ಮೇಷ ರಾಶಿ:
ಈ ವಾರ ತೃತೀಯದ ಮಂಗಳ ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದ್ದಾನೆ. ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕುಟುಂಬದ ಬೆಂಬಲ ಮತ್ತು ಸಣ್ಣ ಪ್ರಮಾಣದ ಪ್ರಯಾಣಗಳು ಯಶಸ್ಸು ತರಲಿವೆ. ಹಣಕಾಸಿನ ವಹಿವಾಟಿನಲ್ಲಿ ಜಾಗ್ರತೆ ವಹಿಸಿ.
ವೃಷಭ ರಾಶಿ:
ರಾಶಿಯಲ್ಲಿ ಉಚ್ಚ ಚಂದ್ರನ ಸಂಚಾರದಿಂದ ಮನಸ್ಸಿನಲ್ಲಿ ಶಾಂತಿ ಮತ್ತು ಆತ್ಮವಿಶ್ವಾಸ ವೃದ್ಧಿಸಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದ್ದು, ಹೂಡಿಕೆಗಳಿಗೆ ಇದು ಸಕ್ತ ಸಮಯ. ಕೌಟುಂಬಿಕವಾಗಿ ಹರ್ಷದಾಯಕ ವಾತಾವರಣವಿರುತ್ತದೆ.
ಮಿಥುನ ರಾಶಿ:
ಧನ ಸ್ಥಾನದ ಮೇಲಿನ ಶುಭ ಗ್ರಹಗಳ ದೃಷ್ಟಿಯಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದರೆ ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕೋಪ ನಿಯಂತ್ರಣ ಅಗತ್ಯ. ಮಾತುಗಳಲ್ಲಿ ಮೃದುತ್ವವಿದ್ದರೆ ಎಲ್ಲ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.
ಕರ್ಕಾಟಕ ರಾಶಿ:
ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರುಗಳ ಸಮಾಗಮವಿದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಶೈಕ್ಷಣಿಕ ಹಾಗೂ ಬೌದ್ಧಿಕ ರಂಗದಲ್ಲಿರುವವರಿಗೆ ಅತ್ಯುತ್ತಮ ಸಫಲತೆ ಸಿಗಲಿದೆ. ಆರೋಗ್ಯದ ಕಡೆ ಸ್ವಲ್ಪ ಗಮನವಿರಲಿ.
ಸಿಂಹ ರಾಶಿ:
ರಾಶಿಯಲ್ಲಿ ಕೇತುವಿನ ಉಪಸ್ಥಿತಿ ಹಾಗೂ ವ್ಯಯ ಸ್ಥಾನದ ಗ್ರಹಕೂಟದಿಂದಾಗಿ ವೆಚ್ಚಗಳು ಹೆಚ್ಚಾಗಬಹುದು. ಧಾರ್ಮಿಕ ಹಾಗೂ ಸಾತ್ವಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ನಿರೀಕ್ಷಿತ ಕಾರ್ಯಗಳು ಕೊಂಚ ತಡವಾಗಿ ನೆರವೇರಬಹುದು.
ಕನ್ಯಾ ರಾಶಿ:
ಲಾಭ ಸ್ಥಾನದ ಶುಭಫಲಗಳಿಂದ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ರಾಶಿಯಲ್ಲಿ ಶುಕ್ರನಿದ್ದರೂ ಶುಭ ಗ್ರಹಗಳ ದೃಷ್ಟಿ ಉತ್ತಮ ಫಲ ನೀಡಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಹಾದಿ ಸುಗಮವಾಗಲಿದೆ.
ತುಲಾ ರಾಶಿ:
ದಶಮ ಸ್ಥಾನ ಬಲವಾಗಿರುವುದರಿಂದ ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ.
ಇದನ್ನೂ ಓದಿ: ಆಗಸ್ಟ್ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!
ವೃಶ್ಚಿಕ ರಾಶಿ:
ಭಾಗ್ಯ ಸ್ಥಾನದಲ್ಲಿ ಗುರುವಿನ ಅನುಗ್ರಹವಿರುವುದರಿಂದ ದೈವಿಕ ಚಿಂತನೆ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ದೂರದ ಪ್ರಯಾಣ ಲಾಭದಾಯಕವಾಗಲಿದೆ. ಕೆಲಸ ಕಾರ್ಯಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ಧನುಸ್ಸು ರಾಶಿ:
ಅಷ್ಟಮ ಸ್ಥಾನದಲ್ಲಿ ಗ್ರಹಗಳ ಸಂಚಾರವಿರುವುದರಿಂದ ಆರೋಗ್ಯ ಹಾಗೂ ವಾಹನ ಚಾಲನೆಯಲ್ಲಿ ಜಾಗರೂಕತೆ ಅಗತ್ಯ. ಇದ್ದಕ್ಕಿದ್ದಂತೆ ಶುಭ ಸುದ್ಧಿಯೊಂದು ಬರಲಿದ್ದು, ತಾಳ್ಮೆಯಿಂದ ವ್ಯವಹರಿಸುವುದು ಒಳಿತು.
ಮಕರ ರಾಶಿ:
ಸಪ್ತಮ ಸ್ಥಾನದಲ್ಲಿ ಗ್ರಹಗಳ ಬಲವಿರುವುದರಿಂದ ಪಾಲುದಾರಿಕೆ ಉದ್ಯಮದಲ್ಲಿ ನಿಕಟ ಬಾಂಧವ್ಯ ಬೆಳೆಯಲಿದೆ. ದಾಂಪತ್ಯ ಜೀವನದಲ್ಲಿದ್ದ ಭಿನ್ನಾಭಿಪ್ರಾಯಗಳು ತಿಳಿಯಾಗಿ ಸುಖ-ಶಾಂತಿ ನೆಲೆಸಲಿದೆ.
ಕುಂಭ ರಾಶಿ:
ನಿಮ್ಮ ರಾಶಿಯಲ್ಲಿ ರಾಹು ಹಾಗೂ ಷಷ್ಠ ಸ್ಥಾನದಲ್ಲಿ ಸೂರ್ಯ, ಬುಧ, ಗುರುಗಳಿರುವುದರಿಂದ ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಸ್ಪರ್ಧಾತ್ಮಕ ವಿಚಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕಠಿಣ ಶ್ರಮಕ್ಕೆ ತಕ್ಕ ಫಲ ನಿಶ್ಚಿತ.
ಮೀನ ರಾಶಿ:
ರಾಶಿಯಲ್ಲಿ ವಕ್ರ ಶನಿ ಹಾಗೂ ಪಂಚಮದಲ್ಲಿ ಗುರು, ಆದಿತ್ಯ ಯೋಗವಿರುವುದರಿಂದ ಸಂತಾನ ಹಾಗೂ ಶಿಕ್ಷಣದ ವಿಷಯದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಹಳೆಯ ಹೂಡಿಕೆಗಳಿಂದ ನಿರೀಕ್ಷಿತ ಲಾಭ ದೊರೆಯಲಿದೆ.
ಈ ವಾರ ವಿಷ್ಣು ಸಹಸ್ರನಾಮ ಅಥವಾ ಶಿವಪೂಜೆ ಮಾಡುವುದರಿಂದ ಮನಸ್ಸಿಗೆ ಹೆಚ್ಚಿನ ಸ್ಥಿರತೆ ಮತ್ತು ಸರ್ವ ಕಾರ್ಯಗಳಲ್ಲಿ ಸಿದ್ಧಿಯೂ ಲಭಿಸಲಿದೆ.
-ಲೋಹಿತ್ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
