ಕರ್ ಅತಿಯಾಗಿ ಬಿಸಿಯಾಗಲು ಮತ್ತು ಸ್ಫೋಟಗೊಳ್ಳಲು ಕಾರಣವಾಗಬಹುದು. ಆದ್ದರಿಂದ ಆಹಾರ ಬೇಯಿಸುವಾಗ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ.

ಹಳೆಯ ಪ್ರೆಶರ್ ಕುಕ್ಕರ್‌ ಬಳಕೆ: ಕೆಲವರು ಹಲವು ವರ್ಷಗಳ ಹಳೆಯ ಕುಕ್ಕರ್‌ಗಳನ್ನೇ ಬಳಕೆ ಮಾಡುತ್ತಾರೆ. ಕಾಲ ಕಳೆದಂತೆ ಕುಕ್ಕರ್‌ನ ಮುಚ್ಚಳ ಮತ್ತು ಲಾಕ್ ವ್ಯವಸ್ಥೆಯು ದುರ್ಬಲಗೊಳ್ಳುವ ಕಾರಣ ಹಳೆಯ ಪ್ರೆಶರ್‌ ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ತುಂಬಾನೇ ಡೇಂಜರ್.‌ ಏಕೆಂದರೆ ಇದು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕುಕ್ಕರ್‌ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ, ಮತ್ತು ಯಾವಾಗಲೂ ಐಎಸ್‌ಐ ಗುರುತು ಹೊಂದಿರುವ ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನೇ ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ: ಹೊಸ ದಿನಾಂಕದತ್ತ ಚಿತ್ರತಂಡದ ಚಿತ್ತ – Kannada News | Samantha Ruth Prabhu starrer Maa Inti Bangaram movie release date postpone

ಇತ್ತೀಚೆಗೆ ಸಿನಿಮಾಗಳ ಬಿಡುಗಡೆ ದಿನಗಳು ಪದೇ ಪದೇ ಬದಲಾವಣೆ ಆಗುತ್ತಲೇ ಇವೆ. ‘ಟಾಕ್ಸಿಕ್’ (Toxic) ಸಿನಿಮಾದ ದಿನಾಂಕ ಬದಲಾವಣೆ ಆದ ಬಳಿಕ ಅದರ ಪರಿಣಾಮದಿಂದಲೋ ಏನೋ ಎಷ್ಟೋಂದು ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾವಣೆ ಆಗಿವೆ, ಈಗಲೂ ಆಗುತ್ತಲೇ ಇವೆ. ‘ಉಸ್ತಾದ್ ಭಗತ್ ಸಿಂಗ್’, ‘ಡಕಾಯತ್’, ‘ಪೆದ್ದಿ’ ಸಿನಿಮಾಗಳ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಯ್ತು. ಇದೀಗ ಸಮಂತಾ ಋತ್ ಪ್ರಭು ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ನಿಗದಿಯಾಗಿದ್ದ ದಿನಾಂಕದಂದು ಚಿತ್ರ ತೆರೆಗೆ ಬರುತ್ತಿಲ್ಲ, ಬದಲಿಗೆ ಬೇರೆ ದಿನಾಂಕವನ್ನು ರಿಲೀಸ್​​ಗೆ ನಿಗದಿ ಮಾಡಲಾಗುತ್ತಿದೆ.

ಈ ಹಿಂದೆ ‘ಮಾ ಇಂಟಿ ಬಂಗಾರಂ’ ಸಿನಿಮಾವು ಮೇ 15 ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಚಿತ್ರತಂಡವೂ ಸಹ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿತ್ತು. ಆದರೆ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ ಹಾಗೂ ಬಾಕ್ಸ್ ಆಫೀಸ್​​ನಲ್ಲಿ ಕೆಲವು ದೊಡ್ಡ ಸಿನಿಮಾಗಳು ಆ ಸಮಯದಲ್ಲಿ ಬಿಡುಗಡೆ ಆಗುತ್ತಿರುವ ಕಾರಣ, ಬಾಕ್ಸ್ ಆಫೀಸ್ ಪೈಪೋಟಿಯನ್ನು ತಪ್ಪಿಸಲೆಂದು ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕ ಬದಲಾವಣೆಗೆ ಮುಂದಾಗಿದೆ.

