ಬರಗಾಲದ ಸೂಚನೆ ಕೊಡುತ್ತಾ ನೇರಳೆ ಹಣ್ಣು? ಈ ವಿಚಿತ್ರ ನಂಬಿಕೆಯ ಅಸಲಿಯತ್ತು ಏನು? – Kannada News | Jamun Harvest Defies Drought Myth: Farmers Earn Profits Despite Monsoon Challenges

ಕೋಲಾರ, ಜೂನ್​​ 29: ಹಳ್ಳಿಗಳಲ್ಲಿ ಇಂದಿಗೂ ಪ್ರಕೃತಿಯ ಮುನ್ಸೂಚನೆಗಳನ್ನ ಕೆಲವು ಹಣ್ಣು, ಗಿಡಮರಗಳ ಫಸಲನ್ನು ನೋಡಿ ಅಂದಾಜಿಸುವ ಪದ್ಧತಿ ಇದೆ. ಅದರಲ್ಲೂ ವಿಶೇಷವಾಗಿ, ಜಂಬು ನೇರಳೆ (Jamun fruit) ಹಣ್ಣಿನ ಫಸಲು ಆ ವರ್ಷದ ಮಳೆ (Rain), ಬೆಳೆ ಮತ್ತು ಬರಗಾಲವನ್ನು ನಿರ್ಧರಿಸುತ್ತದೆ ಎನ್ನುವ ಬಲವಾದ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಸದ್ಯ ಈ ವರ್ಷ ನೇರಳೆ ಹಣ್ಣಿನ ಫಸಲು ಯಥೇಚ್ಛವಾಗಿ ಬಂದಿದ್ದು, ಹೀಗಾಗಿ ಎಲ್ಲೆಡೆ ಬರಗಾಲ ಆವರಿಸುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಎಕರೆಗಟ್ಟಲೆ ಪ್ರದೇಶದಲ್ಲಿ ನೇರಳೆ ಹಣ್ಣು ಕೃಷಿ

ಕೋಲಾರ ಅಂದರೆ ನಮಗೆ ಥಟ್​ ಅಂತ ನೆನಪಿಗೆ ಬರುವುದು ಮಾವಿನ ತವರು, ಟೊಮ್ಯಾಟೊ, ರೇಷ್ಮೆ ಹಾಗೂ ಹಾಲು ಉತ್ಪಾದನೆಗೆ ಪ್ರಸಿದ್ಧಿ ಪಡೆದ ಜಿಲ್ಲೆ. ಆದರೆ ಈ ಚಿನ್ನದ ನಾಡಿನಲ್ಲಿ ಪ್ರಸಿದ್ದಿಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ಅದು ನೇರಳೆ ಹಣ್ಣು. ಕೋಲಾರ ಜಿಲ್ಲೆಯಲ್ಲಿ ಕೇವಲ ಬಾರ್ಡರ್​ ಕ್ರಾಪ್​ ಆಗಿ ಬೆಳೆಯುತ್ತಿದ್ದ ನೇರಳೆ ಹಣ್ಣನ್ನು ಈಗ ರೈತರು ತೋಟಗಳಲ್ಲಿ ಎಕರೆಗಟ್ಟಲೆ ಪ್ರದೇಶದಲ್ಲಿ ಒಣ ಬೇಸಾಯ ವಿಧಾನದಲ್ಲಿ ಬೆಳೆಯಲು ಆರಂಭಿಸಿದ್ದಾರೆ.

ನಿರೀಕ್ಷೆಗೂ ಮೀರಿದ ಆದಾಯ: ರೈತರು ಖುಷ್​

ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 100 ಎಕರೆಗೂ ಹೆಚ್ಚಿನ​ ಪ್ರದೇಶದಲ್ಲಿ ನೇರಳೆ ಹಣ್ಣನ್ನು ಬೆಳೆಯಲಾಗಿದೆ. ಈ ನಿಟ್ಟಿನಲ್ಲಿ ನೇರಳೆ ಬೆಳೆದಿರುವ ರೈತರು ಈ ವರ್ಷ ತಾವು ನಿರೀಕ್ಷೆಗೂ ಮೀರಿದ ಹೆಚ್ಚಿನ ಆದಾಯ ಪಡೆಯುವ ಮೂಲಕ ಫುಲ್​ ಖುಷಿಯಾಗಿದ್ದಾರೆ. ಅತೀ ಹೆಚ್ಚು ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣಿಗೆ ಕೆಜಿಗೆ 200 ರಿಂದ 250 ರೂವರೆಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ: ಆರೆಂಜ್ ಅಲರ್ಟ್ ಘೋಷಣೆ

