ಅಮರಾವತಿ, ಏಪ್ರಿಲ್ 22: ಮಹಾರಾಷ್ಟ್ರದ ಅಮರಾವತಿ ಲೈಂಗಿಕ ಹಗರಣ ಪ್ರಕರಣದಲ್ಲಿ ಪೊಲೀಸರು ಇಂದು ಈ ಪ್ರಕರಣದ ಪ್ರಮುಖ ಆರೋಪಿ ಅಯಾನ್ ಅಹ್ಮದ್ ತನ್ವೀರ್ನನ್ನು ನಗರದಾದ್ಯಂತ ರಸ್ತೆಗಳಲ್ಲಿ ಎಳೆದುಕೊಂಡು ಹೋಗಿ ಮೆರವಣಿಗೆ ಮಾಡಿದ್ದಾರೆ. ಜನರಿಗೆ ಆ ಆರೋಪಿ ಯಾರೆಂದು ಗೊತ್ತಾಗಬೇಕೆಂದು ಆತನನ್ನು ಸಾರ್ವಜನಿಕರ ಮುಂದೆ ಪರೇಡ್ ಮಾಡಲಾಗಿದೆ.
ಮಹಾರಾಷ್ಟ್ರದ ಪರತ್ವಾಡದಲ್ಲಿ ನಡೆದ ಲೈಂಗಿಕ ಶೋಷಣೆ ಪ್ರಕರಣವು ಬಹಳ ತಿರುವು ಪಡೆದುಕೊಂಡಿದ್ದು, ಪ್ರಮುಖ ಆರೋಪಿ ಅಯಾನ್ ಅಹ್ಮದ್ನ ಐಷಾರಾಮಿ ಕಾರುಗಳು, ದೊಡ್ಡ ಪ್ರಮಾಣದ ನಗದು ಮತ್ತು ಉನ್ನತ ದರ್ಜೆಯ ಗ್ಯಾಜೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದು ನಡೆಯುತ್ತಿರುವ ತನಿಖೆಗೆ ಹೊಸ ಆಯಾಮವನ್ನು ನೀಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