ಆರಂಭದಲ್ಲಿ ಈ ಚಿತ್ರವನ್ನು ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಬಳಿಕ ಮೇ 15 ರಂದು ಚಿತ್ರವನ್ನು ಅದ್ಧೂರಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಬೇಸಿಗೆಯ ರಜಾದಿನಗಳ ಲಾಭವನ್ನು ಪಡೆಯಲು ಚಿತ್ರತಂಡ ಈ ದಿನಾಂಕವನ್ನು ಆಯ್ದುಕೊಂಡಿತ್ತು, ಆದರೆ ಈಗ ಮತ್ತೆ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಈಗಾಗಲೇ ಸಿನಿಮಾದ ಟೀಸರ್, ಹಾಡು ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿವೆ. ಸಮಂತಾ, ಮುದ್ದು ಸೊಸೆಯಾಗಿ ಜೊತೆಗೆ ಆಕ್ಷನ್ ಕ್ವೀನ್ ಆಗಿಯೂ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ಸಮಂತಾ ಜೊತೆಗೆ ಕನ್ನಡದ ನಟ ದಿಗಂತ್ ಸಹ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣವೂ ಸಹ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದಿರುವುದು ವಿಶೇಷ. ಸಿನಿಮಾವನ್ನು ಸಮಂತಾರ ಮೆಚ್ಚಿನ ನಿರ್ದೇಶಕಿ ಬಿವಿ ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಈ ಇಬ್ಬರಿಗೂ ಇದು ಎರಡನೇ ಸಿನಿಮಾ ಆಗಿದೆ. ಸಿನಿಮಾಕ್ಕೆ ಸಮಂತಾರ ಪತಿ, ನಿರ್ದೇಶಕ ರಾಜ್ ನಿಧಿಮೋರು ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಸಿಂಧೂರ್​​ಗೆ ಒಂದು ವರ್ಷ; ಉಗ್ರರ ವಿರುದ್ಧದ ಕಾರ್ಯಾಚರಣೆ ಪರಿಣಾಮಕಾರಿಯಾಗಿದ್ದು ಹೇಗೆ? – Kannada News | 1 year for Operation Sindoor How India delivered maximum damage with minimal impact

ನವದೆಹಲಿ, ಮೇ 6: ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ನಡೆದು ಒಂದು ವರ್ಷವಾಗಿದೆ. ಮಿಲಿಟರಿ ಕಾರ್ಯಾಚರಣೆಯನ್ನು ಆಧುನಿಕ ಯುದ್ಧದಲ್ಲಿ ನಿರ್ಣಾಯಕ ಕ್ಷಣವೆಂದು ಪರಿಗಣಿಸಲಾಗುತ್ತದೆ. ಕಾಶ್ಮೀರದ ಕಣಿವೆ ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಪ್ರತಿಕ್ರಿಯೆಯಾಗಿ ಕಳೆದ ವರ್ಷ ಇದೇ ಸಮಯದಲ್ಲಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿತ್ತು. ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು.

ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಗಡಿಯಾಚೆಗಿನ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಈ ಕಾರ್ಯಾಚರಣೆಯಲ್ಲಿ ಭಾರತ ನಾಗರಿಕರು ಯಾರೂ ಸಾವನ್ನಪ್ಪದಂತೆ ಎಚ್ಚರ ವಹಿಸಿತ್ತು. ಅಮಾಯಕರಿಗೆ ಯಾವುದೇ ತೊಂದರೆಯಾಗದಂತೆ ಕೇವಲ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವುದು ಸುಲಭದ ಸಂಗತಿಯಾಗಿರಲಿಲ್ಲ. ಆದರೂ ಆ ಸವಾಲನ್ನು ಭಾರತದ ವಾಯುಪಡೆ, ಸೇನಾಪಡೆ ಯಶಸ್ವಿಯಾಗಿ ನಿರ್ವಹಿಸಿತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಭಾರತದ ವಾಯುಪಡೆಗೆ ಸೋತು ಪಾಕಿಸ್ತಾನ ಮಂಡಿಯೂರಿತ್ತು; ಯುರೋಪಿಯನ್ ಮಿಲಿಟರಿ ವಿಶ್ಲೇಷಣೆ