ಇನ್ನು ಈ ವರ್ಷದ ಮಳೆ, ಬೆಳೆ, ಬರಗಾಲವನ್ನು ನೇರಳೆ ಫಸಲು ನಿರ್ಧಾರ ಮಾಡುತ್ತದೆ ಎಂದು ಹಳ್ಳಿಕಡೆ ಒಂದು ಮಾತಿದೆ. ಆ ಪ್ರಕಾರ ನೇರಳೆ ಫಸಲು ಚೆನ್ನಾಗಿ ಬಂದರೆ, ಆ ವರ್ಷ ಬರಗಾಲ ಬರುತ್ತದೆ ಎಂದು ಹೇಳುತ್ತಾರೆ. ಸದ್ಯ ಜೂನ್ ಆರಂಭದಿಂದ ಮಳೆ, ಹವಾಮಾನ ಮತ್ತು ನೇರಳೆ ಫಸಲನ್ನು ನೋಡಿದರೆ ಈ ವರ್ಷ ಆ ಮಾತು ನಿಜವಾಗುತ್ತಾ ಎನ್ನುವ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ.

ಜೂನ್ ತಿಂಗಳು ಮುಗಿದರೂ ಮುಂಗಾರು ಮಳೆ ಬಾರದೆ ಜಿಲ್ಲೆಯಲ್ಲಿ ಇನ್ನು ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಹಾಗಾಗಿ ಕಾಕತಾಳಿಯವೋ ಇಲ್ಲ, ಗಾದೆ ಮಾತೋ ಗೊತ್ತಿಲ್ಲ. ಆ ಹೇಳಿಕೆಗೂ, ಸದ್ಯದ ಪರಿಸ್ಥಿತಿಗೂ ತಾಳೆಯಾಗುತ್ತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎಂಬ ಮಾಹಿತಿ ಇದೆ. ಹಾಗಾಗಿ ನೇರಳೆ ಹಣ್ಣು ಈ ಬಾರಿ ಉತ್ತಮ ಫಸಲು ಬಂದಿದೆ.

ರೈತರು ಹೇಳುವುದೇನು?

ಇನ್ನು ಮೊದಲು ನಾವು ಪರಿಸರವನ್ನು ಉಳಿಸಿ ಅರಣ್ಯ ಕೃಷಿ ಮಾಡುವುದನ್ನು ಕಲಿಯಬೇಕು. ಹೆಚ್ಚು ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿದರೆ ಈ ರೀತಿ ಹವಾಮಾನ ವೈಪರೀತ್ಯವಾಗುವುದನ್ನು ತಪ್ಪಿಸಲು ಸಾಧ್ಯ ಎಂದು ಸಾವಯವ ಕೃಷಿಕರಾದ ಚಂದ್ರಶೇಖರ್​ ಅವರ ಮಾತು.

ಇದನ್ನೂ ಓದಿ: ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು

ಒಟ್ಟಾರೆ ಇತ್ತೀಚೆಗೆ ಆರೋಗ್ಯ, ಮದುಮೇಹ ಹೀಗೆ ಹಲವು ಕಾರಣಗಳಿಂದ ನೇರಳೆ ಹಣ್ಣಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದ್ದು, ಈ ವರ್ಷ ನಿರೀಕ್ಷೆಗೂ ಮೀರಿದ ಫಸಲು ಕೂಡ ಬಂದಿದೆ. ಅದರಂತೆ ಸದ್ಯದ ಪರಿಸ್ಥಿತಿಯಲ್ಲಿ ಮಳೆ ಕೂಡ ಕೈಕೊಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *