ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 10 ರಿಂದ 16 ರವರೆಗಿನ ವಾರ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ವಾರದಲ್ಲಿ ಗ್ರಹಗಳ ಸಂಚಾರ, ವಿಶೇಷ ದಿನಗಳು ಮತ್ತು ದ್ವಾದಶ ರಾಶಿಗಳ ಮೇಲಿನ ಅವುಗಳ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ. ಮೀನ ರಾಶಿಯಲ್ಲಿ ಶನಿ, ಮಿಥುನ ರಾಶಿಯಲ್ಲಿ ಕುಜ, ಹಾಗೂ ಗುರು, ರವಿ, ಬುಧ ತ್ರಿಗ್ರಹ ಕೂಟವು ಕರ್ಕಾಟಕದಲ್ಲಿ ಸಂಚಾರ ಮಾಡಲಿದ್ದು, ಕೇತು ಸಿಂಹ ರಾಶಿಯಲ್ಲಿ ಹಾಗೂ ಶುಕ್ರ ಕನ್ಯಾ ರಾಶಿಯಲ್ಲಿ ನೀಚನಾಗಿ ಸಂಚರಿಸಲಿದ್ದಾನೆ ಎಂದು ಗುರೂಜಿ ವಿವರಿಸಿದರು. ಈ ವಾರದಲ್ಲಿ ಆಷಾಢ ಮಾಸ ಅಂತ್ಯಗೊಂಡು ಶ್ರಾವಣ ಮಾಸ ಪ್ರಾರಂಭವಾಗಲಿದೆ. ಅಲ್ಲದೆ, ಸೋಮ ಪ್ರದೋಷ, ಭೀಮನ ಅಮಾವಾಸ್ಯೆ, ವಿನಾಯಕಿ ಚತುರ್ಥಿ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂತಹ ಪ್ರಮುಖ ಘಟನೆಗಳು ನಡೆಯಲಿವೆ. ಗ್ರಹಣವಿದ್ದರೂ ಭಾರತದಲ್ಲಿ ಗೋಚಾರವಿಲ್ಲದ ಕಾರಣ ಆಚಾರ-ವಿಧಿ ವಿಧಾನಗಳು ಇರುವುದಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