ಆ ಘಟನೆ ನಡೆದು ಒಂದು ವರ್ಷವಾಗಿದೆ. ಇಂದು ನಾವು ನೋಡುವ ಹೆಚ್ಚಿನ ಜಾಗತಿಕ ಸಂಘರ್ಷಗಳಲ್ಲಿ ವಿನಾಶವನ್ನು ನಿಯಂತ್ರಿಸಲು ಸಾಧ್ಯವೇ ಆಗುವುದಿಲ್ಲ. ಇದು ಎರಡೂ ಕಡೆಯ ಆರ್ಥಿಕತೆಗಳು ಮತ್ತು ನಾಗರಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಆಪರೇಷನ್ ಸಿಂಧೂರ್ ವಿಭಿನ್ನವಾಗಿತ್ತು. ಇದರಲ್ಲಿ ಅಮಾಯರು ಯಾರೂ ಬಲಿಯಾಗಲಿಲ್ಲ. ಭಾರತ ಸ್ಪಷ್ಟವಾದ ಗುರಿಯನ್ನಿಟ್ಟುಕೊಂಡು ನಡೆಸಿದ್ದ ಈ ದಾಳಿ ಯಾವುದೇ ಬಿಕ್ಕಟ್ಟಿಗೂ ಕಾರಣವಾಗಲಿಲ್ಲ.

ಭಾರತವು ಪಾಕಿಸ್ತಾನದ ಭಯೋತ್ಪಾದನೆ ಮತ್ತು ಮಿಲಿಟರಿ ಮೂಲಸೌಕರ್ಯದ ಮೇಲೆ ತೀವ್ರ ದಾಳಿ ನಡೆಸಿ ಹಾನಿಯನ್ನುಂಟುಮಾಡಿತು. ಆದರೆ, ಯಾವುದೇ ಮನೆಗಳಿಗೂ ಹಾನಿಯಾಗಲಿಲ್ಲ. ಪಾಕಿಸ್ತಾನಿ ಕ್ಷಿಪಣಿಗಳಿಂದ ಭಾರತಕ್ಕೆ ಯಾವುದೇ ಹಾನಿಯಾಗಲು ಬಿಡಲಿಲ್ಲ. ಈ ಮಿಲಿಟರಿ ಕಾರ್ಯಾಚರಣೆಯ ಪರಿಣಾಮವಾಗಿ ಭಾರತದಲ್ಲಿ ಯಾವುದೇ ಆರ್ಥಿಕ ಆಘಾತ ಉಂಟಾಗಿಲ್ಲ.

ಭಾರತೀಯ ವಾಯುಪಡೆಯು ಪಾಕಿಸ್ತಾನದ ಚೀನಾ ಸರಬರಾಜು ಮಾಡಿದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬೈಪಾಸ್ ಮಾಡಿ ಜ್ಯಾಮ್ ಮಾಡಿತು. ರಫೇಲ್ ಜೆಟ್‌ಗಳು, SCALP ಕ್ಷಿಪಣಿಗಳು ಮತ್ತು ಹ್ಯಾಮರ್ ಬಾಂಬ್‌ಗಳನ್ನು ಬಳಸಿಕೊಂಡು ಕೇವಲ 23 ನಿಮಿಷಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಬೀಜಿಂಗ್ ಮಧ್ಯಸ್ಥಿಕೆ; ಲಜ್ಜೆಗೆಟ್ಟು ಚೀನಾದ ಬೆಂಬಲಕ್ಕೆ ನಿಂತ ಪಾಕಿಸ್ತಾನ

ಮೇ 10 ರಂದು ಕೆಲವೇ ಗಂಟೆಗಳಲ್ಲಿ ಭಾರತವು ನೂರ್ ಖಾನ್, ರಫೀಕಿ, ಮುರಿಯ್, ಸುಕ್ಕೂರ್, ಸಿಯಾಲ್‌ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ, ಸ್ಕಾರ್ಡು, ಭೋಲಾರಿ ಮತ್ತು ಜಕೋಬಾಬಾದ್ ವಾಯುನೆಲೆಗಳು ಸೇರಿದಂತೆ 11 ಪ್ರಮುಖ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿತು. ಈ ದಾಳಿಗಳು ಪಾಕಿಸ್ತಾನದ ವಾಯು ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಕುಗ್ಗಿಸಿದವು.

