Headlines

ಕೃಷಿ ತಾಪಂಡ ಗೆಳೆಯ ವೈಶಾಖ್ ಆತ್ಮಹತ್ಯೆ, ದೂರು ನೀಡಿದ ಪತ್ನಿ – Kannada News | Vaishak death in Krishi Tapanda home, Complaint registered by wife

ನಟಿ ಕೃಷಿ ತಾಪಂಡ (Krishi Tapanda) ಅವರ ಮನೆಯಲ್ಲಿ ಅವರ ಗೆಳೆಯ, ಉದ್ಯಮಿ ವೈಶಾಖ್ ನಿಧನ ಹೊಂದಿದ್ದಾರೆ. ಕೃಷಿ ತಾಪಂಡ ಅವರಿಗೆ ಕೊನೆಯದಾಗಿ ಸಂದೇಶವೊಂದನ್ನು ಕಳಿಸಿ ಕೃಷಿ ತಾಪಂಡ ಅವರ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಶಾಖ್, ಉದ್ಯಮಿ ಆಗಿದ್ದು ಅವರಿಗೆ ಪತ್ನಿ, ತಂದೆ-ತಾಯಿ ಇದ್ದಾರೆ. ಇದೀಗ ವೈಶಾಖ್ ನಿಧನದ ಬೆನ್ನಲ್ಲೆ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ವೈಶಾಖ್ ಅವರ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ವೈಶಾಖ್, ಕೃಷಿ ತಾಪಂಡ ಅವರ ಮನೆಯಲ್ಲಿ ಏಕೆ ಆತ್ಮಹತ್ಯೆ ಮಾಡಿಕೊಂಡರು, ಆತ್ಮಹತ್ಯೆಗೆ ಕಾರಣಗಳೇನು? ಎಂಬಿತ್ಯಾದಿ ವಿಷಯಗಳು ಬೆಳಕಿಗೆ ಬರಬೇಕಿವೆ. ಘಟನೆ ನಡೆದ ಬಳಿಕ ನಟಿ ಕೃಷಿ ತಾಪಂಡ ಅವರೇ ಖುದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಮೃತ ವೈಶಾಖ್ ಅವರ ಪತ್ನಿ ಮೇಘನಾ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೃಷಿ ತಾಪಂಡ ಹಾಗೂ ನಿರ್ಮಾಪಕ ಅರವಿಂದ್ ರೆಡ್ಡಿ ನಡುವೆ ಉಂಟಾಗಿದ್ದ ವಿವಾದದಲ್ಲಿ ವೈಶಾಖ್ ಹೆಸರು ಸಹ ಕೇಳಿ ಬಂದಿತ್ತು. ಅರವಿಂದ್ ರೆಡ್ಡಿಗೆ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ವೈಶಾಖ್ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. ವೈಶಾಖ್ ಹಾಗೂ ಕೃಷಿ ತಮ್ಮಿಂದ ಹಣ ದೋಚಲು ಯತ್ನಿಸಿದ್ದಾರೆ ಎಂದು ಉದ್ಯಮಿ ಅರವಿಂದ್ ರೆಡ್ಡಿ ದೂರು ಸಹ ದಾಖಲಿಸಿದ್ದರು. ಹೀಗಾಗಿ ವೈಶಾಖ್ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ.

ಇದನ್ನೂ ಓದಿ:ಉದ್ಯಮಿಗೆ ಬೆದರಿಕೆ ಪ್ರಕರಣ: ನಟಿ ಕೃಷಿ ತಾಪಂಡಗೆ ನೊಟೀಸ್

ವೈಶಾಖ್, ಗೆಳೆಯರೊಬ್ಬರು ಟಿವಿ9 ಜೊತೆಗೆ ಮಾತನಾಡಿದ್ದು, ವೈಶಾಖ್, ಖಿನ್ನತೆಗೆ ಜಾರುವ ವ್ಯಕ್ತಿಯಲ್ಲ. ವೈಶಾಖ್ ಧೈರ್ಯವಂತ, ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬಲು ಆಗುತ್ತಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *