PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು – Kannada News | Finance Expert Rudramurthy Reacts about PM Modi asked Indian families not to buy gold for a year

ಬೆಂಗಳೂರು, (ಮೇ 11): ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ನಿನ್ನೆ(ಮೇ 10) ಕಾರ್ಯಕ್ರಮವೊಂದರಲ್ಲಿ ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸದಂತೆ ನಾಗರಿಕರಲ್ಲಿ ಮನವಿ ಮಾಡಿದ್ದರು. ಅವರ ಈ ಮನವಿ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ ಮನವಿ ಹಿಂದಿನ ಕಾರಣವೇನು? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಈ ಬಗ್ಗೆ ಆರ್ಥಿಕ ತಜ್ಞ ರುದ್ರಮೂರ್ತಿ ಪತ್ರಿಕ್ರಿಯಿಸಿದ್ದು, ಮೋದಿ ಮುಂದಾಲೋಚನೆ ಮಾಡಿ ಹೇಳಿದ್ದಾರೆ. ಅದರಲ್ಲೂ ತಪ್ಪು ಕಂಡು ಹಿಡಿಬೇಡಿ. ಎಲ್ಲರೂ ಎಚ್ಚತ್ತುಕೊಳ್ಳಬೇಕು, ಕೈ ಜೋಡಿಸಬೇಕು. ವಿರೋಧ ಪಕ್ಷ ಅಥವಾ ಜನ ಸಾಮಾನ್ಯರು ಇದಕ್ಕೆ ಟೀಕೆ ವ್ಯಕ್ತಪಡಿಸೋದನ್ನ ಬಿಟ್ಟು ಅವರ ಜೊತೆ ಕೈ ಜೋಡಿಸಿ ಎಂದಿದ್ದಾರೆ.

ಕಚ್ಚಾ ತೈಲ ಮತ್ತು ಗೋಲ್ಡ್ ವಿದೇಶದಿಂದ ಆಮದು ಆಗುತ್ತಿರುವುದು. ಹೀಗಾಗಿ ಇಲ್ಲಿನ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸೋಕೆ ಗಮನದಲ್ಲಿ ಇಟ್ಟುಕೊಂಡು ಈ ರೀತಿ ಹೇಳಿದ್ದಾರೆ. ತೈಲ ಬೆಲೆ ಸದ್ಯದಲ್ಲೇ ಅಧಿಕವಾಗುತ್ತೆ . ಆಗ ಹೊರೆ ಆಗುತ್ತೆ. 7 ಸಾವಿರ ಕೋಟಿ ರೂಪಾಯಿಯ ಚಿನ್ನವನ್ನ ರಫ್ತು ಮಾಡ್ಕೊಂಡಿದ್ದೀವಿ . ಇದೆಲ್ಲವನ್ನ ಕಡಿತ ಗೊಳಿಸೋದ್ರಿಂದ ರೂಪಾಯಿ ಮೌಲ್ಯ ಕಡಿತವಾಗುತ್ತೆ ಎಂದು ಹೇಳಿದರು.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

Source link

Leave a Reply

Your email address will not be published. Required fields are marked *