ಗೋಮಾತೆಗೆ ಅದ್ಧೂರಿ ಸೀಮಂತ ಮಾಡಿ ಹೋಳಿಗೆ ಊಟ ಹಾಕಿಸಿದ ರೈತ! – Kannada News | Tumakuru Farmer Performs Grand Baby Shower for Pregnant Cow, Serves Holige Feast to Village

ತುಮಕೂರು, ಜುಲೈ 31: ಜಿಲ್ಲೆಯ ಗುಬ್ಬಿ ತಾಲೂಕಿನ ತೋಟಸಾಗರ ಗ್ರಾಮದಲ್ಲಿ ರೈತ ಕರೇಗೌಡ ಎಂಬುವವರು ತಮ್ಮ ಮನೆಯಲ್ಲಿ ಪ್ರೀತಿಯಿಂದ ಸಾಕಿದ ‘ಲಕ್ಷ್ಮಿ’ ಎಂಬ ಗರ್ಭಿಣಿ ಹಸುವಿಗೆ ಅತ್ಯಂತ ಸಂಭ್ರಮದಿಂದ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಗ್ರಾಮದ ಮಹಿಳೆಯರು ಸಾಂಪ್ರದಾಯಿಕವಾಗಿ ಹಸುವಿಗೆ ಅರಿಶಿನ-ಕುಂಕುಮ ಹಚ್ಚಿ, ಆರತಿ ಬೆಳಗಿ, ಮಡಿಲು ತುಂಬಿ ಹಾರೈಸಿದರು. ಈ ಅಪರೂಪದ ಹಾಗೂ ವಿಶೇಷ ಕಾರ್ಯಕ್ರಮದ ನೆಪದಲ್ಲಿ ಇಡೀ ಊರಿನ ನೂರಾರು ಜನರಿಗೆ ಘಮಘಮಿಸುವ ಹೋಳಿಗೆ ಊಟದ ಸತ್ಕಾರ ಏರ್ಪಡಿಸಲಾಗಿತ್ತು. ರೈತನ ಈ ಗೋಪ್ರೇಮಕ್ಕೆ ತೋಟಸಾಗರ ಗ್ರಾಮಸ್ಥರು ಸಾಕ್ಷಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *