Vasthu Tips: ಬಾಗಿಲಿನ ಹಿಂದೆ ಈ ವಸ್ತುಗಳನ್ನು ನೇತುಹಾಕಲೇಬೇಡಿ; ಇದು ಸಂಕಷ್ಟಕ್ಕೆ ಆಹ್ವಾನ! – Kannada News | Vastu Tips: 5 Things You Must Never Keep Behind Doors for Positive Home Energy

ಬಾಗಿಲಿನ ಹಿಂದೆ ಈ ವಸ್ತುಗಳನ್ನು ನೇತುಹಾಕಬೇಡಿ
Image Credit source: Pinterest

ಮನೆಯ ಪ್ರತಿಯೊಂದು ಮೂಲೆಯೂ ಒಂದಲ್ಲ ಒಂದು ರೀತಿಯ ಶಕ್ತಿಯನ್ನು (Energy) ಹೊಂದಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಪ್ರಕಾರ, ಮನೆಯ ಬಾಗಿಲುಗಳು ಕೇವಲ ಓಡಾಟದ ದಾರಿಯಲ್ಲ, ಅವು ಸುಖ-ಸಮೃದ್ಧಿ ಮನೆಗೆ ಪ್ರವೇಶಿಸುವ ದ್ವಾರಗಳು. ಆದರೆ ನಾವು ತಿಳಿಯದೆಯೇ ಬಾಗಿಲಿನ ಹಿಂದೆ ಕೆಲವು ವಸ್ತುಗಳನ್ನು ನೇತುಹಾಕುತ್ತೇವೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಬಾಗಿಲಿನ ಹಿಂಭಾಗದಲ್ಲಿ ಯಾವ 5 ವಸ್ತುಗಳನ್ನು ಇಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬಟ್ಟೆಗಳ ರಾಶಿ:

ಬಾಗಿಲಿನ ಹಿಂದೆ ಕೊಂಡಿಗಳಿಗೆ (Hooks) ಬಟ್ಟೆಗಳನ್ನು ರಾಶಿ ಹಾಕುವುದು ಅನೇಕರ ಅಭ್ಯಾಸ. ಆದರೆ ವಾಸ್ತು ಪ್ರಕಾರ, ಬಟ್ಟೆಗಳ ಈ ಹೊರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದು ಕುಟುಂಬದ ಸದಸ್ಯರಲ್ಲಿ ಮಾನಸಿಕ ಕಿರಿಕಿರಿ, ಅಶಾಂತಿ ಮತ್ತು ಸದಾ ಏನೋ ಒಂದು ರೀತಿಯ ಭಾರವಾದ ಭಾವನೆಯನ್ನು ಉಂಟುಮಾಡುತ್ತದೆ.

ಔಷಧಿಗಳು:

ನೆನಪಿರಲಿ ಎಂಬ ಕಾರಣಕ್ಕೆ ಬಾಗಿಲಿನ ಹಿಂದೆ ಔಷಧಿಗಳ ಚೀಲವನ್ನು ನೇತುಹಾಕಬೇಡಿ. ಔಷಧಿಗಳು ರೋಗ ಮತ್ತು ಸಂಕಟದ ಸಂಕೇತ. ಬಾಗಿಲಿನ ಹಿಂದೆ ಇವುಗಳನ್ನು ಇಡುವುದರಿಂದ ಮನೆಯಲ್ಲಿ ಅನಾರೋಗ್ಯದ ಪ್ರಭಾವ ಹೆಚ್ಚಾಗುತ್ತದೆ ಮತ್ತು ಅನಗತ್ಯ ವೈದ್ಯಕೀಯ ವೆಚ್ಚಗಳು ಬೆಳೆಯುತ್ತವೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಹಳೆಯ ಕ್ಯಾಲೆಂಡರ್‌:

ಸಮಯವು ಪ್ರಗತಿಯ ಸಂಕೇತ. ಹಳೆಯ ವರ್ಷದ ಕ್ಯಾಲೆಂಡರ್‌ಗಳನ್ನು ಬಾಗಿಲಿನ ಹಿಂದೆ ಹಾಗೆಯೇ ಬಿಡುವುದು ನಿಮ್ಮ ಜೀವನದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದು ನಿಮ್ಮನ್ನು ಹಳೆಯ ನೆನಪುಗಳಲ್ಲೇ ಸಿಲುಕಿಸಿ, ಜೀವನದಲ್ಲಿ ಹೊಸ ಅವಕಾಶಗಳು ಬರದಂತೆ ತಡೆಯುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಪಾದರಕ್ಷೆಗಳು:

ಬಾಗಿಲಿನ ಹಿಂದೆ ಚಪ್ಪಲಿ ಅಥವಾ ಬೂಟುಗಳನ್ನು ಇಡುವುದು ವಾಸ್ತು ದೋಷಕ್ಕೆ ಪ್ರಮುಖ ಕಾರಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಾದರಕ್ಷೆಗಳು ರಾಹುವಿಗೆ ಸಂಬಂಧಿಸಿವೆ. ಇವುಗಳನ್ನು ಬಾಗಿಲಿನ ಹಿಂದೆ ಇಟ್ಟಾಗ ರಾಹುವಿನ ನಕಾರಾತ್ಮಕ ಪ್ರಭಾವ ಹೆಚ್ಚಾಗಿ, ಮನೆಯಲ್ಲಿ ದಾರಿದ್ರ್ಯ ಮತ್ತು ಸದಾ ಜಗಳದ ವಾತಾವರಣ ನಿರ್ಮಾಣವಾಗುತ್ತದೆ.

ಒದ್ದೆ ಟವೆಲ್:

ಸ್ನಾನದ ನಂತರ ಒದ್ದೆ ಟವೆಲ್ ಅನ್ನು ಬಾಗಿಲಿನ ಹಿಂದೆ ಒಣಗಲು ಹಾಕುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟುಬಿಡಿ. ಒದ್ದೆಯಾದ ಬಟ್ಟೆಗಳು ನಕಾರಾತ್ಮಕತೆಯನ್ನು ಬೇಗನೆ ಆಕರ್ಷಿಸುತ್ತವೆ. ಇದರಿಂದ ದಂಪತಿಗಳ ನಡುವೆ ಅಥವಾ ಕುಟುಂಬದ ಸದಸ್ಯರ ನಡುವೆ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *