ಅಯೋಧ್ಯೆ, ಜುಲೈ 07: ಅಯೋಧ್ಯೆ ರಾಮಮಂದಿರದ ಹುಂಡಿ ದೇಣಿಗೆ ಕಳ್ಳತನ ವಿವಾದದ ನಡುವೆ, ರಾಮಮಂದಿರ ಟ್ರಸ್ಟ್ ತನ್ನ ಸಂಪೂರ್ಣ ಹಣಕಾಸು ಲೆಕ್ಕಪತ್ರವನ್ನು ಬಹಿರಂಗಪಡಿಸಿದೆ. ಭಕ್ತರಿಂದ ಸಂಗ್ರಹವಾದ ಒಟ್ಟು 3,264 ಕೋಟಿ ರೂ. ದೇಣಿಗೆಯಲ್ಲಿ, 2,370 ಕೋಟಿ ರೂ. ಮಂದಿರ ನಿರ್ಮಾಣಕ್ಕೆ ಬಳಕೆಯಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಉಳಿದ ಹಣ ಬ್ಯಾಂಕ್ ಖಾತೆಗಳಲ್ಲಿ ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದೆ.
ಈವರೆಗೆ ದಾನವಾಗಿ ಬಂದ ಬೆಳ್ಳಿ ಆಭರಣಗಳನ್ನು ಕರಗಿಸಿ ಬಿಸ್ಕೆಟ್ ರೂಪದಲ್ಲಿ ಇಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ. ರಾಮಮಂದಿರದ ಹುಂಡಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಿಂದ ಭಕ್ತರ ನಂಬಿಕೆಗೆ ಧಕ್ಕೆಯಾಗಿದ್ದು, ಅದನ್ನು ಮರಳಿ ಗಳಿಸುವ ಪ್ರಯತ್ನದಲ್ಲಿ ಟ್ರಸ್ಟ್ ಈ ಲೆಕ್ಕಪತ್ರವನ್ನು ಜನರ ಮುಂದಿಟ್ಟಿದೆ.
ಇದೇ ವೇಳೆ, ಟ್ರಸ್ಟ್ನ ಮಾಜಿ ಪ್ರಮುಖ ಚಂಪತ್ ರಾಯ್ ಐಷಾರಾಮಿ ಟೊಯೋಟಾ ವೆಲ್ಫೈರ್ ಕಾರಿನಲ್ಲಿ ಓಡಾಡುತ್ತಿದ್ದದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಅವರ ಪಾತ್ರದ ಕುರಿತು ಅನುಮಾನಗಳಿದ್ದು, ತನಿಖೆ ನಡೆಯುವ ಸಾಧ್ಯತೆ ಇದೆ. ಭಕ್ತರ ಪ್ರಶ್ನೆಗಳಿಗೆ ಉತ್ತರಿಸಲು ಟ್ರಸ್ಟ್ ಪಾರದರ್ಶಕತೆ ಕಾಯ್ದುಕೊಳ್ಳಲು ಮುಂದಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
