ಧುರಂಧರ್ ಚಿತ್ರದಲ್ಲಿ ಕೆಟ್ಟ ಪದವಿದ್ದರೂ ಸೆನ್ಸಾರ್ ಮಂಡಳಿ ಮ್ಯೂಟ್ ಮಾಡಿಲ್ಲವೇಕೆ? ಸಿಕ್ಕಿತು ಉತ್ತರ – Kannada News | Dhurandhar: Suvinder Vicky Reveals Aditya Dhar Was Confident Censors Would not Beep Dialogues   

ಚಿತ್ರರಂಗದ ಖ್ಯಾತ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ ಸಿನಿಮಾದಲ್ಲಿ ನಟ ಸುವಿಂದರ್ ವಿಕ್ಕಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ನಟ ಅರ್ಜುನ್ ರಾಂಪಾಲ್ ಅವರ ತಂದೆಯ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಅವರ ಪಾತ್ರದ ಸಮಯ ಕಡಿಮೆಯಿದ್ದರೂ ಅವರ ಖಡಕ್ ಸಂಭಾಷಣೆಗಳು ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿವೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಸುವಿಂದರ್ ವಿಕ್ಕಿ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾತ್ರದ ಪ್ರಮುಖ ಶ್ರೇಯಸ್ಸು ನಿರ್ದೇಶಕ ಆದಿತ್ಯ ಧರ್ ಅವರಿಗೆ ಸಲ್ಲುತ್ತದೆ. ಜೊತೆಗೆ ಚಿತ್ರದ ಸಂಭಾಷಣೆ ಬರೆದ ಬರಹಗಾರರಿಗೂ ಇದರ ಶ್ರೇಯಸ್ಸು ನೀಡಬೇಕು. ಚಿತ್ರಕಥೆಯಲ್ಲಿದ್ದ ಸಂಭಾಷಣೆಗಳನ್ನು ತಾವು ಅತ್ಯಂತ ನಿಷ್ಠೆಯಿಂದ ಅಭಿನಯಿಸಿದ್ದೇನೆ ಎಂದು ಸುವಿಂದರ್ ಹೇಳಿದ್ದಾರೆ.

ಸಂಭಾಷಣೆಯಲ್ಲಿ ಅತಿಯಾದ ಬೂತು ಪದಗಳಿದ್ದ ಕಾರಣ ನಟ ಸುವಿಂದರ್ ಅವರು ನಿರ್ದೇಶಕರ ಜೊತೆ ತಮಾಷೆ ಮಾಡಿದ್ದರು. ಇಷ್ಟೊಂದು ಸಾರ್ವಜನಿಕವಾಗಿ ಬಳಕೆಗೆ ಯೋಗ್ಯವಲ್ಲದ ಪದಗಳಿದ್ದರೆ ಸೆನ್ಸಾರ್ ಮಂಡಳಿಯು ಎಲ್ಲವನ್ನೂ ಬಿಪ್ ಮಾಡುತ್ತದೆ. ಇದರಿಂದಾಗಿ ತಮ್ಮ ಪಾತ್ರವನ್ನು ಮೂಕ ಪಾತ್ರವನ್ನಾಗಿ ಮಾಡಬಹುದಿತ್ತು ಎಂದು ಹಾಸ್ಯ ಮಾಡಿದ್ದರು. ಆದರೆ ನಿರ್ದೇಶಕ ಆದಿತ್ಯ ಧರ್ ಅವರಿಗೆ ಯಾವುದೇ ಸಂಭಾಷಣೆ ಕಟ್ ಆಗುವುದಿಲ್ಲ ಎಂಬ ಬಲವಾದ ನಂಬಿಕೆಯಿತ್ತು.

ಚಿತ್ರದಲ್ಲಿ ಅಭಿನಯಿಸುವಾಗ ಯಾವುದೇ ವ್ಯಕ್ತಿಯ ಅಥವಾ ಕುಟುಂಬದ ಭಾವನೆಗಳಿಗೆ ಧಕ್ಕೆ ಬರಬಾರದು ಎಂಬ ಎಚ್ಚರಿಕೆ ಇತ್ತು. ಆದ್ದರಿಂದ ಸಂಭಾಷಣೆಯ ಗಡಿಯನ್ನು ದಾಟದಂತೆ ನಿರ್ದೇಶಕರು ಎಚ್ಚರ ವಹಿಸಿದ್ದರು. ಈ ಚಿತ್ರಕ್ಕಿಂತ ಮುಂಚೆಯೇ ನಟ ಅರ್ಜುನ್ ರಾಂಪಾಲ್ ಮತ್ತು ಸುವಿಂದರ್ ‘ಸಟ್ಲುಜ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದರಿಂದಾಗಿ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಮತ್ತು ಹೊಂದಾಣಿಕೆ ಇತ್ತು.

ಇದನ್ನೂ ಓದಿ: ‘ಧುರಂಧರ್’ ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ

ಚಿತ್ರದ ಸಂಭಾಷಣೆಗಳ ಬಗ್ಗೆ ಸುವಿಂದರ್ ಅವರು ಅರ್ಜುನ್ ರಾಂಪಾಲ್ ಅವರಿಗೆ ಮುಂಚಿತವಾಗಿಯೇ ಎಚ್ಚರಿಸಿದ್ದರು. ಆದರೆ ಅರ್ಜುನ್ ಅವರು ಇದನ್ನು ಕೇವಲ ನಟನೆಯ ಭಾಗವಾಗಿ ತೆಗೆದುಕೊಂಡರು. ಕ್ಯಾಮೆರಾ ಮುಂದೆ ಯಾವುದೇ ಹಿಂಜರಿಕೆಯಿಲ್ಲದೆ ಸಂಪೂರ್ಣ ಶ್ರಮ ಹಾಕಿ ನಟಿಸುವಂತೆ ಧೈರ್ಯ ತುಂಬಿದ್ದರು. ಈ ಕಾರಣದಿಂದಾಗಿ ಇಬ್ಬರ ನಡುವಿನ ದೃಶ್ಯಗಳು ತೆರೆಯ ಮೇಲೆ ಅತ್ಯಂತ ನೈಜವಾಗಿ ಮೂಡಿಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *