RCB ಯಶಸ್ಸಿಗೆ ನಾನು ಕೂಡ ಕಾರಣ: ಅಂಬಾಟಿ ರಾಯುಡು ವಾದ! – Kannada News | Ambati Rayudu deserves credit for RCB’s success

ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೈಫಲ್ಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, ಈಗ ಆರ್‌ಸಿಬಿ ತಂಡದ ಭರ್ಜರಿ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ತನಗೆ ಸಲ್ಲಬೇಕು ಎಂದಿದ್ದಾರೆ! ತಾವು ಮಾಡಿದ ಕಟು ಟೀಕೆಗಳೇ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಕಣ್ಣು ತೆರೆಸುವಂತೆ ಮಾಡಿತು ಮತ್ತು ಆ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದಲೇ ಇಂದು ತಂಡವು ಐಪಿಎಲ್‌ನಲ್ಲಿ ಅಬ್ಬರಿಸುತ್ತಿದೆ ಎಂಬುದು ರಾಯುಡು ಅವರ ವಾದ.

 ಅಂಬಾಟಿ ರಾಯುಡು ಮುಂದಿಟ್ಟಿರುವ ವಾದಗಳೇನು?

ನಾನು ವರ್ಷಗಳಿಂದ RCB ತಂಡದ ಮೇಲೆ ಮಾಡುತ್ತಿದ್ದ ಟೀಕೆಗಳು ಕೇವಲ ದ್ವೇಷದಿಂದ ಕೂಡಿರಲಿಲ್ಲ. ಬದಲಿಗೆ ಅವುಗಳ ಹಿಂದೆ ಬಲವಾದ ತಾರ್ಕಿಕ ಕಾರಣಗಳಿದ್ದವು ಎಂದು ರಾಯುಡು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ತಂಡವು ತಮ್ಮ ಹಳೆಯ ಸಲಹೆಗಳನ್ನು ಪಾಲಿಸಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದ್ದರಿಂದಲೇ ಗೆಲುವಿನ ಹಾದಿಗೆ ಮರಳಿದೆ ಎಂದು ಅವರು ಹೇಳಿದ್ದಾರೆ. ಆ ಬದಲಾವಣೆಗಳೆಂದರೆ…

  • ಭಾರತೀಯ ಮಧ್ಯಮ ಕ್ರಮಾಂಕದ ಬಲ: ಈ ಹಿಂದೆ RCB ಕೇವಲ ಜಾಗತಿಕ ಸ್ಟಾರ್ ಆಟಗಾರರ ಮೇಲಷ್ಟೇ ಅವಲಂಬಿತವಾಗಿತ್ತು. ಆದರೆ ಈ ಬಾರಿ ಅನುಭವಿ ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಜವಾಬ್ದಾರಿ ನೀಡಿರುವುದನ್ನು ರಾಯುಡು ಶ್ಲಾಘಿಸಿದ್ದಾರೆ.
  •  ಸ್ಥಿರ ಪ್ರದರ್ಶನದ ಫಿನಿಶರ್‌ಗಳು: ಒತ್ತಡದ ಸಮಯದಲ್ಲಿ ಪಂದ್ಯವನ್ನು ಮುಗಿಸಿಕೊಡಬಲ್ಲ ಗುಣಮಟ್ಟದ ದೇಶಿ ಫಿನಿಶರ್‌ಗಳನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಯಶಸ್ಸಿಗೆ ಪ್ರಮುಖ ಕಾರಣ ಎಂದಿದ್ದಾರೆ.
  •  ಅನುಭವಿ ಬೌಲಿಂಗ್ ಲೈನ್-ಅಪ್: ಈ ಹಿಂದೆ RCB ಬೌಲಿಂಗ್ ವಿಭಾಗವನ್ನು ತೀವ್ರವಾಗಿ ಟೀಕಿಸುತ್ತಿದ್ದ ರಾಯುಡು, ಈ ಬಾರಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಝಲ್​ವುಡ್ ಅವರಂತಹ ಹಿರಿಯ ವೇಗಿಗಳನ್ನು ತಂಡಕ್ಕೆ ಸೇರಿಸಿಕೊಂಡಿರುವುದೇ ಬೌಲಿಂಗ್ ಸುಧಾರಿಸಲು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲಾ ಟೀಕೆಗಳನ್ನು ನಾನು ಈ ಹಿಂದಿನಿಂದಲೂ ಮಾಡುತ್ತಾ ಬಂದಿದ್ದೀನಿ. ನಾನು ಮಾಡಿದ ಕಟು ಟೀಕೆಗಳೇ RCB ಮ್ಯಾನೇಜ್‌ಮೆಂಟ್‌ ಕಣ್ಣು ತೆರೆಸುವಂತೆ ಮಾಡಿತು. ಅದರಂತೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಅದರ ಫಲವಾಗಿ ಇದೀಗ ಆರ್​ಸಿಬಿ ಗೆಲ್ಲುತ್ತಿದೆ.

