ರಾಂಪುರ, ಜನವರಿ 30: ಜೀಪ್ ಚಾಲಕನೊಬ್ಬ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಬಾನೆಟ್ ಮೇಲೆ ಚಾಲಕನನ್ನು ಹೊತ್ತೊಯ್ದಿರುವ ಘಟನೆ ರಾಂಪುರದ ಬಿಲಾಸ್ಪುರದ ಹೆದ್ದಾರಿಯಲ್ಲಿ ನಡೆದಿದೆ. ರಾಂಪುರದ ಬಿಲಾಸ್ಪುರದ ಹೆದ್ದಾರಿಯಲ್ಲಿ ಜೀಪ್ ಚಾಲಕನೊಬ್ಬ ಎದುರಿನಿಂದ ಬರುತ್ತಿದ್ದ ಇ-ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಶಬ್ಬು ಗಾಯಗೊಂಡಿದ್ದು, ಅವರ ಮೂಗಿನಿಂದ ರಕ್ತಸ್ರಾವ ಆಗುತ್ತಿತ್ತು.
ಡಿಕ್ಕಿಯ ನಂತರ, ಜೀಪ್ ಚಾಲಕ ಮನ್ಪ್ರೀತ್ ಎಂದು ಗುರುತಿಸಲ್ಪಟ್ಟಿದ್ದು, ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ, ಆದರೆ ಗಾಯಗೊಂಡ ಚಾಲಕ ಅವನನ್ನು ತಡೆಯಲು ವಾಹನದ ಮುಂದೆ ನಿಂತಿದ್ದರು. ಜೀಪ್ ಚಾಲಕ ನಿಲ್ಲಿಸದೆ ಶಬ್ಬುನನ್ನು ಬಾನೆಟ್ ಮೇಲೆ ಎಳೆದುಕೊಂಡು ಹೋಗಿದ್ದ. ಹಲವಾರು ಪ್ರತ್ಯಕ್ಷದರ್ಶಿಗಳು ಈ ಘಟನೆಯನ್ನು ತಮ್ಮ ಫೋನ್ಗಳಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