ಈ ಕ್ರಮಗಳೊಂದಿಗೆ, ಭಾರತವು ಒಂದೇ ಕಾರ್ಯಾಚರಣೆಯಲ್ಲಿ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರದ 11 ವಾಯುನೆಲೆಗಳನ್ನು ಹೊಡೆದುರುಳಿಸಿದ ಮೊದಲ ದೇಶವಾಯಿತು. ಪಾಕಿಸ್ತಾನದ ವಾಯುಪಡೆಯ ಸ್ವತ್ತುಗಳಲ್ಲಿ ಶೇ. 20ರಷ್ಟನ್ನು ನಾಶಪಡಿಸಿತು. ಭೋಲಾರಿ ವಾಯುನೆಲೆಯಲ್ಲಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಸಾವು ಮತ್ತು ಪ್ರಮುಖ ಫೈಟರ್ ಜೆಟ್‌ಗಳ ನಾಶ ಸೇರಿದಂತೆ ಹೆಚ್ಚಿನ ಸಾವುನೋವುಗಳು ವರದಿಯಾಗಿವೆ.

ಈ ಕಾರ್ಯಾಚರಣೆ ಭಾರತದ ಸ್ವದೇಶಿ ರಕ್ಷಣಾ ಸಾಮರ್ಥ್ಯಗಳ ಪರಿಪಕ್ವತೆಯನ್ನು ಎತ್ತಿ ತೋರಿಸಿತು. ಹಾಗೇ, ಸುಧಾರಿತ ವ್ಯವಸ್ಥೆಗಳ ಜಾಗತಿಕ ರಫ್ತುದಾರನಾಗಿ ಅದರ ವಿಶ್ವಾಸಾರ್ಹತೆಯನ್ನು ಬಲಪಡಿಸಿತು. ಇದಾದ ಒಂದು ವರ್ಷದ ನಂತರ, ಆಪರೇಷನ್ ಸಿಂಧೂರ್ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ಪರಿಗಣಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎರಡುವರೆ ವರ್ಷ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಜೀವರಾಜ್ – Kannada News | Shringeri Assembly Result: BJP DN Jeevaraj Finally Take oath as MLA after Won In Recounting

ಬೆಂಗಳೂರು, (ಮೇ 06): ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ (shringeri Assembly Result) ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ (BJP DN Jeevaraj )ಗೆಲುವು ಸಾಧಿಸಿದ್ದಾರೆ. ಸುಮಾರು ಮೂರು ವರ್ಷಗಳ ಸತತ ಕಾನೂನು ಹೋರಾಟದ ಮೂಲಕ ಶಾಸಕರಾಗಿ ಆಯ್ಕೆಯಾಗಿರುವ ಜೀವರಾಜ್ ಇಂದು (ಮೇ 06) ಶೃಂಗೇರಿ ಶಾರದಾಂಬೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಕಾಂಗ್ರೆಸ್​​ ಶಾಸಕ ಸಂಖ್ಯೆಯಲ್ಲಿ  ಒಂದು ಕಡೆಮೆಯಾದಂತಾಗಿದೆ,

ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಬಳಿಕ ಉಂಟಾದ ರಾಜಕೀಯ ಗದ್ದಲದಿಂದ, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಬಿಜೆಪಿ ವಿಳಂಬ ಆರೋಪ ಮಾಡಿತ್ತು. ಬಿಜೆಪಿ ಪ್ರತಿನಿಧಿ ಮಂಡಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಸ್ಪೀಕರ್ ಲಭ್ಯವಿಲ್ಲದಿದ್ದರೆ ತಾವೇ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬುಧವಾರ ಸ್ವೀಕರ್ ಯುಟಿ ಖಾದರ್ ಅವರೇ ಪ್ರಮಾಣ ವಚನ ಬೋಧಿಸಿದರು.

2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ರಾಜೇಗೌಡ ಅವರು ಗೆದ್ದಿದ್ದರು. ಆದ್ರೆ, ಅಂಚೆ ಮತಗಳಲ್ಲಿ ಅನುಮಾನಗಳು ವ್ಯಕ್ತವಾಗಿದ್ದವು, ಹೀಗಾಗಿ ಜೀವರಾಜ್ ಅವರು ಕೋರ್ಟ್ ಮೊರೆ ಹೋಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version