ಇದನ್ನೂ ಓದಿ: RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!

ಅಂದರೆ ಹೇಳಿದ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದಲೇ ಇಂದು RCB ತಂಡವು ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಇದರ ಶ್ರೇಯಶಸ್ಸು ನನಗೂ ಸಲ್ಲಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಅಭಿಮಾನಿಗಳ ಆಕ್ರೋಶ:

ಅಂಬಾಟಿ ರಾಯುಡು ಅವರ ಈ ಹೇಳಿಕೆಯನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ರಾಯುಡು ಮತ್ತು RCB ನಡುವಿನ ಹಳೆಯ ಇತಿಹಾಸವೇ ಕಾರಣ. ಅದೇನೆಂದು ನೋಡುವುದಾದರೆ…

    • ಟ್ರೋಫಿ ಸಂಖ್ಯೆಯ ಲೇವಡಿ: RCB ತನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದಾಗ ಲೇವಡಿ ಮಾಡಿದ್ದ ರಾಯುಡು, “ನಿಮಗೆ ಒಂದು ಕಪ್ ಗೆಲ್ಲಲು 18 ವರ್ಷ ಬೇಕಾಯಿತು, ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 5 ಟ್ರೋಫಿಗಳ ದಾಖಲೆ ಸರಿಗಟ್ಟಲು ನಿಮಗೆ 72 ವರ್ಷ ಬೇಕಾಗಬಹುದು” ಎಂದು ಕಾಲೆಳೆದಿದ್ದರು.
    • ಸಂಭ್ರಮಾಚರಣೆಗೆ ಟೀಕೆ: 2024ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಟೂರ್ನಿಯಿಂದ ಹೊರಹಾಕಿದಾಗ ಆರ್‌ಸಿಬಿ ಆಟಗಾರರು ಮತ್ತು ಅಭಿಮಾನಿಗಳು ರಸ್ತೆಯಲ್ಲಿ ಅತಿಯಾಗಿ ಸಂಭ್ರಮಿಸಿದ್ದನ್ನು ರಾಯುಡು ಟೀಕಿಸಿದ್ದರು. “ಕೇವಲ ಸಂಭ್ರಮಾಚರಣೆಗಳು ನಿಮಗೆ ಟ್ರೋಫಿ ತಂದುಕೊಡುವುದಿಲ್ಲ” ಎಂದು ತಿವಿದಿದ್ದರು.
    • ಕ್ರೆಡಿಟ್ ಕದಿಯುವ ಯತ್ನ: ಪ್ರಸ್ತುತ ಅಭಿಮಾನಿಗಳು ರಾಯುಡು ಅವರ ಹೇಳಿಕೆಯನ್ನು ತಳ್ಳಿಹಾಕಿದ್ದು, ಸಿಎಸ್‌ಕೆ ಪರವಾಗಿರುವ ಪಕ್ಷಪಾತದಿಂದಾಗಿ ಅವರು ಆರ್‌ಸಿಬಿ ತಂಡದ ನೈಜ ಪರಿಶ್ರಮದ ಕ್ರೆಡಿಟ್ ಅನ್ನು ತಾವೇ ಕದಿಯಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಒಟ್ಟಾರೆಯಾಗಿ, ಆರ್‌ಸಿಬಿ ತಂಡದ ಆಡಳಿತ ಮಂಡಳಿಯು ತನ್ನ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಬಲಿಷ್ಠ ತಂಡವನ್ನು ಕಟ್ಟಿರುವುದೇ ಸದ್ಯದ ಯಶಸ್ಸಿಗೆ ಕಾರಣವಾಗಿದ್ದರೂ, ಅಂಬಾಟಿ ರಾಯುಡು ಮಾತ್ರ ಇದರ ಸಂಪೂರ್ಣ ಶ್ರೇಯಸ್ಸು ತಮ್ಮ ಟೀಕೆಗಳಿಗೇ ಸಲ್ಲಬೇಕು ಎಂದು ವಾದಿಸಿರುವುದು ಮಾತ್ರ ವಿಪರ್ಯಾಸ.

Source link

Leave a Reply

Your email address will not be published. Required fields are marked *