
ಮಿರ್ಜಾಪುರ, ಮಾರ್ಚ್ 15: ನಾಯಿ ಕಡಿತದಿಂದ ಬಾಲಕನಿಗೆ ರೇಬಿಸ್ ಬಂದಿದೆ. ಆದರೆ ಕುಟುಂಬಕ್ಕೆ ಇದರ ಅರಿವು ಇಲ್ಲದ ಕಾರಣ ದೆವ್ವವೇನೋ ಮೆಟ್ಟಿಕೊಂಡಿರಬೇಕೆಂದು ವಿವಿಧ ದೇವಸ್ಥಾನಗಳಿಗೆ ಸುತ್ತುತ್ತಲೇ ಇತ್ತು, ಎಷ್ಟೋ ದಿನಗಳ ಬಳಿಕ ಇದು ರೇಬಿಸ್ ಎಂದು ಅರಿವಾಗಿದೆ. ವೈದ್ಯರು ಈಗ ಬಾಲಕನನ್ನು ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಈ ಘಟನೆ ಮುರ್ಜಾಪುರದಲ್ಲಿ ನಡೆದಿದೆ. ಮಕ್ಕಳಿಗು ಕೂಡ ರೇಬಿಸ್ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಒಂದೊಮ್ಮೆ ನಾಯಿ ಕಚ್ಚಿದ್ದರ ಬಗ್ಗೆ ಆತ ಮನೆಯಲ್ಲಿ ಹೇಳಿಕೊಂಡಿದ್ದರೆ ಇಂಥಾ ಪರಿಸ್ಥಿತಿ ಬರುತ್ತಿರಲಿಲ್ಲ. ಇದೀಗ ಆತನ ಸ್ಥಿತಿ ನಿಜಕ್ಕೂ ಗಂಭೀರವಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