Headlines

ಜೂ ಎನ್​ಟಿಆರ್ ಸಿನಿಮಾ: ಬಿಡುಗಡೆ ತಡೆಯುವುದಾಗಿ ಎಚ್ಚರಿಸಿದ ರಾಜಕಾರಣಿ – Kannada News | Tamil Nadu politicians warns against Jr NTR’s new movie

ಜೂನಿಯರ್ ಎನ್‌ಟಿಆರ್ (Jr NTR) ಪ್ರಸ್ತುತ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿದೆ. ಇದರ ನಡುವೆ ಇತ್ತೀಚೆಗಷ್ಟೆ ಜೂ ಎನ್​​ಟಿಆರ್ ನಟನೆಯ ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಲಿರುವ ‘ಗಾಡ್ ವಾಫ್ ವಾರ್’ ಸಿನಿಮಾನಲ್ಲಿ ಜೂ ಎನ್​​ಟಿಆರ್ ನಟಿಸಲಿದ್ದಾರೆ. ಸಾಮಾನ್ಯವಾಗಿ ಜೂ ಎನ್​​ಟಿಆರ್ ಸಿನಿಮಾಗಳು ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳುವುದಿಲ್ಲ. ಆದರೆ ಈ ಸಿನಿಮಾದ ಚಿತ್ರೀಕರಣ ಶುರು ಆಗುವ ಮುಂಚೆಯೇ ಸಿನಿಮಾ ವಿವಾದಕ್ಕೆ ಸಿಲುಕಿದೆ. ವಿಶೇಷವಾಗಿ ತಮಿಳರು ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಸಿನಿಮಾ ದೇವರಾದ ಸುಬ್ರಹ್ಮಣ್ಯ ಅಥವಾ ಮುರುಗನ್ ಕುರಿತಾದ ಕತೆಯನ್ನು ಒಳಗೊಂಡಿದೆ. ಮುರುಗನ್ ದೇವರು ತಮಿಳರ ಆರಾಧ್ಯ ದೈವವಾಗಿದ್ದಾರೆ. ಆದರೆ ಸಿನಿಮಾದ ಪೋಸ್ಟರ್ ಬಿಡುಗಡೆ ವೇಳೆ, ಚಿತ್ರತಂಡವು ಮುರುಗನ್ ಅನ್ನು ‘ಬಾರ್ನ್ ಇನ್ ದ ನಾರ್ತ್. ಫೋರ್ಜ್ಡ್ ಇನ್ ದ ಹಾರ್ಟ್‌ಲ್ಯಾಂಡ್. ವರ್ಶಿಪ್ಡ್ ಇನ್ ದ ಸೌತ್” (ಉತ್ತರ ಭಾರತದಲ್ಲಿ ಜನಿಸಿದವ, ದಕ್ಷಿಣದಲ್ಲಿ ಆರಾಧಿಸುವವ) ಎಂಬ ಅಧಿಕೃತ ಟ್ಯಾಗ್‌ಲೈನ್ ಅನ್ನು ಹಂಚಿಕೊಂಡಿತ್ತು. ಚಿತ್ರತಂಡ ಹಂಚಿಕೊಂಡಿದ್ದ ಈ ವಾಕ್ಯ ತಮಿಳುನಾಡಿನ ಜನರಲ್ಲಿ ಅಸಮಾಧಾನ ಮೂಡಿಸಿದ್ದು, ಇದು ಭಗವಾನ್ ಮುರುಗನ್ ಅವರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬೇರುಗಳನ್ನು ತಪ್ಪಾಗಿ ಬಿಂಬಿಸಿದೆ ಎಂದು ಅವರು ವಾದಿಸಿದ್ದಾರೆ.

ನಾಮ್ ತಮಿಳರ್ ಕಚ್ಚಿ (NTK) ಪಕ್ಷದ ಮುಖ್ಯಸ್ಥ ಸೀಮಾನ್ ಈ ಬಗ್ಗೆ ಮಾತನಾಡಿದ್ದು, ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾಜಿ ಚಲನಚಿತ್ರ ನಿರ್ಮಾಪಕರಾಗಿ ರಾಜಕಾರಣಿಯಾಗಿರುವ ಸೀಮನ್, ‘ಭಗವಾನ್ ಮುರುಗನ್ ಅವರನ್ನು ಉತ್ತರ ಭಾರತೀಯ ಮೂಲದವರು ಎಂದು ಬಿಂಬಿಸುವುದನ್ನು ಮುಂದುವರಿಸಿದರೆ, ತಮಿಳುನಾಡಿನಲ್ಲಿ ‘ಗಾಡ್ ಆಫ್ ವಾರ್’ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಭಗವಾನ್ ಮುರುಗನ್ ತಮಿಳರ ಆರಾಧ್ಯ ದೈವ ನಮ್ಮ ದೇವರು ತಮಿಳುನಾಡಿನವರೇ. ‘ಮುರುಗನ್ ಉತ್ತರ ಭಾರತೀಯರು’ ಎಂಬ ನಿರೂಪಣೆಯನ್ನು ನಿರ್ಮಾಪಕರು ಹಿಂತೆಗೆದುಕೊಳ್ಳದೇ ಇದ್ದರೆ ತಮ್ಮ ಪಕ್ಷದ ವತಿಯಿಂದ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಅಂದು ಬಾಡಿ ಶೇಮಿಂಗ್ ಎದುರಿಸಿದ್ದ ಜೂ. ಎನ್‌ಟಿಆರ್; ಈಗ ಕಟ್ಟುಮಸ್ತಾದ ಫೋಟೋ ವೈರಲ್

ಮುರುಗನ್ ದೇವರು ತಮಿಳುನಾಡಿನ ಆರಾಧ್ಯ ದೈವವಾಗಿದೆ. ಅಂಥಹಾ ಮುರುಗನ್, ಉತ್ತರ ಭಾರತದವರು ಎಂದು ನಿರ್ದೇಶಕರು ಕರೆದಿರುವುದು ತಮಿಳರ ಸಿಟ್ಟಿಗೆ ಕಾರಣವಾಗಿದೆ. ತ್ರಿವಿಕ್ರಮ್ ಶ್ರೀನಿವಾಸ್, ಇದೇ ಮೊದಲ ಬಾರಿಗೆ ಪೌರಾಣಿಕ ಹಿನ್ನೆಲೆ ಇರುವ ಕತೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ಅವರು ಜೂ ಎನ್​​ಟಿಆರ್ ಜೊತೆಗೆ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾನಲ್ಲಿ ಕೆಲಸ ಮಾಡಿದ್ದಾರೆ. ಅದರ ಹೊರತಾಗಿ, ‘ಅಲಾ ವೈಕುಂಟಪುರಂಲೊ’, ‘ಸನ್ ಆಫ್ ಸತ್ಯಮೂರ್ತಿ’, ‘ಅತಡು’, ‘ಜಲ್ಸಾ’, ‘ಅತ್ತಾರಿಂಟಿಕಿ ದಾರೇದಿ’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ವೆಂಕಟೇಶ್ ನಾಯಕನಾಗಿ ನಟಿಸಿರುವ ‘ಆದರ್ಶ ಕುಟುಂಬ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅದಾದ ಬಳಿಕ ಜೂ ಎನ್​​ಟಿಆರ್ ನಟನೆಯ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *